POLICE BHAVAN KALABURAGI

POLICE BHAVAN KALABURAGI

24 May 2013

GULBARGA DISTRICT REPORTED CRIMES

ಕೊಲೆ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ:23/05/2013 ರಂದು  ಜೇರಟಗಿ ಗ್ರಾಮದಲ್ಲಿ ಇದ್ದಾಗ ಜೆರಟಗಿ ಗ್ರಾಮದ ಯುಕೆಪಿ ಕ್ಯಾಂಪಿನ ಹತ್ತಿರ ಒಬ್ಬ ಹೆಣ್ಣು ಮಗಳು ಮೃತ ಪಟ್ಟಿರುತ್ತಾಳೆ ಅಂತಾ ವಿಷಯ ತಿಳಿದುಕೊಂಡು ಹೋಗಿ ನೋಡಲು 15 ದಿವಸಗಳ ಹಿಂದೆ ನಮ್ಮೂರಿಗೆ ಗೂರ್ಖಾ ಕೆಲಸ ಮಾಡಲು ನೇಪಾಳದಿಂದ ಧನಸಿಂಗ್ ತಂದೆ ದೇಬಿಸಿಂಗ್ ವಯಾ||26 ಉ:ಗೂಖಾ ಕೆಲಸ ಸಾ:ನೇಪಾಳಿ ಹಾ:ವ:                                                           ಜೆರಟಗಿ ಎಂಬುವವನು ತನ್ನ ಹೆಂಡತಿ ಮಕ್ಕಳೊಂದಿಗೆ ಬಂದು ಯುಕೆಪಿ ಕ್ಯಾಂಪಿನ ಹತ್ತಿರ ನನ್ನ ಚಪ್ಪರದ ಮನೆಯಲ್ಲಿ ಬಾಡಿಗೆ ಹಿಡಿದುಕೊಂಡು ವಾಸವಾಗಿದ್ದನು. 2-3 ದಿವಸಗಳ ಹಿಂದಿನಿಂದಲೂ ಧನಸಿಂಗ್ ಇತನು ಮಧ್ಯ ಕುಡಿದು ಬಂದು ತನ್ನ ಹೆಂಡತಿಯ ಸಂಗಡ ಜಗಳ ಮಾಡುತ್ತಾ ಬಂದಿದ್ದನು, ದಿನಾಂಕ:23/05/2013 ರಂದು ಮುಂಜಾನೆ 9.00 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ತನ್ನ ಹೆಂಡತಿಯಾದ ರಾಮಕಲಾ ಇವಳೊಂದಿಗೆ ಜಗಳ ಮಾಡಿ ಹೊಡೆ ಬಡೆ ಮಾಡಿ ತನ್ನ ಹೆಂಡತಿಯ ಕುತ್ತಿಗೆಗೆ ನೂಲಿನಿಂದ ಬಿಗಿದು ಕೊಲೆ ಮಾಡಿ ಶವವು ಮನೆಯ ಅಡ್ಡಿ ಕಟ್ಟಿಗೆಗೆ ತೂಗಿ ಹಾಕಿ ಓಡಿ ಹೋಗಿರುತ್ತಾನೆ ಅಂತ ಶ್ರೀ ಅಲ್ಲಾಭಕ್ಷ ತಂದೆ ನಬೀಸಾಬ ಯಂಕಂಚಿ ಸಾ: ಜೇರಟಗಿ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:79/2013 ಕಲಂ,302, 201  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀವಿಠ್ಠಲ ತಂದೆ ಮದರಪ್ಪಾ ಜಮಾದಾರ ಸಾ||ಧರ್ಮವಾಡಿ ರವರು ನಾವು ದಿನಾಂಕ:23-05-2013 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಟಮ್ ಟಮ್  ನಂಬರ ಕೆಎ-32 ಎಬಿ-5029 ನಮ್ಮ ಸಂಭಂಧಿಕರಾದ ವಿಮಲಾಬಾಯಿ ಗಂಡ ಶಿವಾನಂದ ಜಮಾದಾರ ಸಾ|| ಕಡಗಂಚಿ ಹಾಗೂ ಪರಮೇಶ್ವರ, ವೈಶಾಲಿ ಮತ್ತಿತರರು ಕೂಡಿಕೊಂಡು ಟಮ್ ಟಮ್ ದಲ್ಲಿ ಕಡಗಂಚಿ ಗ್ರಾಮದಿಂದ ಭಟ್ಟರ್ಗಾ ಗ್ರಾಮಕ್ಕೆ ದೇವರ ಕಾರ್ಯಕ್ರಮಕ್ಕೆ ಹೊಗುತ್ತಿರುವಾಗ ನಿಂಬರ್ಗಾ ತಾಂಡಾದ ಸಮೀಪ ರೋಡಿನ ಮೇಲೆ ಟಮ್ ಟಮ್ ಚಾಲಕನಾದ ಶ್ರೀಶೈಲ ತಂದೆ ಪರಮೇಶ್ವರ ಜಮಾದಾರ ಸಾ|| ಕಡಗಂಚಿ ಇತನು ತನ್ನ ವಾಹನವನ್ನು ಅತೀ ವೇಗ ಮತ್ತು  ನಿಷ್ಕಾಳಜಿತನದಿಂದ ಚಲಾಯಿಸಿ ಅಪಘಾತಪಡಿಸಿದನು. ಅದರಿಂದ ನಮ್ಮೆಲ್ಲರಿಗೆ ಹಾಗೂ ಚಾಲಕನಿಗೆ ಭಾರಿಗಾಯ ಮತ್ತು ಸಾದಾಗಾಯಗಳಾದವು. ಭಾರಿವಾಗಿರುವ ವಿಮಲಾಬಾಯಿ ಗಂಡ ಶಿವಾನಂದ ಜಮಾದಾರ ಇವಳಿಗೆ ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿಳು ಕಾರನ ಟಂಟಂ ಚಾಲಕನ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:58/2013 ಕಲಂ, 279, 337, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.
ಕೊಲೆ ಪ್ರಕರಣ:

ವಾಡಿ ಪೊಲೀಸ್ ಠಾಣೆ:ದಿನಾಂಕ:22-05-2013 ರಂದು ರಾತ್ರಿ ಬಸಪ್ಪನ ಖಣಿಯ ಏರಿಯಾದಲ್ಲಿಯ ಮುದುಕಪ್ಪನ ಮಗಳ ಮದುವೆ ನಿಶ್ಚಿತಾರ್ಥ ಕಾರಣದ ಊಟಕ್ಕೆ ನನ್ನ ಮಗ ಲಚ್ಚಮಯ್ಯ ಇತನು ತನ್ನ ಗೆಳೆಯರೊಂದಿಗೆ ಹೋಗಿ ಊಟ ಮುಗಿಸಿಕೊಂಡು ಮರಳಿ 1.30 ಗಂಟೆಯ ಸುಮಾರಿಗೆ ಸಂತೋಷ ತಂದೆ ರಾಮು, ಸುಂಕಪ್ಪ ತಂದೆ ನಾಗಪ್ಪ, ಸುಭಾಶ ತಂದೆ ಯಂಕಟೇಶ ಎಲ್ಲರೂ ಕೂಡಿಕೊಂಡು ಹನುಮಾನ ಗುಡಿಯ ಕಡೆಗೆ ಹೊರಟಾಗ ನಮ್ಮ ಓಣಿಯ ಸತ್ಯಪ್ಪ ತಂದೆ ರಾಮಯ್ಯ ಬಂಡಿ ಒಡ್ಡರ ಇತನು ಬಂದು ಅವಾಚ್ಯವಾಗಿ ಬೈದು ಇಷ್ಟು ರಾತ್ರಿ ಆಗಿದೆ ಮನೆಗೆ ಹೋಗಿ ಮಲಗಿರಿ ಅಂತಾ ಬೈದು ತನ್ನ ಮನೆಯ ಕಡೆಗೆ ಹೊರಟು ಹೋದನು. ಲಚ್ಚಮಯ್ಯ ಹಾಗೂ ಇತರರು ಕೂಡಿಕೊಂಡು ಹನುಮಾನ ದೇವರ ಕಟ್ಟೆಯ ಹತ್ತಿರ ಬಂದು ಕುಳಿತುಕೊಂಡರು. ದಿನಾಂಕ:23-05-2013 ರಂದು 3-00  ಗಂಟೆಯ ಸುಮಾರಿಗೆ ಸತ್ಯಪ್ಪ ಈತನು ತನ್ನ ಕೈಯಲ್ಲಿ ಪ್ಲಾಸ್ಟಿಕ ಪೈಪ ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಪ್ಲಾಸ್ಟಿ ಪೈಪದಿಂದ ಲಚ್ಚಮಯ್ಯನ ತಲೆಯ ಹಿಂದಗಡೆ ಹೊಡೆದಿದ್ದು ಅಲ್ಲದೆ ಕೈಯಿಂದ ಎಡ ಕಪಾಲೆಗೆ ಹೊಡೆದಿದ್ದರಿಂದ ಲಚ್ಚಮಯ್ಯ ಕೆಳಗಡೆ ಬಿದ್ದು ಬೇವೋಸ ಆದನು. ಆತನಿಗೆ ಕಿವಿಯಲ್ಲಿ ಮೂಗಿನಲ್ಲಿ ಬೀಡಿ ಊದಿ ಎಬ್ಬಸಿದರೂ ಸಹ ಏಳದೇ ಇರುವುದರಿಂದ ನಾನು ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗ ಲಚಮಯ್ಯಾ ಇತನಿಗೆ ಡಾಕ್ಟರ ಹತ್ತಿರ ತೋರಿಸಲು ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವದಾಗಿ ತಿಳಿಸಿದರು. ನನ್ನ ಮಗನಿಗೆ ಪ್ಲಾಸ್ಟಿಕ ಪೈಪದಿಂದ ಹೊಡೆದು ಕೊಲೆ ಮಾಡಿದ ಸತ್ಯಪ್ಪನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ,ಹಣಮಂತಾ ತಂದೆ ತಮ್ಮಣ್ಣ ಬಂಡಿ ಒಡ್ಡರ ಸಾ||ಬಸ್ಸಪ್ಪನ ಖಣಿ ವಾಡಿ ರವರು ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:96/2013 ಕಲಂ 504,302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ. 

No comments: