POLICE BHAVAN KALABURAGI

POLICE BHAVAN KALABURAGI

14 January 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಿವಾನಂದ ತಂದೆ ನಿಂಬೆಣ್ಣಾ ಕಾಮಶೆಟ್ಟಿ ಇತನು ಮೋಟಾರ ಸೈಕಲ ನಂ KA 32 EA 0096 ನೇದ್ದರ ಹಿಂದೆ ಮೃತ ಗುರುಬಾಯಿ ಗಂಡ ಶಾಂತವೀರಪ್ಪ ಕಾಮಶೆಟ್ಟಿ ಇವರಿಗೆ ಕೂಡಿಸಿಕೊಂಡು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ನಿಮ್ಮ ಹೊಲಕ್ಕೆ ಹೊರಟಿದ್ದು, ಮಧ್ಯಾಹ್ನ 03-00 ಗಂಟೆ ಸುಮಾರಿಗೆ ಬಸವರಾಜ ಚೌಡಶೆಟ್ಟಿ ಇವರ ಹೊಲದ ಹತ್ತಿರ ಇರುವ ಕಗ್ಗನಮಡಿಯಳವಂತಗಿ ಕ್ರಾಸ ರೋಡಿನ ಟರ್ನಿಂಗ ಕಚ್ಚಾ ರಸ್ತೆಯ ಮೇಲೆ ಶಿವಾನಂದ ಇತನು ಅತಿವೇಗದಿಂದ ತನ್ನ ವಶದಲ್ಲಿದ್ದ ಮೋಟಾರ ಸೈಕಲ ಟರ್ನಿಂಗನಲ್ಲಿ ಟರ್ನ ಮಾಡಿದ ವೇಗದ ನಿಯಂತ್ರಣ ತಪ್ಪಿ ಶಿವಾನಂದ ಮತ್ತು ಮೃತ ಗುರುಬಾಯಿ ಇಬ್ಬರು ರೋಡಿನ ಮೇಲೆ ಮೋಟಾರ ಸೈಕಲ ಬಿದಿದ್ದರಿಂದ್ದ ಮೃತ ಗುರುಬಾಯಿ ತಲೆಗೆ ಭಾರಿ ಗುಪ್ತಗಾಯವಾಗಿ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಅವಳಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಸೇರಿಕೆ ಮಾಡಿದ್ದು  ನಂತರ ಮೃತ ಗುರುಬಾಯಿ ಇವರಿಗೆ ಬಸವೇಶ್ವರ ಆಸ್ಪತ್ರೆ ವೈದ್ಯರು ತಲೆಗೆ ಶಸ್ತ್ರ ಚಿಕಿತ್ಸೆ ಮಾಡಿ ತಲೆಯಲ್ಲಿಯ ಮೆದುಳು ಹೊರಗೆ ತೆಗೆದು ಎಡ ಹೊಟ್ಟೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಇಟ್ಟರು ನಂತರ ಮೃತಳಿಗೆ ಗುಣಮುಖವಾಗಿದ್ದರಿಂದ್ದ ಡಿಜಾರ್ಚ ಮಾಡಿ ಮನೆಗೆ ಕಳುಹಿಸಿ ಕೊಟ್ಟರು ಮೃತಳ  ಆರೋಗ್ಯ ಮತ್ತೆ ಹದಗೆಟ್ಟಿದ್ದರಿಂದ್ದ ಮತ್ತೆ ಮನೆಯಿಂದ ಬಸವೇಶ್ವರ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದೇನು. ಮತ್ತೆ ಹೊಟ್ಟೆಯಲ್ಲಿದ್ದ ಮೆದುಳು ತೆಗೆದು ತಲೆಯಲ್ಲಿ ಹಾಕಿ ಶಸ್ತ್ರ ಚಿಕಿತ್ಸೆ ಮಾಡಿದ್ದು  ಮೃತಳು ಗುಣಮುಖ ಹೊಂದಿದ್ದಾರೆ ಅಂತಾ ಹೇಳಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಮೃತ ಗುರುಬಾಯಿ ಇವರು ದಿನಾಂಕ09-12-2017  ರಿಂದ ಇಂದಿನವರೆಗೆ ಹಾಸಿಗೆಯಲ್ಲಿ ಇದ್ದ ಕೇವಲ ಕಣ್ಣು ತೆಗೆದು ನೋಡುತ್ತಿದ್ದು ಆದರೇ ಮಾತಾಡುತ್ತಿರಲಿಲ್ಲಾ ದಿನಾಂಕ 13-01-2018 ರಂದು ಬೆಳಿಗ್ಗೆ ಗಂಜಿ ಸೇವನೆ ನಮ್ಮ ತಾಯಿಗೆ ಮಾಡಿಸಿದಾಗ ಅವರು ವಾಂತಿ ಮಾಡಿಕೊಂಡಿದ್ದು ಕೈ ಕಾಲು ತಣ್ಣಗಾಗಲು ಅವರು ಬಹಳಷ್ಟು ಎದೆ ಏರಿಳಿದ ಮಾಡುತ್ತಿದ್ದರಿಂದ ಅವರಿಗೆ ಉಪಚಾರ ಕುರಿತು ನಮ್ಮ ಅಣ್ಣ ತಮ್ಮಕೀಯ ಓಮಿನಿ ಗಾಡಿಯಲ್ಲಿ ನಮ್ಮ ತಾಯಿಗೆ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಮದ್ಯಾಹ್ನ ಸುಮಾರಿಗೆ ಆಸ್ಪತ್ರೆಗೆ ತಂದಾಗ ವೈದ್ಯರು ನಮ್ಮ ತಾಯಿಗೆ ನೋಡಿ ಮನೆಯಿಂದ ತರುವಾಗಲೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು. ನಮ್ಮ ತಾಯಿ ಗುರುಬಾಯಿ ಇವರು ದಿನಾಂಕ:- 12/09/2017 ರಂದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಆದ ರಸ್ತೆ ಅಪಘಾತ ಗಾಯಗಳಿಂದ ಗುಣಮುಖ ಹೊಂದದೇ ಆದ ಗಾಯಗಳಿಂದ ಮೃತಪಟ್ಟಿರುತ್ತಾರೆ ಅಂತಾ ಮೃತಳ ಮಗ  ಸಿದ್ರಾಮಪ್ಪ ತಂದೆ ಶಾಂತವೀರಪ್ಪ ಕಾಮಶೆಟ್ಟಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಧರ್ಮಣ್ಣ ತಂದೆ ಮೌಲಪ್ಪ ಕಟ್ಟಿ ಸಾಃ ನದಿ ಸಿನ್ನೂರ ಗ್ರಾಮ ಇವರು ದಿನಾಂಕ 08/01/2018 ರಂದು ಬೆಳಿಗ್ಗೆ ನಾನು ಮತ್ತು ನಮ್ಮೂರಿನ ಮಶಾಕ ತಂದೆ ಲಾಲ ಅಹ್ಮದ, ಹುಸೇನ ತಂದೆ ಮಹಿಬೂಬಷಾ, ಮೌಲಾ ತಂದೆ ಮಹಿಬೂಬ ಎಲ್ಲರೂ ಕೂಡಿಕೊಂಡು ನಮ್ಮೂರಿನ ರಜಾಕಸಾಬ ಹೊಟೇಲ ಹತ್ತಿರ ನಿಂತುಕೊಂಡಾಗ ನಮ್ಮೂರಿನ ಸಾಹುಕಾರನಾದ ಧರ್ಮರಾಜ ತಂದೆ ರಾಚಪ್ಪ ಶೆಟ್ಟಿ ಹಾಗೂ ಇನ್ನಿತರರು ಕೂಡಿಕೊಂಡು ತಮ್ಮ ಕಾರ ನಂ ಕೆಎ-32 ಎನ್-1724 ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ನನ್ನ ಮೇಲೆ ಹಾಯಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆಗ ನಾನು ತಕ್ಷಣವೇ ಪಕಕ್ಕೆ ಸರಿದು ತಪ್ಪಿಸಿಕೊಂಡು ಓಡಿ ಹೊಗಿರುತ್ತೇನೆ, ನನ್ನ ಪಕ್ಕದಲ್ಲಿದ್ದ ಮೌಲಾ ತಂದೆ ಮಹಿಬೂಬ ಈತನಿಗೆ ಪರಚಿಕೊಂಡು ಹೊಯಿತ್ತು. ನಾವಿಬ್ಬರೂ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿರುತ್ತೇವೆ. ನಾನು ತಪ್ಪಿಸಿಕೊಂಡು ಹೊಗದಿದ್ದರೆ ಕಾರು ನನ್ನ ಮೇಲೆ ಹಾಯಿಸಿ ಕೊಲೆ ಮಾಡುತ್ತಿದ್ದರು. ದಿನಾಂಕ 07/01/2017 ರಂದು ಧರ್ಮರಾಜ ಇವರ ತಮ್ಮನ ಮಗನಾದ ರಾಚಪ್ಪ ತಂದೆ ಬಸವಂತರಾಯಶೆಟ್ಟಿ ಇತನಿಗೂ ನನಗೂ ಜಗಳವಾಗಿದ್ದು, ಇದ್ದನ್ನೆ ಮನಸ್ಸಿನಲ್ಲಿಟ್ಟಿಕೊಂಡು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಹೀಗೆ ವೇಗವಾಗಿ ಹೊಗುವಾಗ ಸಿಟ್ಟಿನಿಂದ ಏ ಹೊಲೆಯಾ ಈ ಸಾರಿ ಬದುಕಿದ್ದಿಯಾ ಇನ್ನೊಂದು ಸಲಾ ನಿನ್ನನ್ನು ಬಿಡುವುದಿಲ್ಲ ಎಂದು ಗದರಿಸುತ್ತಾ ಹೊಗಿರುತ್ತಾನೆ.ಈತನು ಆರ.ಎಸ್.ಎಸ್ ಸಂಘಟನೆಯ ಕಾರ್ಯಕರ್ತನಾಗಿದ್ದು, ಇದ್ದರಿಂದ ಗ್ರಾಮದಲ್ಲಿ ಅನೇಕ ಭಾರಿ ಕೊಮು ಗಲಾಟೆ ಅಟ್ರಾಸಿಟಿ ಪ್ರಕರಣಗಳು ದಾಖಲಾಗಿದ್ದು, ಹಾಗೂ ಹಿಂದು ಮುಸ್ಲಿಂ ಗಲಭೆ ಉಂಟಾಗಿತ್ತು, ಇವರಿಂದ ಇಡೀ ಗ್ರಾಮದಲ್ಲಿ ಪ್ರಕ್ಷಬ್ದ ವಾತಾವರಣ ಉಂಟಾಗಿದ್ದು, ಇಂತಹ ಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣಕ್ಕೆ ಕಾರಣರಾದ ಧರ್ಮರಾಜ ತಂದೆ ರಾಚಪ್ಪ ಶೆಟ್ಟಿ, ರಾಚಪ್ಪ ತಂದೆ ಬಸವಂತರಾಯ ಶೆಟ್ಟಿ, ಯಶ್ವಂತರಾಯ ತಂದೆ ರಾಚಪ್ಪ ಶೆಟ್ಟಿ, ಸಂಜುಕುಮಾರ ತಂದೆ ಬಸವಂತರಾಯ ಶೆಟ್ಟಿ ಹಾಗೂ ಇನ್ನಿತರರ ಮೇಲೆ ಜಾತಿ ನಿಂದನೆ, ಕೊಲೆ ಪ್ರಯತ್ನ, ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 January 2018

KALABURAGI DISTRICT REPORTED CRIMES

ಕಳವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಮಹೇಂದ್ರ ತಂದೆ ಶರಣಪ್ಪ ಗುಡೆದ ಸಾ|| ಯಾತನೂರ ತಾ: ಜೇವರಗಿ ಇವರು ದಿನಾಂಕ 11-01-2018 ರಂದು ರಾತ್ರಿ  ನಾನು ನನ್ನ ಹೆಂಡತಿ ಸಾವಿತ್ರಿ ಮತ್ತು ನಮ್ಮ ಅಣ್ಣನ ಹೆಂಡತಿ ರೇಣುಕಾ ಎಲ್ಲರೂ ಊಟ ಮಾಡಿ ನಾನು ನನ್ನ ಹೆಂಡತಿ ಬಂದು ರೂಮಿನಲ್ಲಿ ಮಲಗಿಕೊಂಡೆವು ನಮ್ಮ ಅಣ್ಣನ ಹೆಂಡತಿ ರೇಣುಕಾ ಇವಳು ಮತ್ತೊಂದು ಕೋಣೆಯಲ್ಲಿ ಮಲಗಿ ಕೊಂಡಳು ರಾತ್ರಿ ಅಂದಾಜು 3-30 ಎ.ಎಂಕ್ಕೆ ನನ್ನ ಹೆಂಡತಿ ಏಕಿಗೆ ಎಂದು ಎಂದ್ದು ಬಾಗಿಲು ತಗೆದಾಗ ಹೊರಗಿನ ಕೊಂಡಿ ಹಾಕಿದನ್ನು ನೋಡಿ ನನಗೆ ಎಬ್ಬಿಸಿದಳು ನಾನು ಕಿಡಿಕಿಯಿಂದ ಹೊರೆಗೆ ಬಂದು ಮಗ್ಗಲ ಕೊಣೆ ನೋಡಲಾಗಿ ಬಾಗಿಲು ತೆರೆದಿತ್ತು ಆಗ ನನ್ನ ಹೆಂಡತಿಗೆ ಹೇಳಿ ನನ್ನ ಅಣ್ಣನ ಹೆಂಡತಿಗೆ ಎಬ್ಬಿಸಿ ನೋಡಲಾಗಿ ಒಳಗೆ ಇದ್ದ ತಿಜೋರಿ ಕೀಲಿ ಮುರಿದು ಡ್ರಾ ತೇರೆದು ಒಳಗೆ ಇದ್ದ ಬಂಗಾರದ ಆಭರಣ ಮತ್ತು 3,ಲಕ್ಷ 40,ಸಾವಿರ ನಗದು ಹಣ ಒಟ್ಟು 459000/- ರೂ ಬೆಲೆಬಾಳುವ ಸಾಮಾನು ದಿನಾಂಕ: 11-01-2018 ರ 12-01-2018 ರ ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಹೊರಗಿನ ಕೀಲಿ ಮುರಿದು ಒಳಗೆ ಹೋಗಿ ತಿಜೋರಿ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಮತ್ತು ನಮ್ಮ ಮನೆಯ ಹತ್ತಿರದಲ್ಲಿ ಇದ್ದ ಸಿದ್ದಗಂಗಮ್ಮಾ ಗಂಡ ಮಲ್ಕಣ್ಣ ಸೋಮಜಾಳ ಇವರ ಮನೆಯ ಬಾಗಿಲು ತೆರೆದು ಒಳಗಿದ್ದ ತಿಜೋರಿಯಲ್ಲಿಯ 1 ತೋಲಿ ಬೋರಮಳ 24000/- ರೂ ಕಿಮ್ಮತಿನದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ ಅಶೋಕ ತಂದೆ ಕೆರಬಾ ಬಿರೆಜದಾರ ಸಾ|| ತಡೋಳಾ ಇವರು ತಮ್ಮ ಗ್ರಾಮದ ಸುರೇಶ ತಂದೆ ಅಪ್ಪಾರಾವ ಸುತಾರ ರವರ HF DELUXE ಮೋಟರ್ ಸೈಕಲ್ ನಂ KA 32 EQ 4182 ಇದ್ದು ಅದನ್ನು ಖಾಸಗಿ ಕೆಲಸಕ್ಕಾಗಿ ಉಪಯೋಗಿಸುತ್ತಾ ಬಂದಿದ್ದು  ದಿನಾಂಕ 11/01/2018 ರಂದು ಸಾಯಂಕಾಲ ನಮ್ಮ ಗ್ರಾಮದ ಸುರೇಶ ಸುತಾರ ಇತನು ತನ್ನ ಮೋಟರ ಸೈಕಲಿಗೆ ಪೆಟ್ರೋಲ್ ಹಾಕಿಕೊಳ್ಳಲು ಖಜೂರಿ ಬಾರ್ಡರ್ ಹತ್ತಿರ ಇರುವ ಪಂಪದಲ್ಲಿ ಎಣ್ಣೆ ಹಾಕಿಕೊಂಡು ಬಾರ್ಡರ ಹತ್ತಿರ ಬಂದು ಎಣ್ಣೆ ಹಾಕಿಕೊಂಡು ಮರಳಿ ಬಾರ್ಡರ ಹತ್ತಿರದಿಂದ ಹೋಗುವಾಗ ಸುರೇಶ ಇತನು ಮೋಟರ ಸೈಕಲ ಚಲಾಯಿಸುತ್ತಿದ್ದು ನಾನು ಹಿಂದುಗಡೆ ಕುಳಿತಿದ್ದು ಆಗ ನಮ್ಮ ಹಿಂದಿನಿಂದ ಯಾವುದೋ ಒಂದು ವಾಹನ ವೇಗವಾಗಿ & ನಿರ್ಲಕ್ಷತನದಿಂದ ಬಂದು ಒಮ್ಮೆಲೆ ಡಿಕ್ಕಿ ಪಡಿಸಿದ್ದರಿಂದ ನಾವು ಕೆಳಗಡೆ ಬಿದ್ದಾಗ ನನಗೆ ಎಡಗಾಲಿಗೆ,ತಲೆಗೆ,ಹಣೆಗೆ ಗಾಯವಾಗಿದ್ದು ಸುರೇಶ ಇತನಿಗೆ ತಲೆಗೆ ಮುಖಕ್ಕೆ ಬಡೆದು ಭಾರಿ ಗಾಯ ಹೊಂದಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ, ಆಗ ಡಿಕ್ಕಿ ಪಡಿಸಿದ ಚಾಲಕ ವಾಹನ ಸಮೇತ ಓಡಿಹೋಗಿರುತ್ತಾನೆ, ಆಗ ಸಮಯ ಅಂದಾಜು ರಾತ್ರಿ 9.30 ಗಂಟೆಯಾಗಿತ್ತು, ಆಗ ನಮ್ಮ ಗ್ರಾಮದ ವಿಜಯಕುಮಾರ ತಂದೆ ತುಳಸಿರಾಮ ಕಾರಬಾರಿ ಇತನು 108 ಅಂಬ್ಯೂಲೆನ್ಸ ಗೆ ಫೋನ್ ಮಾಡಿದಾಗ ಅಂಬ್ಯೂಲೆನ್ಸದಲ್ಲಿ ನನಗೆ ಈ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

11 January 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10/01/2018 ರಂದು ಸುಧಾರಿತ ಗಸ್ತು ಸಂ 27 ಭೋಸಗಾ ಗ್ರಾಮದ ಬೀಟ್ ಸಿಬ್ಬಂದಿಯಾದ ರಾಣಬಾ ಸಿಹೆಚ್ ಸಿ-527 ರವರು ಭೋಸಗಾ ಗ್ರಾಮದ ಮಠ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೋಸಗಾ ಗ್ರಾಮದ ಹೊನ್ನಲಿಂಗೇಶ್ವರ ಮಠದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಠದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು . ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅಪ್ಪಣ್ಣ ತಂದೆ ಎಗಪ್ಪ ಹೂವಿನಳ್ಳಿ ಸಾ||ಭೋಸಗಾ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2250/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 10-01-2018 ರಂದು ಮಧ್ಯಾನ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಲಾಲಗೇರಿ ಮಜ್ಜಿದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಾಲಗೇರಿ ಮಜ್ಜಿದ ದಿಂದ ಸ್ವಲ್ಪ ದೂರದಲ್ಲಿ ಹೋಗಿ ನಿಂತುಕೊಂಡು ಮಜ್ಜಿದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ಅಸಪಾಕ್ ಪಟೇಲ ತಂದೆ ಬುರಾನ ಪಟೇಲ ಸಾ: 11-11 ಲಾಲಗೇರಿ ಮಜ್ಜಿದ ಹತ್ತಿರ ಬ್ರಹ್ಮಪೂರ ಕಲಬುರಗಿ. ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1570, 4 ಮಟಕಾ ಬರೇದ ಚೀಟಿಗಳು , ಒಂದು ಬಾಲ ಪೇನ್ ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದರೋಡೆಗೆ ಹೊಂಚು ಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ಶ್ರೀ ಎ. ವಾಜೀದ ಪಟೇಲ್ ಸಿ.ಪಿ.ಐ. ಗ್ರಾಮೀಣ ವೃತ್ತ ಕಲಬುರಗಿ ರವರು ದಿನಾಂಕ  10/01/2018 ರಂದು ರಾತ್ರಿ 12-30 ಗಂಟೆಯಿಂದ ಬೆಳಗಿನ 05-00 ಗಂಟೆಯವರೆಗೆ ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರು ಕಲಬುರಗಿ ನಗರದಲ್ಲಿ ಇರುವ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಠಾಣಾಧಿಕಾರಿಗಳು ಇತ್ತೀತ್ತಲಾಗಿ ಹೆಚ್ಚುತ್ತಿರುವ ಸ್ವತ್ತಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಮ್ಮ, ತಮ್ಮ ಠಾಣಾ ಸರಹದ್ದಿನಲ್ಲಿ ವಿಶೇಷ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಪ್ರಕಾರ ನಾನು ಮತ್ತು ನಮ್ಮ ಸಿಬ್ಬಂದಿಯೊಂದಿಗೆ  ಗ್ರಾಮೀಣ ಪೊಲೀಸ ಠಾಣೆ ಸರಹದ್ದಿನಲ್ಲಿ ವಿಶೇಷ ಗಸ್ತು ಕರ್ತವ್ಯದಲ್ಲಿ ನಿರತನಿದ್ದೆನು. ನನ್ನಂತೆ ಗ್ರಾಮೀಣ ಪೊಲೀಸ ಠಾಣೆಯ ಶ್ರೀ ಚಂದ್ರಶೇಖರ ಪಿ.ಎಸ್.ಐ. ಮತ್ತು ಅವರ ಸಿಬ್ಬಂದಿಯವರೊಂದಿಗೆ ತಮ್ಮ ಠಾಣೆ ಜೀಪು ಕೆಎ 32 ಜಿ 485 ರಲ್ಲಿ  ವಿಶೇಷ ಗಸ್ತು ಕರ್ತವ್ಯದಲ್ಲಿ ನಿರತರಿದ್ದರು.  ವಿಶೇಷ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ ಬೆಳಗಿನ ಜಾವ 04-15 ಗಂಟೆಗೆ ಹೀರಾಪೂರ ಕ್ರಾಸನಲ್ಲಿ ಬಂದಾಗ ನನಗೆ  ಖಚಿತವಾದ ಮಾಹಿತಿ ಬಂದಿದ್ದೇನೆಂದರೆ, ನನ್ನ ವೃತ್ತದ ಆಧೀನದಲ್ಲಿ ಬರುವ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ ಹದ್ದಿಯಲ್ಲಿ ಬರುವ ಅಫಜಲಪೂರ ರೋಡಿನ ಶರಣಸಿರಸಗಿ ಸೀಮಾಂತರದ ಹೊರ ವಲಯದಲ್ಲಿ ನಾಗಲಿಂಗೇಶ್ವರ ಗುಡಿ ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ, ದಾಳಿ ಕುರಿತು  ಸಿಬ್ಬಂದಿ ಮತ್ತು ಪಂಚರೊಂದಿಗೆ  ಮತ್ತು ನನ್ನಂತೆ ವಿಶೇಷ ಗಸ್ತು ಕರ್ತವ್ಯದಲ್ಲಿ ಕಲಬುರಗಿ ಗ್ರಾಮೀಣ ಪೊಲೀಸ ಠಾಣೆಯ ಶ್ರೀ ಚಂದ್ರಶೇಖರ ಪಿ.ಎಸ್.ಐ. ಮತ್ತು ಅವರ ಜೊತೆಯಲ್ಲಿದ್ದ  ಸಿಬ್ಬಂದಿಯೊಂದಿಗೆ ಹೀರಾಪೂರ ಕ್ರಾಸದಿಂದ  ಬೆಳಗಿನ 05-30 ಗಂಟೆ ಸುಮಾರಿಗೆ  ಬಿದ್ದಾಪೂರ  ಕಾಲನಿ, ಹೈ ಕೋರ್ಟ  ಕ್ರಾಸ ಮುಖಾಂತರವಾಗಿ  ಬಾತ್ಮಿ ಸ್ಥಳ ಅಫಜಲಪೂರ ರೋಡಿನ ಶರಣಸಿರಸಗಿ ಸೀಮಾಂತರದ ಹೊರ ವಲಯದಲ್ಲಿ ನಾಗಲಿಂಗೇಶ್ವರ ಗುಡಿ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪುಗಳು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು, ನಾಗಲಿಂಗೇಶ್ವರ ಗುಡಿಯ ದಕ್ಷಿಣ ದಿಕ್ಕಿನ ಮರೆಯಲ್ಲಿ ನಿಂತು ನೋಡಲಾಗಿ  ಸದರಿ ಗುಡಿಯ ಪಶ್ಚಿಮ ದಿಕ್ಕಿನ ಹಿಂದುಗಡೆ ಗೋಡೆ ಮರೆಯಲ್ಲಿ 06  ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ರಾಡು, ಹಗ್ಗಾ, ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಅಧಿಕಾರಿ ಹಾಗೂ ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 06 ಜನರನ್ನು ನನ್ನ ನಿದೆರ್ಶನದಂತೆ ಬೆಳಗಿನ 06-00 ಗಂಟೆಗೆ ದಾಳಿ ಮಾಡಿ ಹಿಡಿಯಲು 06 ಜನರು ಸಿಕ್ಕಿ ಬಿದ್ದಿದ್ದು. ಸದರಿ 06 ಜನರು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ರಿಯಾಜ್ ತಂದೆ ರಸೂಲಸಾಬ್ ಬಿಜಲಿ  ಸಾ|| ಅಗರಖೇಡ  ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು.ಅವನ ಹತ್ತಿರ  ಒಂದು ಚಾಕು ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 2) ಮೌಲಾಲಿ ತಂದೆ ಮಹೆಬೂಬ್ ಬಿಜಲಿ ಸಾ|| ಅಗರಖೇಡ  ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು .ಇತನ ಹತ್ತಿರ  ಒಂದು ಖಾರದ ಪುಡಿ ಪಾಕೇಟ , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 3) ಹಸನ್ ತಂದೆ ಅಬ್ದುಲ್ ಬಾವಾ ಸಾ|| ಅಗರಖೇಡ  ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು ಇತನ ಹತ್ತಿರ  25 ಫೀಟನ ಹಗ್ಗ, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 4)ಶಿವಕುಮಾರ ತಂದೆ ಬಸಪ್ಪ ಡೊಳ್ಳಿ ಸಾ|| ಅಗರಖೇಡ  ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು. ಇತನ ಹತ್ತಿರ  ಒಂದು ಚಾಕು, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 5) ಬಂಡೆಪ್ಪ ತಂದೆ ದೇವರಾಯ ಸಂಗೊಳ್ಳಿ ಸಾ|| ಅಂಬಲಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಅಂತಾ ತಿಳಿಸಿದನು.ಇತನ ಹತ್ತಿರ ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 6) ತಾಜೋದ್ದೀನ ತಂದೆ ಮಹೆಬೂಬ್ ಸಾಬ್ ಭಾಗವಾನ್ ಸಾ|| ಅಂಬಲಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಅಂತಾ ತಿಳಿಸಿದನು.ಇತನ ಹತ್ತಿರ  ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. ಆಗ ಸದರಿಯವರಿಗೆ ನೀವು 06 ಜನರು ವಿಜಾಪೂರ ದವರು  ಇಲ್ಲಿ ಯಾಕೇ ನಿಂತಿದ್ದಿರಿ ಮತ್ತು ಯಾತಕ್ಕಾಗಿ ಬಂದಿರುವಿರೀ ಅಂತಾ ವಿಚಾರಿಸಲೂ ಸಿಕ್ಕಿ ಬಿದ್ದ  ಎಲ್ಲರೂ ಕಲಬುರಗಿ ನಗರದಲ್ಲಿ ಕೂಲಿ ಕೆಲಸ ಮಾಡಲು ಬಂದಿದ್ದು, ನಾವು ದುಡಿದ ಹಣದಿಂದ ಮೋಜು ಮಸ್ತಿ ಮಾಡಲು ಮತ್ತು ಮನೆಗೆ ಕಳುಹಿಸಿಕೊಡಲು ಸಾಕಾಗುತ್ತಿಲ್ಲವಾದ್ದರಿಂದ ನಿನ್ನೆ ದಿನಾಂಕ 09-01-2017 ರಂದು ಸಂಜೆ ಸಮಯದಲ್ಲಿ  ನಾವೆಲ್ಲರೂ ರಾಮ ಮಂದಿರ ರಿಂಗ ರೋಡ ಕ್ರಾಸನಲ್ಲಿ ಮಾತಾಡಿಕೊಂಡಂತೆ ಇಂದು ದಿನಾಂಕ 10-01-2017 ರಂದು ಬೆಳಗಿನ ಜಾವ 03-00 ಗಂಟೆ ಸುಮಾರಿಗೆ ಎಲ್ಲರೂ ರಾಮ ಮಂದಿರ ರಿಂಗ ರೋಡ ಕ್ರಾಸನಲ್ಲಿ ಎಲ್ಲರೂ ಸೇರಿಕೊಂಡು ದಾರಿಗೆ ಹೊರಟ ಯಾವುದೋ ಲಾರಿಯಲ್ಲಿ ಕುಳಿತುಕೊಂಡು ಅಫಜಲಪೂರ ರೋಡಿನ ಶರಣಸಿರಸಗಿ ಸೀಮಾಂತರದ ಹೊರ ವಲಯದಲ್ಲಿ ಇರುವ ನಾಗಲಿಂಗೇಶ್ವರ ಗುಡಿಯ  ಹಿಂದುಗಡೆ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ರಾಡು, ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ಓಡಿ ಹೋಗಬೇಕೆಂದು ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ನಮ್ಮಗೇ ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ವಾಜೀದ ಪಟೇಲ ಸಿ,ಪಿ,ಐ, ಗ್ರಾಮೀಣ ವೃತ್ತ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ.ಸೂ)  ಗ್ರಾಮೀಣ ಪೊಲೀಸ್ ಠಾಣೆ ಕಲಬುರಗಿ ರವರು ಸಿಬ್ಬಂದಿಯೊಂದಿಗೆ ದಿನಾಂಕ  09-01-2018 ರಂದು ರಾತ್ರಿ 12-00 ಗಂಟೆಯಿಂದ ಬೆಳಗಿನ 05-00 ಗಂಟೆಯವರೆಗೆ ಠಾಣಾ ಸರಹದ್ದಿನಲ್ಲಿ ವಿಶೇಷ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ  ಬೆಳಗಿನ ಜಾವ 04-30 ಗಂಟೆಗೆ ಆಳಂದ ಚೆಕ್ಕ ಪೋಸ್ಟ ಸರ್ಕಲನಲ್ಲಿ ಬಂದಾಗ ನನಗೆ  ಮಾಹಿತಿ ಬಂದಿದ್ದೇನೆಂದರೆ, ನಮ್ಮ ಗ್ರಾಮೀಣ ಪೊಲೀಸ್ ಠಾಣೆ ಹದ್ದಯಲ್ಲಿ ಬರುವ ಹತಗುಂದಾ ಕ್ರಾಸ ರೋಡಿನ ಬದಿಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ, ಮಾನ್ಯ ಅಪರ ಎಸ್.ಪಿ.ಸಾಹೇಬ ಕಲಬುರಗಿ, ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಕಲಬುರಗಕ ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು  ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಗಿನ 05-30 ಗಂಟೆ ಸುಮಾರಿಗೆ ಕೆರಿಭೋಸಗಾ ಕ್ರಾಸ, ಪಟ್ಟಣ ಕ್ರಾಸ ಮುಖಾಂತರವಾಗಿ   ಹತಗುಂದಾ ಕ್ರಾಸ್ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು,ಹತಗುಂದಾ ಕ್ರಾಸ ಎದುರುಗಡೆ ಇರುವ  ಪಟ್ಟಣ ಮತ್ತು ಯಳವಂತಗಿ (ಕೆ) ರೋಡಿನ ಎದುರುಗಡೆ ಇರುವ ಮಂಜುನಾಥ ಮತ್ತಿಮೂಡ ಹೊಲದ ಗಿಡಗಂಟಿಗಳ ಮರೆಯಲ್ಲಿ ನಿಂತು ನೋಡಲಾಗಿ ಹತಗುಂದಾ ಗ್ರಾಮಕ್ಕೆ ಹೋಗುವ ಕ್ರಾಸ ರೋಡಿನ ಪಶ್ಚಿಮ ದಿಕ್ಕಿನ ಗಿಡ ಗಂಟಿಗಳ ಮರೆಯಲ್ಲಿ 08 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ರಾಡು, ಹಗ್ಗಾ, ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 08 ಜನರನ್ನು ನನ್ನ ನಿದೆರ್ಶನದಂತೆ ಬೆಳಗಿನ 06-00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಯಲು 08 ಜನರು ಸಿಕ್ಕಿ ಬಿದ್ದಿದ್ದು. ಸದರಿ 08 ಜನರು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಚಂದಪ್ಪ ತಂದೆ ಬಸಣ್ಣ ಪರೀಟ್ ಸಾ|| ಕರಜಗಿ ತಾ|| ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಚಾಕು ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 2) ತಿಮ್ಮಣ್ಣ ತಂದೆ ಲಕ್ಷ್ಮಣ ಗಾಡಿ ವಡ್ಡರ ಸಾ|| ಬಸವೇಶ್ವರ ಚೌಕ್ ಘತ್ತರಗಾ ಕಮನ್ ಹತ್ತಿರ ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ ಒಂದು ಖಾರದ ಪುಡಿ ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 3) ಲಕ್ಷ್ಮಣ ತಂದೆ ಗಿಡ್ಡಪ್ಪ ಗಾಡಿ ವಡ್ಡರ ಸಾ|| ಬಸವೇಶ್ವರ ಚೌಜ್ ಘತ್ತರಗಾ ಕಮನ್ ಹತ್ತಿರ ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ,  20 ಫೀಟನ ಹಗ್ಗ, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ 4) ಭಿಮಶ್ಯಾ ತಂದೆ ಗೋವಿಂದಪ್ಪ ನಿಂಬಾಳ್ಕರ್ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಚಾಕು, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ 5) ಹೈದರ್ ಸಾಬ್ ತಂದೆ ಲಾಡ್ಲೇ ಸಾಬ್ ಲದಾಫ್ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 6) ಗೋವಿಂದಪ್ಪ ತಂದೆ ದುರ್ಗಪ್ಪ ಪೀರಾಜಿ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಬಡಿಗೆ, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 7) ರಾಮಣ್ಣ ತಂದೆ ಭಿಮಶ್ಯಾ ಧೋತರೆ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಕಬ್ಬಿಣದ ರಾಡು,  ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 8)ಗಜಾನಂದ ತಂದೆ ಪುಂಡಲಿಕ ಮಾನೆ ಸಾ|| ಬಟ್ಟರಗಾ  ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ  ಒಂದು ಖಾರದ ಪಾಕೇಟ್, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. ಆಗ ಸದರಿಯವರಿಗೆ ನೀವು 08 ಜನರು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ  ಎಲ್ಲರೂ ನಿನ್ನೆ ದಿನಾಂಕ 08-01-2018 ರಂದು ಸಂಜೆ ಸಮಯದಲ್ಲಿ  ನಾವೆಲ್ಲರೂ ಕಲಬುರಗಿ ಕೇಂದ್ರ ಬಸನಿಲ್ದಾಣದಲ್ಲಿ ಮಾತಾಡಿಕೊಂಡಂತೆ ಇಂದು ದಿನಾಂಕ 09-01-2017 ರಂದು ಬೆಳಗಿನ ಜಾವ 03-00 ಗಂಟೆ ಸುಮಾರಿಗೆ ಪಟ್ಟಣ ಕ್ರಾಸನಲ್ಲಿ ಎಲ್ಲರೂ ಸೇರಿಕೊಂಡು ಟಂಟಂ ಕೆಎ 32 A- 8941  ನೇದ್ದರಲ್ಲಿ ಕುಳಿತುಕೊಂಡು ಹತಗುಂದಾ ಕ್ರಾಸಿಗೆ ಬಂದು, ಸ್ವಲ್ಪ ದೂರದಲ್ಲಿ ನಾವು ತಂದಿದ್ದ ಟಂಟಂ ನಿಲ್ಲಿಸಿ, ಸದರ ಕ್ರಾಸನಲ್ಲಿ ಇರುವ  ಗಿಡಗಂಟಿಗಳ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ರಾಡು, ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು ತಂದಿದ್ದ ಟಂಟಂನಲ್ಲಿ ಓಡಿ ಹೋಗಬೇಕೆಂದು ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ನಮಗೆ ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಬಾಳಪ್ಪ ಕಾಳೆ ಸಾ||ಉಡಚಣ ಹಟ್ಟಿ ರವರು  ದಿನಾಂಕ 08/11/2017 ರಂದು ರಾತ್ರಿ  ಮನೆಯಲಿದ್ದಾಗ ನಮ್ಮ ಗ್ರಾಮದ ರಮೇಶ ತಂದೆ ಸಿದ್ದು ರುತ್ನೂರ ರವರು ನನ್ನ ಮೋಬೈಲಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ಹಾಗು ಹಣಮಂತ ತಂದೆ ಸದಾಶಿವ ಸೆಂಡಗೆ ಇಬ್ಬರು ನಮ್ಮ ಮೋಟಾರ್ ಸೈಕಲ್ ಮೇಲೆ ನಮ್ಮ ಗ್ರಾಮಕ್ಕೆ ಬರುತಿದ್ದಾಗ ನಮ್ಮ ಮುಂದೆ ನಿಮ್ಮ ತಂದೆ ಭಾಳಪ್ಪ ಹಾಗು ಭೀರಣ್ಣ ಸಿಂದೆ ಇಬ್ಬರು ನಿಮ್ಮ ಮೋಟಾರ ಸೈಕಲ್ ನಂ ಕೆಎ-32 ಇಜೆ-5670 ನೇದ್ದರ ಮೇಲೆ ಹೊಲದಿಂದ ಮನೆಗೆ ಹೋಗುತಿದ್ದರು ನಮ್ಮ ಗ್ರಾಮದ ಸಂಜಯ ತಂದೆ ಮಚೆಂದ್ರ ಸಂಜವಾಡ ರವರ ಹೊಲದ ಹತ್ತಿರ ಮುಖ್ಯ ರಸ್ತೆ  ಮೇಲೆ ಎದುರಿನಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ಹೋಗುತಿದ್ದ ನಿಮ್ಮ ತಂದೆಯವರ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಂದೆ ಹಾಗು ಭೀರಣ್ಣ ಇಬ್ಬರು ರೋಡಿನ ಬಾಜು ಟೆಗ್ಗಿನಲ್ಲಿ ಬಿದ್ದು ಭಾರಿ ಗಾಯ ಹೊಂದಿರುತ್ತಾರೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಕಾಕನಾದ ಸಿದ್ದಣ್ಣ ತಂದೆ ಭೀಮಶ್ಯಾ ಕಾಳೆ ಇಬ್ಬರು ಒಂದು ಖಾಸಗಿ ವಾಹನ ತಗೆದುಕೊಂಡು ಸ್ಥಳಕ್ಕೆ  ಹೋಗಿ ನೋಡಲಾಗಿ ನಮ್ಮ ತಂದೆಗೆ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಮೈ ಕೈಗಳಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಭೀರಣ್ಣ ರವರಿಗೆ ತಲೆಗೆ ರಕ್ತಗಾಯ ಬಲ ಮೋಳಕಾಲಿಗೆ ರಕ್ತಗಾಯವಾಗಿದ್ದು  ಇರುತ್ತದೆ ಸದರಿ ಡಿಕ್ಕಿ ಪಡಿಸಿದ ಸವಾರನು ತನ್ನ ಮೋಟಾರ ಸೈಕಲ್  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಮೋಟಾರ್ ಸೈಕಲ್ ನಂಬರ ನೋಡಲಾಗಿ ಎಮ್ ಹೆಚ್ 13 ಸಿಆರ್ 1176 ಅಂತ ಇರುತ್ತದೆ. ನಂತರ ನಾವೇಲ್ಲರು ಸದರಿ ಘಟನೆಯಲ್ಲಿ ಗಾಯ ಹೊಂದಿದ ನಮ್ಮ ತಂದೆ ಹಾಗು ಭೀರಣ್ಣ  ಇಬ್ಬರಿಗೂ  ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೋಲಾಪೂರದ GANGAMAI ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಂದೆ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ. ಅಪಘಾತ ಪಡಿಸಿದ ಮೋಟಾರ್ ಸೈಕಲ್ ನಂ ಎಮ್ ಹೆಚ್ 13 ಸಿಆರ್ 1176 ನೇದ್ದರ ಸವಾರನಾದ ಅಶೋಕ ತಂದೆ ಸೊನೆಬಾಪು ಪಾಟೀಲ ಸಾ||ರಾಜುರ ತಾ||ದಕ್ಷಿಣ ಸೊಲಾಪೂರ ಜಿ||ಸೋಲಾಪೂರ ಈತನು ತನ್ನ ಮೋಟಾರ್ ಸೈಕಲ್ ಅತಿವೇಗ ಹಾಗು ನಿಸ್ಕಾಳಜಿತನದಿಂದ  ಚಲಾಯಿಸಿ ನಮ್ಮ ತಂದೆ ಹಾಗು ಭೀರಣ್ಣ ರವರು ಬರುತಿದ್ದ ನಮ್ಮ  ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ  ನಮ್ಮ ತಂದೆ ಹಾಗು ಭಿರಣ್ಣ ರವರಿಗೆ ಭಾರಿ ರಕ್ತಗಾಯ ಪಡಿಸಿದ ಸವಾರನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.