POLICE BHAVAN KALABURAGI

POLICE BHAVAN KALABURAGI

07 April 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.04.2019 ರಂದು ಮಧ್ಯಾನ ರ್ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಲಾಲಗೇರಿ ಕ್ರಾಸ ಹತ್ತಿರ ನ್ಯೂ ರಾಘವೇಂದರ ಕಾಲೋನಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಅರುಣ ಮುರಗುಂಡಿ ಪಿಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಲಗೇರಿಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಲಾಲಗೇರಿ ಕ್ರಾಸ ದಿಂದ ನ್ಯೂ ರಾಘವೇಂದ್ರ ಕಾಲೋನಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಶಿವಾನಂದ ತಂದೆ ಶಿವಗುಂಡಪ್ಪ ಸಾಸಟ್ಟಿ ಸಾ: ಮಹಾಲಕ್ಷ್ಮಿ ಲೇಔಟ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 910 ರೂ.  1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು 2. ಸಿದ್ದು ತಂದೆ ದತ್ತು ಹೊನಳ್ಳಿ ವಯ: ಸಾ: ಗಂಗಾನಗರ ಕಲಬುರಗಿ ಇತನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 630 ರೂ. 1 ಮಟಕಾ ಬರೇದ ಚೀಟಿ ಅ:ಕಿ: 00 ಮತ್ತು ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹೀಗೆ ಒಟ್ಟು 1540/- ರೂ ನಗದು ಹಣ, 2 ಮಟಕಾ ಚೀಟಿ, 2 ಬಾಲ ಪೇನ್ ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ರಾಘವೇಂದ್ರ ನಗರ ಠಾಣೆ : ದಿನಾಂಕ 06.04.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಎಮ್ ಎಸ್ ಕೆ ಮಿಲ್ ಏರಿಯಾದ ಸಿಟಿ ಬಸ್ಸ ನಿಲ್ದಾಣದ ಹತ್ತಿರ ಇಬ್ಬರು ವ್ಯಕ್ತಿಗಳು ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಸುರೇಶ ಎ.ಎಸ್‌‌.ಐ  ರಾಘೌಏಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಮ್ ಎಸ್ ಕೆ ಮಿಲ್ ಸಿಟಿ ಬಸ್ಸ ನಿಲ್ದಾಣ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ 1) ಇಸಾಮೋದ್ದಿನ ತಂದೆ ಆದಿಲಸಾಬ ಸಾ|| ಖಣಿ ಏರಿಯಾ ಕಲಬುರಗಿ ಅಂತ ತಿಳಿಸಿದ್ದು ನಂತರ  ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 750 ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹಾಗು 2) ಮಹಿಬೂಬ ಅಲಿ ತಂದೆ ಮಸ್ತಾನ ಸಾಬ ಸಾ|| ಝಂಡೇಗಲ್ಲಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 740 ರೂ  2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಹೀಗೆ ಒಟ್ಟು 1) ನಗದು ಹಣ 1490 ರೂ, 2) ನಾಲ್ಕು ಮಟ್ಕಾ ಬರೇದ ಚಿಟಿಗಳು ಅ||ಕಿ|| 00 3) ಎರಡು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ:04/04/2019 ರಂದು ಬೆಳಿಗ್ಗೆ 9-30 ಸುಮಾರಿಗೆ ನನ್ನ ಮಗ ಸಿದ್ದಯ್ಯನು ಹವಳಗಾ ಗ್ರಾಮದಲ್ಲಿ ತನ್ನ ಗೇಳೆಯನ ಮದುವೆ  ಇರುತ್ತದೆ. ನಾನು ಮದುವೆಗೆ ಹೋಗಿ ಬರುತ್ತೆನೆ ಅಂತ ನಮ್ಮ ಗ್ರಾಮದ ಮಂಜುನಾಥ ತಂದೆ ಕುಪೆಂದ್ರ ಹೆರೂರ ರವರ ಮೋ ಸೈಕಲ ನಂ:ಕೆ-32 ಈಜಿ-8259 ನೇದ್ದನ್ನು ತಗೆದುಕೊಂಡು ನಮ್ಮ ಗ್ರಾಮದ ಗೌಡು @ ಜಯಕುಮಾರ ತಂದೆ ಬಾಬು ಹೆರೂರ ಈತನಿಗೆ ತನ್ನ ಜೋತೆ ಸದರಿ ಮೋಟಾರ ಸೈಕಲ ಮೇಲೆ ಕರೆದುಕೊಂಡು ಹೋಗಿರುತ್ತಾನೆ.ನಂತರ 4-30 ಪಿ,ಎಮ್.ಸುಮಾರಿಗೆ ಅಫಜಲಪೂರ ಪಟ್ಟಣದ ನಮ್ಮ ಸಂಭದಿಕರಾದ ಚಿದಾನಂದ ತಂದೆ ಮಲ್ಲಯ್ಯ ಹಿರೇಮಠ ರವರು ನನ್ನ ಮೋಬೈಲ ನಂಬರಕ್ಕೆ ಪೋನ ಮಾಡಿ ತಿಳಿಸಿದ್ದೆನಂದರೆ ನಾನು ದೇವಣಗಾಂವದಿಂದ ಅಫಜಲಪೂರಕ್ಕೆ ನನ್ನ ಮೋಟಾರ ಸೈಕಲ ಮೇಲೆ  ಬರುತ್ತಿದ್ದಾಗ 3-30 ಪಿ,ಎಮ್.ಸುಮಾರಿಗೆ ಸೋನ್ನ ಕ್ರಾಸ ಹತ್ತೀರ ನನ್ನಿಂದ ಸ್ವಲ ಮುಂದೆ ಮೋಟಾರ ಸೈಕಲ ಮೇಲೆ ಅಫಜಲಪೂರದ ಕಡೆ ಬರುತ್ತಿದ್ದ ನಿಮ್ಮ ಮಗನ ಮೋಟಾರ ಸೈಕಲಿಗೆ ಟಿಪ್ಪರ ನಂ:ಕೆಎ-28 ಸಿ-9038 ನೇದ್ದರ ಚಾಲಕನು ಟಿಪ್ಪರನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ನಿಮ್ಮ ಮಗನ ಮೋಟರ ಸೈಕಲಿಗೆ ಹಿಂದಿನಿಂದ ಅಪಘಾತ ಪಡಿಸಿ ತನ್ನ ಟಿಪ್ಪರ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಸದ್ಯ ನಿನ್ನ ಮಗನಿಗೆ ಮತ್ತು ನಿನ್ನ ಮಗನ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಹುಡುಗನಿಗೆ 108 ವಾಹನದಲ್ಲಿ ಹಾಕಿ ಕಲಬುರಗಿಯ ಆಸ್ಪತ್ರೇಗೆ ಕಳೂಹಿಸಿರುತ್ತೇನೆ ಅಂತ ತಿಳಿಸಿದ ಮೇಲೆ ನಾನು ಕಲಬುರಗಿಯ ಯುನೈಟೆಡ ಆಸ್ಪತ್ರೇಗೆ ಹೋಗಿ ನೋಡಲಾಗಿ ನನ್ನ ಮಗನಿಗೆ ಸದರಿ ಅಪಘಾತದಿಂದ ಎಡಗಡೆ ಮೇಲಕಿಗೆ,ಗದ್ದಕ್ಕೆ ಭಾರಿ ಗಾಯ ಮತ್ತು ಚಪ್ಪಿಗೆ ತರಚಿದ ಗಾಯಗಳಾಗಿರುವದು ಕಂಡು ಬಂತು ಮತ್ತು ನನ್ನ ಮಗನ ಜೋತೆ ಮೋಟಾರ ಸೈಕಲ ಮೇಲೆ ಹೋಗಿದ್ದ ಗೌಡಪ್ಪ @ ಜಯಕುಮಾರ ಹೆರೂರ ಈತನಿಗೆ ತಲೆಗೆ ಭಾರಿ ರಕ್ತಗಾಯಗಳಾಗಿರುವದು ಕಂಡು ಬಂತು ಮತ್ತು ಇಬ್ಬರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅಂತಾ ಶ್ರೀ ಸಿದ್ರಾಮಯ್ಯ ಹಿರೇಮಠ ಸಾ: ಹಳ್ಯಾಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಕುಮಾರಿ ಪ್ರೀಯಾಂಕ ತಂದೆ ಬಸವರಾಜ ಚಿಂಚನಸೂರ ಸಾ: ಚಿಂಚೋಳಿ ರವರು ವಿಧ್ಯಾಬ್ಯಾಸ ಮಾಡಿಕೊಂಡು ಉಪಜೀವನ ಸಾಗಿಸಿಕೊಂಡಿರುತ್ತೇನೆ ಹೀಗಿದ್ದು ನಾನು ಈಗ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಅಭ್ಯಾಸ ಮಾಡಿಕೊಂಡು ಅದರ ಜೋತೆ ಟ್ಯೂಟರಿಯಲ್ ಕಾಲ್ಸನಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನಾನು ಯುಗಾಧಿ ಹಬ್ಬದ ಸಲುವಾಗಿ ಬೆಂಗಳೂರಿನಿಂದ ನಮ್ಮ ಊರಿಗೆ ಬರಲೇಂದು ನಿನ್ನೆ ರಾತ್ರಿ ಬೆಂಗಳೂರಿನಿಂದ ಬಿಟ್ಟು ಇಂದು ಬೆಳಿಗ್ಗೆ ಕಲಬುರಗಿಗೆ ಬಂದು ಇಳಿದಿರುತ್ತೇನೆ. ಕಲಬುರಗಿ ಬಸ್ ನಿಲ್ದಾಣದಲ್ಲಿ ಹುಮನಾಬಾದ-ಮೀರಜ್ ಅಂತಾ ನಾಮ ಪಲಕ ಹಾಕಿದ್ದ ಬಸ್ ನಂ ಕೆಎ-38-ಎಫ್-1058 ನೇದ್ದು ಪ್ಲಾಟ್ ಫಾರಂ ನಲ್ಲಿ ನಿಂತಿದ್ದರಿಂದ ನಾನು ಸದರಿ ಬಸ ನಲ್ಲಿ ಹತ್ತಿ ಕುಳಿತುಕೊಂಡಿರುತ್ತೇನೆ ಸದರಿ ಬಸ್ ಮಲ್ಲಾಬಾದ ಗ್ರಾಮಕ್ಕೆ ನಿಲ್ಲಿಸುವುದಿಲ್ಲಾ ಅಂತಾ ನನಗೆ ಗೊತ್ತಾದ ಮೇಲೆ ನಾನು ಕಲಬುರಗಿಯಿಂದ ಅಫಜಲಪೂರ ವರೆಗೆ ಟಿಕೇಟ್ ತಗೆದುಕೊಂಡು ಮಲ್ಲಾಬಾದ ವರೆಗೆ ಪ್ರಾಯಾಣಿಸುತ್ತೇನೆ ಮಲ್ಲಾಬಾದ ಗ್ರಾಮ ಬಂದ ನಂತರ ನಾನು ಚಾಲಕ ಹಾಗೂ ನಿರ್ವಾಹಕರಿಗೆ ವಿನಂತಿ ಮಾಡಿಕೊಂಡು ಬಸ್ ನಿಲ್ಲಿಸುವಂತೆ ಕೇಳಿದಾಗ ಸದರಿ ಬಸ್ ಮಲ್ಲಾಬಾದ ಗ್ರಾಮದ ಬಸ್ ನಿಲ್ದಾಣ (ಕನಕದಾಸ ಚೌಕ) ಹತ್ತಿರ ನಿಲ್ಲಿಸಿದಾಗ ನಾನು ನನ್ನ ಲಗೇಜ ತಗೆದುಕೊಂಡು ಇಳಿಯುತ್ತಿರುವಾಗ ಸದರಿ ಬಸ್ ಚಾಲಕನು ಬಸ್ಸನ್ನು ನಿರ್ಲಕ್ಷತನದಿಂದ ವೇಗವಾಗಿ ಮುಂದಕ್ಕೆ ಚಲಾಯಿಸಿದ್ದರಿಂದ ನಾನು ಬಸ್ ನಿಂದ ಕೇಳಗೆ ಬಿದ್ದಿರುತ್ತೇನೆ. ಇದರಿಂದ ನನಗೆ ಸ್ವಂಟಕ್ಕೆ ಬಡೆದು ತರಚಿದ ಗಾಯ ಮತ್ತು ಭಾರಿ ಒಳ ಪೆಟ್ಟು ಆಗಿರುತ್ತದೆ ಮತ್ತು ನನ್ನ ಬಲಗೈಗೆ ರಕ್ತಗಾಯವಾಗಿರುತ್ತದೆ. ಸದರಿ ಘಟನೆಯು 9:30 .ಎಮ್ ಸುಮಾರಿಗೆ ಜರುಗಿರುತ್ತದೆ. ಘಟನೆ ನಂತರ ಬಸ್ ಚಾಲಕನು ಬಸ್ ನಿಲ್ಲಿಸಿದೇ ಹಾಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ನಂತರ ಅಲ್ಲಿದ್ದ ಸ್ಥಳಿಯರೊಬ್ಬರು 108 ವಾಹನಕ್ಕೆ ಕರೆ ಮಾಡಿ ನನಗೆ ಆಸ್ಪತ್ರೆ ಕಳುಹಿಸಿಕೊಟ್ಟಿರುತ್ತಾರೆ ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆಎ-38-ಎಫ್-1058 ನೇದ್ದರ ಚಾಲಕ ಬಸ್ ಅನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಲು ಹೋಗಿ ನನಗೆ ಅಫಘಾತ ಪಡೆಸಿದ ಸದರಿ ಬಸ್ ಚಾಲಕನ ವಿರುದ್ದ ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 April 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ. ಶಶಿಕಲಾ ಗಂಡ ಮಲ್ಲೇಶಿ ಕಮ್ಮನ ಸಾ; ಪಟ್ಟಣ ಗ್ರಾಮ ತಾ;ಜಿ;ಕಲಬುರಗಿ ರವರ ಗಂಡ ಮಲ್ಲೇಶಿ ಕಮ್ಮನ ಇವರು ಪ್ರತಿದಿವಸದಂತೆ ಆಟೋರಿಕ್ಷಾ ನಡೆಯಿಸಲು ಮನೆಯಿಂದ ಕಲಬುರಗಿಗೆ ಹೋದರು ಮದ್ಯಾನ 3 ಗಂಟೆಯ ಸುಮಾರಿಗೆ ನನ್ನ ಗಂಡ ನನಗೆ ಫೋನ ಮಾಡಿ ಮನೆಯಲ್ಲಿ ಮಕ್ಕಳು ಊಟ ಮಾಡಿದ್ದಾರೆ ಹೇಗೆ ಮತ್ತು ಏನು ಮಾಡುತಿದ್ದಾರೆ ಅಂತಾ ಕೇಳಿದರು ನಂತರ ಸಂಜೆ 06-30 ಗಂಟೆಯ ಸುಮಾರಿಗೆ ಪುನಾ ಫೋನ ಮಾಡಿ ರಾತ್ರಿಬರಲು ತಡವಾಗುತ್ತದೆ ಎಲ್ಲರೂ ಊಟ ಮಾಡಿಕೊಳ್ಳಿ ಅಂತಾ ಹೇಳಿದರು ರಾತ್ರಿಯಾದರೂ ಮನೆಗೆ ಬರಲಿಲ್ಲಾ ನಾವು ಅವರ ಹಾದಿ ಕಾಯ್ದು ಮಲಗಿ ಕೊಂಡೇವು ಇಂದು ದಿನಾಂಕ.05-04-2019 ರಂದು 7 ಗಂಟೆಯ ಸುಮಾರಿಗೆ ನಮ್ಮ ಓಣಿಯಲ್ಲಿ ಜನರು ಅಂದಾಡುತಿದ್ದು ಏನೆಂದರೆ ಪಟ್ಟಣದಿಂದ ಆಳಂದಕ್ಕೆ ಹೋಗುವ ರೋಡಿಗೆ ಹೊಂದಿ ಹಣಮಂತ ಜವಳಗಿ ಚೌಡಪೂರವಿವರ ಹೊಲದ ಬಂದಾರಿಯಲ್ಲಿ ಒಬ್ಬ ವ್ಯಕ್ತಿಯ ಕೊಲೆಯಾಗಿ ಬಿದಿರುತ್ತಾನೆ ಅಂತಾ ಗೊತ್ತಾಗಿ ನಾನು ಮತ್ತು ನನ್ನ ಮಕ್ಕಳು ನಮ್ಮ ಅತ್ತೆ ತಾರಾಬಾಯಿ, ಭಾವ ಕುಪೇಂದ್ರ , ಮೈದುನ ಶ್ರೀಕಾಂತ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು  ಸದರಿ ಶವವು ನನ್ನ ಗಂಡನದೆಯಾಗಿದ್ದು ನೋಡಲಾಗಿ ಮೈಮೇಲೆ ಶರ್ಟ ಇರಲಿಲ್ಲಾ ತಲೆಯ ಬಲಭಾಗ, ಬಲಮೆಲಕಿಗೆ , ಮೂಖದ ಮೇಲೆ ಭಾರಿಗಾಯವಾಗಿ ಭಾರಿ ರಕ್ತಸ್ರಾವವಾಗಿ ,ಮುಖ ಜಜ್ಜಿದಂತ್ತಾಗಿ, ಮೂಗಿನಿಂದ ಬಾಯಿಂದ ರಕ್ತಸ್ರಾವಾಗಿ ವಿರೂಪವಾಗಿರುತ್ತದೆ. ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ನನ್ನ ಗಂಡ ಮಲ್ಲೇಶಿಗೆ ಬಾರವಾದ ಕಲ್ಲಿನಿಂದ ತಲೆಮೇಲೆ ಮುಖದ ಮೇಲೆ  ಹೊಡೆದು ಜಜ್ಜಿ ಕೊಲೆ ಮಾಡಿ ಮುಖ ಗುರ್ತು ಸಿಗದಂತೆ ಮಾಡಿ ಹೋಗಿರುತ್ತಾರೆ. ಸದರಿ ಘಟನೆಯು ದಿನಾಂಕ.04-04-2019 ರಂದು ರಾತ್ರಿ 10 ಪಿ.ಎಂ.ದಿಂದ.ದಿನಾಂಕ.05-04-2019 ರಂದು ಮುಂಜಾನೆ 6 ಎ.ಎಂ.ದ ಮದ್ಯದ ಅವಧಿಯಲ್ಲಿ ಸಂಭವಿಸಿರುತ್ತದೆ. ಆದುದರಿಂದ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಪಟ್ಟಣ ಸೀಮಾಂತರದ ಚೌಡಾಪೂರ ಹೊಲದ ಬಂದಾರಿಯಲ್ಲಿ  ಆಳಂದ ರೋಡಿನ ಪಕ್ಕದಲ್ಲಿ ಬಯಲು ಜಾಗೆಯಲ್ಲಿ ನನ್ನ ಗಂಡ ಮಲ್ಲೇಶಿ ಕಮ್ಮನ ಇವರಿಗೆ ಭಾರವಾದ ಕಲ್ಲಿನಿಂದ ತಲೆ ಮೇಲೆ ಮುಖದ ಮೇಲೆ ಎತ್ತಿಹಾಕಿಕೊಲೆ ಮಾಡಿ ಮುಖ ಗುರುತು ಸಿಗದಂತೆ ಮುಖದ ಮೇಲೆ ಕಲ್ಲು ಎತ್ತಿಹಾಕಿ ಮುಖ ವಿರುಪಗೊಳಿಸಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಭಾರಿ ರಕ್ತಗಾಯ ಪಡಿಸಿದ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ ಭಾಗ್ಯಶ್ರೀ ಗಂಡ ಸಂತೋಷ ದೊಡಮನಿ ಸಾ: ಹುಲ್ಲೂರ ರವರ ತವರುರೂ ದೇಸಾಯಿಕಲ್ಲೂರ ಗ್ರಾಮ ಇರುತ್ತದೆ. ನನಗೆ 6 ವರ್ಷಗಳ ಹಿಂದೆ ಹುಲ್ಲೂರ ಗ್ರಾಮದ ಸಂತೋಷ ತಂದೆ ಚಂದ್ರಾಮ ದೊಡಮನಿ ಇವನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು, ನನಗೆ ಚಂದ್ರಾಮ ಅಂತಾ ಒಂದು ಗಂಡು ಮಗು ಇರುತ್ತದೆ. ನನ್ನ ಗಂಡ ಮದುವೆ ಆದ ಕೆಲವು ವರ್ಷಗಳವರೆಗೆ ನನಗೆ ಚನ್ನಾಗಿ ನೋಡಿಕೊಂಡು ನಂತರ ನನ್ನ ಶೀಲದ ಮೇಲೆ ಸಂಶಯ ಮಾಡುತ್ತಾ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದನು, ನಾನು ಈ ಬಗ್ಗೆ ಹಬ್ಬ ಹರಿದಿನಕ್ಕೆ ನನ್ನ ತವರೂರಿಗೆ ಹೋದಾಗ ನನ್ನ ತಂದೆ ಚಂದ್ರಕಾಂತ, ತಾಯಿ ಮಲ್ಲಮ್ಮಗೆ ನನ್ನ ಗಂಡ ನನಗೆ ಶೀಲ ಶಂಕೆ ಮಾಡಿ ದೈಹಿಕವಾಗಿ, ಮಾನಸಿಕಕವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ಹೇಳಿದಾಗ ಅವರು ಆಯಿತು ನಾವು ಅವನಿಗೆ ಹೇಳುತ್ತೇವೆ ನೀನು ಅವನೊಂದಿಗೆ ಹೊಂದಿಕೊಂಡು ಇರುವಂತೆ ಬುದ್ದಿ ಮಾತು ಹೇಳಿದ್ದರು. ದಿನಾಂಕ: 04-04-2019 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಾಗ ನನ್ನ ಗಂಡ ಸಂತೋಷ  ತಂದೆ ಚಂದ್ರಾಮ ದೊಡಮನಿ ಇವನು ನನಗೆ ಏ ರಂಡಿ ಬಾಗಿ ನಾನು ಮನೆಯಲ್ಲಿ ಇರಲಾರದಾಗ ನೀ ಯಾವನ ಜೋಡಿ ಮಕ್ಕೊಂಡಿದಿ ಅಂತಾ ಅಂದಾಗ ನಾನು ಯಾಕ್ರಿ ಸುಮ ಸುಮನೆ ಯಾಕ ನನ್ನ ಮೇಲೆ ಸಂಶೆಯ ಮಾಡತಿರಿ ಅಂತಾ ಅಂದಿದ್ದಕ್ಕೆ ನನಗೆ ಕೈಯಿಂದ ಕಪಾಳಕಕ್ಕೆ ಹೊಡೆದನು ನಾನು ನೆಲಕ್ಕೆ ಬಿದ್ದೆನು ಆಗ ನನ್ನ ಗಂಡನು ನನಗೆ ಕೊಲೆ ಮಾಡುವ ಉದ್ದೇಶದಿಂದ ಅಲ್ಲೆ ನಮ್ಮ ಮನೆಯ ಮೂಲೆಯಲಿದ್ದ ಕೊಡಲಿ ತಗೆದುಕೊಂಡು ನನ್ನ ಬಲಗಾಲಿನ ಮೊಳಕಾಲ ಕೆಳಗೆ ಹೊಡೆದು ಕಾಲ ಕತ್ತರಿಸಿದನು, ನಂತರ ಅದೆ ಕೊಡಲಿಯಿಂದ ರಂಡಿ ನಿನಗೆ ಇವತ್ತ ಬಿಡಲಾ ಖಲಾಸ ಮಾಡತಿನಿ ಅಂತಾ ಅಂದು ನನ್ನ ಕುತ್ತಿಗೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದರಿಂದ ಕುತ್ತಿಗೆಗೆ ಬಿಳುವ ಏಟು ನನ್ನ ಎಡೈ ರಟ್ಟೆಗೆ ಬಿದ್ದು ಬಾರಿ ರಕ್ತಗಾಯ ಮಾಡಿದ್ದು, ಅದೆ ಕೊಡಲಿಯಿಂದ ನನ್ನ ಎಡಗಾಲ ಮೊಳಕಾಲ ಮೇಲೆ ಹೊಡೆದು ಬಾರಿ ರಕಕ್ತಗಾಯ ಮಾಡಿದನು ಆಗ ನಾನು ಚಿರಾಡುವದನ್ನು ಕೇಳಿ ನಮ್ಮ ಪಕ್ಕದ ಮನೆಯವರಾದ ನಾಗಪ್ಪ ದೊಡಮನಿ, ಶಾಂತವ್ವ ದೊಡಮನಿ ಹಾಗೂ ಇತರರೂ ಕೂಡಿ ಜಗಳ ಬಿಡಿಸಿದರು, ನಂತರ ನಾಗಪ್ಪ, ಶಾಂತಮ್ಮ ಇವರು ನನಗೆ 108 ಅಂಬುಲೆನ್ಸ ವಾಹನದಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರ್ಗಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಗಂಡ ಸಂತೋಷನು ನನ್ನ ಶೀಲದ ಮೇಲೆ ಶಂಕೆ ಮಾಡಿ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ, ಕಪಾಳಕ್ಕೆ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು ನನಗೆ ಕೊಲೆ ಮಾಡು ಉದ್ದೇಶದಿಂದ ಕೊಡಲಿಯಿಂದ ನನ್ನ ಬಲಗಾಲ ಮೊಳಕಾಲಗೆ ಹೊಡೆದು ಕಾಲ ಕತ್ತರಿಸಿ, ಎಡಗೈಗೆ, ಎಡಗಾಲ ಮೊಳಕಾಲಗೆ ಬಾರಿ ರಕ್ತಗಾಯ ಮಾಡಿದ ನನ್ನ ಗಂಡನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಪಶು ಪರೀವೀಕ್ಷಕರು ಮತ್ತು ವೈದ್ಯಾಧಿಕಾರಿಯವರು ನೀಡಿದ ಚುಚ್ಚು ಮದ್ದಿನಿಂದ  ಎಮ್ಮ ಸಾವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದೇವಿದಾಸ ತಂದೆ ಕೇರಪ್ಪ ಭಾಸ್ಕರ ಸಾ: ಮಡ್ಡಿ ನಂಬರ 01 ರೈಲ್ವೆ ಗೇಟ ಶಹಾಬಾದ ರವರ ಕುಟುಂಬದ ಎಲ್ಲಾ ಸದಸ್ಯರು ಎಮ್ಮೆಗಳ ಸಾಗುವಳಿ ಮೂಲಕ ಜೀವನ ಸಾಗಿಸುತ್ತಿದ್ದೇವು ತಮ್ಮ ಹತ್ತಿರ ಒಟ್ಟು 35-40 ಎಮ್ಮೆಗಳ ಸಾಗುವಳಿ ಮಾಡುತ್ತೇವೆ  ನಮ್ಮ ಎಮ್ಮೆಗಳು ಸಾಗುವಳಿ ಸಮಯದಲ್ಲಿ ಯಾವುದೆ ರೀತಿಯ ಅರೋಗ್ಯ ತಪಾಸಣೆ ಗೊಸ್ಕರ ನಮ್ಮ ಶಹಾಬಾದ ನಗರ ಪಶು ವೈದ್ಯಕೀಯ ಚಿಕಿತ್ಸೆಯಲ್ಲಿ ಅರೋಗೈ ತಪಾಸಣೆ ಮಾಡುವ ರುಡಿಯಲ್ಲಿ ಇರುತ್ತೇವೆ ದಿನಾಂಕ: 05/04/2019 ರಂದು ನಮ್ಮ ಎಮ್ಮೆ ಆರೋಗ್ಯ ಏರುಪೇರುವಾದ ಪ್ರಯುಕ್ತ ಸ್ಥಳಿಯ ಪಶು ವೈದ್ಯಕೀಯ ಆಸ್ಪತ್ರೆಗೆ ಮುಂಜಾನೆ 10-00 ಗಂಟೆಗೆ ಹೋಗಿ ಸಂದರ್ಶನ ನೀಡಿದಾಗ ಪಶು ಅರೋಗ್ಯ ಆಧಿಕಾರಿಗಳಾದ ಶ್ರೀ ನೀಲಪ್ಪ ಪಾಟೀಲ ರವನರನ್ನು ಸಂಪರ್ಕ ಮಾಡಿದಾಗ ವೈದ್ಯಕೀಯ ಅಧಿಕಾರಿಗಳು ತಮ್ಮ ಆಸ್ಪತ್ರೆಯಲ್ಲಿ ಪಶು ವೈದ್ಯಕೀಯ ಪರೀಕ್ಷಕರಾದ ಶ್ರೀ ಶಿವಶಂಕರಪ್ಪ ಎಮ್ ಮೈನಾಳ ರವರು ನಮ್ಮ ಎಮ್ಮೆ ತಪಾಸಣೆಗೊಸ್ಕರ ಇಂದು ಮುಂಜಾನೆ 10-50 ರಿಂದ 11-45 ಗಂಟೆ ಒಳಗಾಗಿ ಮನೆಗೆ ಸಂಪರ್ಕ ನೀಡಿದಾಗ  ನಮ್ಮ ಎಮ್ಮೆ ತುಂಬು ಗರ್ಭಣಿ ಹೊಂದಿದ್ದ  ಬಗ್ಗೆ ತಿಳಿಯ ಪಡಿಸಲಾಗಿಯು ಸಂಬಂದ ಪಟ್ಟ ಪಶು ವೈದ್ಯಕೀಯ ಅಧಿಕಾರಿಗಳು ಆಗಮಿಸಿ ಸಂಪೂರ್ಣವಾಗಿ ಎಮ್ಮೆ ತಪಾಸಣೆ ಮಾಡದೆ ಎಮ್ಮೆಗೆ ಒಟ್ಟು 03 ಚುಚ್ಚುಮುದ್ದು ನೀಡಿ ಸಂಪೂರ್ಣವಾಗಿ ಎಮ್ಮೆ ಆಸ್ತವ್ಯವಸ್ಥೆ ಮಾಡಿರುತ್ತಾರೆ ನಂತರ ನನ್ನ ಎಮ್ಮೆ ಮರಣ ಹೊಂದಿದೆ  ತಕ್ಷಣ ಸಂಬಂಧ ಪಟ್ಟ ವೈದ್ಯ ಆಧಿಕಾರಿಗಳಿಗೆ  ಈ ಘಟನೆ ಬಗ್ಗೆ ಕೇಳಿದಾಗ ವೈದ್ಯಾಧಿಕಾರಿಗಳು ನಾನು ಏನು ಮಾಡುವಂತಿಲ್ಲವೆಂದು ಹೇಳಿಕೆ ನೀಡಿರುತ್ತಾರೆ ಸಾವು ಯಾರ ಕೈಯಲ್ಲಿ ಇರುತ್ತದೆ ಎಂದು ಮರು ಪ್ರಶ್ನೆ ಹಾಕಿರುತ್ತಾರೆ  ಇಂದು ದಿನಾಂಕ: 05/04/2019 ರಂದು ಪಶು ವೈದ್ಯಕೀಯ ಪರಿಕ್ಷಕರಿಂದ ನನ್ನ ಎಮ್ಮೆಯನ್ನು ಮರಣ ಹೊಂದಿರುತ್ತದೆ  ಇದ್ದರಿಂದ ನನಗೆ ಒಟ್ಟು 150000-00 ರೂ ದಷ್ಟು ಕಿಮ್ಮತಿನ ಎಮ್ಮೆ ಕಳೆದುಕೊಂಡಿರುತ್ತೇನೆ ಈ ಪ್ರಯುಕ್ತ ತಾವುಗಳು ನನ್ನ ಎಮ್ಮೆಗೆ ವಿನಾಕಾರಣ ಜೀವ ತೆಗೆದು ಹಾಕಿದ  ಶಿವಶರಣಪ್ಪ ಎಮ್ ಮೈನಾಳ , ಪಶು ವೈದ್ಯಕೀಯ ಪರೀಕ್ಷಕರು ಪಶು ಆಸ್ಪತ್ರೆ ಶಹಾಬಾದ ಮತ್ತು ಶ್ರೀ ನೀಲಪ್ಪ ಪಾಟೀಲ ಪಶು ವೈದ್ಯರು ಶಹಾಬಾದ ಇವರ ಮೇಲೆ ಕಾನೂನುನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣಭೆಯಲ್ಲಿ ಪ್ರಕರಣ ದಾಖಲಾಗಿದೆ.