POLICE BHAVAN KALABURAGI

POLICE BHAVAN KALABURAGI

02 August 2014

Gulbarga District Reported Crimes

ಕಳ್ಳರ ಬಂದನ :
ಸ್ಟೇಷನ ಬಜಾರ ಠಾಣೆ : ಗುಲಬರ್ಗಾ ನಗರದ ವಕೀಲರ ಕಾಲೋನಿಯ ಲಿಂಗರಾಜ ವಕೀಲರ ಮನೆ ಹಾಗು ಮಿನಿ ವಿಧಾನ ಸೌದದ ಎದುರಗಡೆಯ ಮಹ್ಮದ ಹಖಿಂ ರವರ ಹಿಂದುಸ್ತಾನಿ ಎಂಟರಪ್ರೇಸಸ್‌ ನಲ್ಲಿ ಕಳ್ಳತನವಾಗಿದ್ದು  ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು . ಮಾನ್ಯ ಎಸ್ ಪಿ ಸಾಹೇಬರು,  ಡಿ ಎಸ್ ಪಿ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಬಿ ಬಿ ಭಜಂತ್ರಿ, ಹಾಗು ಸಿಬ್ಬಂದಿಯವರು ಕಾರ್ಯಾಚರಣೆ  ನಡೆಸಿ ರೇಲ್ವೆ ಸ್ಟೇಷನ ಹತ್ತಿರ ದಾಳಿ ಮಾಡಿ ಆರೋಪಿತರಾದ 1) ಅಂಬುಬಾಯಿ ಗಂಡ ಚರಣದಾಸ ಉಪದ್ಯಾ 2) ರಾಣಿ ತಂದೆ ಚರಣದಾಸ ಉಪದ್ಯಾ ಸಾ : ಇಬ್ಬರು ಬಾಪು ನಗರ ಗುಲಬರ್ಗಾ ಇವರನ್ನು  ದಿನಾಂಕ; 02/08/2014 ರಂದು ಬೆಳಗಿನ ಜಾವ ಬಂದಿಸಿ ಬಂದಿತರಿಂದ ಸುಮಾರು 80.000 ರೂಪಾಯಿ ಕಿಮ್ಮತ್ತಿನ ಬಂಗಾರದ ಒಡೆವೆಗಳು ಹಾಗು ಸೆನಿಟರಿವೇರ ಸಾಮಾನುಗಳು ಜಪ್ತಿ ಮಾಡಿಕೊಂಡಿಕೊಂಡಿರುತ್ತಾರೆ.
ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ಸರಕಾರಿ ನೌಕರರ ಬಂಧನ :
ಬ್ರಹ್ಮಪೂರ ಠಾಣೆ : ಗುಲಬರ್ಗಾ ನಗರದ ಸರ್ವೋದಯ ಕಾಲೊನಿಯಲ್ಲಿ ಇರುವ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಿಕ್ರೇಯಶನ್ ಕ್ಲಬ್ ಪಿ.ಡಬ್ಲೂ.ಡಿ. ವಸತಿ ಗೃಹ ನಂ. ಡಿ - 21 ರಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದ ಪ್ರಕಾರ ಶ್ರೀ.ಸಂತೋಷ ಬಾಬು.ಕೆ. ಐ.ಪಿ.ಎಸ್. ಎ.ಎಸ್.ಪಿ. ಗ್ರಾಮಿಣ ಉಪ-ವಿಭಾಗ ಗುಲಬರ್ಗಾ ಮತ್ತು ಶ್ರೀ.ಮಹಾನಿಂಗ ನಂದಗಾವಿ ಡಿ.ಎಸ್.ಪಿ.(ಎ) ಉಪ ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ.ಕೆ.ಎಂ.ಸತೀಶ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ್ ಠಾಣೆ ಗುಲಬರ್ಗಾ ಶ್ರೀ.ಯು.ಶರಣಪ್ಪ ಸಿ.ಪಿ.ಐ.ಎಂ.ಬಿ.ನಗರ ವೃತ್ತ ಗುಲಬರ್ಗಾ ಶ್ರೀ.ವಿನಾಯಕ ಪಿ.ಎಸ್.ಐ (ಕಾ&ಸು) ಬ್ರಹ್ಮಪೂರ ಪೊಲೀಸ್ ಠಾಣೆ, ಶ್ರೀ.ಹುಸೇನ್ ಭಾಷಾ ಪಿ.ಎಸ್.ಐ.ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಗುಲಬರ್ಗಾ ಮತ್ತು ಸಿಬ್ಬಂದಿ ವರ್ಗದವರು ದಾಳಿ ಮಾಡಿ ಕರ್ನಾಟಕ  ರಾಜ್ಯ ಸರಕಾರಿ ನೌಕರ ಸಂಘದ ರಿಕ್ರೇಯಶನ್ ಕ್ಲಬ್ದ ಜಂಟಿ ಕಾರ್ಯದರ್ಶಿಯಾದ  ಸತೀಶ ಸೇರಿದಂತೆ 45 ಜನರನ್ನು ಬಂಧಸಿ ಅವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1.16.000/- ರೂ, 64 ಮೋಟಾರ ಸೈಕಲ್ಗಳು, 34 ಮೋಬಾಯಿಲ್ ಪೋನಗಳು ವಶಕ್ಕೆ ತೆಗೆದುಕೊಂಡಿದ್ದು, ಈ ವಿಷಯದ ಕುರಿತು ಮಾನ್ಯ ಎಸ್.ಪಿ.ಸಾಹೇಬ ಗುಲಬರ್ಗಾ ರವರು ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ರೋಜಾ ಠಾಣೆ : ದಿನಾಂಕ: 01-08-2014 ರಂದು ಸಾಯಂಕಾಲ ಗುಲಬರ್ಗಾ ನಗರದ  ಮಿಜಗುರಿ ಹತ್ತಿರ ಇರುವ ಕೆ.ಬಿ.ಎನ್. ರೆಸಿಡೆಂಟ್ ಲಾಡ್ಜ ಹಿಂದುಗಡೆ ಇರುವ ಖುಲ್ಲಾ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಯ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಬಾತ್ಮಿ ಬಂದಿ ಮೇರೆಗೆ ಶ್ರೀ ಎಂ. ನಾರಾಯಣಪ್ಪ ಪಿ.ಐ  ರೋಜಾ ಠಾಣೆ  ರವರು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು ಅಲ್ಲದೆ ಮಾನ್ಯ ಡಿ.ಎಸ್.ಪಿ ಸಾಹೇಬ ;ಬಿ; ಉಪವಿಭಾಗ ವರಿಗೆ ಠಾಣೆಗೆ ಬರಮಾಡಿಕೊಂಡು ಅವರು ಮತ್ತು ಅವರ ಸಿಬ್ಬಂದಿಯವರಾದ 1] ಆಸಿಫ ಮಿಯ್ಯಾಂ ಪಿಸಿ-535 2] ಯಲಗುರೇಶ ಪಿಸಿ-296 3] ಗಂಗಾಧರ ಪಿಸಿ-432 4] ಮಹ್ಮದ ರಫಿಯೊದ್ದೀನ ಪಿಸಿ-370 5] ದೇವಿಂದ್ರಪ್ಪ ಪಿಸಿ-182 6] ರಾಮು ಪವಾರ   ನಂತರ ನಮ್ಮ ಠಾಣೆಯ ಪಿ.ಎಸ್.ಐ (ಅವಿ) ಶ್ರೀ ನಿಂಗಪ್ಪ ಪೂಜೇರಿ ಹಾಗೂ  ಸಿಬ್ಬಂದಿ ಜನರಾದ ಪಿಸಿ-645 ಮದರಸಾಬ, ಹೆಚ್,ಸಿ-305 ರಾಜಶೇಖರ ಪಿಸಿ-1134 ಅಬ್ದುಲರಹಮಾನ ಮತ್ತು ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳವಾದ ಮಿಜಗುರಿ ಹತ್ತಿರ ಇರುವ ಕೆ.ಬಿ.ಎನ್. ರೆಸಿಡೆಂಟ್ ಲಾಡ್ಜ ಹಿಂದುಗಡೆ ಇರುವ ಖುಲ್ಲಾ ಬಯಲು ಜಾಗೆಯಲ್ಲಿ  ಕಂಪೌಂಡ ಗೋಡೆಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಮಿಜಗುರಿ ಹತ್ತಿರ ಇರುವ ಕೆ.ಬಿ.ಎನ್. ರೆಸಿಡೆಂಟ್ ಲಾಡ್ಜ ಹಿಂದುಗಡೆ ಇರುವ ಖುಲ್ಲಾ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿಮಾಡಿ ಒಟ್ಟು 17 ಜನ ಇಸ್ಪೀಟ ಜೂಜಾಟ ಆಡುತ್ತಿದ್ದ ಜೂಜುಕೋರರಿಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1] ಆದಿಲ್ ತಂದೆ ಅಜೀಜ  ಸಾ:  ನೀರಿನ ಟಾಕಿ ಹತ್ತಿರ  ಮಹಿಬೂಬ ನಗರ ಕಾಲೋನಿ ಗುಲಬರ್ಗಾ  2] ಪ್ರಧಾನಿ ತಂದೆ ಸಿದ್ದಪ್ಪ ಕೆಂಭಾವಿ ಸಾ: ಮಹಾಲಕ್ಷ್ಮೀ ನಿವಾಸ ಹಳೆ ಜೇವರ್ಗಿ ರೋಡ ಗಣೇಶ ನಗರ ಗುಲಬರ್ಗಾ 3] ಏಜು ಪಟೇಲ ತಂದೆ ಮೈಬೂಬಸಾಬ ಸಾ: ಇಸ್ಲಾಮಾಬಾದ ಕಾಲನಿ {ಕಪನೂರ} ಗುಲಬರ್ಗಾ 4] ಫಾರೂಕ ತಂದೆ ಸೈಯ್ಯದಸಾಬ ಸಾ: ಮಿಜಗುರಿ ಗುಲಬರ್ಗಾ 5] ಜಲೀಲ ತಂದೆ ಸಲೀಮ ಸಾ: ದಂಡೋತಿ ತಾ: ಚಿತ್ತಾಪುರ ಜಿ: ಗುಲಬರ್ಗಾ 6] ರವಿ ತಂದೆ ಚನ್ನಪ್ಪ ಮಮ್ಮಾ ಸಾ: ಬಡಾ ರೋಜಾ ಗುಲಬರ್ಗಾ 7] ಬಸವರಾಜ ತಂದೆ ಶಿವಣ್ಣಪ್ಪ ಬಂಗರಗಿ ಸಾ: ನ್ಯೊ ರಾಘವೇಂದ್ರ ಕಾಲೋನಿ ಗುಲಬರ್ಗಾ 8] ಮಹ್ಮದ ಇಸಾಕ ತಂದೆ ಮಹ್ಮದ ಯುಸುಫ ಸಾ: ಮೊದಲನೇ ಕ್ರಾಸ ಆದರ್ಶ ನಗರ ಗುಲಬರ್ಗಾ 9] ಶಾಂತಯ್ಯ ತಂದೆ ಚನ್ನಯ್ಯ ಹೆಮುಡಾ ಸಾ:ಮುಕರಂಬಿ ತಾ: ಚಿಂಚೋಳಿ ಜಿ; ಗುಲಬರ್ಗಾ 10] ವಿಲಾಸ ತಂದೆ ಸಂಗಪ್ಪ ಹರಸೂರ ಸಾ; ಮಹಾಲಕ್ಷ್ಮೀ ಲೇಔಟ ಗುಲಬರ್ಗಾ 11] ಪ್ರವೀಣ ತಂದೆ ಸುಬ್ಬಣ್ಣ ಹೊಸಮನಿ ಸಾ; ಬೆಳಮಗಿ ಹಾ; ವ: ಮ್.ಜಿ ರೋಡ ಬಸವೇಶ್ವರ ಕಾಲೋನಿ ಗುಲಬರ್ಗಾ 12] ರೇವಣಸಿದ್ದಪ್ಪ ತಂದೆ ಬಾಬುರಾವ ಸಲಗರ ಸಾ : ಶಾಹಾಬಜಾರ ಕೋಣಿನ ದೊಡ್ಡಿ ಗುಲಬರ್ಗಾ 13] ಮಹ್ಮದ ಬಾಬಾ ತಂದೆ ಮಹಿಬೂಬ ಅಲಿ ಸಾ; ಖಮರ ಕಾಲೋನಿ ಗುಲಬರ್ಗಾ 14] ವಿಶಾಲ ತಂದೆ ಗುರುಲಿಂಗಪ್ಪ ಸಾ; ಮಕ್ತಂಪುರ ಗುಲಬರ್ಗಾ 15] ವಿರೇಂದ್ರ ತಂದೆ ನೀಲಕಂಠರಾವ್ ಸಾ: ಸ್ವಸ್ತಿಕ ನಗರ ಗುಲಬರ್ಗಾ 16] ಗೋಪಾಲ ತಂದೆ ಸಂಗಾರೆಡ್ಡಿ ತುಮಕುಂಟಾ ಸಾ; ಶಾಸ್ತ್ರಿ ನಗರ ಕೊಠಾರಿ ಭವನ ಗುಲಬರ್ಗಾ 17) ಸಂಗಪ್ಪಾ ತಂದೆ ಚನಬಸಪ್ಪ ಪಾಟೀಲ ಸಾ: ಮನೆ ನಂ: 2-370 ಜಗತ ಗುಲಬರ್ಗಾ ಇವರಿಂದ ಒಟ್ಟು ನಗದು ಹಣ 1,65,190/-ರೂಪಾಯಿ ಅಲ್ಲದೇ ಮತ್ತು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಸದರಿಯವರೊಂದಿಗೆ ರೋಜಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದೇಸಿ ಸರಾಯಿ ಮಾರಾಟ ಮಾಡುತ್ತಿದ್ದವರ ಬಂಧನ :
ಮಾದನ ಹಿಪ್ಪರಗಾ ಠಾಣೆ : ದಿನಾಂಕ 02-08-2014 ರಂದು ಮಾದನ ಹಿಪ್ಪರಗಾ ಠಾಣಾ ಹದ್ದಿಯಲ್ಲಿ ಬರುವ ನಿಂಬಾಳ ಗ್ರಾಮದಲ್ಲಿ ಅನಧಿಕೃತ ದೇಸಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ. ಡಿ. ಬಿ ಕಟ್ಟಿಮನಿ ಪಿ.ಎಸ್.ಐ ಮಾದನ ಹಿಪ್ಪರಗಾ ಠಾಣೆ  ಹಾಗು ಪಂಚರು ಮತ್ತು ಸಿಬ್ಬಂದಿಯೊಂದಿಗೆ 09;30 ಗಂಟೆಗೆ ನಿಂಬಾಳ ಗ್ರಾಮಕ್ಕೆ ಹೋಗಿ ನಿಂಬಾಳ ಗ್ರಾಮದ ಬಸ್ಸ ನಿಲ್ದಾಣದ ಹತ್ತೀರ ಆರೋಪಿತನ ಹೊಟೇಲದಲ್ಲಿ ಅನಧಿಕೃತ ಸಾರಾಯಿ ಮಹಾರಾಷ್ಟ್ರದಿಂದು ತಂದು ಮಾರಾಟ ಮಾಡುತ್ತಿದ್ದ ಅದು ಭಟ್ಟಿ ಸಾರಾಯಿಯಂತೆ ಕಂಡುಬಂದಿದ್ದರಿಂದ ಖಚಿತಪಡಿಸಿಕೊಂಡು ದಾಳಿ ಮಾಡಿ 1] ಹಣಮಂತ ತಂದೆ ಚಂದ್ರಶಾ ಲೆಂಡೆ 2] ಶಾಂತಲಿಂಗ ತಂದೆ ಹಣಮಂತ ಲೆಂಡೆ ಸಾ: ಇಬ್ಬರು ನಿಂಬಾಳ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ದೇಸಿ ದಾರು ಸಂತ್ರಾ ಅನ್ನುವ ಹೇಸರಿನ 180 ಎಂ,ಎಲ್, ನ ಗಾಜಿನ 36 ಬಾಟಲಿಗಳು ಅಂದಾಜು ಕಿಮ್ಮತ್ತು 1188/- ರೂಪಾಯಿಗಳ ಕಿಮ್ಮತ್ತಿನ ಮುದ್ದೆಮಾಲುನ್ನು ಜಪ್ತಿಪಡಿಸಿಕೊಂಡು ಮರಳಿ ಮಾದನಹಿಪ್ಪರಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸುರೇಶ ತಂದೆ ಮಾರುತಿರಾವ ಕುಲಕರ್ಣಿ ಸಾ: ಪ್ಲಾಟ ನಂ. 1-867/30 ಬಿ ಸಾಯಿ ನಿವಾಸ ವೆಂಕಟೇಶ ನಗರ ಗುಲಬರ್ಗಾ ರವರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಹಿರೋ ಹೊಂಡಾ ಸ್ಲೇಂಡರ ಪ್ಲಸ್ ನಂ. ಕೆ.ಎ-39 ಎಚ್- 1972  ಚಸ್ಸಿ ನಂ. 05C16C24710 ಇಂಜನ ನಂ. 05C15M25059 ಅ.ಕಿ. 22,000/- ರೂ ಇದ್ದು ಇದರ ಕಾಗದ ಪತ್ರಗಳು ನನ್ನ ಹೆಸರಿನಲ್ಲಿವೆ ದಿನಾಂಕ 04/05/2014 ರಂದು 11 ಎ.ಎಂ.ಕ್ಕೆ ಬಸ್ ನಿಲ್ದಾಣ ಗುಲಬರ್ಗಾದಲ್ಲಿ ನನ್ನ ಕೆಲಸ ಇರುವುದ್ದರಿಂದ ಮೋಟಾರ ಸೈಕಲ್ ಮೇಲೆ ಬಂದಿದ್ದು ಮೋಟಾರ ಸೈಕಲ್ ಕೇಂದ್ರ ಬಸ್ ನಿಲ್ದಾಣದ ಒಳಗಡೆ ನಿಲ್ಲಿಸಿ ಹೋಗಿ ಬರುವಷ್ಠರಲ್ಲಿ ನನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: