POLICE BHAVAN KALABURAGI

POLICE BHAVAN KALABURAGI

12 April 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ-10/04/2019 ರಂದು ಬೆಳಿಗ್ಗೆ ಶಹಬಾದ ರಿಂಗ್ ರೋಡ ಹತ್ತಿರದ ವಿಜಯಕುಮಾರ ಪವಾರ ಇವರ ಪೆಟ್ರೋಲ ಬಂಕ್ ಹತ್ತಿರ ನಿಲ್ಲಿಸಿದ ಎನ್.ಇ.ಕೆ.ಆರ್.ಟಿ ಸಿ ಬಸ್ ನಂ ಕೆಎ-32 ಎಫ್-1780 ನೇದ್ದ ರ ಮುಂದಿನ ಭಾಗಿಲಿನಿಂದ ಶ್ರೀ ಶಿವಲಿಂಗಪ್ಪಾ ತಂದೆ ಬಸಣ್ಣ ಮಂಗಲಗಿ ಸಾ ಬಸವೇಶ್ವರ ಚೌಕ ಹತ್ತಿರ ಹಳೆ ಶಾಹಾಬಾದ  ರವರ ಮಗನಾದ ಬಸವರಾಜ ವ: 17 ವರ್ಷ ಈತನು  ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಾಗ ಬಸ್ ಚಾಲಕ ಅನೀಲ ಈತನು ಅದನ್ನು ಗಮನಿಸದೆ ನಿಸ್ಕಳಜಿಯಿಂದ ತನ್ನ ಬಸನ್ನು ಅತಿವೇಗವಾಗಿ ಮುಂದಕ್ಕೆ ಚಲಾಯಿಸಿ ಫಿರ್ಯಾದಿ ಮಗನಿಗೆ ಕೆಳಗೆ ಬಿಳಿಸಿ ಬಸ್ಸಿನ ಹಿಂದಿನ ಟೈರ್ ಆತನ ತೆಲೆ ಮೇಲಿಂದ ಹಾಯಿಸಿ ತೆಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯಗೊಳಿಸಿದರಿಂದ ತೆಲೆಯಿಂದ ಮೆದಳು ಹೊರಗೆ ಬಂದು ಬಸವರಾಜ ಈತನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಎನ್.ಇ.ಕೆ.ಆರ್.ಟಿ.ಸಿ ಬಸ್ ಚಾಲಕ ಅನೀಲ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ 2  ರಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ:11/04/2019 ರಂದು ಶ್ರೀ ವಿಠಲ ತಂದೆ ಶಾಮನಾಯ್ಕ ಸಾ : ವಿ. ಕೆ. ಸಲಗರ  ತಾಂಡಾಕ್ಕೆ ಹೊಂದಿಕೊಂಡೆ ನಮ್ಮ ಹೊಲ ಇರುತ್ತದೆ. ನಾನು ದಿನಾಂಕ: 10/04/2019 ರಂದು ಬೆಳಿಗ್ಗೆ ನಮ್ಮ ಮನೆಯಿಂದ ಹೊಲದ ಕಡೆಗೆ ಹೋದಾಗ ನಮ್ಮ ಬಂದಾರಿ ಮೇಲಿರುವ ಬಾರಿಗಿಡವನ್ನು ಯಾರೋ ಕಡಿದಿದ್ದು, ಕಂಡು ಬಂದಿರುತ್ತದೆ. ನಾನು ಬಂದಾರಿ ಹತ್ತಿರ ಇರುವ ಮನೆಯವನಾದ ದಿಲೀಪ್ ತಂದೆ ಸುಭಾಷ ಚಿನ್ನಿರೋಢ ಈತನಿಗೆ ವಿಚಾರಿಸುತ್ತ ನಿಂತಾಗ ನಮ್ಮ ಬಾಜು ಹೊಲದವನಾದ 1)ಸುನೀಲ್ @ ಸೋಮ್ಯಾ ತಂದೆ ಕಾನು ಚಿನ್ನಿರಾಠೋಡ್ ಹಾಗೂ ಅವನ ತಮ್ಮನಾದ 2)ಸತೀಶ ತಂದೆ ಕಾನು ಚಿನ್ನಿರಾಠೋಡ್ 3)ಶಾರದಾಬಾಯಿ ಗಂಡ ಕಾನು ಚಿನ್ನಿರಾಠೋಡ್ ಇವರು ಅಲ್ಲಿಗೆ ಬಂದರು ನಾನು ದಿಲೀಪನ ಜೊತೆ ಮಾತನಾಡುತ್ತಿರುವುದನ್ನು ಕೇಳಿ ನನಗೆ ಸುನೀಲ @ ಸೋಮ್ಯಾ ಈತನು ಏ ರಂಡಿ ಮಗನೆ ಗಿಡ ಕಡಿದರೆ ನಿನಗೇನಾಯಿತು ಅಂತಾ ಬೈದನು ಆಗ ನಾನು ಹಾಗೆಲ್ಲಾ ಬೈಬೇಡಾ ಅಂತಾ ಹೇಳಿದಕ್ಕೆ ಸದರಿಯವನು ನನಗೆ ಟೆಕ್ಕಿಯಲ್ಲಿ ತಗೆದಕೊಂಡು ಎತ್ತಿ ನೆಲಕ್ಕೆ ಬಡಿದನು ಸತೀಶನು ಕಲ್ಲಿನಿಂದ ಬೆನ್ನಮೇಲೆ ಹೊಡೆದನು ಶಾರದಾಬಾಯಿ ಇವಳು ಈ ಹಾಟ್ಯಾ ಭಾಡಕೋಗ ಬಿಡಬ್ಯಾಡರಿ ಹೊಡಿರಿ ಅಂತಾ ಬೈದಳು ಈ ಘಟನೆಯನ್ನು ದಿಲೀಪನು ನೋಡಿ ಬಿಡಿಸದನು ನನಗೆ ನನ್ನ ಹೆಂಡತಿ ಸೋನಾಬಾಯಿ ಮಗಳಾದ ಪೇಮಾಬಾಯಿ ಗಂಡ ಚಂದು ಜಾದವ್ ಇವರು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನನಗೆ ಹಣೆಗೆ ರಕ್ತಗಾಯ ವಾಗಿರುತ್ತದೆ. ಕಾರಣ ನನಗೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:11/04/2019 ರಂದು ಶ್ರೀ ದಾಮು ತಂದೆ ರಾಮು ರಾಠೋಡ ಸಾ : ಮಡಕಿ ತಾಂಡಾ ರವರ ಹೆಂಡತಿಯ ತಮ್ಮನಾದ ರುಪೇಶ ತಂದೆ ನಾಮದೇವ ಪವಾರ ಸಾ:ಕಡಗಂಚಿಗತಾಂಡಾ ಈತನಿಗೆ ಅದೇ ಗ್ರಾಮದ ಸವೀತಾ ಇವಳೊಂದಿಗೆ ಸುಮಾರು 18 ವರ್ಷಗಳ ಹಿಂದೆ ಮದುವೆಯಾಗಿ ನಾಲ್ಕು ಮಕ್ಕಳಿರುತ್ತವೆ. ಸವಿತಾ ಇವಳು ಮದುವೆ ಆದಾಗನಿಂದ ರೂಪೇಶನೊಂದಿಗೆ ಆಗಾಗ ಜಗಳ ತಗೆದು ತನ್ನ ತವರು ಮನೆಗೆ ಹೋಗುವುದು ಮತ್ತೆ ಸ್ವಲ್ಪ ದಿನಗಳ ನಂತರ ಗಂಡನೊಂದಿಗೆ ಬರುವುದು ಮಾಡುತ್ತಾ ಬಂದಿರುತ್ತಳೆ ಕಳೆದ ನಾಲ್ಕು ತಿಂಗಳ ಹಿಂದೆ ಮತ್ತೆ ಜಗಳ ಮಾಡಿ ತನ್ನ ತವರು ಮನೆಯಲ್ಲಿ ಹೋಗಿ ಕುಳಿತಿರುತ್ತಾಳೆ. ರೂಪೇಶನು ಹೊಟ್ಟೆಪಾಡಿಗಾಗಿ ಮುಂಬೈ ನಗರದಲ್ಲಿ ವಾಸಿಸುತ್ತಿದ್ದನು ಅವನಿಗೆ ಅಡುಗೆ ಮಾಡಲು ಯಾರು ಇಲ್ಲದ ಕಾರಣ ಹೇಗಾದರು ಮಾಡಿ ತನ್ನ ಹೆಂಡತಿಗೆ ತನ್ನ ಸಂಗಡ ಕರೆದುಕೊಂಡು ಹೋಗಬೇಕು ಅಂತಾ ಸುಮರು 2ದಿವಸಗಳ ಹಿಂದೆ ಮಡಕಿತಾಂಡಾಕ್ಕೆ ಬಂದಿರುತ್ತಾನೆ. ಹೀಗಾಗಿ ದಿನಾಂಕ:10/04/2019 ರಂದು ಮಡಿಕಿತಾಂಡಾದಿಂದ ನಾನು ರುಪೇಶ ಶಾಂತಾಬಾಯಿ ಗಂಡ ರೇಖು ರಾಠೋಡ್, ಬಾಬು ತಂದೆ ಅಂಬ್ರು ರಾಠೋಡ್, ವಿಕ್ಕಿ ತಂದೆ ರೇಖು ರಾಠೋಡ್ ಎಲ್ಲರೂ ಸೇರಿ ಕಡಗಂಚಿ ತಾಂಡಾಕ್ಕೆ ಬಂದು ಸವಿತಾ ಇವಳಿಗೆ ಮನವಲಿಸಿ ಗಂಡ ಹೆಂಡತಿ ಒಂದು ಮಾಡಲು ಅಂತಾ ಬಂದು ಕಡಗಂಚಿ ತಾಂಡಾದ ನಾಯಕರಾದ ಲಕ್ಷ್ಮಣ ತಂದೆ ಸೂರ್ಯ ಚವ್ಹಾಣ್ ಇವರಿಗೆ ತಾಂಡಾದ ದುಬೇಶ ತಂದೆ ರೇವು ಚವ್ಹಾಣ್ ಇವರ ಹೊಟೆಲ್ ಮುಂದೆ ಕರೆಸಿ ನ್ಯಾಯಾ ಪಂಚಾಯಿತಿ ಮಾಡಿ ಸವಿತಾ ಹಾಗೂ ಅವಳ ಮನೆಯವರಿಗೆ ತಿಳುವಳಿಕೆ ಹೇಳಲು ಕೇಳಿಕೊಳ್ಳುತ್ತಿದ್ದಾಗ, 1)ನಾಮದೇವ ತಂದೆ ಪಾಂಡು ರಾಠೋಡ್, 2)ರವಿ ತಂದೆ ನಾಮದೇವ ರಾಠೋಡ್, 3)ಮಂಗಲಾ ತಂದೆ ಪಾಂಡು ರಾಠೊಡ್, 4)ರಾಜೇಶ ತಂದೆ ನಾಮದೇವ ರಾಠೋಡ್, 5)ಸಾವನ ತಂದೆ ನಾಮದೇವ ರಾಠೋಡ್, 6)ಸುಮ್ಮಿ @ ಸುನೀತಾ ಗಂಡ ನಾಮದೇವ ರಾಠೋಡ್, 7)ಸವಿತಾ ಗಂಡ ರೂಪೇಶ ಪವಾರ ಇವರು ನಾವು ಕಡಗಂಚಿ ಕಡಗಂಚಿ ತಾಂಡಾಕ್ಕೆ ಬಂದ ವಿಚಾರ ತಿಳಿದುಕೊಂಡು ಒಮ್ಮಲೇ ಗುಂಪುಕಟ್ಟಿಕೊಂಡು ಅಲ್ಲಿಗೆ ಬಂದು ಎಲ್ಲರೂ ಏ ರಂಡಿ ಮಕ್ಕಳ್ಯಾ ಏನ ಪಂಚಾಯಿತಿ ಮಾಡತಿರಿ ಸೆಂಟಾ ಅಂತಾ ಬೈದು ನನಗೆ ನಾಮದೇವನು ಕಲ್ಲಿನಿಂದ ಬಲಗಣ್ಣಿನ ಮೇಲ್ಭಾಗ ಹೊಡೆದು ರಕ್ತಗಾಯ ಪಡಿಸಿದನು. ರವಿ ಈತನು ಕಲ್ಲಿನಿಂದ ಸೊಂಟಕ್ಕೆ ಹೊಡೆದನು ಮಂಗಲಾ ಹಾಗೂ ರಾಜೇಶ ಇಬ್ಬರು ರಂಡಿಮಕ್ಕಳ್ಯಾ ನೀನು ರೂಪೇಶನ ಮೇಲ ಕಟ್ಟಿ ಬಂದಿರಿ ನಿಮಗ ಇಡಂಗಿಲ್ಲಾ ಅಂತಾ ಬೈದು ನನಗೆ ಟೆಕ್ಕಿಯಲ್ಲಿ ಹಿಡಿದು ಎತ್ತಿ ನೆಲಕ್ಕೆ ಕೆಡವಿದರು. ಇದನ್ನು ನೋಡಿ ಬಿಡಿಸಲು ಬಂದ ರೂಪೇಶನಿಗೆ ನಾಮದೇವ, ರವಿ, ಸಾವನ್ ಇವರು ಎಳೆದಾಡಿ ಕೈಯಿಂದ ತಲೆಯ ಹೊಟ್ಟೆ ಬೆನ್ನಿಗೆ ಗುದ್ದುತ್ತಿದ್ದರು ಆಗ ಸುಮ್ಮಿ ಹಾಗೂ ಸವಿತಾ ಇವರು ಈ ರಂಡಿಮಕ್ಕಳಿಗೆ ಜೀವ ಸಹಿತಾ ಬಿಡಬ್ಯಾಡರಿ ಅಂತಾ ಭಯ ಪಡಿಸುತ್ತಿದ್ದಾಗ ಲಕ್ಷ್ಮಣ ತಂದೆ ಸೂರ್ಯನಾಯಕ, ದುಬೇಶ ತಂದೆ ರೇವು ಚವ್ಹಾಣ್, ರೇವು ತಂದೆ ರಾಮು ಚವ್ಹಾಣ್ ಇವರು ಜಗಳ ನೋಡಿ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ಗುರುಬಾಯಿ ಗಂಡ ಆನಂದ ಜಂಗಲೆ ಸಾ; ಭಿಮ ನಗರ ಆಳಂದ ತಾ; ಆಳಂದ ರವರು ತಮ್ಮ ಭಾವನಾದ ಅಣ್ಣಪ್ಪ ತಂದೆ ಲಕ್ಷ್ಮಣ ಜಂಗಲೆ ಇವರು ನಮ್ಮ ಫಿತ್ರಾರ್ಜಿತ ಮನೆಯ ಜಾಗೆ ಹಂಚಿಕೆ ವಿಷಯದಲ್ಲಿ ಸುಮಾರು ದಿನಗಳಿಂದ ನಮ್ಮೊಂದಿಗೆ ವೈಮನಸ್ಸು ಮಾಡಿಕೊಂಡಿದ್ದು ಸದ್ಯೆ ಅಣ್ಣಪ್ಪ ಇವರು ತಮ್ಮ ಪಾಲಿಗೆ ಬಂದ ಜಾಗೆದಲ್ಲಿ ಮನೆ ಕಟ್ಟಡ ಮಾಡುತ್ತಿದ್ದು, ನಮ್ಮ ಪಾಲಿಗೆ ಬಂದ ಜಾಗೆಯಲ್ಲಿ ಪತ್ರಾ ಮನೆಯಲ್ಲಿ ವಾಸವಾಗಿದ್ದು ಕಾರಣ ನನ್ನ ಗಂಡನು ನಮ್ಮ ಭಾವನಿಗೆ ನಮ್ಮ ಪಾಲಿಗೆ ಬಂದ ಮನೆ ಜಾಗೆಯವನ್ನು ಖಾಲಿ ಮಾಡಲು ಸುಮಾರು ದಿನಗಳಿಂದ ಹೇಳುತ್ತಾ ಬಂದಿದ್ದರಿಂದ ವೈಮನಸ್ಸು ಮಾಡಿಕೊಂಡಿದ್ದು ದಿನಾಂಕ 10/04/2019 ರಂದು ನಾನು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಗುಂಡಪ್ಪ ತಂದೆ ಲಕ್ಷ್ಮಣ ಜಂಗಲೆ ಇವರ ಜೋತೆಯಲ್ಲಿ ನಮ್ಮ ಮನೆಯ ಜಾಗದ ವಿಷಯು ಕುರಿತು ಮಾತನಾಡುತ್ತಾ ನಿಂತಾಗ ನನ್ನ ಹಿಂದಿನಿಂದ ಅಣ್ಣಪ್ಪ ಜಂಗಲೆ ಇವರು ಓಡಿ ಬಂದನೇ ಏ ರಂಡಿ ನಮ್ಮ ಜಾಗೆ ಕೇಳಲು ನೀನು ಯಾರು ಅಂತಾ ಬೈಯುತ್ತಾ ಸಲಕಿಯಿಂದ ತಲೆಯ ಮೇಲೆ ಹೊಡೆದಿದ್ದು ಭಾರಿ ರಕ್ತಸ್ರಾವವಾಗಿ ತಲೆ ಸುತ್ತ ಬಂದು ಭಾರಿ ರಕ್ತಗಾಯ ಮಾಡಿದ್ದು, ನೀನು ಇನ್ನೋಮ್ಮೆ ನಮ್ಮ ಜಾಗದ ವಿಷಯದಲ್ಲಿ ಬಂದರೇ ನೀನ್ನ ಜೀವ ಸಹಿತ ಖಲಾಸ ಮಾಡುತ್ತೇನೆ ಅಂತಾ ಬೈಯುತ್ತಿರುವಾಗ ಗುಂಡಪ್ಪ ಜಂಗಲೆ, ಚಂದ್ರು ತಂದೆ ಗುಂಡಪ್ಪ ಜಂಗಲೆ ಮತ್ತು ನನ್ನ ಗಂಡ ಮನೆಯೊಳಗಿನಿಂದ ಓಡಿ ಬಂದು ಜಗಳವನ್ನು ಬಿಡಿಸಿದ್ದು ಆಗ ನನ್ನ ಗಂಡನಿಗೆ ಏ ರಂಡಿ ಮಗನೇ ನೀನ್ನ ಹೆಂಡತಿಗೆ ಸರಿಯಾಗಿ ಹೇಳು ಇನ್ನೋಮ್ಮೆ ನನ್ನ ಹೆಸರಿಗೆ ಬಂದರೆ ನೀನಗೆ ಮತ್ತು ನೀನ್ನ ಹೆಂಡತಿ ಖಲಾಸ ಮಾಡುತ್ತೇನೆ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ಲಲಿತಾ ಗಂಡ ನಾಗೇಂದ್ರ ಕಡಪಾ ಸಾ: ನ್ಯೂ ಬಸ್ಸ ಸ್ಟ್ಯಾಂಡ ರೋಡ ಆಳಂದ ರವರ ಅತ್ತೆ ಮಾವನವರಿಗೆ ನನ್ನ ಗಂಡ ನಾಗೇಂದ್ರ & ಚಂದ್ರಕಾಂತ, ಶಶಿಕಾಂತ ಅಂತಾ ಮೂರು ಜನರು ಗಂಡು ಮಕ್ಕಳಿದ್ದು ಮತ್ತು ಉಮಾದೇವಿ ಮತ್ತು ರಮಾದೇವಿ ಅಂತಾ ಎರಡು ಜನ ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು, ಅವರು ತಮ್ಮ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ, ಮತ್ತು ನಮ್ಮ ಮನೆಯಲ್ಲಿ ನಾನೇ ಹಿರಿಯ ಮಗನಿದ್ದು, ನನ್ನ ಮೈದುನಾದ ಶಶಿಕಾಂತ ಇತನು ನಮಗೆ ಸುಮಾರು ಮೂರು ತಿಂಗಳಿಂದ ಮನೆಗಳ ಹಂಚಿಕೆ ವಿಚಾರದಲ್ಲಿ ನಮ್ಮೊಂದಿಗೆ ತಕರಾರು ಮಾಡಿದ್ದರಿಂದ ನಾನು & ನನ್ನ ಗಂಡ ಕುಟುಂಬ ಸಮೇತ ಬೇರೆ ಕಡೆಗೆ ಬಾಡಿಗೆ ಮನೆ ಮಾಡಿಕೊಂಡು ಆಳಂದ ಪಟ್ಟಣದಲ್ಲಿಯೇ ವಾಸವಾಗಿದ್ದು, ಮತ್ತು ನನ್ನ ಗಂಡನ ನಮ್ಮ ಮಾವನವರ ಹತ್ತೀರ ಈ ಒಂದು ವರ್ಷದ ಹಿಂದೆ ಒಂದು ಪ್ಲಾಟ ತಗೆದುಕೊಳ್ಳಲು ಕೈಗಡ ರೂಪದಲ್ಲಿ ಒಂದು ಲಕ್ಷ ರೂಪಾಯಿಗಳು ಹಣವನ್ನು ಪುನಃ ವಾಪಸ್ಚಸ ಕೊಡುತ್ತೇನೆ ಅಂತಾ ತಗೆದುಕೊಂಡಿದ್ದು, ಸದರಿ ಹಣದ ವ್ಯವಹಾರ ಬಗ್ಗೆ ಶಶಿಕಾಂತ ಇವರು ನಮ್ಮ ಮಾವನವರಿಂದ ತಿಳಿದುಕೊಂಡು ಮೂರು ತಿಂಗಳಿಂದ ನಮ್ಮೊಂದಿಗೆ ವೈಮನಸ್ಸು ಮಾಡಿಕೊಂಡಿದ್ದು ದಿನಾಂಕ 11/04/2019 ರಂದು ಎಂದಿನಂತೆ ಬಾಡಿಗೆ ಮನೆಯಿಂದ ನನ್ನ ಗಂಡನು ದುಕಾನ ಹೊಗಲು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಹೊಗುತ್ತಿರುವಾಗ ಮೈದುನ ಶಶಿಕಾಂತ ಇತನು ಓಡಿ ಬಂದವನೇ ನನ್ನ ಗಂಡನಿಗೆ ಏ ರಂಡಿ ಮಗನೇ ಎಲ್ಲಿಗೆ ಹೊಗುತ್ತಿದ್ದಿ ಅಪ್ಪಾನ ಹತ್ತೀರ ತಗೆದುಕೊಂಡ ಒಂದು ಲಕ್ಷ ರೂಪಾಯಿಗಳು ಯಾವಾಗ ಕೊಡುತ್ತೀ ಭಾ ನೀ ದುಕಾನ ಅಂತಾ ಅವಾಚ್ಚ ಶಬ್ದಗಳಿಂದ ಬೈಯುತ್ತಿರುವಾಗ ನಾನು ಶಶಿಕಾಂತ ಇವರಿಗೆ ಯಾಕೆ ಸುಮ್ಮನೇ ನನ್ನ ಗಂಡನಿಗೆ ಬೈಯುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಏ ರಂಡಿ ನೀನು ನಮ್ಮ ವಿಷಯದಲ್ಲಿ ಕೇಳಲು ಬರುತ್ತೀ ಭೊಸಡಿ ಅಂತಾ ಬೈದು ಕೈಯಿಂದ ಕಪಾಳದ ಮೇಲೆ ಹೊಡೆದು, ಮೈ ಮೇಲಿನ ಸೀರೆ ಹಿಡಿದು ಜೊಗ್ಗಿ ಅವಮಾನಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ.ಶಂಕರರಾವ ತಂದೆ ನಾಗಪ್ಪ ಕಡಪಾ ಸಾ:ಕೊಟಿಗಲ್ಲಿ ಆಳಂದ ರವರಿಗೆನಾಗೇಂದ್ರ, ಚಂದ್ರಕಾಂತ ಮತ್ತು ಶಶಿಕಾಂತ ಅಂತಾ ಮೂರು ಜನ ಗಂಡು ಮಕ್ಕಳಿದ್ದು, ಉಮಾದೇವಿ & ರಮಾದೇವಿ ಅಂತಾ ಎರಡು ಜನ ಹೇಣ್ಣು ಮಕ್ಕಳಿದ್ದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದು ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ, ಗಂಡು ಮಕ್ಕಳು ತಮ್ಮ ತಮ್ಮ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ ನನ್ನ ಹಿರಿಯ ಮಗನಾದ ನಾಗೇಂದ್ರ ಇತನು ನನ್ನ ಹತ್ತೀರ ಸುಮಾರು ಒಂದು ವರ್ಷದ ಹಿಂದೆ ಪ್ಲಾಟ ತಗೆದುಕೊಳ್ಳಲು ಒಂದು ಲಕ್ಷ ರೂಪಾಯಿಗಳು ತಗೆದುಕೊಂಡಿದ್ದು ಸದರಿ ಹಣವು ನನಗೆ ವಾಪಸ್ಸ ಒಂದು ವರ್ಷದಲ್ಲಿ ಕೊಡಬೇಕಾಗಿತ್ತು ಆದರೆ ಸದರಿ ಹಣವನ್ನು ಇಲ್ಲಿಯವರೆಗೆ ವಾಪಸ್ಸ ಕೊಟ್ಟಿರುವದಿಲ್ಲ, ಹೀಗಿದ್ದು ಇಂದು ದಿನಾಂಕ 11/04/2019 ರಂದು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನನ್ನ ಮಗ ನಾಗೇಂದ್ರ ಇತನು ನನಗೆ ಕೊಡಬೇಕಾದ ಒಂದು ಲಕ್ಷ ರೂಪಾಯಿಗಳು ಹಣದ ವಿಷಯಲ್ಲಿ ನನ್ನೊಂದಿಗೆ ತಕರಾರು ಮಾಡಿ ನಾನು ನೀನಗೆ ಹಣ ಕೊಡುವದಿಲ್ಲ, ನೀನು ನನಗೆ ಮನೆ & ಹಣ ಕೊಡು ರಂಡಿ ಮಗನೇ ಭೊಸಡಿ ಮಗನೇ ಅಂತಾ ಅವಾಚ್ಚ ಶಬ್ದಗಳಿಂದ ಬೈದು ನೀನು ಇನ್ನೋಮ್ಮೆ ಹಣ ಕೇಳಿದರೆ ನೀನ್ನ ಜೀವ ಸಹಿತ ಖಲಾಸ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಬಾಲಾಜಿ ತಂದೆ ರಾಮು ಕೋಳಿ ಸಾ|| ಖಜೂರಿ ರವರು ದಿನಾಂಕ 11/04/2019 ರಂದು ತಮ್ಮೂರಿನ ಸರಕಾರಿ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ಮುಂದಿನ ರೋಡಿನ ಮೇಲೆ ಬರುತ್ತಿರುವಾಗ ನನ್ನ ಎದುರಿನಿಂದ ನಮ್ಮೂರಿನಿಂದ ಸಿದ್ದಪ್ಪ ತಂದೆ ಶ್ರೀಮಂತ ಗೌಂಡಿ ಇತನು ತನ್ನ ಕೈಯಲ್ಲಿ ಕೊಡಲಿ ಹಿಡಿದುಕೊಂಡು ಬಂದವನೇ ನನ್ನ ಎದೆಯ ಮೇಲಿನ ಅಂಗ್ಗಿ ಹಿಡಿದು ಜೋಗ್ಗಿ ಮುಂದಕ್ಕೆ ಹೊಗದಂತೆ ತಡೆದು ನಿಲ್ಲಿಸಿ ಏ ರಂಡಿ ಮಗನೇ ನೀನಗೆ ನೀನ್ನೆ ರಾತ್ರಿ ಫೋನ ಮಾಡಿ ಬರಲು ಹೇಳಿದರು ಬರಲ್ಲಾ ಭೋಸಡಿ ಮಗನೇ ಅಂತಾ ಬೈಯುತ್ತಾ ಕೊಡಲಿಯಿಂದ ನನ್ನ ತಲೆಯ ಮೇಲೆ ಎರಡು ಬಾರಿ ಹೊಡೆದು ಭಾರಿ ಗಾಯ ಮಾಡಿದ್ದು ಆಗ ಅಲ್ಲೆ ರಸ್ತೆಯ ಮೇಲೆ ಹೊಗುತ್ತಿದ್ದ 1) ಲಕ್ಷ್ಮಣ ತಂದೆ ಮಲ್ಕಪ್ಪ ಕೋಳಿ, 2) ಮಹಾದೇವ ತಂದೆ ಲಕ್ಷ್ಮಣ ಕೋಳಿ, 3) ಶ್ರೀಮಂತ ತಂದೆ ನಿಂಗಪ್ಪ ಜವಳಿಗಿ ರವರುಗಳು ಬಂದು ಜಗಳವನ್ನು ನೋಡಿ ಬಿಡಿಸಿರುತ್ತಾರೆ ನಂತರ ನನಗೆ ನನ್ನ ತಾಯಿ ತಂದೆಯವರು ಉಪಚಾರ ಕುರಿತು ಸರಕಾರಿ ಬಸ್ಸಿನಲ್ಲಿ ಆಳಂದ ಕ್ಕೆ ಬಂದು ಸರಕಾರಿ ಆಸ್ಪತ್ರೆ ಆಳಂದ ಕ್ಕೆ ಒಯ್ದು ಸೇರಿಕೆ ಮಾಡಿ ಉಪಚಾರ ಪಡೆದುಕೊಂಡಿದ್ದು, ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಚ ಶಬ್ದಗಳಿಂದ ಬೈದು ಕೊಡಲಿಯಿಂದ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿದ ಸಿದ್ದಪ್ಪ ತಂದೆ ಶ್ರೀಮಂತ ಗೌಂಡಿ ಇತನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 April 2019

KALABURAGI DISTRICT REPORTED CRIMES

ಅಪಹರಣ ಪ್ರಕರಣ ;
ಗ್ರಾಮೀಣ ಠಾಣೆ : ದಿನಾಂಕ 04/04/2019 ರಂದು ಬೆಳಿಗ್ಗೆ 08-00 ಗಂಟೆಗೆ ಶ್ರೀ ರೇವಣಸಿದ್ದಪ್ಪ ತಂದೆ ಮಾಧುರಾಯ ಕೋಟಿ ಸಾ : ಅಷ್ಟಗಾ ತಾ : ಜಿ : ಗುಲಬರ್ಗಾ ರವರ  ಮಗ ಮಹೇಶ ಇತನು ನಮ್ಮ ಅಣ್ಣನ ಮನೆಯಾದ ಕಲಬುರಗಿ ನಗರದ ಕಾಟನ ಮಾರ್ಕೆಟದಿಂದ ಎಸ್.ಎಸ್.ಎಲ್.ಸಿ. ಕೊನೆ ಪೇಪರಾದ ಹಿಂದಿ ಪೇಪರ ಬರೆಯಲು ಭೀಮಳ್ಳಿ ಶಾಲೆಗೆ ಹೋಗಿದ್ದು. ಸಂಜೆ 05-00 ಗಂಟೆಯಾದರೂ ನನ್ನ ಮಗ ಮಹೇಶ ಮರಳಿ ಮನೆಗೆ ಬರದ ಕಾರಣ ನಮ್ಮ ಅಣ್ಣ ಬಸಲಿಂಗಪ್ಪ ಇವರು ನನಗೆ ಪೋನ ಮಾಡಿ ಮಹೇಶ ಅಷ್ಟಗಾಕ್ಕೆ ಬಂದಿರುತ್ತಾನೆ ಹೇಗೆ ಎಂದು ವಿಚಾರಿಸಲೂ ಬಂದಿರುವುದಿಲ್ಲಾ ಅಂತಾ ತಿಳಿಸಿದಾಗ ಗಾಬರಿಗೊಂಡು ನಾನು ಮತ್ತು ನಮ್ಮ ಅಣ್ಣ  ಬಸಲಿಂಗಪ್ಪ ಇಬ್ಬರು ಭೀಮಳ್ಳಿ ಗ್ರಾಮಕ್ಕೆ ಹೋಗಿ ಊರಲ್ಲಿ ಮತ್ತು ಕಲಬುರಗಿ ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಲೂ ಅವನ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲಾ. ಮರುದಿನ  05/04/2019 ರಂದು ಮತ್ತೆ ಭೀಮಳ್ಳಿ  ಶಾಲೆಗೆ ಹೋಗಿ ಮುಖ್ಯೋಪಾಧ್ಯಯರನ್ನು ಭೇಟ್ಟಿಯಾಗಿ ನನ್ನ ಮಗನ ಬಗ್ಗೆ ವಿಚಾರಿಸಲೂ ಅವರು ನನ್ನ ಮಗ ಮಹೇಶ ದಿನಾಂಕ 04/04/19 ರಂದು 12-30  ಪಿಎಂ ವರೆಗೆ  ಪೇಪರ ಬರೆದಿರುತ್ತಾನೆ ಎಂದು ತಿಳಿಸಿದರು. ತದನಂತರ ನನ್ನ ಮಗನಿಗೆ ನಾನು ಮತ್ತು ಅಣ್ಣ ಬಸಲಿಂಗಪ್ಪ ಇಬ್ಬರು ಕಲಬುರಗಿ ನಗರದಲ್ಲಿ  ಮತ್ತು ನಮ್ಮ ಸಂಬಂಧಿಕರ ಊರಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ನರೋಣಾ ಠಾಣೆ : ಶ್ರೀ ತಿಪ್ಪಮ್ಮಾ ಗಂಡ ಶಿವಶರಣ ಸಲಗರ ಸಾ:ಸೂಲ್ತಾನಪೂರ ತಾ:ಜಿ:ಕಲಬುರಗಿ ರವರ ಮಗಳಾದ ರುಕ್ಮಿಣಿ ಇವಳಿಗೆ ಸುಮಾರು 12 ವರ್ಷಗಳ ಹಿಂದೆ ಧರ್ಮವಾಡಿ ಗ್ರಾಮದ ನನ್ನ ಅಣ್ಣನಾದ ವಿಠಲನ ಮಗನಾದ ರಾಜು ಈತನಿಗೆ ವಿವಾಹಮಾಡಿಕೊಟ್ಟಿರುತ್ತೇವೆ. ಅವರಿಗೆ ಸುಮಾರು 12 ವರ್ಷಗಳು ಆದರು ಇನ್ನು ಮಕ್ಕಳಾಗಿಲ್ಲಾ ಸದರಿ ರುಕ್ಮಿಣಿ ಇವಳಿಗೆ ಮಕ್ಕಳ ಸಂಬಂಧ ಅನೇಕ ಕಡೆಗೆ ದವಾಖಾನೆಗಳಿಗೆ ಹಾಗೂ ದೇವರುಗಳಿಗೆ ತೋರಿಸಿರುತ್ತೇವೆ. ಆದರು ಕೂಡ ಯಾವುದೇ ಪ್ರಯೋಜನೆ ಆಗಿರುವುದಿಲ್ಲಾ. ಹೀಗಾಗಿ ನನ್ನ ಮಗಳು ಈ ವಿಷಯ ಬಹಳ ಮನಸಿಗೆ ಹಚ್ಚಿಕೊಂಡಿದಳು ದಿನಾಂಕ: 07-04-2019 ರಂದು  06 ಎ.ಎಂ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನನ್ನ ಮಗಳ ಮೈಧುನ ಸಂತೋಷನು ನನ್ನ ಮಗ ಪೀರಪ್ಪನ ಮೊಬೈಲಗೆ ಕರೆಮಾಡಿ ರುಕ್ಮಿಣಿ ಇವಳು ಮನೆಯಲ್ಲಿ ಉರಲು ಹಾಕಿಕೊಂಡು ತೀರಿಕೊಂಡಿರುತ್ತಾಳೆ ಅಂತಾ ಸುದ್ದಿ ತಿಳಿಸಿದ ಮೇರೆಗೆ ನಾನು ನನ್ನ ಮಗ ಪೀರಪ್ಪಾ ಬಾಬು, ಸೊಸೆ ರುಕ್ಕಮ್ಮಾ ಎಲ್ಲರೂ ಒಂದು ಟಂಟಂ ಬಾಡಿಗೆ ಮಾಡಿಕೊಂಡು ಧರ್ಮವಾಡಿ ಗ್ರಾಮಕ್ಕೆ ಬಂದು ನೋಡಲಾಗಿ ರುಕ್ಮಿಣಿ ಇವಳು ತನ್ನ ಮನೆಯ ದೇವರ ಖೊಲಿಯಲ್ಲಿ ಫತ್ರಾದ ಕಬ್ಬಿಣದ ಅಡ್ಡಿಗೆ ಒಂದು ಪಾಲ್ಟರ್ ಸೀರೆಯಿಂದ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ದಿನಾಂಕ:06/04/2019 ರಂದು ನಮ್ಮೂರಿನಲ್ಲಿ ತೇರಿನ ಕಾರ್ಯಕ್ರಮಕ್ಕೆ ನನ್ನ ಅಳಿಯ ರಾಜು ಈತನು ಬಂದಿದ್ದು ಮನೆಯಲ್ಲಿ ಸಂತೋಷ ಹಾಗೂ ರುಕ್ಮಿಣಿ ಇಬ್ಬರೆ ಇದ್ದರು ಹೀಗಾಗಿ ನಾನು ಸಂತೋಷನಿಗೆ ವಿಚಾರ ಮಾಡಿದಾಗ ದಿನಾಂಕ:06/04/2019 ರಂದು ರಾತ್ರಿ 9-00 ಗಂಟೆಗೆ ಇಬ್ಬರು ಮನೆಯಲ್ಲಿ ಊಟಮಾಡಿ ತಾನು ಮಲಗಿಕೊಳ್ಳಲು ನಮ್ಮ ಖುಲ್ಲಾ ಪ್ಲಾಟಿಗೆ ಹೋಗಿರುತ್ತೇನೆ. ಮರಳಿ ದಿನಾಂಕ:07/04/2019 ರಂದು 0500 ಗಂಟೆಗೆ ಗಳ್ಯಾ ಕೆಲಸಕ್ಕೆ ಹೋಗಲು ಅಂತಾ ಮನೆಗೆ ಬಂದಾಗ ರುಕ್ಮಿಣಿ ಇವಳು ಉರಲು ಹಾಕಿಕೊಂಡಿದ್ದನ್ನು ನೋಡಿ ಚೀರಾಡುತ್ತಾ ಹೊರಗೆ ಬಂದು ಓಣಿಯವರಿಗೆ ವಿಷಯ ತಿಳಿಸಿರುತ್ತೇನೆ ಅಂತ ತಿಳಿಕಸಿರುತ್ತಾನೆ. ನನ್ನ ಮಗಳು ತನಗೆ ಮದುವೆಯಾಗಿ 12 ವರ್ಷ ಆದರೂ ಇನ್ನು ಮಕ್ಕಳು ಆಗಿಲ್ಲಾ ಅಂತಾ ಮನಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಬೇಸತ್ತು ದಿನಾಂಕ:06/04/2019 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ:07/04/2019 ರ ಬೆಳಿಗ್ಗೆ 0500 ಮಧ್ಯದ ಅವಧಿಯಲ್ಲಿ ಮನೆಯಲ್ಲಿ ತನ್ನ ಗುತ್ತಿಗೆಗೆ ಸೀರೆಯಿಂದ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ಶ್ರೀ ನಿಂಗಪ್ಪಾ ತಂದೆ ಅಪ್ಪಾರಾವ ದೇವುಕರ ರವರ ಮಗಳಾದ ಲಕ್ಷ್ಮೀ ಇವಳಿಗೆ 6ವರ್ಷದ ಹಿಂದೆ ಕಡಗಂಚಿ ಗ್ರಾಮದ ಚಂದ್ರಕಾಂತ ಆಲೂರ ಇವರ ಎರಡನೆ ಮಗನಾದ ನಾಗೇಶ ಈತನೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಟ್ಟಿದ್ದು, ಅವರಿಗೆ ಮೇಘನಾ, ಹರ್ಷಾನಂದ, ಹರ್ಷಧಾರೆ ಅಂತಾ ಮಕ್ಕಳಿದ್ದು, ನನ್ನ ಮಗಳು ಮತ್ತು ಅಳಿಯ ಸಂಸಾರದಲ್ಲಿ ಅನ್ಯೊನ್ಯವಾಗಿದ್ದರು, ದಿನಾಂಕ:04/03/2019 ರಂದು ನನ್ನ ಮಗಳು ಲಕ್ಷ್ಮೀ ಇವಳು ತನ್ನ ಗಂಡನ ಮನೆಯಲ್ಲಿ ಸಾಯಂಕಾಲ 7-00 ಗಂಟೆಗೆ ಅಡುಗೆ ಮಾಡುವಾಗ ಸೀಮೆ ಎಣ್ಣೆ ಸ್ಟೋ ಬಸ್ಟಾಗಿ ಮೈಮೇಲಿನ ಬಟ್ಟೆಗೆ ಬೆಂಕಿಹತ್ತಿ ಗಾಯವಾಗಿದ್ದು ಅಂತಾ ನನ್ನ ಮಗನಾದ ಶ್ರೀನಿವಾಸ ಈತನೊಂದಿಗೆ ತಿಳುದುಬಂದ ಮೇರೆಗೆ ನಾನು ಬಸವೇಶ್ವರ ಆಸ್ಪತ್ರೆಗೆ ಬಂದು ನನ್ನ ಮಗಳನ್ನು ವಿಚಾರಿಸಲಾಗಿ ಸದರಿ ಘಟನೆಯು ಆಕಸ್ಮಿಕವಾಗಿ ಅಡುಗೆ ಮಾಡುವಾಗ ಸ್ಟೋ ಬಸ್ಟ್ ಆಗಿದ್ದರಿಂದ ಆಗಿರುತ್ತದೆ ಅಂತಾ ತಿಳಿಸಿದ್ದು ಉಪಚಾರ ಹೊಂದುತ್ತಾ ಇಂದು ದಿನಾಂಕ:07/04/2019 ರಂದು 0100 ಗಂಟೆಗೆ ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾಳೆ ನನ್ನ ಮಗಳ ಸಾವಿನ ಬಗ್ಗೆ ನನಗೆ ಯಾರ ಮೇಲು ಸಂಶಯ ಇರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 April 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.04.2019 ರಂದು ಮಧ್ಯಾನ ರ್ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಲಾಲಗೇರಿ ಕ್ರಾಸ ಹತ್ತಿರ ನ್ಯೂ ರಾಘವೇಂದರ ಕಾಲೋನಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಅರುಣ ಮುರಗುಂಡಿ ಪಿಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಲಗೇರಿಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಲಾಲಗೇರಿ ಕ್ರಾಸ ದಿಂದ ನ್ಯೂ ರಾಘವೇಂದ್ರ ಕಾಲೋನಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಶಿವಾನಂದ ತಂದೆ ಶಿವಗುಂಡಪ್ಪ ಸಾಸಟ್ಟಿ ಸಾ: ಮಹಾಲಕ್ಷ್ಮಿ ಲೇಔಟ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 910 ರೂ.  1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು 2. ಸಿದ್ದು ತಂದೆ ದತ್ತು ಹೊನಳ್ಳಿ ವಯ: ಸಾ: ಗಂಗಾನಗರ ಕಲಬುರಗಿ ಇತನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 630 ರೂ. 1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹೀಗೆ ಒಟ್ಟು 1540/- ರೂ ನಗದು ಹಣ, 2 ಮಟಕಾ ಚೀಟಿ, 2 ಬಾಲ ಪೇನ್ ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ರಾಘವೇಂದ್ರ ನಗರ ಠಾಣೆ : ದಿನಾಂಕ 06.04.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಎಮ್ ಎಸ್ ಕೆ ಮಿಲ್ ಏರಿಯಾದ ಸಿಟಿ ಬಸ್ಸ ನಿಲ್ದಾಣದ ಹತ್ತಿರ ಇಬ್ಬರು ವ್ಯಕ್ತಿಗಳು ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಸುರೇಶ ಎ.ಎಸ್‌‌.ಐ  ರಾಘೌಏಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಮ್ ಎಸ್ ಕೆ ಮಿಲ್ ಸಿಟಿ ಬಸ್ಸ ನಿಲ್ದಾಣ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ 1) ಇಸಾಮೋದ್ದಿನ ತಂದೆ ಆದಿಲಸಾಬ ಸಾ|| ಖಣಿ ಏರಿಯಾ ಕಲಬುರಗಿ ಅಂತ ತಿಳಿಸಿದ್ದು ನಂತರ  ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 750 ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹಾಗು 2) ಮಹಿಬೂಬ ಅಲಿ ತಂದೆ ಮಸ್ತಾನ ಸಾಬ ಸಾ|| ಝಂಡೇಗಲ್ಲಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 740 ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹೀಗೆ ಒಟ್ಟು 1) ನಗದು ಹಣ 1490 ರೂ, 2) ನಾಲ್ಕು ಮಟ್ಕಾ ಬರೇದ ಚಿಟಿಗಳು ಅ||ಕಿ|| 00 3) ಎರಡು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ:04/04/2019 ರಂದು ಬೆಳಿಗ್ಗೆ 9-30 ಸುಮಾರಿಗೆ ನನ್ನ ಮಗ ಸಿದ್ದಯ್ಯನು ಹವಳಗಾ ಗ್ರಾಮದಲ್ಲಿ ತನ್ನ ಗೇಳೆಯನ ಮದುವೆ  ಇರುತ್ತದೆ. ನಾನು ಮದುವೆಗೆ ಹೋಗಿ ಬರುತ್ತೆನೆ ಅಂತ ನಮ್ಮ ಗ್ರಾಮದ ಮಂಜುನಾಥ ತಂದೆ ಕುಪೆಂದ್ರ ಹೆರೂರ ರವರ ಮೋ ಸೈಕಲ ನಂ:ಕೆ-32 ಈಜಿ-8259 ನೇದ್ದನ್ನು ತಗೆದುಕೊಂಡು ನಮ್ಮ ಗ್ರಾಮದ ಗೌಡು @ ಜಯಕುಮಾರ ತಂದೆ ಬಾಬು ಹೆರೂರ ಈತನಿಗೆ ತನ್ನ ಜೋತೆ ಸದರಿ ಮೋಟಾರ ಸೈಕಲ ಮೇಲೆ ಕರೆದುಕೊಂಡು ಹೋಗಿರುತ್ತಾನೆ.ನಂತರ 4-30 ಪಿ,ಎಮ್.ಸುಮಾರಿಗೆ ಅಫಜಲಪೂರ ಪಟ್ಟಣದ ನಮ್ಮ ಸಂಭದಿಕರಾದ ಚಿದಾನಂದ ತಂದೆ ಮಲ್ಲಯ್ಯ ಹಿರೇಮಠ ರವರು ನನ್ನ ಮೋಬೈಲ ನಂಬರಕ್ಕೆ ಪೋನ ಮಾಡಿ ತಿಳಿಸಿದ್ದೆನಂದರೆ ನಾನು ದೇವಣಗಾಂವದಿಂದ ಅಫಜಲಪೂರಕ್ಕೆ ನನ್ನ ಮೋಟಾರ ಸೈಕಲ ಮೇಲೆ  ಬರುತ್ತಿದ್ದಾಗ 3-30 ಪಿ,ಎಮ್.ಸುಮಾರಿಗೆ ಸೋನ್ನ ಕ್ರಾಸ ಹತ್ತೀರ ನನ್ನಿಂದ ಸ್ವಲ ಮುಂದೆ ಮೋಟಾರ ಸೈಕಲ ಮೇಲೆ ಅಫಜಲಪೂರದ ಕಡೆ ಬರುತ್ತಿದ್ದ ನಿಮ್ಮ ಮಗನ ಮೋಟಾರ ಸೈಕಲಿಗೆ ಟಿಪ್ಪರ ನಂ:ಕೆಎ-28 ಸಿ-9038 ನೇದ್ದರ ಚಾಲಕನು ಟಿಪ್ಪರನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ನಿಮ್ಮ ಮಗನ ಮೋಟರ ಸೈಕಲಿಗೆ ಹಿಂದಿನಿಂದ ಅಪಘಾತ ಪಡಿಸಿ ತನ್ನ ಟಿಪ್ಪರ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಸದ್ಯ ನಿನ್ನ ಮಗನಿಗೆ ಮತ್ತು ನಿನ್ನ ಮಗನ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಹುಡುಗನಿಗೆ 108 ವಾಹನದಲ್ಲಿ ಹಾಕಿ ಕಲಬುರಗಿಯ ಆಸ್ಪತ್ರೇಗೆ ಕಳೂಹಿಸಿರುತ್ತೇನೆ ಅಂತ ತಿಳಿಸಿದ ಮೇಲೆ ನಾನು ಕಲಬುರಗಿಯ ಯುನೈಟೆಡ ಆಸ್ಪತ್ರೇಗೆ ಹೋಗಿ ನೋಡಲಾಗಿ ನನ್ನ ಮಗನಿಗೆ ಸದರಿ ಅಪಘಾತದಿಂದ ಎಡಗಡೆ ಮೇಲಕಿಗೆ,ಗದ್ದಕ್ಕೆ ಭಾರಿ ಗಾಯ ಮತ್ತು ಚಪ್ಪಿಗೆ ತರಚಿದ ಗಾಯಗಳಾಗಿರುವದು ಕಂಡು ಬಂತು ಮತ್ತು ನನ್ನ ಮಗನ ಜೋತೆ ಮೋಟಾರ ಸೈಕಲ ಮೇಲೆ ಹೋಗಿದ್ದ ಗೌಡಪ್ಪ @ ಜಯಕುಮಾರ ಹೆರೂರ ಈತನಿಗೆ ತಲೆಗೆ ಭಾರಿ ರಕ್ತಗಾಯಗಳಾಗಿರುವದು ಕಂಡು ಬಂತು ಮತ್ತು ಇಬ್ಬರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅಂತಾ ಶ್ರೀ ಸಿದ್ರಾಮಯ್ಯ ಹಿರೇಮಠ ಸಾ: ಹಳ್ಯಾಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಕುಮಾರಿ ಪ್ರೀಯಾಂಕ ತಂದೆ ಬಸವರಾಜ ಚಿಂಚನಸೂರ ಸಾ: ಚಿಂಚೋಳಿ ರವರು ವಿಧ್ಯಾಬ್ಯಾಸ ಮಾಡಿಕೊಂಡು ಉಪಜೀವನ ಸಾಗಿಸಿಕೊಂಡಿರುತ್ತೇನೆ ಹೀಗಿದ್ದು ನಾನು ಈಗ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಅಭ್ಯಾಸ ಮಾಡಿಕೊಂಡು ಅದರ ಜೋತೆ ಟ್ಯೂಟರಿಯಲ್ ಕಾಲ್ಸನಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನಾನು ಯುಗಾಧಿ ಹಬ್ಬದ ಸಲುವಾಗಿ ಬೆಂಗಳೂರಿನಿಂದ ನಮ್ಮ ಊರಿಗೆ ಬರಲೇಂದು ನಿನ್ನೆ ರಾತ್ರಿ ಬೆಂಗಳೂರಿನಿಂದ ಬಿಟ್ಟು ಇಂದು ಬೆಳಿಗ್ಗೆ ಕಲಬುರಗಿಗೆ ಬಂದು ಇಳಿದಿರುತ್ತೇನೆ. ಕಲಬುರಗಿ ಬಸ್ ನಿಲ್ದಾಣದಲ್ಲಿ ಹುಮನಾಬಾದ-ಮೀರಜ್ ಅಂತಾ ನಾಮ ಪಲಕ ಹಾಕಿದ್ದ ಬಸ್ ನಂ ಕೆಎ-38-ಎಫ್-1058 ನೇದ್ದು ಪ್ಲಾಟ್ ಫಾರಂ ನಲ್ಲಿ ನಿಂತಿದ್ದರಿಂದ ನಾನು ಸದರಿ ಬಸ ನಲ್ಲಿ ಹತ್ತಿ ಕುಳಿತುಕೊಂಡಿರುತ್ತೇನೆ ಸದರಿ ಬಸ್ ಮಲ್ಲಾಬಾದ ಗ್ರಾಮಕ್ಕೆ ನಿಲ್ಲಿಸುವುದಿಲ್ಲಾ ಅಂತಾ ನನಗೆ ಗೊತ್ತಾದ ಮೇಲೆ ನಾನು ಕಲಬುರಗಿಯಿಂದ ಅಫಜಲಪೂರ ವರೆಗೆ ಟಿಕೇಟ್ ತಗೆದುಕೊಂಡು ಮಲ್ಲಾಬಾದ ವರೆಗೆ ಪ್ರಾಯಾಣಿಸುತ್ತೇನೆ ಮಲ್ಲಾಬಾದ ಗ್ರಾಮ ಬಂದ ನಂತರ ನಾನು ಚಾಲಕ ಹಾಗೂ ನಿರ್ವಾಹಕರಿಗೆ ವಿನಂತಿ ಮಾಡಿಕೊಂಡು ಬಸ್ ನಿಲ್ಲಿಸುವಂತೆ ಕೇಳಿದಾಗ ಸದರಿ ಬಸ್ ಮಲ್ಲಾಬಾದ ಗ್ರಾಮದ ಬಸ್ ನಿಲ್ದಾಣ (ಕನಕದಾಸ ಚೌಕ) ಹತ್ತಿರ ನಿಲ್ಲಿಸಿದಾಗ ನಾನು ನನ್ನ ಲಗೇಜ ತಗೆದುಕೊಂಡು ಇಳಿಯುತ್ತಿರುವಾಗ ಸದರಿ ಬಸ್ ಚಾಲಕನು ಬಸ್ಸನ್ನು ನಿರ್ಲಕ್ಷತನದಿಂದ ವೇಗವಾಗಿ ಮುಂದಕ್ಕೆ ಚಲಾಯಿಸಿದ್ದರಿಂದ ನಾನು ಬಸ್ ನಿಂದ ಕೇಳಗೆ ಬಿದ್ದಿರುತ್ತೇನೆ. ಇದರಿಂದ ನನಗೆ ಸ್ವಂಟಕ್ಕೆ ಬಡೆದು ತರಚಿದ ಗಾಯ ಮತ್ತು ಭಾರಿ ಒಳ ಪೆಟ್ಟು ಆಗಿರುತ್ತದೆ ಮತ್ತು ನನ್ನ ಬಲಗೈಗೆ ರಕ್ತಗಾಯವಾಗಿರುತ್ತದೆ. ಸದರಿ ಘಟನೆಯು 9:30 .ಎಮ್ ಸುಮಾರಿಗೆ ಜರುಗಿರುತ್ತದೆ. ಘಟನೆ ನಂತರ ಬಸ್ ಚಾಲಕನು ಬಸ್ ನಿಲ್ಲಿಸಿದೇ ಹಾಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ನಂತರ ಅಲ್ಲಿದ್ದ ಸ್ಥಳಿಯರೊಬ್ಬರು 108 ವಾಹನಕ್ಕೆ ಕರೆ ಮಾಡಿ ನನಗೆ ಆಸ್ಪತ್ರೆ ಕಳುಹಿಸಿಕೊಟ್ಟಿರುತ್ತಾರೆ ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-38-ಎಫ್-1058 ನೇದ್ದರ ಚಾಲಕ ಬಸ್ ಅನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಲು ಹೋಗಿ ನನಗೆ ಅಫಘಾತ ಪಡೆಸಿದ ಸದರಿ ಬಸ್ ಚಾಲಕನ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.