POLICE BHAVAN KALABURAGI

POLICE BHAVAN KALABURAGI

24 December 2018

KALABURAGI DISTRICT REPORTED CRIMES.


¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ 23/12/18 gÀAzÀÄ 2.30 ¦.JªÀÄPÉÌ RtzÁ¼À ¹ªÀiÁAvÀgÀzÀ ¸ÀPÁðj ±Á¼ÉAiÀÄ ºÀwÛgÀ DgÉÆÃ¦vÀgÀÄ ºÀtªÀ£ÀÄß ¥ÀtQÌlÄÖ E¸ÉàÃl J¯ÉUÀ¼À ¸ÀºÁAiÀÄ¢AzÀ CAzÀgÀ ¨ÁºÀgÀ E¸ÉàÃl dÆeÁl DqÀÄwÛzÁÝUÀ zÁ½ ªÀiÁr DgÉÆÃ¦üvÀjAzÀ ¸ÀܼÀ¢AzÀ £ÀUÀzÀÄ ºÀt 4180/-gÀÆ ºÁUÀÆ 52 E¸ÉàÃl J¯ÉUÀ¼À d¦Û ¥Àr¹PÉÆAqÀÄ ªÀÄÄA¢£À PÀæªÀÄ dgÀÆV¹ದ್ದ  ಬಗ್ಗೆ ವರದಿ.
¤A§UÁð ¥ÉưøÀ oÁuÉ : ದಿನಾಂಕಃ- 22/12/2018 ರಂದು 12.15 ಗಂಟೆಗೆ ಶ್ರೀ ನಿತಿನ ತಂದೆ ಆನಂದ ತಳಕೇರಿ ವಃ21 ವರ್ಷ ಜಾಃಹೊಲೇಯ ಉಃಕೂಲಿ ಸಾಃಕೊಡಲ ಹಂಗರಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದೆನೆಂದರೆ, ತನ್ನ ಅಕ್ಕಳಾದ ನಿರ್ಮಲಾ ಇವಳಿಗೆ ಸುಮಾರು 7 ½ ವರ್ಷಗಳ ಹಿಂದೆ ಕೌಲಗಾ ಗ್ರಾಮದ ದೇವಿಂದ್ರ ತಂದೆ ತುಕಾರಾಮ ಕಣಮೂಸ ಈತನೊಂದಿಗೆ ವಿವಾಹವಾಗಿದ್ದು ಅವರಿಗೆ ಎರಡು ಜನ ಮಕ್ಕಳಿರುತ್ತಾರೆ.  ಮದುವೆಯಾದ ಎರಡು ಮೂರು ವರ್ಷಗಳ ವರೆಗೆ ದೇವಿಂದ್ರನು ಚನ್ನಾಗಿದ್ದು ಆನಂತರ ಅತಿಯಾದ ಸರಾಯಿ ಸೇವನೆ ಮಾಡುವ ವ್ಯಸನಕ್ಕೆ ಬಿದ್ದು ದಿನಾಲು ಸಾರಾಯಿ ಕುಡಿದ ಅಮಲಿನಲ್ಲಿ ಮನೆಗೆ ಬಂದು ಮನೆಯಲ್ಲಿ ವಿನಾಕಾರಣ ನಿರ್ಮಲಾ ಇವಳೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆ ಬಡೆ ಮಾಡುತ್ತಾ, ದೈಹಿಕ ಮತ್ತುಮಾನಸೀಕ ಕಿರುಕುಳ ನಿಡುತ್ತಾ ಬಂದಿರುತ್ತಾನೆ. ಇತ್ತಿಚಿಗೆ ಎರಡು ಮೂರು ತಿಂಗಳಿಂದ ಅತಿಯಾದ ಸರಾಯಿ ಸೇವಿಸುತ್ತಾ ತನಗೆ ಕುಡಿಯಲು ಮತ್ತು ಸಂಸಾರ ನಡೆಸಲು ಹಣ ಕಡಿಮೆ ಬಿದ್ದಾಗ ತ್ರಾಸ ಕೊಡವುದು ಹೆಚ್ಚು ಮಾಡಿದ್ದರಿಂದ ಒಂದು ತಿಂಗಳ ಹಿಂದೆ ನಾನು ಮತ್ತು ನನ್ನ ಮನೆಯವರು ಕೌಲಗಾ ಗ್ರಾಮಕ್ಕೆ ಹೋಗಿ ದೇವಿಂದ್ರನಿಗೆ ಬುದ್ದಿಹೇಳಿ ಬಂದಿರುತ್ತೆವೆ. ಆದರು ಕೂಡ ತ್ರಾಸ ಕೊಡುವದು ನಿಲ್ಲಿಸದೆ ದಿನಾಂಕ 20/12/2018 ರಂದು ರಾತ್ರಿ 10.30 ಗಂಟೆಗೆ ಮನೆಯಲ್ಲಿ ಜಗಳ ಮಾಡಿ ತವರು ಮನೆಯಿಂದ ಸರಾಯಿ ಕುಡಿಯುವ ಸಲುವಾಗಿ ಮತ್ತು ಸಂಸಾರಕ್ಕೆ ಅಡಚಣಿ ಇದ್ದಿದ್ದರಿಂದ ನಿನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ರಂಡಿ ಅಂತ ಅವಾಚ್ಯವಾಗಿ ಬೈಯ್ದು ಹೊಡೆ ಬಡೆ  ಮಾಡಿ ಹಲ್ಲೆ ಮಾಡಿದ್ದರಿಂದ ನಿರ್ಮಲಾ ಇವಳು ತ್ರಾಸ್ ತಾಳಲಾರದೆ ನಾನು ಸಾಯ್ತಿನಿ ಅಂತ ಅಂದಿದಕ್ಕೆ, ದೇವಿಂದ್ರನು ಹ್ಯಾಂಗ ಸಾಯತಿ ಸಾಯಿ ರಂಡಿ ಅಂತ ಸಿಮೇ ಎಣ್ಣೆ ಡಬ್ಬಿ ತಂದು ನಿರ್ಮಲಾ ಇವಳ ಕೈಯಲ್ಲಿ ಕೊಟ್ಟಿದ್ದು ನಿರ್ಮಲಾ ಇವಳು ಡಬ್ಬಿಯಿಂದ ಸೀಮೆ ಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು ಬೆಂಕಿ ಕಡ್ಡಿ ಕೊರೆದು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ಮೈ ತುಂಬಾ ಭಾರಿಸುಟ್ಟ ಗಾಯಗಳಾಗಿದ್ದರಿಂದ ಉಪಚಾರಕ್ಕಾಗಿ ಆಳಂದ ಸರ್ಕಾರಿ ಆಸ್ಪತ್ರೆಗೆ ಒಯ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಜಿಲ್ಲಾ  ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು.  ಉಪಚಾರ ಹೊಂದುತ್ತಾ ದಿನಾಂಕ: 22/12/2018 ರಂದು 09.40 ಗಂಟೆಗೆ ನಿರ್ಮಲಾ ಇವಳು ಮೃತಪಟ್ಟಿರುತ್ತಾಳೆ. ನಿರ್ಮಲಾ ಇವಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ  ಮಾಡಿ ದೈಹಿಕ ಮಾನಸೀಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೆರಣಿ ನೀಡಿದ ದೇವಿಂದ್ರನ ಮೇಲೆ ಸೂಕ್ತ ಕಾಯಿದೆ ಕಾನೂನು ಕ್ರಮಕೈಗೊಳ್ಳಲು ಕೊಟ್ಟ  ದೂರಿನ ಸಾರಾಂಶದ ಮೇಲೆ ನಿಂಬರ್ಗಾ ಪೊಲೀಸ ಠಾಣಾ ಪ್ರಕರಣ ಧಾಖಲಿಸಿಕೊಂಡು ಬಗ್ಗೆ ವರದಿ.
ªÀÄÄzsÉÆÃ¼À¥ÉưøÀ oÁuÉ : ದಿನಾಂಕ 22-12-2018 ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಾಗಿರುತ್ತೇನೆ, ನನಗೆ ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು ದೊಡ್ಡವನು ಇಮ್ರಾನ ವ|| 17 ವರ್ಷ ಇತನು ಗುರುಮಿಠಕಲ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಹೀಗಿದ್ದು ಇಂದು ದಿನಾಂಕ 22-12-2018 ರಂದು ಬೆಳಗ್ಗೆ 08-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಹಿರಿಯ ಮಗ ಇಮ್ರಾನ ಇಬ್ಬರು ಕೂಡಿಕೊಂಢು, ನಾನು ಪಾಲಿಗೆ ಮಾಡಿದ ನಮ್ಮೂರ ನರಸಿಂಹಲು ಬಿಚ್ಚಾಲ ಇವರ ಹೊಲಕ್ಕೆ ಬಂದು ಕಕೆಲಸ ಮಾಡುತ್ತಿದ್ದಾಗ ಬೆಳಗ್ಗೆ 10-30 ಗಂಟೆ ಸುಮಾರಿಗೆ ನನ್ನ ಮಗ ಇಮ್ರಾನ ಇತನು ಸಂಡಾಸಕ್ಕೆ ಹೋಗುತ್ತೆನೆ ಅಂತಾ ನಾವು ಕೆಲಸ ಮಾಡುತ್ತಿದ್ದ ಹೊಲದಿಂದ ಪಕ್ಕದ ಹೊಲದ ಕಡೆಗೆ ಹೋಗಬೇಕು ಅಂತಾ ಹೊಲದ ಪಕ್ಕದಲ್ಲಿರುವ ಗುರುಮಿಠಕಲ ಮುಧೋಳ ರೋಡನ್ನು ದಾಟುತ್ತಿದ್ದಾಗ ಗುರುಮಿಠಕಲ ಕಡೆಯಿಂಧ ಒಬ್ಬ ಟ್ರಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ಮಗ ಇಮ್ರಾನ ಇತನಿಗೆ ಡಿಕ್ಕಿಪಡಿಸಿದ್ದರಿಂದ, ನನ್ನ ಮಗನು ರಸ್ತೆಯ ಮೇಲೆ ಬಿದ್ದಿದ್ದು, ಸದರಿ ಟ್ರಾಕ್ಟರ ನನ್ನ ಮಗನ ಮೇಲೆ ಹೋಗಿದ್ದರಿಂದ ನನ್ನ ಮಗನು ರಸ್ತೆಯ ಮೇಲೆ ಬಿದ್ದು ಒದ್ದಾಡುತ್ತಿದ್ದಾಗ ನಾನು ಸದರಿ ಘಟನೆಯನ್ನು ನೋಡಿ ಹೋಗಿ ನನ್ನ ಮಗನ ಹತ್ತಿರ ಹೋಗುತ್ತಿದ್ದಾಗ ಸದರಿ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ತನ್ನ ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ನಂತರ ನನ್ನ ಮಗನಿಗೆ ನಾನು ಮತ್ತು ರಸ್ತೆಯ ಮೇಲೆ ಬರುತ್ತಿದ್ದ ಜನರು ಸೇರಿ ನೋಡಲಾಗಿ ನನ್ನ ಮಗನ ಮೇಲೆ ಟ್ರಾಕ್ಟರನ ಟೈರು ಹಾದು ಹೋಗಿದ್ದು ಅವನ ಬಲ ಸೊಂಟದ ಭಾಗದಲ್ಲಿ ತೆರಚಿದ ರಕ್ತಗಾಯವಾಗಿದ್ದು, ಹಾಗು ಅವನ ಬಲಗಡೆ ಕಪಾಳದ ಮೇಲಿಂದ  ಟ್ರಾಕ್ಟರ ಟೈರ ಹಾದು ಹೋಗಿದ್ದರಿಂದ ತಲೆ ಚಪ್ಪಟೆಯಾಗಿ ಹಲ್ಲಿನ ದವಡೆ ಮುರಿದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಸತ್ತು ಹೋಗಿದ್ದು, ಮತ್ತು ಅವನ ಬಲಬಾಗದ ಎದೆಯ ಗೂಡಿನ ಎಲಬುಗಳು ಮುರಿದು ಹೋಗಿದ್ದು, ಹಾಗು ಅಲ್ಲಲ್ಲಿ ತೆರುಚಿದ ಗಾಯಗಳಾಗಿದ್ದು ಇರುತ್ತದೆ. ನಂತರ ನನ್ನ ಮಗನಿಗೆ ಡಿಕ್ಕಿ ಪಡಿಸಿದ ಟ್ರಾಕ್ಟರ ಸಮೀಪ ಹೋಗಿ ಅದರ ನಂ ನೋಡಲಾಗಿ ENG NO NAEW13293, ಟ್ರಾಲಿಗೆ ನಂಬರ ಇರುವದಿಲ್ಲಾ.. ನಂತರ ನನ್ನ ಮಗನ ಶವವು ರಸ್ತೆಯ ಮೇಲೆ ಬಿದ್ದಿದ್ದರಿಂದ ಅವನ ಶವವನ್ನು ನಾನು ಮತ್ತ ನಮ್ಮ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮೂರ ನರಸಪ್ಪ ತಂದೆ ಸಾಬಣ್ಣ ಬುಡುಕಿ ಲಾಲಅಹ್ಮದ ತಂದೆ ಖತಲಸಾಬ ನಕೀಬ, ಹಾಗು ವಿಷಯ ತಿಳಿದು ಸ್ಥಳಕ್ಕೆ ಬಂದ ನಮ್ಮ ಅಣ್ಣಂದಿರಾದ ಬುರಾನಸಾಬ, ಖಾಸಿಂಸಾಬ ಹಾಗು ಇತರರು ಸೇರಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುರುಮಿಠಕಲ ಸರ್ಕಾರಿ ಆಸ್ಪತ್ರೆಗೆ ತಂದು ಹಾಕಿದ್ದು ಇರುತ್ತದೆ. ಕಾರಣ ಸದರಿ ಮೇಲ್ಕಂಡ ಟ್ರಾಕ್ಟರ ನಂ ENG NO NAEW13293 ನೆದ್ದರ ಚಾಲಕನು ತನ್ನ ಟ್ರಾಕ್ಟರನ್ನು ಅತೀ ವೇಗದಿಂದ ನಿರ್ಲಷ್ಕ್ಯತನದಿಂಧ ನಡೆಸಿ ನನ್ನ ಮಗನಿಗೆ ಡಿಕ್ಕಿಪಡಿಸಿ ನನ್ನ ಮಗನ ಸಾವಿಗೆ ಕಾರಣವಾಗಿದ್ದು ಅವನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಪಿರ್ಯಾಧಿ ಸಾರಂಸದ ಮೇಲಿಂದ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.

20 December 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 18-12-2018 ರಂದು ಅಫಜಲಪೂರ ಪಟ್ಟಣದ ಘತ್ತರಗಾ ರೋಡ ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ  ಪಟ್ಟಣದ ಘತ್ತರಗಾ ರೋಡ ಲಕ್ಷ್ಮೀ ಗುಡಿಯ ಸಮೀಪ ಹೋಗಿ ಲಕ್ಷ್ಮೀ ಗುಡಿಯಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಲಕ್ಷ್ಮೀ ಗುಡಿಯ ಮುಂದಿನ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸೊಂದಪ್ಪ ತಂದೆ ಅರ್ಜುನ ಮುಗಳಿ ಸಾ|| ಘತ್ತರಗಾ ರೋಡ ಲಕ್ಷ್ಮೀ ಗುಡಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 810/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ನಂತರ ಸದರಿಯವನಿಗೆ ಮಟಕಾ ಬರೆದುಕೊಂಡು ಯಾರಿಗೆ ಕೊಡುತ್ತಿ ಎಂಬ ಬಗ್ಗೆ ವಿಚಾರಿಸಲು ಸದರಿ ವ್ಯೆಕ್ತಿ ತಿಳಿಸಿದ್ದೆನೆಂದರೆ, ನಾನು ಜನರಿಂದ ಮಟಕಾ ಬರೆದುಕೊಂಡು ದುಧನಿಯ ಶ್ರೀಕಾಂತ ಪಾನಶಾಫ್ ವ್ಯಾಪಾರಿಗೆ ಕೊಡುತ್ತೇನೆ ಎಂದು ತಿಳಿಸಿರುತ್ತಾನೆ.  ಸದರಿಯವನೊಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ :  ದಿನಾಂಕ 18-12-2012 ರಂದು  ಬೆಳಿಗ್ಗಿನ ಜಾವ 00.30 ಗಂಟೆಯಿಂದ 4.00 ಗಂಟೆಯ ಮದ್ಯದ ಅವಧಿಯಲ್ಲಿ ಹೊನ್ನಕಿರಣಗಿ ಗ್ರಾಮದಲ್ಲಿ ಎರ್ ಟೆಲ ಟಾವರದಲ್ಲಿದ್ದ  ಶೇಟರದ ಕೀಲಿ ತೆಗೆದು ಒಳಗಡೆ ವಿದ್ಯುತ ಸರಬರಾಜಿಗಾಗಿ ಜೋಡಣೆ ಮಾಡಿದ ಪವರ ಕೇಬಲ ಕಟ್ಟ ಮಾಡಿ ಜೋಡಣೆ ಮಾಡಿದ ಅಮರರಾಜ 600 ಎಎಚ್ 48 ವೋಲ್ಟದ 24 ಬ್ಯಾಟ್ರಿಯ ಸೇಲ್ಲಗಳು ಅ:ಕಿ: 24000-00 ರೂಪಾಯಿ ಕಿಮ್ಮತ್ತಿನವು ಯಾರೋ ಕಳ್ಳರು ಕಳವು ಮಾಡಿಕೊಂಡು.ಹೋಗಿರುತ್ತಾರೆ ಅಂತಾ . ಶ್ರೀ  ಗುರುಲಿಂಪ್ಪಾ ತಂದೆ ಗುರುಬಸಪ್ಪಾ ಮಲ್ಕಪನವರ್ ಸಾ:ರೇವಣಸಿದ್ದೇಶ್ವರ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ದಿನಾಂಕ:18/12/2018 ರಂದು ನಮ್ಮ ಚಿಕ್ಕಪ್ಪನಾದ ಶ್ರೀಮಂತ ತಂದೆ ಮಸ್ತಾನಪ್ಪಾ ಬಂದಗೆ ಇವರು ಗೋಳಾ(ಬಿ) ಗ್ರಾಮದ ಲಕ್ಕಮ್ಮ ದೇವಿಯ ದೇವರು ಮಾಡುವ ಕಾರ್ಯಕ್ರಮವಿಟ್ಟುಕೊಂಡಿದ್ದರಿಂದ ಸದರಿ ದೇವರ ಕಾರ್ಯಕ್ರಮಕ್ಕೆ ನಮ್ಮ ಕುಟುಂಬದವರಿಗೂ ಸಹ ಆವ್ಹಾನ ನೀಡಿದ್ದು ಅದರಂತೆ ನಾನು ನನ್ನ ತಮ್ಮನಾದ ಜೈಭೀಮ ಹಾಗೂ ನಮ್ಮ ಚಿಕ್ಕಪ್ಪ ಶ್ರೀಮಂತ ಮತ್ತೆ ನಮ್ಮ ಓಣಿಯಯವರಾದ ಕಾಶಪ್ಪಾ ತಂದೆ ಹಣಮಂತ ಬಂದಗೆ, ಶಾಂತಬಾಯಿ ಗಂಡ ಸೂರ್ಯಕಾಂತ ಬಂದಗೆ, ನೀಲಮ್ಮ ಗಂಡ ಶ್ರೀಮಂತ ಬಂದಗೆ, ಗುಂಡಮ್ಮ ಗಂಡ ಹಣಮಂತರಾಯ ಬಂದಗೆ, ಮತ್ತು ಲಕ್ಷ್ಮಣ ತಂದೆ ಲಕ್ಕಪ್ಪಾ ಕಾಂಬಳೆ ರವರುಗಳು ಕೂಡಿಕೊಂಡು ನನ್ನ ಕ್ರೂಜರ್ ಜೀಪಿನಲ್ಲಿಯೇ ಗೋಳಾ(ಬಿ) ಗ್ರಾಮದ ಲಕ್ಕಮ್ಮ ದೇವರಿಗೆ ಹೋದಾಗ ಮಧ್ಯಾಹ್ನ ಸದರಿ ದೇವಸ್ಥಾನದಲ್ಲಿ ಇಬ್ಬರು ವ್ಯಕ್ತಿಗಳು ದೇವರ ದರ್ಶನ ಮಾಡುವ ಸಂದರ್ಭದಲ್ಲಿ ನನ್ನ ತಮ್ಮನಾದ ಜೈಭೀಮ ಮುಂಡಾ ಹೊಡೆದ ತಕಾರರು ಮಾಡಿರುತ್ತಾರೆ. ನಂತರ ಸಂಜೆ 7-30 ಗಂಟೆಯ ಸುಮಾರಿಗೆ ಕಾರ್ಯಕ್ರಮ ಮುಗಿದ ನಂತರ ನಾವುಗಳು ಮತ್ತೆ ವಾಪಸ ನಮ್ಮೂರಿಗೆ ಬರುವ ತಯಾರಿಯಲ್ಲಿದ್ದಾಗ ಮಧ್ಯಾಹ್ನ ತಕರಾರು ಮಾಡಿದ ಇಬ್ಬರು ವ್ಯಕ್ತಿಗಳು ತಮ್ಮೊಂದಿಗೆ ಇನ್ನು 16 ರಿಂದ 18 ಜನರನ್ನು ಕರೆದುಕೊಂಡು ಬಂದು ನನ್ನ ತಮ್ಮನಾದ ಜೈಭೀಮನಿಗೆ ಏ ಭೋಸಡಿ ಮಗನೆ ಮಧ್ಯಾಹ್ನ ನಮ್ಮೊಂದಿಗೆ ತಕರಾರು ಮಾಡಿದ್ದಿಯಾ ಎಂದು ಅವಾಚ್ಯವಾಗಿ ಏರುಧ್ವನಿಯಲ್ಲಿ ಬೈಯುತ್ತಾ ಅಲ್ಲಿಯೇ ಬಿದ್ದಿರುವ ಬಡಿಗೆಯನ್ನು ತಗೆದುಕೊಂಡು ನನ್ನ ತಮ್ಮನ ತಲೆಯ ಮೇಲೆ ಹೊಡೆಯುತ್ತಿದ್ದರು. ಆಗ ನಾನು  ಜಗಳ ಬಿಡಿಸಲು ಹೋದಾಗ ಎಲ್ಲರೂ ಸೇರಿ ನನಗೆ ನೆಲಕ್ಕೆ ಕೆಡವಿ ಬಡಿಗೆಯಿಂದ ಕಬ್ಬಿಣದ ರಾಡಿನಿಂದ ಮತ್ತು ಕಲ್ಲಿನಿಂದ ಹೊಡೆದ್ದಿದ್ದರಿಂದ ನನ್ನ ಮುಂದಿನ ಮೇಲ್ಭಾಗದ 4ಹಲ್ಲುಗಳು ಬಿದ್ದು ಅಲ್ಲದೆ ತಲೆಗೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತಗಾಯಗಳಾಗಿರುತ್ತದೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನಮ್ಮೂರಿನ ಕಾಶಪ್ಪಾ ಬಂದಗೆ, ಶ್ರೀಮಂತ ಬಂದಗೆ, ಶಾತಾಬಾಯಿ ಬಂದಗೆ, ನೀಲಮ್ಮ ಬಂದಗೆ, ಗುಂಡಮ್ಮ ಬಂದಗೆ, ಹಗೂ ಲಕ್ಷ್ಮಣ ಕಾಂಬಳೆ ರವರುಗಳು ಜಗಳಾ ನೋಡಿ ಬಿಡಿಸಿರುತ್ತಾರೆ. ನಂತರ ನಮ್ಮ ಚಿಕ್ಕಪ್ಪ ಶ್ರೀಮಂತ ಇವರು ನನಗೆ ಹಾಗೂ ನನ್ನ ತಮ್ಮನಿಗೆ ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಉಪಚಾರ ಕುರಿತು ನನಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಜೈಭೀಮನಿಗೆ ಯುನೈಟೇಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ನಾವುಗಳಿಬ್ಬರು ಸದ್ಯ ಉಪಚಾರ ಹೊಂದುತ್ತಿದ್ದೇವೆ. ಸದರಿ ನಮಗೆ ಹಲ್ಲೆ  ಮಾಡಿದ ವ್ಯಕ್ತಿಗಳ ಹೆಸರು ನಮಗೆ ಗೊತ್ತಿರುವುದಿಲ್ಲ ಅವರುಗಳನ್ನು ನೋಡಿದಲ್ಲಿ ಗುರ್ತಿಸುತ್ತೇವೆ ಸದರಿ 16 ರಿಂದ 20 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀ ಮಲ್ಲಪ್ಪಾ ತಂದೆ ಭೀಮಣ್ಣಾ ಚೀಟನಳ್ಳಿ ಸಾ: ಸಿರಸಿ(ಎ) ಹಾಲಿ ವಸತಿ ಮುಗಳಖೋಡ  ರವರ ತಮ್ಮನಾದ ಪ್ರದಿಪ ಈತನು ಏಳು-ಎಂಟು ವರ್ಷದ ಹಿಂದೆ ಗುಜರಾತಿನಲ್ಲಿ ಲೇಬರ ಕೆಲಸಕ್ಕೆ ಹೋದಾಗ ಅಲಿಗೆ ಚಿಂಚನಸೂರ ಗ್ರಾಮದ ಅಂಬವ್ವಾ ಉರಕನ ಇವರ(ಮಗಳಾದ) ದೇವಿದಾಶಿ ಲಕ್ಷ್ಮಿ ಇವರು ಸಹ ಗುಜರಾತನಲ್ಲಿ ಕೆಲಸಕ್ಕೆ ಹೋದಾಗ ಲಕ್ಷ್ಮಿ ಇವರಿಗೆ ಗಂಡ ಮತ್ತು ಎರಡು ಮಕ್ಕಳು ಇದ್ದರು ಸಹ ನಮ್ಮ ತಮ್ಮ ಪ್ರದಿಪ ಲಕ್ಷ್ಮಿ ಇವಳೊಂದಿಗೆ ಪ್ರೀತಿಸಿದ್ದು ಆಗ ಲಕ್ಷ್ಮಿ ಅವರು ತನ್ನ ಗಂಡ ತುಕಾರಾಮ ವಾಲಿಕಾರ ತಂದೆ ಶಿವರಾಜ ವಾಲಿಕರ ಸಾ: ಅಹಮದಬಾದ ಇವರನ್ನು ಭಿಟ್ಟು ತಮ್ಮನೊಂದಿಗೆ ಏಂಟು ವರ್ಷಗಳಿಂದ ಸಂಸಾರ ಮಾಡಿದ್ದು  ಅವರಿಗೆ ಏಳು ವರ್ಷದ ಗಂಡು ಮಗು ರಾಜೇಶ ಅಂತ ಇದ್ದು ಅವರು ಎರಡು ವರ್ಷ ಗುಜರಾತನಲ್ಲಿ ಇದ್ದು ನಂತರ ಐದು ವರ್ಷದಿಂದ ಚಿಂಚನಸೂರ ಗ್ರಾಮದಲ್ಲಿ ವಾಸವಿದ್ದು  ನಮ್ಮ ತಮ್ಮ ಕೆಲಸಕ್ಕೆ ಗುಜರಾತಕ್ಕೆ ಹೋಗಿ ಬರುವುದು ಮಾಡುತ್ತಿದ್ದರು ಅದರಂತೆ ನಿನ್ನೆ ದಿನಾಂಕ 18/12/2018 ರಂದು 3 ಪಿ,ಎಮ್, ಸುಮಾರಿಗೆ ನಮ್ಮ ತಮ್ಮನ ಹೆಂಡತಿ ಲಕ್ಷ್ಮಿ ಇವಳು ನಮ್ಮ ಗ್ರಾಮದ ಹಾಗು ನಮ್ಮ ಸಮಾಜದ ಅಣತಮಕಿಯ ತುಕಾರಾಮ ಭಾವಿದೊಡ್ಡಿ ಇವರಿಗೆ ಫೋನಮಾಡಿ ತಿಳಿಸಿದರು ಅವರು ತಿಳಿಸಿದ ನಂತರ ನನ್ನ ತಮ್ಮ ಪ್ರದಿಪ ಇತನು ಕಳೆದೊಂದು ವಾರದಿಂದ ಅತಿಯಾದ ಹೊಟ್ಟೆಬೆನೆ ಇದ್ದು ಮತ್ತು ಅತಿಆದ ಸರಾಯಿ ಸೇವಿಸಿ ನಾನು ಲಕ್ಷ್ಮಿ ಜವಳಗ ಗ್ರಾಮಕ್ಕೆ ಕೂಲಿ ಕೆಲಸ ಹೊಗಿದಾಗ ಅಂದಾಜು 1 ಪಿ,ಎಮ್, ಸುಮಾರಿಗೆ ಮನೆಯಲ್ಲಿ ಮನೆಯ ಮೇಲಿನ ಪತ್ರ ಸೆಡ್ಡಿನ ಪೈಪಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು  ನಾನು ಮನೆಗೆ ಬಂದು ನೋಡಲು ನನ್ನ ತಮ್ಮನು ಕುಡಿತದ ದಾಸನಾಗಿದ್ದು ಮತ್ತು ಅತಿವ್ಯ ಹೊಟ್ಟೆಬೆನೆಯಿಂದ ತಾಳದೆ ಜೀವನಕ್ಕೆ ಜಿಗುಪ್ಸೆ ಹೊಂದಿ ಈ ರೀತಿ ನೇಣು ಹಾಕಿಕೊಂಡು ಸತ್ತಿದ್ದು ಅವನ ಮರಣದಲ್ಲಿ  ಯಾರ ಮೇಲೆಯೂ ಯಾವುದೇ ತರಹದ ಸಂಶಯ ಇರುವುದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 December 2018

KALABURAGI DISTRICT REPORTED CRIMES

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಮಧ್ಯ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 17-12-2018 ರಂದು ಉಡಚಾಣ ಗ್ರಾಮದಲ್ಲಿ ಎರಡು ಜನರು ಅನದಿಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ,  ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಉಡಚಾಣ ಗ್ರಾಮದಲ್ಲಿ ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ನಮ್ಮ ವಾಹನವನ್ನು ನಿಲ್ಲಿಸಿ ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ನೊಡಲು ಒಂದು ಪಾನಶಾಪ್ ಮುಂದೆ  ಎರಡು ಜನರು ತಮ್ಮ ಹತ್ತಿರ ರಟ್ಟಿನ ಬಾಕ್ಸಗಳನ್ನು ಇಟ್ಟುಕೊಂಡು, ಜನರಿಂದ ಹಣ ಪಡೆದು ತಮ್ಮ ಹತ್ತಿರವಿದ್ದ ರಟ್ಟಿನ ಬಾಕ್ಸದಲ್ಲಿ ಕೈ ಹಾಕಿ ಜನರಿಗೆ ಮದ್ಯವನ್ನು ಮಾರಾಟ ಮಾಡಿ, ಬಂದ ಹಣವನ್ನು ರಟ್ಟಿನ ಬಾಕ್ಸನಲ್ಲಿ ಇಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಲು  ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೊದರು, ಆಗ ನಾವು ಸದರಿಯವರನ್ನು ಬೆನ್ನಟ್ಟಿದರೂ ಸಹ ನಮ್ಮಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ. ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿಗಳು ಸ್ಥಳದಲ್ಲಿ ಬಿಟ್ಟು ಹೋದ ರಟ್ಟಿನ ಬಾಕ್ಸನ್ನು ಪರಿಶೀಲಿಸಿ ನೋಡಲು ಬಾಕ್ಸದಲ್ಲಿ 1)  180 ಎಮ್ ಎಲ್ ಅಳತೆಯ OLD  TAVERN  WHISKY ಕಂಪನಿಯ ಒಟ್ಟು 41 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 3034/- ರೂ 2) 90 ಎಮ್ ಎಲ್ ಅಳತೆಯ Origanal Choice ಕಂಪನಿಯ ಒಟ್ಟು 39 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 1170/- ರೂ 3) ಮದ್ಯ ಮಾರಾಟ ಮಾಡಿದ ನಗದು ಹಣ 340/- ರೂ ಇದ್ದವು. ಹಾಗೂ ಸದರಿ ಪಾನಶಾಪ ಮುಂದೆ ಜನರು ಸರಾಯಿ ಕುಡಿದು ಬಿಸಾಡಿ ಹೋಗುತ್ತಿದ್ದ ಖಾಲಿ ಪೌಚಗಳು ಇದ್ದವು. ನಂತರ ಬಾತ್ಮಿದಾರರಿಗೆ ಮದ್ಯ ಮಾರಾಟ ಮಾಡುತ್ತಿದ್ದವರ ಹೆಸರು ವಿಳಾಸ ವಿಚಾರಿಸಲು, 1) ಕಲ್ಯಾಣಿ ತಂದೆ ಸುಬ್ಬಣ್ಣ ನೆಲೋಗಿ ಸಾ|| ಉಡಚಾಣ 2) ಹುಚ್ಚಪ್ಪ ತಂದೆ ತುಕಾರಾಮ ಅವಟಿ ಸಾ|| ಉಡಚಾಣ ಎಂದು ಗೊತ್ತಾಗಿರುತ್ತದೆ. ಪಾನಶಾಪ್ ಬಗ್ಗೆ ವಿಚಾರಿಸಲು ಪಾನಶಾಪ್ ಮದ್ಯ ಮರಾಟ ಮಾಡುತ್ತಿದ್ದ ಕಲ್ಯಾಣಿ ನೆಲೋಗಿ ಈತನ ಪಾನ್ ಶಾಪ್ ಇರುತ್ತದೆ ಎಂದು ಗೊತ್ತಾಗಿರುತ್ತದೆ. ನಂತರ ಸದರಿ ಒಟ್ಟು 4204/- ರೂ ಕಿಮ್ಮತ್ತಿನ ಒಟ್ಟು 80 ಮದ್ಯದ ಪೌಚಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಿವಪುತ್ರ ತಂದೆ ಲಕ್ಕಣ್ಣ ಬುರಲಿ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ರವರ  ತಂದೆಯ ಹೆಸರಿನಲ್ಲಿ 9 ಏಕರೆ 25 ಗಂಟೆ ಜಮೀನು ಇರುತ್ತದೆ ನನ್ನ ಮಗನಾದ ಸುನಿಲ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾರೆ ನನ್ನ ಮಗ ಒಕ್ಕಲುತನ ಕೆಲಸಕ್ಕೆ ಖಾಸಗಿಯಾಗಿ 50,000/-ರೂಪಾಯಿ ಸಾಲ ಮಾಡಿದ್ದು ಇರುತ್ತದೆ ಈ ವರ್ಷ ಮಳೆ ಇಲ್ಲದ ಕಾರಣ ನನ್ನ ಮಗ ನಮ್ಮ ಮನೆಯಲ್ಲಿ ನಮ್ಮ ಮುಂದೆ ಈ ಸಲ ಮಳೆ ಇಲ್ಲ ಬರಗಾಲ ಇದೆ ನಾನು ಒಕ್ಕಲುತನ ಕೆಲಸಕ್ಕೆ ಮಾಡಿದ ಸಾಲ ಹೇಗೆ ಮುಟ್ಟಿಸುವದು ಅಂತ ಹೆಳುತಿದ್ದ ನಾನು ನನ್ನ ಹೆಂಡತಿ ನನ್ನ ಮಗನಿಗೆ ನಾವು  ಸಾಲ ಮುಟ್ಟಿಸುತ್ತೇವೆ ನಿನು ಅದೇ ವಿಚಾರ ಮಾಡಬೇಡ ಅಂತ ತಿಳಿಸಿ ಹೇಳಿರುತ್ತೇವೆ ದಿನಾಂಕ 16/12/2018 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನನ್ನ ಮಗ ಸುನಿಲ ಈತನು ನಮಗೆ ತಿಳಿಸಿದ್ದೆನೆಂದರೆ ನಾನು ನನ್ನ ಗೆಳೆಯನಾದ ಪ್ರಕಾಶ ಮಡಿವಾಳ ರವರ ಮೋಟಾರ್ ಸೈಕಲ್ ಮೇಲೆ ನಾನು ಹಾಗು ಪ್ರಕಾಶ ಇಬ್ಬರು ಹೊಲಕ್ಕೆ ಹೋಗಿ ಬರುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ ನಂತರ 11.30 ಎಎಮ್ ಸುಮಾರಿಗೆ ಪ್ರಕಾಶ ಈತನು ಪೋನ ಮಾಡಿ ನಮಗೆ ತಿಳಿಸಿದ್ದೆನೆಂದರೆ ನಾನು ಹಾಗು ಸುನಿಲ ಇಬ್ಬರು ಹೊಲಕ್ಕೆ ಬಂದು ನಾನು ತಿರುಗಾಡುತ್ತಾ ಸ್ವಲ್ಪ ಮುಂದೆ ಹೋದಾಗ ಸುನಿಲನು ನಿಮ್ಮ ಹೊಲದಲಿದ್ದ ಕ್ರೀಮಿನಾಶಕ ಔಷದಿ ಸೇವನೆ ಮಾಡಿರುತ್ತಾನೆ ನಾನು ಸಧ್ಯ ಸುನಿಲನಿಗೆ ಮೋಟಾರ್ ಸೈಕಲ್ ಮೇಲೆ ಕುಡಿಸಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬರುತಿದ್ದೇನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ನನ್ನ ಹೆಂಡತಿ ನನ್ನ ತಮ್ಮಂದಿರಾದ ಸಿದ್ದರಾಮ ಬುರಲಿ, ಮಡಿವಾಳ ಬುರಲಿ ಹಾಗು ನಮ್ಮ ಓಣಿಯ ಭಾಗಣ್ಣ ಜಮಾದಾರ , ವಿಠ್ಠಲ ಇಂಗಳಗಿ ಎಲ್ಲರು ಕೂಡಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಿ ವಿಚಾರಿಸಲಾಗಿ ನನ್ನ ಮಗ ತಾನು ಒಕ್ಕಲುತನ ಕೆಲಸ ಕ್ಕೆ ಖಾಸಗಿಯಾಗಿ ಮಾಡಿದ ಸಾಲ ಹೇಗೆ ತಿರಿಸುವದು ಈ ಸಲ ಮಳೆ ಇಲ್ಲ ಅಂತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹೊಲದಲ್ಲಿ ಕರ್ಕಿ ಹುಲ್ಲಿಗೆ ಸಿಂಪರಣೆ ಮಾಡುವ ಔಷದಿ ಸೇವನೆ ಮಾಡಿರುವ ಬಗ್ಗೆ ತಿಳಿಸಿದ್ದು ನಾವು ವೈದ್ಯರ ಸಲಹೆಯಂತೆ ನನ್ನ ಮಗನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿಯ ಬಾಬಾ ಹಾರ್ಟ ಫೌಂಡೆಷನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ ನನ್ನ ಮಗನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 17/12/2018 ರಂದು  3.30 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಚಿನ್ನಮ್ಮಾ ಗಂಡ ಗುಂಡಪ್ಪಾ ಹೊನ್ನಡಿ ಸಾ: ಮನ್ನಳ್ಳಿ ತಾ:ಜಿ: ಬೀದರ ರವರ ಗಂಡ ಗುಂಡಪ್ಪಾ ಲಾರಿ ಚಾಲಕನಾಗಿದ್ದು ನಮ್ಮ ಗ್ರಾಮದ ಮುಜೊಬೊದ್ದಿನ್‌‌ ರವರ ಲಾರಿ ನಂ ಕೆಎ 39 – 6239 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡುತ್ತಾ ಬಂದಿರುತ್ತಾನೆ. ದಿನಾಂಕ 16/12/2018 ರಂದು ನಮ್ಮ ಗ್ರಾಮದಿಂದ ಲಾರಿಯಲ್ಲಿ ಕಬ್ಬು ತುಂಬಿಕೊಂಡು ಆಳಂದ ತಾಲ್ಲೂಕಿನ ಭೂಸನೂರ ಕಬ್ಬಿನ ಪ್ಯಾಕ್ಟರಿಗೆ ಹೋಗಿ ಕಬ್ಬು ಹಾಕಿ ಮರಳಿ ಕಲಬುರಗಿ- ಹುಮನಾಬಾದ ಮಾರ್ಗವಾಗಿ ಬರುವಾಗ ಇಂದು ಬೆಳಗಿನ ಜಾವ ಅಂದಾಜು 01:00 ಗಂಟೆ ಸುಮಾರಿಗೆ ಕಪನೂರ ಬ್ರಿಡ್ಜದಾಟಿ ನಂದಿನಿ ರಗೋಜಿ ಪೈನ್ಸನ್ಸ ಎದುರುಗಡೆ ರೋಡಿನ ಬಲಮಗ್ಗಲಿಗೆ ಚಾರಿ ಚಾಲಕ ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ಹೋಗುವಾಗ ಆತನ ನಿಯಂತ್ರ ತಪ್ಪಿ ರೋಡಿನ ಬಲ ತಗ್ಗಿಗೆ ಹೋಗಿ ಎದೆಗೆ ಬಡೆದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ರೋಡಿಗೆ ಹೋಗಿ ಬರುವರು ಯಾರೋ ಲಾರಿ ಮೇಲಿನ ನಂಬರ ನೋಡಿ ಲಾರಿ ಮಾಲಿಕನಿಗೆ ಹೇಳಿದಾಗ ಲಾರಿ ಮಾಲಿಕ ನಮಗೆ ತಿಳೀಸಿದ್ದರಿಂದ ನಾನು ಮತ್ತು ನನ್ನ ಮೈದುನ ಹಾಗು ಮಾವ ಹಾಗು ಲಾರಿ ಮಾಲಿಕ ಘಟನಾ ಸ್ಥಳಕ್ಕೆ ಬಂದು ನೋಡಲು ಘಟನೆ ನಿಜ ಇರುತ್ತದೆ. ನನ್ನ ಗಂಡನು ಲಾರಿಯನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ರೋಡಿನ ತಗ್ಗಿಗೆ ಹಾಯಿಸಿದ್ದರಿಂದ ಎದೆಗೆ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದು ನಿಜ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.