POLICE BHAVAN KALABURAGI

POLICE BHAVAN KALABURAGI

04 September 2012

GULBARGA DISTRICT REPORTED CRIMES


ಕಾಣೆಯಾದ ಪ್ರಕರಣ;
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ, ನಾನಾ ಗೌಡ ತಂದೆ ನರಸಪ್ಪಾ ದಿಗ್ಗಾವು ಸಾ || ಕೆಂಭಾವಿ ತಾ|| ಸುರಪುರ ಜಿ|| ಯಾದಗಿರಿ ಹಾ|| ವ|| ಧನಗರಗಲ್ಲಿ ಬ್ರಹ್ಮಪುರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿದ್ದು ಸದರಿ ಫಿರ್ಯಾದಿದಾರನ ಹೇಳಿಕೆ ಪಡೆದುಕೊಂಡಿದ್ದು, ಹೇಳಿಕೆ ಸಾರಾಂಶವೇನೆಂದರೆ,  ನನ್ನ  ಮಗನಾದ ಶರಣು ವಯಸ್ಸು|| 17, 9 ನೇ ತರಗತಿ ವಿದ್ಯಾರ್ಥಿ ಈತನು  ದಿನಾಂಕ;28-02-2012 ರಂದು ರಂದು ಬೆಳಿಗ್ಗೆ  10-00 ಗಂಟೆಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ. ಎಲ್ಲಾ ಕಡೆ ಹುಡಕಾಡಿದರೂ ಪತ್ತೆಯಾಗಿರುವದಿಲ್ಲ.  ಕಾಣೆಯಾದ ಮಗನನ್ನು ಪತ್ತೆ ಹಚ್ಚಿ ಕೊಡಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.65/2012 ಕಲಂ ಹುಡುಗ ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗಂಡನ ಕಿರಕುಳದಿಂದ ಗೃಹಿಣಿ ಬಲಿ;
ಆಳಂದ ಪೊಲೀಸ್ ಠಾಣೆ: ಶ್ರೀಮತಿ ಜೈಬುನ್ನಿಸಾ ಗಂಡ ದಿ|| ಧೂಲೆಸಾಬ ಮುಲ್ಲಾ ಮು|| ಬಟಗೇರಾ ತಾ|| ಬಸವ ಕಲ್ಯಾಣ ಜಿ||ಬೀದರರವರು ನನ್ನ ಮಗಳಾದ ರಿಯಾನ್ ಬೇಗಂ ವಳಿಗೆ ಆಳಂದ ಮಹಿಬೂಬ ಬೇಗ ಇವರ ಮಗನಾದ ಇಶಾಕ ಅಹ್ಮದ ಇವನ ಸಂಗಡ ಮದುವೆ ಮಾಡಿಕೊಟ್ಟಿದ್ದು,  ರಿಯಾನ್ ಬೇಗಂ ಇವಳಿಗೆ 4 ಜನ ಮಕ್ಕಳಿರುತ್ತಾರೆ. ನನ್ನ ಅಳಿಯ ಕುಡಿದು ಬಂದು ಮನೆಗೆ ಬಂದು ನನ್ನ ಮಗಳಿಗೆ ಕುಡಿಯಲು ಹಣ ಕೊಡು ಎಂದು ಮಾನಸಿಕ ತ್ರಾಸ ಕೊಡುತ್ತಿದ್ದ ಬಗ್ಗೆ ನನ್ನ ಮಗಳು ತವರ ಮನೆಗೆ ಆಗಾಗ ಬಂದಾಗ ತಿಳಿಸಿರುತ್ತಾಳೆ. ನಾವು ಇವತ್ತಲ್ಲ ನಾಳೆ ಸರಿಯಾಗುತ್ತಾನೆ ಅಂತಾ ಸಮಜಾಯಿಸಿ ಹೇಳಿ ಕಳುಹಿಸುತ್ತಿದ್ದೆವು, ಅಳಿಯ ಇಂದಿಲ್ಲ ನಾಳೆ ಸರಿ ಹೋಗಬಹುದು ಮಕ್ಕಳು ಕೂಡಾ ಇದ್ದಾರೆ ಅವನೊಂದಿಗೆ ಇದ್ದು ಬಾಳುವ ಸಂಸಾರ ಸಾಗಿಸು ಅಂತಾ ಹೇಳಿ ಕಳುಹಿಸುತ್ತಿದ್ದೇವು. ನನ್ನ ಅಳಿಯನಿಗೆ ಹಿಡಿದುಕೊಂಡು 4 ಜನರು ಆಣ್ಣತಮ್ಮಂದಿರಿದ್ದು ಆತ್ತೆ ಮಾವ ಸಹ ಇದ್ದು, ಅವರೇಲ್ಲರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ನನ್ನ ಅಳಿಯನು ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಇರುತ್ತಾನೆ. ದಿನಾಂಕ 31/08/2012 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನನ್ನ ಮಮ್ಮಗಳಾದ ನಸರೀನ ಬಾನು ಇವಳು ನಮಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ, ನಮ್ಮ ಆಮ್ಮನಿಗೆ ನಮ್ಮ ತಂದೆ ಕುಡಿದು ಬಂದು ಜಗಳ ಮಾಡಿದಕ್ಕೆ ಅಮ್ಮಿ ಇವಳು ಮನೆಯಲ್ಲಿ ಗ್ಯಾಸ ಎಣ್ಣೆ [ಸೀಮೆ ಎಣ್ಣೆ] ಮೈ ಮೇಲೆ ಸೂರಿದುಕೊಂಡು ಉರಿ ಹಚ್ಚಿಕೊಂಡಿರುತ್ತಾಳೆ. ನಮ್ಮ ತಂದೆ ಹಾಗೂ ಪಕ್ಕದ ಮನೆಯವರು ಆರಿಸಿದ್ದು ಅಮ್ಮನ ಮೈ ಪೂರ್ತಿ ಸುಟ್ಟಿದೆ ಉಪಚಾರ ಕುರಿತು ಸರ್ಕಾರಿ ದವಾಖಾನೆ ಗುಲ್ಬರ್ಗಾಕ್ಕೆ ತೆಗೆದುಕೊಂಡು ಹೋಗಿದ್ದಾರೆ ಅಂತಾ ತಿಳಿಸಿರುತ್ತಾಳೆ. ನಾವೇಲ್ಲರೂ  ಸರ್ಕಾರಿ ದವಾಖಾನೆಯಿಂದ ಬಸವೇಶ್ವರ ಆಸ್ಪತ್ರಗೆ ತಂದು ಸೇರಿಕೆ ಮಾಡಿದ್ದು. ನನ್ನ ಮಗಳಿಗೆ ವಿಚಾರಿಸಲಾಗಿ ನನ್ನ ಅಳಿಯಾ ಕುಡಿದು ಬಂದು ಹೊಡೆಯುವದು ಬೈಯುವದು ಮಾಡುತ್ತಿದ್ದು ಕುಡಿಯಲು ಹಣ ಕೊಡು ಅಂತಾ ಹೇಳುತ್ತಿದ್ದು, ಇದ್ದರಿಂದ ನನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಅವನ ಕಿರುಕುಳ ತಾಳದೆ ಮೈಸುಟ್ಟಿಕೊಂಡಿರುತ್ತೇನೆ, ಅಂತಾ ತಿಳಿಸಿದಳು.  ನನ್ನ ಮಗಳು ಉಪಚಾರ ಹೊಂದುತ್ತಾ ದಿನಾಂಕ 03/09/2012 ರಂದು ಮದ್ಯಾಹ್ನ 2.00 ಗಂಟೆಗೆ ಮರಣ ಹೊಂದಿದ್ದು ಅವಳ ಮರಣಕ್ಕೆ ಆಕೆಯ ಗಂಡನೆ ಕಾರಣವಾಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 178/.2012 ಕಲಂ 498 (ಎ) 306 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: