POLICE BHAVAN KALABURAGI

POLICE BHAVAN KALABURAGI

25 January 2018

KALABURAGI DISTRICT REPORTED CRIMES


ಕಳವು ಪ್ರಕರಣಗಳೂ :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ವೈ. ಅರುಂಧತಿ ಗಂಡ ನಾಗಮೂರ್ತಿ ಶೀಲವಂತ ಸಾ: ಮನೆ ನಂ. 175/ಬಿ ಎಮ್.ಐ.ಜಿ ಕೆ.ಎಚ್.ಬಿ ಕಾಲೋನಿ ಗಾರ್ಡನ ಹತ್ತಿರ ಕಲಬುರಗಿ ರವರು ದಿನಾಂಕ 24/01/2018 ರಂದು 9-15 ಎ.ಎಂ.ಕ್ಕೆ ನನ್ನ ಗಂಡನಾದ ನಾಗಮೂರ್ತಿ ರವರು ಕೆಲಸಕ್ಕೆ ಹೋಗಿರುತ್ತಾರೆ. ನಾನು ನನ್ನ ಮನೆಯಲ್ಲಿ ಕೆಲಸ ಮುಗಿಸಿಕೊಂಡು 12 ಪಿ.ಎಂ ಸುಮಾರಿಗೆ ನ್ಯಾಯಾಲಯ ಕೆಲಸ ಕುರಿತು ಹೋಗುವಾಗ ನನ್ನ ತಮ್ಮನಾದ ಚಿದಾನಂದ ತಂದೆ ಯಲ್ಲಪ್ಪ ಇತನಿಗೆ ಮನೆಯಲ್ಲಿ ಬಿಟ್ಟು ಹೋಗಿರುತ್ತೇನೆ. ನನ್ನ ತಮ್ಮನಾದ ಚಿದಾನಂದ ಇತನು ನನ್ನ ಮಕ್ಕಳನ್ನು ಕರೆದುಕೊಂಡು ಬರಲು 3 ಪಿ.ಎಂ.ಕ್ಕೆ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ನನ್ನ ಗಂಡ ಕೆಲಸ ಮಾಡುವ ಪಿಡಬ್ಲೂಡಿ ಕಚೇರಿ ಹೋಗಿ ಗಂಡನ ಹತ್ತಿರ ಕಾರ ತೆಗೆದುಕೊಂಡು ಸ್ಕೂಲಿಗೆ ಹೋಗಿ ನನ್ನ ಮಕ್ಕಳನ್ನು ಕರೆದುಕೊಂಡು 4:30 ಪಿ.ಎಂ.ಕ್ಕೆ ಮನೆಗೆ ಬಂದು ನೋಡಿ ವಿಷಯ ತಿಳಿಸಿದ್ದೇನೆಂದರೆ ಮನೆ ಬಾಗಿಲಿಗೆ ಹಾಕಿದ ಕೀಲಿ ಮುರಿದು ಯಾರೋ ಕಳ್ಳರು ಪ್ರವೇಶ ಮಾಡಿ ಮನೆಯಲ್ಲಿರುವ ಅಲಮಾರಿ ಒಡೆದು ಅದರಲ್ಲಿನ ಸಾಮಾನುಗಳನ್ನು ಚೆಲ್ಲಾಪಿಲ್ಲಾ ಮಾಡಿರುತ್ತಾರೆ. ಅಂತಾ ತಿಳಿಸಿದಾಗ ನಂತರ ನನ್ನ ತಮ್ಮನು ನನ್ನ ಗಂಡನಿಗೆ ತಿಳಿಸಿದಾಗ ನನ್ನ ಗಂಡನು ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೀಲಿ ಮುರಿದಿದ್ದು ಅಷ್ಟರಲ್ಲಿ ನನಗೆ ಪೋನ ವಿಷಯ ತಿಳಿಸಿದಾಗ ನಾನು ಕೂಡಾ ಮನೆಗೆ ಬಂದು ನೋಡಲಾಗಿ ಮನೆಯ ಅಲಮಾರಿಯಲ್ಲಿಟ್ಟಿರುವ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ವಾಚ ಮತ್ತು ನಗದು ಹಣ  ಹೀಗೆ ಒಟ್ಟು 6,81,000/- ರೂ ನೇದ್ದವುಗಳನ್ನು  ಯಾರೋ ಕಳ್ಳರು ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ನಿಜಲಿಂಗಪ್ಪ ತಂದೆ ಶರಣಪ್ಪ ಹಳಿಮನಿ ಸಾ: ಜೆ.ಆರ್. ನಗರ ಜಿಡಿಎ ಕಾಲೋನಿ ಪ್ಲಾಟ ನಂ 31 ಶೇಖ ರೋಜಾ ಕಲಬುರಗಿ ಇವರು  ದಿನಾಂಕ 24.01.2018 ರಂದು ಕಾಲೇಜಗೆ ರಜೆ ಹಾಕಿ ನಾನು ನಮ್ಮ  ಸ್ವಂತ ಗ್ರಾಮವಾದ ನಿಂಬರ್ಗಾಕ್ಕೆ ಬೆಳ್ಳಿಗ್ಗೆ 11:00 ಗಂಟೆಗೆ ಹೋಗಿದ್ದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಾನು ನಮ್ಮ ಗ್ರಾಮ ಬಿಟ್ಟು ಮರಳಿ ಕಲಬುರಗಿ ಕಡೆಗೆ ಬರುತ್ತಿದ್ದು ನಾನು ಮಾರ್ಗ ಮಧ್ಯದಲ್ಲಿದ್ದಾಗ ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದವರಾದ ಶ್ರೀ ಮಹಾಂತೇಶ ಸಂಗೋಳಗಿ ಇವರು ನನಗೆ ಪೋನ ಮಾಡಿ ನಿಮ್ಮ ಮನೆ ಕಳ್ಳತನವಾಗಿದೆ ಅಂತ ತಿಳಿಸಿದ್ದು ಆಗ ನಾನು ಗಾಬರಿಗೊಂಡು ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಮುಖ್ಯ ಬಾಗೀಲ ಕೊಂಡಿ ಮೂರಿದಿದ್ದು ಮನೆಯಲ್ಲಿದ್ದ ನನ್ನ ಹೆಂಡತಿಗೆ ವಿಚಾರಿಸಲು ಅವಳು ನನಗೆ ತಿಳಿಸಿದ್ದೆನೆಂದರೆ, ಮಧ್ಯಾನ 1:30 ಗಂಟೆಯ ಸುಮಾರಿಗೆ ಮನೆಯ ಬಾಗೀಲ ಬಂದ ಮಾಡಿ ಕೀಲಿ ಹಾಕಿಕೊಂಡು ಪಕ್ಕದಲ್ಲಿರುವ ತಂಗಿಯಾದ ಬಸಮ್ಮ ಗಂಡ ಬಾಬುರಾವ ಇವರ ಮನೆಗೆ ಹೋಗಿದ್ದು ಸಾಯಂಕಾಲ 4 ಗಂಟೆಯ ಸುಮಾರಿಗೆ ಬಂದು ನೋಡಲು ಮನೆಯ ಬಾಗಿಲಗೆ ಹಾಕಿದ ಕೀಲಿ ಹಾಗೇ ಇದ್ದು ಬಾಗಿಲ ಕೊಂಡಿ ಮುರಿದ್ದು ಗಾಬರಿಗೊಂಡು ಮನೆಯ ಒಳಗೆ ಹೋಗಿ ನೋಡಲು ಒಳಮನೆಯಲಿದ್ದ ಅಲಮಾರ ಕೀಲಿ ಮುರಿದಿದ್ದು ಅಲಮಾರಿಯಲ್ಲಿದ್ದ 1ಬಂಗಾರದ ಬೆಳ್ಳಿಯ ಆಭರಣಗಳು ಮತ್ತು  ನಗದು ಹಣ ಹೀಗೆ ಒಟ್ಟು 1 ಲಕ್ಷ 77 ಸಾವೀರ ರೂಪಾಯಿಯ ಬಂಗಾರದ ಆಭರಣ, ದಿನಾಂಕ 24.01.2018 ರಂದು ಮಧ್ಯಾನ 1:30 ಗಂಟೆಯಿಂದ ಸಾಯಂಕಾಲ 4 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗೀಲ ಕೊಂಡಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರಿ ಕೀಲಿ ಅಲಮಾರಿಯಲ್ಲಿ  ಇಟ್ಟಿದ 1 ಲಕ್ಷ 77 ಸಾವೀರ ರೂಪಾಯಿಯ ಬಂಗಾರದ ಆಭರಣ, ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ  ಶಿವಾನಂದ ತಂದೆ ಶಂಕರ ಇರಗೊಂಡ ಸಾ|| ಮಾಶಾಳ ಇವರು ದಿನಾಂಕ 14-01-2018 ರಂದು ನನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ರಾತ್ರಿ 9:00 ಗಂಟೆಗೆ ಊಟ ಮಾಡಿ ನಾನು ಮತ್ತು ನನ್ನ ತಾಯಿ ಹಾಗೂ ನನ್ನ ಮಗಳು ಮೂರು ಜನರು ನಮ್ಮ ಮನೆಯಲ್ಲಿ ಮೇಲಿನ ಅಂತಸ್ತಿನಲ್ಲಿ ಮಲಗಿಕೊಂಡಿರುತ್ತೇವೆ. ಎಂದಿನಂತೆ ಬೆಳಿಗ್ಗೆ 06:00 ಗಂಟೆಗೆ ಎದ್ದು ಕೆಳಗೆ ಬರಲಾಗಿ ನಮ್ಮ ಮನೆಯ ಬಾಗಿಲು ತೆರೆದಿದ್ದು, ಮನೆಯ ಕೋಣೆಯಲ್ಲಿದ್ದ ಟ್ರಜರಿಯ ಬಾಗಿಲು ಸಹ ತೆರೆದಿದ್ದು, ಟ್ರಜರಿಯಲ್ಲಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿದ್ದವು. ಆಗ ನಾವು ಟ್ರಜರಿಯನ್ನು ಚೆಕ್ ಮಾಡಲಾಗಿ ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 1,85,000/- ರೂ ಕಿಮ್ಮತ್ತಿನವುಗಳನ್ನು ದಿನಾಂಕ 14-01-2018 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 15-01-2018 ರಂದು ಬೆಳಿಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಕಳ್ಳರು ಮಾಶಾಳ ಗ್ರಾಮದಲ್ಲಿರುವ ನಮ್ಮ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಒಳಗೆ ಬಂದು, ಮನೆಯ ಕೋಣೆಯಲ್ಲಿ ಇಟ್ಟಿದ್ದ ಟ್ರಜರಿಯ ಬಾಗಿಲನ್ನು ಬೆಂಡ್ ಮಾಡಿ, ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಮುಧೋಳ ಠಾಣೆ : ಮುಧೋಳ ಠಾಣೆ : ಶ್ರೀ  ಸಯ್ಯದ್ ಯುನಸ್ ತಂದೆ ಯದುಲ್ಲಾ ಹುಸೇನ ಸಯ್ಯದ ಸಾ|| ಪರಿಗಿ ತಾ|| ಪರಿಗಿ ಜೀ|| ವಿಕರಾಬಾದ ರಾಜ್ಯ ತೆಲಂಗಾಣ ಇವರು ಸುಮಾರು 15-20 ವರ್ಷಳಿಂದ ಲಾರಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು ಈಗ ಸುಮಾರು 2 ವರ್ಷಗಳಿಂದ ಚಿತ್ತಪೂರದ ಓರಿಯಂಟಲ ಸಿಮೇಂಟ ಕಂಪನಿಯಲ್ಲಿ ನನ್ನ ಲಾರಿಯನ್ನು ಬಿಟ್ಟಿದ್ದು, ದಿನಾಲು ಅಲ್ಲಿಂದ ಸಿಮೆಂಟನ್ನು ಲೋಡ ಮಾಡಿಕೊಂಡು ಹೈದ್ರಾಬಾದಕ್ಕೆ ಹೋಗಿ ಅಲ್ಲಿ ಖಾಲಿ ಮಾಡಿ, ಅಲ್ಲಿಂದ ಬರುವಾಗ ಮಣ್ಣನ್ನು ತುಂಬಿಕೊಂಡು ಓರಿಯಂಟಲ ಕಂಪನಿಯಲ್ಲಿ ಖಾಲಿ ಮಾಡುತ್ತೇವೆ. ಎಂದಿನಂತೆ ದಿನಾಂಕ 19-01-2018 ರಂದು ಬೆಳಗ್ಗೆ 1-30 ಗಂಟೆಯ ಸುಮಾರಿಗೆ ನನ್ನ ಲಾರಿಯಲ್ಲಿ ಓರಿಯಂಟಲ್ ಸಿಮೇಂಟ ಕಂಪನಿಯಿಂದ ಸಿಮೇಂಟ ಚೀಲಗಳನ್ನು ತುಂಬಿಕೊಂಡು ಹೈದ್ರಾಬಾದಕ್ಕೆ ಹೊರಟಿದ್ದು, ಲಾರಿಯನ್ನು ನಾನು ನಡೆಸುತ್ತಿದ್ದು ಕ್ಲೀನರ ಆಗಿ ಸದರಿ ಇರ್ಫಾನ ಇದ್ದನು. ನಾನು ನನ್ನ ಸಿಮೇಂಟ ತುಂಬಿದ ಲಾರಿಯನ್ನು ಚಲಾಯಿಸಿಕೊಂಡು ಸೇಡಂ,ಕೊಡಂಗಲ ಮಾರ್ಗವಾಗಿ ಹೈದ್ರಾಬಾದಕ್ಕೆ ಹೋಗುತ್ತಿದ್ದಾಗ ಬೆಳಗ್ಗಿನ ಜಾವ 3-00 ಗಂಟೆಯ ಸುಮಾರಿಗೆ ಮುಧೋಳ ಮೇನ ಗೇಟ ಹತ್ತೀರ ಮುಖ್ಯರಸ್ತೆಯ ಮೇಲೆ ರೋಡ ಹಂಪ್ಸ ಹಾಕಿದ್ದು ನಾನು ನನ್ನ ಲಾರಿಯನ್ನು ನಿಧಾನಮಾಡಿದಾಗ ನಮ್ಮ ಲಾರಿಯ ಹಿಂದಿನಿಂದ ಒಂದು ಮೋಟಾರ ಸೈಕಲ ಮೇಲೆ 4 ಜನರು ಬಂದು ನಮ್ಮ ಲಾರಿಯ ಮುಂದೆ ನಿಲ್ಲಿಸಿ ಅದರಲ್ಲಿ ಇಬ್ಬರೂ ನನ್ನ ಕಡೆಯಿಂದ ಮತ್ತೇ ಒಬ್ಬನೂ ಕ್ಲೀನರ ಕಡೆಯಿಂದ ಲಾರಿಯನ್ನು ಏರಿದ್ದು, ಇನ್ನೋಬ್ಬನು ತಾವು ತಂದ ಮೋಟಾರ ಸೈಕಲ್ಲ ಮೇಲೆ ಕುಳಿತು ಅದನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೊಗಿದ್ದು, ಲಾರಿಯಲ್ಲಿ ಏರಿದ 3 ಜನರು ತಮ್ಮಲ್ಲಿದ್ದ ಚಾಕುಗಳನ್ನು ತೆಗೆದುಕೊಂಡು ನನಗೆ ಮತ್ತು ನಮ್ಮ ಲಾರಿ ಕ್ಲೀನರ ಇರ್ಫಾನನ ಕುತ್ತಿಗೆಯ ಹತ್ತೀರ ಹಿಡಿದುಕೊಂಡು ಹಿಂದಿ ಭಾಷೆಯಲ್ಲಿ, ಅವಾಜ್ ಮಾಡಿದರೇ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಹೇಳುತ್ತಾ, ನಿಮ್ಮಲ್ಲಿದ್ದ ಎಲ್ಲಾ ಹಣವನ್ನು ಕೋಡಿರಿ, ಇಲ್ಲಾ ಅಂದರೇ ನಿಮಗೆ ಜೀವ ಸಹೀತ ಬಿಡುವದಿಲ್ಲಾ ಅಂತಾ ಹೆದರಿಸಿ ಒಬ್ಬ ವ್ಯಕ್ತಿಯು ತನ್ನಲ್ಲಿದ್ದ ಚಾಕುವಿನಿಂದ ನನ್ನ ಎಡಗೈ ಮುಂಗೈ ಹತ್ತೀರ ಕುಯಿದಿದ್ದರಿಂದ ನನ್ನ ಎಡಗೈಗೆ ಸ್ವಲ್ಪ ರಕ್ತಗಾಯವಾಗಿದ್ದು, ನಂತರ ಅವರುಗಳು ನನ್ನ ಜೇಬಿನಲ್ಲಿದ್ದ  4000 ರೂ ನಗದು ಹಣ ಮತ್ತು ಒಂದು ಒಪ್ಪೋ ಕಂಪನಿಯ ಮೋಬೈಲನ್ನು ಕಸಿದುಕೊಂಡಿದ್ದು ಇರುತ್ತದೆ. ನಂತರ ನಮ್ಮ ಕ್ಲೀನರ ಹತ್ತೀರ ಅವರುಗಳು ಚೆಕ್ ಮಾಡಿ ಅವನ ಹತ್ತೀರ ಇದ್ದ ಒಂದು ಸ್ಯಾಮಸಾಂಗ ಕಂಪನಿಯ ಮೋಬೈಲನ್ನು ಕಸೀದುಕೊಂಡು ನಂತರ ಅದರಲ್ಲಿ ಒಬ್ಬ ವ್ಯಕ್ತಿಯು ನಮ್ಮ ಲಾರಿಯನ್ನು ಚಲಾಯಿಸಿಕೊಂಡು ಸುಮಾರು 20 ಮೀಟರ ದೂರ ಹೋಗಿ ರಸ್ತೇಯ ಬದಿಯಲ್ಲಿ ನಿಲ್ಲಿಸಿ ಅವರುಗಳು ನಮ್ಮ ಲಾರಿಯಿಂದ ಕೆಳಗಡೆ ಇಳಿದು ತಾವು ತೆಗೆದುಕೊಂಡು ಬಂದ ಮೊಟಾರ ಸೈಕಲ್ಲ ಮೇಲೆ ವಾಪಾಸ ಸೇಡಂ ಕಡೆಗೆ ನಾಲ್ಕು ಜನರು ಹೋಗಿದ್ದು ಇರುತ್ತದೆ. ಸದರಿಯವರು ಹಿಂದಿ ಬಾಷೆಯನ್ನು ಮಾತನಾಡುತ್ತಿದ್ದು ಅವರ ಹೆಸರು ಹೆಸರು ವಿಳಾಸ ಗೊತ್ತಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ನಾಗರಡ್ಡಿ ತಂದೆ ನರಸರಡ್ಡಿ ಹಾ:ವ: ಕಲಬುರಗಿ ರವರು ದಿನಾಂಕ: 17/01/2018 ರಂದು ಮದ್ಯಾಹ್ನ 1-   ಗಂಟೆಗೆ ತನ್ನ ಮೋಟಾರ ಸೈಕಲ ನಂಬರ ಕೆ.ಎ. 39 ಕ್ಯೂ 3010 ನೇದ್ದರ ಮೇಲೆ ತನ್ನ ಗೆಳೆಯನಾದ ರಾಮರಡ್ಡಿ ಇತನಿಗೆ ಕೂಡಿಕೊಂಡು ನಂದೂರ ಹತ್ತಿರ ಸೈಟಿಗೆ ಬಂದು ನಂತರ ಮರತೂರ ಗ್ರಾಮದ ವಿಜ್ಞಾನೇಶ್ವರ ಗುಡಿ ನೋಡಲು ಬಂದು ಮೋಟಾರ ಸೈಕಲ ನಿಲ್ಲಿಸಿ ಗುಡಿಯೊಳಗೆ ಹೋಗಿ ಮರಳಿ ಮದ್ಯಾಹ್ನ 2- 00 ಗಂಟೆಗೆ ಬಂದು ನೋಡಲಾಗಿ ನಾನು ನಿಲ್ಲಿಸಿದ ಮೋಟಾರ ಸೈಕಲ ಇರಲಿಲ್ಲಾ ಗಾಬರಿಯಾಗಿ ಎಲ್ಲಾ ಕಡೆಗೆ ಹುಡುಕಾಡಿದರೂ ಯಾರೋ ಕಳ್ಳರು ನನ್ನ ಮೊಟಾರ ಸೈಕಲ ನಂಬರ ಕೆ.ಎ. 39 ಕ್ಯೂ 3010 ಅ.ಕಿ 35000-  ರೂ ಕಿಮ್ಮಿತ್ತಿನ ಮೋಟಾರ ಸೈಕಲ ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

24 January 2018

KALABURAGI DISTRICT REPORTED CRIMES

ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ  : ದಿನಾಂಕ 23-01-2018 ರಂದು ಸಾಯಂಕಾಲ  ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯ ಹನುಮಾನ ದೇವರ ಗುಡಿಯ ಹಿಂದೆ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರದ ಹನುಮಾನ ದೇವರ ಗುಡಿಯ ಹಿಂದುಗಡೆ ಹೋಗಿ ಜೀಪ ನಿಲ್ಲಿಸಿ ನಂತರ ನಾವು ಜೀಪಿನಿಂದ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ಮರೆಯಿಲ್ಲಿ ನಿಂತು ನೋಡಲು ಹನುಮಾನ ದೇವರ ಗುಡಿಯ ಹಿಂದುಗಡೆ ಇರುವ ಮನೆಯ ಮುಂದೆ ಒಬ್ಬ ಗಂಡು ಮನುಷ್ಯ ಮತ್ತು ಒಬ್ಬ ಹೆಣ್ಣು ಮಗಳು ಕೂಡಿಕೊಂಡು ಒಂದು ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಲು ಹೆಣ್ಣು ಮಗಳು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಸದರಿಯವನು ತನ್ನ ಹೆಸರು ಸುರೇಶ ತಂದೆ ಪ್ರಕಾಶ ಬಮ್ಮನಳ್ಳಿ ಸಾ: ಹನುಮಾನ ದೇವರ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಓಡಿ ಹೊದವಳ ಹೆಸರು ವಿಚಾರಸಲು ಓಡಿ ಹೊದವಳ ಹೆಸರು ಲಲಿತಾಬಾಯಿ ಗಂಡ ಪ್ರಭು ಕೂಡಿ ಅಂತ ತಿಳಿಸಿದ್ದು ಇರುತ್ತದೆ. ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 260/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಸ್ಥಳದಲ್ಲಿ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 80 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 2250. ರೂ 40 ಪೈಸೆ. ಇವಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಾಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭವಾನಿಸಿಂಗ್ ತಂದೆ ರಾಮಚಂದ್ರ ರಾಠೋಡ ಸಾ||ಬಳೂರ್ಗಿ ತಾಂಡಾ ತಾ||ಅಫಜಲಪೂರ ರವರು  ದೇವಲ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆ ಅಂತ ಕರ್ತವ್ಯ ನಿರ್ವಯಿಸುತ್ತಿದ್ದು  ದಿನಾಂಕ 22-01-2018 ರಂದು ಮದ್ಯಾಹ್ನ ದೇವಲ ಗಾಣಗಾಪೂರ ಪೊಲೀಸ್ ಠಾಣೆ ಗುನ್ನೆ ನಂ 04/2018 ನೇದ್ದರ ಪ್ರರಕಣದ ಕಾಣೆಯಾದ ವ್ಯಕ್ತಿಯ ಪತ್ತೆ ಕಾರ್ಯ ಕುರಿತು ನನಗೆ ನೇಮಕ ಮಾಡಿದ್ದು ನಾನು ನಮ್ಮ ಮೋಟಾರ ಸೈಕಲ್ ನಂ ಕೆಎ-32 ಇಪಿ-7120 ನೇದ್ದರ ಮೇಲೆ ಠಾಣೆಯಿಂದ ಹೊರಟು ಚವಡಾಪೂರ, ಸ್ವೇಷನ ಗಾಣಗಾಪೂರ, ದುದನಿ ಗ್ರಾಮಗಳಿಗೆ ಬೇಟಿಕೊಟ್ಟು ಸದರಿ ಪ್ರರಕಣದ ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮರಳಿ ಅಫಜಲಪೂರ ಮಾರ್ಗವಾಗಿ ದೇವಲ ಗಾಣಗಾಪೂರಕ್ಕೆ ಹೋಗುತಿದ್ದಾಗ ಅಂದಾಜು ಸಮಯ 7.30 ಪಿಎಮ್ ಸುಮಾರಿಗೆ ಅಫಜಲಪೂರ ಬಸ ಡಿಪೋ ಹತ್ತಿರ ಮುಖ್ಯ ರಸ್ತೆಯ ಮೇಲೆ ಹೋಗುತಿದ್ದಾಗ ನನ್ನ ಹಿಂದಿನಿಂದ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿದ್ದು ನಾನು ಜೋರಾಗಿ ಕೆಳಗೆ ಬಿದ್ದೆನು ನನ್ನ ಹಣೆಗೆ ಭಾರಿ ರಕ್ತಗಾಯ ಹಾಗು ಎಡ ಎದೆಗೆ ಭಾರಿ ಗುಪ್ತಗಾಯ ವಾಗಿದ್ದು ಸದರಿ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು ಟ್ರ್ಯಾಕ್ಟರ ನಂಬರ ನೋಡಲಾಗಿ ಮಹೇಂದ್ರ ಅರ್ಜುನ ಕಂಪನಿಯ ಇದ್ದು ಅದರ ನಂಬರ ಕೆಎ-32 ಟಿಬಿ-0397 ಅಂತ ಇರುತ್ತದೆ. ನಾನು ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ ಅವನ ಹೇಸರು ವಿಳಾಸ ನನಗೆ ಗೊತ್ತಾಗಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪರಶುರಾಮ ತಂದೆ ತುಕಾರಾಮ ಉಗಾಡೆ ಸಾ||ಬಂಕಲಗಾ ಹಾ||ಶಿವಬಾಳ ನಗರ ತಾ||ಅಫಜಲಪೂರ ರವರು  ದಿನಾಂಕ 22-01-2018 ರಂದು ಬೆಳಿಗ್ಗೆ ನನ್ನ ಗೆಳೆಯನಾದ ಶರಣಪ್ಪ ಹೊಸ್ಮನಿ ಈತನ ಮೋಟಾರ್ ಸೈಕಲ್ ಕೆಎ-53 ಇಇ-0453 ನೇದ್ದರ ಮೇಲೆ ನಾನು ಹಾಗು ನನ್ನ ಇನ್ನೊಬ್ಬ ಗೆಳೆಯನಾದ ಪ್ರದೀಪ ತಂದೆ ಶರಣಪ್ಪ ಹೊಸ್ಮನಿ ಇಬ್ಬರು ಕೂಡಿಕೊಂಡು ಯಂಕಂಚಿ ಗ್ರಾಮದ ದವಲಮಲ್ಲಿಕ ಜಾತ್ರೆಗೆ ಹೋಗಿ ಮರಳಿ ನಮ್ಮ ಗ್ರಾಮಕ್ಕೆ ಹೋಗುತಿದ್ದಾಗ ಶಿವೂರ ಕ್ರಾಸ ಹತ್ತಿರ ಇದ್ದಾಗ ನಮ್ಮ ಎದುರಿನಿಂದ ಬುಲೇರೊ ವಾಹನದ ಚಾಲಕ ಸದರಿ ಬುಲೇರೊ ಅತಿವೇಗ ಹಾಗು ನಿನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾನು ನಡೆಸುತಿದ್ದ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಪಡಿಸಿದಾಗ ನಾವಿಬ್ಬರು ಕೆಳಗೆ ಬಿದ್ದೇವು ಸದರಿ ಬುಲೇರೊ ಚಾಲಕನು ತನ್ನ ವಾಹನ ನಿಲ್ಲಿಸದೆ ಹಾಗೇಯೆ ವಾಹನ ಸಮೇತ ಹೋದನು ನಾವು ಸದರಿ ವಾಹನದ ಹಿಂದಿನಿಂದ ನಂಬರ ನೋಡಲಾಗಿ ಕೆಎ-32 ಎನ್-1638 ಅಂತ ಇರುತ್ತದೆ. ಸದರಿ ಘಟನೆಯಿಂದ ನನಗೆ ಬಲಗಾಲಿನ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿದ್ದು, ತಲೆಗೆ, ಮುಖಕ್ಕೆ ಭಾರಿ ರಕ್ತ ಗಾಯವಾಗಿರುತ್ತವೆ ಪ್ರದೀಪನಿಗೆ ಕೈಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

23 January 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗುರುಶರಣ ತಂದೆ ಭೀಮರಾವ ಶಿರವಾಳ ಸಾ : ಜವಳಿ (ಡಿ) ತಾ:ಆಳಂದ  ಜಿ: ಕಲಬುರಗಿ ರವರು  ದಿನಾಂಕ. 22-01-2018 ರಂದು ತನ್ನ ಖಾಸಗಿ ಕೆಲಸದ ನಿಮಿತ್ಯ ಜವಳಗಿಯಿಂದ ನಾನು ಕಲಬುರಗಿಗೆ ಬಂದಿರುತ್ತೇನೆ ನನ್ನ ಮಗ ವಿನೋದ ಶಿರವಾಳ ಕೂಡಾ ಕಲಬುರಗಿಯಲ್ಲಿದ್ದನ್ನು  ಸಂಜೆ ನನ್ನ ಮಗ ವಿನೋದನು ಜವಳಗಾಕ್ಕೆ ಹೋಗುತ್ತೆನೆ ಅಂತಾ 7-00 ಗಂಟೆ ಸುಮಾರಿಗೆ  ತನ್ನ ಯಮಹಾ ಎಫ್.ಝಡ್  ನಂ.ಕೆ.ಎ.32 ಇಡಿ.5816 ನೆದ್ದರ ಮೇಲೆ ದೇವಿನಗರನ ಮನೆಯಿಂದ ಒಬ್ಬನೆ ಹೋದನು ರಾತ್ರಿ 7-45 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿರುವಾಗ  ಶರಣಬಸಪ್ಪಾ ನರೋಣಿ ಎಂಬುವವರು ನನಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ   ವಿಶ್ವರಾಧ್ಯ ಗುಡಿಯನಂತರ ರೈಲ್ವೆ  ಬ್ರಿಡ್ಜ ನಂತರ ಉತಾರಿಗೆ ನನ್ನ ಮಗ ವಿನೋದ ಶಿರವಾಳ ಇತನಿಗೆ ಮೋಟಾರ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ಭಾರಿಗಾಯವಾಗಿರುತ್ತದೆ ಬೇಗನೆ ಸ್ಥಳಕ್ಕೆ ಬರುವಂತೆ ಹೇಳಿದರು ಆಗ ನಾನು ಗಾಬರಿಗೊಂಡು ನಾನು ಮತ್ತು ನಮ್ಮ ಸಮ್ಮಂದಿಕರಾದ ಮಚೇಂದ್ರ ತಂದೆ  ಕರಬಸ್ಸಪ್ಪಾ ನರೋಣಿ ಹಾಗೂ ಶರಣಬಸ್ಸಪ್ಪಾ ತಂದೆ ಬಸವರಾಜ ಭೂಸನೂರ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಹಕೀಕತ್ ನಿಜವಿದ್ದು  ನನ್ನ ಮಗ ವಿನೋದ ಶಿರವಾಳ ಇತನಿಗೆ  ನೋಡಲಾಗಿ ತಲೆಯ ಎಡಬಾಗದಲ್ಲಿ , ಮೆಲಕಿಗೆ ಭಾರಿ ಪೆಟ್ಟಾಗಿ ರಕ್ತಗಾಯ ಮತ್ತು ಎಡಕಿವಿಯಿಂದ ಬಾಯಿಯಿಂದ ರಕ್ತಸ್ರಾವವಾಗತಿತ್ತು .ಎಡಗೈಭುಜಕ್ಕೆ ಮೋಳಕೈಗೆ ಭಾರಿ  ಪೆಟ್ಟಾಗಿತ್ತು ಆಗ ಅಲ್ಲಿಯೇ ಹಾಜರಿದ್ದ ಶರಣಬಸ್ಸಪ್ಪ ನರೋಣಿ ಮತ್ತು ಚಿದಾನಂದ ಡೊಳ್ಳಿ ಎಂಬುವವರಿಗೆ ವಿಚಾರಿಸಲಾಗಿ 7-30 ಪಿ.ಎಂ.ದ ಸುಮಾರಿಗೆ ಆಳಂದರೋಡಿನ ವಿಶ್ವರಾಧ್ಯ ಗುಡಿಯ ನಂತರ ರೈಲ್ವೆ ಬ್ರಿಡ್ಜ ಉತಾರಿಗೆ ಸ್ವಲ್ಪ ಅಂತರದಲ್ಲಿ ತಮ್ಮಿಂದ ಮುಂದೆ ನನ್ನ ಮಗ ವಿನೋದನು ತನ್ನ ಮೋಟಾರ ಸೈಕಲ್ ಮೇಲೆ ಆಳಂದ ಕಡೆಗೆ ಹೋಗುತ್ತಿರುವಾಗ  ಅದೇ ವೇಳಗೆ ಆಳಂದ ಕಡೆಯಿಂದ ಒಂದು ಮೋಟರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾ ದಿಡ್ಡಿಯಾಗಿ ಓಡಿಸಿಕೊಂಡು ಬಂದು ವಿನೋದನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ವಿನೋದನು ಜೋರಾಗಿ ಕೆಳಗೆ ಬಿದ್ದು ತಲೆಗೆ , ಮೆಲಕಿಗೆ ಬಾರಿಗಾಯಗೊಂಡಿದ್ದು ಇರುತ್ತದೆ ಅಂತಾ ತಿಳಿಸಿದ್ದರು  ಆಗ ರೋಡಿಗೆ ಹೋಗುವ ವಾಹನಗಳ ಬೆಳಕಿನಲ್ಲಿ ಡಿಕ್ಕಿ ಹೊಡೆದ ಮೋಟಾರ ಸೈಕಲ್ ನಂಬರ ನೋಡಲಾಗಿ ಹೀರೋ ಸ್ಪ್ಲೆಂಡರ ನಂ.ಕೆ.ಎ.39 ಜೆ. 0733 ನೆದ್ದು  ಅದರ ಚಾಲಕನು ಕೂಡಾ ಗಾಯಗೊಂಡು ಸೈಡಿಗೆ ಕುಳಿತಿದ್ದು ಆತನ ವಿಚಾರಿಸಲಾಗಿ ಸೈಬಣ್ಣಾ ತಂದೆ ಗುಂಡಪ್ಪಾ ಆಳಂದ ಸಾಚ ದುತ್ತರಗಾಂವ ತಾ/ಆಳಂದ  ಅಂತಾ ತಿಳಿಸಿದು ಅವನಿಗೆ ಹಣೆಯ ಮೇಲೆ ರಕ್ತಗಾಯ, ಬಲಗಣ್ಣಿ ಪಕ್ಕದಲ್ಲಿ ರಕ್ತಗಾಯ , ತುಟಿಯ ಕೆಳಗೆ ಗದಕ್ಕೆ ರಕ್ತಗಾಯ, ಬಲಗೈ ಮೋಳಕಯಗೆ ಗುಪ್ತ ಪೆಟ್ಟಾಗಿದ್ದು ಎಡಗಾಲು ಮೋಳಕಾಲು ಕೆಳಗೆ ರಕ್ತಗಾಯವಾಗಿರುತ್ತದೆ. ನಂತರ ಯಾರೋ ಅಂಬುಲೆನ್ಸಿಗೆ ಫೋನ ಮಾಡಿದರಿಂದ ಸ್ವಲ್ಪ ಹೊತ್ತಿನಲ್ಲಿ 108 ಅಂಬುಲೆನ್ಸ ಬಂದಿದ್ದು ಅವರು ವಿನೋದನನ್ನು ಪರೀಶಿಲಿಸಲಾಗಿ ಮೃತ ಪಟ್ಟಿರುವದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.         
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22.01.18 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಮೃತ ಶರಣಪ್ಪಾ ಇತನು ಮೋಟಾರ ಸೈಕಲ ನಂ ಕೆಎ-32-ಇಎ-5109 ನೇದ್ದನ್ನು ಚಲಾಯಿಸಿಕೊಂಡು ವೆಂಕಟೇಶ್ವರ ನಗರದೊಳಗಡೆಯಿಂದ ಹೋಗುವಾಗ ಗುರುನಾಥ ಇತನು ಮೋಟಾರ ಸೈಕಲ ನಂ ಕೆಎ-32-ವಾಯ್-2496 ನೇದ್ದನ್ನು ಎಸವಿಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಶರಣಪ್ಪ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಶರಣಪ್ಪ ಇತನು ಭಾರಿಗಾಯ ಹೊಂದಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ಶಂಕುತಾಲ ಗಂಡ ಶರಣಪ್ಪಾ ಕೋಲಾರ ವ: 58 ವರ್ಷ ಉ: ಮನೆ ಕೆಲಸ ಸಾ: ಸಕರ್ಾರಿ ಕಾಲೇಜ್ ಹಿಂದುಗಡೆ ವೆಂಕಟೇಶ ನಗರ  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಕೇದಾರನಾಥ ತಂದೆ ಶರಣಬಸಪ್ಪಾ ಪಾಟೀಲ ಸಾಃ ಕೋರಳ್ಳಿ ಗ್ರಾಮ ತಾಃ ಆಳಂದ ಹಾಃವಾಃ ಗದಲೆಗಾಂವ್ ಕಲ್ಯಾಣ ಮಂಟಪದ ಹತ್ತಿರ ಕೈಲಾಸ ನಗರ ಕಲಬುರಗಿ ರವರು ದಿನಾಂಕ  21.01.2018 ರಂದು ತನ್ನ ವಯಕ್ತಿಕ ಕೆಲಸದ ಸಲುವಾಗಿ ನಾನು ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ತೆಗೆದುಕೊಂಡು ಊರಲ್ಲಿ ಕಬ್ಬು ಹಚ್ಚಿದ ಲೇಬರಗಳ & ರಸಗೊಬ್ಬರ ಇತ್ಯಾದಿ ಸಲುವಾಗಿ ಸಂಬಳ ಮಾಡಬೇಕಾಗಿದ್ದರಿಂದ ನಾನು ಮನೆಯಿಂದ 2,50,000/- ನಗದು ಹಣವನ್ನು ನನ್ನ ಬಳಿ ಇದ್ದ ನೀಲಿ ಬಣ್ಣದ ಬ್ಯಾಗಿನಲ್ಲಿ ಹಾಕಿಕೊಂಡು ಸದರಿ ಬ್ಯಾಗನ್ನು ಟವೇರಾ ವಾಹನದಲ್ಲಿನ ಬಾಕ್ಸಿನಲ್ಲಿ ಹಾಕಿಕೊಂಡು ಮಧ್ಯಾಹ್ನ ಅಂದಾಜು 2.30 ಗಂಟೆ ಸುಮಾರಿಗೆ ಮನೆಯಿಂದ ಬಂದು, ಸೂಪರ ಮಾರ್ಕೆಟದಲ್ಲಿ ನನ್ನ ಗೆಳೆಯನಾದ ಸಿದ್ದಲಿಂಗ ಡೊಲೆ ಇವರಿಗೆ ಭೇಟಿ ಮಾಡುವ ಸಲುವಾಗಿ ನನ್ನ ವಾಹನವನ್ನು ಹೆಡ್ ಪೋಸ್ಟ ಆಫೀಸ್ ಹತ್ತಿರ ನಿಲ್ಲಿಸಿ ನನ್ನ ವಾಹನಕ್ಕೆ ಲಾಕ್ ಮಾಡಿ ಹೋಗಿದ್ದು, ನಂತರ ಕೆಲಸ ಮುಗಿಸಿಕೊಂಡು ಸಾಯಂಕಾಲ 4.00 ಗಂಟೆ ಸುಮಾರಿಗೆ ಮರಳಿ ನಾನು ಕಾರ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ನನ್ನ ಕಾರಿನ್ ಡೋರ್ ಒಪನ್ ಆಗಿದ್ದು, ಪರೀಶಿಲಿಸಿ ನೋಡಿದಾಗ ಕಾರಿನಲ್ಲಿದ್ದ ಬಾಕ್ಸಿನ ಲಾಕ್ ಮುರಿದ್ದು, ಬಾಕ್ಸಿನಲ್ಲಿಟ್ಟ 2,50,000/- ಹಣದ ಬ್ಯಾಗ್ ಇರಲಿಲ್ಲಾ. ನಾನು ಗಾಭರಿಯಾಗಿ ಕೂಡಲೆ ಈ ವಿಷಯವನ್ನು ನನ್ನ ಗೆಳೆಯಂದಿರಾದ ಸಿದ್ದಲಿಂಗ್ ಡೋಲೆ, ಗುರಪ್ಪಾ ನೀಲಾ, ಮಹೇಶ ಹೂಲಸೂರಕರ್ ಇವರಗಳಿಗೆ ಫೋನ ಮಾಡಿ ವಿಷಯ ತಿಳಿಸಿದ್ದು ಅವರು ಸಹಃ ನಾನು ಕಾರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಹಃ ಹಣದ ಬ್ಯಾಗ್ ಪತ್ತೆ ಆಗಿರುವುದಿಲ್ಲಾ  ನಿನ್ನೆ ದಿಃ 21.01.2018 ರಂದು ಮಧ್ಯಾಹ್ನ 2.30 ರಿಂದ 4.00 ಗಂಟೆಯ ಅವಧಿಯಲ್ಲಿ ಹೆಡ್ ಪೋಸ್ಟ ಆಫೀಸ್ ಹತ್ತಿರ ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ನಿಲ್ಲಿಸಿದ್ದು, ಆ ಕಾರಿನ ಬಾಕ್ಸಿನಲ್ಲಿಟ್ಟಿದ 2,50,000/- ಹಣದ ಬ್ಯಾಗ್ನ್ನು ಯಾರೋ ಕಳ್ಳರು ಕಾರಿನ ಡೋರ್ ಲಾಕನ್ನು ತೆಗೆದು ಕಾರಿನಲ್ಲಿಟ್ಟ ಬಾಕ್ಸಿನ ಲಾಕ್ ಮುರಿದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 21/01/2018 ರಂದು ಮಾಹಾಗಾಂವ ಠಾಣಾ ಹದ್ದಿಯ ಸಿರಗಾಪೂರ ಸಿಮಾಂತರದ ಬಬಲಾದಕ್ಕೆ ಹೊಗುವ ರಸ್ತೆ ಬದಿ 500 ಮೀಟರ ಅಂತರದಲ್ಲಿ ಸರಕಾರಿ ಗೈರಾಣಿ ಹೊಲದಲ್ಲಿನ ಮರದ ಕೆಳಗೆ ಇಸ್ಪೀಟ ಜೂಜಾಟ ಆಡುತ್ತಿದ್ದರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಗೈರೆ ವಿಚಾರಿಸಲು 1) ರೇವಣಸಿದ್ದಪ್ಪ ತಂದೆ ಮಲ್ಲಿಕಾರ್ಜುನ ಅಂಬಲಿ ಸಾ: ಕುರಿಕೊಟಾ 2) ಗುರುನಾಥ ತಂದೆ ಶರಣಪ್ಪ ಸಿಂಗೆ ಸಾ|| ಡೊಂಗರಗಾಂವ 3) ಸಾಯಿಬಣ್ಣ ತಂದೆ ಮೈಲಾರಿ ಹೊಳಕುಂದಾ ಸಾ|| ಜಗತ ಕಲಬುರಗಿ 4) ರವಿಂದ್ರ ತಂದೆ ಅಣ್ಣಪ್ಪ ಪಾಟೀಲ್ ಸಾ|| ಉದಯ ನಗರ ಕಲಬುರಗಿ 5) ಮಲ್ಲಿಕಾರ್ಜುನ ತಂದೆ ಶರಣಪ್ಪ ಸಾಗರ ಸಾ|| ಭಾಗ್ಯ ನಗರ ಕಲಬುರಗಿ 6) ಸಾಯಿಬಣ್ಣ ತಂದೆ ಅಣ್ಣಪ್ಪ ಮಿಂಚನಾಕರ ಸಾ|| ಎಸ್.ಬಿ. ಕಾಲೇಜ ಹತ್ತಿರ ರಾಮನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52  ಇಸ್ಪೀಟ ಎಲೆಗಳು ನಗದು ಹಣ 10120-00 ರೂ. ಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.