POLICE BHAVAN KALABURAGI

POLICE BHAVAN KALABURAGI

30 May 2019

KALABURAGI DISTRICT REPORTED CRIMES

ಕಳವು ಪ್ರಕರಣಗಳು  :
ಯಡ್ರಾಮಿ ಠಾಣೆ : ಶ್ರೀ ಹುಸೇನಬಾಷಾ ತಂದೆ ಸಾಹೇಬಪಟೇಲ ಮಂದೇವಾಲ ಸಾ:ಮಳ್ಳಿ ತಾ:ಜೇವರಗಿ ರವರು ದಿನಾಂಕ 29-05-2019 ರಂದು ಬೆಳಗಿನ ಜಾವ 1:00 ಗಂಟೆಯಿಂದ 4;00 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಮನೆಯೊಳಗೆ ಪ್ರವೇಶ ಮಾಡಿ   ಆಲಮಾರಿಯಲ್ಲಿಯ 2,04,000/- ಕಿಮ್ಮತ್ತಿನ ಬಂಗಾರದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಬಂಗಾರದ ಆಭರಣಗಳನ್ನು ಪತ್ತೆಮಾಡಿ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಕೈಗೋಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಅಶೋಕ ನಗರ ಠಾಣೆ : ದಿನಾಂಕ:29.05.219  ರಂದು ಬೆಳಿಗ್ಗೆ ಶ್ರೀ  ಲಕ್ಷ್ಮೀಕಾಂತ ತಂದೆ ರೂಪಕುಮಾರ ಕಾಂಬಳೆ ಸಾ|| ಎಂ.ಎಸ್.ಕೆ. ಮಿಲ್ ಕ್ವಾಟರ್ಸ ಸಿದ್ದಾರ್ಥ ನಗರ ಕಲಬುರಗಿ ರವರು ತಮ್ಮ ಬಡಾವಣೆಗೆ ನೀರು ಬಿಡಬಹುದು ಅಂತ ಮನೆಯಲ್ಲಿದ್ದ ನೀರೆತ್ತುವ ಸಣ್ಣ ಮಷಿನ್ ತೆಗಹೆದುಕೊಂಡು ನಳ ಬಿಟ್ಟ ನಂತರ ಅದನ್ನು ಜೋಡಿಸಬೇಕು ಅಂತ ಅಂಗಳದಲ್ಲಿ ಇಟ್ಟು ಮನೆ ಒಳಗೆ ಹೋಗಿರುತ್ತೇನೆ. ಸ್ವಲ್ಪ ಸಮಯದ ನಂತರ ಸುಮಾರು 06:45 ಗಂಟೆಗೆ  ನಾನು ಹೊರಗಡೆ ಬಂದು ನೋಡಲಾಗಿ ನಾನು ನಮ್ಮ ಮನೆಯ ಅಂಗಳದಲ್ಲಿ ಇಟ್ಟಿದ್ದ ಸಣ್ಣ ನೀರೆತ್ತುವ ಮಷಿನ್ ಅ.ಕಿ. 1500/- ಇದ್ದಿರುವುದಿಲ್ಲ, ನಾನು ಅನುಮಾನಗೊಂಡು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಮನೆಯಲ್ಲಿ ನನ್ನ ಹೆಂಡತಿ ಮತ್ತು ತಾಯಿಗೆ ಕೇಳಲು ಅವರಿಗೂ ಸಹ ಅದರ ಬಗ್ಗೆ ಗೊತ್ತಿರುವುದಿಲ್ಲ. ನಂತರ ನಾನು ಹೊರಗಡೆ ಬಂದು ಬಡಾವಣೆಯಲ್ಲಿ ಹುಡುಕಾಡುತ್ತಿರುವಾಗ ಬೆಳಿಗ್ಗೆ ಕಸದ ತೊಟ್ಟೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ ಹಾಗೂ ಇತರೆ ಪ್ಲಾಸ್ಟಿಕ್ ಹಾಗೂ ಕಬ್ಬಿಣದ ಸಾಮಾನುಗಳನ್ನು ಆರಿಸುತ್ತಾ 3 ಜರನ ಹೆಣ್ಣು ಮಕ್ಕಳು ಸಂಶಯಸ್ಪದ ರೀತಿಯಲ್ಲಿ ಕಸ ಆರಿಸುವ ನೆಪದಲ್ಲಿ ಅವರಿವರ ಮನೆಯ ಅಂಗಳಗಳಲ್ಲಿ ನೋಡುತ್ತಿದ್ದರು, ನಾನು ಅವರ ಹತ್ತಿರ ಹೋಗುತ್ತಿದ್ದಂತೆ ನನಗೆ ನೋಡಿ ಓಡಲು ಪ್ರಾರಂಭಿಸಿದರು ಆಗ ನಾನು ಕಳ್ಳರು ಕಳ್ಳರು ಅಂತ ಚಿರುತ್ತಿದ್ದಾಗ ನಮ್ಮ ಪರಿಚಯದವರಾದ  ಅತೀಶ ಗಾಯಕವಾಡ ಇಬ್ಬರು ಓಡಿ ಅವರಿಗೆ ಬೆನ್ನತ್ತಿ ಹಿಡಿದು ಅವರ ಹತ್ತಿರ ಇದ್ದ ಚೀಲವನ್ನು ಪರಿಶೀಲಿಸಿ ನೋಡಲು ನನ್ನ ಮನೆಯ ಅಂಗಳದಿಂದ ಕಳ್ಳತನ ಮಾಡಿರುವ  ಸಣ್ಣ ನೀರೆತ್ತುವ ಮಷಿನ್ ಅವರ ಹತ್ತಿರ ಇರುತ್ತದೆ. ನಾನು ನಮ್ಮ ಮಷಿನ ಏಕೆ ಕಳ್ಳತನ ಮಾಡಿಕೊಂಡು ಹೋಗುತ್ತಿರುವಿರಿ ನಿಮ್ಮ ಹೆಸರು ಏನು ಅಂತ ವಿಚಾರಿಸಲು ಅವರು ಇದು ನಮ್ಮ ಮಷೀನ್ ಇರುತ್ತದೆ ಅಂತ ನನ್ನೊಂದಿಗೆ ವಾದವಿವಾದ ಮಾಡಿದಾಗ ನಾನು ಮತ್ತು ನಮ್ಮ ಪರಿಚಯದವರಾದ ಅತೀಶ ಗಾಯಕವಾಡ ಇಬ್ಬರು ಕೂಡಿಕೊಂಡು ಈ 3 ಜನ ಹೆಣ್ಣು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬಂದಿದ್ದು, ನಮ್ಮ ಅಂಗಳದಿಂದ ನೀರೆತ್ತುವ ಸಣ್ಣ ಮಷಿನ್ ಕಳ್ಳತನ ಮಾಡಿದ 3 ಜನ ಹೆಣ್ಣು ಮಕ್ಕಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಧೋಕ ನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.     
ಅಶೋಕ ನಗರ ಠಾಣೆ : ಶ್ರೀ ಮಹ್ಮದ ರಫೀಕ್ ತಂದೆ ಮೈನುದ್ದಿನ್ ಶಹಬಾಜಖಾನ ಉ: ಕ್ಷೇತ್ರ ಕಾರ್ಯ ನಿರ್ವಾಹಕರು ಎ.ಜಿ.ಎಸ್. ಟ್ರಾನಜಾಕ್ಟ ಟೇಕ್ನಾಲಾಜಿ ಲಿಮಿಟೆಟ್ ಬೆಂಗಳೂರು ಸಾ|| ಮ.ನಂ. 112 ಕಿಲ್ಲಾ ಗೋಖಾಕ ಹಾ|| ವ|| ಮಿನಾಕ್ಷಿ ಚೌಕ್ ಮಕಾನದಾರ ಪಿ.ಜಿ. ವಿಜಯಾಪೂರ  ರವರು ತಮ್ಮ ಕಂಪನಿಯ ಎ.ಜಿ.ಎಸ್. ಟ್ರಾನಜಾಕ್ಟ ಟೇಕ್ನಾಲಾಜಿ ಲಿಮಿಟೆಡ್  ನೇದ್ದರ ಎಕ್ಸಿಸ್ ಬ್ಯಾಂಕ್ ಎ.ಟಿ.ಎಂ. ಐ.ಡಿ. ನಂ. 34218 ಇದು ಕಲಬುರಗಿ ನಗರದ ಕರುಣೇಶ್ವರ ನಗದಲ್ಲಿ ಇರುತ್ತದೆ. ಸದರಿ ಎ.ಟಿ.ಎಂ. ಮಷಿನಿನಲ್ಲಿ ನಾವು ರೂ. 4,40,500/- ಹಣವನ್ನು ತುಂಬಿದ್ದು ಅದರಲ್ಲಿ ರೂ. 73,200/- ಹಣವವು ಸಾರ್ವಜನಿಕರಿಂದ ಡ್ರಾ ಮಾಡಲಾಗಿದ್ದು ಅದರಲ್ಲಿ ಇನ್ನೂ ರೂ. 3,67,300/- ಉಳಿದರುತ್ತವೆ. ಹೀಗಿದ್ದು ದಿನಾಂಕ:29.05.2019 ರಂದು 02:45 ಎ.ಎಂ. ಸುಮಾರಿಗೆ ಯಾರೊ ಕಳ್ಳರು ನಮ್ಮ ಎ.ಟಿ.ಎಂ. ಮಷಿನ್ ಒಡೆದು ಹಣವನ್ನು ಕಳ್ಳತನ ಮಾಡಲು ವಿಫಲ ಪ್ರಯತ್ನ ಮಾಡಿರುತ್ತಾರೆ. ಕಾರಣ ನಮ್ಮ ಎ.ಟಿ.ಎಂ. ಮಷಿನ್ ಒಡೆದು ಹಣ ಕಳ್ಳತನ ಮಾಡಲು ಪ್ರಯತ್ನ ಮಾಡಿರುವ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸಿದ್ದಾರೂಢ ತಂದೆ ಭಿಮಶ್ಯಾ ಪಟ್ಟಣ ಸಾಃ ಸುಂಟನೂರ ರವರು ದಿನಾಂಕ 29/05/2019 ರಂದು ಹಡಲಗಿ ಗ್ರಾಮದಲ್ಲಿ ನಮಗೆ ಪರಿಚಯದವರಾದ ಶ್ರೀ ದತ್ತು ತಂದೆ ಧರ್ಮಣ್ಣ ಕರ್ಚನ ಇವರ ದೇವರು ಮಾಡುವ ಕಾರ್ಯಕ್ರಮ ಇದ್ದುದ್ದರಿಂದ ನಾನು ಹಾಗು ನಮ್ಮೂರಿನ ಚಂದ್ರಕಾಂತ ತಂದೆ ಲಾಡಪ್ಪಾ ನೀಲೂರ, ಹಾಗು ವೈಜಾಪೂರ ಗ್ರಾಮದ ಸಿದ್ದಾರಾಮ ತಂದೆ ಪರಸಪ್ಪಾ ಹಾದಿಮನಿ, ವೇಣುಗೋಪಾಲ ತಂದೆ ಶ್ರೀಮಂತ ಹಾದಿಮನಿ, ಅಪ್ಪಾರಾಯ ತಂದೆ ನಾಗಪ್ಪಾ ರಂಬಾ ಎಲ್ಲರು ಸೇರಿ ಮಧ್ಯಾಹ್ನ 02.00 ಗಂಟೆ ಸುಮಾರಿಗೆ ವೇಣುಗೋಪಾಲ ಇವರ ಮಾರುತಿ ಕಂಪನಿಯ ಕಾರಿನಲ್ಲಿ ಹಡಲಗಿ ಗ್ರಾಮಕ್ಕೆ ಬಂದಿರುತ್ತೆವೆ. ವೇಣುಗೋಪಾಲ ಇವರು ಒಂದು ವಾರದ ಹಿಂದೆ ಕಾರ ಖರೀದಿ ಮಾಡಿದ್ದರಿಂದ ಇನ್ನು ಮಾರುತಿ ಕಾರ ನಂಬರ ಬಂದಿರುವದಿಲ್ಲ. ಕಾರ ತಾತ್ಕಾಲಿಕ ರೆಜಿಸ್ಟ್ರೆಶನ ನಂ KA/32/TMP/2019/16054 ಹಾಗು ಚೆಸಿ ನಂ. MA3CZF03SKE535558 ಇದ್ದಿರುತ್ತದೆ. ಹೀಗಿದ್ದು ನಾನು ಹಾಗೂ ಚಂದ್ರಕಾಂತ ನೀಲೂರ, ಸಿದ್ದಾರಾಮ ಹಾದಿಮನಿ, ವೇಣುಗೊಪಾಲ ಹಾದಿಮನಿ, ಅಪ್ಪಾರಾಯ ರಂಬಾ ಎಲ್ಲರೂ ಶ್ರೀ ದತ್ತು ತಂದೆ ಧರ್ಮಣ್ಣ ಕರ್ಚನ ಇವರ ದೇವರು ಮಾಡುವ ಕಾರ್ಯಕ್ರಮ ಮಗಿಸಿ ವೈಜಾಪೂರ ಗ್ರಾಮಕ್ಕೆ ಹಡಲಗಿ ಗ್ರಾಮದಿಂದ 05.30 ಪಿ.ಎಮ ಸುಮಾರಿಗೆ ಮಾರುತಿ ತಾತ್ಕಾಲಿಕ ರೆಜಿಸ್ಟ್ರೆಶನ ನಂ KA/32/TMP/2019/16054 ಹಾಗು ಚೆಸಿ ನಂ. MA3CZF03SKE535558 ನೇದ್ದರಲ್ಲಿ ಹೊರಟಿದ್ದು ವೇಣುಗೊಪಾಲ ಇವರು ಕಾರ ಚಲಾಯಿಸುತ್ತಿರುತ್ತಾರೆ. ಹಡಲಗಿ ಗ್ರಾಮದಿಂದ ವೈಜಾಪೂರಕ್ಕೆ ಬರುವಾಗ ಯಳಸಂಗಿ ಗ್ರಾಮದ ಕ್ರಾಸ ಹತ್ತಿರದಲ್ಲಿ ಬರುತ್ತಿರುವಾಗ ವೇಣುಗೊಪಾಲ ಇತನು ತನ್ನ ಕಾರನ್ನು ಅತೀ ವೇಗವಾಗಿ ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದಾಗ ನಾನು ಆತನಿಗೆ ಸಾವದಾನ ಹೊಗಲು ನಾನು ಹೇಳಿದಾಗ ಮತ್ತೆ ವೇಣುಗೊಪಾಲ ಇನತು ತನ್ನ ಕಾರನ್ನು ನಿಷ್ಕಾಳಜಿತನದಿಂದ ಚಲಾಯಿಸಿ ಯಳಸಂಗಿ ಗ್ರಾಮದ ಕ್ರಾಸ ಸಮೀಪದಲ್ಲಿ ಫೂಲಿನ ಹತ್ತಿರ ಕಾರನ್ನು ರೊಡಿನ ಕೆಳಗೆ ಇಳಿಸಿದಾಗ ರೊಡಿನ ಪಕ್ಕದಲ್ಲಿ ಇರುವ ಗಾರಿಯಲ್ಲಿ ಕಾರ ಪಲ್ಟಿಯಾಗಿ ವಿದ್ಯೂತ ಕಂಬಕ್ಕೆ ಡಿಕ್ಕಿಯಾಗಿದ್ದು ಆಗ ನನಗೆ ಎದೆಗೆ ಗುಪ್ತಗಾಯ ಹಾಗು ತಲೆಗೆ ರಕ್ತ ಗಾಯವಾಗಿದ್ದು, ನಮ್ಮ ಜೊತೆಗೆ ಬಂದಿದ್ದ ಸಿದ್ದಾರಾಮ ತಂದೆ ಪರಸಪ್ಪಾ ಹಾದಿಮನಿ ಇವನಿಗೆ ನೋಡಲಾಗಿ ಎಡಗಡೆ ಕಣ್ಣಿನ ಕೆಳಗೆ, ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಕಿವಿಯಿಂದ ರಕ್ತ ಬರುತ್ತಿದ್ದು, ಹಾಗು ಚಂದ್ರಕಾಂತ ತಂದೆ ಲಾಡಪ್ಪಾ ನೀಲೂರ ಈತನಿಗೆ ನೋಡಲಾಗಿ ಬಲಗೈ ಕಿರು ಬೇರಳಿನ ಹತ್ತಿರ ಹಾಗು ಹಣೆಯ ಮೇಲೆ ತೆರಚಿದ ಗಾಯ, ಅಪ್ಪಾರಾಯ ತಂದೆ ನಾಗಪ್ಪಾ ರಂಬಾ ಇವರಿಗೆ ಹಣೆಯ ಮೇಲೆ ಭಾರಿ ರಕ್ತಗಾಯವಾಗಿದ್ದು ಹಾಗು ತಲೆಯ ಮೇಲೆ ರಕ್ತವಾಗಿದ್ದು, ಮೂಗಿನಿಂದ ರಕ್ತ ಬರುತ್ತಿದ್ದು, ವೇಣುಗೋಪಾಲನಿಗೆ ನೋಡಲಾಗಿ ಆತನ ಬಲಗೈ ಮೊಳಕೈಗೆ ರಕ್ತ ಗಾಯವಾಗಿದ್ದು ಇರುತ್ತದೆ. ಅಷ್ಟರಲ್ಲಿ ನಮ್ಮೂರಿನ ಅಜರ್ುನ ವಗ್ಗನ, ಬಾಬುರಾವ ಮಂಟಗಿ ಹಾಗು ಶಿವಾನಂದ ಸಾಗರ ಇವರು ಬಂದು ನಮ್ಮೆಲ್ಲರನ್ನು ಕಾರಿನಿಂದ ಕೆಳಗೆ ಇಳಿಸಿ ಅಂಬುಲೆನ್ಸ ಕರೆಯಿಸಿದ್ದು ಅಂಬುಲೆನ್ಸ ಬಂದ ನಂತರ ನಮ್ಮೆಲ್ಲರನ್ನು ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಯುನೈಟೆಡ್ ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯದಲ್ಲಿ 07.30 ಪಿ.ಎಮ ಸುಮಾರಿಗೆ ಅಪ್ಪಾರಾಯ ರಂಬಾ ಇತನು ಮೃತಪಟ್ಟಿರುತ್ತಾನೆ. ಕಾರಣ ತನ್ನ ವಾಹನವನ್ನು ಅತೀ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ ಅಪಘಾತಪಡಿಸಿದ ವೇಣುಗೋಪಾಲ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ 02 : ದಿನಾಂಕ-27/05/2019 ರಂದು ಸಾಯಂಕಾಲ ಶ್ರೀಮತಿ ರೇಣುಕಾ ಗಂಡ ಸಂತೋಷಕುಮಾರ ತ್ರಿಲಾಪೂರ ಸಾ : ಕನಕಪೂರ ತಾ : ಚಿಂಚೋಳಿ ರವರ  ಗಂಡ ಸಂತೋಷಕುಮಾರ ತನ್ನ ಮೋಟಾರ ಸೈಕಲ ನಂ ಕೆಎ- 32 ಕ್ಯೂ-3539 ನೇದ್ದರ ಮೇಲೆ ಹಿಂದುಗಡೆ ನನಗು ಹಾಗೂ ಇಬ್ಬರು ಮಕ್ಕಳಾದ ಭಾಗ್ಯಶ್ರೀ, ಶ್ರೀಕಾಂತ ಇವರಿಗೆ ಕೂಡಿಸಿಕೊಂಡು ಸೂಗೂರ ಗ್ರಾಮದಿಂದ ಸಣ್ಣೂರ ಕ್ರಾಸ್ ಮುಖಾಂತರ ಕಲಬುರಗಿಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮದಿಹಾಳ ತಾಂಡಾ ಕ್ರಾಸ್ ಹತ್ತಿರ  ರೋಡ ಮೇಲೆ ಎದುರುಗಡೆಯಿಂದ  ಒಂದು ಕಾರ ನಂ ಕೆಎ-25 ಪಿ-4927 ನೇದ್ದ ರ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಮತ್ತು ಅವರ ಗಂಡನಾದ ಸಂತೋಷಕುಮಾರ ಹಾಗೂ ಇಬ್ಬರು ಮಕ್ಕಳಾದ ಭಾಗ್ಯಶ್ರೀ, ಶ್ರೀಕಾಂತ ಇವರಿಗೆ ಭಾರಿಗಾಯಗೊಳಿಸಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ. ಸಂತೋಷಕುಮಾರ ಇತನು ಯುನೈಟೇಡ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ. ದಿನಾಂಕ-28/05/2019 ರಂದು ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 28-05-2019 ರಂದು ಶಿವಪೂರ ಗ್ರಾಮದ ಭೀಮಾ ನದಿಯಿಂದ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿವಪೂರ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಬನ್ನೆಟ್ಟಿ ಕ್ರಾಸ  ಹತ್ತಿರ ಶಿವಪುರ ಕಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು, ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು, ಟ್ಯಾಕ್ಟರ ಮೇಲೆ ಪಾಸಿಂಗ್ ನಂಬರ ಇರಲಿಲ್ಲ. ಸದರಿ ಟ್ಯಾಕ್ಟರ ಇಂಜೆನ್ ನಂಬರ ಚೆಕ್ ಮಾಡಲಾಗಿ ಅದರ CH NO :- PY5310S05919 ENG NO:- PY6029D24938 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಅ.ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

28 May 2019

KALABURAGI DISTRICT REPORTED CRIMES

ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಸಂಜಯಕುಮಾರ ತಂದೆ ಬಾಬುರಾವ ಶೇರಿಕಾರ ಸಾ|| ಪಡಸಾವಳಿ ತಾ|| ಆಳಂದ ರವರು ದಿನಾಂಕ 26/05/2019 ರಂದು ರಾತ್ರಿ 11-00 ಗಂಟೆಯವರೆಗೆ ಮನೆಯಲ್ಲಿ ಊಟ ಮಾಡಿ ನಮ್ಮ ಮನೆಯ ಮುಂದಿನ ಕಂಪೌಂಡಕ್ಕೆ ಹತ್ತಿದ್ದ ಕಬ್ಬಿಣದ ಗೇಟಿಗೆ & ಮನೆಯ ಮುಂದಿನ ಬಾಗಿಲಿಗೆ ಕೀಲಿ ಹಾಕಿಕೊಂಡು ಬೇಸಿಗೆ ಇದ್ದ ಪ್ರಯುಕ್ತ ರಾತ್ರಿ 11-30 ಗಂಟೆಯ ಸುಮಾರಿಗೆ ನಾವೆಲ್ಲರೂ ಕೂಡಿಕೊಂಡು ಮನೆಯ ಮಾಳಿಗೆ ಮೇಲೆ ಹೋಗಿ ಮಲಗಿಕೊಂಡಿದ್ದು ನಂತರ ದಿನಾಂಕ 27/05/2019 ರಂದು ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ನಾನು & ನನ್ನ ಹೆಂಡತಿ ಹಾಗೂ ನನ್ನ ತಾಯಿ ಮಾಳಿಗೆಯಿಂದ ಕೆಳಗೆ ಇಳಿದು ನಮ್ಮ ಕಬ್ಬಿಣದ ಗೇಟಿಗೆ ಹಾಕಿದ ಕೀಲಿಯನ್ನು ನೋಡಲಾಗಿ ಮುರಿದು ಗೇಟ್ ಅರ್ಧ ತೆರೆದಿದ್ದು ಮುಂದಿನ ಬಾಗಿಲಗೆ ನೋಡಲಾಗಿ ಕೀಲಿ ಮುರಿದು ಕೊಂಡಿಯನ್ನು ಮುರಿದಿದ್ದು ಆಗ ಗಾಬರಿಯಾಗಿ ನಾವೆಲ್ಲರೂ ಕೂಡಿಕೊಂಡು ಒಳಗಡೆ ಹೋಗಿ ನೋಡಲಾಗಿ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಅಲಮಾರಿಯ ಲಾಕರ ಮುರಿದು ಒಳಗಡೆ ಇಟ್ಟಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ  ಒಟ್ಟು 2.35,000/- ರೂಪಾಯಿಗಳು ಬೆಲೆ ಬಾಳುವ ಬಂಗಾರದ & ಬೆಳ್ಳಿ ಆಭರಣ ಹಾಗು ನಗದು ಹಣವನ್ನು ನಿನ್ನೆ ರಾತ್ರಿ 11-45 ಪಿ ಎಮ್ ದಿಂದ ಇಂದು ಬೆಳಗಿನ ಜಾವ 05-00 ಗಂಟೆಯ ಸುಮಾರಿನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಗೇಟಿನ ಕೀಲಿ ಹಾಗು ಮನೆಯ ಮುಖ್ಯ ಬಾಗಿಲಿನ ಕೀಲಿಯನ್ನು ಕಬ್ಬಿಣದ ರಾಡಿನಿಂದ ಮುರಿದು ಮನೆಯೊಳಗೆ ಪ್ರವೇಶ ಮಾಡಿ ರಾತ್ರಿ ವೇಳೆಯಲ್ಲಿ ಈ ಮೆಲ್ಕಂಡ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಡಾ.ಶಿವಲಿಂಗಪ್ಪಾ ತಂದೆ ವಿಠ್ಠಲ ಗೌಳಿ, ಸಾ: ಮನೆ ನಂ.9-953/12ಜಿ, ಪ್ಲಾಟ್ ನಂ.25 ಸಿದ್ದಾರೋಡ ಮಠದ ಹತ್ತಿರ ಜನತಾ ಲೇಔಟ್ ಕಲಬುರಗಿ ರವರು ರಾಜಾಪೂರ ಗ್ರಾಮ, ತಾ: ಶಿರೋಳ, ಜಿ: ಕೊಲ್ಹಾಪೂರ, ಮಹಾರಾಷ್ಟ್ರ ರಾಜ್ಯದ ದುಳಪ್ಪಾ ತಂದೆ ಮಹಾನಿಂಗಪ್ಪಾ ಧಿವಟೆ ಇವರ ಮಗನಾಗಿರುವ ಧಯಾನಂದ ದುಳಪ್ಪಾ ಧಿವಟೆ ಇವರೊಂದಿಗೆ ಹಿಂದೆ ಸಂಬಂದವಾಗಿದ್ದು ಪ್ರಕಾರ ದುಳಪ್ಪಾ ಇವರ ಮಗಳಾದ, ಮನೀಷಾ ಅನ್ನುವವಳನ್ನು ನನ್ನ ತಮ್ಮನ ಮಗನಾಗಿರುವ ಈಶ್ವರ ಇತನಿಗೆ ಮದುವೆ ಮಾಡುವ ಪ್ರಯುಕ್ತ ನಿಶ್ಚಯದ ಮಾತುಕತೆ ಸಮಾಜದ ಮುಖಂಡರ ಮುಂದೆ ಕಳೆದ ಎರಡು ವರ್ಷಗಳ ಹಿಂದೆ ಮಾತುಕತೆಯಾಗಿದ್ದು ಆದರೆ ದುಳಪ್ಪಾ ಇವರು ಸದ್ಯದ ಪರಸ್ಥಿತಿಯಲ್ಲಿ ನನ್ನ ತಮ್ಮನ ಮಗನಿಗೆ ಮದುವೆ ಮಾಡಿಕೊಡುವುದಿಲ್ಲ ಅಂತಾ ತಕರಾರು ನಡೆದಿರುತ್ತದೆ. ಹೀಗಿದ್ದು, ದಿನಾಂಕ.24.05.2019 ರಂದು ರಾತ್ರಿ 7.30 ಗಂಟೆಯಿಂದ 8.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳೊಂದಿಗೆ ನಮ್ಮ ಮನೆಯಲ್ಲಿದ್ದಾಗ ನಮ್ಮ ನೆಂಟಸ್ಥರೆ ಆಗಿರುವಂತಹ 1) ಶ್ರೀ ದುಳಪ್ಪಾ ತಂದೆ ಮಹಾನಿಂಗಪ್ಪಾ ದಿವಟೆ ಅವರ ಹೆಂಡತಿಯಾದ 2) ಶ್ರೀಮತಿ ಗೀತಾ ಗಂಡ  ದುಳಪ್ಪಾ ದಿವಟೆ, ತಮ್ಮನಾದ 3) ಅನೀಲ ತಂದೆ ಮಹಾನಿಂಗಪ್ಪಾ ದಿವಟೆ, ಮಗನಾದ, 4) ಧಯಾನಂದ ತಂದೆ ದುಳಪ್ಪಾ ದಿವಟೆ, ದುಳಪ್ಪ ವರ ಮಾಮನಾದ 5) ಪಾಂಡು (ಪಂಡೀತ ಪೂಜಾರಿ) ದಿವಟೆ, ದುಳಪ್ಪ ಇವರ ತಂಗಿಯಾದ 6) ಇಠಾಬಾಯಿ ಗಂಡ ಬಾಳು ದಿವಟೆ, ಅವರ ಹೆಣ್ಣುಮಕ್ಕಳಾದ 7) ಕುಮಾರಿ ಮನೀಷಾ ತಂದೆ ದುಳಪ್ಪಾ ದಿವಟೆ, 8) ಕುಮಾರಿ ಮನಾಲಿ ತಂದೆ ದುಳಪ್ಪಾ ದಿವಟೆ ಮತ್ತು ಅವರ ಜೊತೆಯಲ್ಲಿ ಇನ್ನು ಕೆಲವರು ಕೂಡಿಕೊಂಡು ನಮ್ಮ ಮನೆಯಲ್ಲಿ ನೆಂಟಸ್ಥನ ಮಾಡುವ ಬಗ್ಗೆ ನೆಪಮಾಡಿಕೊಂಡು ಮನೆಯಲ್ಲಿ ಏಕಾಏಕಿಯಾಗಿ ನುಗ್ಗಿದವರೆ ನನಗೆ ಹೊಡೆಯಲು ಬಂದರು ಯಾಕೆ ಯಾಕೆ ಎನಾಗಿದೆ ಹೇಳಿ ಅಂತಾ ಅಂದಾಗ ಸುಳಿ ಮಕ್ಕಳ್ರ್ಯಾ ನೀವು ಚಪ್ಪಲಿ ಹೊಲಿಯುವವರು, ಖಂಡ ಮಾಂಸ ತಿನ್ನುವ ಹೊಲಸು ಸುಳೆ ಮಕ್ಕಳಿದ್ದಿರಿ, ನೀವು ನಮ್ಮ ಮಕ್ಕಳಾದ ಕುಮಾರಿ ಮನೀಷಾ ಮತ್ತು ಮನಾಲಿ ಇವರಿಗೆ ನಿಮ್ಮ ಕುಟುಂಬಕ್ಕೆ ಕೊಡು ಅಂತಾ ಕೇಳುತ್ತಿರಿ ಸುಳೆ ಮಕ್ಕಳೆ ಅಂತಾ ಅನ್ನುತ್ತಾ ನನಗೆ 2-3 ಜನ ಹಿಡಿದುಕೊಂಡು ಮರಣಾಂತಿಕ ಹಲ್ಲೆ ಮಾಡಿದ್ದಾರೆ ಕಾಲಿಗೆ ಕಟ್ಟಿಗೆಯಿಂದ, ರಾಡನಿಂದ ನಾಜುಕು ಜಾಗಗಳಿಗೆ ಹೊಡೆದು ಹಮ್ಲಾ ಮಾಡಿದ್ದಾರೆ, ವಯಸ್ಸಾದ ನನ್ನ ತಾಯಿ ಅಂಬವ್ವಾ ಗಂಡ ವಿಠ್ಠಲ ಗೌಳಿ, ಇವರಿಗು ಸಹ ಕೈ ಹಿಡಿದು ಎಳೆದಾಡಿ ಅವಮಾನಪಡಿಸಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಬಿಡಿಸಲು ಬಂದ ನಮ್ಮ ಹೆಂಡತಿಯಾದ ಶಾಂತಾಬಾಯಿ ಗಂಡ ಶಿವಲಿಂಗಪ್ಪಾ ಗೌಳಿ ಇವರಿಗೂ ಸಹ ರಂಡೆ ಮುಂಡೆ ಅಂತಾ ಅವ್ಯಾಚ ಶಬ್ದಗಳಿಂದ ಬೈದಾಡಿ ಕೈ ಹಿಡಿದು ಎಳೆದಾಡಿ ಅವಮಾನಪಡಿಸಿದ್ದು ಅಲ್ಲದೇ ರಂಡೆರೆ ನಮ್ಮ ಜಾತಿ ಬಹಳ ಶ್ರೇಷ್ಠ ಜಾತಿ ನಾವು ಪಂಡಿತ ಪುರೋಹಿತ ಕಿರ್ತನೆ ಮತ್ತು ಬಜನೆ ಮಾಡುವವರಿದ್ದು ಅದಕ್ಕೆ ನಮಗೆ ದಿವಟೆಗಳೆಂದು ಕರೆಯುತ್ತಾರೆ. ನಿಮಗೆ ಹೊಲಸು ತಿನ್ನುವ ಸಮಗಾರಂತ ಕರೆಯುತ್ತಾರೆ ಅಂತಾ ಹೊಡೆದಿರುತ್ತಾರೆ. ಇದನ್ನು ಕಂಡು ಬಿಡಿಸಲು ಬಂದ ನನ್ನ ಅಳಿಯ  ಶಿವಾನಂದ ತಂದೆ ಚಂದ್ರಶ್ಯಾ ಹರಳಯ್ಯ ಇವರಿಗೆ ಕೈಯಿಂದ ಹೊಡೆಬಡೆ ಮಾಡಿ ಎಡಕೈ ಒಡ್ಡುಮುರಿದು ಗುಪ್ತಗಾಯಪಡಿಸಿರುತ್ತಾರೆ. ಇವರೆಲ್ಲರೂ ರೀತಿ ನಮ್ಮ ಮನೆಯಲ್ಲಿ ಏಕಾಏಕಿಯಾಗಿ ನುಗ್ಗಿ ಯಾವುದೇ ಮಾತನು ಕೇಳದೇ ಹಳೆಯ ವೈಮನಸ್ಸಿನಿಂದ ನಮ್ಮ ಮನೆಯಲ್ಲಿ ಬಂದು ನಮಗೆ ರೀತಿ ಮರಣಾಂತಿಕ ಹಲ್ಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 May 2019

KALABURAGI DISTRICT REPORTED CRIMES

ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ವಿಜಯಕುಮಾರ ತಂದೆ ಶರಣಪ್ಪ ಮಳ್ಳಿ ಸಾಃ ಸಂಗಮತಾಯಿ ಕಾಲೋನಿ ಕಲಬುರಗಿ ರವರು ಸಂಗಮ ತಾಯಿ ಕಾಲೋನಿಯಲ್ಲಿ ನಮ್ಮದು ಒಂದು ಸ್ವಂತ ಮನೆ ಇದ್ದು  ನಮ್ಮ ಮನೆಯಲ್ಲಿ ಕೆಲವೋಂದು ಕೋಣೆಗಳು ನಾವು ಉಪಯೋಗ ಮಾಡಿಕೊಂಡು ಬಂದಿದ್ದು ಒಂದು ಪೋರ್ಶನ ಸಿದ್ರಮಾ ರೆಡ್ಡಿ ಎಂಬುವರಿಗೆ ಬಾಡಿಗೆಯಲ್ಲಿ ಕೊಟ್ಟಿದ್ದು ಅವರು ಕಾಮರೆಡ್ಡಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಮನೆಯಲ್ಲೆ ವಾಸವಾಗಿರುತ್ತಾರೆ. ಬೇಸಿಗೆ ಇರುವ ಪ್ರಯುಕ್ತ ರಾತ್ರಿ ವೇಳೆ ನಮ್ಮ ಮನೆಗಳಿಗೆ ಕೀಲಿ ಹಾಕಿಕೊಂಡು ನಮ್ಮ ಮನೆ ಮೇಲಗಡೆ ಮಲಗುತ್ತಾ ಬಂದಿರುತ್ತೇವೆ. ಹೀಗೆ ಇರುವಾಗ ಪ್ರತಿ ದಿನದಂತೆ ದಿನಾಂಕಃ 24.05.2019 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಬೇಸಿಗೆ ಇರುವ ಪ್ರಯುಕ್ತ ನಮ್ಮ ಮನೆಯ ಬಾಗಿಲಕ್ಕೆ ಸರಿಯಾಗಿ ಚಿಲಕ ಹಾಕಿಕೊಂಡು ನಮ್ಮ ಮನೆಯ ಮೇಲಛಾವಣಿ ಮೇಲಗಡೆ ಮಲಗಿ ಕೊಂಡಿರುತ್ತೇವೆ.  ಅದರಂತೆ ನಮ್ಮ ಮನೆಯಲ್ಲಿ ಬಾಡಿಗಿ ಇರುವ ಸಿದ್ರಾಮ ರೆಡ್ಡಿ ತಂದೆ ಚಂದ್ರರೆಡ್ಡಿ ರಸ್ತಾಪೂರ ಇವರು ಸಹ ರಾತ್ರಿ ಅವರ ಬಾಡಿಗೆ ಇರುವ ಮನೆಯ ಬಾಗಿಲಕ್ಕೆ ಬೀಗ ಹಾಕಿಕೊಂಡು ಮನೆಯ ಮೇಲಗಡೆ ಬಂದು ಮಲಗಿಕೊಂಡಿರುತ್ತಾರೆ. ನಂತರ ದಿನಾಂಕಃ 25.05.2019 ರಂದು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಬಾಡಿಗೆ ಇರುವ ಸಿದ್ರಾಮ ರೆಡ್ಡಿ ರವರು ಕೆಳಗಡೆ ಬಂದು ನೋಡಿದಾಗ ನಮ್ಮ ಮನೆ ಹಾಗೂ ಬಾಡಿಗೆದಾರರ ಮನೆಯ ಎರಡು ಬಾಗಿಲು ಖುಲ್ಲಾ ಇರುವದನ್ನು ನೋಡಿ ನಮ್ಮನ್ನು ಕರೆದಾಗ ನಾವು ಕೆಳಗಡೆ ಬಂದು ನೋಡಿದ್ದಾಗ ನಮ್ಮ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿಗಳು ಮುರಿದಿದ್ದು  ನಮ್ಮ ಮನೆಯೋಳಗಡೆ ಹೋಗಿ ನೋಡಲು ನಮ್ಮ ಮನೆಯ ಅಲಮಾರಿಯಲ್ಲಿಟ್ಟಿರುವ  ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಆಭರಣಗಳು  ಒಟ್ಟು 4,02,000 ರೂ ಬೆಲೆ ಬಾಳುವ ಬಂಗಾರ ಮತ್ತು ಬೆಳಿ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಅಲ್ಲದೆ ನಮ್ಮ ಮನೆಯಲ್ಲೆ ಬಾಡಿಗೆ ಇರುವ ಶ್ರೀ ಸಿದ್ರಾಮ ರೆಡ್ಡಿ ತಂದೆ ಚಂದ್ರರೆಡ್ಡಿ ರಸ್ತಾಪೂರ ಇವರ ಮನೆಯ ಬಾಗಿಲಕ್ಕೆ ಹಾಕಿರುವ ಕೀಲಿ ಮುರಿದ್ದು ಅವರ ಮನೆಯಲ್ಲಿರುವ ಬಂಗಾರದ ಬೆಳ್ಳಿಯ ಆಭರಣ ಹಾಗೂ ಮನೆಯೆ ಮುಂದೆ ನಿಲ್ಲಿಸಿರುವ ಮೋಟಾರ ಸೈಕಲ್ ನಂ ಕೆಎ-32 ವಾಯಿ-8493 ಅಃಕಿಃ 30,000/-  ಹೀಗೆ ಒಟ್ಟು 5,09,000 ಬೆಳೆಬಾಳುವ ಬಂಗಾರ ಮತ್ತು ಬೆಳಿ ಆಭರಣಗಳು ಮತ್ತು 36700 ನಗದು ಹಣ ಮತ್ತು ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಖೇಮಲಿಂಗ ತಂದೆ ಗುರಣ್ಣಾ ಬಿರಾದಾರ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನ ಘತ್ತರಗಾ ರವರಿಗೆ ಭಾಗ್ಯವಂತಿ ದೇವಸ್ಥಾನದಲ್ಲಿ ದ್ವಿ.ದ.ಸಹಾಯಾಕನಾಗಿ ಕೇಲಸ ನಿರ್ವಹಿಸುತ್ತೀರುವ ಭಿಮರಾಯ ತಂದೆ ಮರೇಪ್ಪ ದೊಡ್ಡಮನಿ ಮತ್ತು ಮಹಾಂತಪ್ಪ ತಂದೆ ಸಿದ್ರಾಮಪ್ಪ ಮೂಗಿನ ಡಿ.ದರ್ಜೆ ನೌಕರ ಇವರು ದಿನಾಂಕ:10/05/2019 ರಂದು 11-30 ಎ.ಎಮ್.ಸುಮಾರಿಗೆ ನನಗೆ ಪೊನ ಮಾಡಿ ಒಬ್ಬರು ಯಾತ್ರಿಕರು ಕಾರ್ಯಾಲಯಕ್ಕೆ ಬಂದು ನನ್ನ ಹೆಂಡತಿಯ ಘಂಟಣ ಸರ ಈಗ 10 ನಿಮೀಷದ ಹಿಂದೆ ದರ್ಶನ ಲೈನಿನಲ್ಲಿ ನಿಂತಿದ್ದಾಗ ಕಳೆದುಹೊಗಿರುತ್ತದೆ ಸ್ವಲ್ಪ ಸಿ.ಸಿ.ಕ್ಯಾಮರಾ ಚೆಕ್ ಮಾಡಿ ನೋಡಿ ಅಂತ ಕೇಳಿಕೊಳ್ಳುತ್ತಿದ್ದಾರೆ ಅಂತ ತಿಳಿಸಿದನು ಆಗ ಸದರಿಯವರಿಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳು ತೊರಿಸು ಅಂತ ತಿಳಿಸಿರುತ್ತೇನೆ ನಂತರ ಭಿಮರಾಯನು 50 ನಿಮೀಷ ಬಿಟ್ಟು ನನಗೆ ಮತ್ತೊಮ್ಮೆ ಪೊನ ಮಾಡಿ ಸರ್ ಸದರಿಯವರಿಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳು ತೊರಿಸಿದ್ದು ಅವರು ಕಳೆದುಕೊಂಡ ಸರದ ಬಗ್ಗೆ ಯಾವುದೆ ಉಪಯುಕ್ತ ಮಾಹಿತಿ ಸೆರೆಯಾಗಿರುವದಿಲ್ಲ ಆದರೆ ದಿನಾಂಕ:26/04/2019 ರಂದು ಸಾಯಂಕಾಲ 4-27 ಪಿ,ಎಮ್.ಸುಮಾರಿಗೆ ದೇವಸ್ಥಾನದ ಹಿಂದುಗಡೆ ಇರುವ ಹುಂಡಿಗಳ ಪೈಕಿ ಚಿಕ್ಕ ಹುಂಡಿಯಲ್ಲಿಯ ಹಣ ಘತ್ತರ್ಗಿ ಗ್ರಾಮದ ಸದ್ಯ ಪ್ರಸಕ್ತ ಸಾಲಿನ ಭಾಗ್ಯವಂತಿ ದೇವಸ್ಥಾನದ ಪೂಜಾರಿಗಳಾದ 1)ರಾಜಕುಮಾರ ತಂದೆ ಬಸಣ್ಣ ರಮಗಾ 2)ನಾಗೇಶ ತಂದೆ ಶ್ರೀಮಂತ ರಮಗಾ 3)ಸಿದ್ದು ತಂದೆ ಶ್ರೀಮಂತ ರಮಗಾ ಈ ಮೂರು ಜನರು ಹುಂಡಿಯಲ್ಲಿರುವ ಹಣ ಯಾವುದೊ ವಸ್ತುವನ್ನು ಒಳಗಡೆ ಹಾಕಿ ಅದರ ಸಹಾಯದಿಂದ ಹುಂಡಿಯಲ್ಲಿರುವ ಹಣ ಕಳ್ಳತನ ಮಾಡಿರುವ ಬಗ್ಗೆ ಮತ್ತು ದಿನಾಂಕ:27/04/2019 ರಂದು 05-47 ಪಿ,ಎಮ್.ಸುಮಾರಿಗೆ ದೇವಸ್ಥಾನದ ಮಂಟಪದಲ್ಲಿ ದರ್ಶನಕ್ಕೆ ಹೊಗುವಾಗ ಬಲಗಡೆ ಇರುವ ಹುಂಡಿಯಲ್ಲಿಯ ಹಣ ಘತ್ತರ್ಗಿ ಗ್ರಾಮದ ಸದ್ಯ ಪ್ರಸಕ್ತ ಸಾಲಿನ ಪೂಜಾರಿಗಳಾದ 1)ರಾಜಕುಮಾರ ತಂದೆ ಬಸಣ್ಣ ರಮಗಾ 2)ಸಿದ್ದು ತಂದೆ ಶ್ರೀಮಂತ ರಮಗಾ ಈ ಇಬ್ಬರು ಹುಂಡಿಯಲ್ಲಿರುವ ಹಣ ಯಾವುದೊ ವಸ್ತುವನ್ನು ಒಳಗಡೆ ಹಾಕಿ ಅದರ ಸಹಾಯದಿಂದ ಹುಂಡಿಯಲ್ಲಿರುವ ಹಣ ಕಳ್ಳತನ ಮಾಡಿರುವ ಬಗ್ಗೆ  ಸಿ,ಸಿ.ಟಿ.ವ್ಹಿ.ಯ ಕ್ಯಾಮರಾದ ದೃಶ್ಯಾವಳಿಯಲ್ಲಿ ಕಂಡು ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ದೇವಸ್ಥಾನಕ್ಕೆ ಬಂದು ಸಿ.ಸಿ.ಟಿ.ವ್ಹಿ.ಯ ದೃಶ್ಯಾ ವಳಿಗಳು ಪರಿಶೀಲಿಸಲಾಗಿ ಸದರಿ ದೃಶ್ಯಾವಳಿಗಳು ನೀಜವಿದ್ದು ಈ ವಿಷಯದ ಬಗ್ಗೆ ನಮ್ಮ ಮೇಲಾದಿಕಾರಿಗಳಿಗೆ ತಿಳಿಸಿ ಮತ್ತು ಸಿ.ಸಿ.ಟಿ.ವ್ಹಿಯಲ್ಲಿ ಸೆರೆಯಾದ ದೃಶ್ಯಾವಳಿಗಳ ಪುಟೇಜ ಪಡೆದುಕೊಂಡು ದೇವಸ್ಥಾನಕ್ಕೆ ಭಕ್ತರು ಹುಂಡಿಯಲ್ಲಿ ಕಾಣಿಕೆಯಾಗಿ ಹಾಕಿದ ಹಣವನ್ನು ಅಂದಾಜು 15,000/- ರೂ ಕಳ್ಳತನ ಮಾಡಿದವರ ಮೇಲೆ ಕೂಡಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರೂಗಿಸಬೇಕು. ಅಂತ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಮಲ್ಲಿನಾಥ ತಂದೆ ಶರಣಗೌಡ ಪಾಟೀಲ ಸಾ : ಮಂದೇವಾಲ ರವರು ದಿನಾಂಕ:25.05.2019 ರಂದು ರಾತ್ರಿ ತನ್ನ ಕೆಸವನ್ನು ಮುಗಿಸಿಕೊಂಡು ಕಲಬುರಗಿಯಿಂದ ಜೇವರಗಿಗೆ ತನ್ನ ಫ್ಯಾಶನ ಪ್ಲಸ್ ಮೋ.ಸೈಕಲ್ ನಂ.ಕೆಎ.32 ಇಟಿ.5348 ಬೈಕನಲ್ಲಿ ಹೋಗುವಾಗ 10.50 ಪಿ.ಎಮ್.ಕ್ಕೆ ರಾಷ್ಟ್ರೀಯ ಹೆದ್ದಾರಿ ಸಂ.218 ರ ಸರಡಗಿ ಬಿ ಪೆಟ್ರೊಲ ಪಂಪ ದಾಟಿ ಅಂದಾಜು 2 ಕಿ.ಮಿ ದೂರ ರೋಡಿನ ಮೇಲೆ ಯಾರೋ 3 ಜನ ಅಪರಿಚಿತರು ಒಂದು ಮೋ.ಸೈಕಲ ಮೇಲೆ ಬಂದು ನನಗೆ ಅಡ್ಡಗಟ್ಟಿ ಪರ್ಸಿಯಿಂದ ಮತ್ತು ಚಾಕುವಿನಿಂದ ಹೋಡೆಬಡೆ ಮಾಡಿ ನನ್ನ ಹತ್ತೀರ ಇದ್ದ ಪರ್ಸ ಮತ್ತು ಮೋಬಾಯಿಲನ್ನು ಜಬರದಸ್ತಿಯಿಂದ ಕಿತ್ತುಕೊಂಡು ಹೋಗಿರುತ್ತಾರೆ ಕಾರಣ ಮಾನ್ಯರವರು ಸದರಿ 3 ಜನ ಅಪರಿಚಿತರ ವಿರುದ್ದ ಸೂಕ್ತ ಕಾನೂನ ರಿತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರೋಜಾ ಠಾಣೆ : ಶ್ರೀ ಜಗದೇವಪ್ಪ ತಂದೆ ಅಣ್ಣರಾಯ  ಸಾಃ ಟೆಂಗಳಿ ಲೇಔಟ್ ಹುಮ್ನಾಬಾದ ರಿಂಗ ರೋಡ ಕಲಬುರಗಿ ರವರು ದಿನಾಂಕಃ 24/05/2019 ರಂದು ಮಧ್ಯಾಹ್ನ 6:00 ಗಂಟೆಯ ಸುಮಾರಿಗೆ ದರ್ಗಾದ ದರ್ಶನಕ್ಕಾಗಿ ನನ್ನ ಮೋಟಾರ್ ಸೈಕಲನ್ನು ದರ್ಗಾಸ ಆವರಣದಲ್ಲಿ ನನ್ನ ದ್ವೀಚಕ್ರ ವಾಹನಕ್ಕೆ ಸೈಡ್ ಲಾಕ್ ಹಾಕಿಕೊಂಡು ಒಳಗೆ ಹೋಗಿ ದರ್ಶನ ಪಡೆದುಕೊಂಡು ಪುನಃ 6.30 ಪಿಎಮ ಕ್ಕೆ ನಾನು ದರ್ಗಾದ ಆವರಣದಲ್ಲಿ ನಾನು ನಿಲ್ಲಿಸಿದ ನನ್ನ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆಎ-32 ಇಇ-9590 ಬಂದು ನೋಡಿದ್ದಾಗ ನನ್ನ ಮೋಟಾರ ಸೈಕಲ್ ಇರಲಿಲ್ಲ. ನಾನು ಗಾಬರಿಗೊಂಡು ಮತ್ತು ನಮ್ಮ ಸಂಬಂದಿಕರು ಹಾಗೂ ನನ್ನ ಸ್ನೇಹಿತನಾದ ಶಿವಲಿಂಗಪ್ಪ ಇಬ್ಬರೂ ಕೂಡಿಕೊಂಡು ಎಲ್ಲಾ ಕಡೆ ಹುಡುಕಾಡಿದ್ದು ಮತ್ತು ಸ್ನೇಹಿತರ ಕಡೆ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ನನ್ನ ಸ್ನೇಹಿತರು ಮತ್ತು ಸಂಬಂಧಿಕರ ಕಡೆ ವಿಚಾರಣೆ ಮಾಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ.ಶಾಂತಪ್ಪಾ ತಂದೆ ನಿಂಗಪ್ಪಾ ಹಿರೇಕುರುಬ ಸಾ||ಕಡಗಂಚಿ ಗ್ರಾಮ ರವರ ಊರಿನ ಮಲ್ಲಪ್ಪಾ ತಂದೆ ಶಾಂತಪ್ಪಾ ವಗ್ಗಿ, ಈತನು ನನಗೆ ಸುಮಾರು 4-5 ತಿಂಗಳಿಂದ ನಮ್ಮೂರಿನಲ್ಲಿ ಆಗಾಗ ಸಿಕ್ಕಾಗ ತನಗೆ ಖಚರ್ಿಗೆ, ಸಾರಾಯಿ ಕುಡಿಯಲು ಹಣ ನೀಡುವಂತೆ ಪೀಡಿಸುತ್ತಾ ಅಂಜಿಸುತ್ತಾ ಬಂದಿದ್ದು, ನಾನು ಆತನಿಗೆ ಹೆದರಿ ಆಗಾಗ 100, 200, ರೂಪಾಯಿಗಳನ್ನು ಕೊಡುತ್ತಾ ಬಂದಿರುತ್ತೇನೆ. ದಿನಾಂಕ:25/05/2019 ರಂದು ಸಾಯಂಕಾಲ ನಾನು ನಮ್ಮೂರಿನ ಹನುಮಾನು ದೇವಸ್ಥಾನದ ಹತ್ತಿರ ನಿಂತಾಗ ಮಲ್ಲಪ್ಪಾ ಈತನು ಅಲ್ಲಿಗೆ ಬಂದು ತನಗೆ 200 ರೂಪಾಯಿ ಕೊಡು ಅಂತಾ ಕೇಳಿದನು ಅದಕ್ಕೆ ನಾನು ನನ್ನ ಹತ್ತಿರ ಈಗ ಹಣವಿಲ್ಲ ಅಂತಾ ಹೇಳಿದಾಗ ಆತನು ರಂಡಿಮಗನೆ ಹಣ ಕೊಡದೆ ಹೋದರೆ ನಿನಗೆ ಇವತ್ತು ಖಲಾಸ ಮಾಡುವುದಾಗಿ ಅಂತಾ ಬೈದು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಗಂಟಲಿಗೆ ತನ್ನ ಕೈಯಿಂದ ಜೋರಾಗಿ ಹಿಡಿದು ಹಿಚುಕುತ್ತಾ ನನಗೆ ತನ್ನ ಕಾಲಿನಿಂದ ಹೊಟ್ಟೆಗೆ ಒದೆಯುತ್ತಿದ್ದಾಗ ನಾನು ನನ್ನ ಕೈಗಳಿಂದ ಅವನಿಂದ ಬಿಡಿಸಿಕೊಂಡು ನಮ್ಮ ಮನೆಯ ಕಡೆಗೆ ಓಡುತ್ತಿರುವಾಗ ಆತನು ಅಲ್ಲೆ ಬಿದ್ದಿದ್ದ ಒಂದು ಕಲ್ಲು ತಗೆದುಕೊಂಡು ಬೀಸಿ ನನ್ನ ತಲೆಗೆ ಹೊಡೆದನು ನನಗೆ ತಲೆಗೆ ಭಾರಿ ರಕ್ತಗಾಯವಾಗಿ ಚಿರಾಡುತ್ತಿದ್ದಾಗ ನಮ್ಮೂರಿನ ಚಿದಪ್ಪಾ ತಂದೆ ಮೈಲಾರಿ ಹೊಸಕುರುಬ, ಬೀರಪ್ಪಾ ತಂದೆ ಶರಣಪ್ಪಾ ಚಿತಲಿ ಇವರು ನೋಡಿ ಓಡಿಬಂದು ಬಿಡಿಸಿರುತ್ತಾರೆ. ಒಂದುವೇಳೆ ಸದರಿಯವರು ಬಿಡಿಸದೇ ಹೊದಲ್ಲಿ ಮಲ್ಲಪ್ಪನು ನನಗೆ ಕೊಲೆ ಮಾಡಿಯೇ ಬಿಡುತ್ತಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ಸಂತೋಷ ತಂದೆ ಶಿವಶರಣಪ್ಪ ಸಿಂಧೆ ಸಾ|| ಮ.ನಂ. ಬಿ1 ಎಂ.ಎಸ್.ಕೆ. ಮಿಲ್ ಕ್ವಾಟರ್ಸ ಕಲಬುರಗಿ ರವರು ದಿನಾಂಕ:24.05.2019 ರಂದು ರಾತ್ರಿ ಊಟ ಮುಗಿಸಿಕೊಂಡು 10:00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಜ್ಯೋತಿ ಇಬ್ಬರು ಮನೆಯ ಮುಂದೆ ಮಾತಾಡುತ್ತಾ ವಾಕಿಂಗ್ ಮಾಡುತ್ತಿದ್ದಾಗ  ಯಾರೊ ಇಬ್ಬರು ಅಪರಿಚಿತ ದ್ವಿ-ಚಕ್ರ ವಾಹನ ಸವಾರರು ಬಂದು ನನಗೆ ತಡೆದು ನಿಲ್ಲಿಸಿ  ಏ ಭೋಸಡಿ ಮಗನೆ ಇಲ್ಲಿ ಏಕೆ ತಿರುಗಾಡುತ್ತಿ ಅಂತ ಕೇಳಿದಾಗ ಇಲ್ಲಿಯೇ ಪಕ್ಕದಲ್ಲಿ ನಮ್ಮ ಮನೆ ಇರುತ್ತದೆ, ನೀವು ಯಾರು ಕೇಳುವವರು ಅಂತ ಅಂದಾಗ, ಏ ರಂಡಿ ಮಗನೆ ನಮಗೆ ಎದರು ಮಾತಾಡುತ್ತಿಯಾ ಅಂತ ಇಬ್ಬರು ದ್ವಿ-ಚಕ್ರ ವಾಹನದಿಂದ ಕೆಳಗೆ ಇಳಿದು ಬಂದು ನನಗೆ ಕೈಯಿಂದ ಹೊಡೆಯಲು ಪ್ರಾರಂಭಿಸಿದರು ನನ್ನ ಹೆಂಡತಿ ಮತ್ತು  ನಾನು ಚಿರಾಡುತ್ತಿದ್ದಾಗ ಅವರಲ್ಲಿ ಒಬ್ಬನು ತನ್ನ ಹತ್ತಿರ ಇದ್ದ ಒಂದು ಸಣ್ಣ ಚಾಕುವಿನಿಂದ ನನ್ನ ಎಡಗೈಗೆ ಹೊಡೆದಿರುತ್ತಾನೆ, ನಾನು ಜೋರಾಗಿ ಕಿರುಚುವುದನ್ನು ಕೇಳಿ ಮನೆಯ ಒಳಗಿನಿಂದ ನನ್ನ ಅಣ್ಣ ಅಶೋಕ ಸಿಂಧೆ ಮತ್ತು ತಮ್ಮ ಅನೀಲ ಸಿಂಧೆ ಇವರು ಓಡಿ ಬರುವುದನ್ನು ನೋಡಿ ಅಪರಿಚಿತ ದ್ವಿ-ಚಕ್ರ ವಾಹನ ಸವಾರರು ತಮ್ಮ ಹಿರೊ ಹೊಂಡಾ ವಾಹನ ಸಂ. ಕೆ.ಎ.-32 ಇ.ಹೆಚ್.-6907 ನೇದ್ದನ್ನು ನಮ್ಮ ಮನೆಯ ಮುಂದೆಯೆ ಬಿಟ್ಟು ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.