POLICE BHAVAN KALABURAGI

POLICE BHAVAN KALABURAGI

24 August 2012

GULBARGA DISTRICT


ಗುಲಬರ್ಗಾ ಗ್ರಾಮೀಣ ವೃತ್ತ ಪೊಲೀಸ್ ಅಧಿಕಾರಿಗಳ ಕಾರ್ಯಚರಣೆ,
ಕೊಲೆ ಪ್ರಕರಣದ ಆರೋಪಿಗಳ ಬಂದನ.
ದಿನಾಂಕ:22/03/2012 ರಂದು ಮಹಾಗಾಂವ ಪೊಲೀಸ ಠಾಣೆಯಲ್ಲಿ ಶ್ರೀ ಬಸವರಾಜ ಭೂತಪೂರ ಇವರು ತನ್ನ ಮಗನಾದ ಶಶಿಕುಮಾರ  ಹೈಸ್ಕೂಲ ಶಿಕ್ಷಕನಿಗೆ ಯಾರೋ ಅಪರಿಚಿತ ವ್ಯಕ್ತಿಗಳು ಅವನ ಕುತ್ತಿಗೆಗೆ ವೈರ ಬಿಗಿದು ಕೊಲೆ ಮಾಡಿ ಶಶಿಕುಮಾರನ ಶವ ನಾಗೂರ ಗ್ರಾಮದ ಹಳ್ಳದಲ್ಲಿ ಬಿಸಾಕಿರುವರೆಂದು ಅರ್ಜಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 29/2012 ಕಲಂ 302, 201 ಐಪಿಸಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿ  ಮಾನ್ಯ ಎಸ.ಪಿ ಸಾಹೇಬರು ಗುಲಬರ್ಗಾ, ಮಾನ್ಯ ಹೆಚ್ಚುವರಿ ಎಸ.ಪಿ ಗುಲಬರ್ಗಾ ಹಾಗೂ ಡಿವೈಎಸ್ಪಿ ಗ್ರಾಮೀಣ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕೊಲೆಯಾದ ಶಶಿಕುಮಾರನ ಮೊಬೈಲನು ಆರೋಪಿತರು ದೋಚಿಕೊಂಡು ಹೋದ ಮೇರೆಗೆ ಸದರಿ ಮೋಬೈಲನ್ನು ಆಧರಸಿ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾ ರವರು, ಮತ್ತು  ಶ್ರೀ ಶಾಂತಿನಾಥ ಪಿಎಸ್ಐ ಕಮಲಾಪೂರ,  ಶ್ರೀ ಆನಂದರಾವ  ಎಸ್ ಎನ್ ಪಿಎಸ್ಐ ಗುಲಬರ್ಗಾ ಗ್ರಾಮೀಣ ಠಾಣೆ, ಶ್ರೀ ಹೆಚ್, ಆರ್, ನಡುಗಡ್ಡಿ ಪಿಎಸ್ಐ ಮಹಾಗಾಂವ ಪೊಲೀಸ ಠಾಣೆ, ಹಾಗೂ ಸಿಬ್ಬಂದಿಯವರಾದ  ಮಹಾದೇವ ಎಎಸ್ಐ, ಪ್ರಭುಲಿಂಗ,ಸೂರ್ಯಕಾಂತ ಮುಖ್ಯ ಪೇದೆ, ಪೇದೆಗಳಾದ ಖಂಡೇರಾವ, ಯಶವಂತ, ದತ್ತಾತ್ರೇಯ ಹುಸೇನಬಾಷಾ, ರಾಜಕುಮಾರ, ಆನಂದ, ವಾಹನ ಚಾಲಕ ರಾದ ಬಂಡೆಪ್ಪ, ಮಲ್ಲಿಕಾರ್ಜುನರವರನೊಳಗೊಂಡ  ತಂಡದೊಂದಿಗೆ  ಹಾಗೂ ತನಿಖೆಗೆ ವೈಜ್ಞಾನಿಕವಾಗಿ ಸಹಾಯ ನೀಡಿ  ಪ್ರಕರಣದ ಪತ್ತೆಗೆ ಸಹಾಯ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಶ್ರೀ ಬಿ, ಬಿ, ಪಟೇಲ ಪಿಐ ಡಿಸಿಐಬಿ ಸಿಬ್ಬಂದಿಯವರಾದ ಗಂಗಯ್ಯ, ಚನ್ನವೀರ, ಭಿಮಾಶಂಕರ ಇವರುಗಳ ಸಹಾಯದಿಂದ ಕೊಲೆಗಾರರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಿಸಿದಾಗ ಕೊಲೆಗೈದ ಆರೋಪಿತರಾದ 1) ಸಾತಲಿಂಗ ತಂದೆ ಬಸವರಾಜ ವ: 28 ವರ್ಷ ಸಾ: ಗುಲಬರ್ಗಾ ಇವನು ಮೃತನ ಹೆಂಡತಿ ಮೇಲೆ ಕೆಟ್ಟ ದೃಷ್ಠಿ ಬೀರಿದವನು. 2) ನಾಗರಾಜ ತಂದೆ ಚನ್ನಬಸಪ್ಪ ವ: 23 ವರ್ಷ ಸಾ: ಗುಲಬರ್ಗಾ ಇತನು ಮೃತನಿಂದ ಸಾಲ ಪಡೆದು 20 ಸಾವಿರ ರೂಪಾಯಿ ಮರಳಿ ಕೊಡಬಾರದು ಅನ್ನುವ ಉದ್ದೇಶ ಹೊಂದಿದ್ದು. 3) ಶರಣು ತಂದೆ ಮಾಹಾಂತಯ್ಯ ವ: 21 ಸಾ: ಗುಲಬರ್ಗಾ ಇವನು ಮೃತನ ಮೈಮೇಲಿನ ಬಂಗಾರದ ಲಾಕೇಟು ಹಾಗೂ ಉಂಗುರ ದೋಚಲು ಉದ್ದೇಶ ಹೊಂದಿ ಸದರಿಯವರು ಗೆಳೆತನದೊಂದಿಗೆ ಇದ್ದು ಮೃತ ಶಶಿಕುಮಾರನಿಗೆ ದಿನಾಂಕ:20-03-2012 ರಂದು ಪುಸಲಾಯಿಸಿ ಟಾಟಾ ಸುಮೋ ವಿಕ್ಟಾ ಸಂಖ್ಯೆ ಕೆಎ-32 ಎಮ್-6099 ನೇದ್ದರಲ್ಲಿ ಕರೆದುಕೊಂಡು ಹೋಗಿ ಬ್ರೇಕ ವೈರದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಆತನ ಮೈಮೇಲಿನ ಬಂಗಾರದ ಲಾಕೇಟ ಉಂಗುರ ಮೊಬೈಲಗಳನ್ನು ದೋಚಿಕೊಂಡು ಹೋಗಿ ಸಾಕ್ಷಿ ಪುರಾವೆ ನಾಶ ಮಾಡಲು ಶವವನ್ನು  ನಾಗೂರ ಹಳ್ಳದಲ್ಲಿ  ಬಿಸಾಕಿರುತ್ತಾರೆ.ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿ ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಟಾಟಾ ಸುಮೋ ವಿಕ್ಟಾ ವಾಹನ ಹಾಗೂ ಬ್ರೇಕ ವೈರ, ಮೃತ ಶಶಿಕುಮಾರನಿಂದ ದೋಚಲಾಗಿರುವ ಬಂಗಾರದ ಲಾಕೇಟ, ಉಂಗುರ, ಮೋಬೈಲ ಜಪ್ತಿ ಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನ ಕುರಿತು ಕಳಿಸಲಾಗಿದೆ. ಸದರಿ ಪತ್ತೆದಳ ತಂಡದ ಕಾರ್ಯಕ್ಕೆ  ಮೇಲಾಧಿಕಾರಿಯವರು ಪ್ರಶಂಶಿಸಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ರಾಜಶೇಖರ ತಂದೆ ಮಹಾಂತಗೌಡ ಬಿರಾದಾ ಸಾ|| ಗೊದುತಾಯಿ ನಗರ ಗುಲಬರ್ಗಾ ರವರು ನಾನು ಎಸ್.ವಿ ಬಂದಿ ಎನ್ನುವವರ ಮನೆಯಲ್ಲಿ 2.1/2 ವರ್ಷದಿಂದ ಮೊದಲನೆ ಮಹಡಿಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ದಿನಾಂಕ:23/08/2012 ರಂದು ರಾತ್ರಿ ಮನೆಯರೆಲ್ಲರೂ ಊಟ ಮಾಡಿಕೊಂಡು  ಮಲಗಿದ್ದು, ಸದರಿ ದಿನದಂದು ಲೈಟು ಹೋಗಿ ಬಂದು ತೊಂದರೆ ಮಾಡುತ್ತಿದ್ದರಿಂದ ಮನೆಯ ಮುಖ್ಯ ಬಾಗಿಲು ಸ್ವಲ್ಪ ತೆರೆದಿಟ್ಟುದ್ದು ಕೊಂಡಿ ಹಾಕಿರಲಿಲ್ಲ. ಇದನ್ನು ಯಾರೋ ಗಮನಿಸಿ ದಿನಾಂಕ 24/08/2012 ರ ಬೆಳಗಿನ ಜಾವ 4-15 ರಿಂದ 5-15 ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಮೊದಲನೆ ಮಹಡಿಗೆ ಬರಲು ಎಣಿ ತಂದು ಮಾಲಿಕರ ಮನೆಯ ಹತ್ತಿರ ಹಚ್ಚಿ ಮೇಲೆ ಬಂದು ನಮ್ಮ ಮನೆಯಲ್ಲಿ ನೋಕಿಯಾ ಸಿ-3 ಮೊಬೈಲ ಐ.ಎಂ.ಇ.ಐ ನಂ. 351984041925785,ನೋಕಿಯಾ ಎಕ್ಸ - 2 ಅದರಲ್ಲಿ 9591033345 ಸಿಮ್,ನೋಕಿಯಾ ಸಿ-2 06,ನೋಕಿಯಾ ಸಿ1, ಮೊಬೈಲ ಅದರಲ್ಲಿ ಸಿಮ್ 8867012938, ಹೆಚ್.ಎಂ.ಟಿ ಕೈ ಗಡಿಯಾರ ಅ.ಕಿ 700/- ಹಾಗೂ ನಗದು ಹಣ 11500/- ರೂ. ಹೀಗೆ ಒಟ್ಟು ನಾಲ್ಕು ಮೊಬೈಲ ಸೆಟಗಳು ಒಟ್ಟು 19000/- ರೂ. ಅಂದಾಜು ಬೆಲೆಯ ವಸ್ತುಗಳು ಕಳುವಾಗಿರುತ್ತವೆ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 75/2012 ಕಲಂ 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

23 August 2012

GULBARGA DISTRICT REPORTED CRIME

ಬ್ಯಾಂಕ ಕಳ್ಳತನ ಮಾಡುವದಕ್ಕೆ ಪ್ರಯತ್ನ:
ಮಳಖೇಡ ಪೊಲೀಸ ಠಾಣೆ: ಶ್ರಿ ಸಂಜೀವ ಕಾಮಗೀರಿ ಮ್ಯಾನೇಜರ ಎಸ್.ಬಿ.ಹೆಚ್. ಮಳಖೇಡ ರವರು ನಮ್ಮ ಬ್ಯಾಂಕ ದಿನಾಂಕ:22/08/2012 ರಂದು ಮತ್ತು ದಿನಾಂಕ: 23-08-2012 ರಂದು ಬ್ಯಾಂಕ್ ನೌಕರರ ಪ್ರತಿಭಟನೆ ಇದ್ದ ಕಾರಣ ಬ್ಯಾಂಕ್ ಮುಚ್ಚಿದ್ದು ಇರುತ್ತದೆ. ದಿನಾಂಕ:23-08-2012 ರಂದು ನಮ್ಮ ಬ್ಯಾಂಕಿನ ಕೀಲಿ ಯಾರೋ ಮುರಿದು ಕಳ್ಳತನ ಮಾಡಿದಂತೆ ಕಂಡು ಬಂದಿರುವ ವಿಷಯ ತಿಳಿದುಕೊಂಡು ನಾನು ಮತ್ತು ಸಿಬ್ಬಂದಿವರು ಬಂದು ನೋಡಲು, ಯಾರೋ ಕಳ್ಳರು ನಮ್ಮ ಬ್ಯಾಂಕಿನ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಬ್ಯಾಂಕ್ ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಬ್ಯಾಂಕ ಮ್ಯಾನೆಜರ್ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:55/2012 ಕಲಂ 457, 380, 511 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಶೋಕ ನಗರ ಪೊಲೀಸರ ಕಾರ್ಯಚರಣೆ ಮೋಸ ಮಾಡಿ ಬಂಗಾರ ಕಳ್ಳತನ ಮಾಡುವವರ ಬಂದನ:

ಗುಲಬರ್ಗಾ ನಗರದ ವಿದ್ಯಾನಗರದ ಕಾಂಬ್ಳೆ ಬಿಲ್ಡಿಂಗದಲ್ಲಿ ಬಾಡಿಗೆ ರೂಮದಲ್ಲಿರತುವ ನನ್ನ ರೂಮಿನ ಪಕ್ಕದಲ್ಲಿ 8 ದಿವಸದ ಹಿಂದೆ  ನಿರ್ಮಲಾ ಎನ್ನುವ ಹೆಣ್ಣುಮಗಳು ತಾನು ನರ್ಸ ಕೆಲಸ ಮಾಡಿಕೊಂಡುರುವುದಾಗಿ ಹೇಳಿ  ಬಾಡಿಗೆ ರೂಮಿನಲ್ಲಿ ಇದ್ದು,  ದಿನಾಂಕ 08/08/2012 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಹತ್ತಿರ ಬಂದು  ಫೋಟೊ ತೆಗೆಸಿಕೊಂಡು ಬರುವುದಾಗಿ ಹೇಳಿ ನಂಬಿಸಿ, ನನ್ನ  ಹತ್ತಿರ ಇದ್ದ ಬಂಗಾರದ ಕಿವಿ ಹೂವುಗಳು,  ಬಂಗಾರದ ಜೈನ  ಒಟ್ಟು 24,000/- ರೂಪಾಯ ಮೌಲ್ಯದ ವಡವೆಗಳನ್ನು ಮೊಸದಿಂದ ಕಳ್ಳತನ ಮಾಡಿಕೊಂಡು ಹೊಗಿರುತ್ತಾಳೆ. ಅಂತಾ ಕು|| ಮೀರಾ ತಂದೆ ಭೀಮಶ್ಯಾ ನಾಯ್ಕೊಡಿ ಸಾ: ಹೂವಿನಹಳ್ಳಿ ತಾ: ಅಫಜಲಪೂರ  ಇವಳು ಗುಲಬರ್ಗಾ ನಗರದಲ್ಲಿಯ ಓಂ ಕಾರ ಡಿಸ್ಟ್ರಿಬೂಟರದಲ್ಲಿ ಕಂಪ್ಯೂಟರ ಕೆಲಸ ರವರು ದೂರು ನೀಡಿದ ಮೇರೆಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 71/2012 ಕಲಂ. 420, 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. . ಪ್ರಕರಣದ  ತನಿಖೆ ಕೈಕೊಂಡ ಶ್ರೀ. ಟಿ.ಹೆಚ್‌.ಕರಿಕಲ್‌, ಪಿಐ  ಮತ್ತು ಸುರೇಶ  ಪಿಸಿ 1150,  ಬಸವರಾಜ ಪಿಸಿ 05,  ಉಮಣ್ಣ ಪಿಸಿ 118, ಶಂಕರಲಿಂಗ ಪಿಸಿ 1673,  ಉಮೇಶ ಪಿಸಿ 30 ರವರನ್ನೊಳಗೊಂಡ ತಂಡವು   ಘಟನಾ ಸ್ಥಳದಲ್ಲಿ ದೊರೆತ ಸಣ್ಣ ಕುರುಹು ಆಧಾರದ ಮೇಲಿಂದ, ಪೊಲೀಸ ತಂತ್ರಜ್ಞಾನದ ಸಹಾಯ ತೆಗೆದುಕೊಂಡು,  ದಿನಾಂಕ 13/08/2012 ರಂದು  ಮೋಸ ಮಾಡಿ ಬಂಗಾರ ಕಳ್ಳತನ ಮಾಡಿಕೊಂಡು ಹೊಗಿರುವ  ನಿರ್ಮಲಾ @ ಅಂಬಿಕಾ  ಗಂಡ ಅಂಬರೀಶ ಕೊಂಡ ಇವಳಿಗೆ ಪತ್ತೆ ಹಚ್ಚಿ, 10,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಕಿವಿ ಹೂವುಗಳನ್ನು ವಶಪಡಿಸಿಕೊಂಡು , ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಮತ್ತು ಇವಳ ಸಹಚರ  ಅಂಬರೀಶ ತಂದೆ ಸೈಬಣ್ಣ ಕೊಂಡ ಸಾ: ವಕೀಲ ಕಾಲೋನಿ ಗುಲಬರ್ಗಾ ಎನ್ನುವಳಿಗೆ ದಿನಾಂಕ 21/08/2012 ರಂದು ದಸ್ತಗಿರಿ ಮಾಡಿ, ಬಂಗಾರದ ಚೈನ ಹಾಗು  ಅಪರಾಧಕ್ಕೆ ಬಳಸಿದ  ಕರಿಸ್ಮಾ  ದ್ವಿಚಕ್ರ ವಾಹನ ನಂ. ಕೆಎ-32 ವಿ-5961 ಹೀಗೆ ಒಟ್ಟು 50,000/- ರೂಪಾಯಿ ಮೌಲ್ಯದ  ವಸ್ತುಗಳನ್ನು ವಶಡಿಸಿಕೊಂಡು, ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಈ ರೀತಿ ಮೊಸ ಮಾಡಿ ಕಳ್ಳತನ ಮಾಡುವ ಆರೋಪಿತರ ಜಾಲ ಪತ್ತೆ ಹಚ್ಚಿದ್ದು, ಇನ್ನೊಬ್ಬ ಆರೋಪಿ ತಲೆ ನಾಪತ್ತೆಯಾಗಿದ್ದು, ತನಿಖೆ ಜಾರಿಯಲ್ಲಿರುತ್ತದೆ.  ಪತ್ತೆ ಮಾಡಿದ ಸಿಬ್ಬಂಧಿಯವರ ಕಾರ್ಯವನ್ನು ಮಾನ್ಯ ಶ್ರೀ. ಭೂಷಣ ಬೊರಸೆ  ಎ.ಎಸ್‌.ಪಿ  (ಎ) ಉಪ ವಿಭಾಗ ಗುಲಬರ್ಗಾ ರವರು ಶ್ಲಾಘನೆ ಮಾಡಿರುತ್ತಾರೆ.

ಕಳ್ಳತನ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಮಹ್ಮದ ಜಾಫರ ಅಲಿ ತಂದೆ ಅಬ್ದುಲ ಅಹ್ಮದ ಸಾಬ ವ|| 38,  ಉ|| ಖಾಸಗಿ ಕೆಲಸ, ಸಾ|| ಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮಿಲ್  ಗುಲಬರ್ಗಾ ರವರು ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ದಿನಾಂಕ 15-08-2012 ರಂದು ಬೆಂಗಳೂರಿಗೆ ಹೋಗಿರುದ್ದೆವು. ದಿನಾಂಕ 21-08-2012 ರಂದು ಮಧ್ಯಾಹ್ನ 1.30 ಗಂಟೆಗೆ ತಮ್ಮ ಮನೆಯ ಮುಂದಿನ ಮನೆಯವರಾದ ಶ್ರೀ ಉಬೇದ ಉಲ್ಲಾ ರವರು ಮೋಬಾಯಿಲ್ ಗೆ ಕರೆ ಮಾಡಿ  ನಿಮ್ಮ ಮನೆಯ ಬಾಗಿಲು ತೆರೆದಿದೆ  ಅಂತಾ ತಿಳಿಸಿದ್ದು, ನಾನು ಸದರಿಯವರಿಗೆ ಒಳಗೆ ಹೋಗಿ ನೋಡಲು ಹೇಳಿದಾಗ  ಸದರಿ ಉಬೇದ ಉಲ್ಲಾ ಇವರು ನಮ್ಮ ಮನೆಯೊಳಗೆ ಎಲ್ಲಾ ಸಾಮಾನು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ  ಅಂತಾ ತಿಳಿಸಿರುತ್ತಾರೆ. ನಾವು  ದಿನಾಂಕ 22-08-2012 ರಂದು ಬೆಂಗಳೂರಿನಿಂದ  ಬಂದು ನೋಡಲು ಮನೆಯಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲಮಾರಿಯಲ್ಲಿಟ್ಟಿದ್ದ   35,000/- ರೂ. ನಗದು ಹಣ, ಬಂಗಾರದ ಕಿವಿರಿಂಗ್   ಅ|| ಕಿ|| 3600/-,ಒಂದು ಗ್ಯಾಸ ಸಿಲೆಂಡರ್  ಅ|| ಕಿ|| 1200/-,ಒಂದು ಇನ್ ವೇಟರ್‌ ಅ|| ಕಿ|| 6000/-.ಸೀರೆಗಳು  ಅ|| ಕಿ|| 4000/-ರೂ, ಹೀಗೆ ಒಟ್ಟು 49,800/-ರೂಗಳು ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ ಬಾಬುರಾವ ತಂದೆ ಹಣಮಂತಪ್ಪ ನೇಲೋಗಿ ಸಾ|| ಶಿವಸಾಗರ ಎಲೇಟ್ರಾನಿಕ ಪಾಲ ಕಾಂಪ್ಲೇಕ್ಸ್ ಸಿ,ಟಿ ಬಸಸ್ಟ್ಯಾಂಡ ಎದರುಗಡೆ ಗುಲಬರ್ಗಾ ರವರು ನಾವು ಮತ್ತು ನನ್ನ ಗೆಳೆಯರು ಕೂಡಿಕೊಂಡು ದಿನಾಂಕ: 20/08/2012 ರಂದು ರಾತ್ರಿ 00-40 ಗಂಟೆ ಸುಮಾರಿಗೆ ಸುಪರ ಮಾರ್ಕೆಟದ ಗೌರಿ ಸಾರಿ ಸೆಂಟರ ಎದರುಗಡೆ ಗೆಳೆಯರ ಜೋತೆ ನಿಂತು ಮಾತನಾಡುವಾಗ ನನ್ನ  ಜೇಬಿನಲ್ಲಿ ಇದ್ದ 32000/- ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ:103/12 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.