POLICE BHAVAN KALABURAGI

POLICE BHAVAN KALABURAGI

27 May 2015

KALABURAGI DISTRICT REPORTED CRIMES.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 26.05.2015 ರಂದು 16:30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ನನ್ನ ಮಗ ಭೀಮಾಶಂಕರ ಇತನು ಚಿರಗಳ್ಳಿ ಕ್ಯಾಂಪ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ನನ್ನ ಮಗಳಾದ  ಇವಳು ಚಿಗರಳ್ಳಿ ಕ್ಯಾಂಪಿನ ನನ್ನ ಮಗನ ಮನೆಯಲ್ಲಿಯೇ ವಾಸವಾಗಿರುತ್ತಾಳೆ. ದಿ 16.05.2015 ರಂದು ಮುಂಜಾನೆ ನಾನು ಚಿಗರಳ್ಳಿ ಕ್ಯಾಂಪಿಗೆ ನನ್ನ ಮಕ್ಕಳಿಗೆ ಮಾತಾನಾಡಿಸಲು ಬಂದಿರುತ್ತೆನೆ. ಮನೆಯಲ್ಲಿ ನನ್ನ ಮಗಳಾದ ಇವಳಿಗೆ ಮಾತನಾಡಿಸಲು ಅವಳು ಮಾತನಾಡಲಿಲ್ಲಾ. ನಂತರ ನನ್ನ ಸೊಸೆಯಾದ ನಿಂಗಮ್ಮ ಇವಳಿಗೆ ಕೇಳಲು ಅವಳು ಹೇಳಿದ್ದೆನೆಂದರೆ ನೀನ್ನೆ ದಿನಾಂಕ 15.5.2015 ರಂದು ಮಧ್ಯಾಹ್ನ  ಇವಳು ಸಂಡಾಸಕ್ಕೆ ಹೋಗಿ ಮರಳಿ ಮನೆಗೆ ಬಂದು ನನ್ನ ಮುಂದೆ ಹೇಳಿದ್ದನೆಂದರೆ ನಾನು ಸಂಡಾಸಕ್ಕೆ ಕುಳಿತು ಮರಳಿ ಮನೆಗೆ ಮದ್ಯಾನ್ಹ 2.00 ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ಯಾಂಪಿನ ಸೊಮರಾಯ ಇವರ ಕವಳಿ ಗದ್ದೆಯ ಹೊಲದ ಹತ್ತಿರ ಬರುತ್ತಿದ್ದಾಗ ಆ ವೇಳೆಗೆ ಮುಸ್ಲಿಂ ಜಾತಿಯ ಆಶೀಫ್ ಮಡಕಿ ಸಾಃ ಇಜೇರಿ ಇತನು ನನ್ನ ಹತ್ತಿರ ಬಂದು ನನಗೆ ಜಬರದಸ್ತಿಯಿಂದ ಕೈ ಹಿಡಿದು ಗಿಡ ಕಂಟಿಯ ಮರೆಯಲ್ಲಿ ಕರೆದುಕೊಂಡು ಹೋಗಿ ನನಗೆ ನೇಲಕ್ಕೆ ಕೆಡುವಿ ಮೈ ಮೇಲಿನ ಬಟ್ಟೆ ಎತ್ತಿ ಜಬರದಸ್ತಿಯಿಂದ ನನಗೆ ಸಂಬೋಗ ಮಾಡಿರುತ್ತಾನೆ ಅಂತಾ ಅಳುತ್ತಾ ಹೇಳಿರುತ್ತಾಳೆ ಅಂತಾ ತಿಳಿಸದಳು ಅಂದಿನಿಂದ  ಇವಳು ಸರಿಯಾಗಿ ಮಾತನಾಡಲು ಬರದ ಪ್ರಯುಕ್ತ ಮತ್ತು ನಾವು ಮರ್ಯಾದಿಗಾಗಿ ಅಂಜಿ ಯಾರ ಮುಂದೆ ಹೇಳಿರುವದಿಲ್ಲಾ ನಂತರ ನಾವು ಈ ಬಗ್ಗೆ ನಮ್ಮ ಸಂಬಂಧಿಕರಲ್ಲಿ ವಿಚಾರಿಸಿದಾಗ ಅವರು ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿಸು ಅಂತ ಹೇಳಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ಅರ್ಜಿ ನೀಡಿರುತ್ತೇನೆ. ಕಾರಣ ಆಸೀಫ್ ಮಡಕಿ ಇತನು ದಿನಾಂಕ: 15.05.2015 ರಂದು ಮದ್ಯಾನ್ಹ 2.00 ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ಯಾಂಪಿನ ಹತ್ತಿರದ ಸೊಮರಾಯ ಇವರ ಕವಳಿ ಗದ್ದೆಯ ಹೊಲದ ಹತ್ತಿರ ಜಾಗೆಯಲ್ಲಿ ಯಾರು ಇಲ್ಲದನ್ನು ನೋಡಿ ಸಂಡಾಸ ಮಾಡಿ ವಾಪಸ ಮನೆಗೆ ಬರುತ್ತಿದ್ದ ನನ್ನ ಮಗಳಾದ  ಇವಳಿಗೆ ಜಬರದಸ್ತಿಯಿಂದ ಸಂಬೋಗ ಮಾಡಿದ್ದು ಅವನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ 149/2015 ಕಲಂ 376. ಐಪಿಸಿ ಮತ್ತು 3 (1) (10) (11) 2(5) ಎಸ್.ಸಿ / ಎಸ್.ಟಿ ಪಿಎ ಆಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 26.05.2015 ರಂದು 14:30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿ|| 25.05.2015 ರಂದು 23:00 ಗಂಟೆಯಿಂದ ದಿ|| 26.05.2015 ರಂದು ೦5:00 ಮಧ್ಯದ ಅವಧೀಯಲ್ಲಿ ಯಾರೋ ಅಪರಿಚಿತ ಕಳ್ಳರು ಮುದಬಾಳ ಕೆ ಕ್ರಾಸ್‌‌ ನಲ್ಲಿ ಇರುವ ನನ್ನ ಶ್ರೀ. ಮರಡಿ ಮಲ್ಲಿಕಾರ್ಜುನ ಟ್ರೇಡರ್ಸ (ಫರ್ಟೀಲೈಸರ್) ಅಂಗಡಿಯಲ್ಲಿನ 1) ಕಾಂಪ್ಲೇನ್ ಸೂಪರ್ 4 ಕೇಸ್ 40 ಲೀಟರ್ ಹತ್ತಿ ಬೆಳೆಗೆ ಹೊಡೆಯುವ ಎಣ್ಣೆ, 2) ಅಸೀಪೇಟ್ ಮೂರು ಕೇಸ್ 30 ಕೇ.ಜಿ ಹತ್ತಿ ಬೆಳೆಗೆ ಹೊಡೆಯುವ ಪೌಡರ್ 3) ವೇಡ್ಬ್ಲಾಕ್ ಮೂರು ಕೇಸ್ 30 ಲೀಟರ್ ತೊಗರಿ ಬೆಳೆಗೆ ಹೊಡೆಯುವ ಎಣ್ಣೆ, 4) ಡೇವನ್ ಮೂರು ಕೇಸ್ 30 ಲೀಟರ್ ಹತ್ತಿ ಬೆಳೆಗೆ ಹೊಡೆಯುವ ಎಣ್ಣೆ, 5) ಟರ್ಬೋ 40 ಪಾಕೇಟ್ ಹತ್ತಿ ಬೀಜ ಹೀಗೆ ಒಟ್ಟು 24.500/- ರೂ ಕಿಮ್ಮತ್ತಿನ ಬೇಳೆ ಕ್ರಿಮಿ ನಾಶಕ ಔಷಧೀಗಳನ್ನು ಮತ್ತು ಹತ್ತಿ ಬೀಜ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಸದರಿ ಆರೋಪಿತರು ಮತ್ತು ಮಾಲನ್ನುಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕುಅಂತ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ 148/2015 ಕಲಂ 457. 380 ಐ.ಪಿ.ಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 26-05-2015  ರಂದು 1740 ಗಂಟೆಗೆ ಸರ್ಕಾರಿ ಆಸ್ಪತ್ರೆ ನಿಂಬರ್ಗಾದಿಂದ ಎಮ.ಎಲ.ಸಿ ಬಾತ್ಮಿ ಬಂದ ಮೇರೆಗೆ ಎಮ.ಎಲ.ಸಿ ವಿಚಾರಣೆ ಕುರಿತು ಆಸ್ಪತ್ರೆಗೆ ಭೇಟ್ಟಿ ಕೊಟ್ಟು ಉಪಚಾರ ನಿರತ ಶ್ರೀಮತಿ  ಸತ್ಯಮ್ಮ ಗಂಡ ಬಾಬು ಮಾಡಿಯಾಳ ವ|| 40 ವರ್ಷ, ಜಾ|| ಹೊಲೆಯ, || ಕೂಲಿಕೆಲಸ, ಸಾ|| ಹಿತ್ತಲಶಿರೂರ ಇವಳನ್ನು ವಿಚಾರಿಸಿ ಹೇಳಿಕೆ ದಾಖಲಿಸಿಕೊಂಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ ಮನೆಯ ಜಾಗೆಯ ಸಂಭಂಧ ದಿನಾಂಕ 26/05/2015 ರಂದು 1700 ಗಂಟೆಗೆ ಹಿತ್ತಲಶಿರೂರ ಗ್ರಾಮದ ತನ್ನ ಮನೆಯ ಮುಂದೆ ದೇವೆಂದ್ರಪ್ಪ ತಂದೆ ಕಲ್ಲಪ್ಪ ಕಾಮನಕರ ಹಾಗೂ ಇತರರು ಸೇರಿ ಅಕ್ರಮಕೂಟ ಕಟ್ಟಿಕೊಂಡು ಕಲ್ಲು ಮತ್ತ ಕಟ್ಟಿಗೆಯಿಂದ ತನಗೂ ಮತ್ತು ತನ್ನ ಗಂಡ ಮತ್ತು ಮಗನಿಗೆ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯಪಡಿಸಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ  ಹೇಳಿಕೆ ಫಿರ್ಯಾದಿಯನ್ನು ದಾಖಲಿಸಿಕೊಂಡು 1900 ಗಂಟೆಗೆ ಠಾಣೆಗೆ ಬಂದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 72/2015 ಕಲಂ 143, 147, 323, 324, 354, 504, 506,  ಸಂ 149  ಐಪಿಸಿ  ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ..
ಕುರಕುಂಟಾ ಪೊಲೀಸ್ ಠಾಣೆ : ಮನುಷ್ಯ  ಕಾಣೆಯಾದ ಬಗ್ಗೆ,   ದಿನಾಂಕ:- 20-05-2015 ರಂದು 5 ಪಿ.ಎಮ ಕ್ಕೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಒಂದು ಅರ್ಜಿಯನ್ನು ಹಾಜರು ಪಡಿಸಿದ್ದು ಅರ್ಜಿಯ ಸಾರಾಂಶವೆನೆಂದರೆ ಫಿರ್ಯಾದಿಯ ಮಗನಾದ  ಸಂಗಪ್ಪ ತಂದೆ ಶರಣಪ್ಪ ಮೇಲಿನಕೆರಿ ವ|| 22 ವರ್ಷ ಸಾ|| ಕುರಕುಂಟಾ ಇತನು ದಿನಾಂಕ:- 19-04-2015 ರಂದು ಬೆಳಗ್ಗೆ 10 ಗಂಟೆಗೆ ಮನೆಯಿಂದ ಖಾಸಗಿ ಕೆಲಸದ ನಿಮಿತ್ಯ ಹುಬ್ಬಳಿಗೆ ಹೋಗಿಬರುತ್ತೆನೆ ಎಂದು ಹೇಳಿ ಹೋದವನು. ಮರಳಿ ಮನೆಗೆ ಬರದೇ ಹೋದಾಗ ಫಿರ್ಯಾದಿಯು ತನ್ನ ಸಂಭಂದಿಕರು ಇರುವ ಕಡೆ ಎಲ್ಲಾ ಕಡೆ ಹುಡುಕಾಡುದರೂ ಸಿಕ್ಕಿರುವುದಿಲ್ಲ.ನಂತರ ತಿಳಿದುಬಂದಿದ್ದೆನೆಂದರೆ ಆಂಧಪ್ರದೇಶದ ಬಷಿರಾಬಾದ ಹತ್ತಿರ ಇರುವ ಮಂಥನಗೂಡು ತಾಂಡದ ರಾಜು ಎಂಬಾತನ ಮಗಳಾಧ ಗೀತಾ ಇವಳು  ನಿಮ್ಮ ಮಗನ ಜೊತೆಯಲ್ಲಿ ಹೋಗಿರುತ್ತಾಳೆ ಅಂತಾ ಫಿರ್ಯಾದಿಗೆ ಮತ್ತು ಫಿರ್ಯಾದಿಯ ಹೆಂಡತಿಯಾದ ಕಲ್ಲಮ್ಮಳಿಗೆ  ತೊಂದರೆ  ಕೊಡುತ್ತಿದ್ದು . ಫಿರ್ಯಾದಿಯು ತನ್ನ ಮಗ ಮನೆಯಿಂದ ಹೋಗುವ ಕಾಲಕ್ಕೆ ಮೈಮೇಲೆ ಗೋದಿ ಬಣ್ಣದ ಅಂಗಿ ಮತ್ತು ಚಾಕಲೇಟ ಬಣ್ಣದ ಪ್ಯಾಂಟು ಹಾಕಿದ್ದು ಅಂದಾಜು 5ಫೀಟು 4 ಇಂಚು ಎತ್ತರ ಮೈಬಣ್ಣ ಕೆಂಪು ಬಣ್ಣದವನಿದ್ದು ಬಿ.ಎ ಪಧವಿದರನಿದ್ದು ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ.ಇಂದು ಅರ್ಜಿ ಸಲ್ಲಿಸಿದ್ದು ತನ್ನ ಮಗನಿಗೆ  ಪತ್ತೆ ಹಚ್ಚಿ ಕೊಡಲು ವಿನಂತಿ ಅರ್ಜಿ ಸಲ್ಲಿಸದ ಮೇರೆಗೆ ಕುರಕುಂಟಾ ಠಾಣೆ ಗುನ್ನೆ.ನಂ 09/2015 ಕಲಂ:- ಮನುಷ್ಯ ಕಾಣೆಯಾದ ಬಗ್ಗೆ ಗುನ್ನೆ ದಾಖಲಾಗಿರುತ್ತದೆ.

ಆಶೋಕನಗರ ಪೊಲೀಸ್ ಠಾಣೆ : ದಿನಾಂಕ 26-05-2015 ರಂದು ರಾತ್ರಿ 8 ಗಂಟೆಗೆ ಶ್ರೀಮತಿ ಪ್ರೇಮಾ ಗಂಡ ಪ್ರಭಾಕರರಾವ ಮದರಕಿ ಸಾ:ಎನ್.ಜಿ.ಓ ಕಾಲೋನಿ ಕಲಬುರಗಿ ರವರು ಠಾಣೆಗೆ ಬಂದು ನೀಡಿದ ಫಿರ್ಯಾದಿ  ಅರ್ಜಿಯ ಸಾರಾಂಶವೆನೆಂದರೆ ಇಂದು ದಿನಾಂಕ 26-05-2015 ರಂದು ಸಂಜೆ 5-15 ಗಂಟೆ ಸುಮಾರಿಗೆ ನಾನು ಚಂದ್ರಕಲಾ ಕುಲಕರ್ಣಿ ರವರ ಮನೆಗೆ ಭಜನೆ ಮಾಡಲು ನಮ್ಮ  ಮನೆಯಿಂದ ನಡೆದುಕೊಂಡು ಹೋಗುತ್ತಿರುವಾಗ ಜವಾಹರ ಶಾಲೆ ಹತ್ತಿರ ರೇಲ್ವೆ ಟ್ರಾಕ ಕಡೆಗೆ ಹೋಗುವ ರಸ್ತೆಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಒಮ್ಮಲೇ ಬಂದು ನನ್ನ ಕೊರಳಲ್ಲಿ ಕೈ ಹಾಕಿ 2ವರೆ ತೊಲೆ ಬಂಗಾರದ ಮಂಗಳಸೂತ್ರ ಸರವನ್ನು ಕಿತ್ತುಕೊಂಡು ರೇಲ್ವೆ ಟ್ರಾಕ ಕಡೆಗೆ ಓಡಿ ಹೋಗಿರುತ್ತಾನೆ. ಅವನು ನೀಲಿ ಜೀನ್ಸ ಪ್ಯಾಂಟ , ನೀಲಿ ಚೆಕ್ಸ ಶರ್ಟ ಧರಿಸಿದ್ದು ಅಂದಾಜು   25-27 ವಯಸ್ಸಿನ ಇದ್ದು ಆತನಿಗೆ ನೋಡಿದರೆ ಗುರುತಿಸುತ್ತೇನೆ. ಆಗ ನಾನು ಚೀರಾಡಿದ್ದು ಜನರು ಬರುವಷ್ಟರಲ್ಲಿ ಆ ವ್ಯಕ್ತಿ ರೇಲ್ವೇ ಟ್ರಾಕ ದಾಟಿ ಓಡಿ ಹೋದನು ಮತ್ತು ಅದೇ ವೇಳೆಗೆ ಗೂಡ್ಸ ರೈಲು ಹೋಗಿದ್ದರಿಂದ ಬೆನ್ನು ಹತ್ತಲು ಆಗಿರುವುದಿಲ್ಲಾ.  ಈ ವಿಷಯ ನನ್ನ ಮನೆಯಲ್ಲಿ ತಿಳಿಸಿ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ 2ವರೆ ತೊಲೆ ಬಂಗಾರದ ಮಗಳಸೂತ್ರ ಸರ್ ಅ.ಕಿ 50,000/- ನೇದ್ದನ್ನು ಕಿತ್ತುಕೊಂಡು ಹೋಗಿದ್ದ ಕಳ್ಳನನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 77/2015 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.                            

No comments: