ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ
ಠಾಣೆ: ಶ್ರೀ.ವಿನೋದ
ತಂದೆ ಈಶ್ವರ ರಾಗಿ ಸಾ||ಡೊಂಗರಗಾಂವ ತಾ||ಗುಲಬರ್ಗಾರವರು ನಾನು ದಿನಾಂಕ: 16/07/2012 ರಂದು
ಸಾಯಂಕಾಲ 6-00 ಗಂಟೆಗೆ ಕೂಲಿ ಕೆಲಸ ಮುಗಿಸಿಕೊಂಡು ಡೊಂಗರಗಾಂವ ಕ್ರಾಸ್ ಹತ್ತಿರ ಬಂದಾಗ ನಮ್ಮೂರ
ನಮ್ಮ ಸಂಭಂದಿಕನಾದ ಕುಶಾ ತಂದೆ ಕರಬಸಪ್ಪ ತಳವಾರ
ವ: 18 ವರ್ಷ ಈತನು ಮರಗುತ್ತಿ ಕ್ರಾಸ್ ಹತ್ತಿರ ಹೋಗಿ ಚಹಾ ಕುಡಿದು ಬರೋಣ ನಡೆ ಅಂತಾ
ಹೇಳಿದ್ದರಿಂದ ನಾನು ಮತ್ತು ಕುಶಾ ಕೂಡಿಕೊಂಡು
ಚಹಾ ಕುಡಿಯುವ ಸಲುವಾಗಿ ಮರಗುತ್ತಿ ಕ್ರಾಸ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ
ಮರಗುತ್ತಿ ಕ್ರಾಸ್ ಸಮೀಪ ಕುಶಾ ಈತನು ಮೂತ್ರ ವಿಸರ್ಜನೆ ಮಾಡಿ ರಸ್ತೆ ದಾಟುತ್ತಿದ್ದಾಗ ಹುಮನಾಬಾದ
ಕಡೆಯಿಂದ ಒಬ್ಬ ಡಿ.ಸಿ.ಎಂ. ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಕುಶಾ ಈತನಿಗೆ ಡಿಕ್ಕಿ ಪಡಿಸಿದನು. ನಾನು ಮತ್ತು ಪುಂಡಲೀಕ
ತಂದೆ ದೇವಪ್ಪ ಹಿರೋಬಿ ಸಾ:ಮರಗುತ್ತಿ, ಕಾಮಣ್ಣ ತಂದೆ ಶರಣಪ್ಪ ಧನಗರ ಸಾ:ಡೊಂಗರಗಾಂವ
ಎಲ್ಲರೂ ಕೂಡಿಕೊಂಡು ಕುಶಾ ಈತನಿಗೆ ಎಬ್ಬಿಸಿ ನೋಡಲಾಗಿ ಕುಶಾನ ತೆಲೆಗೆ, ಎದೆಗೆ, ಹೊಟ್ಟೆಗೆ ಭಾರಿ
ಗುಪ್ತಗಾಯವಾಗಿ ನಾವು ಎಷ್ಟು ಎಬ್ಬಿಸಿದರೂ ಕಣ್ಣು ತೆರೆಯದೇ ಬೇಹೋಷ್ ಆಗಿ ಬಿದ್ದಿದ್ದನು. ಅಪಘಾತ
ಪಡಿಸಿದ ಡಿ.ಸಿ.ಎಂ. ವಾಹನ ನೋಡಲಾಗಿ ಅದರ ನಂಬರ್ ಕೆಎ-38- 637 ನೇದ್ದು ಇದ್ದು ಅದರ ಚಾಲಕನ
ಹೆಸರು ವಿಚಾರಿಸಲಾಗಿ ರವಿಚಂದ್ರನ್ ತಂದೆ ಮೇಘನಾಥ ರಾಠೋಡ ವ: 28 ವರ್ಷ ಸಾ: ದಿನಸಿ [ಕೆ]ತಾಂಡಾ ತಾ;ಜಿ; ಗುಲಬರ್ಗಾ ಅಂತಾ ತಿಳಿಸಿದನು. ಉಪಚಾರ ಕುರಿತು
ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರ ಫಲಿಸದೇ ಆಸ್ಪತ್ರೆಯಲ್ಲಿಯೇ
ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ;
84/2012 ಕಲಂ 279.337.304[ಎ] ಐಪಿಸಿ ಸಂಗಡ
187 ಐಎಂವ್ಹಿ ಆಕ್ಟ್ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment