POLICE BHAVAN KALABURAGI

POLICE BHAVAN KALABURAGI

23 April 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಆಸ್ರಬಿ ಗಂಡ ಮದರಶಾ ಮಕಾಂದಾರ ಸಾ: ಅಫಜಲಪೂರ ರವರ ಗಂಡ ಮದರಶಾ ಈತನು ಬಹಳ ವರ್ಷಗಳ ಹಿಂದೆ ತಿರಿಕೊಂಡಿರುತ್ತಾನೆ. ನನಗೆ ಸಿಲೇಮಾನ, ಸೈಯದ, ನಬಿಶಾ ಅಂತ ಮೂರು ಜನ ಗಂಡು ಮಕ್ಕಳಿರುತ್ತಾರೆ ಸಿಲೇಮಾನ ಈತನು ತಿರಿಕೊಂಡಿರುತ್ತಾನೆ. ಸೈಯದ ಈತನು ಸೊಲಾಪೂರದಲ್ಲಿ ವಾಸವಾಗಿರುತ್ತಾನೆ. ಆದ್ದರಿಂದ ನಾನು ಮತ್ತು ನಬಿಶಾ ಇಬ್ಬರೆ ಅಫಜಲಪೂರದಲ್ಲಿ ವಾಸವಾಗಿರುತ್ತೇವೆ. ನಬಿಶಾ ಈತನಿಗೆ 33 ವರ್ಷಗಳಾಗಿದ್ದು ಇನ್ನು ಮದುವೆಯಾಗಿರುವದಿಲ್ಲ ಮತ್ತು ನಿಬಿಶಾ ಈತನು ಕುಡಿಯುವ ಚಟಕ್ಕೆ ಅಂಟಿಕೊಂಡು ದಿನಾಲು ಎನು ಕೆಲಸ ಮಾಡದೆ ಕುಡಿದುಕೊಂಡು ತಿರುಗಾಡುತ್ತಿದ್ದನು. ನಿನ್ನೆ ದಿನಾಂಕ:22/04/2019 ರಂದು ನನ್ನ ಮಗ ರಾತ್ರಿ 8-30 ಪಿ,ಎಮ್.ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿ ಹೊರಗಡೆ ಹೋಗಿ ಬರುತ್ತೇನೆ ಅಂತ ಹೋಗಿರುತ್ತಾನೆ ನಂತರ ರಾತ್ರಿ 11-30 ಗಂಟೆಯಾದರು ನನ್ನ ಮಗ ಮನೆಗೆ ಬರದ ಕಾರಣ ನಾನು ಮತ್ತು ನನ್ನ ಮೈದುನನ ಹೆಂಡತಿಯಾದ ಶರೀಫಾ ಗಂಡ ಮಕ್ತುಮಸಾಬ ಮಕಾಂದಾರ ಹಾಗೂ ನನ್ನ ಭಾವನ ಮಕ್ಕಳಾದ ರಫೀಕ ತಂದೆ ಲಾಲಶಾ ಮಕಾಂದಾರ,ನಸರುದ್ದಿನ ತಂದೆ ಲಾಲಶಾ ಮಕಾಂದಾರ ನಾಲ್ಕು ಜನ ನನ್ನ ಮಗನಿಗೆ ಹುಡುಕಾಡುತ್ತಾ ನಮ್ಮ ಓಣಿಯಲ್ಲಿ ತಿರುಗಾಡುತ್ತಿದ್ದಾಗ ನಮ್ಮ ಓಣಿಯ ಆರೀಫ ಹವಾಲ್ದಾರ ರವರ ಹೋಟಲ ಮುಂದೆ ಹೋಗಿ ನೋಡಲಾಗಿ ನನ್ನ ಮಗನು ಕೊಲೆಯಾಗಿ ಸತ್ತು ಬಿದ್ದಿದ್ದು ಕಂಡು ಬಂತು. ನನ್ನ ಮಗ ನಬಿಶಾ ಈತನಿಗೆ ನಿನ್ನೆ ದಿನಾಂಕ:22/04/2019 ರಂದು ರಾತ್ರಿ 8-30 ಪಿ,ಎಮ್.ದಿಂದ ರಾತ್ರಿ 11-30 ಪಿ,ಎಮ್.ಮದ್ಯದ ಅವಧಿಯಲ್ಲಿ ಯಾರೊ ದುಷ್ಕರ್ಮಿಗಳು ಯಾವುದೊ ಉದ್ದೇಶದಿಂದ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ಶ್ರೀ ಗಿರೀಶ ತಂದೆ ಬಸವಂತಾಯ ರವರು ದಿನಾಂಕ 21.04.2019 ರಂದು ರಾತ್ರಿ ಸಮಯದಲ್ಲಿ ನಮ್ಮ ಮನೆಯಿಂದ ಹಳೆ ವೆಂಕಟಗಿರಿ ಹೊಟೇಲನಲ್ಲಿ ಊಟ ಮಾಡಿಸುವ ಸಲುವಾಗಿ ನಾನು ಚಲಾಯಿಸುತ್ತಿರುವ ಕಾರ ನಂಬರ ಕೆಎ-28/ಪಿ-9279 ನೆದ್ದರಲ್ಲಿ ಶಿವಲಿಂಗಪ್ಪಾ ಮತ್ತು ಸಾಯಬಣ್ಣಾ ಇಬ್ಬರನ್ನು ಕೂಡಿಸಿಕೊಂಡು ಕರುಣೇಶ್ವರ ನಗರ ಕ್ರಾಸ ಮುಖಾಂತರವಾಗಿ ನಾನು ಕಾರ ಚಲಾಯಿಸಿಕೊಂಡು ಹೊಗುವಾಗ ದಾರಿ ಮದ್ಯ ಚಿತ್ತಾರಿ ಅಡ್ಡಾ ಹತ್ತೀರ ಬರುವ ಸ್ಮಶಾನ ಭೂಮಿ ಎದುರಿನ ರೋಡ ಮೇಲೆ ದುರಸ್ಥಿ ಕೆಲಸ ನಡೆದ್ದಿದ್ದರಿದ ಒಂದೆ ರೋಡಿನಿಂದ ಎಲ್ಲಾ ವಾಹನಗಳು ಹೋಗುವದು ಬರುವದು ಮಾಡುತ್ತಿದ್ದವು ನಾನು ಎಡ ರೋಡಿನಿಂದ ಕಾರ ಚಲಾಯಿಸಿಕೊಂಡು ಹೋಗುವಾಗ ರಾತ್ರಿ 9-20 ಗಂಟೆ ಸುಮಾರಿಗೆ ಕೆಟಿಎಮ್ ಡ್ಯೂಕ ನಂ ಕೆಎ-32/ಇಕೆ-6669 ನೇದ್ದರ ಸವಾರನು ತನ್ನ ಮೋಟಾರ ಸೈಕಲ ಹಿಂದುಗಡೆ ಒಬ್ಬನನ್ನು ಕೂಡಿಸಿಕೊಂಡು ಆರ.ಪಿ ಸರ್ಕಲ ರೋಡದಿಂದ ಕಡೆಯಿಂದ ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವ ಕುರಿತು ಅತಿವೆಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಕಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನಮ್ಮ ಕಾರ ಡ್ಯಾಮೇಜ್ ಮಾಡಿ ತಾವು ಗಾಯ ಹೊಂದಿದ್ದು. ಸದರ ಮೋಟಾರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂಎಉ ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.

21 April 2019

KALABURAGI DISTRICT REPORTED CRIMES

ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಭೀಮಾಶಂಕರ ತಂದೆ ನಿಜಶರಣಪ್ಪ ಇವಣಿ ಸಾ: ಮನೆ ನಂ 11-45/22A/2 ಮಾಣಿಕೇಶ್ವರಿ ಕಾಲೋನಿ ರೊಡ ಸರ್ಕಾರಿ ಆಸ್ಪತ್ರೆ ಮಾಣಿಕೇಶ್ವರಿ ಕಾಲೋನಿ ಬ್ರಹ್ಮಪೂರ ಕಲಬುರಗಿ ರವರ ಮೋಟರ ಸೈಕಲನ್ನು ಹೊಂದಿದ್ದು ವಾಹನದ ಹೆಸರು HERO SPLENDOR+ BS-IV ವಾಹನದ ಸಂಖ್ಯೆ KA 32 EQ 7373 ಚೆಸ್ಸಿ ನಂ MBLHAR080HHH55482,  ಇಂಜಿನ ನಂ HA10AGHHHH2127, ಮಾಡೆಲ 08/2017, ಕಲರ್ - BLACK, ಅಂದಾಜು ಕಿಮ್ಮತ್ತು  45,000/- ಈ ರೀತಿ ವಿವರವನ್ನೊಳಗೊಂಡ ನನ್ನ ವಾಹನವನ್ನು ಇಲ್ಲಿಯ ವರೆಗೆ ನಾನು ನನ್ನ ಕೆಲಸಗಳಿಗೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ ದಿನಾಂಕ 24.03.2019 ರಂದು ನಾನು ಮತ್ತು ನಮ್ಮ ತಂದೆ ನಿಜಶರಣಪ್ಪ ಇಬ್ಬರೂ ಕೂಡಿಕೊಂಡು ಕಿರಾಣಿ ಸಂತೆ ಖರೀಧಿಗಾಗಿ ಮಾರ್ಕೇಟದಲ್ಲಿರುವ ಕಿರಾಣಾ ಬಜಾರಕ್ಕೆ ಬಂದಿದ್ದು ಆಗ ನಾನು ನನ್ನ ಮೋಟರ ಸೈಕಲನ್ನು ಕಿರಾಣಾ ಬಜಾರದ ಹತ್ತಿರದಲ್ಲಿ ಇರುವ ಆರ್ಯ ಸಮಾಜಗಲ್ಲಿಯ ಸಂಧಿಯಲ್ಲಿ ನಿಲ್ಲಿಸಿ ಕಿರಾಣಿ ಸಂತೆ ಮಾಡಲು ಹೋಗಿದ್ದು ಇರುತ್ತದೆ ಸಂತೆ ಮಾಡಿಕೊಂಡು ಅಂದಾಜು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಮರಳಿ ನಾನು ಮೋಟರ ಸೈಕಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನನ್ನ ಮೋಟರ ಸೈಕಲ ಇರಲಿಲ್ಲ ಆಗ ನಾನು ಮತ್ತು ನಮ್ಮ ತಂದೆ ನಿಜಶರಪ್ಪ ಇಬ್ಬರೂ ಕೂಡಿಕೊಂಡು ಮಾರ್ಕೇಟದಲ್ಲಿ ಎಲ್ಲ ಕಡೆಗೆ ಹುಡುಕಾಡಲಾಗಿ ಅಲ್ಲಿ ಎಲ್ಲಿಯೂ ಇಲ್ಲದಿರುವುದನ್ನು ಕಂಡು ಈ ವಿಷಯವನ್ನು ನನ್ನ ಗೆಳೆಯರಾದ ಶಾಂತಯ್ಯ ಗುತ್ತೇದಾರ ಮತ್ತು ಸಿದ್ದಲಿಂಗ ಕುಲಕರ್ಣಿ ರವರಿಗೆ ನನ್ನ ಮೋಟರ ಸೈಕಲ ಕಳುವಾದ ಬಗ್ಗೆ ತಿಳಿಸಿದ್ದು ಆಗ ಅವರೂ ಸಹ ಅಲ್ಲಿಗೆ ಬಂದು ನನ್ನ ಮೋಟರ ಸೈಕಲ ಇಲ್ಲದಿರುವುದನ್ನು ಅವರೂ ಕೂಡಾ ಎಲ್ಲ ಕಡೆಗೆ ಹುಡುಕಾಡಿದ್ದು ಮತ್ತು ಅಲ್ಲಿಂದ ಇಲ್ಲಿಯ ವರೆಗೆ ಎಲ್ಲ ಕಡೆಗೆ ಹುಡುಕಾಡುತ್ತಲೇ ಇದ್ದು ಇಲ್ಲಿಯವರೆಗೆ ಎಲ್ಲಿಯೂ ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 :ಶ್ರೀ ಶರಣಪ್ಪಾ ರವರು ದಿನಾಂಕ 20-04-2019 ರಂದು ಶಹಾಪೂರದಲ್ಲಿ ನಮ್ಮ ಸಂಬಂದಿಕರ ಮನೆಯಲ್ಲಿ ಕಾರ್ಯಕ್ರಮ ಇರುವದರಿಂದ ನಮ್ಮ ಸಂಬಂದಿಯಾಧ ಉದಯಕುಮಾರ, ಇವರು ಚಲಾಯಿಸುತ್ತೀರುವ ಕಾರ ನಂಬರ ಕೆಎ-01/ಎಮ.ಕೆ-9022 ನೇದ್ದರಲ್ಲಿ ನಾನು ಮತ್ತು ನನ್ನ ಹೆಂಡತಿ ಭಾರತಿಬಾಯಿ ಮತ್ತು ನನ್ನ ಮಗಳಾದ ಪೂಜಾ ಹಾಗೂ ಉದಯಕುಮಾರ ಇವರ ಹೆಂಡತಿ ಮಹಾದೇವಿ  ರವರು ಕುಳಿತು ಕಲಬುರಗಿ ರಾಮ ಮಂದಿರ ಕ್ರಾಸ ಮುಖಾಂತರವಾಗಿ ಶಹಾಪೂರ ಕಡೆಗೆ ಹೋಗುವಾಗ ಫರಹತಾಬಾದ ಗ್ರಾಮ ದಾಟಿದ ನಂತರ ಉದಯಕುಮಾರ ಇವರು ಕಾರನ್ನು ಅತಿವೇಗವಾಗಿ ಮತ್ತು ರೋಡ ಎಡ ಬಲ ತಿರುಗಿಸುತ್ತಾ ಕಾರ ಚಲಾಯಿಸುತ್ತೀದ್ದರು ನಾನು ಅವರಿಗೆ ನಿಧಾನವಾಗಿ ಕಾರ ಚಲಾಯಿಸುವಂತೆ ತಿಳಿಸದರೂ ಕೂಡಾ ಆತ ಕೇಳದೆ ಅದೇ ರೀತಿಯಾಗಿ ಕಾರ ಚಲಾಯಿಸಿಕೊಂಡು ಹೋಗಿ ಮದ್ಯಾಹ್ನ 2-30 ಗಂಟೆ ಸುಮಾರಿಗೆ ಹಸನಾಪೂರ ಕ್ರಾಸಇಚೆಗೆ ರೋಡ ಮೇಲೆ ಕಾರ ಎಡ ಬಲ ತಿರುಗಿಸುತ್ತಾ ಒಮ್ಮಲೇ ಕಟ್ ಹೊಡೆದು ಬ್ರೇಕ ಹಾಕಿ ಕಾರ ಪಲ್ಟಿ ಮಾಡಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ನನ್ನ ಹೆಂಡತಿ ಭಾರತಿಬಾಯಿ ಮತ್ತು ನನ್ನ ಮಗಳು ಪೂಜಾ ಹಾಗೂ ಮಹಾದೇವಿ ಅವರಿಗೆ ಗಾಯಗೊಳಿಸಿತಾನೂ ಗಾಯ ಹೊಂದಿದ್ದು ಉದಯಕುಮಾರ ಇವರ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 20-04-2019 ರಂದು  ಶ್ರೀ ಹಣಮಂತ ತಂದೆ ರಾಮಚಂದ್ರ ಕೋಳಿ ಸಾ|| ಶೇಷಗಿರಿ ಗ್ರಾಮ ತಾ|| ಅಫಜಲಪೂರ ರವರಿಗೆ ಜೈಶಂಕರ ಮತ್ತು ವೆಂಕಟೇಶ ಅಂತಾ ಎರಡು ಜನ ಗಂಡು ಮಕ್ಕಳು ಇರುತ್ತಾರೆ. ಇಬ್ಬರದು ಮದುವೆ ಆಗಿದ್ದು, ಹೊಲ ಮನೆ ಹಂಚಿಕೆ ಮಾಡಿಕೊಂಡು ಇಬ್ಬರು ಬೇರೆ ಬೇರೆಯಾಗಿ ಹೊಲದಲ್ಲಿ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ, ನಾನು ನನ್ನ ಕಿರಿಯ ಮಗನಾದ ವೆಂಕಟೇಶನ ಹತ್ತಿರ ಇರುತ್ತೇನೆ. ನನ್ನ ಕಿರಿಯ ಮಗನಾದ ವೆಂಕಟೇಶನು ಅಕ್ಕಲಕೋಟ ತಾಲೂಕಿನ ಬ್ಯಾಗಳ್ಳಿ ಗ್ರಾಮದ ರಾಜಶೇಖರ ಕಿಣಗಿ ಈತನ ಅಕ್ಕಳಾದ ಸುನೀತಾ ಇವಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತಾನೆ. ನನ್ನ ಮಗ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರಿಂದ ರಾಜಶೇಖರ ಕಿಣಗಿ ಈತನು ನನ್ನ ಮಗನ ಮೇಲೆ ದ್ವೆಷ ಹೊಂದಿರುತ್ತಾನೆ. ದಿನಾಂಕ 16-04-2019 ರಂದು ರಾತ್ರಿ 9:00 ಗಂಟೆ ಸುಮಾರಿಗೆ ಮಣೂರ ಸೀಮಾಂತರದಲ್ಲಿರುವ ನಮ್ಮ ಹೊಲ ನಂ 106 ನೇದ್ದರಲ್ಲಿರುವ ಮನೆಯ ಮುಂದೆ ನಾನು ಮತ್ತು ನನ್ನ ಮಗ ವೆಂಕಟೇಶ ಇಬ್ಬರು ಮಾತಾಡುತ್ತಾ ಕುಳಿತ್ತಿದ್ದಾಗ 1) ರಾಜಶೇಖರ ತಂದೆ ಶರಣಪ್ಪ ಕಿಣಗಿ ಸಾ|| ಬ್ಯಾಗಳ್ಳಿ ತಾ|| ಅಕ್ಕಲಕೋಟ ಮತ್ತು ಅವನ ಗೆಳೆಯನಾದ 2) ರಾಜು ತಂದೆ ಪ್ರಭು ಸಮಗಾರ ಸಾ|| ಶೇಷಗಿರಿ ತಾ|| ಅಫಜಲಪೂರ ಇವರು ನಮ್ಮ ಹೊಲದಲ್ಲಿ ಬಂದು ರಾಜಶೇಖರ ಕಿಣಗಿ ಈತನು ನನ್ನ ಮಗ ವೆಂಕಟೇಶನಿಗೆ ಏನೊ ಬೋಸಡಿ ಮಗನೆ ನಮ್ಮ ಅಕ್ಕನ್ನೆ ಓಡಿಸಿಕೊಂಡು ಬರುತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಕೂಡಿ ನನ್ನ ಮಗನಿಗೆ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಆಗ ನಾನು ಬಿಡಿಸಲು ಹೋದಾಗ ನನ್ನನ್ನು ತಳ್ಳಿ ರಾಜಶೇಖರ ಕಿಣಗಿ ಈತನು ಅಲ್ಲೆ ಇದ್ದ ಒಂದು ಬಡಿಗೆ ತಗೆದುಕೊಂಡು ಬಂದು ಬಡಿಗೆಯಿಂದ ನನ್ನ ಮಗನ ಎಡಗಾಲಿಗೆ ಹೊಡೆದನು. ಸದರಿಯವರು ನನ್ನ ಮಗನಿಗೆ ಹೊಡೆಯುತ್ತಿದ್ದಾಗ ಅಲ್ಲೆ ಪಕ್ಕದ ಹೊಲದಲ್ಲಿದ್ದ ನನ್ನ ಹಿರಿಯ ಮಗನಾದ ಜೈಶಂಕರ ಹಾಗೂ ಅವನ ಹೆಂಡತಿ ಅಂಬಿಕಾ ಮತ್ತು ನಮ್ಮ ಬಾಜು ಮೇಟಗಿಯಲ್ಲಿ ವಾಸವಾಗಿದ್ದ ಮಹಾದೇವ ಬನಸೋಡೆ ಇವರೆಲ್ಲರೂ ಬಂದು ನನ್ನ ಮಗನಿಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ. ಆಗ ಸದರಿಯವರು ಬಡಿಗೆ ಅಲ್ಲೆ ಬಿಸಾಕಿ ಹೋಗಿರುತ್ತಾರೆ. ಸದರಿಯವರು ಹೊಡೆದದ್ದರಿಂದ ನನ್ನ ಮಗನಿಗೆ ಎಡಗಾಲಿನ ಮೊಳಕಾಲು ಕೆಳಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 April 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ನಾಗಣ್ಣಾ ತಂದೆ ಶಂಕರೆಪ್ಪಾ ಬೆಳಮಗಿ ಸಾ; ಭೀಮಳ್ಳಿ ಗ್ರಾಮ ತಾ;ಜಿ;ಕಲಬುರಗಿ  ರವರ ಎರಡನೆ ಮಗಳಾದ ಅಂಬಿಕಾ ಇವಳಿಗೆ ಕಗ್ಗನಮಡ್ಡಿ ಗ್ರಾಮದ ಮಲ್ಲಪ್ಪಾ ಮೂಲಗೆ ಇವರ ಮಗ ರವಿ ಮೂಲಗೆ ಎಂಬುವವನೊಂದಿಗೆ ಸಂಪ್ರದಾಯದಂತೆ 1ವರ್ಷ10 ತಿಂಗಳ ಹಿಂದೆ ಮದುವೆಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ 2 ತೊಲೆ ಬಂಗಾರ, 11 ಸಾವಿರ ರೂಪಾಯಿ, ಹಾಗೂ ಅಲಮಾರೆ, ಗಾದಿ ಪಲಂಗ, ಬಾಂಡೆಸಾಮಾನುಗಳು ಕೊಟ್ಟಿರುತ್ತೇವೆ ಅಲ್ಲದೆ ನನ್ನ ಮಗಳು ಅಂಬಿಕಾಳಿಗೆ ಕಿವಿಯೊಲೆ, ಕೊರಳಲ್ಲಿ ಮಂಗಳ ಸೂತ್ರದಲ್ಲಿ ಕೊಯಿಪತ್ತೆ ಮಾಡಿಸಿ ಹಾಕಿರುತ್ತೇವೆ. ಮದುವೆಯೂ ಜೇವರಗಿ ತಾಲೂಕಿನ ಸೊನ್ನ ಮಠದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಟ್ಟಿರುತ್ತೇವೆ. ಮದುವೆಯಾದ 5-6 ತಿಂಗಳು ನನ್ನ ಮಗಳಿಗೆ ಚನ್ನಾಗಿ ಇಟ್ಟುಕೊಂಡಿದ್ದು ನಂತರ ನನ್ನ ಮಗಳು ಅಂಬಿಕಾ ಇವಳ ಗಂಡ ರವಿ ಮೂಲಗೆ ,ಆತನ ತಮ್ಮ ರೇವಣಸಿದ್ದ , ಅವನ ಅಕ್ಕ ಶಿವಲೀಲಾ ಮುದ್ದಡಗಿ , ಮಾವ ರಾಜಪ್ಪಾ ಮುದ್ದಡಗಿ ಇವರೆಲ್ಲರೂ ನನ್ನ ಮಗಳು ಅಂಬಿಕಾಳಿಗೆ  ರಂಡಿ ನಿಮ್ಮ ಅಪ್ಪ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಟ್ಟಿದ್ದಾನೆ , ನೀನು ನಮ್ಮ ಮನೆಗೆ ಒಪ್ಪುವದಿಲ್ಲಾ, ಸರಿಯಾಗಿ ಕೆಲಸ ಮಾಡುವದಿಲ್ಲಾ ಅಂತಾ ಎಲ್ಲರೂ ಅವಾಚ್ಯವಾಗಿ ಬೈಯುವದು , ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಿದ್ದಾರೆ ಅಂತಾ ನನ್ನ ಮಗಳು ಫೋನ ಮಾಡಿ ವಿಷಯ ತಿಳಿಸಿದಳು, ನಂತರ ನಾನು ಮತ್ತು ನನ್ನ ಹೆಂಡತಿ ಸುಭದ್ರಬಾಯ ಇಬ್ಬರು ಕೂಡಿಕೊಂಡು 6ತಿಂಗಳ ಹಿಂದೆ ಭೀಮಳ್ಳಿಯಿಂದ ಕಗ್ಗನಮಡ್ಡಿಗೆ ಹೋಗಿ ನನ್ನ ಅಳಿಯ ರವಿ, ಆತನ ತಮ್ಮ ರೇವಣಸಿದ್ದ , ಅಕ್ಕ ಶಿವಲೀಲಾ ಮುದ್ದಡಗಿ, ಮಾವ ರಾಜಪ್ಪಾ ಮುದ್ದಡಗಿ ಇವರಿಗೆ ನಾವು ಬಡವರಿರುತ್ತೇವೆ  ನನ್ನ ಮಗಳಿಗೆ ಸರಿಯಾಗಿ ನಡೆಯಿಸಿಕೊಳ್ಳಿ ಅಂತಾ ಅವರಿಗೆ ಬೇಡಿಕೊಂಡೇವು ಆಗ ಅವರಲ್ಲರೂ ಕೂಡಿಕೊಂಡು ಮದುವೆ ಯಲ್ಲಿ ವರದಕ್ಷಿಣೆ ಕಮ್ಮಿಕೊಟ್ಟಿದ್ದು ಈಗ ವರದಕ್ಷಣಿ ರೂಪದಲ್ಲಿ ಇನ್ನೂ 1 ತೊಲೆ ಬಂಗಾರ , ಟೇಲರಿಂಗ ಮಸೀನ , ಹಾಗೂ 10,000/- ರೂ ನಗದ ಹಣ ಕೋಡಬೇಕು ಅಂತಾ ಡಿಮ್ಯಾಂಡ ಮಾಡಿದರು. ಆಗ ನಮ್ಮಗೆ ಅಷ್ಟು ಕೊಡಲು ಶಕ್ತಿ ಇಲ್ಲಾ ಆದರೆ 15 ದಿವಸ ಬಿಟ್ಟು ಊರಿಗೆ ಬಂದು ಕೋಡುತ್ತೇನೆ ಅಂತಾ ಹೇಳಿದ್ದೆ ಅಲ್ಲದೆ ಊರಿನ ಗ್ರಾಮ ಪಂಚಾಯ ಸದಸ್ಯರಾದ ಪತ್ರುಶಾ ಮತ್ತು ಕುಪೇಂದ್ರ ಧನ್ನಿ ಇವರ ಸಮಕ್ಷಮಾ ತಿಳುವಳಿಕೆ ಹೇಳಿ ಬಂದಿರುತ್ತೇವೆ. ತದನಂತರ 15 ದಿವಸಗಳ ನಂತರ 5000/- ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ನನ್ನ ಅಳಿಯ ರವಿ ಮೂಲಗೆ ಇವರ ಕೈಯಲ್ಲಿ ಕೊಟ್ಟು ಬಂಗಾರ ಮತ್ತು ಟೇಲರಿಂಗ ಮಸೀನ ಕೆಲವು ದಿವಸಗಳ ನಂತರ ಕೋಡುವದಾಗಿ ಹೇಳಿ ಬಂದಿರುತ್ತೇನೆ. ನಂತರ 1 ತಿಂಗಳ ನಂತರ ಪುನಾ; ನಮ್ಮ ಅಳಿಯ ರವಿ ಮೂಲಗೆ ಅವರ ತಮ್ಮ ರೇವಣಸಿದ್ದ, ಅಕ್ಕೆ ಶಿವಲೀಲಾ ಮಾವ ರಾಜಪ್ಪ ಮುದ್ದಡಗಿ ಇವರೆಲ್ಲರೂ ಕೂಡಿಕೊಂಡು ನನ್ನ ಮಗಳು ಅಂಬಿಕಾಳಿಗೆ  ರಂಡಿ ನಿಮ್ಮ ಅಪ್ಪ 1 ತೊಲೆ ಬಂಗಾರ , ಟೇಲರಿಂಗ ಮಸೀನ ತಂದು ಕೋಡುತ್ತೇನೆ ಅಂತಾ ಸುಳ್ಳು ಹೇಳಿ ಹೋಗಿದ್ದು ಇನ್ನೂ ತಂದು ಕೊಟ್ಟಿಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡಾ ತವರು ಮನಗೆ ಹೋಗು ಅಂತಾ ಮನೆಯಲ್ಲಿ ಹೊಡೆಬಡಿ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೊಟಿದ್ದಾಗ ನನ್ನ ಮಗಳು ಅಳುತ್ತಾ ನಮಗೆ ಫೋನ ಮಾಡಿ ವಿಷಯ ತಿಳಿಸಿದಳು ಆಗ ನಾನು ಭೀಮಳ್ಳಿಯಿಂದ ಕಗ್ಗನ ಮಡ್ಡಿ ಗ್ರಾಮಕ್ಕೆ ಬಂದು ಎಲ್ಲರಿಗೂ ತಿಳಿಹೇಳಿದ್ದು ಅಲ್ಲದೆ ಕಗ್ಗನಮಡ್ಡಿ ಗ್ರಾಮದ ಗ್ರಾಮಪಂಚಾಯತ ಸದಸ್ಯರಿಗೆ ಹೇಳಿಕೇಳಿ ಸರಿಯಾಗಿ ಇಟ್ಟುಕೊಳ್ಳಿರಿ ಅಂತಾ ಹೇಳಿ ಬಂದಿರುತ್ತೇನೆ. ದಿನಾಂಕ. ದಿನಾಂಕ. 17-4-2019 ರುಂದು 11-00 ಎ.ಎಂ.ದಿಂದ 1-00 ಪಿ.ಎಂ. ಮದ್ಯದಲಿ ಕಗ್ಗನಮಡ್ಡಿ ಗ್ರಾಮದ ಮನೆಯಲ್ಲಿ ನನ್ನ ಮಗಳು ಅಂಬಿಕಾಳಿಗೆ ಇನ್ನೂ 1 ತೊಲೆ ಬಂಗಾರ , ಟೇಲರ ಮಸೀನನ್ನು ವರದಕ್ಷಿಣೆ ರೂಪದಲ್ಲಿ ಡಿಮ್ಯಾಂಡ ಮಾಡಿದನ್ನು ಕೊಡದಿದ್ದಕ್ಕೆ  ನನ್ನ ಮಗಳ ಗಂಡ ರವಿ ಮೂಲಗೆ, ಮೈದುನ ರೇವಣಸಿದ್ದ ಮೂಲಗೆ ಇವರಿಬ್ಬರೂ ಕೂಡಿಕೊಂಡು ಮನೆಯಲ್ಲಿ ಅಂಬಿಕಾಳ ಕುತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದು ,ಇದಕ್ಕೆ ಅವರ ಅಕ್ಕ ಶಿವಲಿಲ್ಲಾ ಮುದ್ದಡಗಿ, ಮಾವ ರಾಜಪ್ಪಾ ಮುದ್ದಡಗಿ, ಕಲ್ಯಾಣಿ ಮುದ್ದಡಗಿ ಅವರಿಗೆ ಪರೋಕ್ಷವಾಗಿ ಕುಮ್ಮಕು ನೀಡಿರುತ್ತಾರೆ ಕಾರಣಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 17.04.2019 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಖಾದ್ರಿ ಚೌಕ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಶಿವಯೋಗಿ ಎ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಾದ್ರಿ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಖಾದ್ರಿ ಚೌಕದಲ್ಲಿರುವ ರಹೇಮತ ಹೊಟೇಲ ಮುಂದೆ ಇರುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಮಹ್ಮದ ರಿಯಾಜ ತಂದೆ ಅಬ್ದುಲ ಕರೀಮ ಮುಲ್ಲಾ ಸಾ: ಕಡಗಂಚಿ ಮಠದ ಹಿಂದೆ ಡಕ್ಕನ ಕಾಲೋನಿ ಖಾದ್ರಿ ಚೌಕ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1890 ರೂ  1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ-17/04/2019 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಕಲಬುರಗಿ ನಾಗನಹಳ್ಳಿ ರಿಂಗ್ ರೋಡನಲ್ಲಿ ಒಬ್ಬ ಅಪರಿಚಿತ ಮನುಷ್ಯ ವ: 28 ರಿಂದ 30 ವರ್ಷದವನು ನಡೆದುಕೊಂಡು ರೊಡ ದಾಟುತ್ತಿರುವಾಗ ರಾಮ ಮಂದಿರ ರಿಂಗ್ ರೋಡ ಕಡೆಯಿಂದ ಯಾವುದೋ ಒಂದು ಟಿಪ್ಪರ್ ವಾಹನದ ಚಾಲಕನು ತನ್ನ ಟಿಪ್ಪ ರ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪರಿಚಿತ ಮನುಷ್ಯನಿಗೆ ಭಾರಿ ರಕ್ತಗಾಯಗೊಳಿಸಿ ದ್ದರಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಟಿಪ್ಪರ ಚಾಲಕ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ದ್ದು ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳುಬೇಕೆಂದು ಅಂತಾ ಶ್ರೀ ಚಂದ್ರಶೇಖರ ತಂದೆ ನಾಗೇಂದ್ರಪ್ಪಾ ಮಹಾಗಾಂವಕರ ಸಾ : ನಾಗನಹಳ್ಳಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 :ಶ್ರೀ  ಸಂತೋಷ ತಂದೆ ಸಿದ್ರಾಮಪ್ಪಾ ರವರು ದಿನಾಂಕ 17-04-2019 ರಂದು ರಾತ್ರಿ 8-15 ಗಂಟೆ ಸುಮಾರಿಗೆ ನಾನು ನೆಹರು ಗಂಜನಲ್ಲಿರುವಾಗ ನನ್ನ ಗೆಳೆಯ ವಿರೇಶ ತಂದೆ ನಾಗರಾಜ ವಿಶ್ವಕರ್ಮ ಇತನು ವಾಡಿ ಜಂಕ್ಷನದಿಂದ ನನ್ನ ಹತ್ತೀರ ಬಂದನು ಇಬ್ಬರೂ ಸ್ವಲ್ಪ ಹೊತ್ತು ಮಾತನಾಡಿ ಆತನು ವಾಡಿಗೆ ಹೋಗುವವನು ಇದ್ದುದ್ದರಿಂದ ನಾನು ಟೌನಹಾಲ ಕ್ರಾಸ ಹತ್ತೀರ ಬಿಟ್ಟು ನಾನು ಮನೆಗೆ ಹೋಗಬೆಕು ಅಂತಾ ನಾನು ಚಲಾಯಿಸುತ್ತೀರುವ ನನ್ನ ಮೋಟಾರ ಸೈಕಲ ನಂ ಕೆಎ-32/ಇಇ-5618 ನೇದ್ದರ ಹಿಂದುಗಡೆ ಕೂಡಿಸಿಕೊಂಡು ಸುಪರ ಮಾರ್ಕೆಟ ಜಗತ ಸರ್ಕಲ ಮುಖಾಂತರ ಟೌನಹಾಲ ಕ್ರಾಸ ಕಡೆಗೆ ಹೋಗುವಾಗ ಮೋಟಾರ ಸೈಕಲ ನಂ ಕೆಎ-32/ಇಆರ್-2681 ನೇದ್ದರ ಸವಾರ ಎಮ್.ಡಿ ಸಮೀರ ಇತನು ತನ್ನ ಮೋಟಾರ ಸೈಕಲ ಹಿಂದುಗಡೆ ಇಮ್ರಾನ ಮತ್ತು ಶೇಖ ಆರೀಫ ಇಬ್ಬರನ್ನು ಕೂಡಿಸಿಕೊಂಡು ಜಗತ ಸರ್ಕಲ ಕಡೆಯಿಂದ ಎಸ.ವಿಪಿ ಸರ್ಕಲ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗಾರ್ಡನ ಎದುರುಗಡೆ ಬರುವ ಶೌಚಾಲಯ ಮತ್ತು 4ಎಮ್ ಕಾರ ಡೆಕೊರೆಟರ್ ಮದ್ಯದ ರೋಡ ಮೇಲೆ ಗಾರ್ಡನ ಕಡೆಯಿಂದ ನಡೆದುಕೊಂಡು ರಸ್ತೆ ದಾಟುತ್ತೀರುವ ಬಸವರಾಜ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಹಾಗೆ ಎಡಗಡೆ ಬಂದು ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಮತ್ತು ವಿರೇಶ ರವರಿಗೆ ಗಾಯಗೊಳಿಸಿ ಬಸವರಾಜ ಇವರಿಗೆ ಭಾರಿಗಾಯಗೊಳಿಸಿ ತಾನೂ ಗಾಯ ಹೊಂದಿದ್ದು ಮೋಟಾರ ಸೈಕಲ ಸವಾರ ಎಮ್.ಡಿ ಸಮೀರ ಇತನ ಮೇಲೆ ಕಾನುನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 02 : ಶ್ರೀಶೈಲ್ ತಂದೆ ಬೈಲಪ್ಪ ಈತನು ತನ್ನ ಮೋಟಾರ ಸೈಕಲ ಚೇಸ್ಸಿ ನಂ: MBLHA10ERA9A03389 ನೇದ್ದನ್ನು ಆಫಜಲಪೂರ ರೋಡ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶರಣಸಿರಸಗಿ ಗ್ರಾಮದ  ನಾಗೂರ ಗುಡಿ ಹತ್ತಿರ ರೋಡಿನ ಮೇಲೆ ಹೋಗುತ್ತಿರುವ ಶ್ರೀ.ಮಲ್ಲಿಕಾರ್ಜುನ ತಂದೆ ಅಣ್ಣರಾಯ ಉಪಾಂಳ ಸಾ:ಶರಣಸಿರಸಗಿ  ತಾ:ಜಿ: ಕಲಬುರಗಿ  ರವರ ಆಕಳಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಮೋಟಾರ ಸೈಕಲ  ಸಮೇತ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಬಲಕಿವಿಯಿಂದ, ಬಾಯಿಂದ. ಮೂಗಿನಿಂದ. ರಕ್ತಸ್ರಾವ ಆಗಿ ಎದೆಯ ಎಡಪಕ್ಕೆಗೆ ಭಾರಿ ರಕ್ತಗಾಯ, ಬಾಯಿಗೆ ಭಾರಿ ಪೆಟ್ಟಾಗಿ ಕೆಳಗಿನ ಮೂರು ಹಲ್ಲುಗಳು ಮುರಿದು ನಾಲಿಗೆ  ಕಚ್ಚಿದ್ದು ಇರುತ್ತದೆ. ಆಕಳು ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಸತ್ತಿರುತ್ತದೆ. ಶ್ರೀಶೈಲ ಈತನು ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಉಪಚಾರ ಹೊಂದುತ್ತಾ ಉಪಚಾರಿ ಫಲಕಾರಿಯಾಗದೆ ದಿನಾಂಕ 18/04/2019 ರಂದು 2-40 ಎ.ಎಂ ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು  ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀ ಸಾಗರ ಹಾಗೂ ನಮ್ಮ ಸಂಬಂಧಿಕಳಾದ ಕುಮಾರಿ ನಿವೇದಿತಾ ತಂದೆ ಶರಣಪ್ಪಾ ಕೊಡದೂರ ಇಬ್ಬರು ಕಲಬುರಗಿ ಯಿಂದ ನನ್ನ ಹೊಸ ಮೊಟಾರ್ ಸೈಕಲ್ ನಂ ಇನ್ನು ಬಿದ್ದಿರುವುದಿಲ್ಲ ಅದರ ಮೇಲೆ ಚಿಂಚನಸೂರ @ ಚಿಂಚೂರ ಗ್ರಾಮದ ಮಾಹಾಪೂರತಾಯಿ ದೇವಸ್ಥಾನಕ್ಕೆ ಹೋಗಿ ದರ್ಶನಮಾಡಿಕೊಂಡು ಅಂದಾಜು ಮಧ್ಯಾಹ್ನ 1-30 ಪಿ.ಎಂ ಸುಮಾರಿಗೆ ಮರಳಿ ಕಲಬುರಗಿ ಕಡೆಗೆ ಹೊರಡುಬೇಕು ಅಂತಾ ದೇವಸ್ಥಾನದ ಹತ್ತಿರ ನಿಲ್ಲಿಸಿದ ಮೊಟಾರ್ ಸೈಕಲ್ ಮೇಲೆ ನಾವಿಬ್ಬರು ಏರಿ ಕುಳಿತಾಗ ಅಲ್ಲಿಯೇ ಹತ್ತಿರದಲ್ಲಿ ನಿಲ್ಲಿಸಿದ. ಕ್ರೂಜರ್ ವಾಹನ ನಂಬರ್ ಕೆಎ17-5175 ನೇದ್ದರ ಚಾಲಕನು ತನ್ನ ಕ್ರೂಜರ್ ವಾಹನ ಚಾಲುಮಾಡಿ ಒಮ್ಮಲೇ ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತಂಹ ಮೊಟಾರ್ ಸೈಕಲಗೆ ಜೋರಾಗಿ ಹಿಂದಿನಿಂದ ಡಿಕ್ಕಿಹೊಡೆದು ಅಪಘಾತ ಪಡಿಸಿದನು ಆಗ ನಾವಿಬ್ಬರು ಕೆಳಗೆ ಬಿದ್ದಾಗ ನಮ್ಮ ಮೇಲೆ ಕ್ರೂಜರ್ ಹೈಯ್ದು ನನಗೆ ಬಲಗಾಲ ಮೊಳಕಾಲಿಗೆ ಭಾರಿರಕ್ತಗಾಯ ಮತ್ತು ಗುಪ್ತಗಾಯ ಬಲಗೈ ಬೆರಳುಗಳಿಗೆ ರಕ್ತಗಾಯ ಸೊಂಟಕ್ಕೆ ಭಾರಿ ಗುಪ್ತಗಾಯ ನೇವಿದಿತ ಇವಳಿಗೆ ಎಡಗಣ್ಣಿ ಪಕ್ಕ ಭಾರಿ ರಕ್ತಗಾಯ ಬಲಗಭಾಗದ ಹಣೆಗೆ ಬಾರಿ ರಕ್ತಗಾಯ ಸೊಂಡಕ್ಕೆ ಭಾರಿ ಗುಪ್ತಗಾಯಿ ಬಲಗಾಲಿಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯಳಾಗಿ ನಾವಿಬ್ಬರು ಒದ್ದಾಡುತ್ತಿದ್ದಾಗ ದೇವಸ್ಥಾನ ಹತ್ತಿರ ಇದ್ದ ಕೆಲವು ಜನರು ಘಟನೆಯನ್ನು ನೋಡಿ ನಮಗೆ ಎತ್ತಿ ಕ್ರೂಜರ್ ನಂ ಕೆಎ17-5175 ನೇದ್ದರಲ್ಲಿ ಹಾಕಿ ಕಳಿಸಿರುತ್ತಾರೆ. ಅದರ ಚಾಲಕನು ನಮಗೆ ಕಾಮರೆಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಆಸ್ಪತ್ರೆಯಿಂದ ತನ್ನ ವಾಹನದೊಂದಿಗೆ ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀಮತಿ ರೂಬಿನಾಬೇಗಂ ಗಂಡ ಮಹೇಬೂಬಶಾ ಮಕಾಂದಾರ, ಸಾ:ರೇವೂರ(ಬಿ), ತಾ:ಅಫಜಲಪೂರ ರವರಗೆ 10 ವರ್ಷಗಳ ಹಿಂದೆ ರೇವೂರ(ಬಿ) ಗ್ರಾಮದ ಮಹೇಬೂಬಶಾ ತಂದೆ ಖಾಸಿಂ ಶಾ ಮಕಾಂದಾರ ಇವನೊಂದಿಗೆ ಮದುವೆ  ಆಗಿದ್ದು, ನನ್ನ ತವರು ಮನೆ ನರೋಣಾ ಗ್ರಾಮ ಇರುತ್ತದೆ. ನಾನು ನನ್ನ 5ನೇ ಬಾಣಂತನದ ನಿಮಿತ್ಯ 3ತಿಂಗಳ ಹಿಂದೆ ನನ್ನ ಮಕ್ಕಳಾದ 1)ತಬಸುಮ್, 2)ಆಲಿಯಾ, 3)ಅಂಜುಮ್, 4)ಖಾದರಬಿ ಇವರೊಂದಿಗೆ ತವರು ಮನೆ ನರೋಣಾ ಗ್ರಾಮಕ್ಕೆ ಬಂದಿರುತ್ತೇನೆ. ಕಳೆದ ಒಂದುವರೆ ತಿಂಗಳ ಹಿಂದೆ ನನಗೆ 5ನೇ ಹೆಣ್ಣುಮಗು ಜನಿಸಿರುತ್ತದೆ. ದಿನಾಂಕ:16/04/2019 ರಂದು ನನ್ನ 3ನೇ ಮಗಳಾದ ಅಂಜುಮ್ ವಯಾ: 5ವರ್ಷ, ಇವಳು ಸಾಯಂಕಾಲ 4-00 ಗಂಟೆ ಸುಮಾರಿಗೆ ನಮ್ಮ ಕೇರಿಯಾ ಇತರೆ ಮಕ್ಕಳೊಂದಿಗೆ ನರೋಣಾ ಗ್ರಾಮದ ಮಸೂತಿಗೆ ಅರೇಬಿಕ್ ಓದಲು ಹೋಗಿರುತ್ತಾಳೆ.  ಸಾಯಂಕಾಲ 5-40ರ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಸಂಬಂಧಿಕನಾದ ಸೈಯದ ಖಾಸಿಂ ತಂದೆ ಇಸ್ಮಾಯಿಲಸಾಬ ಇನಾಮದಾರ ಇವರು ನಮ್ಮ ಮನೆಗೆ ಬಂದು ಬಸ್ಟ್ಯಾಂಡ್ ಹತ್ತಿರ ಅಂಜುಂ ಇವಳಿಗೆ ಜೀಪ್ ಅಪಘಾತ ವಾಗಿರುತ್ತದೆ ಅಂತಾ ಹೇಳಿದಾಗ ಗಾಬರಿಯಾಗಿ ಮನೆಯಿಂದ ನಾನು ನನ್ನ ತಾಯಿಯಾದ ಶಾಬಿರಾಬಿ ಗಂಡ ಗುಲಾಬಸಾಬ ಇನಾಮದಾರ, ತಮ್ಮನಾದ ಸೈಯದ್ ಫಾರುಖ್ ತಂದೆ ಗುಲಾಬಸಾಬ ಇನಾಮದಾರ ನಾವೆಲ್ಲರೂ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನರೋಣಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಡಾಂಬರ್ ರೋಡಿನ ಮೇಲೆ ನನ್ನ ಮಗಳಾದ ಅಂಜುಮ್ ಇವಳಿಗೆ ಜೀಪ್ ಅಪಘಾತ ಪಡಿಸಿದ್ದರಿಂದ ಅವಳಿಗೆ ಸದರಿ ಅಪಘಾದಲ್ಲಿ ಬಲಗಾಲಿಗೆ ಭಾರಿಗುಪ್ತಗಾಯ ಹಾಗೂ ಮರ್ಮಾಂಗಕ್ಕೆ ಭಾರಿ ರಕ್ತಗಾಯವಾಗಿದ್ದು, ಇದರ ಬಗ್ಗೆ ನನ್ನ ಸಂಬಂಧಿಕ ಸೈಯದ್ ಖಾಸಿಂ ಇವರಿಗೆ ವಿಚಾರಿಸಿದಾಗ ಸಾಯಂಕಾಲ 5-30ಕ್ಕೆ ನಾನು ನನ್ನ ಪಂಚರ ಅಂಗಡಿ ಮುಂದೆ ನಿಂತಾಗ ಜೀಪ್ ನಂ: ಕೆಎ23-ಎಂ4217 ನೇದ್ದರ ಚಾಲಕನಾದ ಕ್ಷೇಮಲಿಂಗಯ್ಯ ತಂದೆ ಬಸಪುರಯ್ಯ ಬಾಳಿ ಈತನು ತನ್ನ ಜೀಪನ್ನು ಕಲಬುರಗಿ ಕಡೆಯಿಂದ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತ್ತೆಯ ಪಕ್ಕ ಹೊರಟಿದ್ದ ಅಂಜುಮ್ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಸದರಿ ಜೀಪ್ ಸ್ಥಳದಲ್ಲಿಯೇ ಇದ್ದು ಅದರ ನಂಬರ್ ಪರಿಶೀಲಿಸಲಾಗಿ  ಕೆಎ23-ಎಂ4217 ಇರುತ್ತದೆ. ಗಂಭೀರಗಾಯ ಹೊಂದಿದ ನನ್ನ ಮಗಳಿಗೆ ಸೈಯದ ಖಾಸಿಂ ತಂದೆ ಇಸ್ಮಾಯಿಲಸಾಬ ಇನಾಮದಾರ, ಸಲೀಮಾಬಿ ಗಂಡ ಸೈಯದ್ ಖಾಸಿಂ ಇನಾಮದಾರ, ಫಾತಿಮಾಬಿ ಗಂಡ ಸೈಯದ್ ಸಲಿಂ ಇನಾಮದಾರ ಇವರೆಲ್ಲರೂ ಸೇರಿ 108 ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಒಯ್ದು ಹೆಚ್ಚಿನ ಉಪಚಾರಕ್ಕಾಗಿ ಸೋಲಾಪುರದ ಅಶ್ವನಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅವಮಾನ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದಿಲೀಪ ತಂದೆ ಶ್ರೀನಿವಾಸ ನಾಯಕ ಸಾ: ಸ್ಟೇಷನ ತಾಂಡಾ ಶಹಾಬಾದ ರವರು ದಿನಾಂಕ: 18/04/2019 ರಂದು ನಾನು ಮುಂಜಾನೆ ಮನೆಯಲ್ಲಿದ್ದಾಗ ನನಗೆ ಗೊತ್ತಾಗಿದ್ದೆನೆಂದರೆ ಭಂಕೂರ ಕ್ರಾಸ ಹತ್ತಿರ ನಮ್ಮ ಬಂಜಾರ ಸಮಾಜದ ಮುಖಂಡರಾದ ಶ್ರೀ ಬಾಬುರಾವ ಚವ್ಹಾಣ ಮಾಜಿ ಸಚಿವರು 2) ಸುಭಾಷ ರಾಠೋಡ 3) ಅರ್ ಬಿ ರವಿ ಚವ್ಹಾಣ 4) ನಾಮದೇವ ರಾಠೋಡ ಪೇಠಶಿರೂರ ತಾಲ್ಲೂಕಾ ಪಂಚಾಯತ ಸದಸ್ಯರು ರವರುಗಳ ಭಾವಚಿತ್ರ ಮತ್ತು ಹೆಸರುಗಳು ಇರುವ 3 X 5  ಅಳತೆಯ ಪ್ರೇಕ್ಸ ಬೋರ್ಡನಲ್ಲಿ ಸಮಜಾದ ದ್ರೋಹಿಗಳು ದುಡ್ಡಿಗಾಗಿ ಸಮಾಜದ ತೊರೆದ ನಾಲಾಯಕರು ( ಕಳ್ಳರು ) ಅಂತಾ ಬರೆದು ಭಂಕೂರ ಕ್ರಾಸ ಹತ್ತಿರ ಇರುವ ವಿದ್ಯುತ್ ಕಂಬಕ್ಕೆ ಅಳವಡಿಸಿ ಅದಕ್ಕೆ ಚಪ್ಪಲಿಯ ಹಾರ ಮಾಡಿ ಹಾಕಿ ನಮ್ಮ ಸಮಾಜಕ್ಕೆ ಅವಮಾನ ಮಾಡಿರುತ್ತಾರೆ ಅಂತಾ ಗೊತ್ತಾಗಿ ನಾನು ಮತ್ತು ವಿಜಯ ರಾಠೋಡ  ಹಾಗೂ ಸುರೇಶ ಮೆಂಗನ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜವಿದ್ದು ಯಾರೋ ದುಷ್ಕರ್ಮಿಗಳು ದಿನಾಂಕ: 17/04/2019 ರಂದು ರಾತ್ರಿ ವೇಳೆಯಲ್ಲಿ ನಮ್ಮ ಸಮಾಜದ ಮುಖಂಡರ ಪೋಟೊ ಇರುವ ಪ್ಲೇಕ್ಸ ಹಾಕಿ ಅದಕ್ಕೆ ಚಪ್ಪಲಿಯ ಹಾರ ಹಾಕಿ ಅವಮಾನ ಮಾಡಿ ಚುನಾವಣೆ ಸಮಯದಲ್ಲಿ ನಮ್ಮ ಬಂಜಾರ ಸಮಾಜದ ಮೇಲಿನ  ದ್ವೇಷದಿಂದ  ನಮ್ಮ ಸಮಜಾಕ್ಕೆ ಅವಮಾನ ಮಾಡಿರುತ್ತಾರೆ ಕಾರಣ ಅವರ ವಿರುದ್ದ  ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.