POLICE BHAVAN KALABURAGI

POLICE BHAVAN KALABURAGI

09 August 2011

GULBARGA DISTRICT REPORTED CRIMES

ದರೋಡೆ ಪ್ರರಕಣ :
ಅಶೋಕ ನಗರ ಪೊಲೀಸ್ ಠಾಣೆ
: ಶ್ರೀಮತಿ. ಜಯಶ್ರೀ ಗಂಡ ವಸಂತ ಜೋಶಿ ಸಾ: ಧ್ಯಾನಂಜಯ ನಗರ ಮಾಕಾ ಲೇಔಟ ಎನ್‌.ಜಿ.ಒ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣ ಅನಂತ, ತಂದೆ ಚಿಂತಾಮಣಿ ಮತ್ತು ಅತ್ತಿಗೆ ನಳಿನಿ ಗಂಡ ಅನಂತ ಮೂರು ಜನರು ಶ್ರೀ. ಭವಾನಿ ಪೋಟೋ ಸ್ಟುಡಿಯೊದಲ್ಲಿ ಫೋಟೋ ತೆಗೆಸಿಕೊಂಡು ವೆಂಕಟಗಿರಿ ಹೊಟೇಲಿಗೆ ಕಾಫೀ ಕೂಡಿಯಲು ಹೊಗಿ ಮರಳಿ ಮನೆಗೆ ಬರುತ್ತಿರುವಾಗ ರಾತ್ರಿ 8:45 ಗಂಟೆ ಸುಮಾರಿಗೆ ಘಾಟಗೇ ಮನೆಗೆ ಹೊಗುವ ರಸ್ತೆಯಲ್ಲಿ ಸ್ವಲ್ಪ ಕತ್ತಲು ಇದ್ದ ಸ್ಥಳದಲ್ಲಿ ಅಂದಾಜು 20-25 ವರ್ಷದ ಒಬ್ಬ ಹುಡುಗ ಮೊಬೈಲನಲ್ಲಿ ಮಾತಾಡುತ್ತಾ ನಮ್ಮ ಹತ್ತಿರ ಬಂದು ಒಮ್ಮೇಲೆ ನನ್ನ ಕುತ್ತಿಗೆ ಹತ್ತಿರ ಕೈ ಹಾಕಿ ನನ್ನ ಕೊರಳಲ್ಲಿ ಇದ್ದ ಎರಡು ಎಳೆಯ ಬಂಗಾರದ 2 ತೊಲೆಯ ಚೈನ, ಒಂದು ಎಳೆಯ ಬಂಗಾರ 1 ತೊಲೆ ಚೈನ ಎರಡೂ ಕೂಡಿ ಒಟ್ಟು 30 ಗ್ರಾಮ ಬಂಗಾರದ ಚೈನಗಳು ಕಿತ್ತುಕೊಳ್ಳುತ್ತಿರುವಾಗ ನಾನು ಚಿರಾಡುತ್ತಾ ಚೈನಗಳನ್ನು ಹಿಡಿದಾಗ ಅದರಲ್ಲಿ ಅಂದಾಜು 4 ಇಂಚು ಚೈನ ತುಕಡಿ ಮತ್ತು ಒಂದು ಪೆಂಡೇಂಟ ನನ್ನ ಕೈಯಲ್ಲಿ ಉಳಿದಿರುತ್ತದೆ. ಉಳಿದ ಅಂದಾಜು 2 ½ ವರೆ ತೊಲೆ ಬಂಗಾರದ ಚೈನಗಳನ್ನು ಕಿತ್ತಿಕೊಂಡು ಅಲ್ಲೆ ಹತ್ತಿರ ಇನ್ನೊಬ್ಬ ಹುಡುಗ ನಿಲ್ಲಿಸಿದ ಮೊಟರ ಸೈಕಲ ಮೇಲೆ ಕುಳಿತುಕೊಂಡು ಹೊಗಿರುತ್ತಾರೆ. ಆ ವೇಳೆಯಲ್ಲಿ ನನ್ನ ಅಣ್ಣ ಅನಂತ ಕುಲಕರ್ಣಿ ಮತ್ತು ಅತ್ತಿಗೆ ನಳಿನಿ ರವರು ಚಿರಾಡಿದರು ಸಹ ಯಾರು ಸಹಾಯಕ್ಕೆ ಬರಲಿಲ್ಲ. ನನ್ನ ಕೊರಳಲ್ಲಿ ಕೈ ಹಾಕಿ ಒಟ್ಟು 25 ಗ್ರಾಂ ಬಂಗಾರದ ಚೈನ ಅಂದಾಜು 50,000/- ಮೌಲ್ಯದ ಬಂಗಾರದ ಆಭರಣಗಳನ್ನು ಕಿತ್ತಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ
: ರುಕ್ಮಬಾಯಿ ಗಂಡ ಸಿದ್ದರಾಮ ಸೋನಕಾಂಬಳೆ ಸಾ: ಕಿಣ್ಣಿಅಬ್ಬಾಸ ರವರು ನಾನು ಮಗಳಿಗೆ ಬಾಣೆತನಕ್ಕೆ ಕೆರೆದುಕೋಂಡು ಬರಲು ದುದನಿಗೆ ಹೊಗುವ ಸಲುವಾಗಿ ದಿನಾಂಕ;-03/08/2011 ರಂದು ಸಾಯಂಕಾಲ ಕಿಣ್ಣಿಅಬ್ಬಾಸ ಗ್ರಾಮದಿಂದ ಬಸ್ಸು ಇರಲಾರದ ಕಾರಣ ನಡೆದುಕೋಂಡು ಮೋಘಾ(ಬಿ) ಗ್ರಾಮಕ್ಕೆ ನಾನು ಮತ್ತು ನಾಜೂಕಮ್ಮ ನಡೆದುಕೊಂಡು ಹೋಗುತ್ತಿರುವಾಗ ಸಾವಳೇಶ್ವರ ಕ್ರಾಸ್ ಹತ್ತಿರ ಹೊಗುತ್ತಿರುವಾಗ ಎದುರು ಗಡೆಯಿಂದ ಸೈಕಲ್ ಮೋಟಾರ ಕೆಎ-19ಡಬ್ಲು-3407 ನೇದ್ದರ ಚಾಲಕ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


No comments: