POLICE BHAVAN KALABURAGI

POLICE BHAVAN KALABURAGI

06 November 2012

GULBARGA DISTRICT REPORTED CRIMES


ಆತ್ಮಹತ್ಯೆ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಸುನೀತಾ ಗಂಡ ರಾಜು ರಾಠೋಡ ಸಾ||ಜಮಗಾ [ಆರ್] ತಾಂಡಾ ತಾ|| ಆಳಂದ ರವರು ನನ್ನ ಗಂಡ ದಿವಂಗತ ರಾಜು ಇವರು ಭೂಸನೂರ ಸಕ್ಕರೆ ಕಾರ್ಖಾನೆಯಲ್ಲಿ ಲೇಬರ ಮಕಾದಮ್ಮ ಆಗಿ ಕೆಲಸ ಮಾಡುತ್ತಿದ್ದರು ಹೋದ ವರ್ಷ 2011-12 ರಲ್ಲಿ ಅಂಬರಾಯ ಸುತ್ತಾರ ಸಾ||ಬಂದರವಾಡ ತಾ||ಅಫಜಲಪೂರ ರವರು ನನ್ನ ಗಂಡನಿಗೆ ರೂ 1,50,000 ರೂಪಾಯಿಗಳ ಲೇಬರ್ ಪೆಮೆಂಟ ಕೊಟ್ಟಿರುವದಿಲ್ಲಾ  ಹಣ ಕೇಳಲು ಹೋದರೆ ಹಣ ಕೊಡುವದಿಲ್ಲ. ಮತ್ತೆ ಹಣ ಕೇಳಲು ಬಂದರೆ ನಿನಗೆ ಹೊಡೆದು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಅಂತಾ ನನ್ನ ಗಂಡ ನನಗೆ ಹೇಳಿದರು ಅದೇ ರೀತಿ ಶ್ರೀ ಬುಡ್ಡಗೌಡ ಸಾ|| ಸಂಗಾಪೂರ ತಾ|| ಅಫಜಲಪೂರ ಇವರು ನಮಗೆ ರೂ 2,00,000 ಲೇಬರ ಸಂಬಳ ಕೊಡುವರಿದ್ದು, ಅದೇ ರೀತಿ ಚಂದ್ರಕಾಂತ  ತಂದೆ ಶಂಕರ ಪವಾರ ಸಾ||ತೀರ್ಥರೋಡ ತಾಂಡಾ ತಾ||ಆಳಂದ ಇವರು ಸಹ ನಮ್ಮಿಂದ 1,60,000 ರೂಪಾಯಿಗಳು ತಗೆದುಕೊಂಡು ಲೇಬರ ಕಳುಹಿಸದೆ ನನಗೆ ಮೋಸಮಾಡಿರುತ್ತಾರೆ ಎಂದು ನನ್ನ ಗಂಡನು ನನಗೆ ಹೇಳುತ್ತಿದ್ದರು. ಈ ಮೇಲ್ಕಂಡ ಮೂವರ ಕಿರುಕುಳದಿಂದ  ನನ್ನ ಗಂಡ ದಿನಾಂಕ:05-11-2012 ರಂದು ರಾತ್ರಿ 8.30 ಕ್ಕೆ ನಮ್ಮ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ 4 ಜನ ಮಕ್ಕಳಿದ್ದು ನಾನು ಈ ಮಕ್ಕಳಿಗೆ ಹೇಗ ಸಾಕಬೇಕೆನ್ನುವದು ದೊಡ್ಡ ಸಮಸ್ಯೆಯಾಗಿದೆ. ತಾವು ಈ ಮೇಲ್ಕಂಡ 3 ಜನರಿಂದ ನಮಗೆ ಕೊಡಬೇಕಾದ ಹಣ ವಸೂಲಿ ಮಾಡಿ ನನ್ನ ಗಂಡನ ಸಾಲ ಮರುಪಾತಿ ಮಾಡಲು ನನಗೆ ಸಹಾಯ ಮಾಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:217/2012 ಕಲಂ, 306 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಮೀರಾ ಗಂಡ ಸುಭಾಷಶ್ಚಂದ್ರ ಅವರಾದಿ ಸಾ|| ಕಾಳೆ ಲೇಜೌಟ ಗುಲಬರ್ಗಾ  ರವರು   ನಾನು ದಿನಾಂಕ:06-11-2012 ರಂದು ಸಾಯಂಕಾಲ 8-30 ಗಂಟೆ ಸುಮಾರಿಗೆ ನನ್ನ ಮನೆಯ ಮುಂದೆ ಕುಳಿತಿರುವಾಗ ಹಿಂದಿನಿಂದ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು ನನ್ನ ಮೂಗು ಮತ್ತು ಬಾಯಿ ಒತ್ತಿ ಹಿಡಿದು ನನ್ನ ಕೊರಳ್ಳಲ್ಲಿದ್ದ 9 ಗ್ರಾಂ ಬಂಗಾರದ ಲಾಕೇಟ ಕಡೆದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:79/2012 ಕಲಂ, 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀವಿಠಲ ತಂದೆ ಭೀಮಶ್ಯಾ ಹರಳಯ್ಯಾ ವಯ|| 28 ವರ್ಷ ಸಾ|| ವಿವೇಕಾನಂದ ಶಾಲೆಯ ಹತ್ತಿರ ಗಂಗಾ ನಗರ  ಗುಲಬರ್ಗಾ ರವರು ಸರಸ್ವತಿ ಗೋದಾಮದಲ್ಲಿ ಬರುವ ನೇಮ್ಮದಿ ಕೇಂದ್ರದ ಹತ್ತಿರ ನನ್ನ ಚಾಹಾ ಹೊಟೇಲ ಇದ್ದು ನನ್ನ ಹೊಟೇಲದಲ್ಲಿ ಗಾಜೀಪೂರ ಬಡಾವಣೆಯ ರಾಜು ನಾಟೀಕರ ಇವರು ಚಾಹಾ ಕುಡಿದು ಕುಳಿತುಕೊಂಡಿದ್ದು ಸದರಿಯವರಿಗೆ ನಾನು ಬೇರೆ ಗಿರಾಕಿ ಬರುತ್ತಿವೆ. ನೀನು ಎದ್ದು ಹೋಗು ಅಂತಾ ಹೇಳಿದಕ್ಕೆ ಸದರಿಯವನು ಹೊಟೇಲ ನಿಮ್ಮಪ್ಪನ ಜಾಗೆ ಇದೆಯೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಇರುವ ಸ್ಟೂಲ್ ತಗೆದುಕೊಂಡು ನನ್ನ ಹಣೆಯ ಎಡಗಣ್ಣಿನ ಮೇಲ್ಬಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:113/2012 ಕಲಂ: 504,324 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: