POLICE BHAVAN KALABURAGI

POLICE BHAVAN KALABURAGI

07 January 2014

Gulbarga District Reported Crimes

ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಕತವಿತಾ ಗಂಡ ರಾಜು ರಾಠೋಡ. ಸಾ. ಪರತಾಪೂರ ತಾಂಡಾ ತಾ. ಬಸವಕಲ್ಯಾಣ   ಜಿಲ್ಲಾ ಬಿದರ. ಹಾ.ವ ಕುಟನೂರ. ರವರ ಗಂಡನಾದ ರಾಜು ರಾಠೋಡ. ಮತ್ತು ಶಾರದಾಬಾಯಿ ರಾಠೊಡ. ಸಾ. ಪರತಾಪುರ ತಾಂಡಾ. ರವರು ಕುಡಿಕೊಂಡು  ದಿನಾಂಕ 04-01-2014 ರಂದು ರಾತ್ರಿ  ಸುಮಾರು 1130 ಗಂಟೆ ವೇಳೆಗೆ ಶಾರಾದಾಬಾಯಿ ಬಳಿಗೆ ಹೋಗಿ ನಂತರ ನನ್ನ ಬಳಿಗೆ ಬಂದು ನಾನು ಶಾರಾದಾಯಿ ಬಾಯಿ ಜೊತೆಯಲ್ಲಿಯೇ ಇರುತ್ತೇನೆ ಅಂತಾ ಹೇಳಿ ನೀನು ಬದುಕಿರಬಾರದು ನೀನು ಇದ್ದರೆ ತೊಂದರೆಯಾಗುತ್ತದೆ. ಸಾಯಿ ಮುಂಡೆ ಅಂತಾ ಬೈಯುತ್ತಾ ಕಬ್ಬು ಕಡಿಯುವ ಮಚ್ಚಿನಿಂದ ಮೈ ಕೈಗೆ ತುಂಬಾ ಹೊಡೆದನು ಆಗ  ನನಗೆ ತಲೆಯ ಹಿಂಬದಿಯಲ್ಲಿ ಬಲಗಣ್ಣಿನ ಹಣೆಯ ಮೇಲೆ ಬುಜಗಳಿಗೆ ಎದೆಯ ಮೇಲೆ ಬಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಣಿ ಕಾಣೆಯಾದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಕಂಟೆಪ್ಪ ತಂ, ವೀರಪ್ಪ ಮುಕ್ತೆ ಸಾ||ಮನೆ ನಂ; 13-567 ಯಲ್ಲಾಲಿಂಗ ಕಾಲೋನಿ ನೌಬಾದ ನಗರ ಬೀದರ ರವರ  ಮಗಳಾದ ಮಾಲಾಶ್ರೀ ವಯ||20, ಇವಳು ಮಹಾಗಾಂವ ಪಶುವೈದ್ಯಕೀಯ ಹೈನುಗಾರಿಕೆ ವಿಜ್ಞಾನ ಶಾಲೆಯಲ್ಲಿ 3 ನೇ ವರ್ಷದಲ್ಲಿ ತರಬೇತಿ ಮಾಡುತ್ತಿದ್ದು ದಿನಾಂಕ: 03-01-2014 ರಂದು ಬೆಳಿಗ್ಗೆ ತಾನು ವಿಧ್ಯಾಭ್ಯಾಸ ಮಾಡುವ ವಸತಿ ಗೃಹದಿಂದ ನಮ್ಮೂರಿಗೆ ಹೋಗಿಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಹಾಗೂ ಸಂಬಂಧಿಕರ ಊರಿಗೆ ಹೋಗಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಾಮರಾವ ತಂದೆ ವಿಠಲರಾವ ರವರು ದಿನಾಂಕ 05-01-2014 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಪಾರ್ಚುನ ಇಂಗ್ಲೀಷ ಶಾಲೆ ಹಿಂದುಗಡೆ ಏಕೆ ಮಾಡಲು ಹೋಗಿ ವಾಪಸ್ಸ ಮನೆಯ ಕಡೆಗೆ ಬರುವಾಗ ಜಿಲ್ಲಾನಬಾದ ಗಾಲಿಫ ಕಾಲೋನಿ ರೋಡ ಮೇಲೆ ಯಾವುದೊ ಒಂದು ಮೋಟಾರ ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: