POLICE BHAVAN KALABURAGI

POLICE BHAVAN KALABURAGI

16 May 2016

KALABURAGI DISTRICT POLICE PRESS NOTE

ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಚರಣೆ  ಅಣ್ಣ  ತಂಗಿಯನ್ನು ದರೋಡೆ ಮಾಡಿದ ಕುಖ್ಯಾತ ದರೋಡೆಕೊರರ ಬಂಧನ,ಒಂದು ನಾಡ ಪಿಸ್ತೋಲ, ನಗದು ಹಣ, ಇನೋವಾ ಕಾರ ಹಾಗು ಇತರೆ ವಸ್ತುಗಳ ಜಪ್ತಿ


ಕಲಬುರಗಿ ಜೇವರಗಿ ರಾಷ್ಟ್ರಿಯ ಹೆದ್ದಾರಿ 218 ರ ಸರಡಗಿ(ಬಿ) ಕ್ರಾಸ ಹತ್ತಿರ ದಿನಾಂಕ 11-05-2016 ರಂದು ಬೆಳಗಿನ ಜಾವ 5-30 ಗಂಟೆಯ ಸುಮಾರಿಗೆ ಶ್ರೀ ಅನೀಲ ತಂದೆ ಬಾಬು ರಾಠೋಡ ರವರು ಮೊಟಾರ ಸೈಕಲ ಮೇಲೆ ತನ್ನ ತಂಗಿ ಮಂಜುಳಾಳೋಂದಿಗೆ ಗುಡೂರ ಗ್ರಾಮದಿಂದ ಮಹಾರಾಷ್ಟ್ರದ ಪನವೇಲ್ ಗೆ ಹೋಗುತ್ತಿರುವಾಗ ಸರಡಗಿ (ಬಿ) ಗ್ರಾಮದ ಕ್ರಾಸ ಹತ್ತಿರದ  ಪೆಟ್ರೋಲ ಪಂಪನಲ್ಲಿ ಪೆಟ್ರೋಲ ಹಾಕಿಸಿಕೊಳ್ಳುತ್ತಿರುವಾಗ ಅದೇ ವೇಳೆಗೆ ಒಂದು ಸಿಲ್ವರ ಬಣ್ಣದ ಇನೋವಾ ಕಾರು ಕೂಡಾ ಇಂಧನ ಹಾಕಿಸಿಕೊಳ್ಳಲು ಬಂದಿದ್ದು ಅವರು ಕೂಡಾ  ಇಂಧನ ಹಾಕಿಕೊಂಡಿದ್ದು ಇರುತ್ತದೆ. ಅನೀಲ ತಂದೆ ಬಾಬು ರಾಠೋಡರವರು ತಮ್ಮ ಮೊಟಾರ ಸೈಕಲಗೆ ಪೆಟ್ರೋಲ ಹಾಕಿಸಿಕೊಂಡು ಕಲಬುರಗಿ ಕಡೆಗೆ ಬರುತ್ತಿರುವಾಗ ಅದೇ ವೇಳೆಗೆ ಹಿಂದಿನಿಂದ ಪೆಟ್ರೋಲ ಪಂಪದಲ್ಲಿ ಇಂಧನ ಹಾಕಿಸಿಕೊಂಡವರು ಬಂದವರೆ ಅನೀಲ ರಾಠೋಡರವರ ಮೊಟಾರ ಸೈಕಲಗೆ ಅಡ್ಡಗಟ್ಟಿ ನಿಲ್ಲಿಸಿ ಕಾರಿನಿಂದ 5 ಜನರು ಇಳಿದು ಹೊಡೆಬಡೆ ಮಾಡಿ  ಅವರನ್ನು ಕಾರಿನಲ್ಲಿ ಕೂಡಿಸಿಕೊಂಡು ಅವರಲ್ಲಿ ಒಬ್ಬ ಮೊಟಾರ ಸೈಕಲ ತೆಗೆದುಕೊಂಡು ಹೋದನು. ಕಾರಿನಲ್ಲಿ ಫಿರ್ಯಾದಿ ಹಾಗು ಆತನ ತಂಗಿಯನ್ನು ಹೊಡೆಬಡೆ ಮಾಡಿ ಅವರಲ್ಲಿದ್ದ 7500/- ರೂ ನಗದು ಹಣ, ಎರಡು ಸಾಮಸಂಗ ಮೊಬೈಲ ಪೊನ ಕಿತ್ತುಕೊಂಡು ಅವರನ್ನು ವಿಜಯಪುರ ಜಿಲ್ಲೆಯ ಸಿಂಧಗಿ ಸಮೀಪ ಬಿಟ್ಟು ಓಡಿ ಹೋದ ಬಗ್ಗೆ  ಫರಹತಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

            ಈ ದರೋಡೆ ಪ್ರಕರಣವನ್ನು ಪತ್ತೆ ಮಾಡುವ ಕುರಿತು ಮಾನ್ಯ ಶ್ರೀ ಅಮಿತ್ ಸಿಂಗ್.IPS, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ ಹಾಗು ಶ್ರೀ ವಿಜಯ ಅಂಚಿ ಡಿ.ಎಸ್.ಪಿ ಗ್ರಾಮಿಣ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಸ್. ಹುಲ್ಲೂರ ಡಿ.ಎಸ್.ಪಿ,  ಡಿ.ಸಿ.ಆರ್.ಬಿ ಘಟಕ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ,  ತಂಡದಲ್ಲಿದ್ದ ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ, ಕಲಬುರಗಿ, ಲಕ್ಷ್ಮಿ ಪ್ರಸಾದ IPS,  ಎ.ಎಸ್.ಪಿ ಫರಹತಾಬಾದ ಪೊಲೀಸ ಠಾಣೆ ಶ್ರೀ ರಾಘವೇಂದ್ರ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ, ಶ್ರೀ ನಾಗಭೂಷಣ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿಯವರು ಪ್ರಕರಣd ಆರೋಪಿತರನ್ನು ಪತ್ತೆ ಹಚ್ಚಿ , ಈ ಕೇಳಕಂಡ ಆರೋಪಿತರನ್ನು ಇಂದು ದಿನಾಂಕ 16/5/2016 ರಂದು ದಸ್ತಗಿರಿ ಮಾಡಿ, ಆರೋಪಿತರಿಂದ ಒಂದು ನಾಡ ಪಿಸ್ತ್ತೂಲ, ಒಂದು ಇನೋವಾ ಕಾರ, ಫಿಯಾದಿಯ ಮೊಟಾರ ಸೈಕಲ, ಒಂದು ಚಾಕು, ನಗದು ಹಣ ಹಾಗು ಮೊಬೈಲ ಪೊನಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ.
 ದಸ್ತಗಿರಿ ಮಾಡಿದ ಆರೋಪಿತರ ಹೆಸರು ಮತ್ತು ವಿಳಾಸ
1) ಖಯೂಮ ಪಟೇಲ ತಂದೆ ಮಹಿಬೂಬ ಪಟೇಲ ವಃ 24 ವರ್ಷ ಜಾಃ ಮುಸ್ಲಿಂ ಉಃ ವ್ಯಾಪಾರ ಸಾ:ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
2) ಮಹ್ಮದ ಪಟೇಲ ತಂದೆ ಇಮಾಮ ಪಟೇಲ ಮಾಲಿಪಾಟೀಲ ವಃ 21 ವರ್ಷ ಉಃ ಕಾರ ಚಾಲಕ ಸಾ: ಕಾಸರ ಭೋಸಗಾ ತಾ: ಜೇವರಗಿ ಜಿಲ್ಲಾ: ಕಲಬುರಗಿ
3) ಮಹಿಬೂಬ ತಂದೆ ಗಫರಸಾಬ ವಃ 22 ವರ್ಷ ಜಾಃ ಮುಸ್ಲಿಂ ಉಃ ಸೆಂಟ್ರಿಂಗ್ ಕೆಲಸ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
4) ಬಾಬಾ ಪಟೇಲ ತಂದೆ ಸಾಹೇಬ ಪಟೇಲ ವಃ 21 ವರ್ಷ ಉಃ ಟಿಪ್ಪರ ಕ್ಲೀನರ್ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ
5) ನಜೀರ ಪಟೇಲ ತಂದೆ ಸುಲ್ತಾನ ಪಟೇಲ ವಃ 23 ವರ್ಷ ಜಾಃ ಮುಸ್ಲಿಂ ಸಾ: ಕುಮ್ಮನ ಸಿರಸಗಿ ತಾ: ಜೇವರಗಿ ಜಿಲ್ಲಾ: ಕಲಬುರಗಿ

            ಒಟ್ಟು 5 ಜನ ಆರೋಪಿತರಿಂದ ನಗದು ಹಣ, ಕೃತ್ಯಕ್ಕೆ ಬಳಿಸಿದ ಒಂದು ನಾಡ ಪಿಸ್ತೋಲ, ಇನೋವಾ ಕಾರ, ಫಿರ್ಯಾದಿಯ ಮೊಟಾರ ಸೈಕಲ ಹಾಗು ಮೊಬೈಲ ಪೊನಗಳನ್ನು ಜಪ್ತು ಪಡಿಸಿಕೊಂಡು. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಆರೋಪಿ ಮತ್ತು ದರೊಡೆಮಾಡಿದ ಮಾಲು ಪತ್ತೆ ಮಾಡಿ ಪ್ರಕರಣ ಭೇದಿಸಿದ  ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ

No comments: