POLICE BHAVAN KALABURAGI

POLICE BHAVAN KALABURAGI

28 October 2011

GULBARGA DIST REPORTED CRIMES

ಮನೆ ಕಳ್ಳತನ ಮಾಡಿದ ಸುಮಾರು 1 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ ವಗೈರೆ ವಶ ಓರ್ವ ಕಳ್ಳನ ಬಂದನ.

ಖಚಿತ ಮಾಹಿತಿ ಆಧಾರ ಅನ್ವಯ ಈ ದಿವಸ ಸೇಡಂ ರೋಡಿನ ಗೋಪಾಲ ಪ್ಯಾಕ್ಟರಿ ಹತ್ತಿರ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಓರ್ವ ಮನೆ ಕಳವು ಮಾಡುವ ವ್ಯಕ್ತಿಯನ್ನು ಬಂದಿಸಿರುತ್ತಾರೆ. ಆರೊಪಿತನಿಂದ ಬಂಗಾರದ ಆಭರಣಗಳು, ತಾಮ್ರದ ಸಾಮಾನುಗಳು ಕೇಬಲ್ ವಾಯರ ವಗೈರೆ ಹೀಗೆ ಸುಮಾರು 1 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಸದರಿಯವನು ಕಳೆದ ಒಂದು ವರ್ಷದಿಂದ ಗುಲಬರ್ಗಾದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಬಗ್ಗೆ ತಿಳಿದು ಬಂದಿದ್ದು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ.

     ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೊಪಿತರ ಪತ್ತೆ ಕುರಿತು ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀ ಅಸ್ಲಂ ಬಾಷಾ ಪಿಐ ಡಿ.ಎಸ್.ಬಿ ಘಟಕ ಗುಲಬರ್ಗಾ ಹಾಗೂ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ ಹಾಗೂ ಸಿಬ್ಬಂದಿಯವರಾದ ಗುರುಶರಣ ಹೆಚ್.ಸಿ, ಶಿವಪುತ್ರ ಸ್ವಾಮಿ, ಅಶೋಕ, ಪ್ರಭಾಕರ, ಅರ್ಜುನ, ಮಶಾಕ, ಚಂದ್ರಕಾಂತ ಮುರುಡ, ಬಲರಾಮ ರಜಪುತ ರವರು ಖಚತಿ ಭಾತ್ಮಿ ಮೇರೆಗೆ ಇಂದು ದಿನಾಂಕ 28/10/2011 ರಂದು ಬೆಳಿಗ್ಗೆ 6-30 ಗಂಟೆಗೆ ಸೇಡಂ ರೋಡಿನ ಗೊಪಾಲ ಪ್ಯಾಕ್ಟರಿ ಹತ್ತಿರ ಮಿಂಚಿನ ದಾಳಿ ಮಾಡಿ ಬಿಗ ಹಾಕಿದ ಮನೆಗಳನ್ನು ಕಳ್ಳತನ ಮಾಡುವ ಅರವಿಂದ ತಂದೆ ಶಾಹೀರ ಉಪಾಧ್ಯಯ ವಃ 18 ವರ್ಷ ಸಾ|| ಬಾಪು ನಗರ ಗುಲಬರ್ಗಾ ಇತನನ್ನು ಹಿಡಿದುಕೊಂಡು ಠಾಣೆಗೆ ತಂದು ಕೂಲಂಕೂಶವಾಗಿ ವಿಚಾರಣೆ ಮಾಡಲಾಗಿ ಆರೊಪಿತನು ಈಗ ಸುಮಾರು 3 ತಿಂಗಳಿಂದ ಗುಲಬರ್ಗಾ ನಗರದ ಬಸವೇಶ್ವರ ಕಾಲೋನಿ, ಆದರ್ಶ ನಗರ, ಪ್ರಗತಿ ಕಾಲೋನಿ, ರಾಜಾಪುರ ಜಿಡಿಎ ಪ್ರಶಾಂತ ನಗರ (ಬಿ) ಬಡಾವಣೆಗಳಲ್ಲಿಯ ಬೀಗ ಹಾಕಿದ ಮನೆಗಳನ್ನು ಹಾಗೂ ಭೂಪಾಲ ತೆಗನೂರ ಸಿಮಾಂತರದಲ್ಲಿ ಕೇಬಲ್ ಕಳ್ಳತನ ಮಾಡಿದ ಬಗ್ಗೆ ತನಿಖೆ ಕಾಲದಲ್ಲಿ ಒಪ್ಪಿಕೊಂಡಿದ್ದು. ಸದರಿ ಆರೊಪಿತನಿಂದ ಸುಮಾರು 1 ಲಕ್ಷ ಮೌಲ್ಯದ ಬಂಗಾರ\ ಆಭರಣಗಳು, ತಾಮ್ರದ ಬಾಂಡೆ ಸಾಮಾನುಗಳು, ಕೇಬಲ್ ವಾಯರ ವಗೈರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನ ಒಪ್ಪಿಸಲಾಗುತ್ತಿದ್ದು. ಮತ್ತು ಈ ಬಗ್ಗೆ ಮಾನ್ಯ ಎಸ್.ಪಿ ಸಾಹೇಬರು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

ಕಳ್ಳತನಕ್ಕೆ ಪ್ರಯತ್ನ

ಮುಧೋಳ ಪೊಲೀಸ್ ಠಾಣೆ : ಶ್ರೀ ದೇವಿಂದ್ರಪ್ಪಾ ಶಾಖಾಧಿಕಾರಿಗಳು ಜೆಸ್ಕಂ ಮುಧೋಳ ಗ್ರಾಮ ರವರು ರಾಮಚಂದ್ರಪ್ಪಾ ತಂದೆ ಬುಗ್ಗೋಜಿ ಇತನು ದಿನಾಂಕ: 27-10-2011 ರಂದು ರಾತ್ರಿ 8-00 ಗಂಟೆಗೆ ಮುಧೋಳ ಗ್ರಾಮದಲ್ಲಿರುವ ಜೆಸ್ಕಾಂ ಆಫೀಸಿನ ಶೇಟರ ಕೀಲಿ ಮುರಿದು ಓಳಗೆ ಇದ್ದ ಆಲಮಾರಿಯ ಕೀಲಿಮುರಿದು ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 110/2011 ಕಲಂ 454, 380 511 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ರಸ್ತೆಗೆ ಅಡೆ ತಡೆ ಮಾಡಿದ ಬಗ್ಗೆ

ಆಳಂದ ಪೊಲೀಸ ಠಾಣೆ: ಶ್ರೀ ವಿಜಯಕುಮಾರ ಪಿ.ಎಸ್.ಐ (ಕಾ&ಸು) ಆಳಂದ ರವರು ದಿನಾಂಕ: 28/10/2011 ರಂದು ಆಳಂದ ಪಟ್ಟಣದಲ್ಲಿ ತಾಲೂಕ ಪಂಚಾಯತಿಯ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆ ಮುಗಿಸಿಕೊಂಡು ಠಾಣಾ ಜೀಪಿನಲ್ಲಿ ಸಿಬ್ಬಂದಿಯವರಾದ ಪಿ.ಸಿ 1289 ಶೇಖ ಮಹಿಬೂಬ, ಪಿ.ಸಿ 61 ಸಿದ್ದಾರಾಮ, ಪಿ.ಸಿ 1280 ಗುರುಶಾಂತ,ಪಿ.ಸಿ 731 ಶಬ್ಬೀರ ಮೀಯ್ಯ ಇವರನ್ನು ಜೊತೆಯಾಗಿಸಿಕೊಂಡು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹಾಗು ರಸ್ತೆ ಸಂಚಾರಿ ಸುರಕ್ಷತಾ ನಿಮಿತ್ಯ ಪೆಟ್ರೋಲಿಂಗ ಮಾಡುತ್ತಾ ರಜವಿ ರೋಡ ಕಡೆಯಿಂದ ದರ್ಗಾ ಕ್ರಾಸ ಕಡೆ ಹೋರಟಾಗ 12.30 ಪಿ.ಎಂಕ್ಕೆ ಬಸ-ಸ್ಟ್ಯಾಂಡ ಎದರುಗಡೆ ಮುಖ್ಯ ರಸ್ತೆಯ ಮೇಲೆ ಹೋಗಿ ಬರುವ ವಾಹನಗಳು ದಟ್ಟಣೆಯಾಗಿ ಸಂಚಾರಕ್ಕೆ ಅಡ್ಡಿಯಾಗಿದ್ದನ್ನು ಕಂಡು ಸಿಬ್ಬಂದಿ ಸಹಿತ ಕೆಳಗಿಳಿದು ನೋಡಲಾಗಿ ಒಂದು ಲಾರಿ ನಂ ಕೆ.ಎ-39-1350 ನಿಂತಿದ್ದು ಸದರ ಲಾರಿಯು ರಸ್ತೆಯಿಂದ ಹೋಗಿ ಬರುವ ವಾಹನಗಳಿಗೆ ಅಡೆತಡೆ ಮಾಡುವಂತೆ ನಿಲ್ಲಿಸಿ ಅದರ ಚಾಲಕ ಎಲ್ಲಿಯೋ ಹೊರಟು ಹೋಗಿದ್ದನು ಚಾಲಕನ ಹೆಸರು ಯಶ್ವಂತ ತಂದೆ ಭೀಮಶಾ ಸಜ್ಜನ ವ:- 51 ವರ್ಷ ಉ;- ಲಾರಿ ಚಾಲಕ ಜಾ:- ಹರಿಜನ ಸಾ:- ನಾಗನಳ್ಳಿ (ಪಿ.ಟಿ.ಸಿ) ಗುಲ್ಬರ್ಗಾ ರವರ ಮೇಲೆ ಠಾಣೆ ಗುನ್ನೆ ನಂ 249/2011 ಕಲಂ 283 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮುಂಜಗ್ರತೆ ಕ್ರಮ :
ಆಳಂದ ಪೊಲೀಸ ಠಾಣೆ:
ಶ್ರೀ ವಿಜಯಕುಮಾರ ಪಿ.ಎಸ್.ಐ ಆಳಂದ ರವರು ಶ್ರೀಮತಿ ಕಲ್ಲುಬಾಯಿ ಗಂಡ ರಮೇಶ ಆಡೆ ಸಾ:ತೀರ್ಥ ತಾಂಡಾ ರವರ ತನ್ನ ಮಗಳಾದ ಜ್ಯೋತಿ ಇವಳಿಗೆ ಹೊಲಕ್ಕೆ ಕೆಲಸಕ್ಕೆ ಹೊಗಿ ಮರಳಿ ಬರುವಾಗ ತಾಂಡಾದ ಪೊರಮನ್ನ ತಂದೆ ಸೋಮ್ಲು ಪವಾರ ಇತನು ಅಪಹರಿಸಿಕೊಂಡು ಹೊಗಿದನ್ನು ಕೇಳಲು ಹೊದಾಗ ಪೊರಮನ್ನ ಕಡೆಯವರಾದ ಸಂಜು ಪವಾರ, ರಾಜು ಪವಾರ, ಅನೀಲ ಪವಾರ , ಶಾಂತಾಬಾಯಿ ಪವಾರ, ಸುನಿತಾ ಪವಾರ ಜಗುಬಾಯಿ ಪವಾರ ಸುರೇಖಾ ಪವಾರ ಶಿವಬಾಯಿ ಪವಾರ ಸೋಮು ಪವಾರ ಎಲ್ಲರು ಕುಡಿಕೊಂಡು ಬಂದು ಅವಾಚ್ಯವಾಗಿ ಬೈದು ಹೋಡೆಬಡೆ ಮಾಡಿ ಗಾಯಗೋಳಿಸಿ ಜೀವದ ಭಯ ಹಾಕಿ ಸದರಿ ಪ್ರಕರಣದಲ್ಲಿ ಅಫಹರಣಕ್ಕೊಳಗಾದ ಜ್ಯೋತಿ ಇವಳ ಕೊಲೆಯಲ್ಲಿ ಅಂತ್ಯಾಗೊಂಡಿದ್ದು ಈ ಬಗ್ಗೆ ಆಳಂದ ಪೊಲೀಸ್ ಠಾಣೆ 238/11 ಕಲಂ 143,147,148,323,324,341,504, 506,363.366[ಎ]ಸಂಗಡ 149 ಐಪಿಸಿ ಮತ್ತು 302 ಐಪಿಸಿ ಪ್ರಕಾರ ಗುನ್ನೆ ಧಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ. ನಂತರ ಸದರ ತಾಂಡಾದಲ್ಲಿ ನರ್ಸಿಂಗ ಅಲಿಯಾಸ ಪೊರಮಿನ ತಂದೆ ಸೊಮ್ಲು ಪವಾರ ಇವರು ಅದೆ ದಿನ ದಿನಾಂಕ 08/10/2011 ರಂದು ಮೊದಲಿನ ಪ್ರಕರಣದ ಫಿರ್ಯಾದಿಯವರ ಕಡೆಯಾದ ಮಾನು ಆಡೆ, ಸಂತೊಶ ಆಡೆ, ಚಂದು ಆಡೆ, ಶಂಕರ ಆಡೆ, ಇವರಲ್ಲರು ಸೇರಿ ಕೊಲೆ ಪ್ರಕರಣದ ಕೊಲೆ ವಿಷಯದ ದ್ವೇಶದಲ್ಲಿ ತನಗೆ ಮತ್ತು ತನ್ನ ತಮ್ಮ ಸಂಜು ಇತನಿಗೆ ಅವಾಚ್ಯವಾಗಿ ಬೈದು ಹೋಡೆ ಬಡೆ ಮಾಡಿರುತ್ತಾರೆ ಅಂತಾ ಕೊಟ್ಟ ದೂರಿನ ಅನ್ವಯ ಆಳಂದ ಠಾಣೆ ಗು.ನಂ 239/11 ಕಲಂ 323,324,504,ಸಂಗಡ 34 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ಧಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ. ಪ್ರಕರಣದಲ್ಲಿನ ಆರೋಪಿತರು ಒಬ್ಬರ ಮೇಲೊಬ್ಬರು ಕೊಲೆಯ ಮತ್ತು ಅಪಹರಣದ ಮತ್ತು ಅದೆ ವಿಷಯದಲ್ಲಿ ತಕರಾರದಲ್ಲಿ ಎರಡು ಪಂಗಡದವರು ದ್ವೇಶ ಭಾವನೆ ಹೊಂದಿದ್ದು ಕಂಡು ಬರುತ್ತದೆ. ಕಾರಣ ಮೇಲೆ ಧಾಖಲಾದ ಎರಡು ಪ್ರಕರಣಗಳು ಒಂದೆ ಗ್ರಾಮದ ತಾಂಡಾದಲ್ಲಿ ಘಟಿಸಿದ್ದು ಈ ಕೆಳಗೆ ನಮೂದಿಸಿದ ಎರಡು ಪಂಗಡದವರು ಒಬ್ಬರ ಮೇಲೊಬ್ಬರು ದ್ವೇಶಬಾವನೆ ಸಾದಿಸುತ್ತಾ ಒಬ್ಬರ ಮೇಲೊಬ್ಬರು ದೂರು ಧಾಖಲಿಸುವ ರೂಢಿಗತ ಮಾಡಿಕೋಂಡಂತೆ ಕಂಡುಬಂದ್ದಿದ್ದು ಗ್ರಾಮದ ತಾಂಡಾದಲ್ಲಿ ಯಾವದೆ ಸಮಯದಲ್ಲಿ ಶಾಂತತೆ ಭಂಗ ಉಂಟಾಗಿ ಎರಡು ಪಂಗಡಗಳ ಮದ್ಯದಲ್ಲಿ ಕಲಹ ಉಂಟಾಗಿ ಆಸ್ತಿ ಹಾಗು ಪ್ರಾಣ ಹಾನಿವಾಗುವ ಎಲ್ಲ ಸಾಧ್ಯತೆಗಳು ಕಂಡು ಬಂದಿದ್ದು ಕಾರಣ ಈ ಕೆಳಗೆ ನಮೂದಿಸಿದ ಎರಡು ಪಂಗಡದವರಿಗೆ ಸೂಕ್ತ ಮುಂಜಾಗ್ರತಾ ಕ್ರಮ ಕುರಿತು ಠಾಣಿ ಗು.ನಂ 248/11 ಕಲಂ 107,ಸಿ.ಆರ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: