ಜಾತಿ ನಿಂದನೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :ಶ್ರೀ ಅಶೋಕ ತಂದೆ ಶಿವರಾಯ ಸಿಂಗ್ಗೆ ಸಾ|| ಮೊಘಾ (ಬಿ) ತಾ||ಆಳಂದ ರವರು ನಾನು ದಿನಾಂಕ:02/08/2012 ರಂದು ಮುಜಾಂನೆ 8:30 ಕ್ಕೆ ನಮ್ಮ ಗ್ರಾಮದಲ್ಲಿರುವ ಸ್ಮಶಾನದಲ್ಲಿ ನನ್ನ ಮುತ್ತಜ್ಜನವರ ಸಮಾಧಿಗೆ ಹುಣ್ಣಿಮೆ ದಿನ ಇರುವದರಿಂದ ಪೂಜಾ ಸಲ್ಲಿಸಲು ಹೋಗಿದ್ದಾಗ, ಆ ಸಮಯದಲ್ಲಿ ನಮ್ಮ ಗ್ರಾಮದ ಚಾಂದಸಾಬ ತಂದೆ ಮೈಹಿಬೂಬಸಾಬ ಮುಜಾವರ, ಅಜಮುದ್ದಿನ್ ತಂದೆ ಮೈಹಿಬೂಬಸಾಬ ಮುಜಾವರ,ಗಪುರಸಾಬ ತಂದೆ ಮೈಹಿಬೂಬಸಾಬ ಮುಜಾವರ,ಮಕಬುಲಸಾಬ ತಂದೆ ಮೈಹಿಬೂಬಸಾಬ ಮುಜಾವರ, ಮನಸೂರ ತಂದೆ ಅಜಮುದ್ದಿನ್ ಮುಜಾವರ, ಶೌಕತಲಿ ತಂದೆ ಅಜಮುದ್ದಿನ್ ಮುಜಾವರ ಹಾಗೂ ಇತರರು ಕೊಡಿಕೊಂಡು ಜಾತಿ ನಿಂದನೆ ಮಾಡಿ ಚಾಂದಸಾಬ ಮುಜಾವರ ಇತನು ನನ್ನ ಕಪಾಳಕ್ಕೆ ಹೊಡೆದನ್ನು ಅಜಮುದ್ದಿನ ಮತ್ತು ಇತರರು ಕೂಡಿಕೊಂಡು ನನ್ನ ಕೈಯಲ್ಲಿದ ಪೂಜಾ ಸಾಮಾನುಗಳನ್ನು ಚೆಲ್ಲಾಪೀಲಿಯಾಗಿ ಹಾರು ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:41/2012ಕಲಂ 143,147,323,504,506 ಸಂಗಡ 149 ಐ.ಪಿ.ಸಿ ಮತ್ತು 3(1) (10) ಎಸ್.ಸಿ ಮತ್ತು ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.