POLICE BHAVAN KALABURAGI

POLICE BHAVAN KALABURAGI

03 November 2019

KALABURAGI DISTRICT REPORTED CRIMES

ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ರಾಜು ಹಡಪಾದ್ ಸಾ; ಬಸವನಕಟ್ಟಿ ಹಾ.ವ ವಿದ್ಯಾನಗರ ನಗರ ಜೇವರ್ಗಿ ರವರ ಗಂಡನ ಮನೆ ವಾಡಿ ಗ್ರಾಮ ಇದ್ದು, ನನ್ನ ತವರು ಮನೆ ಜೇವರ್ಗಿ ಇರುತ್ತದೆ. ನಮಗೆ ಶೃತಿ 19 ವರ್ಷದ ಮಗಳಿದ್ದು ಜೇವರ್ಗಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನಾನು ಮತ್ತು ನನ್ನ ಮಗಳು ವಾಸವಾಗಿರುತ್ತೇವೆ. ನನ್ನ ಮಗಳು ಶೃತಿ ಇವಳು ವಿನ್ನರ್ ಬಟ್ಟೆ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಇವಳಿಗೆ ಹುಣಸಗಿ ಗ್ರಾಮದ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದು ದಿನಾಂಕ; 04/11/2019 ರಂದು ಮದುವೆ ಮಾಡಲು ಸಿದ್ದತೆ ನಡೆಸಿರುತ್ತೇವೆ. ದಿನಾಂಕ; 26/10/2019 ರಂದು ಶನಿವಾರ ಬೆಳಿಗ್ಗೆ ನಾನು ಮತ್ತು ನನ್ನ ಮಗಳು ಶೃತಿ ಕೂಡಿಕೊಂಡು ಜಾಲಾದಿಗೆ ದೇವರ ಕಾರ್ಯಾಕ್ರಮಕ್ಕೆ ಹೋಗಿದ್ದೇವು. ಅಲ್ಲಿ ದೇವರ ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ಸಾಯಂಕಾಲ 4-00 ಘಂಟೆಯ ಸುಮಾರಿಗೆ ಜೇವರ್ಗಿಗೆ ಬಂದೇವು. ನಂತರ ನಾನು ಜೇವರ್ಗಿ ಪಟ್ಟಣದಲ್ಲಿ ತಿರುಗಾಡಿ ಸಂಬಂದಿಕರಿಗೆ ಮದುವೆ ಕಾರ್ಡ ಹಂಚಲು ಹೋಗಿರುತ್ತೇನೆ. ಮರಳಿ ನಾನು ರಾತ್ರಿ 10-00 ಘಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು  ಇರಲಿಲ್ಲ, ಆಗ ನಾನು ಎಲ್ಲಿಯಾದರು ನಮ್ಮ ತಾಯಿಯ ಮನೆಗೆ ಹೋಗಿರಬಹುದು ಸ್ವಲ್ಪ ಹೊತ್ತಿನಲ್ಲಿ ಮನೆಗೆ ಬರಬಹುದು ಎಂದು ಸುಮ್ಮನಿದ್ದೇನು. ನಂತರ ನನಗೆ ದಿನಪೂರ್ತಿ ತಿರುಗಾಡಿ ಸುಸ್ತಾಗಿದ್ದರಿಂದ ಮನೆಯಲ್ಲಿ ನಿದ್ದೇ ಹೋದೆನು. ದಿನಾಂಕ; 27.10.19 ರಂದು ನಾನು ಬೆಳಿಗ್ಗೆ ಎದ್ದು ನೋಡಲಾಗಿ ನಮ್ಮ ಮಗಳು ಮನೆಗೆ ಬಂದಿರಿಲಿಲ್ಲ. ಆಗ ನಾನು ನಮ್ಮ ಬೀಗರು ನೆಂಟರಲ್ಲಿ ಪೋನ್ ಮಾಡಿ ವಿಚಾರಿಸಿ ನಮ್ಮ ಮಗಳಿಗೆ ಹುಡುಕಾಡಲಾಗಿ ಎಲ್ಲಿ ಹೋಗಿದ್ದಾಳೆ ಎನ್ನುವ ಕುರಿತು ಸುಳಿಯು ಸಿಕ್ಕಿರುವದಿಲ್ಲ, ನಂತರ ನಾನು ಜೇವರ್ಗಿ ಪಟ್ಟಣದಲ್ಲಿ ಮತ್ತು ಕಲಬುರಗಿ ಶಹಾಪೂರ ಹುಣಸಗಿ ಮೊದಲಾದ ಕಡೆಯಲ್ಲಿ ನಮ್ಮ ಮಗಳಿಗೆ ಹುಡುಕಾಡಿದರು ಕೂಡ ಅವಳು ಸಿಕ್ಕಿರುವದಿಲ್ಲ. ಕಾಣೆಯಾಗಿರುತ್ತಾಳೆ  ಕಾಣೆಯಾದ ಮಗಳ ಚಹರಾ ಪಟ್ಟಿ ಈ ಕೆಳಕಂಡಂತೆ ಇರುತ್ತದೆ. ಕಾಣೆಯಾದವಳ ಹೆಸರು; ಶೃತಿ ತಂದೆ ರಾಜು ಹಡಪಾದ್ ವಯ; 19 ವರ್ಷ, ಎತ್ತರ 5. 2 ಅಡಿ, ಸಾದಗಪ್ಪು ಮೈ ಬಣ್ಣ, ತೆಳ್ಳನೆ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ, ಭಾಷೆ ಬಲ್ಲವಾಳಾಗಿದ್ದು, ಮನೆಯಿಂದ ಹೋಗುವಾಗ ಪೈಜಾಮ್ ಚುಡಿದಾರ ಧರಿಸಿರುತ್ತಾಳೆ.. ಮತ್ತು ಅವಳಿಗೆ ಬೆನ್ನಿನ ಮೇಲೆ ಮುಂಗೈ ಮೇಲೆ ಸುಟ್ಟ ಹಳೆಯ ಘಾಯದ ಗುರುತು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಹಾನಿ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚಂದ್ರಕಾಂತ ತಂದೆ ಶಿವಪ್ಪ ದೊಡ್ಡಮನಿ ಸಾ||ಬನ್ನಟ್ಟಿ ಹಾ||ವಾ||ಅಫಜಲಪೂರ ರವರು ಹಿರೊ ಪ್ಯಾಶನ ಪ್ರೋ ಕಂಪನಿಯ ಮೋಟಾರ ಸೈಕಲ ನಂಬರ ಕೆ,ಎ-32 ಈಜೆ-5777 ಇರುತ್ತದೆ.ಇದರ ಅಂದಾಜು ಕಿಮ್ಮತ್ತು 20,000/- ಇರಬಹುದು ಸದರಿ ನನ್ನ ಮೋಟಾರ ಸೈಕಲನ್ನು  ಪ್ರತಿದಿವಸ ಅಫಜಲಪೂರ ಪಟ್ಟಣದ ನನ್ನ ಮನೆಯ ಮುಂದೆ ನಿಲ್ಲಿಸುತ್ತೇನೆ.  ದಿನಾಂಕ 01-11-2019 ರಂದು ರಾತ್ರಿ 10:00 ಗಂಟೆಗೆ ನನ್ನ ಮೋಟಾರ ಸೈಕಲ್ ಅನ್ನು ನನ್ನ ಮನೆಯ ಮುಂದೆ ನಿಲ್ಲಿಸಿ ನಾನು ನನ್ನ ಹೆಂಡತಿ ಮಕ್ಕಳೋಡನೆ ಮನೆಯಲ್ಲಿ ಇರುತ್ತೇನೆ. ಸುಮಾರು ರಾತ್ರಿ 11:30 ಪಿ.ಎಮ್ ಸುಮಾರಿಗೆ ನಾನು ಮಲಗಿದ್ದಾಗ ನಮ್ಮ ಮನೆಯ ಮುಂದೆ ಡಭ್ ಅಂತಾ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ್ ಬೆಂಕಿ ಹತ್ತಿ ಉರಿಯುತ್ತಿದ್ದು ಹತ್ತಿರ ಹೋಗಿ ನೋಡಲಾಗಿ ಅಲ್ಲೇ ಸಮೀಪದಲ್ಲಿ ಒಂದು ನೀರಿನ ಬಾಟಲಿಯಲ್ಲಿ ಅರ್ಧ ಪೇಟ್ರೋಲ್ ಇತ್ತು ಯಾರೋ ದುಷ್ಕರ್ಮಿಗಳು ನನ್ನ ಮೇಲಿನ ಸಿಟ್ಟಿನಿಂದ ಅಥವಾ ಹೊಟ್ಟೆಕಿಚ್ಚಿನಿಂದ ನನ್ನ ಮೋಟಾರ ಸೈಕಲ್ ಮೇಲೆ ಪೇಟ್ರೋಲ್ ಹಾಕಿ ಬೆಂಕಿ ಹಚ್ಚಿ ನನ್ನ ಮೋಟಾರ ಸೈಕಲ್ ಅನ್ನು ಸುಟ್ಟು ನನಗೆ 20000/- ರೂ ಹಾನಿ ಮಾಡಿರುತ್ತಾರೆ ನನ್ನ ಮೋಟಾರ ಸೈಕಲ್ ಸುಡುವಾಗ ನಾನು ಮತ್ತು ನಮ್ಮ ಓಣಿಯ ರಾವುತಪ್ಪ ಬ್ಯಾಡಗಿಹಾಳ ಮತ್ತು ಇನ್ನಿತರರು ಕೂಡಿ ಬೆಂಕಿಯನ್ನು ಆರಿಸಿರುತ್ತೇವೆ ಕಾರಣ ನನ್ನ ಮೋಟಾರ ಸೈಕಲ್ ಅನ್ನು ಸುಟ್ಟು ಹಾನಿ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 November 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಸಂಗೀತಾ ಗಂಡ ಶ್ರವಣಕುಮಾರು ಕ್ಷತ್ರಿ ಸಾ: ಇಟಗಿ ತಾ: ಜೇವರ್ಗಿ ರವರು ದಿನಾಂಕ  30-10-2019 ರಂದು ನಾನು ಮತ್ತು ನನ್ನ ಗಂಡ ಇಬ್ಬರು ಕೂಡಿಕೊಂಡು ನನ್ನ ತವರು ಗ್ರಾಮವಾದ ಮೈಂದರ್ಗಿ ಗ್ರಾಮದಿಂದ ಇಟಗಿ ಗ್ರಾಮಕ್ಕೆ ಹೋಗಬೇಕೆಂದು ಮೈಂದರ್ಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಕುಳಿತಾಗ ಸೊಲ್ಲಾಪೂರದಿಂದ ಗಾಣಗಾಪೂರಕ್ಕೆ ಹೋಗುವ ಸರಕಾರಿ ಬಸ್ (ಮಹಾರಾಷ್ಟ್ರ ಬಸ್) ನಂ ಎಮ್.ಹೆಚ್-14-ಬಿಟಿ-3353 ನೇದ್ದು ಬಂದಿದ್ದರಿಂದ ನಾನು ಮತ್ತು ನನ್ನ ಗಂಡ ಗಾಣಗಾಪೂರದ ವರೆಗೆ ಹೋಗಬೇಕೆಂದು ಹತ್ತಿ ಕುಳಿತೇವು ಸದರಿ ಬಸ್ ದುಧನಿ ಮಾರ್ಗವಾಗಿ ಅಫಜಲಪೂರಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅಫಜಲಪೂರ ದಾಟಿದ ನಂತರ ನಿಂಬಾಳ ಪೇಟ್ರೋಲ್ ಪಂಪ ಹತ್ತಿರ ಸಮಯ 12:00 ಪಿ.ಎಮ್ ಸುಮಾರಿಗೆ ಸದರಿ ಬಸ್ ಚಾಲಕನು ಬಸ್ಸನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿತನಿಂದ ಚಲಾಯಿಸಿ ರೋಡಿಗೆ ಹೊಂದಿಕೊಂಡಿರುವ ಪೂಲಿನ ಗೋಡೆಗೆ (ಬ್ರೀಡ್ಜ) ಗೆ ಡಿಕ್ಕಿ ಪಡೆಸಿದ್ದರಿಂದ ಬಸ್ಸಿನಲ್ಲಿ ಇರುವ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಮತ್ತು ನನಗೆ ಬಲಕಿನ ಕಣ್ಣಿಗೆ ರಕ್ತಗಾಯವಾಗಿರುತ್ತದೆ. ಮತ್ತು ಎಡಕಿನ ಕಾಲಿಗೆ ಮೊಣಕಾಲ ಮೇಲೆ ರಕ್ತಗಾಯವಾಗಿದ್ದು ಹಾಗೂ ನನ್ನ ಹೊಟ್ಟೆಗೆ ಭಾರಿ ಪೆಟ್ಟಾಗಿರುತ್ತದೆ ನಾನು ಗರ್ಭೀಣಿ ಇದ್ದಿದ್ದರಿಂದ ಭಾರಿ ತ್ರಾಸ್ ಆಗಿರುತ್ತದೆ ನಂತರ ಅದೆ ಬಸ್ಸಿನಲ್ಲಿ ಅಫಜಲಪೂರ ಸರಕಾರಿ ಆಸ್ಪತ್ರೆ ಸೇರಿಸಿದ್ದು ನಂತರ ನನ್ನ ಗಂಡ 108 ವಾಹನದಿಂದ ಕಲಬುರಗಿಗೆ ತಂದು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ ಠಾಣೆ : ಶ್ರೀ ಮನ್ಸೂರಅಲಿಬೇಗ ತಂದೆ ಮೌಲಾನಾಬೇಗ ಸಾ:ನಾಲವಾರ ಸ್ಟೇಷನ ರವರದೊಂದು ಮೊಟರ ಸೈಕಲ ನಂಬರ ಕೆಎ-32 ಇಡಿ-5248 ನೇದ್ದು ಇದ್ದು ಅದನ್ನು ನನ್ನ ಸ್ವಂತಕ್ಕೆ ಉಪಯೋಗಿಸುತ್ತೆನೆ. ದಿನಾಂಕ 17/09/2019 ರಂದು ಬೆಳಗ್ಗೆ 09-00 ಗಂಟೆ ಸುಮಾರು ನನ್ನ ಮೊಟರ ಸೈಕಲ ನಂಬರ ಕೆಎ-32 ಇಡಿ-5248 ನೇದ್ದರ ಮೇಲೆ ವಾಡಿ ಪಟ್ಟಣಕ್ಕೆ ಬಂದು ನನ್ನ ಕೆಲಸವನ್ನು ಮುಗಿಸಿಕೊಂಡು ಮರಳಿ 12-00 ಪಿ.ಎಮ್ ಸುಮಾರು ನಾಲವಾರ ಸ್ಟೇಷನಗೆ ಹೋಗುವ ಸಲುವಾಗಿ ಕೊಂಚೂರ ಮುಖಾಂತರ ಹೊರಟು ಮುಂದೆ ಬಾಲಿ ಸಾಹುಕಾರ ಹೊಲದ ಹತ್ತಿರ ರೊಡಿಗೆ ಹೊರಟಾಗ ಎದರುಗಡೆಯಿಂದ ಒಬ್ಬನು ಮೊಟರ ಸೈಕಲ ಅತಿವೇಗ ಹಾಗೂ ಅಲಕ್ಷತನದಿಂದ ಅಡ್ಡಾ ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನನ್ನ ಮೊಟರ ಸೈಕಲ ಎಡಗಡೆ ಸೈಡಿಗೆ ಡಿಕ್ಕಿ ಪಡಿಸಿದನು. ಆಗ ನಾನು ಮೊಟರ ಸೈಕಲ ಸಮೇತ ಕೆಳಗಡೆ ಬಿದ್ದೆನು. ಆಗ ನನ್ನ ಹಿಂದೆ ಮೊಟರ ಸೈಕಲ ಮೇಲೆ ಹೊರಟ ಅಜೀಜಬೇಗ ತಂದೆ ಮಹೇಬುಬಬೇಗ ಎನ್ನುವನು ಬಂದು ನನಗೆ ಎಬ್ಬಿಸಿ ರೊಡ ಪಕ್ಕದಲ್ಲಿ ಕೂಡಿಸಿದನು. ನನ್ನ ಎಡಗಾಲ ಮೊಳಕಾಲ ಕೆಳಗಡೆ ಭಾರಿ ರಕ್ತಗಾಯವಾಗಿದ್ದು ಅಲ್ಲಲ್ಲಿ ಅಲ್ಪಗಾಯಗಳಾಗಿದ್ದವು. ನನಗೆ ಡಿಕ್ಕಿ ಹೊಡೆದ ಮೊಟರ ಸೈಕಲ ಚಾಲಕ ನನ್ನ ಹತ್ತಿರ ಬಂದನು ಅವನ ಹೆಸರು ವಿಚಾರಿಸಲಾಗಿ ಅಬ್ದುಲರಹಿಮಾನ ತಂದೆ ಉಸ್ಮಾನಸಾಬ ಮು:ಜೇವರ್ಗಿ ಅಂತಾ ಹೇಳಿದನು. ಆತನ ಮೊಟರ ಸೈಕಲ ನಂಬರ ನೋಡಲಾಗಿ ಕೆಎ-32 ಇಸಿ-1578 ಅಂತಾ ಬರೆದಿತ್ತು. ನಂತರ ಸದರಿ ವ್ಯಕ್ತಿ ಮತ್ತು ಅಜೀಜಬೇಗ ಕೂಡಿಕೊಂಡು ನನಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಭಾವಗಿ ಆಸ್ಪತ್ರೆಗೆ ಸೇರಿಕೆ  ಮಾಡಿದರು. ಅಬ್ದುಲರಹಿಮಾನ ಇತನು ನಿನಗೆ ಉಪಚಾರದ ಖರ್ಚು ನೋಡಿಕೊಳ್ಳುತ್ತೆನೆ ನಾನು ಊರಿಗೆ ಹೋಗಿ ಹಣ ತರುತ್ತೆನೆ ಅಂತಾ ಹೇಳಿ ಹೋದವನು. ಮರಳಿ ನನ್ನ ಹತ್ತಿರ ಬರಲಿಲ್ಲ. ನಾನು 03 ದಿವಸಗಳ ಕಾಲ ಭಾವಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆದು ನಂತರ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕುರಾಳ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಅಲ್ಲಿ ವೈದ್ಯರು ನನಗೆ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಸುಮಾರು 8-10 ದಿವಸಗಳ ಕಾಲ  ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ನನಗೆ ಖರ್ಚಿಗೆ ಹಣ ಕೊಡುತ್ತೆನೆ ಅಂತಾ ಅಬ್ದುಲರಹಿಮಾನ ಇತನು ಸುಳ್ಳು ಹೇಳಿ ಹೋದವನು ಮರಳಿ ಬಂದಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನರೋಣಾ ಠಾಣೆ : ಶ್ರೀ ದಯಾನಂದ ತಂದೆ ಶಿವಪುತ್ರಪ್ಪಾ ಸಂಗೋಳಗಿ ಸಾ:ಲಾಡಚಿಂಚೋಳಿ ರವರು ದಿನಾಂಕ 01-11-2019 ರಂದು ಆಳಂದ ಪಟ್ಟಣದ ಸಂತೆ ಇದ್ದ ಪ್ರಯುಕ್ತ ನಮ್ಮ ಗ್ರಾಮದ ಪೀಕಪ್ ವಾಹನ ಸಿದ್ದಣ್ಣಾ ಪೂಜಾರಿ ಇವರ ವಾಹನ ಸಂಖ್ಯೆ ಕೆಎ32-ಬಿ4788 ಇದರಲ್ಲಿ ತರಕಾರಿ ಸಾಮಾನು ತಗೆದುಕೊಂಡು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಹೋಗಿದ್ದು, ನಂತರ ಮರಳಿ ನಮ್ಮ ಗ್ರಾಮದ ಕಡೆಗೆ, ಬರುವಾಗ ಅಲ್ಲಿಯಿಂದ ಕಲಬುರಗಿ ಕಡೆಗೆ ಹೋಗಿ ಮತ್ತೆ ಕಲಬುರಗಿಯಿಂದ ಕಿರಾಣಿ ಸಾಮಾನು ತಗೆದುಕೊಂಡು ನಮ್ಮ ಗ್ರಾಮಕ್ಕೆ ಬರುತ್ತಿದ್ದಾಗ, ದಿನಾಂಕ:31/10/2019 ರಂದು ಕಡಗಂಚಿ ಗ್ರಾಮ ದಾಟಿ ನಂದಿ ತೋಟದ ಹತ್ತಿರ ಎದುರುಗಡೆಯಿಂದ ಒಂದು ದೊಡ್ಡಲಾರಿ ಅದರ ಚಾಲಕ ಅತೀವೇಗ ಮತ್ತು ನಿಸ್ಕಾಳಜಿತನಿಂದ ನಡೆಸಿಕೊಂಡು ಬಂದು ಡಿಕ್ಕಿಹೊಡೆದಿದ್ದು, ಅದರಿಂದ ನಮ್ಮ ಪೀಕಪ ವಾಹನ ಪಲ್ಟಿಯಾಗಿ ನನಗೆ ಬಲಗೈಯಿಗೆ ಮತ್ತು ತಲೆಗೆ ಎದೆಗೆ ಭಾರಿ ರಕ್ತಗಾಯವಾಗಿದ್ದು ನಮ್ಮ ವಾಹನ ಚಾಲಕನಾದ ಶರಣಬಸಪ್ಪಾ ತಂದೆ ಪ್ರಭುಲಿಂಗ್ ಬಿಲಗುಂದಿ ಇವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಆಗ ಅಲ್ಲಿಯೇ ಇದ್ದ ಹೊಲದಲ್ಲಿನ ನಮ್ಮ ಗ್ರಾಮದ ನಾಗರಾಜ್ ತಂದೆ ಶಾಂತಪ್ಪಾ ಗೌರ, ಮಾಳಿಂಗರಾಯ ತಂದೆ ಸಿದ್ದಪ್ಪಾ ಚಂದ್ರಶ್ಯಾ ತಂದೆ ವಿಠಲ್ ಅರಬ್, ಪ್ರೇಮಯ್ಯ ತಂದೆ ಶಂಕ್ರಯ್ಯ ಸ್ವಾಮಿ, ಶಂಕರ ತಂದೆ ಹಣಮಂತರಾವ ಪಾಟೀಲ್ ಇವರು ಬಂದು ನನಗೆ ಅಂಬ್ಯೂಲೆನ್ಸಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಉಪಚಾರಕ್ಕಾಗಿ ದಾಖಲಿಸಿದ್ದು, ನಂತರ ಹೆಚ್ಚಿನ ಉಪಚರಕ್ಕಾಗಿ, ಕಾಮರೆಡ್ಡಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ. ನಂತರ ನನಗೆ ನಮ್ಮ ಸಂಬಂಧಿಕರಿಂದ ಗೊತ್ತಾಗಿದ್ದು ಸದರಿ ಲಾರಿ ನಂಬರ್ ಎಂ.ಹೆಚ್20-ಡಿಇ7269 ಇದ್ದು ಅದರ ಚಾಲಕ ಶೇರಖಾನ ಅಂತಾ ತಿಳಿದು ಬಂದಿರುತ್ತದೆ. ಕಾರಣ ಸದರಿ ಲಾರಿಚಾಲಕನು ಅತೀವೇಗ ಮತ್ತು ನಿಷ್ಕಾಳಜಿತನಿಂದ ನಡೆಸಿಕೊಂಡು ಬಂದು ನಾನು ಕುಳಿತ ವಾಹನಕ್ಕೆ ಡಿಕ್ಕಿಹೊಡೆದು ನನಗೆ ಈ ರೀತಿಯಾಗಿ ತಿವ್ರ ಗಾಯಗೊಳಿಸಿದ ಬಗ್ಗೆ ಯೋಗ್ಯ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

31 October 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ರಾಮಪ್ಪ ಸಿಂಗೆ ಸಾ|| ಅಫಜಲಪೂರ ರವರು ಕೊನೆಯ ಮಗಳಾದ ಸುಮಿತ್ರಾ ಇವಳಿಗೆ  ಅಫಜಲಪೂರದ ಮನೋಹರ ತಂದೆ ಭಿಮಶ್ಯಾ ಗುಡ್ಡೋಡಗಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು ನಮ್ಮ ಗ್ರಾಮದಲ್ಲಿ ನಮ್ಮ ಸಂಬಂದಿಕರಲ್ಲಿ ನಿನ್ನೆ ಸರಿಹೋಗಿದ್ದು ಇಂದು ಅಂತಿಮ ಸಂಸ್ಕಾರ ಇದ್ದ ಪ್ರಯುಕ್ತ ಸದರಿ ಅಂತಿಮ ಸಂಸ್ಕಾರಕ್ಕೆ ಸುಮಿತ್ರಾಳು ಬರುತ್ತೇನೆ ಅಂತಾ ನಿನ್ನೆ 4-00 ಪಿಎಮ್ ಸುಮಾರಿಗೆ ಪೊನ ಮಾಡಿ ತಿಳಿಸಿರುತ್ತಾಳೆ ಹೀಗಿದ್ದು ಇಂದು ದಿನಾಂಕ 30-10-2019 ರಂಧು 8-00 ಎಎಮ್‍ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಗೊತ್ತಾಗಿದ್ದೆನೆಂದರೆ ಬಳುರ್ಗಿ ಸಿಮಾಂತರದ ಶ್ರೀ ಮಲ್ಲಯ್ಯಾ ಸ್ವಾಮಿರ ರವರ ಹೊಲದ ಬಂಡಿ ರಸ್ತೆಯಲ್ಲಿ ಒಬ್ಬ ಹೆಣ್ಣುಮಗಳನ್ನು ಬಿಸಾಕಿರುತ್ತಾರೆ ಅಂತಾ ಗೊತ್ತಾಗಿ ನಾನು ಮತ್ತು ನನ್ನ ಮಗನಾದ ಶ್ರೀ ಶರಣಪ್ಪ ತಂದೆ ರಾಮಪ್ಪ ಸಿಂಗೆ ಜೋತೆಗೆ ಹೋಗಿ ನೋಡಲಾಗಿ ನನ್ನ ಮಗಳಾದ ಸುಮಿತ್ರಾಳಿಗೆ ಯಾರೋ ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ಹೆಣ್ಣು ಮಕ್ಕಳು ಮುಖಕ್ಕೆ ಕಟ್ಟಿಕೊಳ್ಳುವ ಬಟ್ಟೆಯಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾರೆ ಸುಮಿತ್ರಾಳಿಗೆ ದಿನಾಂಕ: 29-10-2019 ರ 4-00  ಪಿಎಮ್ ದಿಂದ ದಿ|| 30-10-2019 ರ ಬೆಳಗಿನ  8-00 ಗಂಟೆಯ ಮದ್ಯದ ಅವಧಿಯಲ್ಲಿ  ಕೊಲೆ ಮಾಡಿರುತ್ತಾರೆ ನನ್ನ ಮಗಳನ್ನು ಕೊಲೆ ಮಾಡಿದವರನ್ನು  ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಅವಮ್ಮ ಗಂಡ ಸೋಮಣ್ಣಾ ಹಲಸಂಗಿ ಸಾ|| ಉಡಚಾಣ ರವರಿಗೆ  ಆಕಾಶ ಮತ್ತು ಸುರೇಶ ಅಂತ ಇಬ್ಬರು ಗಂಡು ಮಕ್ಕಳಿರುತ್ತಾರೆ ನನ್ನ ಗಂಡನಾದ ಸೋಮಣ್ಣ್ ತಂದೆ ಬೀರಪ್ಪಾ ಹಲಸಂಗಿ ಈತನು ಒಕ್ಕಲುತನ ಮಾಡಿಕೊಂಡಿರುತ್ತಾನೆ ನಮಗೆ ಉಡಚಾಣ ಸಿಮಾಂತರದಲ್ಲಿ ಹೊಲವಿದ್ದು ಸರ್ವೆ ನಂಬರ 41/2 ನೇದ್ದು ಇರುತ್ತದೆ. ಹಿಗಿದ್ದು ಇಂದು ದಿನಾಂಕ:30/10/2019 ರಂದು ಬೆಳಿಗ್ಗೆ ನಾನು ಮತ್ತು ನನ್ನ ಗಂಡ ಕೂಡಿಕೊಂಡು ಮನೆಯಿಂದ 6-00 ,ಎಮ್,ಸುಮಾರಿಗೆ ನಮ್ಮ ಹೊಲಕ್ಕೆ ಹೋಗಿರುತ್ತೇವೆ ನಾನು ಹೊಲದಲ್ಲಿ ಕಸ ತಗೆಯುತ್ತಿದ್ದಾಗ ನನ್ನಿಂದ ಸ್ವಲ್ಪ ದೂರದಲ್ಲಿ ನನ್ನ ಗಂಡನು ಎತ್ತುಗಳನ್ನು ನಮ್ಮ ಹೊಲದ ಬಾಂದಾರಿಗೆ ಮೇಯಿಸಲು ಬಿಟ್ಟು ಅಲ್ಲಿ ಗಿಡದ ಕೇಳಗೆ ಮಲಗಿಕೊಂಡಿದ್ದನು 6-30 ,ಎಮ್.ಸುಮಾರಿಗೆ ನನ್ನ ಗಂಡನು ಹಾವು ಕಡಿತೊ ಅಂತ ಚಿರಿದನು ಆಗ ನಾನು ಗಾಬರಿಯಿಂದ ಹೋಗಿ ನೋಡಲಾಗಿ ನನ್ನ ಗಂಡನಿಗೆ  ಹೆಡಕಿನ ಕೇಳಗೆ ಬಿನ್ನಿನ ಮೇಲೆ ಸಣ್ಣ ಜೋಳದ ಕಾಳಿನಷ್ಷ ಎರಡು ಚಿಕ್ಕೆ ಗುರುತುಗಳು ಕಂಡವು ನಂತರ ನಾನು ಪಕ್ಕದ ಹೊಲದಲ್ಲಿದ್ದ ನನ್ನ ಗಂಡನ ಅಣ್ಣತಮ್ಮಕಿಯವನಾದ ಶಂಕರಲಿಂಗ ತಂದೆ ಕೆಂಚಪ್ಪ ಹಲಸಂಗಿ ರವರಿಗೆ ಕೂಗಿ ಕರೆದು ಖಾಸಗಿ ವಾಹನ ತರಿಸಿ ನನ್ನ ಗಂಡನಿಗೆ ಮಾಶಾಳ ಆಸ್ಪತ್ರೇಗೆ ಕರೆದುಕೊಂಡು ಹೋಗುತ್ತೀರುವಾಗ ಮಾರ್ಗ ಮದ್ಯದಲ್ಲಿ ಕರಜಗಿ ಗ್ರಾಮದ ಹತ್ತಿರ 7-45 ,ಎಮ್,ಸುಮಾರಿಗೆ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಶ್ರೀ ವಿಜಯ ತಂದೆ ಮಾನಸಿಂಗ ರಾಠೋಡ ಮು:ಸಕ್ಕುನಾಯಕ ತಾಂಡಾ ನಾಲವಾರ ರವರು ಕಳೆದ 01 ವರ್ಷದ ಹಿಂದೆ ನಾನು ಬಾಂಬೆಯಲ್ಲಿ ಕೂಲಿಕೆಲಸಕ್ಕೆ ಹೋದಾಗ ನಾಲವಾರ ಸ್ಟೇಷನ ತಾಂಡಾದ ಕಿರಣ ಮತ್ತು ರಾಹುಲ ಸಹ ಬಾಂಬೆಯಲ್ಲಿ ಕೂಲಿಕೆಲಸ ಮಾಡುತ್ತಿದ್ದರು. ಒಂದು ದಿವಸ ಕ್ರೀಕೆಟ ಆಡುವ ಕಾಲಕ್ಕೆ ಕಿರಣ ಮತ್ತು ರಾಹುಲ ಇವರು ವಿನಾಕಾರಣ ನನ್ನೊಂದಿಗೆ ಜಗಳ ಮಾಡಿ ಹೊಡೆ ಬಡೆ ಮಾಡಿದ್ದು ಅಲ್ಲದೇ ಮುಂದೆ ನಿನಗೆ ಬಿಡುವದಿಲ್ಲ ಮಗನೇ ಅಂತಾ ಬೆದರಿಕೆ ಹಾಕಿದ್ದು ನಾನು ಅವರಿಗೆ ಅಂಜಿ ಸುಮ್ಮನಿದ್ದೆನು. ಈಗ ಸುಮಾರು 04 ತಿಂಗಳ ಹಿಂದೆ ಅವರಿಗೆ ಅಂಜಿಕೊಂಡು ಬಾಂಬೆಯನ್ನು ಬಿಟ್ಟು ನಮ್ಮ ತಾಂಡಾಕ್ಕೆ ಬಂದು ಕೂಲಿ ನಾಲಿ ಕೆಲಸ ಮಾಡಿಕೊಂಡು ಉಪ ಜೀವಿಸುತ್ತೆನೆ. ದೀಪಾವಳಿ ಹಬ್ಬಕ್ಕೆಂದು ಕಿರಣ ತಂದೆ ತುಳಸಿರಾಮ , ರಾಹುಲ ತಂದೆ ಗೋವಿಂದ ರವರು ಸಹ ತಮ್ಮ ತಾಂಡಾಕ್ಕೆ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 29/10/2019 ರಂದು ಮದ್ಯಾಹ್ನ 02-30 ಗಂಟೆ ಸುಮಾರು ನಾನು ನಮ್ಮ ಮನೆಯಲ್ಲಿದ್ದಾಗ ಕಿರಣ ತಂದೆ ತುಳಸಿರಾಮ ರಾಠೋಡ , ರಾಹುಲ ತಂದೆ ಗೋವಿಂದ ಜಾಧವ , ಗಂಗಿಬಾಯಿ ಗಂಡ ತುಳಸಿರಾಮ ರಾಠೋಡ ರವರು ನನ್ನ ಮನೆಯ ಹತ್ತಿರ ಬಂದು ಕಿರಣ ಇತನು ‘’ಏ ವಿಜ್ಯಾ ಸುಳೇ ಮಗನೇ ಮನೆಯ ಹೊರಗೆ ಬಾ’’ ಅಂತಾ ಕರೆದನು ಆಗ ನಾನು ಮನೆಯ ಹೊರಗಡೆ ಬಂದಾಗ ಕಿರಣ, ರಾಹುಲ, ಗಂಗಿಬಾಯಿ ರವರಿದ್ದು ಗಂಗಿಬಾಯಿ ಇವಳು ಹಾಂಟ್ಯಾನ ಮಗನೇ ನನ್ನ ಮಗ ಕಿರಣ ಇತನಿಗೆ ಬಾಂಬೆಯಲ್ಲಿ ವಿನಾಕಾರಣ ಜಗಳ ಮಾಡಿ ಹೊಡೆದಿರುವೆ ಅಂತಾ ನಿನ್ನ ಸೊಕ್ಕು ಹೆಚ್ಚಾಗಿದೆ ಮಗನೇ ಅಂತಾ ಬೈದು ಕಿರಣ ಇತನು ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಮೈ ಮೇಲೆ ಹಾಗೂ ಬೆನ್ನಿಗೆ ಹೊಡೆ ಬಡೆ ಮಾಡ ಹತ್ತಿದನು. ರಾಹುಲ ಇತನು ಅಲ್ಲೇ ಬಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯ ಹಿಂದೆ ಹೊಡೆದು ರಕ್ತಗಾಯಪಡಿಸಿದನು. ಆಗ ಮನೆಯಲ್ಲಿದ್ದ ನನ್ನ ಅಣ್ಣ ರಾಜು, ಪ್ರೇಮ ತಂದೆ ಚಂದು ರಾಠೋಡ,ಶ್ರೀಕಾಂತ ತಂದೆ ಚಂದು ರಾಠೋಡ ರವರು ಜಗಳ ಬಿಡಿಸಿರುತ್ತಾರೆ. ಆಗ ರಾಹುಲ ಮತ್ತು ಕಿರಣ ಇವರು ಮಗನೇ ಇವರು ಜಗಳ ಬಂದು ಬಿಡಿಸಿದಾಗ ಸುಮ್ಮನಾಗಿರುತ್ತೆವೆ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತಿದ್ದೆವು ಅಂತಾ ಜೀವದ ಬೆದರಿಕೆ ಹಾಕುತ್ತ ಹೊರಟು ಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.