POLICE BHAVAN KALABURAGI

POLICE BHAVAN KALABURAGI

20 October 2013

Gulbarga District Reported Crimes

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಿದ್ದಮ್ಮ ಗಂಡ ಶೀವಶರಣಪ್ಪ ಉಳ್ಳಾಗಡ್ಡಿ ಸಾ|| ಆಳಂದ ಹಾ. ವ || ಕುಂಬಾರ ಗಲ್ಲಿಬ್ರಹ್ಮಪೂರ ಗುಲಬರ್ಗಾ ಇವರ ಗಂಡ ಶೀವಶರಣಪ್ಪ ಮತ್ತು ಅಣ್ಣ ತಮ್ಮಂದಿರ ಮಧ್ಯ ಪ್ಇತ್ರರ್ಜಿತ ಆಸ್ತಿಯ ವಿಷಯದಲ್ಲಿ ತಕರಾರಿದ್ದು  ನನ್ನ ಗಂಡನ ಪಾಲಿಗೆ ಬರಬೇಕಾದ ಆಸ್ತಿಯನ್ನು ಕೊಡದೆ ಅದನ್ನು ನಮ್ಮ ಬಾವ ಮಲ್ಲಿಕಾರ್ಜುನ ಇತನು ತನ್ನ ಮಕ್ಕಳಾದ ರಾಜಶೇಖರಶ್ರೀಕಾಂತಮಾರ್ಕಂಡೆಯ ಇವರ ಹೇಸರಿಗೆ ಮಾಢಿಸಿದ್ದು ಅದಕ್ಕೆ ನನ್ನ ಗಂಡ ಮತ್ತು ಶೀವಶರಣಪ್ಪ ಆಗಾಗೆ ಆಳಂದಕ್ಕೆ ಹೋಗಿ ನನಗೆ ಬರಬೇಕಾದ ಆಸ್ತಿ ಕೊಡಬೇಕು ಅಂತಾ ಮತ್ತು ನಮಗೆ ಬರಬೇಕಾದ ಆಸ್ತಿಯನ್ನು ಕೊಡದೆ ಎಕೆ ನಿಮ್ಮ ಮಕ್ಕಳ ಹೆಸರಿಗೆ ಮಾಡಿಸಿಕೊಂಡಿರಿ ಅಂತಾ ಕೇಳುತ್ತಾ ಹೊರಿಟಿದ್ದನು . ನನ್ನ ಗಂಡ ಶೀವಶರಣಪ್ಪ ಇತನ ತಂಗಿಯಾದ ಸುಲೋಚನಾ ಗಂಡ ಅಪ್ಪರಾಯ ಕಾಳೆ ಮತ್ತು ಅವಳ ಮಗ ರವಿ ಅಪ್ಪಾರಾವ ಕಾಳೆ ಮತ್ತು ನನ್ನ ಗಂಡನ ಇನ್ನೋಬ್ಬ ತಂಗಿಯಾದ ಜಯಶ್ರೀ ಗಂಡ ಶರಣಪ್ಪ ಕಾಳೆ ಹಾಗು ನನ್ನ ಭಾವ ಮಲ್ಲಿಕಾರ್ಜುನ ಉಳ್ಳಾಗಡ್ಡಿ ಇವರು ಆಗಾಗ ನನ್ನ ಗಂಡನ ಜೋತೆಯಲ್ಲಿ ತಂಟೆ ತಕರಾರು ಮಾಢುತ್ತಾ ಹೊರಟಿದ್ದರು ದಿನಾಂಕ 07-10-2013 ರಂದು ಬೆಳಿಗ್ಗೆ 07.00 ಗಂಟೆ ಸುಮಾರಿಗೆ ನನ್ನ ಗಂಡ ಶೀವಶರಣಪ್ಪ ಇತನು ತಿಳಿಸಿದ್ದೆನೆಂದರೆ ನಾನು ನನ್ನ ತಂಗಿ ಸುಲೋಚನಾ ಇವರ ಮನೆಗೆ ನನಗೆ ಬರಬೇಕಾದ ಆಸ್ತಿಯನ್ನು ಕೊಡಬೇಕು ಅಂತಾ ಕೇಳಿ ಬರವುದಾಗಿ ಹೇಳಿ ಹೊದನು ಅವರು ಮರಳಿ ಮನೆಗೆ ಬರದೆ ಇರುವದರಿಂದ ನಾನು ಮತ್ತು ನನ್ನ ಮಗ ನಾಗರಾಜ ಕೂಡಿಕೊಂಡಿ ನನ್ನನಾದಿನಿ ಸುಲೋಚನಾ ಹಾಗು ಜಯಶ್ರೀ ಇವರ ಮನೆಗೆ ಹೊಗಿ ನನ್ನ ಗಂಡನ ಬಗ್ಗೆ ವಿಚಾರಿಸಿದ್ದು ಅವರು ನಮಗೆ ಗೊತ್ತಿರುವದಿಲ್ಲಾ ಅಂತಾ ತಿಳಿಸಿರುತ್ತಾರೆ ನಂತರ ನಾನು ಆಳಂದಕ್ಕೆ ಹೋಗಿ ನಮ್ಮ ಭಾವ ಮಲ್ಲಿಕಾರ್ಜುನ ಇವರ ಮನೆಗೆ ಹೊಗಿ ನನ್ನ ಗಂಡನ ಬಗ್ಗೆ ವಿಚಾರಿಸಿದ್ದು ಅವರು ನನಗೆ ಗೊತ್ತಿಲ್ಲಾ ಅಂತಾ ಹೇಳಿ ಜೀವದ ಬೇದರಿಕೆ ಹಾಕಿದ್ದರಿಂದ ನಾನು ಮರಳಿ ಮನಗೆ ಬಂದಿರುತ್ತೆನೆ. ನನ್ನ ಗಂಡನನ್ನು ಎಲ್ಲಾ ಕಡೆ ಹುಡುಕಾಡುತ್ತಿದ್ದಾಗ ದಿನಾಂಕ 18-10-2013 ರಂದು ಬೆಳಿಗ್ಗೆ 11.50 ಗಂಟೆಗೆ ನನ್ನ ಗಂಡ ಗುಲಬರ್ಗಾನಗರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತಟ್ಟಿರುವ ವಿಷಯ ತಿಳಿದಿದ್ದರಿಂದ ನಾನು ಮತ್ತು ನನ್ನ ಮಗ ನಾಗರಾಜ ಇಬ್ಬರು ಆಸ್ಪತ್ರೆಗೆ ಹೊಗಿ ನೊಡಲು ನನ್ನ ಗಂಡನು ತುರ್ತುಚಿಕಿತ್ಸಾ ಘಟಕದಲ್ಲಿ ಮರಣ ಹೊಂದಿದ್ದು ಇರುತ್ತದೆ ಕಾರಣ ನನ್ನ ಗಂಡನಿಗೆ ಆಸ್ತಿಯ ಸಂಬಂದ ನನ್ನ ನಾದನಿಯವರಾದ ಸುಲೋಚನಾ ಗಂಡ ಅಪ್ಪರಾವ ಕಾಳ ಅವರ ಮಗ ರವಿ ತಂದೆ ಅಪ್ಪಾರಾವ ಕಾಳೆ ಮತ್ತು ನನ್ನ ಭಾವ ಮಲ್ಲಿಕಾರ್ಜುನ ತಂದೆ ಭೀಮಶ್ಯಾ ಉಳ್ಳಾಗಡ್ಡಿ ಮತ್ತು ಜಯಶ್ರೀ ಗಂಡ ಶರಣಪ್ಪ ಕಾಳೆ ಇವರು ನನ್ನ ಗಂಡನಿಗೆ ಹೊಡೆದು ನಮಗೆ ತಿಳಿಸದೆ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೆರ್ಪಡೆ ಮಾಡಿದ್ದು ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ನರೇಂದ್ರಗೌಡ ತಂದೆ ವಿಠಲಯ್ಯಾ ಇಂಜಮುರಿ ಸಾ: ಗೊಲಲಗುದ ತಾ: ಚವಳಾ ಜಿ: ರಂಗಾರೆಡ್ಡಿ ಇವರು ತಮ್ಮ ಗ್ರಾಮದ ಇನ್ನು ಕೆಲವು ಜನರು ಟವೇರಾ ನಂ. ಎ.ಪಿ.28 ಎ.ವಿ. 6568ನೇದ್ದರಲ್ಲಿ ಘಾಣಗಾಪೂರಕ್ಕೆ ದೇವರ ದರ್ಶನ ಕುರಿತು. ಹೋಗಿ ಅಲ್ಲೆ ವಸತಿ ಮಾಡಿ ಇಂದು ದಿನಾಂಕ:19-10-13 ರಂದು ಮರಳಿ ಗ್ರಾಮಕ್ಕೆ ಹೋಗುವ ಕುರಿತು ಸದರಿ ಟವೇರಾದಲ್ಲಿ ಗುಲ್ಬರ್ಗಾ ಸೇಡಂ ರೋಡ ಮುಖಾಂತರ ಹೊರಟು 11.15 ಎ.ಎಮ್. ಸುಮಾರಿಗೆ ಗುಂಡಗುರ್ತಿ ಗ್ರಾಮದ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಒಂದು ಟವೇರಾ ವಾಹನ ನಂ. ಕೆ.ಎ 20 ಎಮ್. 9922 ನೇದ್ದರ ಚಾಲಕ ತನ್ನ ವಾಹನ ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬರುವಾಗ ವಾಹನದ ಹಿಂದಿನ ಟಾಯರ ಒಡೆದು ರೋಡಿನ ಮೇಲೆ ಅಡ್ಡಾ ತಿಡ್ಡಿ ವಾಹನ ನಡೆಸಿ ನಿಯಂತ್ರಣ ತಪ್ಪಿ ನಮ್ಮ ವಾಹನಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನನಗೆ ಹಾಗೂ ವಾಹದಲ್ಲಿದ್ದ ಇತರರಿಗೆ ಭಾರಿ ರಕ್ತಗಾಯ, ಗುಪ್ತಗಾಯ ಗಳಾಗಿ, ಡಿಕ್ಕಿ ಪಡಿಸಿದ ವಾಹನದಲ್ಲಿದ್ದ 2-3 ಜನರು ಕೆಳಗೆ ಬಿದ್ದು ಅದರಲ್ಲಿ ನೂರಜಾಹ ಶೇಖ ಎಂಬುವರು ಸ್ಥಳದಲ್ಲಿಯೆ ಮೃತ ಪಟ್ಟು ಇನ್ನು ಇಬ್ಬರು ಗಂಭಿರ ಸ್ಥತಿಯಲ್ಲಿದ್ದು. ಡಿಕ್ಕಿ ಪಡಿಸಿದ ವಾಹನ ಚಾಲಕನ ಹೆಸರು ವಿಚಾರಿಸಲಾಗಿ ಮಹ್ಮದ ಅಯುಬ ಶೇಖ ತಂದೆ ಮಹ್ಮದ ಸಾಬ ಶೇಖ ಅಂತ ತಿಳಿಸಿದು ಬಂದಿದ್ದು. ನಂತರ ನಾವೆಲ್ಲರು ಉಪಚಾರ ಕುರಿತು ಗುಂಡಗುರ್ತಿ ಆಸ್ಪತ್ರೆಗೆ ಸೇರಿಕೆಯಾಗಿದ್ದು. ಡಿಕ್ಕಿ ಪಡಿಸಿದ ವಾಹನದಲ್ಲಿದ್ದ ಗಂಭೀರ ಸ್ಥಿತಿಯಲ್ಲಿದ್ದವರಿಗೆ ಅಂಬುಲೆನ್ಸ ದಲ್ಲಿ ಉಪಚಾರ ಕುರಿತು ಗುಲ್ಬರ್ಗಾಕ್ಕೆ ತೆಗೆದುಕೊಂಡು ಹೋಗಿದ್ದು. ಹೋದವರಲ್ಲಿ ಗಾಯಾಳು ಅಬ್ಬಾಸ ಅಲಿ ಈತನು ಉಪಚಾರದಲ್ಲಿ ಮೃತ ಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಗಿ ಠಾಣೆ : ಶ್ರೀ ದಿನೇಶ ತಂದೆ ಷಣ್ಮಖಪ್ಪಾ ನಂದಿಕರ್ ಸಾ: ವರವರಟ್ಟಿ (ಕೆ) ತಾ: ಹುಮನಾಬಾದ ಇವರು  18-10-2013 ರಂದು ನಾನು  ಮತ್ತು ನನ್ನ ಗೆಳೆಯನಾದ ಅಸದ ಮೀಯ್ಯಾ ಇಬ್ಬರು ಕೂಡಿ ನಮ್ಮ ಖಾಸಗಿ ಕೆಲಸಕ್ಕಾಗಿ ನಮ್ಮ ಮೋಟರ ಸೈಕಲ ನಂ ಸುಜುಕಿ ಸಮೊರಾಯಿ ನಂ ಕೆಎ-39ಇ-4137 ರ ಮೇಲೆ ಕುಳಿತು ರಾಜಾಪೂರಕ್ಕೆ ಹೋರಟು ಭರತೂರ ಸೀಮಾಂತರದಲ್ಲಿ ಅಣ್ಣಪ್ಪ ಗೌಡ್ರ ಹೊಲದ ಹತ್ತಿರ ಹೋಗುತ್ತಿದ್ದಾಗ ನಮ್ಮ ಎದರುಗಡೆಯಿಂದ ಟಾಟಾ ಎ,ಸಿ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗೆ ಹಾಗೂ ನಿಷ್ಕಾಳಜೀತನದಿಂದ ಓಡಿಸಿಕೊಂಡು ಬಂದು ನಮಗೆ ಹಾಯಿಸಿ ರಸ್ತೆ ಅಪಘಾತ ಮಾಡಿದೆನುಈ ಅಪಘಾತದಿಂದ ನನ್ನ ಎರಡು ಮೊಳಕಾಲಿಗೆ ,ಹೊಟ್ಟೆಗೆ ಒಳಪೆಟ್ಟಾಗಿರುತ್ತದೆನನ್ನ ಹಿಂದೆ ಕುಳಿತನ ಅಸದಮಿಯ್ಯಾ ಇವನ ಬಲಗಾಲುಬಲಗೈಗೆಭಾರಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ,ಮತ್ತು ಬಲಹಣೆಗೆ ಪೆಟ್ಟಾಗಿ ರಕ್ತಾಗಾಯವಾಗಿರುತ್ತದೆನಮಗೆ ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ  ದಸ್ತಗೀರ ತಂದೆ ಸಯ್ಯದ ಮದರಸಾಬ ಇವರು ದಿನಾಂಕ 19-10-2013 ರಂದು ಸಾಯಂಕಾಲ 5=30 ಗಂಟೆಯ ಸುಮಾರಿಗೆ ಫಿರ್ಯಾದಿಯು ಸದಾಶೀವ ಇವರ ಮನೆಯಿಂದ ಹೊರಗೆ ಬಂದು ಏಕಿ ಮಾಡುವ ಗೊಸ್ಕರ ಪಿ.ಟಿ ಕ್ವಾಟರ್ಸ ಕಂಪೌಂಡ ಗೋಡೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ರಹಿಮತ ನಗರ ಕಡೆಯಿಂದ ಮೊ/ಸೈಕಲ್ ನಂ:ಕೆಎ 33 ಜೆ 8898 ರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿಗಾಯಗೊಳಿಸಿ ಸವಾರ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜುಜಾಟ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ಶ್ರೀ ಯು.ಶರಣಪ್ಪಾ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಜರುಪಡಿಸಿದ್ದು ಎನೆಂದರೆ ದಿನಾಂಕ. 19.10.2013 ರಂದು ಮದ್ಯಾಹ್ನ ಖಚಿತ ಬಾತ್ಮಿ ಬಂದಿದ್ದು ಎನೆಂದರೆ ಸಿದ್ದಿಪಾಶ ದರ್ಗಾದ ಹತ್ತಿರ ಒಬ್ಬ ಮನುಷ್ಯ ದೈವಲಿಲೆಯ ಮಟ್ಕಾ ಜೂಜಾಟ ಸಾರ್ವಜನಿಕರಿಂದ ಹಣ ಪಡೆದು ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯಾದ ದತ್ತಾತ್ರೆಯ ಎ.ಎಸ್.ಐ ಅಣ್ಣಾರಾವ ಹೆಚ್.ಸಿ, ಶಿವಯೋಗಿ ಹೆಚ್.ಸಿ, ಬಸವರಾಜ ಹೆಚ್.ಸಿ, ಲಕ್ಕಪ್ಪಾ ಹೆಚ್.ಸಿ, ಪ್ರಕಾಶ ಹೆಚ್.ಸಿ ರವರೊಂದಿಗೆ ಕೂಡಿಕೊಂಡು ಪೊಲೀಸ್ ಜೀಪ ನಂ. ಕೆಎ-32-ಜಿ-476 ರಲ್ಲಿ ಹೋಗಿ ಸಿದ್ದಿಪಾಶ ದರ್ಗಾದ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಮನುಷ್ಯ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ್ ಚೀಟಿ ಬರೆದುಕೊಡುವುದನ್ನು ನೋಡಿ ಖಚಿತಪಡಿಸಿಕೊಂಡು ಅವನಿಗೆ ಪಂಚರ ಸಮಕ್ಷಮದಲ್ಲಿ ಮತ್ತು ಸಿಬ್ಬಂದಿರವರ ಸಹಾಯದಿಂಧ ಮತ್ತಿಗೆ ಹಾಕಿ ಹಿಡಿದು ಅವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ನೂರು ತಂದೆ ಲಷ್ಕರ ರಾಠೋಡ ವಯ|| 30 ಜಾ|| ಲಮಾಣಿ ಸಾ|| ಭರತನಗರ ತಾಂಡಾ ಗುಲಬರ್ಗಾ ಇವರ ಸಮಕ್ಷಮದಲ್ಲಿ ಚೆಕ್ ಮಾಡಲಾಗಿ ಆರೋಪಿತನಿಂದ ನಗದು ಹಣ 2,200/-, ಒಂದು ಮಟಕಾ ಚೀಟಿ, ಒಂದು ಬಾಲ ಪೇನ ಇವುಗಳು ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿದ್ದು ಮಟ್ಕಾ ಬುಕ್ಕಿ ನಡೆಸುತ್ತಿದ್ದ ಅನೀಲ ಗಾಜರೆ ಸಾ|| ಗಾಜಿಪೂರ ಗುಲಬರ್ಗಾ ರವರಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದು ಕಾರಣ ಜಪ್ತಿ ಪಂಚನಾಮೆಯನ್ನು ಬರೆದು ಮುಗಿಸಿಮರಳಿ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲು ಹಾಗೂ ಆರೋಪಿತನಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments: