POLICE BHAVAN KALABURAGI

POLICE BHAVAN KALABURAGI

11 March 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಬಸವರಾಜ ತಂದೆ ಚಂದ್ರಪ್ಪ ಹುಡೇದ ಉ : ಬ್ಯಾಂಕ ಉದ್ಯೋಗಿ ಸಾ: ಮನೆ ನಂ 1-867, 22ಸಿ/2 ಚಂದ್ರ ಕಿರಣ ಮಹಾವೀರ ನಗರ ಗುಲಬರ್ಗಾರವರು ನಾನು ದಿನಾಂಕ 24/02/2012 ರಂದು ಬೆಳಿಗ್ಗೆ 10:00 ಗಂಟೆಗೆ ಸಂಗಮ ಬಾರ & ರೆಸ್ಟೋರೆಂಟ ಮುಂದುಗಡೆ ನನ್ನ ಸ್ಕೂಟಿ ನಂ ಕೆಎ-32/ಕೆ-7283 ನೇದ್ದು ನಿಲ್ಲಿಸಿ ಕೆನರಾ ಬ್ಯಾಂಕಿನಲ್ಲಿ ನನ್ನ ಕರ್ತವ್ಯ ಮುಗಿಸಿಕೊಂಡು ಮರಳಿ ಬಂದು ನೋಡಲಾಗಿ ನಿಲ್ಲಿಸಿದ ಸ್ಥಳದಲ್ಲಿ ನನ್ನ ವಾಹನ ಇರಲಿಲ್ಲ, ಸದರಿ ಸ್ಕೂಟಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶಸ ಮೇಲಿಂದ ಠಾಣೆ ಗುನ್ನೆ ನಂ 26/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕೊಲೆ ಪ್ರಕರಣ:
ಮಹಿಳಾ ಪೊಲೀಸ ಠಾಣೆ:
ಶ್ರೀ ಬಾಬುರಾವ ತಂದೆ ಸಿದ್ರಾಮಪ್ಪಾ ಮೇತ್ರೆ ಸಾ: ಕಲ್ಲೂರ ರೋಡ ಭವನಿ ಗುಡಿ ಹತ್ತಿರ ಹುಮನಾಬಾದ ಜಿಬೀದರ,ನನ್ನ ಮೂರನೇ ಮಗಳಾದ ಸುಧಾ ಇವಳನ್ನು ಗುಲಬರ್ಗಾದ ವಿಜಯನಗರ ಕಾಲೋನಿಯ ಉಲ್ಲಾಸ ತಂದೆ ಶರಣಪ್ಪ ತಾಳಮಡಗಿ ಇವರೊಂದಿಗೆ ದಿನಾಂಕ 20.05.2009 ರಂದು ಮದುವೆ ಮಾಡಿಕೊಟ್ಟಿದ್ದು, ಮದುವೆಯ ಕಾಲಕ್ಕೆ 2 ತೊಲೆ ಬಂಗಾರ 20 ಸಾವಿರ ನಗದು ಹಣ ಕೊಟ್ಟಿದ್ದು, ಮದುವೆಯಾದ ಮೇಲೆ ಮಗಳು ಗಂಡನ ಮನೆಯಲ್ಲಿ ನಡೆಯಲು ಹೋಗಿದ್ದು, 6 ತಿಂಗಳ ಹಿಂದೆ ಮಗಳ ಗಂಡನ ಮನೆಯಲ್ಲಿ ಅಲಮಾರಿಯಲ್ಲಿಟ್ಟಿದ ಬಂಗಾರ ಹೋಗಿದೆ ಅಂತಾ ಅವರ ಅತ್ತೆ ಸುದ್ದಿ ಹಬ್ಬಿಸಿ ಮಗಳಿಗೆ ತೊಂದರೆ ಕೊಡಲು ಪ್ರಾರಂಬಿಸಿದ್ದು ಅತ್ತೆ, ಮಾವ ಮಗನಿಗೆ ಖರ್ಚ ಮಾಡಿ ಓದಿಸಿದೇವೆ ಲಗ್ನದ ಸಾಲ ಇದೆ ಅಂತಾ ಮಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರು,ದಿನಾಂಕ 10.03.2012 ರಂದು ನನ್ನ ಮಗಳಿಗೆ ಎರಡೂ ಮಾತ್ರೆಗಳನ್ನು ಕೊಟ್ಟು ನಂತರ ಅವಳು ಮಲಗಿದ್ದಾಗ ಮೈ ಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟು ಸಾಯಿಸಿರುತ್ತಾರೆ, ಆದಕಾರಣ ಮಗಳ ಗಂಡ, ಅತ್ತೆ, ಮಾವ ಇವರ ಮೇಲೆ ಕಾನೂನು ಕ್ರಮ ಕೈ ಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 26/2012 ಕಲಂ 498 (ಎ), 302, 304 (ಬಿ) ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: