POLICE BHAVAN KALABURAGI

POLICE BHAVAN KALABURAGI

19 October 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಮಹ್ಮದ ಹಾಸೀಮ ತಂದೆ ಅಲ್ಲಾಭಕ್ಷ ಮಣಿಯಾರ ಸಾ: ಜಿನಗಾರ ಗಲ್ಲಿ ವಿಜಯಪೂರ ರವರು ದಿನಾಂಕ:12/10/2019 ರಂದು ಅಫಜಲಪೂರ ಪಟ್ಟಣದಲ್ಲಿ ನಮ್ಮ ಸಂಭಂದಿಕರ ಮದುವೆ ಇದ್ದ ಕಾರಣ ನಾನು ಮತ್ತು ನಮ್ಮ ಸಂಭಂದಿಕನಾದ ಮಹಿಬೂಬ ತಂದೆ ಇಂದರಸಾಬ ಮುಲ್ಲಾ ಇಬ್ಬರೂ ನನ್ನ ಯಾಕ್ಟಿವಾ ಮೋಟಾರ ಸೈಕಲ ಮೇಲೆ ಮತ್ತು ನನ್ನ ತಮ್ಮನಾದ ಐಜಾಜ ಅಹ್ಮದ ಈತನು ಒಬ್ಬನೆ  ಮೋಟಾರ ಸೈಕಲ ನಂಬರ ಕೆ,-28 ಈಡಿ-0984 ನೇದ್ದನ್ನು ತಗೆದುಕೊಂಡು 12-15 ಪಿ,ಎಮ್,ಸುಮಾರಿಗೆ ವಿಜಯಪೂರ ಬಿಟ್ಟು ಅಫಜಲಪೂರಕ್ಕೆ ಬರಬೇಕೆಂದು ಸಿಂದಗಿ-ಮೋರಟಗಿ-ಘತ್ತರ್ಗಿ ಮಾರ್ಗವಾಗಿ ಬರುತ್ತಿರುವಾಗ ಮಾರ್ಗ ಮದ್ಯದಲ್ಲಿ 3-30 ಪಿ,ಎಮ್,ಸುಮಾರಿಗೆ ಇಂಚಗೇರಾ ಗ್ರಾಮದ  ಹತ್ತೀರ ನಾನು ಮತ್ತು ನನ್ನ ಮಾವ ನನ್ನ ಮೋಟಾರ ಸೈಕಲ ಮೇಲೆ ಹಾಗೂ ನನ್ನ ತಮ್ಮ ಮೋಟಾರ ಸೈಕಲ ನಂಬರ ಕೆ,-28 ಈಡಿ-0984 ನೇದ್ದರ ಮೇಲೆ ಅಫಜಲಪೂರ ಕಡೆ ಬರುತ್ತಿದ್ದಾಗ ಎದುರುಗಡೆಯಿಂದ ಹಿಂಚಗೇರಾ ಗ್ರಾಮದ ಕಡೆಯಿಂದ ಕ್ರೂಜರ ನಂಬರ ಕೆ,-32 ಡಿ-4438 ನೇದ್ದರ ಚಾಲಕನು ತನ್ನ ಕ್ರೂಜರನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ತಮ್ಮನ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತಡಿಸಿದನು ಆಗ ನನ್ನ ತಮ್ಮನು ಮೋಟಾರ ಸೈಕಲ ಮೇಲಿಂದ ಕೇಳಗಡೆ ಬಿದ್ದನು ಆಗ ನಾನು ಮತ್ತು ನನ್ನ ಮೋಟಾರ ಸೈಕಲ ಹಿಂದೆ ಕುಳಿತಿದ್ದ ನನ್ನ ಮಾವ ಮಹೀಬೂಬ ನಮ್ಮ ಮೋಟಾರ ಸೈಕಲ ನಿಲ್ಲಿಸಿ ಹತ್ತೀರ ಹೋಗಿ ನನ್ನ ತಮ್ಮನಿಗೆ ನೋಡಲಾಗಿ ಮುಖದ ತುಂಬ ಚಚ್ಚಿದಂತೆ ಗಾಯವಾಗಿರುತ್ತದೆ ಮತ್ತು ತಲೆಯ ಹಿಂಭಾಗಕ್ಕೆ ಭಾರಿ ಒಳಪೆಟ್ಟಾಗಿ ರಕ್ತ ಜಮಾ ಗಟ್ಟಿದಂತೆ ಆಗಿರುತ್ತದೆ ಮತ್ತು  ಅಲ್ಲಲ್ಲಿ ಗಾಯಗಳಾಗಿರುವದು ಕಂಡು ಬಂತು ಸದರಿ ಅಪಘಾತವಾಗಿರುವದನ್ನು ಕ್ರೂಜರ ಚಾಲಕನು ಕ್ರೂಜರ ನಿಲ್ಲಿಸಿ ನೋಡಿ ತನ್ನ ಕ್ರೂಜರ ತಗೆದುಕೊಂಡು ಸ್ಥಳದಿಂದ ಹೋಗಿರುತ್ತಾನೆ ನಂತರ ಯಾರೊ ಒಬ್ಬ ವ್ಯಕ್ತಿ ಬಂದು ನನ್ನ ತಮ್ಮನಿಗೆ ಆಗಿರುವ ಗಾಯವನ್ನು ನೋಡಿ  108 ವಾಹನಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿದನು ಆಗ 108 ವಾಹನ ಬಂದ ನಂತರ ನಾನು ಮತ್ತು ಮಹಿಬೂಬ ಮುಲ್ಲಾ ಇಬ್ಬರು ಕೂಡಿ ಕೊಂಡು ನನ್ನ ತಮ್ಮನಿಗೆ ಕಲಬುರಗಿಯ ಸನ್ ರೈಸ ಆಸ್ಪತ್ರೇಗೆ ಕರದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ ಅಪಘಾತವಾದಾಗಿನಿಂದ ಇಲ್ಲಿಯವರೆಗೆ ನನ್ನ ತಮ್ಮನು ಮಾತನಾಡುವ ಸ್ಥೀತಿಯಲ್ಲಿ ಇರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:16/10/2019 ರಂದು ಮೊಟಾರ್ ಸೈಕಲ್ ನಂಬರ್ ಕೆಎ35-ಎಲ್1056 ನೇದ್ದರ ಸವಾರನು ಆಳಂದ ಕಡೆಯಿಂದ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದು, ಮೊಟಾರ್ ಸೈಕಲ್ ನಂಬರ್ ಕೆಎ32ಇಕೆ3026 ನೇದ್ದರ ಸವಾರನು ಕಲಬುರಗಿ ಕಡೆಯಿಂದ ತನ್ನ ಮೊಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಪೆಟ್ರೋಲ್ ಪಂಪ ಕಡೆಗೆ ರಸ್ತೆ ಕ್ರಾಸ್ ಮಾಡುವಾಗ ಮೊಟಾರ್ ಸೈಕಲ್ ನಂಬರ್ ಕೆಎ35-ಎಲ್1056 ನೇದ್ದರ ಸವಾರನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿರುತ್ತದೆ. ಅಂತಾ ತಿಳಿಸಿರುತ್ತಾರೆ. ಎರಡು ಮೊಟಾರ್ ಸೈಕಲಗಳ ಮೆಲಿದ್ದ ವ್ಯಕ್ತಿಗಳ ಮತ್ತು ಸವಾರರ ಹೆಸರು ವಿಳಾಸ ತಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನನ್ನ ಮಗ ಅಂಬರೀಶ ಹಾಗೂ ಆತನ ಸಂಗಡ ಇದ್ದ ಜಯಾನಂದ ಇಬ್ಬರು ಅಪಘಾತದಲ್ಲಿ ಗಂಬೀರಗಾಯ ಹೊಂದಿ ಉಪಚಾರ ಪಡೆಯುತ್ತಿದ್ದು ಇಬ್ಬರು ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ   ಕಾರಣ ಮೊಟಾರ್ ಸೈಕಲ್ ನಂಬರ್ ಕೆಎ35-ಎಲ್1056 ನೇದ್ದರ ಸವಾರನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಸದರಿಯವನ ತಪ್ಪಿನಿಂದಲೆ ಅಪಘಾತವಾಗಿರುತ್ತದೆ ಅಂತಾ ಶ್ರೀ ಶಿವಕುಮಾರ ತಂದೆ ಅಮರಪ್ಪಾ ಶೇರಿ, ಸಾ:ನೆಲ್ಲೂರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಕೊಳ್ಳದಲ್ಲಿ ಬಿದ್ದು ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ನಾಗಯ್ಯ ವಡ್ಡರ್ ಸಾ; ಜೇವರ್ಗಿ (ಕೆ)  ರವರು ದಿನಾಂಕ 17.10.2019 ರಂದು ಜೇವರಗಿ (ಕೆ) ಹತ್ತಿರ ಹಳ್ಳದಲ್ಲಿ ನನ್ನ ಮಗಳು ಕುಮಾರಿ ಹಣಮಂತಿ ವಯಸ್ಸು 12  ವರ್ಷ, ರವರು ಬಟ್ಟೆ ತೊಳೆಯಲು ಹಳ್ಳಕ್ಕೆ ಹೋಗಿದ್ದು ಹಳ್ಳದಲ್ಲಿ ಬ್ರೀಜ್ ಕಾಮಗಾರಿ ಅರ್ಪೂಣಗೊಂಡದ್ದರಿಂದ ಇನ್ನೂ ಎರಡು ಕಾಲಂ ತೊಡಿ ಹಾಗೆ ಬಿಟ್ಟಿರುವುದರಿಂದ  ಸುಮಾರು 8 ಅಡಿ ಆಳ ನೀರು ತುಂಬಿರುತ್ತದೆ. ನನ್ನ ಮಗಳು ಕಾಲು ಜಾರಿ ನೀರಿನಲ್ಲಿ ಬಿದ್ದಿರುತ್ತಾಳೆ. ಕಾಮಗಾರಿಯನ್ನು ಶ್ರವಣಕುಮಾರ ಪಿ.ವಿ.ಆರ್ ಕಂಪನಿಯ ಎಮ್.ಡಿ. ರವರು ಗುತ್ತಿಗೆ ಹಿಡಿದಿದ್ದು, ಸುಮಾರು 2-3 ವರ್ಷಗಳಿಂದ ನಿಂತು ಹೋಗಿರುತ್ತದೆ. ಕಾಮಕಾರಿ ಪೂರೈಸುವಲ್ಲಿ ಗುತ್ತಿಗೆದಾರರು ನಿರ್ಲಕ್ಷ ವಹಿಸಿದರಿಂದ ಬ್ರೀಡ್ಜ ಕಾಮಗಾರಿಯ ತೆಗ್ಗು ತೊಡಿ ಹಾಗೆ ಬಿಟ್ಟಿದ್ದರಿಂದ ನೀರು ತುಂಬಿಕೊಂಡಿರುತ್ತದೆ. ಆದ್ದರಿಂದ ಬಟ್ಟೆ ತೊಳೆಯಲು ಹೋದ ನನ್ನ ಮಗಳು ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಕೊಳದಲ್ಲಿ ಬಿದ್ದು ಮುಳಗಿ  ಮೃತಪಟ್ಟಿರುತ್ತಾಳೆ. ಘಟನೆಯನ್ನು ಯಲ್ಲಪ್ಪ ತಂದೆ ತಿಮ್ಮಯ್ಯ ಚೌದರಿ, ಭೀಮಯ್ಯ ತಂದೆ ಯಂಕಯ್ಯ ವಡ್ಡರ್ ಇವರು ನೋಡಿ ನೀರಿನಲ್ಲಿ ಬಿದ್ದು ಸತ್ತಿರುವ ನನ್ನ ಮಗಳ ಹೆಣವನ್ನು ನೀರಿನಿಂದ ಹೊರೆಗೆ ತೆಗೆದಿರುತ್ತಾರೆ. ಕಾಮಗಾರಿ ಪೂರ್ಣಗೊಂಡರೆ ಘಟನೆ ಆಗುತ್ತಿರಲಿಲ್ಲ ಶ್ರವಣಕುಮಾರ ಗುತ್ತೆದಾರ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶಿವಪುತ್ರ ತಂದೆನಿಂಗಪ್ಪ ಆಡಿನ್ ಸಾ/ ಕೊಳಕೂರ ರವರ ಮಗಳಿಗೆ ಬಂಡೆಪ್ಪ ತಂದೆ ಬಸಣ್ಣ ಆಡಿನ್ ಸಾ/ ಕೋಳಕೂರ ಮಗಳು ಹೊಡೆದ ವಿಷಯದ ಬಗ್ಗೆ ಫಿರ್ಯಾದಿಯು ಆರೋಪಿತನು ಮನೆಗೆ ಹೋಗಿ ಕೇಳಿದ್ದಕ್ಕೆ ಆರೋಪಿತನು ಫಿರ್ಯಾದಿಯೊಂದಿಗೆ ಜಗಳ ತೆಗೆದು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಕಲ್ಲಿನ ಮೇಲೆ ನೂಕಿಸಿಕೊಟ್ಟು ಒಳಪೆಟ್ಟು ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳವು ಪ್ರಕರಣ :
ವಾಡಿ ಠಾಣೆ : ಶ್ರೀ ರಾಯಪ್ಪ ತಂದೆ ಹಯ್ಯಾಳಪ್ಪ ಸೈದಾಪುರ ಸಾ:ಬೇನಾಳ ತಾ:ಶಹಾಪುರ ಜಿ:ಯಾದಗೀರ ರವರು ಸುಮಾರು 170 ಸ್ವಂತ ಕುರಿಗಳಿದ್ದು ಅವುಗಳನ್ನು ಊರು ಊರು ಅಲೆದಾಡಿ ಮೇಯಿಸಿಕೊಂಡು ಬರುವ ಕೆಲಸ ಮಾಡಿಕೊಂಡಿದ್ದು ನನ್ನಂತೆ ನಮ್ಮ ಊರಿನ ಚಂದ್ರಪ್ಪ ತಂದೆ ಸಿದ್ದಪ್ಪ ಒಣಕುಣಿ ಇತನ 130 ಕುರಿಗಳು ಹಾಗೂ ಶರಣಬಸಪ್ಪ ತಂದೆ ಬಸಪ್ಪ ಹೆಳವರ ಇತನ 70 ಕುರಿಗಳಿದ್ದು ನಾವು 03 ಜನರು ಕೂಡಿಕೊಂಡು ಎಲ್ಲಾ ಕುರಿಗಳನ್ನು ಮೇಯಿಸುತ್ತ ಊರು ಊರು ಹೋಗುತ್ತೆವೆ. ಈಗ ಸುಮಾರು 01 ತಿಂಗಳಿನಿಂದ ಸೂಗುರ (ಎನ) ಗ್ರಾಮದ ಸುತ್ತ ಮುತ್ತಲಿನ ಹೊಲಗಳಲ್ಲಿ ನಮ್ಮ ಕುರಿಗಳನ್ನು ಮೇಯಿಸುತ್ತ ಇದ್ದು ರಾತ್ರಿ ವೇಳೆಯಲ್ಲಿ ಸೂಗುರ (ಎನ್) ಗ್ರಾಮದ ಹೀರಗಪ್ಪ ತಾತನವರ ತೋಟದ ಹತ್ತಿರ ಖುಲ್ಲಾ ಜಾಗೆಯಲ್ಲಿ ಸುತ್ತಲು ಕಟ್ಟಿಗೆ ಕಟ್ಟಿ ಬೇಲಿಯನ್ನು ಹಾಕಿ ಕುರಿಗಳನ್ನು ಕೂಡಿಹಾಕಿ ನಾವು ಅಲ್ಲೆ ಮಲಗುತ್ತೆವೆ.ಬೆಳಗ್ಗೆ ಮತ್ತೆ ಕುರಿಗಳನ್ನು ಹೊಲಗಳಲ್ಲಿ ಮೇಯಿಸುತ್ತ ಹೋಗುತ್ತೆವೆ ಅದೇ ಪ್ರಕಾರ ದಿನಾಂಕ 14/10/2019 ರಂದು ಸಾಯಂಕಾಲ 06-00 ಗಂಟೆಯವರೆಗೆ ಕುರಿಗಳನ್ನು ಮೇಯಿಸಿ ಮತ್ತೆ ನಾವು ಕುರಿಗಳನ್ನು ದಿನಾಲೂ ರಾತ್ರಿ ಕೂಡಿ ಹಾಕುತ್ತಿದ್ದ ಜಾಗದಲ್ಲಿ ತಂದು ಬಲಿ ಹಾಕಿ ಬಿಟ್ಟೆವು ರಾತ್ರಿ 09-00 ಗಂಟೆಗೆ ನಾವು ಅಲ್ಲೇ ಮಲಗಿಕೊಂಡೆವು. ನಂತರ ದಿನಾಂಕ 15/10/2019 ರಂದು ಬೆಳಗ್ಗೆ 07-00 ಗಂಟೆಗೆ ಎದ್ದು ನಮ್ಮ ನಮ್ಮ ಕುರಿಗಳನ್ನು ಎಣಿಸಿಕೊಂಡಾಗ ನನ್ನ ಕುರಿಗಳಲ್ಲಿ 09 ಕುರಿಗಳು ಇರಲಿಲ್ಲ. ಮತ್ತೆ ಮತ್ತೆ ಎಣಿಸಿ ನೋಡಲಾಗಿ 09 ಕುರಿಗಳು ಕಡಿಮೆ ಇದ್ದಿದ್ದು ಕಂಡು ಬಂದಿರುತ್ತದೆ. ಸದರಿ ಕುರಿಗಳು ದಿನಾಂಕ 14/10/2019 ರಂದು  ರಾತ್ರಿ 10-00 ಗಂಟೆಯಿಂದ ದಿನಾಂಕ 15/10/2019 ರಂದು ಬೆಳಗ್ಗಿನ 06-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು 09 ಕುರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಸದರಿ ಕುರಿಗಳು ಅಂದಾಜು 02 ರಿಂದ 03 ವರ್ಷದವುಗಳು ಇದ್ದು ಒಂದಕ್ಕೆ ಅಂದಾಜು 05 ಸಾವಿರ ರೂಪಾಯಿ ಕಿಮ್ಮತ್ತು ಆಗುತ್ತಿದ್ದು ಒಟ್ಟು 45 ಸಾವಿರ ರೂಪಾಯಿ ಬೆಲೆ ಬಾಳುವ ಕುರಿಗಳು ಇರುತ್ತವೆ.ಕುರಿಗಳು ಕಳುವಾದ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 October 2019

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ: 15.10.2019 ರಂದು ರಾತ್ರಿ ಗೆಕ್ರೂಜರ್ ಜೀಪ ನಂಬರ ಕೆಎ/33-ಎಮ್ –0672 ನೇದ್ದರ ಚಾಲಕನು ತನ್ನ ವಾಹನವನ್ನು ಯಾದಗಿರಿ ಕಡೆಯಿಂದ ಕೊಡ್ಲಾ ಕಡೆಗೆ ಬರುವಾಗ ಅತಿವೇಗ ಹಾಗು ನಿಷ್ಕಾಳಜೀತನಿಂದ ನಡೆಯಿಸಿಕೊಂಡು ಬಂದು ಕೊಡ್ಲಾ ಕಡೆಯಿಂದ ನಾಮವಾರ ಗ್ರಾಮಕ್ಕೆ ಹೊಗುತ್ತಿದ್ದ ನಮ್ಮ ತಮ್ಮನಾದ ಈರಣ್ಣಾ ಇತನ ಮೊ/ಸೈಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ನಮ್ಮ ತಮ್ಮನಾದ ಈರಣ್ಣಾ ಈತನು ಭಾರಿಗಾಯಹೊಂದಿ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಇಂದು ರಾತ್ರಿ 07-30ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ನಮ್ಮ ತಮ್ಮನ ಮೊ/ಸೈ ಮೇಲೆ ಹಿಂದುಗಡೆ ಕುಳಿತು ಮಲ್ಲಪ್ಪ ಯಾದಗಿರಿ ಈತನು ಭಾರಿಗಾಯ ಹೊಂದಿದ್ದು ಸದರಿ ಅಪಘಾತ ಪಡಿಸಿದ ಕ್ರೂಜರ ಜೀಪ ಚಾಲಕನು ಅಪಘಾತ ಪಡಿಸಿ ತನ್ನ ಜೀಪನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದು, ಸದರಿ ಜೀಪ ಚಾಲಕನ ವಿರುದ್ದ ಕಾನೂನು ಕ್ರಮ  ಜರುಗಿಸಬೇಕು ಅಂತಾ ಶ್ರೀ ಲಾಲಪ್ಪ ತಂದೆ ಸೋಮರಾಯ ಇಟಕಲ್ ಸಾ|| ನಾಮವಾರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 13-10-19 ರಂದು ಸಾಯಂಕಾಲ ಸೇಡಂನ ನಾಗರಕಟ್ಟಾ ಹತ್ತಿರ ಟ್ರಾಕ್ಟರ ನಂ ಕೆಎ.32.ಟಿ.ಬಿ 2337-2338 ನ್ನೆದ್ದರ ಚಾಲಕನಾದ ಭೀಮಣ್ಣಾ ಹುಡಾ(ಬಿ) ಇತನು ತನ್ನ ಟ್ರಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ  ನಡೆಸಿಕೊಂಡು ಬಂದು ಸೇಡಂ ಬಜಾರದಲ್ಲಿ ಸಂತೆ ಮಾಡುತಿದ್ದ ಶ್ರೀಮತಿ ಕಲ್ಪನಾ ಗಂಡ ಯಲ್ಲಾಪ್ಪಾ ಸಂಗಾವಿ ಸಾ ಸಟಪಟನಹಳ್ಳಿ ತಾ : ಸೇಡಂ ರವರಿಗೆ ಡಿಕ್ಕಿ ಪಡಿಸಿ ಅಫಘಾತ ಮಾಡಿ ಭಾರಿ ಗುಪ್ತಗಾಯ ಪಡಿಸಿ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರನ್ನು ಅಲ್ಲೆ ಸ್ಥಳದಲ್ಲಿ ಬಿಟ್ಟು ಓಡಿ ಹೊಗಿದ್ದು ಇರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರವೆಸಗಿದ ಪ್ರಕರಣ :
ಯಡ್ರಾಮಿ ಠಾಣೆ :  ಮೌನೇಶ ತಂದೆ ಮರಳಪ್ಪ ಬಿಜೇವಾಡಿ ಇವನ ಮನೆಯು ನಮ್ಮ ಮನೆಯ ಮುಂದೆ ಇದ್ದು, ಮೌನೇಶ ಇವನು ಈಗ ಕೆಲವು ತಿಂಗಳ ಹಿಂದೆ ನನ್ನ ಮಗಳು ಕುಮಾರಿ ಇವಳಿಗೆ ಆಗಾಗ ನೋಡುವುದು ಮತ್ತು ಮಾತನಾಡಿಸುವುದು ಮಾಡುತ್ತಿದ್ದರಿಂದ ನಾನು ಮೌನೆಶನಿಗೆ ಇನ್ನೊಮ್ಮೆ ನನ್ನ ಮಗಳೊಂದಿಗೆ ಮಾತನಾಡಬೇಡ ಅಂತಾ ತಿಳವಳಿಕೆ ಹೇಳಿರುತ್ತೇನೆ, ದಿನಾಂಕ 12-10-2019 ರಂದು ರಾತ್ರಿ 9;00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ನನ್ನ ಮಕ್ಕಳು ರವರು ಕೂಡಿ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡಿದ್ದೇವು, ನಂತರ ರಾತ್ರಿ 12;00 ಗಂಟೆ ಸುಮಾರಿಗೆ ನಾನು ಕಾಲಮಡಿಯಲು ಎದ್ದು ನಂತರ ಮನೆಯಲ್ಲಿ ಹೋಗಿ ಮಲಗಿಕೋಡಿರುತ್ತೇನೆ, ದಿನಾಂಕ 13-10-2019 ರಂದು ಬೆಳಿಗ್ಗೆ 05;00 ಗಂಟೆಗೆ ನಾವು ಎದ್ದು ನೋಡಿದಾಗ ನನ್ನ ಕಿರಿ ಮಗಳು ಮನೆಯಲ್ಲಿ ಇರಲಿಲ್ಲಾ, ನಂತರ ನಾವು ಉರಲ್ಲಿ ಎಲ್ಲಾಕಡೆ ಹುಡಕಾಡಿದರು ನಮ್ಮ ಮಗಳು ಸಿಕ್ಕಿರುವುದಿಲ್ಲಾನನ್ನ ಮಗಳು ನಮ್ಮೂರ ಮೌನೇಶ ತಂದೆ ಮರಳಪ್ಪ ಬಿಜೇವಾಡಿ ಇವನು ಯಾವುದೊ ಆಸೇ ತೋರಿಸಿ ಇಂದು ದಿನಾಂಕ 13-10-2019 ರಂದು 12;00 .ಎಂ ದಿಂದ ಬೆಳಗಿನಜಾವವ 05;00 .ಎಂ ಮದ್ಯದಲ್ಲಿ ನಮ್ಮ ಮನೆಯಿಂದ ಅಪರಹರಿಸಿಕೊಂಡು ಹೋಗಿರಬಹುದು, ಆದ್ದರಿಂದ ಮೌನೇಶನ ವಿರುದ್ದ ಕಾನೂನುರ ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಆರೋಪಿ ಮತ್ತು ಅಪಹರಣೊಕ್ಕಳಗಾದವಳ ಪತ್ತೆ ಕುರಿತು ರಾಜೇಂದ್ರಪ್ರಸಾಸ ಎ.ಎಸ್.ಐ  ಮತ್ತು ಖಾಸಿಂಬಿ ಮಪಿಸಿ 1197 ರವರನ್ನು ನೇಮಿಸಿ ಕಳುಹಿಸಿಕೊಟ್ಟೆನು. ಸದರಿಯವರು ದಿನಾಂಕ 15-10-2019 ರಂದು ಬೆಳಿಗ್ಗೆ 10;00 ಸುಮಾರಿಗೆ ಆರೊಪಿ ಮೌನೇಶ ಬಿಜೇವಾಡಿ ಮತ್ತು ಅಪಹರಣಕ್ಕೊಳಗಾದ ಕುಮಾರಿಯನ್ನು ನನ್ನ ಮುಂದೆ ಹಾಜರಪಡಿಸಿರುತ್ತಾರೆ, ನಂತರ ಜೇವರ್ಗಿ ಠಾಣೆಯಿಂದ ಶ್ರೀಮತಿ ನಿರ್ಮಲಾ ಹೆಚ್.ಸಿ 443 ರವರನ್ನು ಠಾಣೆಗೆ ಕರೆಯಿಸಿ ಸಂತ್ರಸ್ತೆಯನ್ನು ರವರಿಗೆ ಅವರ ತಾಯಿಯ ಸಮಕ್ಷಮದಲ್ಲಿ ಅವರ ಕೋರಿಕೆಯಂತೆ ವಿಚಾರಿಸಿದಾಗ ಹೇಳಿಕೆ ನೀಡಿದ್ದೇನೆಂದರೆ, ನಮ್ಮ ತಂದೆ ತಾಯಿಗೆ ನಾವು ಮೂರು ಜನ ಹೆಣ್ಣು ಮಕ್ಕಳಿರುತ್ತೇವೆ.  ನಾನು ನಮ್ಮೂರ ಸರಕಾರಿ ಪ್ರೌಡ ಶಾಲೆಯಲ್ಲಿ 8ನೇ ತರಗತಿವರೆಗೆ ಕಲಿತಿದ್ದು ಈಗ 2 ವರ್ಷದಿಂದ ಶಾಲೆ ಬಿಟ್ಟು ಮನೆಯಲ್ಲಿಯೇ ಇರುತ್ತೇನೆ. ನಮ್ಮ ಮನೆಯ ಸಮೀಪವೇ ನಮ್ಮೂರ ಮೌನೇಶ ತಂದೆ ಮರಳಪ್ಪ ಬಿಜೇವಾಡಿ ಇವರ ಮನೆ ಇರುತ್ತದೆ.  ಈಗ  ಒಂದು ವರ್ಷದಿಂದ ಮೌನೇಶ ಇತನು ನಮ್ಮ ಮನೆಯ ಕಡೆಗೆ ಬಂದು ನನ್ನೊಂದಿಗೆ ಸಲುಗೆಯಿಂದ ಮಾತನಾಡುತ್ತಾ ನನಗೆ ಪರಿಚಯವಾಗಿದ್ದನು. ಅಲ್ಲದೆ ಅವನು ನನಗೆ ನಾನು ನಿನಗೆ ತುಂಬಾ ಪ್ರೀತಿ ಮಾಡುತ್ತಿದ್ದೇನೆ ಅಂತಾ ಅಂದಾಗ ನಾನು ಅವನಿಗೆ ಹಾಗೇಲ್ಲ ಮಾಡಬೇಡ ಅಂತಾ ಅಂದಿದ್ದೇನು. ಆದರು ಅವನು ಕೇಳದೆ ನನಗೆ 2-3 ಸಲ ಪ್ರಫೋಜ ಮಾಡಿದ್ದರಿಂದ ನಾನು ಆಯಿತು ಅಂತಾ ಒಪ್ಪಿಕೊಂಡಿದ್ದೇನು. ಇದಾದ ಮೇಲೆ ಒಂದು ದಿವಸ ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮೌನೇಶ ಇತನು ನಮ್ಮ ಮನೆಯ ಕಡೆಗೆ ಬಂದು ನನಗೆ ನಮ್ಮ ಮನೆಯ ಹಿಂದೆ ಕರೆದು ಇಬ್ಬರು ಮಲಗೋಣ ಬಾ ಅಂತಾ ಅಂದನು  ನಾನು ಅವನಿಗೆ ಬೇಡ ಬೇಡ ಅಂದರು ಕೂಡಾ ಒತ್ತಾಯದಿಂದ ಸಂಭೋಗ ಮಾಡಿರುತ್ತಾನೆ. ಇದಾದ ಮೇಲೆ ಕೂಡಾ ಅವನು ನನಗೆ ಯಾರು ಇಲ್ಲದ ಸಮಯದಲ್ಲಿ 2-3 ಸಲ ನಮ್ಮ ಮನೆಯ ಹಿಂದೆಯೇ ಕರೆದು ಸಂಭೋಗ ಮಾಡಿರುತ್ತಾನೆ. ಮೌನೇಶ ಇತನು ನನ್ನೊಂದಿಗೆ ಸಲುಗೆಯಿಂದ ಮಾತನಾಡುವ ವಿಷಯ ನಮ್ಮ ಮನೆಯಲ್ಲಿ ಗೊತ್ತಾದಾಗ ನನ್ನ ತಂದೆ ತಾಯಿ ಅವನಿಗೆ ಬುದ್ದಿ ಮಾತು ಹೇಳಿದ್ದರು. ಆದರೂ ಕೂಡಾ ದಿ: 12-10-19 ರಂದು ಮುಂಜಾನೆ ನಾನು ಮತ್ತು ನನ್ನ ತಾಯಿ ಹಾಗೂ ಅಕ್ಕಂದಿರರು ಕೂಡಿ ಕೆಲಸಕ್ಕೆ ಹೋಗಿ ಸಂಜೆ ವಾಪಾಸ ಮನೆಗೆ ಬಂದಾಗ ಅಂದು ಸಂಜೆ ಹೊತ್ತಿನಲ್ಲಿ ಮೌನೇಶನು ನನಗೆ ನಮ್ಮ ಮನೆಯ ಹಿಂದೆ ಸಿಕ್ಕಾಗ ನಾನು ನಿನಗೆ ಕರಾಡಕ್ಕೆ ಕರೆದುಕೊಂಡು ಹೋಗುತ್ತೇನೆ. ರಾತ್ರಿ ಮನೆಯಿಂದ ಎದ್ದು ರೋಡಿನ ಕಡೆಗೆ ಬಾ ಅಂತಾ ಹೇಳಿ ಹೋಗಿದ್ದನು. ಅದೆ ಪ್ರಕಾರ ಅಂದು ರಾತ್ರಿ ಮನೆಯಲ್ಲಿ ನಾನು ಮತ್ತು ನನ್ನ ತಂದೆ ತಾಯಿ ಅಕ್ಕಂದಿರರು ಎಲ್ಲರೂ ಕೂಡಿ ಊಟ ಮಾಡಿ ಮಲಗಿಕೊಂಡಿದ್ದು ಮನೆಯಲ್ಲಿ ಎಲ್ಲರೂ ಮಲಗಿಕೊಂಡಾಗ ರಾತ್ರಿ 11-30 ಗಂಟೆ ಸುಮಾರಿಗೆ ನಾನು ಎದ್ದು ರೋಡಿನ ಕಡೆಗೆ ಹೋದಾಗ ಅಲ್ಲಿ ಮೌನೇಶ ನಿಂತಿದ್ದನು. ನಂತರ ಅವನು ನನಗೆ ಅಲ್ಲಿಂದ ನಡೆಸಿಕೊಂಡು ವಡಗೇರಿ ಕ್ರಾಸ ತನಕ ಕರೆದುಕೊಂಡು ಹೋಗಿದ್ದು ನಾವಿಬ್ಬರೂ ಸ್ವಲ್ಪ ಹೊತ್ತು ಅಲ್ಲಿ ನಿಂತಾಗ ಆ ಕಡೆ ಒಂದು ಟಂ ಟಂ ಬಂದಿದ್ದು, ಆ ಮೇಲೆ ಇಬ್ಬರೂ ಅದರಲ್ಲಿ ಮಲ್ಲಾ ಕ್ರಾಸ ತನಕ ಹೋದೆವು. ರಾತ್ರಿ ನಾವು ಮಲ್ಲಾ ಕ್ರಾಸ ಹತ್ತಿರ ನಿಂತಾಗ ಶಹಾಪೂರ ಕಡೆಯಿಂದ ಒಂದು ಬಸ್ಸ ಬಂದಿದ್ದು ಅದರಲ್ಲಿ ಇಬ್ಬರೂ ಕೂಡಿ ಸಿಂದಗಿಗೆ ಹೋಗಿದ್ದು ರಾತ್ರಿ ಅವನು ಸಿಂದಗಿಯಲ್ಲಿ ರೋಡಿನ ಪಕ್ಕದಲ್ಲಿರುವ ಒಂದು ಲಾಡ್ಜ ಬಾಡಿಗೆಯಿಂದ ಹಿಡಿದು ಇಬ್ಬರೂ ರಾತ್ರಿ ಲಾಡ್ಜನಲ್ಲಿ ಮಲಗಿಕೊಂಡಾಗ ಅಲ್ಲಿ ಕೂಡಾ ಒತ್ತಾಯ ಮಾಡಿ ಸಂಭೋಗ ಮಾಡಿರುತ್ತಾನೆ. ಮರುದಿನ ದಿ: 13-10-19 ರಂದು ಮುಂಜಾನೆ ಅವನು ನನಗೆ ಸಿಂದಗಿಯಿಂದ ಬಸ್ಸಿನಲ್ಲಿ ಬಿಜಾಪೂರ ತನಕ ಕರೆದುಕೊಂಡು ಹೋಗಿ ಅಲ್ಲಿಂದ ಬಸ್ಸಿನಲ್ಲಿ ಮಹಾರಾಷ್ಟ್ರದ ಕರಾಡ ಕಡೆ ಇರುವ ಚಿಪಲೂನ ಹತ್ತಿರ ಒಂದು ಊರಿನಲ್ಲಿರುವ ಅವರ ಅಣ್ಣನ ಮನೆಗೆ ಕರೆದುಕೊಂಡು ಹೋಗಿದ್ದು ಅಂದು ರಾತ್ರಿ ನಾವಿಬ್ಬರೂ ಅವರ ಅಣ್ಣನ ಮನೆಯಲ್ಲಿ ಮಲಗಿಕೊಂಡಾಗ ಅಲ್ಲಿ ಕೂಡಾ ನನಗೆ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಅಂತಾ ಹೇಳಿಕೆ ನಿಡಿದ್ದರ ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ವಿಜಯಕುಮಾರ ತಂದೆ ವೀರಶೇಟ್ಟೆಪ್ಪಾ ಸಾ : ವಿದ್ಯಾನಗರ ಸೇಡಂ ರವರು ದಿನಾಂಕ; 15-10-2019 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಎಂದಿನಂತೆ ಮನೆಯಿಂದ ತನ್ನ ಕಿರಾಣಿ ಅಂಗಡಿಗೆ ಬಂದು ನನ್ನ ಕಿರಾಣಿ ಅಂಗಡಿಯ ಸೇಟರ ಕಿಲಿ ತೆರೆದು ನಾನು ಮನೆಯಿಂದ ಬರುವಾಗ ನನ್ನ ಜೊತೆಯಲ್ಲಿ ತಂದಿದ್ದ 6,00000/- ರೂ ಇದ್ದ ಕೈ ಚಿಲವನ್ನು ನನ್ನ ಕಿರಾಣಿ ಅಂಗಡಿ ಕೌಂಟರ ಡ್ರಾದ ಪಕ್ಕದಲ್ಲಿರುವ ಖುಲ್ಲಾ ಜಾಗದಲ್ಲಿ ಇಟ್ಟು ಅಂಗಡಿಯ  ಹೊರಗಡೆ ಲಾರಿಯಲ್ಲಿ ಬಂದಿದ್ದ ಅಕ್ಕಿಯ ಚಿಲಗಳನ್ನು ಹಮಾಲರ ಮುಖಾಂತರ ತನ್ನ ಕಿರಾಣಿ ಅಂಗಡಿಯಲ್ಲಿ ಒಳಗಡೆ ಹಾಕಿಸುತಿದ್ದಾಗ ಒಬ್ಬ ಹುಡುಗನು ಕೈಯಲ್ಲಿ ನೊಟು ಹಿಡಿದುಕೊಂಡು ಕೌಂಟರ ಹತ್ತಿರ ಬಂದನು ನಾನು ಆತನಿಗೆ ಎನು ಬೆಕು ಅಂತಾ ಕೇಳಿದ್ದು ಆಗಾ ಅತನು ನನಗೆ ಎನು ಮಾತಾಡದೆ ಹಿಂದಕ್ಕೆ ಹೊದನು ನಂತರ ನಾನು ನನ್ನ ಅಂಗಡಿಯೊಳಗೆ ಹೊಗಿ ಅಕ್ಕಿಯ ಚಿಲಗಳನ್ನು ಹಾಕಿಸಿ ಹೊರಗಡೆ ಬಂದು ಬೆಳಗ್ಗೆ 9-45 ಗಂಟೆ ಸುಮಾರಿಗೆ ನನ್ನ ಕೌಂಟರದಲ್ಲಿ ಇಟ್ಟಿದ್ದ ಹಣದ ಕೈ ಚಿಲವನ್ನು ತೆಗೆದು ಒಳಗಡೆ ಲಾಕರದಲ್ಲಿ ಇಡಬೆಕು ಅಂತಾ ಕೌಂಟರದಲ್ಲಿ ಕೈ ಹಾಕಿ ಹಣದ ಚಿಲ ತೆಗೆದುಕೊಳ್ಳಲು ಹೊದಾಗ ನಾನು ಕೌಂಟರದಲ್ಲಿ ಇಟ್ಟಿದ್ದ ಹಣದ ಕೈ ಚಿಲ ಇರಲಿಲ್ಲಾ ಸದರಿ 6,00,000/- (ಆರು ಲಕ್ಷ ರೂ) ಇದ್ದ ಹಣದ ಕೈ ಚಿಲವನ್ನು ಕಳುವಾಗಿದ್ದು.ಇರುತ್ತದೆ. ಅಂತಾ ಸಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.