POLICE BHAVAN KALABURAGI

POLICE BHAVAN KALABURAGI

20 March 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸೋಮಶೇಖರ ತಂದೆ ಗುರುಲಿಂಗಪ್ಪ ಖಾನಗೌಡರ ಸಾ|| ಸುಂಬಡ ತಾ|| ಜೇವರ್ಗಿ ರವರ ತಂದೆಯ ಹೆಸರಿಗೆ  ನಮ್ಮೂರ ಸಿಮಾಂತರದಲ್ಲಿ ನಮ್ಮದೊಂದು ಹೊಲ ಇದ್ದು, ಅದರ ಸರ್ವೆ ನಂ 76 ನೇದ್ದರಲ್ಲಿ 4 ಎಕರೆ ಜಮೀನು ಇರುತ್ತದೆ, ಹೊಲದ ಸಲುವಾಗಿ ನಮ್ಮ ತಂದೆ ಯಡ್ರಾಮಿ ಪಿ.ಕೆ.ಜಿ.ಬಿ ಬ್ಯಾಂಕನಲ್ಲಿ ಸುಮಾರು 95,000/- ಸಾವಿರ ಹಾಗೂ ಖಾಸಗಿಯಾಗಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು, ನಮ್ಮ ತಂದೆ ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ, ಸಾಲ ಹೇಗೆ ತೀರಿಸುವುದು. ಸಲ ಹೊಲದಲ್ಲಿನ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 19-03-2019 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಗುರುಲಿಂಗಪ್ಪ ತಾಯಿ ಸಾವಿತ್ರಿ ತಮ್ಮ ಮಡಿವಾಳಪ್ಪ ಎಲ್ಲರೂ ಕೂಡಿ ಮನೆಯಲ್ಲಿ ಇದ್ದಾಗ ನಮ್ಮ ತಂದೆ ಮನೆಯ ಒಳಗಡೆ ಹೋಗಿ, ಮೈಗೆ ಸೀಮೆ ಎಣ್ಣಿ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚಿರಾಡುತ್ತಾ ಹೋರಗೆ ಬಂದರು, ಆಗ ನಾವು ಗಾಬರಿಗೊಂಡು, ಬೆಂಕಿ ಹಾರಿಸಿದೇವು, ಆಗ ತಂದೆಗೆ ನೋಡಲಾಗಿ, ತಮ್ಮ ತಂದೆಯ ಹೊಟ್ಟೆಗೆ,ಮರ್ಮಾಂಗಕ್ಕೆ,ಎರಡು ಮೊಳಕಾಳ ಹತ್ತಿರ ಮೈಗೆ ಅಲ್ಲಲ್ಲಿ ಸುಟ್ಟ ಗಾಯಗಳು ಆಗಿರದ್ದುವು, ನಂತರ ನಾವು ಚಿರಾಡುವ ಶಬ್ದ ಕೇಳಿ ನಮ್ಮ ಅಣ್ಣತಮ್ಮಂಕ್ಕಿಯ ಬಸವರಾಜ ತಂದೆ ಪ್ರಭುರಾಯಗೌಡ ಖಾನಗೌಡರ,ಮಲ್ಲಿನಾಥ ತಂದೆ ಸುಬ್ಬರಾಯಗೌಡ ಖಾನಗೌಡರ ಇವರು ಬಂದರು ಎಲ್ಲರೂ ಕೂಡಿ ಉಪಚಾರ ಕುರಿತು  ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜೇವರಗಿಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಜೇವರಗಿ ಸಮೀಪ ಪೈಯರ ಆಪೀಸ್ ಎದುರಡಗೆ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ನಮ್ಮ ತಂದೆ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರೇವೂರ ಠಾಣೆ : ದಿನಾಂಕ:13/03/2019 ರಂದು ರಾತ್ರಿ 1:30  ಎ.ಎಮ್.ಕ್ಕೆ ಅಫಜಲಪೂರ ತಾಲೂಕಿನ ನೀಲೂರ ಗ್ರಾಮದ ಜಿಯೋ ರಿಲಾಯನ್ಸ ಟವರಿನ 1) ) PATCH CORD SM DUP LCUPC 60M||ಕಿ||68182/- ರೂಪಾಯಿ 2) RRH POWER,JH,850 BAND 60M||ಕಿ||87272/-ರೂಪಾಯಿ ಒಟ್ಟು 155454/-ರೂಪಾಯಿ ಕಿಮ್ಮತ್ತಿನ ಕೇಬಲ ವಾಯರನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಶ್ರೀ ಆನಂದ ತಂದೆ ಯೋಗೇಶ್ವರಪ್ಪ ಜಿಯೋ ರಿಲಾಯನ್ಸ ಟವರ ಕಂಪನಿ ನಂ 51 ಪ್ಲಾಲೇಸ ರೋಡ ಕ್ರಾಸ್ ವಸಂತ ನಗರ ಬೆಂಗಳೂರು 52 ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 March 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀ  ಅಣ್ಣನಾದ ಸಿದ್ದಪ್ಪ ತಂದೆ ದುರ್ಗಪ್ಪ ತಳಕೇರಿ ಸಾ:ಬೇಳಗುಂಪಾ ರವರ ತಮ್ಮನಾದ ಶಿವಯೋಗಿ ಇತನು  ದಿನಾಂಕ 09/03/2019 ರಂದು ಮದ್ಯಾಹ್ನ 3-30 ಪಿ.ಎಂ ಸುಮಾರಿಗೆ ನಮ್ಮ ಮನೆಯ ಮುಂದಿನ ಸಿ.ಸಿ ರಸ್ತೆಯ ಮೇಲೆ ನಮ್ಮ ಮನೆಯ ಸ್ವಲ್ಪ ದೂರದಲ್ಲಿದ್ದ ನಾಗಮ್ಮ ಇವಳ ಚಿಕ್ಕ ಮಗ ಜದೀಶ ಇವನು ಕೇಲವು ಹುಡುಗರೊಂದಿಗೆ ಆಟವಾಡುತ್ತಿದ್ದಾಗ ನನ್ನ ತಮ್ಮ ಮನೆಯ ಮುಂದೆ ಆಟವಾಡಬೇಡಿ ಅಂತಾ ಹೇಳಿ ಬೆದರಿಸಿ ಕಳುಹಿಸಿಕೊಟ್ಟಿದ್ದರಿಂದ ಜಗದೀಶನು ತನ್ನ ತಾಯಿ ನಾಗಮ್ಮಳಿಗೆ ಕರೆದುಕೊಂಡು ನನ್ನ ತಮ್ಮ ಶಿವಯೋಗಿ ಇತನಿಗೆ ಯಾಕೇ ಬೆದರಿಸಿದ್ದಿರಿ ಅಂತಾ ಕೇಳಲು ಹೋದಾಗ ಆಗ ನಾಗಮ್ಮಳ ಹಿರಿಯ ಮಗನಾದ ನಾಗರಾಜ ತಂದೆ ಸಾಬಣ್ಣ ಕಟ್ಟಿಮನಿ ಇತನು ತನ್ನ ಕೈಯಲ್ಲಿದ್ದ ಬಡಿಗೆ ಹಿಡಿದುಕೊಂಡು ಬಂದವನೇ ಶಿವಯೋಗಿ ಇತನಿಗೆ ಖಲಾಸ ಮಾಡುತ್ತೆನೆ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಮ್ಮನ ಬಲ ಮೇಲಕಿಗೆ ಹಾಗೂ ತಲೆಯ ಮೇಲೆ ಜೋರಾಗಿ ಹೊಡೆದನು ಇದರಿಂದ್ದ  ನನ್ನ ತಮ್ಮನಿಗೆ ಭಾರಿ ಗುಪ್ತ ಗಾಯವಾಗಿ ಸ್ಥಳದಲ್ಲಿಯೇ ಬೇಹೋಶ ಆಗಿ ಬಿದ್ದಿರುತ್ತಾನೆ ಈ ಘಟನೆಯನ್ನು ನೋಡಿದ ನಾನು ನನ್ನ ಹೆಂಡತಿ ಮಲ್ಲಮ್ಮ ಹಾಗೂ ನನ್ನ ಮಕ್ಕಳಾದ ಮಲ್ಲಿಕಾರ್ಜುನ, ಶ್ರೀಶೈಲ, ಹಾಗೂ ನಮ್ಮೂರಿನ ಜಗಳದ ಕಾಲಕ್ಕೆ ಅಲ್ಲೆ ಇದ್ದ ಸುಬ್ಬಣ್ಣ ತಂದೆ ಭೀಮಶಾ ಕಟ್ಟಿಮನಿ, ಅರ್ಜುನ ತಂದೆ ಕಾಳಪ್ಪ ಎದರುಮನಿ ಎಲ್ಲರೂ ಕೂಡಿ ಬಂದು ಹೊಡೆಯುವುದನ್ನು ಬಿಡಿಸಿಕೊಂಡಿರುತ್ತೆವೆ ನನ್ನ ತಮ್ಮನಿಗೆ ಒಂದು ಖಾಸಗಿ ವಾಹನ ಮಾಡಿಕೊಂಡು ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ್ದು.ಕಾರಣ ನನ್ನ ತಮ್ಮನಿಗೆ ನಮ್ಮ ಗ್ರಾಮದ ನಾಗರಾಜ ತಂದೆ ಸಾಬಣ್ಣ ಕಟ್ಟಿಮನಿ ಇತನು ಕೊಲೆ ಮಾಡುವ ಉದ್ದೇಶದಿಂದ ಬೈದು ಬಡಿಗೆಯಿಂದ ತಲೆಯ ಮೇಲೆ ಮೇಲಕಿನ ಮೇಲೆ ಹೊಡೆದು ಭಾರಿ ಗುಪ್ತ ಗಾಯ ಮಾಡಿದ್ದು ನನ್ನ ತಮ್ಮನನನ್ನು ಚಿಕಿತ್ಸೆಗೋಸ್ಕರ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ತಮ್ಮನಾದ ಶಿವಯೋಗಿತಂದೆ ದುರ್ಗಪ್ಪ ತಳಕೇರಿ ಇತನು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14-03-2019 ರಂದು ಮಧ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಸದಾಶಿವಯ್ಯ ತಂದೆ ಮಲ್ಲಿನಾಥ ಹಿರೇಮಠ ಸಾ:ಬಿದರಚೇಡ ಗ್ರಾಮ, ಹಾ.: ವಿಶ್ವನಗರ ಸೇಡಂ, ರವರು ದಿನಾಂಕ 13/03/2019 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ಶ್ರೀದೇವಿ, ಮಗಳು ದಾಕ್ಷಾಯಿಣಿ ಎಲ್ಲರೂ ಊಟ ಮಾಡಿಕೊಂಡು ಮನೆಯ ಬಾಗಿಲು ಮುಚ್ಚಿ ಕೀಲಿ ಹಾಕಿ ಮನೆಯ ಛತ್ತಿನ ಮೇಲೆ ಹೋಗಿ ಮಲಗಿಕೊಂಡಿದ್ದು, ಇಂದು ದಿನಾಂಕ 14/03/2019 ರಂದು ಮುಂಜಾನೆ 05-00 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಶ್ರೀದೇವಿ ಇವಳು ಎದ್ದು ಛತ್ತಿನ ಮೇಲಿಂದ ಕೆಳಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಗೆ ಹಾಕಿದ ಕೀಲಿಯು ಮುರಿದು ಬಾಗಿಲು ತೆರೆದಿದ್ದು ಕಂಡುಬಂದು ಗಾಬರಿಯಾಗಿ ನನಗೆ ಎಬ್ಬಿಸಿದ್ದು, ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ಮನೆಯಲ್ಲಿ ಬಂದು ನೋಡಲಾಗಿ ನಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿಟ್ಟಿದ್ದ ಅಲಮಾರಿಯ ಕೀಲಿ ಮುರಿದು, ಅಲಮಾರಿ ಲಾಕರ ಒಳಗಡೆ ಇಟ್ಟಿದ್ದ, ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ನಗದು ಹಣ ಹೀಗೆ ಒಟ್ಟು  1,58,000-00 ರೂ.ಗಳು, ಬೆಲೆಬಾಳುವ ಬಂಗಾರದ ಆಭರಣಗಳು, ಮತ್ತು ನಗದು ಹಣ, ಯಾರೋ ಕಳ್ಳರು ನಿನ್ನೆ ದಿನಾಂಕ 13/03/2019 ರ ರಾತ್ರಿ 10-30 ಗಂಟೆಯಿಂದ ಇಂದು ದಿನಾಂಕ 14/03/2019 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ವಿ ಹೊದಲುರ ಕಂದಾಯ ನಿರೀಕ್ಷಕರು ಕರಜಗಿ ರವರು ದಿನಾಂಕ 14/03/2019 ರಂದು ನಸುಕಿನ ಜಾವ ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಮೌಖಿಕ ಆದೇಶದ ಮೇರೆಗೆ ನಾನು ಮತ್ತು ಮೋದಿನಸಾಬ  ಗ್ರಾಮ ಲೇಕ್ಕಾಧಿಕಾರಿ ಮಣೂರ ಇಬ್ಬರೂ ಕೂಡಿ ಶೇಷಗಿರಿ ದಾರಿಯಲ್ಲಿ ಭಿಮಾನದಿಯ ದಡಕ್ಕೆ ಬೇಟಿ ನೀಡಿದಾಗ ಅಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ್ದ ಟ್ಯಾಕ್ಟರ ಸಂಖ್ಯೆ ಕೆಎ-28 ಟಿ-  ಇಂಜೆನ್ ನಂ NNWY02452 ನೇದ್ದನ್ನು ಜಪ್ತಿ ಮಾಡಲಾಗಿರುತ್ತದೆ. ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿರುತ್ತಾನೆ. ಸದರಿ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರಿಂದ ಸದರಿ ಟ್ಯಾಕ್ಟರ ಮಾಲಿಕ ಮತ್ತು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 14/03/2019 ರಂದು ರಾತ್ರಿ  09-30 ಗಂಟೆ ಸುಮಾರಿಗೆ ಹೀರಾಪೂರ ಮಜೀದ ಎದುರುಗಡೆ ಹೋದಾಗ ಅಲ್ಲಿ ಹೀರಾಪೂರ ಮಜೀದ ಹತ್ತಿರ ಇರುವ ಒಂದು ಲೈಟಿನ ಕಂಬದ ಬೆಳಕಿನಲ್ಲಿ 1)ಆನಂದ ತಂದೆ ಹಣಮಂತ ರಾಂಪೂರೆ ಸಾ: ಕಾಂತಾ ಕಾಲನಿ ಕಲಬುರಗಿ 2)ವಾಜೀದ ಪಟೇಲ್ ತಂದೆ ಲಾಡ್ಲೆ ಪಟೇಲ್ ಸಾ: ಹೀರಾಪೂರ 3) ವೈಭವ ಸಾ: ಹೀರಾಪೂರ 4)ಅಸದ ಸಾ: ಹೀರಾಪೂರ 5) ಜೈಭೀಮ ಸಾ: ರಾಜಾಪೂರ 6) ಇಲ್ಲು ಸಾ:ಹೀರಾಪೂರ 7)ಸಾಜೀದ ಸಾ: ಹೀರಾಪೂರ ಮತ್ತು ಇತರರು ನಿಂತಿದಿದ್ದನ್ನು ನೋಡಿ ಅವರ ಹತ್ತಿರ ನಾನು ಮತ್ತು ಈ ಮೇಲಿನ ಎಲ್ಲಾ ಜನರು ಹೋಗಿ ಆನಂದ ರಾಂಪೂರೆ ಇತನಿಗೆ ಶಿವುಕುಮಾರ ಮೋಟಾರ ಸೈಕಲ ವಾಪಸ್ಸು ಕೊಡು ಅಂತಾ ಹೇಳಿದಾಗ ಆಗ ಆನಂದ ಮತ್ತು ವೈಭವ ಹಾಗೂ ವಾಜೀದ ಅಸದ ನಾಲ್ಕು ಜನರು ನನಗೆ ನಮ್ಮ ವ್ಯವಹಾರದಲ್ಲಿ ಯಾಕೇ ನಡುವೆ ಬರುತ್ತೀ ಭೋಸಡಿ ಮಗನೇ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅನ್ನುತ್ತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ಆನಂದ ರಾಂಪೂರೆ ಇತನು ತನ್ನ ಹತ್ತಿರವಿದ್ದ ಚಾಕು ನನ್ನ ಬಲ ಹೊಟ್ಟೆ ಪಕ್ಕೆಗೆ ಹೊಡೆದನು. ವಾಜೀದ ಇತನು ಕೂಡಾ ತನ್ನ ಹತ್ತಿರವಿದ್ದ ಚಾಕುದಿಂದ ನನ್ನ ಬಲ ಬೆನ್ನ ಹಿಂದೆ ಹೊಡೆದನು. ವೈಭವ ಇತನು ಕಲ್ಲಿನಿಂದ ಎಡಗೈ ಭುಜದ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಅಸದ ಇತನು ಕೈ ಮುಷ್ಟಿ ಮಾಡಿ ನನ್ನ ಬಲ ಮೆಲಕಿನ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಜೈಭೀಮ ಇತನು ಕೂಡಾ ಕೈ ಮುಷ್ಟಿ ಮಾಡಿ ಹೊಟ್ಟೆಯಲ್ಲಿ ಹೊಡೆದನು.ಇಲ್ಲು ಮತ್ತು ಸಾಜೀದ ಮತ್ತು ಇತರರು ಕೂಡಿಕೊಂಡು  ಕೈ ಮುಷ್ಟಿ ಮಾಡಿ ಬೆನ್ನ ಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ನನ್ನ ಜೊತೆಯಲ್ಲಿದ್ದ ಗೆಳೆಯರಾದ ಶಿವುಕುಮಾರ, ಸುಭಾಷ, ರವಿ, ಅಂಬರೀಷ ಹಡಪದ ಇವರೆಲ್ಲರೂ ಬಿಡಿಸಿಕೊಂಡಾಗ ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋದೆನು. ಇಲ್ಲದಿದ್ದರೆ ಈ ಮೇಲಿನ ಎಲ್ಲಾ ಜನರು ನನಗೆ ಕೊಲೆ ಮಾಡಿಯೇ ಬಿಡುತ್ತಿದ್ದರು. ಅಂತಾ ಶ್ರೀ ಸಚೀನ ತಂದೆ ಶ್ರೀಮಂತ ಹೂಗಾರ ಸಾ : ಬಿದ್ದಾಪೂರ ಕಾಲನಿ ಕಲಬುರಗಿ  ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 March 2019

KALABURAGI DISTRICT REPORTED CRIMES

ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 10-03-2019 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು  ನಮ್ಮ ಹೊಲದಲ್ಲಿ ಜೋಳದ ರಾಶೀ ಇದ್ದುದಿಂದ ಹೊಲಕ್ಕೆ ಹೋಗಿರುತ್ತೇವೆ. ಹೊಲದಿಂದ ಸಾಯಂಕಾಲ 7:00 ಗಂಟೆಯ ಸುಮಾರಿಗೆ ನಾವು ಮನೆತಗೆ ಬಂದಾಗ ಮನೆಯಲ್ಲಿ ನನ್ನ ಮಗಳು ಇದ್ದಿರಲಿಲ್ಲ. ಆಗ ನಾವು ಹುಡುಕಾಡುತ್ತಿದ್ದಾಗ ನನ್ನ ತಮ್ಮನು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಸಿದ್ದಾರೋಡ ತಂದೆ ಶ್ರೀರಾಮ ಮನ್ಮಿ ಎಂಬಾತನು ಮೋಟರ ಸೈಕಲ ನಂ ಕೆಎ-32 -0777 ನೇದ್ದರ ಮೇಲೆ ನಿಮ್ಮ ಮನೆಗೆ ಬಂದು ನಿಮ್ಮ ಮಗಳಿಗೆ ಮೋಟಾರ ಸೈಕಲ್ ಮೇಲೆ ಕರೆದುಕೊಂಡು ಹೋಗಿರುವುದನ್ನು ನಾನು ನೋಡಿರುತ್ತೇನೆ ಎಂದು ತಿಳಿಸಿದನು. ಮತ್ತೆ ನಾವು ಸಿದ್ದಾರೋಡ ಮನ್ಮಿ ರವರ ಮನೆಗೆ ಹೋದಾಗ ಅವನು ತಮ್ಮ ಮನೆಯಲ್ಲಿ ಇದ್ದಿರಲಿಲ್ಲ. ನಂತರ ನಾವು ಊರಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ನಮ್ಮ ಸಂಭಂದಿಕರ ಊರುಗಳಾದ ಮಾದನ ಹಿಪ್ಪರಗಾ, ಯಳಸಂಗಿ, ಮತ್ತು ಚಿಂಚೋಳಿ ಗ್ರಾಮಗಳಿಗೆ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ.  ದಿನಾಂಕ 12-03-2019 ರಂದು ಮದ್ಯಾಹ್ನ 1:30 ಗಂಟೆಯ ಸುಮಾರಿಗೆ ನನ್ನ ಮಗಳು ಮರಳಿ ಮನೆಗೆ ಬಂದು ನಮಗೆ ತಿಳಿಸಿದ್ದೆನೆಂದರೆ, ದಿನಾಂಕ 10-03-2019 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ಸಿದ್ದಾರೋಡ ಮನ್ಮಿ ಈತನು ಮೋಟರ ಸೈಕಲ ಮೇಲೆ ನಮ್ಮ ಮನೆಗೆ ಬಂದು ನನಗೆ ತನ್ನೊಂದಿಗೆ ಬರಲು ಹೇಳಿದ್ದು ನಾನು ಒಪ್ಪದಿದ್ದರು ನನಗೆ ಹೇದರಿಸಿ ಸುಮ್ಮನೆ ಬಂದರೆ ಸರಿ ಇಲ್ಲದಿದ್ದರೆ ನಿನಗೆ ಇಲ್ಲಿಯೆ ಹೊಡೆದು ಖಲಾಸ ಮಾಡಿ ಹೋಗುತ್ತೇನೆ ಅಂತ ಹೆದರಿಕೆ ಹಾಕಿ ನನಗೆ ಒತ್ತಾಯ ಪೂರ್ವಕವಾಗಿ ತಾನು ತಂದಿದ್ದ ಮೋಟರ ಸೈಕಲ ಮೇಲೆ ನನ್ನನ್ನು ಅಪಹರಿಸಿಕೊಂಡು ಹೋಗಿ, ಸೋನ್ನ ಬ್ರೀಜ ಹತ್ತಿರ ಭೀಮಾ ನದಿಯ ಪಕ್ಕದಲ್ಲಿರುವ ಗಿಡಗಂಟೆಗಳ ಮರೆಯಲ್ಲಿ ಮದ್ಯಾಹ್ನ ನನಗೆ ಒತ್ತಾಯ ಪೂರ್ವಕದಿಂದ ಸಂಬೋಗ ಮಾಡಿ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ನಂತರ ತನ್ನ ಮೋಟರ ಸೈಕಲ ಭೀಮಾ ನದಿಯ ಬ್ರೀಜ ಪಕ್ಕದಲ್ಲಿ ನಿಲ್ಲಿಸಿ ವಿಜಯಪೂರದ ಕಡೆಗೆ ಹೋಗುವ ಬಸ್ಸಿಗೆ ಹತ್ತಿಸಿಕೊಂಡು ವಿಜಯಪೂರಕ್ಕೆ ಕರೆದುಕೊಂಡು ಅಲ್ಲಿ ಜನರು ಇರಲಾರದ ಪ್ರದೇಶದಲ್ಲಿ ಉಳಿದುಕೊಂಡಿದ್ದು ಅಲ್ಲಿಯೂ ನನಗೆ ಒತ್ತಾಯದಿಂದ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ಇಂದು ದಿನಾಂಕ 12-03-2019 ರಂದು ಬೆಳಿಗ್ಗೆ 09:00 ಗಂಟೆಯ ಸುಮಾರಗೆ ವಿಜಯಪೂರದಿಂದ ಕರೆದುಕೊಂಡು ಹೊರಟು ಮದ್ಯಾಹ್ನ 1:15 ಗಂಟೆಯ ಸುಮಾರಿಗೆ ಅಫಜಲಪೂರದ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋಗಿರುತ್ತಾನೆ. ದಿನಾಂಕ 10-03-2019 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಅಪ್ರಾಪ್ತ ವಯಸ್ಸಿನ ನನ್ನ ಮಗಳನ್ನು ಪುಸಲಾಯಿಸಿ ಹೆದರಿಸಿ ಮೋಟರ ಸೈಕಲ ಮೇಲೆ ಅಪಹರಿಸಿಕೊಂಡು ಹೋಗಿ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯೆ ಎಸಗಿದ ಸಿದ್ದಾರೋಡ ತಂದೆ ಶ್ರೀರಾಮ ಮನ್ಮಿ ಸಾ|| ಅಫಜಲಪೂರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ರವಿಂದ್ರ ತಂದೆ ಶಿವಪ್ಪಾ ಭಂಡಾರಿ ಸಾ; ಸಂಜೀವ ನಗರ ಕಲಬುರಗಿ ರವರು ದಿನಾಂಕ.13-4-2019 ರಂದು ಬೆಳಗ್ಗೆ ಮುಂಜಾನೆ 3 ಗಂಟೆಯ ಸುಮಾರಿಗೆ ನಾನು ಹುಮನಾಬಾದ ರಿಂಗರೋಡ ಹತ್ತಿರ ಕ್ರೋಜರ ಮೇಲೆ ಹೋಗುವ ಕುರಿತು ಕಾಯಿತ್ತಾ ನಿಂತಿರುವಾಗ ಅದೇ ವೇಳೆಗೆ  ಹುಮನಾಬಾದ ರಿಂಗರೋಡದಿಂದ ಆಳಂದ ಚಕ್ಕ ಪೋಸ್ಟ ಕಡೆಗೆ ಹೋಗುವ ರಿಂಗರೋಡ ಮೇಲೆ ಯಾವುದೋ ವಾಹನ ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದ ಸಪ್ಪಳ ಬಂದಿತು ಆಗ ನಾನು ಓಡುತ್ತಾ ಹೋಗಿನೋಡಲು ಒಂದು ದೊಡ್ಡದಾದ ಗೂಡ್ಸ ವಾಹನ ಹೋಗುತ್ತಾ ಇತ್ತು ಕತ್ತಲಲ್ಲಿ ಅದರ ನಂಬರ ಕಾಣಲಿಲ್ಲಾ ಆಗ ಅಲ್ಲಿಯೇ ಬಿದ್ದ ವ್ಯಕ್ತಿಯನ್ನು ನೋಡಲಾಗಿ ವಯಸ್ಸು ಅಂದಾಜು 35-40 ವರ್ಷದವನಿದ್ದು ತಲೆ ಬುರುಡೆ ಒಡೆದು ಮೆದಳು  ಮತ್ತು ಮಾಂಸಖಂಡಗಳು ಹೊರಬಂದಿರುತ್ತವೆ. ಹಾಗೂ ಎಡಗಣ್ಣಿನ ಪಕ್ಕದಲ್ಲಿ ಮೆಲಕಿಗೆ ತಲೆಗೆ ಭಾರಿ ಪೆಟ್ಟಾಗಿ ಭಾರಿ ರಕ್ತಸ್ರಾವವಾಗಿ ಮಾಂಸಖಂಡಗಳು ಹೊರಬಂದಿರುತ್ತವೆ. ಎಡಗೈ ಮುರಿದ್ದು ಎಡಗೈ ಭುಜಕ್ಕೆ ಪೆಟ್ಟಾಗಿ ಮಾಸಖಂಡ ಹೊರಬಂದಿದ್ದು,ಎಡಗೈ ಮೋಳಕೈ ಹತ್ತಿರ ಮುರಿದಂತೆ ಆಗಿರುತ್ತದೆ. ಸದರಿಯವನು ಮೃತ ಪಟ್ಟಿದ್ದು ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲಾ,ಸದರಿ ವ್ಯಕ್ತಿಯ ವಯಸ್ಸು 35-40 ವರ್ಷದ ವನಿದ್ದು, ಎತ್ತರ ಅಂದಾಜು 5' 6''ಇದ್ದು ಸಾದಗಪ್ಪು ಮೈ ಬಣ್ಣ ಹೊಂದಿದ್ದು ಬಲಗೈ ರಟ್ಟೆಗೆ ಆಸ್ಪತ್ರೆಯಲ್ಲಿ ಸಲಾಯಿನ ಹಚ್ಚಿಕೊಂಡ ಗಾಯ ಮತ್ತು ಪಟ್ಟಿ ಇರುತ್ತದೆ. ಆದುದರಿಂದ ದಿನಾಂಕ.13-03-2019ರಂದು ಬೆಳಗಿನ ಜಾವ3-00ಎ.ಎಂ.ದ ಸುಮಾರಿಗೆ ಸದರಿ ಅಪರಿಚಿತ ವ್ಯಕ್ತಿಯು  ರಸ್ತೆಯ ಮೇಲೆ ಹೋಗುತ್ತಿದ್ದಾಗ ಅದೇವೇಳಗೆ ಹುಮನಾಬಾದ ರಿಂಗರೋಡ ಕಡೆಯಿಂದ ಯಾವೂದೋ ಗೂಡ್ಸ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ಸದರಿ ವ್ಯಕ್ತಿಗೆ ಡಿಕ್ಕಿ ಹೊಡೆದು ಸದರಿ ವಾಹನದ ಟೈರ ಆತನ ತಲೆಯ  ಮೇಲಿಂದ ಹೋಗಿದ್ದು ತಲೆ ಬುರೆಡೆ ಒಡೆದು ಮಾಂಡ ಖಂಡಗಳು ಹೊರಬಂದಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದು ಅಪಘಾತ ಪಡಿಸಿದ ವಾಹನ ಚಾಲಕನು ತನ್ನ ವಾಹನವನ್ನು ಹಾಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ . ಕಾರಣ ಸದರಿ ಮೃತ ಅಪರಿಚಿತ ವ್ಯಕ್ತಿ ಸಂಬಧಿಕರನ್ನು  ಪತ್ತೆ ಮಾಡುವದು ಹಾಗೂ ಅಪಘಾತ ಪಡಿಸಿದ ವಾಹನ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.