POLICE BHAVAN KALABURAGI

POLICE BHAVAN KALABURAGI

26 March 2012

GULBARGA DIST REPORTED CRIME

ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:
ಬಸವರಾಜ ತಂದೆ ದಸ್ತಯ್ಯಾ ಗುತ್ತೆದಾರ ಸಾ ಭಟ್ಟರ್ಗಾ ಗ್ರಾಮರವರು ನಾನು 2009-2010 ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಂಗಾಪೂರ ಗ್ರಾಮ ಪಂಚಾಯತಿ ಕಾಮಗಾರಿಯ ಹಣವನ್ನು ಬಿಡುಗಡೆ ಮಾಡದಂತೆ ಎಮ.ಎಲ್.ಎ ರವರಿಗೆ ಶಿಪಾರಸ್ಸು ಮಾಡಿದ್ದಾನೆಂದು ತಪ್ಪು ತಿಳಿದು, ದಿನಾಂಕ 05/03/2012 ರಂದು ಗುಲಬರ್ಗಾದಲ್ಲಿ ನಾಗರಾಜನು ಹಲ್ಲೆ ಮಾಡಿದ್ದರಿಂದ ರಾಘವೆಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಗಿರುತ್ತದೆ. ಆ ದಿನದಿಂದಲೂ ನನಗೆ ಕೊಲೆ ಮಾಡಬೇಕೆಂದು ಹೊಂಚು ಹಾಕುತ್ತಾ ದಿನಾಂಕ 25/03/2012 ರಂದು ರಾತ್ರಿ 10-15 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂ. ಕೆ.ಎ 32 ಎಸ್ 5557 ನೇದ್ದರ ಮೇಲೆ ನಾನು ನಿಂಬರ್ಗಾದಿಂದ ನಮ್ಮ ಗ್ರಾಮಕ್ಕೆ ನನ್ನ ಗೆಳೆಯನಾದ ಮಹಾಂತಪ್ಪ ಇವರೊಂದಿಗೆ ಹೋಗುತ್ತಿದ್ದಾಗ ನಿಂಬರ್ಗಾ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪ ಹೌಸ ಹತ್ತಿರ ರೋಡಿನ ಮೇಲೆ ನಾಗರಾಜ ಹಾಗೂ ಅವನೊಂದಿಗೆ ಇನ್ನೊಬ್ಬ ವ್ಯಕ್ತಿ ಸೇರಿ ಮೋಟಾರ ಸೈಕಲ ಮೇಲೆ ಬಂದು ನಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಎಡಗೈ ಮೋಳಕೈ ಕೆಳಗೆ ಹೊಡೆದಿರುತ್ತಾನೆ, ಮತ್ತು ಅಪರಿಚಿತ ವ್ಯಕ್ತಿಯು ಕೈ ಮುಷ್ಟಿ ಮಾಡಿ ಮೂಗಿನ ಮೇಲೆ ಗುದ್ದಿ ಕೊಲೆಗೆ ಯತ್ನಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 22/2012 ಕಲಂ 323, 504, 341, 307, 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

No comments: