POLICE BHAVAN KALABURAGI

POLICE BHAVAN KALABURAGI

09 July 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಂಜೀವಕುಮಾರ ತಂದೆ ಶ್ರೀಮಂತ ತ್ರೀಲಾಪುರ ಸಾ:ಕರಕಮುಕಳಿ(ಕನಕಪುರ) ತಾ:ಚಿಂಚೋಳಿ ಹಾ::ಮನೆ.ನಂ.9/528 ಸಮೀಕ್ಷಾ ನಿಲಯ 3 ನೇ ಕ್ರಾಸ ಕೈಲಾಸ ನಗರ ಕಲಬುರಗಿ ರವರು  ದಿನಾಂಕ:06/07/2018 ರಂದು ರಾತ್ರಿ 9.00 ಗಂಟೆಗೆ ಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ನನ್ನ ಹೆಂಡತಿ ಅಶ್ವಿನಿ ಇವರ ಹೇರಿಗೆ ಮದರಕೇರ ಆಸ್ಪತ್ರೆಯಲ್ಲಿ ಯಾಗಿದ್ದು ನಾನು ಆಸ್ಪತ್ರೆಗೆ ಹೋಗಿದ್ದು ದಿನಾಂಕ:07/07/2018 ರಂದು 7.50 .ಎಂಕ್ಕೆ ಮರಳಿ ನಮ್ಮ ಮನೆಗೆ ಬಂದಾಗ ಮನೆಯ ಬಾಗಿಲ ಕೊಂಡಿ ಮುರಿದಿದ್ದು ನಾನು ಗಾಬರಿಗೊಂಡು ಮನೆಯಲ್ಲಿ ಹೋಗಿ ನೋಡಲಾಗಿ ಮನೆಯಲ್ಲಿಯ ಆಲಮರಿ ಮುರಿದಿದ್ದು ಅಲಮಾರಿಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ನಾನು ಪರಿಶೀಲಿಸಿ ನೋಡಲಾಗಿ ಮನೆಯಲ್ಲಿಯ ಬಂಗಾರದ ಆಭರಣಗಳು ಮತ್ತು ನಗದು ಹಣ ಒಟ್ಟು 1,68,000/-ರೂ ಬೆಲೆಬಾಳುವ ಬಂಗಾರದ ಒಡವೆಗಳು ಹಾಗೂ ನಗದು ಹಣ ಯಾರೋ ಕಳ್ಳರು ರಾತ್ರಿ ವೇಳೆ ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 06-07-2018 ರಂದು ದಿಕ್ಸಂಗಾ (ಕೆ) ಗ್ರಾಮದ ಹನುಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಿಕ್ಸಂಗಾ (ಕೆ) ಗ್ರಾಮಕ್ಕೆ ಹೋಗಿ, ಹನುಮಂತ ದೇವರ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಮುಂದೆ ಇರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದಾರಾಮ ತಂದೆ ಶಿವಪ್ಪ ನಾಗಣಸೂರ ಸಾ|| ದಿಕ್ಸಂಗಾ (ಕೆ) ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 500/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಹಣಮಂತರಾಯ ತಂದೆ ಶರಣಪ್ಪಾ ಗೌಡಪ್ಪಗೋಳ ಸಾ:ಜವಳಿ (ಡಿ) ತಾ:ಆಳಂದ ಹಾ::ಜೆ.ಆರ್‌‌ ನಗರ ಆಳಂದ ರೋಡ ಕಲಬುರಗಿ  ರವರ ಮಗನಾದ  ಸಿದ್ರಾಮ ತಂದೆ ಹಣಮಂತರಾಯ ಗೌಡಪ್ಪಗೋಳ :16 :ಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಇತನು ದಿನಾಂಕ:04/07/2018 ರಂದು ಬೆಳಗ್ಗೆ 11.30 ಗಂಟೆ ಸುಮಾರಿಗೆ ಸ್ಟಡಿ ಮಟೇರಿಯಲ್ಸ್‌‌ ಝೇರಾಕ್ಸ್‌‌ ಮಾಡಿಸಿಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋಗಿದ್ದು ನಮ್ಮ ಮಗ ಮರಳಿ ಇಂದಿನವರೆಗೂ ಮನೆಗೆ ಬಂದಿರುವದಿಲ್ಲಾ ನನ್ನ ಮಗನ ಚಹರೆ ಪಟ್ಟಿ ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಎತ್ತರ 5’6’’ ಮೈಮೇಲೆ ಉದ್ದ ತೋಳಿನ ಕೆಂಪು ಟಿ-ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ, ಬಿಳಿ ಬನಿಯಾನ, ಬಾಟಾ ಕಂಪನಿಯ ಚಾಕಲೇಟ್‌‌ ಬಣ್ಣದ ಚಪ್ಪಲ್ ಧರಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಭವಾನಿ ತಂದೆ ಗುಂಡಪ್ಪಾ ಗರಡಕರ ಸಾ:ಮಾಕಾ ಲೇಔಟ ಜೇವರ್ಗಿ ಕಾಲೋನಿ ಕಲಬುರಗಿ ರವರು ದಿನಾಂಕ:04/07/18 ರಂದು ನನ್ನ ಹೆಂಡತಿಗೆ ಹೇರಿಗೆಯಾಗಿದ್ದು ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಮತ್ತು ಮಗುವಿನ ಉಪಚಾರ ನೋಡಿಕೊಳ್ಳಲು ಯಾರು ಹೆಣ್ಣು ಮಕ್ಕಳು ಇಲ್ಲದ ಕಾರಣ ನಾನು ನಮ್ಮ ಮಾವನಾದ ಶಂಕರ ಚವ್ಹಾಣ ಇವರಿಗೆ ಪೋನ ಮಾಡಿ ಅತ್ತಿಯಾದ ಇಂಧುಬಾಯಿಗೆ ಆಸ್ಪತ್ರೆಗೆ ಕಳುಹಿಸಿ ಕೊಡಲು ಕೇಳಿದಾಗ ಮನೆಗೆ ಬಂದು ಕರೆದುಕೊಂಡು ಹೋಗು ಅಂತಾ ಹೇಳಿದರು ಆಗ ನಾನು ಗಂಗಾನಗರದಲ್ಲಿರುವ ನನ್ನ ಮಾವನ ಮನೆಗೆ ಹೋದಾಗ ಮನೆಯಲ್ಲಿ ನಮ್ಮ ಮಾವನವರಾದ ಶಂಕರ ತಂದೆ ತುಳಸಿರಾಮ ಚವ್ಹಾಣ ಹಾಗೂ ನಮ್ಮ ಅಳಿಯ ದೇವಿದಾಸ ಚವ್ಹಾಣ ಇಬ್ಬರೂ ಕೂಡಿಕೊಂಡು 5.00 ಪಿ.ಎಂ ಸುಮಾರಿಗೆ ನನಗೆ ಬೈಯ ಹತ್ತಿದರು ಆಗ ನಾನು ಯಾಕೆ ಬೈಯುತ್ತಿರಿ ನನ್ನ ಹೆಂಡತಿ ಆಸ್ಪತ್ರೆಯಲ್ಲಿ ಇದ್ದಾಳೆ ಅತ್ತೆಗೆ ಕಳುಹಿಸಿ ಕೋಡಿರಿ ಎಂದಾಗ ನಮ್ಮ ಮಾವ ಶಂಕರ ಇತನು ನಾನು ಕಳುಹಿಸಿ ಕೊಡುವದಿಲ್ಲಾ ನಿನ್ನ ಸೊಕ್ಕ ಬಹಳ ಆದ ಮಗನಾ ಅಂತಾ ಕಟ್ಟಿಗೆ ತೆಗೆದುಕೊಂಡು ನನ್ನ ತಲೆಯ ಮೇಲೆ ಎಡಭಾಗಕ್ಕೆ ಹೊಡೆದಿದ್ದು ನಮ್ಮ ಅಳಿಯ ದೇವಿದಾಸ ಇತನು ಕೈಯಿಂದ ಮೈ ಕೈಗೆ ಹೊಡೆಯಹತ್ತಿದನು ಆಗ ನಮ್ಮ ಅತ್ತೆ ಇಂದುಬಾಯಿ ಇವಳು ಬಿಡಿಸಿಕೊಂಡಳು ನನ್ನ ತಲೆಯಿಂದ ರಕ್ತ ಬರ ಹತ್ತಿತ್ತು ನಂತರ ನಾನು ಜಿಲ್ಲಾ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿದ್ದು ವೈದ್ಯರು ನನ್ನ ತಲೆಯ ಗಾಯಕ್ಕೆ ಉಪಚಾರ ಮಾಡಿ ವಾರ್ಡನಲ್ಲಿ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ
ಫರತಾಬಾದ ಠಾಣೆ : ಶ್ರೀಮತಿ ಜ್ಯೋತಿ ಗಂಡ ವಿಶ್ವರಾಜ ಧರಿಗೊಂಡ ಸಾ ತೆಲೂರ ಹಾ.ವ. ಜೈಲ ಕ್ವಾಟರ್ಸ ಖನದಾಳ ರೋಡ ಕಲಬುರಗಿ  ರವರು ಸುಮಾರು 4 ವರ್ಷಗಳ ಹಿಂದೆ ವಿಶ್ವರಾಜ ಇತನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ವರೋಪಚಾರ ಅಂತಾ ನಗದು ಹಣ ಬಂಗಾರ ಗೃಹ ಉಪಯೋಗಿ ಸಾಮಾನುಗಳನ್ನು ಕೊಟ್ಟಿದ್ದು ಮದುವೆಯಾದ ನಂತರ  ಸ್ವಲಪ್ಪ ದಿನಗಳ ನಂತರ ನನ್ನ ಗಂಡ ಅತ್ತೆ ಮಾವ, ಮೈದುನರು ಮತ್ತು  ನೆಗೆಣಿ ಎಲ್ಲರು ಕೂಡಿಕೊಂಡು  ತವರುಮನೆಯಿಂದ ಇನ್ನು ಹೆಚ್ಚಿನ ವರದಕ್ಷಣೆ ತರುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 July 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಮಹೇಬೂಬ ತಂದೆ ಸೈಯದ ಸೈನೋದ್ದಿನ್‌ ಸಾ:ಮನೆ.ನಂ.15ಎ ಎ.ಎಸ್‌‌.ಐ ಲೈನ್‌ ಪೊಲೀಸ್‌ ಹೇಡ್‌‌ ಕ್ವಾಟರ್ಸ್ ಕಲಬುರಗಿ ರವರು  ದಿನಾಂಕ:04/07/2018 ರಂದು ಮನೆಯಲ್ಲಿರುವಾಗ ಬೆಳಗ್ಗಿನ ಜಾವ 5.30 ಗಂಟೆಯ ಸುಮಾರಿಗೆ  ನನ್ನ ಕಾಕನ ಮಗಳಿನ ಮಗಳಾದ ಮಾಸುಮಾ ಇವಳು ತನ್ನ ಮೊಬೈಲ್‌ ದಿಂದ ದೂರವಾಣಿ ಕರೆಮಾಡಿ ತಿಳಿಸಿದ್ದೆನೆಂದರೆ, ಮಾಮಾ ಅಕ್ಬರ್‌‌ ಮಾವನ ಮನೆಗೆ ಬೆಂಕಿ ಹಚ್ಚಿದ್ದಾರೆ ಅಕ್ಬರ್‌ ಮಾಮಾ ಮತ್ತು ಮಾಮೀ ಶಹನಾಜ ಬೇಗಂ ಹಾಗೂ ಅವರ ಇಬ್ಬರೂ ಮಕ್ಕಳಾದ ಸೈಯದ ಯಾಸೀನ್‌ ಹಾಗೂ ಮಗಳಾದ ಸಾನಿಯಾಬೇಗಂ ಇವರೆಲ್ಲರೂ ಸುಟ್ಟಿದ ಗಾಯಗಳಿಂದ ತುಂಬಾ ಬಳಲುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ಸರಿ ತಕ್ಷಣವೇ ಅಂಬುಲೇನ್ಸ್ ಗೆ ಕರೆಮಾಡು ನಾನು ಕೂಡಾ ಕರೆಮಾಡಿ ಹೇಳುತ್ತೇನೆ ಅಂತಾ ತಿಳಿಸಿದ್ದೆನು ನಂತರ ನಾನು ತಕ್ಷಣವೆ ಬಟ್ಟೆಯನ್ನು ಹಾಕಿಕೊಂಡು ಎಂ.ಎಸ್‌‌.ಕೆ.ಮೀಲ್‌ ಕಡೆಗೆ ಹೊರಟ್ಟಿದ್ದಾಗ ಮತ್ತೆ ಮಾಸುಮಾ ಇವಳು ಕರೆ ಮಾಡಿ ಮಾಮಾ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಮುಟ್ಟಿದ್ದೇವೆ ಈ ಕಡೆಗೆ ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು ಬೆಳಗಿನ ಜಾವ 6.30 ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಧಾವಿಸಿ ಬಂದು ನೋಡಲಾಗಿ ಅಲ್ಲಿ ನನ್ನ ಕಾಕನ ಮಗನಾದ ಸೈಯದ ಅಕ್ಬರ ಮತ್ತು ಆತನ ಹೆಂಡತಿ ಶಹನಾಜ ಬೇಗಂ ಮಕ್ಕಳಾದ ಸೈಯದ ಯಾಸೀನ ಮತ್ತು ಮಗಳಾದ ಸಾನೀಯಾ ಬೇಗಂ ಇವರೆಲ್ಲರೂ ಸುಟ್ಟ ಗಾಯಗಳಿಂದ ಬಳಲುತ್ತಿದ್ದರು ಅವರಿಗೆ 3-4 ವೈದ್ಯಾಧಿಕಾರಿಗಳು ಸೇರಿ ಚಿಕಿತ್ಸೆಯನ್ನು ನೀಡುತ್ತಿದ್ದರು ನಾನು ಮಾನ್ಯ ವೈದ್ಯಾಧಿಕಾರಿಗೆ ಭೇಟಿ ಮಾಡಿದ್ದು ಅವರು ನನಗೆ ಅಡಮೀಟ್‌ ಕಾರ್ಡ ಮಾಡಿ ತರಲು ತಿಳಿಸಿದ್ದು ನಾನು ಅಡಮೀಟ್‌ ಕಾರ್ಡ ಮಾಡಿ ತಂದೆನು. ನಂತರ ನಾನು ಮತ್ತೆ ವೈದ್ಯಾಧಿಕಾರಿಯವರನ್ನು ನನ್ನ ತಮ್ಮನಾದ ಅಕ್ಬರ ಹಾಗೂ ಅವನ ಕುಟುಂಬಸ್ಥರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದು ಕರ್ತವ್ಯದಲ್ಲಿದ್ದ ವೈದ್ಯರು ನಾಲ್ಕು ಜನರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ 80 ರಿಂದ 90% ಸುಟ್ಟ ಗಾಯಗಳಾಗಿವೆ ನಮ್ಮ ಪ್ರಯತ್ನ ಮಾಡುತ್ತೇವೆ ಅಂತಾ ತಿಳಿಸಿದ ನಂತರ ನಾನು ಹೆಚ್ಚಿನ ಚಿಕಿತ್ಸೆಗಾಗಿ ಈ ಮೇಲೆ ತಿಳಿಸಿದ ನಾಲ್ಕು ಜನರನ್ನು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಾನು ನನ್ನ ತಮ್ಮನಾದ ಅಕ್ಬರ ಇತನಿಗೆ ನಡೆದ ಘಟನೆ ಬಗ್ಗೆ ವಿಚಾರಿಸಲಾಗಿ ನನ್ನ ತಮ್ಮನು ತಿಳಿಸಿದ್ದೆನೆಂದರೆ, ರಾತ್ರಿ 3.00 ಘಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಮನೆಯಲ್ಲಿ ಮಲಗಿದ್ದಾಗ ಮನೆಯ ಮುಖ್ಯ ಬಾಗಿಲಿಗೆ ಮುಸ್ತಫಾ ತಂದೆ ಮಹ್ಮದ ಸಲೀಂ ಅಂತಾ ತಿಳಿಸಿದ ನಂತರ ಮುಸ್ತಫಾ ಯಾರು ಅಂತಾ ನಾನು ವಿಚಾರಿಸಿದಾಗ ತನ್ನ ತಂಗಿ ಹೀನಾ ಕೌಸರ ಇವಳ ಗಂಡ ಅಂತಾ ತಿಳಿಸಿದನು. ಯಾಕೆ ಬೆಂಕಿ ಹಚ್ಚಿದನು ಅಂತಾ ವಿಚಾರಿಸಿದಾಗ ಮುಸ್ತಫಾ ಇತನು ಹೀನಾ ಕೌಸರ ಇವಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರಿಂದ ನಾನು ಅವನಿಗೆ ಯಾವಾಗಲು ಬುದ್ದಿವಾದ ಹೇಳುತ್ತಾ ಬಂದಿದ್ದು ಮತ್ತು ಈ ರೀತಿ ಮುಂದೆ ಮಾಡಬೇಡ ಅಂತಾ ತಿಳುವಳಿಕೆ ನೀಡುತ್ತಾ ಬಂದಿದ್ದರಿಂದ ಮುಸ್ತಫಾ ಇತನು ಸಾಲೇ ಏ ಮರತಾಬಾ ದೇಕ ಲೇ ತು ಅಂತಾ ಹೇಳಿದನು ಕಾರಣ ನನ್ನ ತಮ್ಮನಾದ ಅಕ್ಬರ ಹಾಗೂ ಅವನ ಹೆಂಡತಿ ಯಾದ ಶಹನಾಜಬೇಗಂ ಮಗನಾದ ಸೈಯದ ಯಾಸೀನ ಮತ್ತು ಮಗಳಾದ ಸೈಯ್ಯದಾ ಸಾನಿಯಾ ಇವರೆಲ್ಲರೂ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಇವರೆಲ್ಲರನ್ನೂ ಕೊಲೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಮನೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಗಾಯ ಪಡಿಸಿಸ್ಸು  ದಿನಾಂಕ:04/07/2018 ರಂದು ಸಾಯಂಕಾಲ 5.45 ಪಿ.ಎಂಕ್ಕೆ ಬಸವೇಶ್ವರ ಆಸ್ಪತ್ರೆಯಿಂದ ಶ್ರೀಮತಿ ಶಹಜಾನ ಬೇಗಂ ಗಂಡ ಸೈಯದ ಅಕ್ಬರ ಇವಳು ಉಪಚಾರ ದಿಂದ ಗುಣಮುಖ ಹೊಂದದೆ ಮೃತ ಪಟ್ಟಿರಿತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಮುಧೋಳ ಠಾಣೆ : ದಿನಾಂಕ 04-07-2018 ರಂದು ಮುಧೋಳ ಠಾಣಾ ವ್ಯಾಪ್ತಿಯಲ್ಲಿ ) ಟ್ರ್ಯಾಕ್ಟರ ಇಂಜಿನ ನಂಬರ RGE2KGA2926 2) ಟ್ರ್ಯಾಕ್ಟರ ಇಂಜಿನ ನಂಬರ 43-1024/ sya02736  ªÀÄvÀÄÛ  3) ಟ್ರ್ಯಾಕ್ಟರ ನಂಬರ ಕೆಎ – 32 ಟಿಎ-6237 ನೇದ್ದರ  ಚಾಲಕ ಮತ್ತು ಮಾಲೀಕರು ಲೇಬರಗಳ ಸಹಾಯದಿಂದ ಮದರಿ ,ಜಿಲ್ಲಾಡಪಲ್ಲಿ ಮತ್ತು ಎಲೆ ರಾಜೋಳ ಗ್ರಾಮದ ಹಳ್ಳದಲ್ಲಿ ಅಕ್ರಮವಾಗಿ ಸರಕಾರಕ್ಕೆ  ರಾಜ್ಯ ಧನವನ್ನು ಬರಿಸದೇ ಮರಳನ್ನು ತುಂಬುತ್ತಿದ್ದಾಗ ಶ್ರೀ ಉಮಾಕಾಂತ ಕಂದಾಯ ನಿರೀಕ್ಷಕರು ಅಡಕಿ ಹೋಬಳಿ ತಾ||ಸೇಡಂ  ಮತ್ತು ಸಿಬ್ಬಂದಿಯವರ  ಸಹಾಯದಿಂದ ದಾಳಿ ಮಾಡಿ ಹಿಡಿದು ಠಾಣೆಗೆ ತಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ದಿನಾಂಕ 04-07-2018 ರಂದು ಮುಧೋಳ ಠಾಣಾ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರಗಳಲ್ಲಿ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಐ. ಮುಧೋಳ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ 1) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 5015  2) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 3637 3) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 8121 4) ಟ್ರ್ಯಾಕ್ಟರ ಇಂಜಿನ ನಂಬರ S325 IG95877 5)  ಟ್ರ್ಯಾಕ್ಟರ ಇಂಜಿನ ನಂಬರ NGH2KBE0265 5 ಟ್ರ್ಯಾಕ್ಟರಗಳನ್ನು ಜಪ್ತಿಪಡಿಸಿಕೊಂಡು ಮುದೋಳ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

03 July 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು  :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 28-06-2018 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನನ್ನ ಮಗ ಸಮೀರ ಇತನು ನಮ್ಮ ಮನೆಯಿಂದ ಗಾಜಿಪೂರದಲ್ಲಿರುವ ಆತನ ಅಜ್ಜಿಯ ಮನೆಗೆ ಹೋಗುವ ಕುರಿತು ಮೋಟಾರ ಸೈಕಲ ನಂ ಕೆಎ-32-ಕ್ಯೂ-8167 ನೆದ್ದನ್ನು ಚಲಾಯಿಸಿಕೊಂಡು ಆನಂದ ಹೊಟೇಲ ಕ್ರಾಸ ಕಡೆಯಿಂದ ಗೋವಾ ಹೊಟೇಲ ಕ್ರಾಸ ಕಡೆಗೆ ಹೋಗುವಾಗ ಎನ.ವ್ಹಿ ಕಾಲೇಜ ಕಾಂಪ್ಲೇಕ್ಸನಲ್ಲಿ ಬರುವ ಭಾರತ ಗ್ಯಾಸ ಏಜೇನ್ಸಿ ಎದುರು ರೋಡ ಮೇಲೆ ಹಿಂದಿನಿಂದ ಒಬ್ಬ ಹೊಂಡಾ ಡಿಓ ಮೊಟಾರ ಸೈಕಲ ಸವಾರ ತನ್ನ ಮೋಟಾರ ಸೈಕಲ ಹಿಂದುಗಡೆ ಒಬ್ಬನನ್ನು ಕುಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಮೀರ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಸಮೀರ ಇತನು ಕೆಳಗಡೆ ಬಿದ್ದಾಗ ಒಬ್ಬ ಹಿರೋ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆಳಗಡೆ ಬಿದ್ದಿದ್ದ ಸಮೀರ ಇತನ ಮೇಲೆ ಮೋಟಾರ ಸೈಕಲ ಹಾಯಿಸಿಕೊಂಡು ಹೋಗಿ ಅಪಘಾತ ಮಾಡಿ ಸಮೀರ ಇತನಿಗೆ ಭಾರಿಗಾಯಗೊಳಿಸಿ ಇಬ್ಬರೂ ತಮ್ಮ ಮೋಟಾರ ಸೈಕಲದೊಂದಿಗೆ ಓಡಿ ಹೋಗಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ನನ್ನ ಮಗ ಸಮೀರ ಇತನ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಯಿಂದ ಹೈದ್ರಾಬಾದನ ಓವೆಸಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗ ಸಮೀರ ಇತನು ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಪಡೆಯುತ್ತಾ ಹೈದ್ರಾಬಾದ ಓವೆಸಿ ಆಸ್ಪತ್ರೆಯಲ್ಲಿ ದಿನಾಂಕ 01-07-2018 ರಂದು ಸಾಯಂಕಾಲ 7-45 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಅಂತಾ  ಶ್ರೀ ಮಹಿಬೂಬ ತಂದೆ ಇಬ್ರಾಹಿಂಖಾನ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ದತ್ತು ತಂದೆ ಮಾಳಪ್ಪ ಬಳೂರ್ಗಿ ಸಾ||ಬಳೂರ್ಗಿ ಹಾ||||ಜಕಾಪೂರ ತಾ||ಅಕ್ಕಲಕೋಟ ರವರು ತಮ್ಮನಾದ ಕರೇಪ್ಪ ಹಾಗು ನಮ್ಮ ಓಣಿಯ ಮಾಳಪ್ಪ ತಂದೆ ಅಮೋಘಿಸಿದ್ದ ಅಗತನಳ್ಳಿ ರವರು  ದಿನಾಂಕ 01/07/2018 ರಂದು ನಮ್ಮ ತಮ್ಮ ಕರೇಪ್ಪ ಈತನು ನಮಗೆ ತಿಳಿಸಿದ್ದೆನೆಂದರೆ ನಾನು ಹಾಗು ಮಾಳಪ್ಪ ಅಗತನಳ್ಳಿ ಇಬ್ಬರು ಮಾಳಪ್ಪನ ಮೋಟಾರ್ ಸೈಕಲ್ ನಂ ಎಮ್ ಹೆಚ್ 13 ಸಿವ್ಹಿ 0504 ನೇದ್ದರ ಮೇಲೆ ಜೆವರ್ಗಿ ತಾಲೂಕಿನ ಹರವಾಳ ಗ್ರಾಮದ ಮಾಳಪ್ಪ ರವರ ಅಕ್ಕನ ಮನೆಗೆ ಹೋಗಿ ಬರುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ ಹೀಗಿದ್ದು, ಇಂದು ದಿನಾಂಕ 01/07/2018 ರಂದು ಬೆಳಿಗ್ಗೆ ನಾನು ನಮ್ಮ ಮನೆಯಲಿದ್ದಾಗ ನಮಗೆ ಪರಿಚಯಸ್ಥರಾದ ಬರಮು ತಂದೆ ರೇವಣಸಿದ್ದ ಒಂಟೆ ರವರು ನನ್ನ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ಅಂದರೆ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಅಫಜಲಪೂರ ಸಮೀಪ ಮಾತೋಶ್ರೀ ಕಾಶಿಬಾಯಿ ವಿದ್ಯಾಮಂದಿರ ಪೂರ್ವ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ ದುದನಿ ರೋಡಿನ ಮೇಲೀಂದ ನಿಮ್ಮ ತಮ್ಮ ಕರೇಪ್ಪ ತಂದೆ ಮಾಳಪ್ಪ ಬಳುರ್ಗಿ ಹಾಗು ಮಾಳಪ್ಪ ತಂದೆ ಅಮೋಘಿಸಿದ್ದ ಅಗತನಳ್ಳಿ ಇಬ್ಬರು ಮೋಟರ್ ಸೈಕಲ್ ನಂ ಎಮ್ ಹೆಚ್ 13 ಸಿವ್ಹಿ 0504 ನೇದ್ದರ ಮೇಲೆ ಅಫಜಲಪೂರದ ಕಡೆಗೆ ಹೊರಟಿದಾಗ ಅವರ ಮುಂದಿನಿಂದ INNOVA  ವಾಹನ ನಂ ಎಮ್ ಹೆಚ್ 45 ಎಲ್-1414 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ನಾನು ಓಡಿ ಹೋಗುವಷ್ಟರಲ್ಲಿ ವಾಹನದ ಚಾಲಕನು ವಾಹನದಿಂದ ಇಳಿದು ಓಡಿ ಹೋಗಿರುತ್ತಾನೆ. .ಸದರಿ ಘಟನೆಯಲ್ಲಿ ಮಾಳಪ್ಪ ಅಗತನಳ್ಳಿ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನಿಮ್ಮ ತಮ್ಮ ಕರೇಪ್ಪನಿಗೆ ತಲೆಗೆ, ಗದ್ದಕ್ಕೆ, ಎಡಭುಜಕ್ಕೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದರಿಂದ  ಚಿಕಿತ್ಸೆಗಾಗಿ 108 ವಾಹನದಲ್ಲಿ ಕಲಬುರಗಿಗೆ ಕಳುಹಿಸಿಕೊಡಲಾಗಿರುತ್ತದೆ ಅಂತ ತಿಳಿಸಿದನು ವಿಷಯ ಗೊತ್ತಾದ ಕೂಡಲೆ ನಾನು ನಮ್ಮ ಘಟನೆಯ ಸ್ಥಳಕ್ಕೆ ಬಂದು ನೋಡಿದ್ದು ಮಾಳಪ್ಪ ಅಗತನಳ್ಳಿ ಈತನ ಶವ ರೋಡಿನ ಮೇಲೆ ಬಿದ್ದಿದ್ದರಿಂದ ನಾವು ತಗೆದುಕೊಂಡು ಹೋಗಿದ್ದ ವಾಹನದಲ್ಲಿ ಹಾಕಿಕೊಂಡು ಬಂದು  ಅಫಜಲಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿಸಿರುತ್ತೇವೆ.ಸದರಿ ಘಟನೆಯಲ್ಲಿ ಗಾಯ ಹೊಂದಿದ ನಮ್ಮ ತಮ್ಮ ಕರೇಪ್ಪನಿಗೆ ಚಿಕಿತ್ಸೆಗಾಗಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ ದಿನಾಂಕ 01/07/2018 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಅಫಜಲಪೂರ ದುದನಿ ರೋಡಿನ ಮೇಲೆ ಅಫಜಲಪೂರ ಹತ್ತಿರ ಮಾತೋಶ್ರೀ ಕಾಶಿಬಾಯಿ ವಿದ್ಯಾಮಂದಿರ ಪೂರ್ವ ಕಿರಿಯ ಪ್ರಾಥಮಿಕ ಶಾಲೆ ಮುಂದಿನ ರೋಡಿನ  ಮೇಲೆ  ತನ್ನ  INNOVA  ವಾಹನ  ನಂ ಎಮ್ ಹೆಚ್ 45 ಎಲ್-1414  ನೇದ್ದನ್ನು  ಅತಿವೇಗವಾಗಿ  ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿ ಓಡಿ ಹೋದ ವಾಹನದ ಚಾಲಕನ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶೀಮತಿ ಜಯಶ್ರೀ ಗಂಡ ಬಾಬುರಾವ ವಾಲಿ ಮು:ಸೊಂತ ಗ್ರಾಮ ತಾ:ಜಿ:ಕಲಬುರಗಿ ಇವರು ದಿನಾಂಕ:01-07-2018 ರಂದು ಮದ್ಯಾಹ್ನ 04-00 ಗಂಟೆಯ ಸೂಮಾರಿಗೆ ನನಗೆ ಮೈಯಲ್ಲಿ ಹುಸ್ಸಾರ ಇಲ್ಲದ ಕಾರಣ ನಾನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ತೋರಿಸಿಕೊಂಡು ಬರುವ ಕುರಿತು ಸೊಂತ ಗ್ರಾಮದ ಬಸವೇಶ್ವರ ವೃತ್ತದ ಹತ್ತೀರ ಇರುವ ತುಕಾರಾಮ ಪೋಲಾ ಇವರ ಪುಸ್ತಕ ಅಂಗಡಿಯ ಮುಂದೆ ಕಮಲಾಪೂರಕ್ಕೆ ಹೋಗುವ ಟೆಂಪುಗಾಗಿ ಕಾಯುತ್ತ ಕುಂತಿದ್ದು. ಅದೇ ವೇಳೆಗೆ ನಮ್ಮೂರ ಚಂದ್ರಕಾಂತ ತಂದೆ ಸಿದ್ರಾಮಪ್ಪ ಬಶೆಟ್ಟಿ ಈತನು ನಾನು ಕುಂತಲ್ಲಿಗೆ ಬಂದು ನೀನು ಪರಿಶಿಷ್ಠ ಜಾತಿಯ ಮಾದಿಗ ಹೆಣ್ಣಾದರು ಕೂಡಾ ನಿನು ನಮ್ಮ ಲಿಂಗಾಯತ ಜನಾಂಗದ ಸಮಾಜಕ್ಕೆ ಹೋಲುವಂತಿದ್ದಿ ನಿನು ನನಗೆ ಮನಸ್ಸು ಕೋಡು ಎಂದು ತನ್ನ ಕೈ ನನ್ನ ಭೂಜದ ಮೇಲೆ ಇಟ್ಟನು. ಅದಕ್ಕೆ ನಾನು ಚಂದ್ರಕಾಂತನಿಗೆ ನೀವು ಏನು ವಿಷಯ ಹೇಳುತಿದ್ದ್ದಿರಿ ಗೌಡರೆ ನನಗೆ ಅರ್ಥವಾಗುತ್ತಿಲ್ಲ ಅಂತಾ ಕೇಳಿದ್ದು. ಏ ಹುಚ್ಚಿ ಇಷ್ಟೆ ವಿಷಯ ಗೋತ್ತಾಗುತ್ತಿಲ್ಲ ನಿನಗ ನೀನು ಶ್ಯಾಣೆ ಇಲ್ಲಾ ನಿನಗೆ ನಾನು 20 ಎಕರೆ ಭೂಮಿ ಕೋಡುತ್ತೇನೆ. ನನ್ನ ಜೋತೆಗೆ ಬಾ ಅಂತಾ ಅಂದನು. ನಂತರ ನನಗೆ ದು:ಖ ಆಗಿ ನಾನು ಅವರಿಗೆ ನೀವು ಈ ರೀತಿ ನನ್ನೊಂದಿಗೆ ಮಾತನಾಡುವುದು ಸರಿಯಲ್ಲಾ ಅಂದಾಗ ಚಂದ್ರಕಾಂತನು ನನಗೆ ಏ ಸೂಳಿ ನಾನು ಹೇಳಿದ್ದನ್ನು ಕೇಳು ಇಷ್ಟೆ ಮಾತು ನಿನಗೆ ಗೊತ್ತಾಗಲ್ಲ ಈ ವಿಷಯವನ್ನು ನಿನ್ನ ಗಂಡ ಹಾಗೂ ನಿನ್ನೆ ಮೈದುನರಿಗೆ ಹೇಳಬೇಡ ಸುಮ್ಮನೆ ರಾತ್ರಿ ನನ್ನ ಮನೆಯ ಕಡೆಗೆ ಬಾ ಒಂದು ವೇಳೆ  ನಿನ್ನ ಗಂಡ ಮೈದುನರಿಗೆ ಹೇಳಿದರೆ ನಿನಗೆ ಕೊಲೆ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದ್ದು. ಆ ವೇಳೆಯಲ್ಲಿ ಘಟನೆಯನ್ನು ನಮ್ಮೂರ ಸುಭಾಷ ತಂದೆ ಸಂಬಣ್ಣ ಇಟಿ, ಚಂದ್ರಕಾಂತ ತಂದೆ ಮಹಾರುದ್ರಪ್ಪ ಕುಂಬಾರ ಹಾಗೂ ಸೂರ್ಯಕಾಂತ ತಂದೆ ಕಾಳಪ್ಪ ವಾಲಿ ಇವರು ನಿಂತು ನೋಡಿದ್ದು ಇರುತ್ತದೆ. ನಂತರ ನನಗೆ ಮನಸ್ಸಿಗೆ ಬೇಜಾರ ಆಗಿದ್ದರಿಂದ ಕಲಬುರಗಿಗೆ ಹೋಗದೆ ಸೊಂತ ಗ್ರಾಮದ ಡಾ:ನರಸಿಂಹ ಇವರ ಖಾಸಗಿ ದವಾಖಾನೆಗೆ ತೊರಿಸಿಕೋಳ್ಳಲು ಹೋಗಿ ಆಸ್ಪತ್ರೆಯ ಒಳಗಡೆ ಕುಂತಾಗ ಸಾಯಂಕಾಲ 05.00 ಗಂಟೆಯ ಸೂಮಾರಿಗೆ ಚಂದ್ರಕಾಂತನ ಮಗನಾದ ರಜನಿಕಾಂತ ಬಶೆಟ್ಟಿ ಈತನು ದವಾಖಾನೆಯ ಮುಂದೆ ಬಂದು ನನಗೆ ಏ ರಂಡೀ ನಮ್ಮ ಅಪ್ಪನಿಗೆ ಬೈದಿದ್ದಿ ಹೋರಗೆ ಬಾ ಬೋಸಡಿ ಮಗಳೆ ನಿನಗೆ ಮೆಟ್ಟಿಲೆ ಹೋಡಿತಿನಿ ಮಾದಿಗ ಜಾತಿಯ ಸೂಳೆ ಮಗಳೆ ಅಂತಾ ಬೈಯುತ್ತಿದ್ದಾಗ ನಾನು ಹೋರಗಡೆ ಅವನಿಗೆ ಬುದ್ದಿ ಹೇಳಲು ಬಂದಾಗ ರಜನಿಕಾಂತ ಈತನು ತನ್ನ ಎಡಕಾಲಿನ ಚಪ್ಪಲಿ ತೆಗೆದು ಅದರಿಂದ ನನ್ನ ತಲೆಯ ಮೇಲೆ 2-3 ಸಾರಿ ರಪರಪನೆ ಹೋಡೆದನು. ನನಗೆ ಹೋಡೆಯುತ್ತಿದ್ದನ್ನು ನೋಡಿ ಡಾ:ನರಸಿಂಹ ಹಾಗೂ ಸುಮಿತ್ರ ಗಂಡ ಶಂಕರ ಪಟವಾದ ಇವರು ಬಂದು ಜಗಳ ಬಿಡಿಸಿ ಕಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ