POLICE BHAVAN KALABURAGI

POLICE BHAVAN KALABURAGI

26 November 2011

GULBARGA DIST REPORTED CRIMES

ಹಲ್ಲೆ ಕೊಲೆ ಪ್ರಯತ್ನ ಪ್ರಕರಣ:

ದೇವಲಗಾಣಗಾಪುರ ಠಾಣೆ : ಶ್ರೀ ಪ್ರವೀಣ ತಂದೆ ದತ್ತಪ್ಪ ಕಟ್ಟಿಮನಿ ಸಾ|| ದೇವಲಗಾಣಗಾಪುರ ರವರು ನಾನು ಈಗ ಸುಮಾರು 3 ತಿಂಗಳ ಹಿಂದೆ ನಮ್ಮೂರ ದತ್ತಪ್ಪ ಹೊಸಮನಿ, ಅವಧೂತ ವಗ್ಗೆ ಇವರ ಹತ್ತಿರ ತಲಾ 500/- ರೂಪಾಯಿಯಂತೆ ಸಾಲ ಮಾಡಿದ್ದು , ಅವರು ಬಡ್ಡಿ ಸಮೇತ ವಾಪಸ ಮಾಡುವಂತೆ ಒತ್ತಾಯ ಮಾಡುತ್ತ ಬಂದಿದ್ದು ನನಗೆ ಹಣ ಮರಳಿ ಕೊಡದಿದ್ದಕ್ಕೆ ಆಗದೆ ಇದ್ದುದಕ್ಕೆ ಅವರು ನನ್ನ ಸಂಗಡ ಆಗಾಗ ತಕರಾರು ಮಾಡುತ್ತ ವೈಮನಸ್ಸು ಬೆಳಿಸಿಕೊಂಡು ಬಂದಿರುತ್ತಾರೆ. ನಾನು ರಾತ್ರಿ ರಾಜು ಅಳ್ಳಗಿ ಇವನ ಸಂಗಡ ಅಟೋಕ್ಕೆ ಪೆಟ್ರೋಲ ಹಾಕಿಕೊಂಡು ಬರಲು ಹೊರಟಾಗ ಅವಧೂತ ವಗ್ಗೆ , ದತ್ತಪ್ಪ ಹೊಸಮನಿ ಇವರು ನನ್ನನ್ನುಅಟೋದಿಂದ ಹೊರಗೆ ಎಳೆದು ಅವಾಚ್ಯ ಶಬ್ದಗಳಿಂದ ಬೈದು ದತ್ತಪ್ಪ ಇತನು ಚಾಕುವಿನಿಂದ ನನ್ನ ಕುತ್ತಿಗಿಗೆ ಹೊಡೆಯಲು ಬಂದಾಗ ನಾನು ನನ್ನ ಎಡ ಕೈ ಅಡ್ಡ ತಂದಿದ್ದಕ್ಕೆ ಆ ಏಟು ನನ್ನ ಎಡ ಕೈಗೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:103/2011 ಕಲಂ.341,504,323,307 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಶಿವರಾಯ ತಂದೆ ಮುತ್ತಣ್ಣ ಮರ್ತುರಕರ್ ;29 ವರ್ಷ ಉ: ಕಾರ ಚಾಲಕ ಸಾ; ಮನೆ ನಂ:2-689/5 ಬಿ ಸುಂದರ ನಗರ ಗುಲಬರ್ಗಾ ರವರು ನಗರ ಗುಲಬರ್ಗಾ ನಾನು ದಿನಾಂಕ 25-11-2011 ರಂದು ರಾತ್ರಿ 8-15 ಗಂಟೆಗೆ ಹೆಚ್.ಕೆ.ಸೊಸೈಟಿ ಫಾರಮಸಿ ಕಾಲೇಜ ಎದುರು ರೋಡಿನ ಮೇಲೆ ಕೆಎ 32 ಕ್ಯೂ 4448 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 150/2011 ಕಲಂ 279,338 ಐಪಿಸಿ ಸಂಗಡ 187 ಐಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: