POLICE BHAVAN KALABURAGI

POLICE BHAVAN KALABURAGI

12 December 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ದತ್ತುರಾವ ತಂದೆ ಮೋತಿರಾಮ ಘೋಗರೆ ಸಾ: ಜೋಷಿಗಲ್ಲಿ ಈಶ್ವರ ನಗರ ಬಸವಕಲ್ಯಾಣ ಜೀ. ಬೀದರ ರವರ ಮಗಳು ದಿಪಾಲ್ಲಿಯ ಮದುವೆ ಶ್ರೀಕಾಂತ ರಮೇಶ ಮಾಲ್ಲದಾರ (ವಾಕೋಡೆ) ಜೋತೆ ದಿನಾಂಕ 27-12-2011 ರಂದು ಬಸವಕಲ್ಯಾಣದಲ್ಲಿ ಮಾಡಿದ್ದು  ಈ ಮದುವೆ ನಮ್ಮ ಸಮಾಜದ ರಿತ್ತಿ ರಿವಾಜ ಪಾರಂಪರಿಕ ರೀತಿಯಲ್ಲಿ ಆಯಿತ್ತು. ಇವರಿಗೆ 15 ಲಕ್ಷ (ಹದಿನೈದು ಲಕ್ಷ ರೂಪಾಯಿ) ಇವರಿಗೆ ವ್ಯವಸಾಯ ಮಾಡುವ ಸಲುವಾಗಿ ಕೊಡದು ಇತ್ತು ಆದರೆ ನಾನು ಆತನಿಗೆ ಆ ಸಂದರ್ಭದಲ್ಲಿ ಮಾತ್ರ 5 ಲಕ್ಷ ರೂಪಾಯಿ ಕೊಟ್ಟಿದೆ ಉಳಿದ 10 ಲಕ್ಷ ರುಪಾಯಿ ಆಮೇಲೆ ಕೋಡುತ್ತೇನೆ ಎಂದಿದ್ದೆ  ನನ್ನ ಪಾರಂಪರಿಕ ಅಥವಾ ನನ್ನ ಪರಿಸ್ಥಿತಿ ಗಂಭೀರವಾದರಿಂದ ಕೋಡೊಕೆ  ಆಗಿಲ್ಲ ಅದರ ಜೋತೆ ನಾನು ಇವರಿಗೆ ಮನೆಯ ವಸ್ತುಗಳು ಮತ್ತು 5 ತೋಲೆ ಬಂಗಾರ ಕೊಡದೆ ಅದರ ಜೋತೆ ಈ ಮದುವೆಯ ಎಲ್ಲಾ ಖರ್ಚನ್ನು ನಾನು ನೋಡಿಕೊಂಡಿದ್ದೇನೆ. ಮದುವೆ ಆದಾಗ ಕೇಲವು ತಿಂಗಳು ನನ್ನ ಮಗಳ ಖುಶಾಲವಾಗಿ ಇದ್ದಳು ಕೇಲವು ವರ್ಷದ ನಂತರ ನನ್ನ ಮಗಳಿಗೆ ರಜತ ಎಂಬ ಹುಡುಗ ಅದನಂತರ ರಂಜನ ಎಂಬ ಎರಡನೇಯ ಹುಡಗನಿಗೆ ಜನಸಿದಳು, ಅದನಂತರ ನನ್ನ ಅಳಿಯ ಶ್ರೀಕಾಂತ, ಅತ್ತೆ ವಂದನಾ ರಮೇಶ ಮಾಲ್ಲದಾರ , ಮಾವ ರಮೇಶ ಮಾಲ್ಲದಾರ, ಭಾವ ಶಶಿಕಾಂತ ರಮೇಶ ಮಾಲ್ಲದಾರ ಅವನ ಹೆಂಡತಿ ಸಾರಿಕಾ , ಶಶಿಕಾಂತ ಮಾಲ್ಲದಾರ, ಮೈದುನ ರಜನೀಕಾಂತ ರಮೇಶ ಮಾಲ್ಲದಾರ ಅವನ ಹೆಂಡತಿ ರಶಮಾ ರಜನಿಕಾಂತ ಮಾಲ್ಲದಾರ ಇವರು ಎಲ್ಲರೂ ಸೇರಿ ನನ್ನ ಮಗಳು ದಿಪಾಲ್ಲಿಗೆ ತನ್ನ ತವರುಲ್ಲಿಂದ ಉಳಿದ ಹತ್ತು ಲಕ್ಷ ರೂಪಾಯಿ (10 ಲಕ್ಷ ರೂಪಾಯಿ) ಮಾತಿನ ತಕ್ಕಂತೆ ತರಬೇಕು ಎಂದು ಆಕೆಯ ಮೇಲೆ ಅತ್ಯಾಚಾರವನ್ನು ನಡೆಸಿಕೊಂಡು ಮಾತು ಮಾತಿಗು ಆಕೆಯ ಅತ್ತೆ ನೇಗಣಿ , ಮೈದುನ , ಭಾವ ,ಮಾವ ಮತ್ತು ಗಂಡ ಬೈದು ಹೊಡೆದು ಊಟವನ್ನು ಕೋಡುವುದಿಲ್ಲ ಏನಾದ್ದರು ಆಯಿತು ಅಂದರೆ ದವಾಖನೇಗೆ ವಯುವುದಿಲ್ಲ ಇಂತಹ ಹಿಂಸಾಚಾರವನ್ನು ನಡೆಸುಕೊಂಡಿದ್ದರು. ಇವು ಎಲ್ಲಾ ಆಗಿರುವಂತಹ ವಿಚಾರಗಳನ್ನು ದಿಪಾಲ್ಲಿ ಯಾವಾಗ ಬಸವಕಲ್ಯಾಣಗೆ ಬಂದಾಗ ಹೇಳುತ್ತಿದಳು, ಯಾವಾಗ ನನ್ನ ದೊಡ್ಡ ಅಣ್ಣನಾದಂತಹ ಶ್ರೀ ಬಾಬುರಾವ ಮೋತಿರಾಮ ಘೋಗರೇ, ತಮ್ಮರಾದಂತಹ ಶ್ರೀ ಸಂಜುಕುಮಾರ ಮೋತಿರಾಮ ಘೋಗರೇ. ಹಾಗೂ ಇತ್ತರೆ ಸಂಭಂದಿಕರಾದತಂಹ ಶ್ರೀ ದತ್ತಾ ನಾಮದೇವರಾವ ವಾಕೋಡೆ, ಕೂಡಿ ದಿಪಾಲ್ಲಿಯ ಗಂಡನ ಮನೆಗೆ , ಹೋಗಿ ಎಲ್ಲರಿಗೆ ತಿಳಿಸಿ , ಸಮಜಾಯಿಸಿ ವಿನಂತಿಯನ್ನು ಮಾಡಿಕೊಂಡಿದ್ದೇವೆ, ಅವಾಗ ಅವಳ ಅತ್ತೆ ಗಂಡ, ಮೈದುನ ಭಾವ, ಮಾವ ಹಾಗೂ ಗಂಡ ಎಲ್ಲರು ಸೇರಿ ನನ್ನಗೆ ಪ್ರಶ್ನಿಸಿದರು ಅದು ಎನೆತಂದರೆ ತಾವು ನಮಗೆ ಕೋಟ್ಟಿರುವ ಮಾತು ತಕ್ಕಂತೆ, ಉಳಿದ ಹಣ 10 ಲಕ್ಷ ರೂಪಾಯಿ ಏಕೆ ಕೊಟ್ಟಿಲ , ಕಾರಣ ನನಗೆ ನನ್ನ ಬಾಂಡೆಯ ಅಂಗಡಿಯ ಹಾಕುವದಿದೆ, ಅವಾಗೆ ನಾನು ನಿಮ್ಮ ಮಗಳಾದ ದೀಪಾಲಿಯನ್ನು ಸರಿಯಾಗಿ ನೋಡಿಕೊಳ್ಳುತ್ತೇನೆ, ಆವಾಗ ನನ್ನ ಬಿಕಟ್ಟು ಪರಿಸ್ಥಿತಿಯಂದಾಗಿ ಈ ಹಣವನ್ನು ಆಮೇಲೆ ಕೊಡುತ್ತೆನೆ ಎಂದು ವಿನಂತಿಸಿದರು ಎಂದು ಹೇಳಿ ನಾವೆಲ್ಲರೂ ನಮ್ಮ ಊರು ಬಸವಕಲ್ಯಾಣಗೆ ತೆರಳಿದ್ದು, ಮತ್ತೆ ಅವರು ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿದರು, ಎಂಟು ದಿನಗಳ ಹಿಂದೆ ದಿಪಾಲ್ಲಿ ಬಸವಕಲ್ಯಾಣಕ್ಕೆ ಬಂದಿದ್ದಳು. ಆವಾಗ ನನಗೆ ಹೇಳಿದೆನೆಂದರೆ , ನನಗೆ ಸಣ್ಣ ಸಣ್ಣ ವಿಷಯದ ಮೇಲೆ ಮನೆಯ ಎಲ್ಲಾ ಸದಸ್ಯರು ನನ್ನ ಮೇಲೆ ಅತ್ಯಾಚಾರ ಮಾಡಿರುತ್ತಾರೆ, ಹಾಗೂ ನನಗೆ ಊಟ ಕೋಡುವದಿಲ್ಲಾ ಮೈ ಮೇಲೆ ಹರಿದಿರುವಂತಹ ಬಟ್ಟೆಗಳನ್ನು ಕೊಡುತ್ತಾರೆ, ಒಂದು ಕೊಠಡಿಯೊಳಗೆ ಇಡಿ ದಿನ ಇಡುತ್ತಾರೆ, ಯಾರಿಗೂ ಭೇಟಿಯನ್ನು ಮಾಡಲು ಕೊಡುವದಿಲ್ಲಾ, ದೂರವಾಣಿ ಮಗ ಮಾತಾಡುತ್ತಿರುವಾಗ ಸ್ಪೀಕರ್ ಆನ್ ಅಥವಾ (ಚಾಲು) ಮಾಡಲಿಕೆ ಒತ್ತಾಯಿಸುತ್ತಾರೆ , ಇಂತಹ ಸಿಕ್ಕಾಪಟ್ಟ ಹಿಂಶಾಚಾರವನ್ನು ನನ್ನ ಮೇಲೆ ನಡೆಸಿಕೊಂಡು ಇರುತ್ತಾರೆ. ಯಾವಾಗಲ್ಲು ನನ್ನ ಮದುವೆಯಾದಗ ಹಣವನ್ನು ಕಡಿಮೆ ಕೊಟ್ಟುವುದರಿಂದ ಇವರೆಲ್ಲರು ಮಾತು ಮಾತಿಗೆ ಬಯದು ಹೊಡೆದು ವತಾಯಿಸಿರುವದು ಮಾಡುತ್ತಾರೆ ಎಂದು ಹೇಳಿದಳು, ಆವಾಗ ನಾನು ಶ್ರೀ ದತ್ತುರಾವ ಮೋತಿರಾಮರಾವ ಘೋಗರೇ, ನನ್ನ ಹೆಂಡತಿಯ ಸೋಸೆ ಸುರೇಖಾ ಹಾಗೂ ನನ್ನ ಮಗನಾದಂತಹ ಚಿ.ಸಚೀನ ಎಲ್ಲರೂ ಕೂಡಿ ದೀಪಾಲ್ಲಿಗೆ ತಗೊಂಡಿ ಗಂಡನ ಮನೆಗೆ ತೇರಳಿ ವಿನಂತಿ ಮಾಡಿ ಸಮಜಾಯಿಸಿ ಬಿಟ್ಟು ವಾಪಸ ಬಸವಕಲ್ಯಾಣಗೆ ತೊಗಳಿದ್ದರು.  ಮೊನೆ ದಿನಾಂಕ 9-12-2018 ರಂದು ನಾನು 6-45 ಪಿ.ಎಮ್ ದೂರವಾಣಿ ಮುಖಾಂತರ ಮಾತನಾಡಿದೆನು ಅವಾಗ ಅಕಿ ಅಂದಳು ನಾನು ಇಗ ಬದುಕುವದು ಆಗುವದಿಲ್ಲಾ ಇವರೆಲ್ಲರೂ ನನ್ನ ಕೊಂದು ಹಾಕಲು ಯೋಚಿಸುತ್ತಿದ್ದಾರೆ ಮತ್ತು ಬಹಳ ಹೊಡೆದು ನೋವುವನು ಕೊಡುತ್ತಿದ್ದಾರೆ ಎಂದು ಹೇಳಿದಳು, ಅವಾಗ ನಾನು ಅಕ್ಕಿಗೆ ಸಮಜಾಯಿಸಿ ಧರ್ಯವನ್ನು ಕೊಟ್ಟೆ. ನಿನ್ನೆ ದಿನಾಂಕ 10-12-2018 ರಂದು ದಿಪಾಲ್ಲಿಯ ಮೈದುನ ಶಶಿಕಾಂತ ದೂರವಾಣಿ ನಂಬರ 7353595343 ಮುಖಾಂತರ ನನಗೆ ತ್ವರಿತ ಸೊಂತ ಊರಿಗೆ ಬರಲಿಕೆ ಹೇಳಿದನು ಮತ್ತು ನಿಮ್ಮ ಮಗಳು ನೇಣುಹಾಕಿಕೊಂಡಿದ್ದಾಳೆ ಆಗ ನಾನು ನಮ್ಮ ಊರಿನಲ್ಲಿ ಇರುವಂತಹ ಎಲ್ಲಾ ಸಂಭಂದಿಕರಿಗೆ ತೊಗಂಡು ಸೊಂತ ಊರಿಗೆ ತೇರಳಿದ್ದು ಬಂದು ನೋಡಿದರೆ ನನ್ನ ಮಗಳನ್ನು ಬೆಡ್ ಮೇಲೆ ಮನಕೊಂಡಿರುವಂತಹ ಸ್ಥಿಯಲ್ಲಿದ್ದಳು, ನೋಡಿದಾಗ ಅಕ್ಕಿಯ ಕುತ್ತಿಗೆ ಹಾಗೂ ಮೈ ಮೇಲೆ ಗಾಯ ಇದ್ದವು, ಅವಳ ಮೃತ್ಯವನ್ನು ಬಹಳ ಗಂಭೀರವಾಯಿತು. ನಿಮ್ಮಗೆ ನಾನು ವಿನಂತಿಸುವದೆನೆಂದರೆ ನನ್ನ ಮಗಳ ದಿಪಾಲ್ಲಿಯ ಕೋಲೆಯನ್ನು ಹುಂಡಾ ಸಲುವಾಗಿ ಮಾಡಿದರು. ಇದರಲ್ಲಿ ಕೈವಾಡ ಇರುವಂತಹ ವ್ಯಕ್ತಿಗಳು ಗಂಡ ಶ್ರೀಕಾಂತ ರಮೇಶ ಮಾಲದಾರ, ಮಾವ ರಮೇಶ ಮಾಲದಾರ, ಅತ್ತೆ ವಂದನಾ ರಮೇಶ ಮಾಲದಾರ, ಮೈದುನ ರಜನಿಕಾಂತ ರಮೇಶ ಮಾಲದಾರ, ಭಾವ ಶಶಿಕಾಂತ ರಮೇಶ ಮಾಲದಾರ, ನೆಗೇಣಿ ರೇಶಮಾ ರಮೇಶ ಮಾಲದಾರ, ಭಾವನ ಹೆಂಡತಿ ಸಾರಿಕಾ ಶಶಿಕಾಂತ ಮಾಲ್ಲದಾರ ಇವರೆಲ್ಲರೂ ಕೂಡಿ ನನ್ನ ಮಗಳ ದಿಪಾಲ್ಲಿಯನ್ನು ಕೋಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ದೇವಲಗಾಣಗಾಪೂರ ಠಾಣೆ : ದಿನಾಂಕ 08-12-2018 ರಂದು ರಾತ್ರಿ ಇಂಗಳಗಿ ಗ್ರಾಮದ ನಮ್ಮ ತಂಗಿಯ ಗಂಡನಾದ ಬೀರಪ್ಪ ತಂದೆ ನಿಂಗಪ್ಪ ಮೋನಟಗಿ ಎಂಬಾತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ. ನಾನು ಮತ್ತು ನಮ್ಮೂರಿನ ದತ್ತಪ್ಪ ತಂದೆ ನಿಂಗಪ್ಪ ಮೋನಟಗಿ ಇಬ್ಬರೂ ಕೂಡಿಕೊಂಡು ನನ್ನ  ವೈಯಕ್ತಿಕ ಕೆಲಸದ ನಿಮಿತ್ಯ ರಾತ್ರಿ ಗೊಬ್ಬೂರ (ಬಿ) ಗ್ರಾಮದಲ್ಲಿದ್ದಾಗ ನಿಮ್ಮ ಅಳಿಯನಾದ ಮಾಳಪ್ಪನು ಕಲಬುರಗಿಯಿಂದ ಮೋಟರ ಸೈಕಲ ನಂ ಕೆಎ-32 ಇ.ಎಮ್-1520 ನೇದ್ದರ ಮೇಲೆ ಗೊಬ್ಬೂರ (ಬಿ) ಗ್ರಾಮಕ್ಕೆ ಬಂದಾಗ ನಾನು ಸದರಿಯವನಿಗೆ ಈ ವೇಳೆಯಲ್ಲಿ ಎಲ್ಲಿಗೆ ಹೋಗುತ್ತಿದ್ದಿಯಾ ಅಂತ ಕೇಳಿದಾಗ ಮಾಳಪ್ಪನು ನಮ್ಮ ಅಕ್ಕನ ಮನೆಯಾದ ಮೋಘನಾ ಇಟಗಾ ಗ್ರಾಮಕ್ಕೆ ಹೋಗುತ್ತಿದ್ದೇನೆ ಅಂತ ತಿಳಿಸಿದನು ನಂತರ ನಾನು ಮತ್ತು ದತ್ತಪ್ಪ ತಂದೆ ನಿಂಗಪ್ಪ ಮೋನಟಗಿ ಇಬ್ಬರೂ ನನ್ನ ಮೋಟರ ಸೈಕಲ ಮೇಲೆ ಇಂಗಳಗಿ (ಬಿ) ಗ್ರಾಮಕ್ಕೆ ಹಾಗು ಮಾಳಪ್ಪನು ತನ್ನ ಮೋಟರ ಸೈಕಲ ನಂ ಕೆಎ-32 ಇ.ಎಮ್-1520 ನೇದ್ದರ ಮೇಲೆ ಮೋಘನಾ ಇಟಗಾ ಗ್ರಾಮಕ್ಕೆ ಹೋಗಲು ಕಲಬುರಗಿ-ಚವಡಾಪೂರ ರೋಡಿನ ಮೇಲೆ ಹೋಗುತ್ತಿದ್ದಾಗ ಮಾಳಪ್ಪನು ನಮ್ಮ ಮೋಟರ ಸೈಕಲ ಮುಂದುಗಡೆ ತನ್ನ ಮೋಟರ ಸೈಕಲ ಮೇಲೆ ಹೋಗುತ್ತಿದ್ದನು ರಾತ್ರಿ 10-30 ಗಂಟೆಯ ಸುಮಾರಿಗೆ ಗೊಬ್ಬೂರ (ಬಿ) ಗ್ರಾಮದ ಹತ್ತಿರ ರೋಡಿಗೆ ಇರುವ ಜೈಭವಾನಿ ಡಾಬಾದ ಹತ್ತಿರ ಹೋಗುತ್ತಿದ್ದಾಗ ಚವಡಾಪೂರ ಕಡೆಯಿಂದ ಮೋಟರ ಸೈಕಲ ನಂ ಕೆಎ-32 ಯು-0203 ನೇದ್ದರ ಚಾಲಕನು ತನ್ನ ಮೋಟರ ಸೈಕಲನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮಾಳಪ್ಪನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟರ ಸೈಕಲ ನಂ ಕೆಎ-32 ಇ.ಎಮ್-1520 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತಪಡಿಸಿದ್ದರಿಂದ ಮಾಳಪ್ಪನು ಮೋಟರ ಸೈಕಲ ಸಮೇತ ರೋಡಿನ ಮೇಲೆ ಬಿದ್ದನು ಆಗ ನಾನು ಮತ್ತು ದತ್ತಪ್ಪ ಮೋನಟಗಿ ಇಬ್ಬರು ಮಾಳಪ್ಪನಿಗೆ ಹೋಗಿ ನೋಡಲಾಗಿ ಮಾಳಪ್ಪನ ತಲೆಗೆ ಭಾರೀ ರಕ್ತಗಾಯ ಮತ್ತು ಬಲಗೈಗೆ ಬಾರೀ ರಕ್ತಗಾಯಗಳಾಗಿದ್ದರಿಂದ ಮಾಳಪ್ಪನು ಸ್ಥಳದಲ್ಲಿಯ ಮೃತಪಟ್ಟಿರುತ್ತಾನೆ. ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-32 ಯು-0203 ನೇದ್ದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ದತ್ತು ತಂದೆ ದೀಪಲು ಸಾ|| ಗೊಬ್ಬೂರವಾಡಿ ತಾಂಡಾ ಅಂತ ತಿಳಿಸಿದ್ದು ಸದರಿಯವನಿಗೆ ನೋಡಲಾಗಿ ಸದರಿಯವನ ಬಲಗಾಲಿನ ಹಿಂಬಡಿಗೆ ರಕ್ತಗಾಯವಾಗಿರುತ್ತದೆ. ನಂತರ ಯಾರೋ ಒಬ್ಬರು 108 ಅಂಬುಲೆನ್ಸ ವಾಹನಕ್ಕೆ ಪೋನ ಮಾಡಿದ್ದರಿಂದ ಅಂಬುಲೆನ್ಸ ವಾಹನ ಬಂದ ನಂತರ ಸದರಿಯವನು ಉಪಚಾರ ಕುರಿತು ಗೊಬ್ಬೂರ (ಬಿ) ಸರಕಾರಿ ದವಖಾನೆಗೆ ಹೋಗಿರುತ್ತಾನೆ ಅಂತ ತಿಳಿಸಿದನು. ವಿಷಯ ಗೊತ್ತಾದ ಕೂಡಲೆ ನಾವು ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜವಿರುತ್ತದೆ. ನನ್ನ ಅಳಿಯನಿಗೆ ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-32 ಯು-0203 ನೇದ್ದರ ಚಾಲಕನಾದ ದತ್ತು ತಂದೆ ದೀಪಲು ಸಾ|| ಗೊಬ್ಬೂರವಾಡಿ ತಾಂಡಾ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಗುರಪ್ಪ ತಂದೆ ಲಚ್ಚಪ್ಪ ಮ್ಯಾಕೇರಿ ಸಾ|| ಮೋಘನ ಇಟಗಾ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ರಮೇಶ ತಂದೆ ಶಂಕರ ಪಾಟೀಲ ಸಾ: ಕೈಲಾಸ ನಗರ ಕಲಬುರಗಿ ರವರು ದಿನಾಂಕ: 31/10/2018 ರಂದು ರಾತ್ರಿ ಗಂಟೆಯ ಸುಮಾರಿಗೆ ನ್ನ ಹೊಂಡಾ ಸೈನ ಮೋಟಾರ ಸೈಕಲ ನಂ.ಕೆಎ.32 ಇಎಲ್‌‌.3583 ಅ.ಕಿ.48000/-ರೂ ನೇದ್ದನ್ನು ನಮ್ಮ ಮನೆಯ ಮುಂದಿನ ಕಂಪೌಂಡದಲ್ಲಿ ನಿಲ್ಲಿಸಿ ರಾತ್ರಿ ಮನೆಯಲ್ಲಿ ಮಲಗಿದ್ದು ದಿನಾಂಕ:01/11/2018 ರಂದು ಬೆಳಗ್ಗೆ 5.00 ಗಂಟೆಗೆ ಎದ್ದು ನೋಡಲು ನನ್ನ ಮೋಟಾರ ಸೈಕಲ್‌ ಇರಲಿಲ್ಲ ನಂತರ ನಾನು ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲಾ ಅಂದಿನಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲನ್ನು ಹುಡುಕಿದ್ದು ಆದರು ಕೂಡಾ ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲಾ ಯಾರೋ ಕಳ್ಳರು ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ನನ್ನ ಮೋಟಾರ ಸೈಕಲ ಪತ್ತೆ ಮಾಡಿಕೊಡಬೇಕು ಅಂತಾ ಅಲ್ಲಿಸಿದ ದೂರು  ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಹಣಮಂತ್ರಾಯ ಬೆನಕಟ್ಟಿ, ರವರು  ದಿನಾಂಕ 06/12/2018 ರಂದು ಬೆಳಿಗ್ಗೆ  ನಮ್ಮೂರ ಕ್ರಾಸ ಹತ್ತಿರ ನಮ್ಮ ಹೊಲಕ್ಕೆ ಹೊಗಲು ಕುಳಿತಾಗ ಅದೆ ವೇಳೆಗೆ ಸಿದ್ದಪ್ಪಾ ತಂದೆ ಮಾದಪ್ಪಾ ಮೂಲಿಮನಿ ಸಾ: ಬೆಳಮಗಿ ಈತನು ನಾನು ಕುಳಿತಲ್ಲಿ ಬಂದು ವಿನಾಕಾರಣ ನನಗೆ ಬಂದು ''ಏ ರಂಡಿ ಇಲ್ಲಿ ಯಾಕೆ ಕುಳಿತಿದ್ದಿ, ರಂಡಿ, ಭೋಸಡಿ, ಸೂಳಿ ಅಂತಾ ಬೈಯುತ್ತಿದ್ದಾಗ ನಾನು ಸುಮ್ಮನೆ ಯಾಕೆ ಬೈಯುತ್ತಿ ಅಂದ್ದಿದಕ್ಕೆ ನನಗೆ ಎದುರು ಮಾತಾಡುತ್ತಿ ಸೂಳಿ ಅಂತಾ ಬೈಯುತ್ತಾ ನನಗೆ ಅಲ್ಲೆ ಬಿದ್ದ ಕಲ್ಲಿನಿಂದ ನನ್ನ ಬಲ ತಲೆಗೆ ಹೊಡೆದು ಗುಪ್ತಗಾಯ ಮಾಡಿದ ಕಾಲಿನಿಂದ ಸೊಂಟಗೆ ಒದ್ದು ಮತ್ತು ಇನ್ನೊಂದು ಕಲ್ಲು ತಗೆದುಕೊಂಡು ಎಡಕಾಲಿನ ಹಿಮ್ಮಡಿ ಹತ್ತಿರ ಹೊಡೆದು ತೆರಚಿದ ರಕ್ತಗಾಯಪಡಿಸಿದ ನಾನು ಚಿರಾಡಿದಾಗ ರಂಡಿ ಬಾಯಿ ಮಾಡತಿ ಅಂತಾ ನನ್ನ ಕೂದಲು ಹಿಡಿದು ಎಳೆದಾಡುತ್ತಿದ್ದಾಗ ಅಲ್ಲೆ ಊರಿಗೆ ಹೋಗಲು ನಿಂತಿದ್ದ ನಮ್ಮೂರಿನ ಅಪ್ಪಾರಾಯ ತಂದೆ ಮಲ್ಲಪ್ಪಾ ಬೆನಕಟ್ಟಿ ಮತ್ತು ಜಗನ್ನಾಥ ತಂದೆ ಭೀಮಶಾ ಹೊಲ್ಕರ ಇಬ್ಬರು ಸೇರಿ ನನಗೆ ಬಿಡಿಸಿಕೊಂಡಾಗ ಸೂಳಿ ಇವತ್ತು ಉಳಿದಿದ್ದಿ, ಮತ್ತೆ ಸಿಗು ನಿನಗೆ ಖಲಾಸ ಮಾಡುತ್ತಿನಿ ಅಂತಾ ಅಲ್ಲಿಂದ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 December 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 07-12-2018 ರಂದು ಘತ್ತರಗಾ ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾರೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೇ ಹಣ ಕೊಡದೇ ಮೋಸ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.  ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಘತ್ತರಗಾ ಗ್ರಾಮಕ್ಕೆ ಹೋಗಿ ಅಂಬೇಡ್ಕರ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಅಂಬೇಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದರು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿಯವರಿಗೆ ಹಣ ಕೇಳುತ್ತಿದ್ದರು, ಆಗ ಸದರಿಯವರು ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದರು. ಆಗ ದಾಳಿ ಮಾಡಲು ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡ ತೊಡಗಿದರು. ಆಗ ನಾವು ಬೆನ್ನಟ್ಟಿ ಒಬ್ಬನನ್ನು ಹಿಡಿದಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮೈಹಿಬೂಬ ತಂದೆ ಸಾಬುದ್ದಿನ ಶೇಖ್ ಸಾ|| ವಿಭೂತಿಹಳ್ಳಿ ತಾ|| ಇಂಡಿ ಹಾ|| || ಘತ್ತರಗಾ ಅಂತಾ ತಿಳಿಸಿದ್ದು, ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು 1) ಅರ್ಜುನ ಕಂಬಾರ ಸಾ|| ಘತ್ತರಗಾ 2) ಪರಶುರಾಮ ಭಜಂತ್ರಿ ಸಾ|| ಘತ್ತರಗಾ  ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 450/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನ  ದೊರೆತವು  ಸದರಿಯವುಗಳನ್ನು  ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಾಜು ತಂದೆ ಶಿವಪ್ಪ ಹೋನ್ನಕೇರಿ ಸಾ: ಜಂಬಗಿ ತಾ:ಜಿ: ವಿಜಯಪೂರ  ರವರು ಶ್ರೀ ಶಿವಶರಣಪ್ಪ ತಂದೆ ಗುರಪ್ಪ ಬಿರಾದಾರ ಸಾ|| ಹಿಟ್ನಳ್ಳಿ ತಾ|| ಸಿಂದಗಿ ಇವರು ಅಫಜಲಪೂರ ತಾಲೂಕಿನ ಗುಡ್ಡೆವಾಡಿ ಗ್ರಾಮದಲ್ಲಿ ಒಂದು ಹೊಲ ಪಾಲಿಗೆ ಮಾಡಿದ್ದು, ಸದರಿ ಹೊಲದಲ್ಲಿ ನಾನು ಕೂಲಿ ಕೆಲಸ ಮಾಡಲು ದಿನಗೂಲಿ ಆದಾರದ ಮೇಲೆ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತೇನೆ. ಶಿವಶರಣಪ್ಪ ರವರು ಪಾಲಿಗೆ ಮಾಡಿದ ಹೊಲದ ಮಾಲಿಕ ಭೀಮಣ್ಣಗೌಡ ತಂದೆ ಸಾತಲಿಂಗಪ್ಪ ನಾರಸೇರ ಹಾಗೂ ಶಾಂತಾಬಾಯಿ ಗಂಡ ಸಾತಲಿಂಗಪ್ಪ ನಾರಸೇರ ಮತ್ತು ರೂಪಾ ಗಂಡ ಭೀಮನಗೌಡ ನಾರಸೇರ ಸಾ|| ಗುಡ್ಡೆವಾಡಿ ಇವರುಗಳೂ ನನಗೆ ಪರಿಚಯವಾಗಿದ್ದರೂ ಮತ್ತು ನನ್ನ ಬಗ್ಗೆ ಹಾಗೂ ನನ್ನ ಜಾತಿಯ ಬಗ್ಗೆಯೂ ಸದರಿಯವರಿಗೆ ಗೊತ್ತಿದ್ದು  ದಿನಾಂಕ 05-12-2018 ರ ಬುದುವಾರದಂದು ಕೂಲಿ ಕೆಲಸಕ್ಕಾಗಿ ಶಿವಶರಣಪ್ಪ ರವರು ಪಾಲಿಗೆ ಮಾಡಿದ ಭೀಮಣ್ಣಗೌಡ ನಾರಸೇರ ರವರ ಗುಡ್ಡೆವಾಡಿಯ ಹೊಲಕ್ಕೆ ಬಂದು ಕೆಲಸ ಮಾಡುತ್ತಿದ್ದೆನು. ಮದ್ಯಾಹ್ನ ಸುಮಾರು 1:00 ಗಂಟೆಗೆ ಶಿವಶರಣಪ್ಪ ತಂದೆ ಗುರಪ್ಪ ಬಿರಾದಾರ ಇವರಿಗೆ 1) ಭೀಮಣ್ಣಗೌಡ ತಂದೆ ಸಾತಲಿಂಗಪ್ಪ ನಾರಸೇರ ಸಾ|| ಗುಡ್ಡೆವಾಡಿ 2) ಶಾಂತಾಬಾಯಿ ಗಂಡ ಸಾತಲಿಂಗಪ್ಪ ನಾರಸೇರ ಸಾ|| ಗುಡ್ಡೆವಾಡಿ 3) ರೂಪಾ ಗಂಡ ಭೀಮನಗೌಡ ನಾರಸೇರ ಸಾ|| ಗುಡ್ಡೆವಾಡಿ 4) ಬಸವರಾಜ ತಂದೆ ಸಾತಲಿಂಗಪ್ಪ ನಾರಸೇರ ಸಾ|| ಗುಡ್ಡೆವಾಡಿ ಹಾಗೂ ಇತರ ಸುಮಾರು 8 ರಿಂದ 10 ಜನರುಗಳು ಕೂಡಿ ಕೊಡಲಿ ಮತ್ತು ಚಾಕು ಹಿಡಿದುಕೊಂಡು ಶಿವಶರಣಪ್ಪ ಬಿರಾದಾರ ರವರೊಂದಿಗೆ ಜಗಳ ಮಾಡುತ್ತಿದ್ದಾಗ ನಾನು ಬಿಡಿಸಲು ಹೋದಾಗ ನನಗೆ ಸಮಗಾರ ಸೂಳೆ ಮಗನೆ ನೀ ಬಿಡಿಸಲಿಕ್ಕೆ ಬಂದಿ ಅಂದರೆ ನಿನ್ನನ್ನು ಇದೆ ಕೊಡಲಿಯಿಂದ ಕಡಿದು ಒಗೆಯುತ್ತೇವೆ ಎಂದು ಬೆದರಿಕೆ ಹಾಕಿದರು. ಅಷ್ಟಾದರೂ ನಾನು ಬಿಡಿಸಲು ಹೋದಾಗ ನನಗೆ ಭೀಮನಗೌಡ ನಾರಸೇರ, ಶಾಂತಾಬಾಯಿ ನಾರಸೇರ, ರೂಪಾ ನಾರಸೇರ, ಬವರಾಜ ನಾರಸೇರ ಇವರುಗಳು ನನಗೆ ನೆಲಕ್ಕೆ ಹಾಕಿ ಮನಬಂದಂತೆ ಹೊಡೆದಿರುತ್ತಾರೆ ಮತ್ತು ನನಗೆ ಜೀವ ಬೆದರಿಕೆಯೂ ಹಾಕಿರುತ್ತಾರೆ. ಸದರಿಯವರು ನನಗೆ ಹೊಡೆಯುತ್ತಿದ್ದಾಗ ದಾರಿಯಲ್ಲಿ ಹೋಗುತ್ತಿದ್ದ ಗುಡ್ಡೆವಾಡಿ ಗ್ರಾಮದ ಮಚೇಂದ್ರನಾಥ ತಂದೆ ಮಹಾದೆವಪ್ಪ ಹೂಗಾರ, ಅಂಬೋಜಿ ತಂದೆ ಸಿದ್ದಪ್ಪ ತೇಲಿ, ಚನ್ನಪ್ಪ ತಂದೆ ಮಲ್ಲಪ್ಪ ಘತ್ತರಗಿ ಇವರು ಇನ್ನಿತರರೂ ಕೂಡಿ ಹೊಡೆಯುವುದನ್ನು ನೋಡಿ ಬಂದು ನನಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ದೇವಲಗಾಣಗಾಪೂರ ಠಾಣೆ : ದಿನಾಂಕ 07/12/2018 ರಂದು  ಶ್ರೀ ಅನಿಲಕುಮಾರ ತಂದೆ ಜೆಟ್ಟೆಪ್ಪ ಡಿಪ್ಪಿ ಸಾ|| ಹಿರಾಪೂರ ಕಲಬುರಗಿ, ಇವರಿಗೆ ಅನುಜ ಎಂಬ 14 ವರ್ಷದ ಮಗ ಇದ್ದು, ಹೆಂಡತಿ ಮೃತಪಟ್ಟಿರುವದರಿಂದ ಅವಳ ತವರು ಊರಾದ ಚೌಡಾಪೂರದಲ್ಲಿ  ಸುಮಾರು 14 ವರ್ಷದಿಂದ ಇರುತ್ತಾನೆ. ಹೀಗಿದ್ದು ದಿನಾಂಕ 07/12/2018 ರಂದು ಮದ್ಯಾಹ್ನ 01.30 ಕ್ಕೆ  ಚವಡಾಪೂರ ಗ್ರಾಮದ ರಾಜು ಮರೆಪ್ಪ ನವಲೇಕರ ಎಂಬುವವರು ನನ್ನ ಅಣ್ಣನಾದ ರಾಜೇಂದ್ರ ಡಿಪ್ಪಿ ಇವರಿಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ , ಮುಂಜಾನೆ ಸುಮಾರು 10.00 ಗಂಟೆಗೆ  ನಾನು ಮಹಾಂತಪ್ಪ ಕಾಡ ರವಿರ ಮನೆಗೆ ಹೋದಾಗ ನಮ್ಮೂರಿನ ಗುಲಾಬಿ ಗಂಡೋಳಿ ಎಂಬುವವರು  ನನಗೆ ಹೇಳಿದ್ದನೇಂದರೆ ನನ್ನ ಮೊಮ್ಮಗನಾದ ಅನುಜ ಎಂಬತನು ಮನೆಯ ಮುಂದೆ ಇರುವ ಸಂಡಾಸ ರೂಮಿಗೆ ಸಂಡಾಸ ಮಡಲು ಹೋದವನು ಎಷ್ಟು ಹೊತ್ತಾದರೂ  ಹೊರಗೆ ಬಂದಿರುವದಿಲ್ಲ ಅಂತ ಹೇಳಿದ್ದರಿಂದ ನಾನು ಸಂಡಾಸ ರೂಮಿಗೆ ಹೋಗಿ ನೋಡಲಾಗಿ ಅನುಜ ಈತನು ರೂಮಿನಲ್ಲಿ ಕುಸಿದು ಬಿದ್ದಿದ್ದನು.  ನಂತರ ಇಬ್ಬರೂ ಕೂಡಿಕೊಂಡು ಅಟೋದಲ್ಲಿ ಹಾಕಿಕೊಂಡು ಮುಂಜಾನೆ 10.30 ರ ಸುಮಾರಿಗೆ ಗೊಬ್ಬುರ ಬಿ ಸರ್ಕಾರಿ ದವಾಖಾನೆಗೆ ತಂದಾಗ  ವೈದ್ಯರು ಪರೀಕ್ಷಿಸಿ ನೋಡಿ ಅನುಜ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ್ದರಿಂದ, ನಂತರ 108 ಅಂಬುಲೆನ್ಸ ನಲ್ಲಿ ಶವವನ್ನು  ಹಾಕಿಕೊಂಡು ಜಿಲ್ಲಾ ಸರ್ಕಾರಿ ದವಾಖಾನೆಯ ಶವಗಾರ ಕೋಣೆಯಲ್ಲಿ ಹಾಕಿರುತ್ತೇನೆ ಅಂತ ತಿಳಿಸಿದ್ದರಿಂದ, ನಾನು ಅನಿಲಕುಮಾರ , ನನ್ನ ಅಣ್ಣ ರಾಜೇಂದ್ರ, ನಮ್ಮ ಸಂಭಂದಿಕರಾದ ರಾಜಶೇಖರ ನಿಪ್ಪಾಣಿ, ಜೆಟ್ಟೆಪ್ಪ ನೂಲಾ, ಅಲ್ಲಮಪ್ರಭು ನಿಂಬರ್ಗಾ ಮತ್ತಿತರು ಕೂಡಿಕೊಂಡು ಮದ್ಯಾಹ್ನ 02.00 ಗಂಟೆಗೆ ಜಿಲ್ಲಾ ಆಸ್ಪತ್ರೆ ಕಲಬುರಗಿಯ ಶವಾಗಾರಕ್ಕೆ ಹೋಗಿ ಶವವನ್ನು ನೋಡಿರುತ್ತೇವೆ. ನನ್ನ ಮಗನು ಯಾವ ಕಾರಣಕ್ಕಾಗಿ  ಮೃತಪಟ್ಟಿರುತ್ತಾನೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಾಗಿರುವದಿಲ್ಲ. ಗಂಡೋಳಿಯ ಅತ್ತೆಯಾದ ಗುಲಾಬಿ ಗಂಡೋಳಿ  ನಮ್ಮ ಅಳಿಯನಾದ  ಶ್ರೀಧರ ಗಂಡೋಳಿ , ರಂಜಿತಾ ಗಂಡೋಳಿ, ಪೂಜಾ ಗಂಡೋಳಿ ಎಲ್ಲರೂ ಸಾ|| ಚವಡಾಪೂರ ಎಂಬುವವರ ಮೇಲೆ ನನಗೆ  ಸಂಶಯವಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು  :
ಯಡ್ರಾಮಿ ಠಾಣೆ : ಶ್ರೀ ಗೊಲ್ಲಾಳಪ್ಪ ತಂದೆ ನಿಂಗಪ್ಪ ನಾಟೀಕಾರ ಸಾ|| ಮಾಗಣಗೇರಾ ರವರು 5 ಜನ ಅಣ್ಣತಮ್ಮಂದಿರರಿದ್ದು, 1] ಸಿದ್ದಪ್ಪ, 2] ಮಲ್ಲಿನಾಥ, 3] ಮಹಾಂತೇಶ, 4] ನಾನುಗೊಲ್ಲಾಳಪ್ಪ, 5] ಕಲ್ಯಾಣಿ ಅಂತಾ ಇರುತ್ತೇವೆ, ನಾವೆಲ್ಲರು ಬೇರೆ ಬೇರೆ ಯಾಗಿ ಸಂಸಾರಮಾಡುತ್ತಿರುತ್ತೇವೆ, ನಮ್ಮೂರ ಸಿಮಾಂತರದಲ್ಲಿ ನಮ್ಮಪಿತ್ರಾರ್ಜಿತ ಆಸ್ತಿ ಇದ್ದು, ನಾವೆಲ್ಲರು ಸಮನಾಗಿ ಹಂಚಿಕೊಂಡಿರುತ್ತೇವೆ, ಅದರಂತೆ ನಾನು ನಮ್ಮ ಹೊಲದಲ್ಲೆ ಮನೆಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ ಅಲ್ಲೆವಾಸವಾಗಿರುತ್ತೇನೆ, ನಮ್ಮಂತೆ ನಮ್ಮ ಅಣ್ಣ ಸಿದ್ದಪ್ಪ ರವರು ಸಹ ನಮ್ಮ ಹೊಲಕ್ಕೆ ಹತ್ತಿ ತಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡು ಅಲ್ಲೇವಾಸವಾಗಿರುತ್ತಾರೆ, ದಿನಾಂಕ 07-12-2018 ರಂದು ನಮ್ಮ ಅಣ್ಣ ಸಿದ್ದಪ್ಪ ರವರು ತಮ್ಮ ಕಬ್ಬಿನ ಹೊಲದಲ್ಲಿ ಬೆಂಕಿ ಹಚ್ಚಿದ್ದರು, ಅದನ್ನುನಮ್ಮಹೊಲದ ವಡ್ಡಿನ ಕಡೆಬರುತ್ತಿತ್ತು, ಆಗ ನಾನು ಅವರಿಗೆ ನಿಮ್ಮ ಹೊಲದಲ್ಲಿನ ಬೆಂಕಿ ನಮ್ಮ ಹೊಲದ ಒಡ್ಡಿಗೆ ಬರುತ್ತಿದ್ದೆ, ಅದನ್ನು ಸರಿಯಾಗಿ ಆರಿಸಿ, ಇಲ್ಲದಿದ್ದರೆ ನಮ್ಮ ಬೆಳೆ ಹಾಳಾಗುತ್ತವೆ ಅಂತಾ ಅಂದು ಅಲ್ಲಿಂದ ನಮ್ಮ ಮನೆಗೆ ಬಂದಿರುತ್ತೇನೆ, ನಂತರ 4;00 ಪಿ.ಎಂ ಸುಮಾರಿಗೆ ನಾನು ನನ್ನ ಹೆಂಡತಿ ಮಹಾದೇವಿ ಇಬ್ಬರು ಕೂಡಿ ನಮ್ಮ ಮನೆಯಮುಂದೆ ಮಾತಾಡುತ್ತಾ ಕುಳತಿದ್ದೇವು, ಆಗ ನಮ್ಮಅಣ್ಣ 1] ಸಿದ್ದಪ್ಪ ತಂದೆ ನಿಂಗಪ್ಪ ನಾಟೀಕಾರ, 2] ನಿಂಗಪ್ಪ ತಂದೆ ಸಿದ್ದಪ್ಪ ನಾಟೀಕಾರ, 3] ಮಲ್ಲಿನಾಥ ತಂದೆ ನಿಂಗಪ್ಪ ನಾಟೀಕಾರ, 4] ಮೌನೇಶ ತಂದೆ ಮಲ್ಲಿನಾಥ ನಾಟೀಕಾರ, 5] ನಿಂಗಪ್ಪ ತಂದೆ ಮಲ್ಲಿನಾಥ ನಾಟೀಕಾರ, 6] ಮಹಾಂತೇಶ ತಂದೆ ನಿಂಗಪ್ಪ ನಾಟೀಕಾರ ಹಿಗೆ ಎಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು, ಬಡಿಗೆಗಳು ಹಿಡಿದುಕೊಂಡು ನಮ್ಮ ಹತ್ತಿರ ಬಂದರು, ಅವರಲ್ಲಿ ಸಿದ್ದಪ್ಪ ಈತನು ಏಸೂಳಿ ಮಗನೆ ಗೊಲ್ಲಾಳ್ಯಾ ನಮ್ಮ ಹೊಲದಲ್ಲಿ ನಾವು ಬೆಂಕಿ ಹಚ್ಚಿದರೇ ನಿನಗೇನು ಆಗುತ್ತೇ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದನು, ನಿಂಗಪ್ಪ ತಂದೆ ಸಿದ್ದಪ್ಪ ಈತನು ತನ್ನಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಮೊಳಕಾಲ ಮೇಲೆ ಜೋರಾಗಿ ಹೊಡೆದು ಭಾರಿಒಳಪೆಟ್ಟು ಪಡಿಸಿರುತ್ತಾನೆ, ಮಲ್ಲಿನಾಥ ಈತನು ಕಲ್ಲಿನಿಂದ ನನ್ನ ಬಲಗಡೆ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು ಆಗ ನನ್ನ ಹೆಂಡತಿ ಬಿಡಿಸಲು ಬಂದಾಗ ಅವಳಿಗೆ ಮೌನೇಶ ಮತ್ತು ನಿಂಗಪ್ಪ ತಂದೆ ಮಲ್ಲಿನಾಥರವರು ಕೂಡಿ ಕೈಹಿಡಿದು ಎಳೇದಾಡಿ ಕೈಯಿಂದ ಬೆನ್ನಿನ ಮೇಲೆ ಹೊಡೆದು ಬಲಗೈ ನಡುವಿನಬಟ್ಟು ತಿರುವಿ ಒಳಪೆಟ್ಟುಪಡಿಸಿರುತ್ತಾರೆ, ಮಹಾಂತೇಶ ಈತನು ಈಸೂಳಿಮಕ್ಕಳಗಿ ಇವತ್ತ ಬಿಡಬ್ಯಾಡರಿ ಹೊಡೆದು ಖಲಾಸ ಮಾಡೋಣಾ ಅಂತಾ ಅನ್ನುತ್ತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತೊರಡಿನ ಹತ್ತಿರ ಒದ್ದನು ಆಗ ನಾನು ತಪ್ಪಿಸಿಕೊಂಡಿರುತ್ತೇನೆ, ನಂತರ ಅಲ್ಲೆ ಹೋಗುತ್ತಿದ್ದ ಸಿದ್ದಪ್ಪ ತಂದೆ ಯಮನಪ್ಪನಾಟೀಕಾರ ಈತನು ಬಂದುಬಿಡಿಸಿಕೊಂಡಿರುತ್ತಾನೆ, ಇಲ್ಲದಿದ್ದರೆ ನನಗೆ ಹೊಡೆದು ಖಲಾಸ ಮಾಡುತ್ತಿದ್ದರು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ದುಂಡಪ್ಪ ತಂದೆ  ಸಿದ್ದರಾಮ ಜಮಾದಾರ ಸಾ||ಬಜಾರ ರೋಡ ಅಫಜಲಪೂರ ರವರದು ಘತ್ತರಗಾ ರೋಡಿಗೆ ದಿಲ್ ಖುಷ್ ದಾಬಾ ಇರುತ್ತದೆ ನಾನು ನಮ್ಮ ದಾಬಾದ ಮಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ ನಮ್ಮ ಅಣ್ಣತಮ್ಮಕ್ಕಿಯ ಬಸವರಾಜ ತಂದೆ ಲಕ್ಷ್ಮಣ ಜಮಾದಾರ ಈತನು ಆಗಾಗ ನಮ್ಮ ದಾಬಾಕ್ಕೆ ಬಂದು ದಾಬಾದಲ್ಲಿ ಊಟ ಮಾಡಿ ಊಟದ ಹಣ ಕೊಡದೇ ನಮ್ಮ ಜೋತೆ ಜಗಳ ಮಾಡಿ ನನಗೆ ರಂಡಿ ಮಗನೆ ನೀನು ನನಗೆ ಹಣ ಕೇಳ್ತಿ ಮತ್ತ ನನ್ನ ಕರ್ಚಿಗೆ ನೀ ಆಗಾಗ ರೊಕ್ಕಾ ಕೊಡಲಿಲ್ಲ ಅಂದ್ರ ನಿನಗ ಖಲಾಸ ಮಾಡ್ತಿನಿ ಅಂತ ಅಂದು ಹೋಗುತಿದ್ದನ್ನು ಈ ವಿಷಯ ನಮ್ಮ ಮನೆಯಲ್ಲಿ ನಮ್ಮ ಅಣ್ಣನಾದ ಲಚ್ಚಪ್ಪ ರವರಿಗೆ ತಿಳಿಸಿರುತ್ತೇನೆ ನಮ್ಮ ಅಣ್ಣನು ಸಹ ನೀ ಸುಮ್ಮನಿರು ನಾನು ಬಸವರಾಜನಿಗೆ ಬುದ್ದಿ ಮಾತು ಹೇಳುತ್ತೇನೆ ಅಂತ ಹೇಳಿರುತ್ತಾರೆ.  ದಿನಾಂಕ 08/12/2018 ರಂದು ಸಾಯಂಕಾಲ ನಾನು ಹಾಗು ನನ್ನ ಸಂಗಡ ನನ್ನ ಗೆಳೆಯನಾದ ಸಂತೋಷ ಹಾದಿಮನಿ ಇತನಿಗೆ ನಮ್ಮ ಮೋಟಾರ್ ಸೈಕಲ ಮೇಲೆ ಕರೆದುಕೊಂಡು ನಮ್ಮ ದಾಬಾಕ್ಕೆ ಹೋಗುತಿದ್ದಾಗ ಘತ್ತರಗಾ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಬಸವರಾಜ ಇತನು ತನ್ನ ಕೈಯಲ್ಲಿ ಕಬ್ಬು ಕಟಾವು ಮಾಡುವ ಬತಾಯಿ ಹಿಡಿದುಕೊಂಡು ಬಂದು ನನ್ನ ಮೋಟಾರ್ ಸೈಕಲ್ ಮುಂದೆ ನಿಂತು ನಾನು ಹೋಗದಂತೆ ತಡೆದು ರಂಡಿಮಗನೆ ನಿಮಗೆ ಸೊಕ್ಕ ಬಾಳ ಬಂದಿದೆ ನಾನು ದಾಬಾದಲ್ಲಿ ಊಟ ಮಾಡಿದಕ್ಕೆ ಹಣ ಕೇಳ್ತಿ ಬೋಸಡಿ ಮಗನೆ ನೀನಗೆ ಇವತ್ತ ಬಿಡಲ್ಲಾ ಅಂತ ಬೈಯುತಿದ್ದಾಗ ನಾನು ಹಾಗು ಸಂತೋಷ ಇಬ್ಬರು ಮೋಟಾರ ಸೈಕಲ ಮೇಲಿಂದ ಇಳಿದು ಯಾಕೆ ಬೈತಿ ಅಂತ ಹೇಳುತಿದ್ದಾಗ ಅಲ್ಲೆ ಇದ್ದ ಸಂತೋಷ ಹಾದಿಮನಿ ಹಾಗು ಅಭಿಷೇಕ ಹೊನ್ನೂರ, ಸಿದ್ದಪ್ಪ ಸಿನ್ನೂರ ರವರು ಬಂದು ಬಸವರಾಜನಿಗೆ ಯಾಕೆ ಜಗಳ ಮಾಡುಕತ್ತಿದ್ದಿ ಅಂತ ಕೇಳುತಿದ್ದಾಗ ಬಸವರಾಜ ಈತನು ಈ ರಂಡಿ ಮಗನಿಗೆ ಇವತ್ತ ಇಲ್ಲೆ ಖಲಾಸ ಮಾಡುತ್ತೇನೆ ಅಂತ ಅಂದು ತನ್ನ ಕೈಯಲ್ಲಿನ ಬತಾಯಿಂದ ನನ್ನ ತಲೆಯ ಹಿಂದನ ಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಆಗ ಅಲ್ಲೆ ಇದ್ದ ಸಂತೋಷ, ಅಭಿಷೇಕ, ಸಿದ್ದಪ್ಪ ರವರು ಬಸವರಾಜನಿಗೆ ಹಿಡಿದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ನಂತರ ನನಗೆ ಸಂತೋಷ, ಅಭಿಷೇಕ ಹಾಗು ಸಿದ್ದಪ್ಪ ರವರು ಅಫಜಲಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಕೊಡಿಸಿರುತ್ತಾರೆ. ಬಸವರಾಜ ತಂದೆ ಲಕ್ಷ್ಮಣ ಜಮಾದಾರ ಈತನು ನನಗೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬು ಕಟಾವು ಮಾಡುವ ಬತಾಯಿಂದ ನನ್ನ ತಲೆಗೆ ಹಿಂದಿನ ಬಾಗಕ್ಕೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಶೇಖ ಅಸಲಮ ತಂದೆ ಶೇಖ ಶಬ್ಬಿರ ಸಾ|| ಮದಿನಾ ಕಾಲೋನಿ ಕಲಬುರಗಿ ರವರು ಈಗ ಒಂದುವರೆ ತಿಂಗಳ ಹಿಂದೆ ಸದರಿ ಮಹ್ಮದ ಹುಸೇನಿ ಇತನು ನನ್ನ ಹತ್ತಿರ ಬಂದು ಬಾಂಬೆಗೆ ಹೋಗೊಣ ಅಂತ ಅಂದಿದ್ದು ನನ್ನ ಹತ್ತಿರ ಹಣ ಇಲ್ಲದಕ್ಕೆ ನಾನು ಬಾಂಬೆಗೆ ಹೋಗಲು ನಿರಾಕರಿಸಿದ್ದು ಆಗ ಮಹ್ಮದ ಹುಸೇನಿ ಇತನು ನನಗೆ 5 ಸಾವೀರ ರೂಪಾಯಿ ಕೊಟ್ಟಿದ್ದು ಅದರಂತೆ ನಾನು ಮಹ್ಮದ ಹುಸೇನಿ ಬಾಂಬೆಗೆ ಹೋಗಿ ಬಂದಿದ್ದು ಇರುತ್ತದೆ. ಬಾಂಬೆಗೆ ಹೊಗಿ ಬಂದ ನಂತರ ಮಹ್ಮದ ಹುಸೇನಿ ಇತನು ಹಣ ಮರಳಿ ಕೊಡು ಅಂತ ಕೇಳುತ್ತಾ ಬಂದಿದ್ದು ನನ್ನ ಹತ್ತಿರ ಹಣ ಇಲ್ಲದಕ್ಕೆ ನಾನು ಮಹ್ಮದ ಹುಸೇನಿ ಇತನಿಗೆ ಹಣ ಮರಳಿ ಕೊಟ್ಟಿರುದಿಲ್ಲ. ದಿನಾಂಕ 06.12.2018 ರಂದು ರಾತ್ರಿ 8:45 ಗಂಟೆಯ ಸುಮಾರಿಗೆ ಮಹ್ಮದ ಹುಸೇನಿ ಇತನು ನನ್ನ ಮನೆಯ ಮುಂದೆ ಬಂದು ನನಗೆ ಕರೆದಿದ್ದು ಆಗ ನಾನು ಹೊರಗೆ ಬಂದಾಗ ಸದರಿ ಮಹ್ಮದ ಹುಸೇನಿ ಇತನು ನನಗೆ ಈಗಲೆ ಹಣ ಬೇಕು ಅಂತ ಹೇಳಿದ್ದು ಆಗ ನಾನು ಸದರಿಯವನಿಗೆ ಸಧ್ಯ ನನ್ನ ಹತ್ತಿರ ಹಣ ಇಲ್ಲ ನಾಳೆ ಕೊಡುತ್ತೆನೆ ಅಂತ ಹೇಳಿದ್ದು ಅದಕ್ಕೆ ಅವನು ರಂಡಿ ಮಗನೆ ನಾನು ಕೊಟ್ಟ ಹಣ ನನಗೆ ಮರಳಿ ಕೊಡುವದಿಲ್ಲ ಸೂಳಿ ಮಗನೆ ಅಂತ ಬೈಯುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದುಕೊಂಡು ಅವನ ಕೈಯಲಿದ್ದ ಚಾಕು ದಿಂದ ನನ್ನ ಹೊಟ್ಟೆಗೆ ಚುಚ್ಚಲು ಬಂದಿದ್ದು ಆಗ ನಾನು ನನ್ನ ಎಡಗೈ ಅಡ್ಡ ತಂದಿದ್ದರಿಂದ ಚಾಕು ನನ್ನ ಎಡಗೈಗೆ ಚುಚ್ಚಿ ರಕ್ತಗಾಯ ಪಡಿಸಿದ್ದು ಮತ್ತೆ ಮಹ್ಮದ ಹುಸೇನಿ ಇತನು ಚಾಕು ದಿಂದ ನನ್ನ ಕುತ್ತಿಗೆಗೆ ಹೊಡೆದು ನನಗೆ ಕೊಲೆ ಮಾಡಲು ಪ್ರಯತ್ನಿಸಿದ್ದು ಆಗ ನಾನು ಸ್ವಲ್ಪ ಹಿಂದಕ್ಕೆ ಸರಿದಿದ್ದರಿಂದ ಚಾಕು ನನ್ನ ಕುತ್ತಿಗೆಯ ಬಲಭಾಗಕ್ಕೆ ಚುಚ್ಚಿ ರಕ್ತಗಾಯ ವಾಗಿದ್ದು ಇರುತ್ತದೆ. ಸದರಿಯವನು ನನಗೆ ಹೊಡೆಯುವುದನ್ನು ನೋಡಿ ಮತ್ತು ನಾನು ಚಿರಾಡುವುದನ್ನು ಕೇಳಿ ನಮ್ಮ ಮನೆಯ ಪಕ್ಕದಲ್ಲಿದ್ದ ಅಂಗಡಿಯವರು ಮತ್ತು ಮನೆಯಲಿದ್ದ ನಮ್ಮ ತಾಯಿ, ನಮ್ಮ ಅಕ್ಕ ಕೂಡಿಕೊಂಡು ಬಂದಿದ್ದು ಆಗ ಮಹ್ಮದ ಹುಸೇನಿ ಇತನು ನನಗೆ ಹೊಡೆಯುವದನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ನಂತರ ನಮ್ಮ ತಾಯಿ, ನಮ್ಮ ಅಕ್ಕ ನನಗೆ ವಿಚಾರಿಸಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ತೇಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ  ಭೀಮಣ್ಣಗೌಡ ತಂದೆ ಸಾತಲಿಂಗಪ್ಪ ನಾರಶೇರ ಸಾ: ಗುಡ್ಡೇವಾಡಿ ರವರು ಕಳೆದ 2015 ನೇ ಸಾಲಿನಲ್ಲಿ ಗುಡ್ಡೇವಾಡಿ ಗ್ರಾಮದಲ್ಲಿರುವ ನನ್ನ ಹೆಸರಿನ ಜಮೀನು ಸರ್ವೇ ನಂ 18 ಕ್ಷತ್ರ, 05 ಎಕರೆ 00 ಗುಂಟಾ ಹಾಗೂ ಧರ್ಮ ಪತ್ನಿ ರೂಪಾ ರವರ ಹೆಸರಿನಲ್ಲಿ  ಸರ್ವೇ ನಂ 38 ಕ್ಷತ್ರ 03 ಎಕರೆ, 00 ಗುಂಟಾ ಜಮೀನು ಅಫಜಲಪೂರ ಸರಕಾರಿ ಪಶು ಆಸ್ಪತ್ರೆಯಲ್ಲಿ ನೌಕರನಾದ ಶಿವಶರಣಪ್ಪ ತಂದೆ ಗುರಪ್ಪ ಬಿರೇದಾರ ಎನ್ನುವವರಿಗೆ ಅರ್ಧ ಪಾಲಿನಂತೆ ಜಮೀನು ಹಚ್ಚಿದ್ದು ಸದರಿ ಜಮೀನಿಗೆ ಆಗುವ ಲಾಗೋಡಿ ಖರ್ಚು ಸಂಪೂರ್ಣ ಶಿವಶರಣಪ್ಪ ಬಿರೇದಾರ ಹಾಕುವುದು ಹಾಗೂ ಜಮೀನಿನಲ್ಲಿ ಮಾಲಿಕನಾದ ನಾನು ಪಗಾರ ಇಲ್ಲದೇ ದುಡಿಯುವುದು ಮತ್ತು ಬೆಳೆದ ಬೆಳೆಯಲ್ಲಿ ಇಬ್ಬರು ಎರಡು ಪಾಲು (ಸಮಪಾಲು) ಮಾಡಿಕೊಳ್ಳುವ ಖರಾರು ಮಾಡಿಕೊಂಡಿದ್ದೇವೆ ಆದರೇ ಜಮೀನು ಅರ್ಧ ಪಾಲಿನಂತೆ ಮಾಡಿದ ಶಿವಶರಣಪ್ಪ ಬಿರೇದಾರ ಇಗಾಗಲೇ ಮೋದಲನೆಯ ಪೀಕಿನಲ್ಲಿ ಬೆಳೆಯಲ್ಲಿ 1600 ಚೀಲ ಉಳ್ಳಾಗಡ್ಡಿ ಇದಲ್ಲದೇ ಮೂರನೆ ಪೀಕ 250 ಚೀಲ ಮೇಕ್ಕೆ ಜೋಳ ತದನಂತರ ಒಮ್ಮೆ 1500 ಪಾಕೀಟ ಉಳ್ಳಾಗಡ್ಡಿ ಇದಲ್ಲದೇ  ಪೀಕ 1300 ಚೀಲ ಉಳ್ಳಾಗಡ್ಡಿ ಈ ರೀತಿಯಾಗಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಿ ನನಗೆ ಅದರಲ್ಲಿ ಪಾಲು ಕೊಡದೇ 16,00,000/- (ಹದಿನಾರು ಲಕ್ಷ) ಲಾಭ ತೋರಿಸಿ ಈಗ 42,00,000/- ಲಾಗೋಡಿ ಮಾಡಿದ್ದೇನೆಂದು ಲೆಕ್ಕ ತೋರಿಸಿ ನನಗೆ ಹೇದರಿಸಿ ಹಾಗೂ ಜೀವ ಬೇದರಿಕೆ ಹಾಕಿ ನನ್ನಿಂದ ಗುಡ್ಡೇವಾಡಿ ಗ್ರಾಮದಲ್ಲಿರುವ ಮನೆಯನ್ನು ಮಾರಿಸಿ ಅದರಿಂದ ಬಂದ 4,00,000/- ಹಣವನ್ನು ಈಗಾಗಲೇ ತಗೆದುಕೊಂಡಿರುತ್ತಾರೆ, ಇನ್ನು 11,47,915/- ರೂಪಾಯಿ ಹಣವನ್ನು ಕೊಡಬೇಕೆಂದು  ಒಂದು ವೇಳೆ ಸದರಿ ಹಣ ಕೊಡದಿದ್ದಲ್ಲಿ 02 ವರ್ಷದವರೆಗೆ ಜಮೀನು ಸದರಿಯವರ ಸೋದರ ಮಾವನಾದ (ಅಕ್ಕನ ಗಂಡನಾದ) ಚನ್ನಬಸಪ್ಪ ತಂದೆ ಮಲ್ಲಪ್ಪ ಘತ್ತರಗಿ ಸಾ: ಬಗಲೂರ ಇವರಿಗೆ ಉಳುಮೆ ಮಾಡಲು ಬಿಡಬೇಕೆಂದು 07-06-2018 ರಂದು ಚನ್ನಬಸಪ್ಪ ತಂದೆ ಮಲ್ಲಪ್ಪ ಘತ್ತರಗಿ ಇವರಿಗೆ ಎರಡು ರೂಪಾಯಿ ಬಾಂಡ ಮೇಲೆ ಒತ್ತಾಯಪೂರ್ವಕವಾಗಿ ನನ್ನನ್ನು ಹೆದರಿಸಿ ಸಹಿ ಮಾಡಿಸಿಕೊಂಡಿದ್ದು ನಾನು ಬಡ ಹಾಗೂ ಮುಗ್ದ ಅನಕ್ಷರಸ್ತ ರೈತನಾದ ನಾನು ಪಗಾರ ಇಲ್ಲದೇ 03 ವರ್ಷ ಜಮೀನಿನಲ್ಲಿ ದುಡಿದಿದ್ದಲ್ಲದೇ ಬೆಳೆದ ಬೆಳೆಯಲ್ಲಿ ಪಾಲು ಸಹ ಇವರೆಗೂ ನನಗೆ ಕೊಟ್ಟಿರುವುದಿಲ್ಲಾ ಮುಗ್ದನಾದ ನನ್ನನ್ನು ಕಂಡು ಮೋಸ ಮಾಡಿದ್ದು ಈಗ ಈ ಬಗ್ಗೆ ಪ್ರಶ್ನಿಸಿದರೆ  ನನ್ನ ಜಮೀನು ಖಾಲಿ ಮಾಡುವಂತೆ ಹೇಳಿದರೆ ನನಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಬರುವುದು ಮಾಡುತ್ತಿದ್ದಾನೆ ಈ ವರ್ಷ ಜಮೀನಿನಲ್ಲಿ ಬೆಳೆದ ಉಳ್ಳಾಗಡ್ಡಿ ಪೀಕು ತಗೆದುಕೊಂಡು ಹೋಗುವುದನ್ನು ತಡೆದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಇದರಿಂದ ನಾನು, ನನ್ನ ಹೆಂಡತಿ ಮತ್ತು ತಾಯಿ ಮಕ್ಕಳು ಜೀವ ಭಯದಲ್ಲಿ ಇದ್ದೇವೆ ತದನಂತರ ಮತ್ತು ಶಿವಶರಣಪ್ಪ ಗುರಪ್ಪ ಬಿರೇದಾರ ದಿನಾಂಕ 05-12-2018 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ನನ್ನ ತಾಯಿಯಾದ ಶಾಂತಾಬಾಯಿ ನಾರಸೇರ ರವರ ಹೆಸರಿನಲ್ಲಿರುವ ಹೊಲ ಸರ್ವೆ ನಂಬರ 36 ರಲ್ಲಿ ನಾನು ಮತ್ತು ನನ್ನ ತಾಯಿಯಾದ ಶಾಂತಾಬಾಯಿ ಹಾಗೂ ನನ್ನ ಹೆಂಡತಿಯಾದ ರೂಪಾ ಮೂರು ಜನರು ಹೊಲದಲ್ಲಿರುವ ಪತ್ರಾಸ ಶೇಡ್ಡಿನ ಮುಂದೆ ಇದ್ದಾಗ ನಮ್ಮ ಹೊಲ ಪಾಲಿಗೆ ಮಾಡಿದ ಶಿವಶರಣಪ್ಪ ತಂದೆ ಗುರಪ್ಪ ಬಿರಾದಾರ ಈತನು ತನ್ನ ಜೋತೆಗೆ ಇನ್ನು 40-50 ಜನರನ್ನು ಸಂಗಡ ಕರೆದುಕೊಂಡು ಬಂದು ನಾವು ರಾಶಿ ಮಾಡಿ ಇಟ್ಟಿದ್ದ ಮೆಕ್ಕೆ ಜೋಳದ ಚೀಲಗಳನ್ನು ಹಾಗೂ ನಮ್ಮ ಕುರಿ, ಆಕಳುಗಳನ್ನು ತಗೆದುಕೊಳ್ಳುತ್ತಿದ್ದನು. ಆಗ ನಾನು ಯಾಕ ವಯ್ತಿರಿ ನಾನು ಕೊಡಲ್ಲಾ ಅಂತಾ ಹೇಳಿದೆನು. ಆಗ ಸದರಿ ಶಿವಶರಣಪ್ಪ ಈತನು ನನಗೆ ನೀನು ಇನ್ನು ಲಾಗೋಡಿಯ ಹಣ ಕೊಡಬೇಕು ಎಂದು ಹೇಳಿದನು. ಆಗ ನಾನು ಒಯ್ಯಲು ಬಿಡುವುದಿಲ್ಲ ಎಂದು ಅಡ್ಡ ನಿಂತಾಗ ಬೋಸಡಿ ಮಗನೆ ಸರಿ ಎಂದು ನನ್ನನ್ನು ತಳ್ಳಿ ಶಿವಶರಣಪ್ಪ ಮತ್ತು ಅವನ ಜೋತೆಗೆ ಬಂದಿದ್ದವರು ನನಗೆ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಆಗ ನನ್ನ ತಾಯಿ ಬಿಡಿಸಲು ಬಂದಾಗ ಅವಳನ್ನು ತಳ್ಳಿದಾಗ ನನ್ನ ತಾಯಿ ಬಿದ್ದಿರುತ್ತಾಳೆ. ನಂತರ ನನಗೆ ಶಿವಶರಣ ಈತನು ಬಡಿಗೆಯಿಂದ ನನ್ನ ಬಲಗೈ ರಟ್ಟೆಗೆ ಹೊಡೆದು ನನ್ನನ್ನು ತಳ್ಳಿ ನಮ್ಮ 41 ಚೀಲ ಮೇಕ್ಕೆಜೋಳವನ್ನು ಹಾಗೂ 2 ಕುರಿಗಳನ್ನು ಮತ್ತು 3 ಆಕಳಗಳನ್ನು ತಗೆದುಕೊಂಡು ಹೋಗಿರುತ್ತಾರೆ. ಸದರಿಯವರು ನನಗೆ ಹೊಡೆಯುತ್ತಿದ್ದಾಗ ರೋಡಿಗೆ ಯಾರೊ ಹೋಗುತ್ತಿದ್ದುದನ್ನು ನೋಡಿ ಸದರಿಯವರು ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಮುಂದೆ ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಚನ್ನಬಸಯ್ಯಾ ಹಿರೇಮಠ ಸಾ|| ಯಡ್ರಾಮಿ  ತಾ|| ಜೇವರ್ಗಿ  ರವರು ಊರಲ್ಲಿ ನಾವು ನಮ್ಮ ಹಳೆ ಮನೆ ಬಿಚ್ಚಿ ಹೊಸದಾಗಿ ಮನೆ ಕಟ್ಟುತ್ತಿರುತ್ತೇವೆ, ಆದ್ದರಿಂದ ನಮ್ಮ ಓಣಿಯವರಾದ ಶಾಂತಪ್ಪ ಗುಂಡಾನವರ ರವರ ಒಂದ ಕೋಣೆಯನ್ನು ಬಾಡಿಗೆಗೆ ತೆದುಕೊಂಡಿರುತ್ತೇವೆ, ಆ ಮನೆಯಲ್ಲಿ ನಮ್ಮ ಅಲ್ಮಾರಿ ಮತ್ತು ಇತರೆ ಸಾಮಾನುಗಳು ಇಟ್ಟಿದ್ದು ಇರುತ್ತದೆ. ಮನೆ ಕಟ್ಟಡ ಸಲುವಾಗಿ 1,50,000/- ರೂ ಮತ್ತು ಮನೆಯಲ್ಲಿದ್ದ 10 ಗ್ರಾಂ ಬಂಗಾರದ ನೆಕ್ ಲೇಸ ಹಾಗು ತಲಾ 05 ಗ್ರಾಮಿನ ಎರಡು ಬಂಗಾರದ ಉಂಗುರುಗಳನ್ನು ಅಲ್ಮಾರಿಯಲ್ಲಿ ಇಟ್ಟು ಕೀಲಿ ಹಾಕಿದ್ದು ಇರುತ್ತದೆ. ದಿನಾಂಕ 07-12-2018 ರಂದು ರಾತ್ರಿ 10;00 ಗಂಟೆಗೆ ನಾವು ಬಾಡಿಗೆಗೆ ತೆಗೆದುಕೊಂಡ ಕೊಣೆಗೆ ಕಿಲೀ ಹಾಕಿರುತ್ತೇವೆ, ನಂತರ ನಾನು ನಮ್ಮ ತಂದೆ ಮತ್ತು ನಮ್ಮ ತಾಯಿ ಶರಣಮ್ಮ ಹಾಗು ನಮ್ಮ ಅಕ್ಕ ಬಸಮ್ಮ ರವರು ಕೂಡಿ ನಮ್ಮ ಇನ್ನೊಂದೊ ಕೋಣೆಯಲ್ಲಿ ಮಲಗಿಕೊಂಡಿರುತ್ತೇವೆ, ನಂತರ ಇಂದು ಬೆಳಿಗ್ಗೆ 06;00 ಗಂಟೆಗೆ ಎದ್ದು ಹೊರಗೆ ಬಂದು ನೋಡಿದಾಗ ನಾವು ಕೀಲಿ ಹಾಕಿದ ಕೊಣೆಯ ಬಾಗಿಲ ತೆರೆದಿತ್ತು, ನಂತರ ನಾವೆಲ್ಲರೂ ಕೂಡಿ ಒಳಗೆ ಹೋಗಿ ನೋಡಿದಾಗ ಒಳಗಿದ್ದ ಅಲ್ಮಾರಿ ಬಾಗಿಲ ಮತ್ತು ಲಾಕರ ಮುರದಿತ್ತು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಹಣ ಒಟ್ಟು 2,10,000/- ರೂ ಕಿಮ್ಮತ್ತಿನವುಗಳನ್ನು  ಯಾರೋ ಕಳ್ಳರು ನಿನ್ನೆ ದಿನಾಂಕ 07-12-2018 ರಂದು ರಾತ್ರಿ 11;00 ಗಂಟೆಯಿಂದ ದಿನಾಂಕ 08-12-2018 ರ ಬೆಳಗಿನ 05;00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬಾಗಿಲ ಕೀಲಿಯನ್ನು ಮೂರಿದು ಒಳಗೆ ಪ್ರವೇಶ ಮಾಡಿ ಬಂಗಾರ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ. ಅಣವೀರಪ್ಪ ತಂದೆ ಬಸಣ್ಣ ನಾಟಿಕರ್ ಸಾಃ ನಡುವಿನಹಳ್ಳಿ ಗ್ರಾಮ ತಾ.ಜಿಃ ಕಲಬುರಗಿ  ರವರ ಮಗ ವಿಶ್ವರಾಜ ನಾಟಿಕರ್ ದಿನಾಂಕ 07/12/2018 ರಂದು ಎಂದಿನಂತೆ ಟಂ ಟಂ  ಕೆಎ-32 ಸಿ-7663 ನೇದ್ದನ್ನು ತೆಗೆದುಕೊಂಡು ಮನೆಯಿಂದ ಹೊದನು. ನಮ್ಮೂರಿನ ಚನ್ನಬಸ್ಸು ತಂದೆ ಮಲ್ಲಿಕಾರ್ಜುನ ಭಜಂತ್ರಿ ಇತನು ಪೋನ ಮಾಡಿ ನನ್ನ ಮಗನಿಗೆ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ತಿಳಿಸಿದ್ದು, ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗನ ತಲೆಗೆ ರಕ್ತಗಾಯ, ಎದೆಗೆ ಭಾರಿ ರಕ್ತಗಾಯ, ಎರಡು ಪಾದಗಳಿಗೆ ರಕ್ತಗಾಯ, ಎರಡು ಮುಂಗೈಗಳಿಗೆ ರಕ್ತಗಾಯವಾಗಿ ಮೃತ ಪಟ್ಟಿದ್ದನು. ಅಲ್ಲಿಯೇ ಇದ್ದ ಚನ್ನಬಸ್ಸು ಭಜಂತ್ರಿ ಇವರಿಗೆ ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, ನಾನು ಮತ್ತು ಬಸವರಾಜ ಇಬ್ಬರು ಟಂಟಂ ನಂ ಕೆಎ 32 ಸಿ 7663 ನೇದ್ದನ್ನು ತೆಗೆದುಕೊಂಡು ನಮ್ಮೂರಿನಿಂದ ಜೇವರಗಿಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ಶಹಾಬಾದ ಕ್ರಾಸ ದಾಟಿ ಅಂದಾಜು 2 ಕಿಮಿ ದೂರದಲ್ಲಿ ರೋಡಿನ ಮೇಲೆ ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಕ್ರೂಜರ ಚಾಲಕನು ತನ್ನ ಕ್ರೂಜರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಂಟಂಕ್ಕೆ ಡಿಕ್ಕಿ ಪಡೆಯಿಸಿದ್ದರಿಂದ ನಾವು ವಾಹನ ಸಮೇತ ರೋಡಿನ ಮೇಲೆ ಬಿದ್ದು ನನಗೆ ತರಚಿದ ಗಾಯಗಳಾಗಿದ್ದು ವಿಶ್ವರಾಜ ಇತನಿಗೆ ಮೇಲಿನಂತೆ ಗಾಯಗಳಾಗಿದ್ದು ಅಪಘಾತ ಪಡಿಸಿದ ಕ್ರೂಜರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅದರ ನಂಬರ ನೋಡಲಾಗಿ ಕೆಎ 32 ಬಿ 6995 ನೇದ್ದು ಇತ್ತು ನಂತರ ವಿಶ್ವರಾಜ ಇತನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಸದರಿ ಘಟನೆ ನಡೆದಾಗ 4-30 ಪಿಎಂ ಆಗಿತ್ತು ಅಂತಾ ತಿಳಿಸಿದನು ಕಾರಣ ಸದರಿ ಕ್ರೂಜರ ನಂ ಕೆಎ 32 ಬಿ 6995 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

07 December 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀ ಬಸವರಾಜ ತಂದೆ ಸಿದ್ದಪ್ಪಾ ಕಟ್ಟಿ ಸಾ|| ಅಕ್ಕಮಹಾದೇವಿ ಕಾಲೋನಿ ಹೈಕೋರ್ಟ ಹತ್ತಿರ ಕಲಬುರಗಿ ರವರ ಮಗಳಾದ ಮೀನಾಕ್ಷಿ ಇವಳಿಗೆ ಆನಂದ ತಂದೆ ಓಂಪ್ರಕಾಶ ಸಾ|| ಅಂಬಿಕಾ ನಗರ ಕಲಬುರಗಿ ಇತನೊಂದಿಗೆ ದಿನಾಂಕ 19.04.2016 ರಂದು ಸಾಯಿಮಂದಿರ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಟ್ಟಿರುತ್ತೇವೆ. ಮದುವೆಯಾದ 5-6 ದಿವಸಗಳ ನಂತರ ಅವಳಿಗೆ ಗಂಡ ಆನಂದ ಅತ್ತೆಯಾದ ಸುಮಂಗಲಾ ಮಾವ ಓಂಪ್ರಕಾಶ ನಾದಿನಿ ಪೂಜಾ ಇವರೆಲ್ಲರೂ ಕೂಡಿಕೊಂಡು ತೊಂದರೆ ಕೊಡಲು  ಪ್ರಾರಂಭಿಸಿದರು. ಆಗ ನನ್ನ ಮಗಳು ಮನೆಗೆ ಬಂದು ನನ್ನ ಅತ್ತೆ ಮಾವ ಗಂಡ ಎಲ್ಲರು ತವರು ಮನೆಯಿಂದ ಹಣ ತೆಗೆದುಕೊಂಡು ಬರಬೇಕು ಅಂತಾ ಫೋಟು ಸ್ಟುಡಿಯೋಕೆ ಹಣ ಬೇಕಾಗಿದೆ ತರದೆ ಇದ್ದಲ್ಲಿ ನೀನು ಬರಬೇಡಾ ಅಂತಾ ಹೇಳಿದರು ಆಗ ನಾನು ನನ್ನ ಮಗಳ ಗಂಡನಿಗೆ ವಿಚಾರಿಸಿದಾಗ ನೀವು ಮದುವೆಯ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ಕೊಟ್ಟಿಲ್ಲಾ ಅದಕ್ಕಾಗಿ ನನಗೆ ಒಂದು ಲಕ್ಷ ರೂಪಾಯಿ ಕೊಟ್ಟರೆ ನಿಮ್ಮ ಮಗಳಿಗೆ ಮನೆಯಲ್ಲಿ ಇಟ್ಟುಕೊಳ್ಲುತ್ತೇವೆ ಇಲ್ಲವಾದರೆ ಬೇಡಾ ಎಂದು ಹೇಳಿದರು ಆಗ ಅವರ ತಂದೆತಾಯಿವರಿಗೆ ವಿಚಾರಿಸಿದಾಗ ನಾವು ನಮ್ಮ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಹೇಳಿರುತ್ತಾರೆ. ಆಗ ನಾನು ಸಾಲಾ ಮಾಡಿ ನನ್ನ ಮಗಳ ಕೈಯಲ್ಲಿ 50 ಸಾವಿರ ರೂಪಾಯಿ ಕೊಟ್ಟು ಗಂಡನ ಮನೆಗೆ ಕಳುಹಿಸಿರುತ್ತೇನೆ. ಆದರು ದಿನಾಲೂ ನನ್ನ ಮಗಳಿಗೆ ಅತ್ತೆ ಮಾವ ನಾದಿನಿ ಮತ್ತು ಆನಂದನ ಅಣ್ಣ ಜಮದಗ್ನಿ ಇವರೆಲ್ಲರು ಸೇರಿ ದಿನಾಲೂ ತೊಂದರೆ ಕೊಡಲು ಪ್ರಾರಮಭಿಸಿದರು ಆಗ ನನ್ನ ಮಗಳು ಮನೆಗೆ ಬಂದು ನಮ್ಮ ಮನೆಯಲ್ಲಿಯೆ ಉಳಿದಿರುತ್ತಾಳೆ. ಆಗ ನಾಲಕೈದು ಜನರು ಸೇರಿ ನಮ್ಮ ಮನೆಗೆ ಬಂದು ನ್ಯಾಯಾಪಂಚಾಯಿತಿ ಮಾಡಿ ನಮ್ಮ ಮಗಳಿಗೆ 2017ರ ದೀಪಾವಳಿ ಹಬ್ಬದ ನಂತರ ಗಂಡನ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ನನ್ನ ಮಗಳಿಗೆ ಅವಳ ನಾದಿನಿ ಪೂಜಾ ಬಾಯಿಗೆ ಬಂದಂತೆ ಬೈದರೆ ಗಂಡ ಅತ್ತೆ ಮಾವ ಇವರೆಲ್ಲರು ಸೇರಿ ವಾರದಲ್ಲಿ 2-3 ಸಲ ಹೊಡೆಯುತ್ತಿದ್ದರು ಮತ್ತು ವರದಕ್ಷಿಣೆ ತರಬೇಕು ಅಂತಾ ಹೇಳುತ್ತಿದ್ದರು ನಾವು ಮದುವೆಯ ಸಮಯದಲ್ಲಿ 2-3 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿರುತೇವೆ ನಂತರ ನಮ್ಮ ಕೈಲಾದಷ್ಟು ಹಣ ನೀಡಿದ್ದೇವೆ. ನನ್ನ ಮಗಳಿಗೆ ಎಷ್ಟ ಕಷ್ಟ ಕೊಟ್ಟರು ನನಗೆ ಗಂಡ ಬೇಕು ಅಂತಾ ಹೇಳುತ್ತಿದ್ದಳು. ದಿನಾಂಕ 05.12.2018 ರಂದು ರಾತ್ರಿ ಜಗಳ ಮಾಡಿ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಅತ್ತೆ ಸುಮಂಗಲಾ ಗಂಡ ಆನಂದ ಮಾವ ಓಂಪ್ರಕಾಶ ನಾದಿನಿ ಪೂಜಾ ಇವರೆಲ್ಲರು ಸೇರಿ ನನ್ನ ಮಗಳು ಮೀನಾಕ್ಷಿ ಇವಳಿಗೆ ಹೊಡೆದು ಕೊಲೆ ಮಾಡಿರುತ್ತಾರೆ. ನನ್ನ ಮಗಳ ಮಾವನಾದ ಓಂಪ್ರಕಾಶ ಇವರು ಇಂದು ದಿನಾಂಕ 06.12.2018 ರಂದು ಬೆಳಿಗ್ಗೆ 7-20 ಗಂಟೆಗೆ ನಮ್ಮ ಮನೆಗೆ ಪೋನ್ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ತಿಳಿಸಿದ್ದಾರೆ. ಆಗ ನಾವೆಲ್ಲರು ಸೇರಿ ಅವಳ ಮನೆಗೆ ಹೋಗಿ ನೋಡಿದಾಗ ಅವಳಿಗೆ ಗಂಡ ಅತ್ತೆ ಮಾವ ನಾದಿನಿ ಇವರೆಲ್ಲಾ ಸೇರಿ ಕೊಲೆ ಮಾಡಿರುತ್ತಾರೆ ಅಂದು ತಿಳಿಯಿತು. ಕಾರಣ ನನ್ನ ಮಗಳಾದ ಮೀನಾಕ್ಷಿ ಇವಳಿಗೆ ಕೊಲೆ ಮಾಡಿದ ಅವಳ ಗಂಡ ಆನಂದ ಅತ್ತೆ ಸುಮಂಗಲಾ ಮಾವ ಓಂಪ್ರಕಾಶ ನಾದಿನಿ ಪೂಜಾ ಮತ್ತು ಆನಂದ ಇವನ ಅಣ್ಣ ಜಮದಗ್ನಿ ಇವರೆಲ್ಲರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ಬಸವರಾಜ ತಂದೆ ಅಡಿವೆಪ್ಪ ಗೌಂಡಿ ಸಾ: ಮಲ್ಲಾ (ಕೆ) ತಾ: ಸುರಪುರ ಜಿ: ಯಾದಗೀರ ರವರು ಮಗಳಾದ ಅನಿತಾ ಇವಳಿಗೆ 4 ವರ್ಷದ ಹಿಂದೆ ಕಣಮೇಶ್ವರ ಗ್ರಾಮದ ನನ್ನ ಹೆಂಡತಿಯ ತಮ್ಮನಾದ ಪ್ರಕಾಶ ತಂದೆ ನಿಂಗಪ್ಪ ತಳಕೇರಿ ಇವನೊಂದಿಗೆ ಸಂಪ್ರದಾಯದಂತೆ ಕಣಮೇಶ್ವರ ಗ್ರಾಮದಲ್ಲಿ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ. ಮದುವೆಯ ಕಾಲಕ್ಕೆ ಒಂದು ತೋಲಿ ಬಂಗಾರ ಮತ್ತು 50000/- ಸಾವಿರ ರೂಪಾಯಿ ವರದಕ್ಷಿಣೆ ಮಾತುಕತೆಯಾಗಿದ್ದು, ಅದರಲ್ಲಿ ಮದುವೆ ಕಾಲಕ್ಕೆ ನಮ್ಮ ಅಳಿಯನಿಗೆ ಒಂದು ತೋಲಿ ಬಂಗಾರ ಹಾಕಿದ್ದು ಸಂಸಾರದ ಅಡಚಣೆಯಲ್ಲಿ 50,000ರೂ ಕೊಡಲು ಆಗದ ಕಾರಣ ಅವರಿಗೆ ಆ ಹಣ ನಂತರ ಕೊಡುವದಾಗಿ ಹೇಳಿದ್ದೆವು. ಈಗ ಕೆಲವು ತಿಂಗಳಿಂದ ನಮ್ಮ ಮಗಳು ಅನಿತಾ ನಮಗೆ ಆಗಾಗ ಹೇಳಿದೆನೆಂದರೆ ನನ್ನ ಗಂಡ ಮತ್ತು ಅವರ ಮನೆಯವರು ಮದುವೆ ಕಾಲಕ್ಕೆ ಮಾತನಾಡಿದಂತೆ  ವರದಕ್ಷಣೆ ಹಣ 50,000ರೂ ತಗೆದುಕೊಂಡು ಬಾ ಇಲ್ಲವಾದರೇ ನಿನಗೆ ಖಲಾಸ ಮಾಡಿ ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೆವೆ ಅಂತ ಅನ್ನುತ್ತಾ ನನಗೆ ಕಿರುಕುಳ ಕೊಡುತ್ತಿದ್ದಾರೆ  ಅಂತ ಹೇಳಿದ್ದರಿಂದ ಒಂದು ದಿನ ನಾನು ಮತ್ತು ನನ್ನ ತಮ್ಮಂದಿರರಾದ ದೇವಿಂದ್ರಪ್ಪ ಹಾಗೂ ಶಂಕರ ಕೂಡಿ ಕಣಮೇಶ್ವರ ಗ್ರಾಮಕ್ಕೆ ಹೋಗಿ ಮುಂದೆ ಬರುವ ಯುಗಾದಿ ಹಬ್ಬಕ್ಕೆ ಹಣ ಕೊಡುತ್ತೇವೆ ಅಂತ ನಮ್ಮ ಅಳಿಯನಿಗೆ ಹಾಗು ಅವನ ಮನೆಯವರಿಗೆ ಹೇಳಿ ಬಂದಿದ್ದು ಇರುತ್ತದೆ. ದಿನಾಂಕ: 05-12-2018 ರಂದು ರಾತ್ರಿ  ನನ್ನ ಮಗಳು ನಮಗೆ ಪೋನ ಮಾಡಿ, ನನ್ನ ಗಂಡ ಪ್ರಕಾಶ ತಳಕೇರಿ, ಭಾವ ಹುಸನಪ್ಪ ತಳಕೇರಿ, ಅತ್ತೆ ಕಾಳಮ್ಮ ತಳಕೇರಿ, ಮಾವ ನಿಂಗಪ್ಪ ತಂದೆ ನಿಜಗಪ್ಪ ತಳಕೇರಿ, ನಾದಿನಿಯರಾದ ಸುನೀತಾ ತಂದೆ ನಿಂಗಪ್ಪ ತಳಕೇರಿ, ಮತ್ತು ಯಲ್ಲಮ್ಮ ಗಂಡ ಸಿದ್ದಪ್ಪ ಗೋಲಗೇರಿ, ಅವಳ ಗಂಡನಾದ ಸಿದ್ದಪ್ಪ ಗೊಲಗೇರಿ ಇವರು ನನಗೆ ತವರು ಮನೆಯಿಂದ ಹಣ ತಗೆದುಕೊಂಡು ಬಾ ಇಲ್ಲವಾದರೆ ನಿನ್ನ ಜೀವ ತಗೆಯುತ್ತೆವೆ ಅಂತ ಹೇಳುತ್ತಿದ್ದಾರೆ ನೀವು ಅವರಿಗೆ ಹಣ ಕೋಟ್ಟು ಬಿಡರೀ ಅಂತ ಹೇಳಿದ್ದಳು. ಆಗ ನಾನು ಅವಳಿಗೆ ಮುಂಜಾನೆ ಬರುತ್ತೆನೆ ಅಂತ ಹೇಳಿದ್ದೆ, ದಿನಾಂಕ: 06-12-2018 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ನಮ್ಮ ಬೀಗರ ಸಂಬಂದಿಕರು ನನಗೆ ಪೋನ ಮಾಡಿ ನಿಮ್ಮ ಮಗಳಾದ ಅನೀತಾ ಸತ್ತಿರುತ್ತಾಳೆ. ಅಂತ ಹೇಳಿದ್ದರಿಂದ ನಮ್ಮೂರಿನಿಂದ ನಾನು ಮತ್ತು ನಮ್ಮ ತಮ್ಮಂದಿರರಾದ ದೇವಿಂದ್ರಪ್ಪ ತಂದೆ ಅಡಿವೆಪ್ಪ, ಶಂಕರ ತಂದೆ ಅಡಿವೇಪ್ಪ  ಹಾಗೂ ನಮ್ಮ ಸಂಬಂದಿಕರಾದ ಮರೇಪ್ಪ ತಂದೆ ಶಿವಲಿಂಗಪ್ಪ ಗೌಂಡಿ, ಮಾನಪ್ಪ ತಂದೆ ರಾಮಪ್ಪ ಗೌಂಡಿ, ವಿಠ್ಠಲ್ ತಂದೆ ರಾಮಪ್ಪ ಗೌಂಡಿ ರವರು ಕೂಡಿಕೊಂಡು ಕಣಮೇಶ್ವರ ಗ್ರಾಮಕ್ಕೆ ನಮ್ಮ ಮಗಳ ಮನೆಗೆ ಹೋಗಿ ನೋಡಲಾಗಿ ನನ್ನ ಮಗಳು ಸತ್ತಿದ್ದಳು. ಅವಳ ಕುತ್ತಿಗೆಗೆ ಬಲಭಾಗ ಮತ್ತು ಕುತ್ತಿಗೆಯ ಕೆಳಗಡೆ ಕಂದುಗಟ್ಟಿದ ಗಾಯಗಳು ಆಗಿದ್ದವು. ಅವಳಿಗೆ ಆದ ಗಾಯಗಳನ್ನು ನೋಡಿದರೆ ನನ್ನ ಮಗಳಿಗೆ ನಮ್ಮ ಅಳಿಯ ಪ್ರಕಾಶ ಹಾಗೂ ಮೇಲ್ಕಂಡ ಅವನ ಮನೆಯರೆಲ್ಲರು ಸೇರಿ ಅವಳಿಗೆ ಕುತ್ತಿಗೆ ಒತ್ತಿ ಅಥವಾ ಯಾವುದೊ ವಸ್ತುವಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದು ಕಂಡು ಬರುತ್ತದೆ. ಅಲ್ಲದೆ ಈ ಕೊಲೆ ನಿನ್ನೆ ದಿ: 5-12-18 ರಂದು ರಾತ್ರಿ 9-00 ಗಂಟೆಯಿಂದ ದಿ: 6-12-18 ರಂದು ಬೆಳಿಗ್ಗೆ 5-00 ಗಂಟೆ ಮದ್ಯದ ಅವಧಿಯಲ್ಲಿ  ಅಗಿರಬಹುದು ಮೇಲ್ಕಂಡ 7 ಜನರು ಕೂಡಿ ನನ್ನ ಮಗಳಿಗೆ ತವರು ಮನೆಯಿಂದ ವರದಕ್ಷಿಣೆಯ ಹಣ 50,000ರೂ ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ತೊಂದರೆ ಕೊಡುತ್ತಾ ಬಂದು ಅದೆ ಕಾರಣಕ್ಕೆ ಅವಳಿಗೆ ಕುತ್ತಿಗೆ ಒತ್ತಿ ಅಥವಾ ಯಾವುದೆ ವಸ್ತುವಿನಿಂದ ಬಿಗಿದು ಕೊಲೆ ಮಾಡಿದವರ ವಿರುದ್ಧ ಕಾನೂನಿನ ಕ್ರಮ ಜರುಗಿಸ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 06-11-2018 ರಂದು ಮಾಶಾಳ ಗ್ರಾಮದ ಚೌಡೇಶ್ವರಿ ಹೋಟೆಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.  ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ ಹೋಗಿ  ಚೌಡೇಶ್ವರಿ ಹೋಟೆಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸುರೆಶ ತಂದೆ ಶಿವಪುತ್ರ ರಾವೂರ ಸಾ||ಮಾಶಾಳ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 750/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು,  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 06-11-2018 ರಂದು ಸೊನ್ನ ಗ್ರಾಮದ ಡಾ||ಬಾಬಾ ಸಾಹೇಬ ಅಂಬೇಡ್ಕರ  ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.  ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಗ್ರಾಮಕ್ಕೆ ಹೋಗಿ  ಡಾ||ಬಾಬಾ ಸಾಹೇಬ ಅಂಬೇಡ್ಕರ  ವೃತ್ತದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಗುಂಡಪ್ಪ ಕುದರಿ ಸಾ||ಸೊನ್ನ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1410/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು,  ಸದರಿಯವುಗಳನ್ನು ವಶಕ್ಕೆ ಪಡೆದುಕೊಂಡು ಸದರಿಯವನೊಂದಿಗೆ ಅಫಜಲಪೂರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 05/12/18 ರಂದು ಹೇರೂರ(ಬಿ) ಗ್ರಾಮ ದ ಹನುಮಾನ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೇರುರ ಬಿ ಗ್ರಾಮಕ್ಕೆ ಹೋಗಿ ಹನುಮಾನ ಗುಡಿಯ ಮರೆಯಲ್ಲಿ ನಿಂತು ನೋಡಲು  ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಹೇಳಿ ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲು1) ಅಣ್ಣಾರಾಯ ತಂದೆ ಸಾಯಿಬಣ್ಣಾ ಕ್ಯಾಸ   ಸಾ; ಹೇರೂರ (ಬಿ) 2) ವಿಠಲ ತಂದೆ ಬಸವರಾಜ ಫರತಾಬಾದ ಸಾ; ಹೇರೂರ (ಬಿ) ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 480/- ರೂ 2) ಎರಡು ಬಾಲ ಪೇನ 3) ಎರಡು ಮಟಕಾ ಚೀಟಿಗಳು ಜಪ್ತಿ ಪಡಿಸಿಕೊಂಡು  ಸದರಿಯವರೊಂದಿಗೆ ಫರಥಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶಿವಪ್ಪ ತಂದೆ ಭೀಮಶಪ್ಪ ವರಿಕೇರಿ ವಯ 22 ವರ್ಷ ಉ; ಪೊಲೀಸ್ ಕಾನ್ಸಟೇಬಲ್, ಸಿಪಿಸಿ 181 ಜೇವರಗಿ ಪೊಲೀಸ್ ಠಾಣೆ ಸಾ; ಗೊಂದೇನೂರ ತಾ; ಶಹಾಪೂರ ಜಿ; ಯಾದಗಿರ ಹಾ.ವ ಪೊಲೀಸ್ ಕ್ವಾಟ್ರಸ್ ಜೇವರಗಿ ರವರು  ಜೇವರಗಿ ಪೊಲೀಸ್ ಠಾಣೆಯಲ್ಲಿ ದಿನಾಂಕ; 03/07/2017 ರಿಂದ ಇಲ್ಲಿಯವರೆಗೆ ಪೊಲೀಸ್ ಕಾನ್ಸಟೇಬಲ್ ಎಂದು ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ದಿನಾಂಕ; 03/12/2018 ರಂದು ಮದ್ಯಾಹ್ನ 1-00 ಪಿ.ಎಮ್ ಸುಮಾರಿಗೆ ನಾನು ಕೋರ್ಟದಲ್ಲಿ ಇದ್ದಾಗ ಬಸವರಾಜ ತಂದೆ ಶಂಕರೆಪ್ಪ ಬಸವಪಟ್ಟಣ ವಕೀಲ ಈತನು ನನ್ನ ಹತ್ತಿರ ಬಂದು ಜೇವರಗಿ ಠಾಣೆ ಗುನ್ನೆ ನಂ; 211/2018 ಪ್ರಕರಣದಲ್ಲಿ ಪಿ.ಎಫ್ ನೋಡುತ್ತೇನೆ ತೋರಿಸು ಎಂದು ಕೇಳಿದಾಗ ನಾನು ಪಿ.ಎಫ್ ನಿಮಗೆ ಯಾಕೆ ತೋರಿಸಬೇಕು ಕೋರ್ಟದಲ್ಲಿ ಕೊಡುತ್ತೇನೆ ಎಂದು ಅಂದಿದ್ದಕ್ಕೆ ನನ್ನೊಂದಿಗೆ ತಕರಾರು ಮಾಡಿ ಹೋಗಿರುತ್ತಾನೆ. ದಿನಾಂಕ; 04/12/2018 ರಂದು ಬೆಳಗ್ಗೆ 10-00 ಗಂಟೆಗೆ ನಾನು ಎಂದಿನಂತೆ ಮಾನ್ಯ ಹಿರಿಯ ಶ್ರೇಣಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಕೋರ್ಟ ಕರ್ತವ್ಯಕ್ಕೆ ಹಾಜರಾಗಿ ಕೋರ್ಟದಲ್ಲಿ ಇದ್ದಾಗ ಬೆಳಿಗ್ಗೆ 10-45 .ಎಮ್ ವೇಳೆಗೆ ನಾನು ಸಹಾಯಕ ಸರಕಾರಿ ಅಭಿಯೋಜಕರ ಕಾರ್ಯಾಲಯದ ಹತ್ತಿರ ಕರ್ತವ್ಯದ ಮೇಲೆ ಇದ್ದಾಗ ಬಸವರಾಜ ತಂದೆ ಶಂಕರೆಪ್ಪ ಬಸವಪಟ್ಟಣ ವಕೀಲ ಈತನು ನನ್ನ ಹತ್ತಿರ ಬಂದು ಭೋಸಡಿ ಮಗನೆ, ಕುಂಡಿ ಕಡಿತದ ಏನು, ಪಿ.ಎಫ್ ಕೋರ್ಟದಲ್ಲಿ ಕೊಟ್ಟಿರುವದಿಲ್ಲ ಯಾಕೆ?. ಮೈಯಲ್ಲಿ ಸೊಕ್ಕು ಬಂದಿದೆ ನಿನಗೆ, ರಂಡಿ ಮಗನೆ ನಾನು ನಿನ್ನಂತವರನ್ನು ಎಷ್ಟು ಜನರನ್ನು ನೋಡಿಲ್ಲ ಎಂದು ಅವಾಚ್ಯವಾಗಿ ಜೋರಾಗಿ ಬೈದು, ಸಿಟ್ಟಿನಿಂದ ಹಲ್ಲು ಕಡಿಯುತ್ತಾ ಬಲ ಕೈಯಿಂದ ನನ್ನ ಎಡಗಡೆ ಕಪಾಳ ಮೇಲೆ ಜೋರಾಗಿ ಹೊಡೆದನು. ಮತ್ತು ನನ್ನ ಮೈ ಮೇಲಿನ ಸಮವಸ್ತ್ರ ಹಿಡಿದು ಜಗ್ಗಿ, ಎಳೆದಾಡಿ ನನಗೆ ಗೋಡೆಗೆ ನೂಕಿಸಿ ಕೊಟ್ಟನು. ಆಗ ನಾನು ಗೋಡೆ ಮೇಲೆ ಬಿದ್ದುದ್ದರಿಂದ ನನ್ನ ಬೆನ್ನಿಗೆ ತರಚಿದ ಗಾಯವಾಗಿರುತ್ತದೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ರಾಮರಾವ ತಂದೆ ಬಸವಂತ್ರಾಯ ಜಗತಾಪ ಮತ್ತು  ಗುರುಬಸಪ್ಪ ತಂದೆ ಫ್ರಭಾಕರ್ ಮತ್ತು ಭಾಗಣ್ಣ ಹೆಚ್.ಸಿ 395 ನೆಲೋಗಿ ಪೊಲೀಸ್ ಠಾಣೆ ಇವರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿಕೊಂಡರು. ನಂತರ ಅವನು ನನಗೆ ಭೋಸಡಿ ಮಗನೆ ನೀನು ಜೇವರಗಿಯಲ್ಲಿ ಹೇಗೆ ಕೆಲಸ ಮಾಡುತಿ ನೀನಗೆ ನೋಡಿಕೊಳ್ಳುತ್ತೆನೆ. ಎಂದು ನನಗೆ ಜೀವದ ಬೇದರಿಕೆ ಹಾಕಿರುತ್ತಾನೆ, ನಂತರ ನಾನು ಕೋರ್ಟ್ ಕರ್ತವ್ಯ ಮುಗಿಸಿಕೊಂಡು ಠಾಣೆಗೆ ಬಂದು ನಮ್ಮ ಮೇಲಾಧಿಕಾರಿಗಳೊಂದಿಗೆ ವಿಚಾರಿಸಿ ದೂರು ನೀಡುತ್ತಿದ್ದೇನೆ. ಕಾರಣ ಬಸವರಾಜ ತಂದೆ ಶಂಕರೆಪ್ಪ ಬಸವಪಟ್ಟಣ ವಕೀಲ ಈತನು, ನಾನು ಮಾನ್ಯ ನ್ಯಾಯಾಲಯದಲ್ಲಿ ಕರ್ತವ್ಯದ ಮೇಲೆ ಇದ್ದಾಗ ನನಗೆ ಅವಾಚ್ಯವಾಗಿ ಬೈದು, ಸಮವಸ್ತ್ರ ಹಿಡಿದು ಎಳೆದಾಡಿ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಸರಕಾರಿ ಕರ್ತವ್ಯಕ್ಕೆ ಅಡೆ-ತಡೆ ಮಾಡಿ ಜೀವದ ಭೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 05-2-2018 ರಂದು ಕುಮಾರಿ ಕಲ್ಪನಾ ತಂದೆ ಧರ್ಮಸಿಂಗ ರಾಠೋಡ  ಸಾ|| ಬಳೂರ್ಗಿ ತಾಂಡಾ ರವರಿಗೆ ಯಾವುದೊ ಒಂದು ವಾಹನ ಅಪಘಾತ ಮಾಡಿ ಗಾಯಗೋಳಿಸಿ ಓಡಿ ಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ನೀಲಕಂಠ ಮಡಿವಾಳ  ಸಾ:ಇಟಗಾ (ಕೆ) ತಾ:ಜಿ:ಕಲಬುರಗಿ ರವರ ಮಗಳಾದ ಲಕ್ಷ್ಮೀ ಇವಳಿಗೆ ಎಪ್ರೀಲ್ತಿಂಗಳ 25 ತಾರೀಕಿನಂದು ಕೋನಾಳ ಗ್ರಾಮದ ಶಿವಶರಣಪ್ಪಾ ಮಡಿವಾಳ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಾದ ನಂತರ ನನ್ನ ಮಗಳು ಅಳಿಯ ಕಲಬುರಗಿ ನಗರದಲ್ಲಿ ಮನೆ ಮಾಡಿಕೊಂಡಿದ್ದು ನಾನು ಮನೆಯಲ್ಲಿ ಒಬ್ಬಳೆ ಇದ್ದಿದ್ದುರಿಂದ ಮಗಳ ಹತ್ತಿರ ಬಂದಿರುವದಿಲ್ಲಾ ನನ್ನ ಮಗಳು ಒಂದು ಸಲ ನನ್ನ ಹತ್ತಿರ ಬಂದು ಗಂಡ ಅವನ ಮನೆಯವರು ತನ್ನ ಸಂಗಡ ಆಗಾಗ ತಕರಾರು ಮಾಡುತ್ತಾರೆ ಎಂದು ಹೇಳಿದ್ದಾಳೆ ದಿನಾಂಕ:10/11/2018 ರಂದು ನನ್ನ ಮಗಳಿಗೆ ಸುಟ್ಟಗಾಯಗಳಾಗಿದ್ದು ಅವಳಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅಂತಾ ಗೊತ್ತಾಗಿ ನಾನು ಬಂದು ನನ್ನ ಮಗಳಿಗೆ ನೋಡಿದ್ದು ಅವಳ ಕುತ್ತಿಗೆ ಹತ್ತಿರ & ಎರಡು ಕೈಗಳ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು ನನ್ನ ಮಗಳು ಪೊಲೀಸರ ಮುಂದೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸುಟ್ಟಗಾಯ ವಾಗಿರುತ್ತದೆ. ಅಂತಾ ಹೇಳಿಕೆ ನೀಡಿದ್ದು ಇರುತ್ತದೆ. ದಿನಾಂಕ:03/12/18 ರಂದು ನನ್ನ ಮಗಳಿಗೆ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ನಿನ್ನೆ ದಿನಾಂಕ:04/12/18 ರಂದು ಬೆಳಗ್ಗೆ 7.30 ಸುಮಾರಿಗೆ ನನ್ನ ಬಿಗರಾದ ಆದಪ್ಪ ಅವರಿಗೆ ಪೋನ್ಮಾಡಿದಾಗ ಅವರು ತಿಳಿಸಿದ್ದೇನೆಂದರೆ ಲಕ್ಷ್ಮೀ ಇವಳು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾಳೆ ಮರಳಿ ಬರುತ್ತಿದ್ದೇವೆ ಎಂದು ತಿಳಿಸಿರುತ್ತಾರೆ ನನ್ನ ಮಗಳ ಶವವನ್ನು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿದ್ದು ನನ್ನ ಮಗಳ ಸಾವಿನಲ್ಲಿ ನನಗೆ ಸಂಶಯವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.