POLICE BHAVAN KALABURAGI

POLICE BHAVAN KALABURAGI

04 December 2017

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ
ಃ ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಚರಣೆ ಃ
09 ಜನರ ಬಂಧನ  20 ನಾಡ ಪಿಸ್ತೂಲ್ ಹಾಗೂ 54 ಜೀವಂತ ಗುಂಡುಗಳ ಜಪ್ತಿ
          ದಿನಾಂಕ 21-10-2017 ರಂದು ಕಲಬುರಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ 10 ನಾಡ ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಆರೋಪಿತರ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಇನ್ನು ಹಲವಾರು ಕಡೆ ಅಕ್ರಮ ಶಸ್ತ್ರಾಸ್ತ್ರ  ಹೊಂದಿದ ಮಾಹಿತಿ ತಿಳಿದು ಬಂದ ಮೇರೆಗೆ ಮಾನ್ಯ ಶ್ರೀ ಆಲೋಕ್ ಕುಮಾರ್, ಐಪಿಎಸ್., ಐ.ಜಿ.ಪಿ., (ಈ.ವ) ಕಲಬುರಗಿರವರು ಶ್ರೀ ಎನ್. ಶಶಿಕುಮಾರ್, ಐಪಿಎಸ್., ಎಸ್.ಪಿ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಸದರಿ ತಂಡದಲ್ಲಿ ಶ್ರೀ ಜಯ ಪ್ರಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಲೋಕೇಶ್, ಬಿ.ಜೆ., ಐಪಿಎಸ್, ಎ.ಎಸ್.ಪಿ  (ಎ) ಉಪ ವಿಭಾಗ, ಶ್ರೀ ಎಸ್.ಎಸ್. ಹುಲ್ಲೂರ್, ಡಿ.ಎಸ್.ಪಿ ಗ್ರಾಮೀಣ ಉಪ ವಿಭಾಗ, ಶ್ರೀ ಕಪಿಲ್ದೇವ, ಪಿ.ಐ ಡಿ.ಸಿ.ಬಿ, ಶ್ರೀ ಸೋಮಲಿಂಗ ಕಿರದಳ್ಳಿ, ಪಿಐ ಡಿಸಿಐಬಿ, ಶ್ರೀ ಹಣಮಂತ ಸಣ್ಣಮನಿ, ಸಿ.ಪಿ.ಐ ಆಳಂದ, ಶ್ರೀ ಜೆ.ಹೆಚ್. ಇನಾಮದಾರ್, ಸಿಪಿಐ ಅಫಜಲಪೂರ, ಶ್ರೀ ಡಿ.ಬಿ ಪಾಟೀಲ್, ಸಿಪಿಐ ಜೇವರಗಿ, ಶ್ರೀ ಮಂಜುನಾಥ ಹೂಗಾರ, ಪಿ.ಎಸ್.ಐ ಜೇವರಗಿ, ಸಂತೋಷ ರಾಠೋಡ್, ಪಿ.ಎಸ್.ಐ ಅಪಜಲಪೂರ, ಪ್ರದೀಪ ಬಿಸೆ ಪಿ.ಎಸ್.ಐ ಮಹಾಗಾಂವ, ಹಾಗೂ ಎ.ಎಸ್.ಐ ಕಮಾಂಡೊ ಶಿವಪ್ಪ, ಹಾಗೂ ನುರಿತ ಸಿಬ್ಬಂದಿಯವರನ್ನು ಹೊಂದಿರುವ ತಂಡವು ಸುಮಾರು ಒಂದುವರೆ ತಿಂಗಳಿಂದ ಜಿಲ್ಲೆಯಾದ್ಯಾಂತ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ 03-12-2017 ರಂದು ರಾತ್ರಿ ಜಿಲ್ಲೆಯಾದ್ಯಾಂತ ಎಕ ಕಾಲದಲ್ಲಿ ದಾಳಿಯನ್ನು ಮಾಡಿ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ನಿಂಗಪ್ಪ ಇತನಿಂದ 02 ನಾಡ್ ಪಿಸ್ತೂಲ್, 06 ಜೀವಂತ ಗುಂಡುಗಳು, ಹಾಗೂ  ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಆರೋಪಿ ಇಫರ್ಾನ ಪಟೇಲ್ ಈತನಿಂದ 03 ನಾಡ್ ಪಿಸ್ತೂಲ್ ಹಾಗೂ 07 ಜೀವಂತ ಗುಂಡುಗಳು, ಜೇವರಗಿ ಪೊಲೀಸ್ ಠಾಣೆಯ ಸರಹದ್ದಿನ ರ್ಯಾವನೂರ ಕ್ರಾಸ್ ಹತ್ತಿರ ದರೋಡೆಗೆ ಯತ್ನಿಸಿದ ಆರೋಪಿತರಾದ   ಸಚೀನ @ ಮಲ್ಲಿಕಾಜರ್ುನ, ಇಮಾಮ ಹಾಗೂ ಮಲ್ಕಣ್ಣ ಇವರಿಂದ 03 ನಾಡ ಪಿಸ್ತೂಲ್ಗಳು, 09 ಜೀವಂತ ಗುಂಡುಗಳುನೆಲೋಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿವಪ್ಪ ಇತನಿಂದ 03 ನಾಡ ಪಿಸ್ತೂಲ್ಗಳು ಹಾಗೂ 09 ಜೀವಂತ ಗುಂಡುಗಳು, ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಆರೋಪಿ ಲಾಲಸಾಬ ಇತನಿಂದ 03 ನಾಡ್ ಪಿಸ್ತೂಲ್ಗಳು ಹಾಗೂ 09 ಜೀವಂತ ಗುಂಡುಗಳು, ಇನ್ನೊರ್ವ ಆರೋಪಿ ಮಲ್ಲಿಕಾಜರ್ುನ @ ಮಲ್ಕ್ಯಾ ಇತನಿಂದ 02 ನಾಡ ಪಿಸ್ತೂಲ್ಗಳು ಹಾಗೂ 06 ಜೀವಂತ ಗುಂಡುಗಳುಗಾಣಗಾಪೂರ ಪೊಲೀಸ್ ಠಾಣೆಯಲ್ಲಿ 03 ನಾಡ್ ಪಿಸ್ತೂಲ್ಗಳು ಹಾಗೂ 08 ಜೀವಂತ ಗುಂಡುಗಳು  ಹೀಗೆ ಒಟ್ಟು 20 ನಾಡ್ ಪಿಸ್ತೂಲ್, 55 ಜೀವಂತ ಗುಂಡುಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ.
          ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿತನಾದ ನಿಂಗಪ್ಪ ಪೂಜಾರಿ ಇತನಿಂದ 02 ನಾಡ ಪಿಸ್ತೂಲ್ಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಅವುಗಳನ್ನು ಅಜರ್ುನ ಭೋಸಗಾ, ಮಲ್ಲಿಕಾಜರ್ುನ ದೇವಲಗಾಣಗಾಪೂರ ಇತನಿಂದ ಪಡೆದುಕೊಂಡಿದ್ದು, ಮತ್ತು ಸದರಿ ಆರೋಪಿತರ ಹತ್ತಿರ ಇನ್ನು ಹಲವಾರು ಕಂಟ್ರಿ ಪಿಸ್ತೂಲ್ಗಳು ಹೊಂದಿದ್ದು ಅವುಗಳನ್ನು ದೇವಲಗಾಣಗಾಪೂರ ದತ್ತ ಜಯಂತಿ ಜಾತ್ರೆಯಲ್ಲಿ ಮಾರಾಟ ಮಾಡುವುದಾಗಿ  ಹಾಗೂ ಗೊಬ್ಬುರದ ಹತ್ತಿರ ಆಶ್ರಯ ಪಡೆದುಕೊಂಡಿರುತ್ತಾರೆ ಎಂಬ ಖಚಿತವಾದ ಮಾಹಿತಿ ನೀಡಿದ ಮೇರೆಗೆ ಇಂದು ದಿನಾಂಕ 04-12-2017 ರಂದು ಎ.ಎಸ್.ಪಿ ಲೋಕೇಶ್, ಐಪಿಎಸ್., ಕಲಬುರಗಿ (ಎ) ಉಪ ವಿಭಾಗ ರವರ ನೇತೃತ್ವದಲ್ಲಿ ಶ್ರೀ ಕಪಿಲ್ದೇವ, ಪಿ.ಐ ಡಿ.ಸಿ.ಬಿ ಘಟಕ, ಪಿ.ಎಸ್.ಐ ಮಹಾಗಾಂವ, ಜೇವರಗಿ, ಎ.ಎಸ್.ಐ ಶಿವಪ್ಪ ಹಾಗೂ ಸಿಬ್ಬಂದಿಯವರನೊಳಗೊಂಡ ತಂಡವು ಬೆಳಿಗಿನ ಜಾವ 08:00 ಗಂಟೆಗೆ ಅವರ ಮೇಲೆ ದಾಳಿ ಮಾಡಿ ಹಿಡಿಯಲು ಪ್ರಯತ್ನಿಸಿದಾಗ ಆರೋಪಿತನಾದ ಅಜರ್ುನ ಇತನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಓಡಿ ಹೋಗುತ್ತಿರುವಾಗ ನಿಲ್ಲಲು ಹಲವಾರು ಸಲ ಎಚ್ಚರಿಕೆಯನ್ನು ನೀಡಿದರೂ ಸಹ ನಿಲ್ಲದೆ, ಚಾಕುವಿನಿಂದ ಸಿಬ್ಬಂದಿಯವರ ಮೇಲೆ ಪ್ರತಿದಾಳಿ ಮಾಡಿ ಕೊಲೆಗೆ ಪ್ರಯತ್ನಿಸಿದಾಗ ಸಿಬ್ಬಂದಿಗಳ ಜೀವ ರಕ್ಷಣೆ ಹಾಗೂ ಆತ್ಮ ರಕ್ಷಣೆಗಾಗಿ ಹಲ್ಲೆ ಮಾಡಿದ ಆರೋಪಿತನ ಮೇಲೆ ಅನಿವಾರ್ಯವಾಗಿ ಕನಿಷ್ಠ ಬಲ ಪ್ರಯೋಗ ಮಾಡಿ ಗುಂಡಿನ ದಾಳಿಯನ್ನು ಮಾಡಿದಾಗ ಸದರಿ ಗುಂಡು ಆರೋಪಿತನ ಬಲಗಾಲಿನ ಮೊಳಕಾಲಿಗೆ ತಗಲಿರುತ್ತದೆ. ಆರೋಪಿತನನ್ನು ದಸ್ತಗಿರಿ ಮಾಡಿ ಉಪಚಾರ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ.
          ದಿನಾಂಕ 21-10-2017 ರಂದು 10 ನಾಡ್ ಪಿಸ್ತೂಲ್ಗಳು ಹಾಗೂ 24 ಜೀವಂತ ಗುಂಡುಗಳು, ಇಂದು ದಿನಾಂಕ 04-12-2017 ರಂದು ಒಟ್ಟು 20 ನಾಡ್ ಪಿಸ್ತೂಲ್ಗಳು ಹಾಗೂ 54 ಜೀವಂತ ಗುಂಡುಗಳು ಹೀಗೆ ಇಲ್ಲಿಯವರೆಗೂ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 30 ನಾಡ್ ಪಿಸ್ತೂಲ್ಗಳು ಹಾಗೂ 78 ಜೀವಂತ ಗುಂಡುಗಳನ್ನು ಜಪ್ತು ಪಡಿಸಿಕೊಳ್ಳಲಾಗಿದೆ. ಇನ್ನು ಜಿಲ್ಲೆಯಾದ್ಯಾಂತ ಹಲವಾರು ಕಡೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಹಾಗೂ ಪೂರೈಕೆದಾರರ ಮಾಹಿತಿ ಇದ್ದು ಸದರ ಕಾರ್ಯಾಚರಣೆಯನ್ನು ಮುಂದು ವರೆಸಲಾಗುವುದು.
          ಶ್ರೀ ಆಲೋಕ್ ಕುಮಾರ್, ಐಪಿಎಸ್., ಮಾನ್ಯ ಐಜಿಪಿ, ಈಶಾನ್ಯ ವಲಯ, ಕಲಬುರಗಿರವರು ತಂಡದ ಕಾರ್ಯಚರಣೆಯನ್ನು ಶ್ಲಾಘಿಸಿ ಬಹುಮಾನವನ್ನು ಘೋಶಿಸಿರುತ್ತಾರೆ. 

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿರುವ ಪ್ರಕರಣ  :
ಕಮಲಾಪೂರ ಠಾಣೆ : ಶ್ರೀಮತಿ ನಾಗಮ್ಮ ಗಂಡ ನಾಗೇಶ ಮೋತಕಪಳ್ಳಿ ಸಾ:ತೆಗಲತಿಪ್ಪಿ ತಾ:ಚಿಂಚೋಳಿ ಜಿ:ಕಲಬುರಗಿ ಇವರು  3 ವರ್ಷಗಳ ಹಿಂದೆ ನನ್ನ ಮಗಳಾದ ಶ್ರೀಮತಿ ಶರಣಮ್ಮ @ ಸಂಗೀತಾ ಇವಳನ್ನು ಶ್ರೀ ಶಿವಕುಮಾರ ತಂದೆ ಬಸವರಾಜ ಮಳಸಾನೋರ ಸಾ:ಸೊಂತ ತಾ:ಜಿ:ಕಲಬುರಗಿ ಯವರಿಗೆ ಮದುವೆ ಮಾಢಿ ಕೋಟ್ಟಿರುತ್ತೇನೆ. ಆದರೆ ಗಂಡನ ಮನೆಯಲ್ಲಿ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ 5 ಲಕ್ಷ ರೂಪಾಯಿಗಳು ತಗೊಂಡು ಬಾ ಎಂದು ಕಿರುಕುಳ ಕೋಡುತ್ತಿದ್ದರು. ಆಗ ನಮ್ಮೂರಿನ ಹಿರಿಯರ ಸಮಕ್ಷಮದಲ್ಲಿ ನನ್ನ ಅಳೀಯನಿಗೆ ಈ ಹಿಂದೆ 2 ಲಕ್ಷ ರೂಪಾಯಿಗಳು ನನ್ನ ಮಗಳು ಸುಖವಾಗಿಟ್ಟುಕೋಳ್ಳುತ್ತಾರೆ ಎಂಬ ಭರವಸೆಯ ಮೇಲೆ ಕೋಟ್ಟಿರುತ್ತೇನೆ. ಆದರೆ ಅತ್ತೆ ಸರಸ್ವತಿ ಮಾವ ಬಸವರಾಜ ಗಂಡ ಶಿವಕುಮಾರ ಮೈದುನ ಸಂಜಪ್ಪ ಇಷ್ಟು ಹಣ ಪಡೆದು ತೃಪ್ತರಾಗದೆ ಮತ್ತೆ ಕಿರುಕುಳ ನಿಡಿರುತ್ತಾರೆ. ದಿನಾಂಕ:03.12.2017 ರಂದು ಬೆಳಿಗ್ಗೆ 06 ಗಂಟೆಗೆ ನನಗೆ ನಮ್ಮ ಅಳಿಯನಾದ ಶ್ರೀ ಶಿವಕುಮಾರ ದೂರವಾಣಿ ಮೂಲಕ ಕರೆಮಾಡಿ ನಿಮ್ಮ ಮಗಳು ಕಾಣುತ್ತಿಲ್ಲ ಎಲ್ಲಿಗೆ ಹೋಗಿರುತ್ತಾಳೊ ಗೋತ್ತಿಲ್ಲ ಎಂದು ಕರೆ ಮಾಡಿರುತ್ತಾನೆ. ಆಗ ನಾನು ಮತ್ತು ನಮ್ಮ ಮನೆಯವರೆಲ್ಲರೂ ಸೇರಿ ಸೊಂತ ಗ್ರಾಮಕ್ಕೆ ಬೆಳಿಗ್ಗೆ 08 ಗಂಟೆಗೆ ಹೋಗಿರುತ್ತೇವೆ. ಆಗ ಅಳಿಯನಾದ ಶ್ರೀ ಶಿವಕುಮಾರ ಕಮಲಾಪೂರ ಪೋಲಿಸ ಠಾಣೆಯಲ್ಲಿ ಹೋಗಿ ಕುಳಿತಿರುತ್ತಾನೆ. ಮತ್ತು ಅತ್ತೆ ಮಾವ ಮೈದುನರು ಮನೆಗೆ ಕಿಲಿ ಹಾಕಿ ಬೇರೋಬ್ಬರ ಮನೆಯಲ್ಲಿ ಹೋಗಿ ಕುಳಿತಿರುತ್ತಾರೆ. ಆಗ ನಾವು ಮಗಳನ್ನು ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಇರುವ ಬಾವಿ ಬಳಿ ನನ್ನ ಮಗಳು ಚಪ್ಪಲಿಗಳು ಬಿದ್ದಿರುವುದು ಕಂಡುಬಂದಿರುತ್ತದೆ. ಆದ ಕಾರಣ ಇದು ಪೂರ್ವ ನಿಯೋಜಿತ ಕೋಲೆ ಆಗಿರುತ್ತದೆ. ಎಂದು ಸ್ಟಷ್ಟವಾಗಿ ಕಂಡು ಬಂದಿರುತ್ತದೆ. ಈ ಕೋಲೆಯು ನನ್ನ ಮಗಳ ಅತ್ತೆಯಾದ ಶ್ರೀಮತಿ ಸರಸ್ವತಿ ಗಂಡ ಬಸವರಾಜ ಮಳಸಾನೋರ ಮಾವನಾದ ಶ್ರೀ ಬಸವರಾಜ ತಂದೆ ಗುಂಡಪ್ಪ ಮಳಸಾನೋರ ಗಂಡನಾದ ಶ್ರೀ ಶಿವಕುಮಾರ ತಂದೆ ಬಸವರಾಜ ಮಳಸಾನೋರ ಹಾಗೂ ಮೈದುನಾದ ಸಂಜಪ್ಪ ತಂದೆ ಬಸವರಾಜ ಮಳಸಾನೋರ ಇವರೆಲ್ಲರೂ ಈ ಕೋಲೆಯಲ್ಲಿ ಭಾಗಿಯಾಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಇವರ ಮಗಳಾದ ಕುಮಾರಿ ಇವಳಿಗೆ ನನ್ನ ಅಳಿಯ ಮಿಥನ್ ತಂದೆ ದಾಮಲು ಜಾದವ ಸಾಃ ಮಿಣಜಗಿ ತಾಂಡಾ ಈತನು ದಿನಾಂಕ 30/11/2017 ರಂದು ಸಮಯ ಮದ್ಯಾಹ್ನ 1.30ಕ್ಕೆ ನನ್ನ ಮಗಳು ಓದುತ್ತಿರುವ ಸರ್ಕಾರಿ ಪ್ರೌಡ ಶಾಲೆ ಖಣದಾಳ (10ನೇ ತರಗತಿ) ಇಲ್ಲಿಂದ ಪುಸಲಾಯಿಸಿ ಜಬರಿಯಿಂದ ಮನೆಯಲ್ಲಿ ಜಗಳವಾಗಿದೆ ಎಂದು ಸುಳ್ಳು ಹೇಳಿ ಅಪಹರಿಸಿಕೊಂಡು ಹೊಗಿರುತ್ತಾನೆ. ಅಪಹರಿಸಿಕೊಂಡು ಹೋದ ವ್ಯಕ್ತಿಯು ನನ್ನ ಮೊದಲನೆ ಮಗಳ ಗಂಡನಾಗಿದ್ದು, ಅದರ ಲಾಭ ಪಡೆದು ಸುಳ್ಳು ಹೇಳಿ ನನ್ನ ಮಗಳನ್ನು ಅಪಹರಿಸಿಕೊಂಡು ಹೊಗಿದ್ದು, ನನ್ನ ಮಗಳು ಅಪ್ರಾಪ್ತಳಾಗಿದ್ದು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಶಯ ಇದ್ದು, ನಮ್ಮ ಮಗಳನ್ನು ವೈದ್ಯಕೀಯ ಚಿಕಿತ್ಸೆ ಕೊಡಿಸಿ ಆರೋಪಿತನ ವಿರುದ್ದ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

03 December 2017

KALABURAGI DISTRICT REPORTED CRIMES.


ಜೇವರಗಿ ಠಾಣೆ : ದಿನಾಂಕ; 02/12/2017 ರಂದು 11-00 .ಎಮ್ವೇಳೆಗೆ ಫಿರ್ಯಾದಿ ಶ್ರೀ ನಿಂಗಣ್ಣ ಗೌಡ ತಂದೆ ಈರಣ್ಣಗೌಡ ಮಾಲಿ ಪಾಟಿಲ್ ವಯ; 27 ವರ್ಷ ಜಾ: ಲಿಂಗಾಯತ : ಕೆ.. ಬಿ ಗುತ್ತಿಗೆದಾರ ಮತ್ತು ಶ್ರೀ ರಾಮ ಸೇನೆ ಸಂಘಟನೆ ತಾಲೂಕ ಕಾರ್ಯದರ್ಶಿ ಸಾ: ಟೀಚರ ಕಾಲೋನಿ ಜೇವರ್ಗಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ ದೂರಿನ ಸಾರಂಶವೇನೆದರೆ;  ದಿನಾಂಕ; 01/12/2017 ರಂದು ಮದ್ಯಾಹ್ನ ಬೆಳಗ್ಗೆ  11-30 ಘಂಟೆಯ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತ ಈಶ್ವರ ತಂದೆ ಕಲ್ಲಪ್ಪ ಹಿಪ್ಪರಗಿ ಇಬ್ಬರು ಕೂಡಿ ಜೇವರ್ಗಿ ಪಟ್ಟಣದ ಎಪಿಎಮ್ಸಿ ಹತ್ತಿರ ಹೊಟೇಲದಲ್ಲಿ ಕುಳಿತುಕೊಂಡು ನನ್ನ ಸ್ಕ್ರೀನ್ಟಚ್ಮೊಬೈಲ್ಸ್ಯಾಮಸಂಗ ಜೆ-7 ನೇದ್ದರಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನೋಡುವಾಗ ರಿಯಾಜ ಅಹ್ಮದ್ಎನ್ನುವವನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ದಲ್ಲಿ ತನ್ನ ಫೇಸ್ಬುಕ್ ಖಾತೆಯ ಮೂಲಕ ಶ್ರೀರಾಮ ಸೇನಾ ಸಂಸ್ಥಾಪಕ ಅದ್ಯಕ್ಷರಾದ ಶ್ರೀ ಪ್ರಮೋದ ಮುತಾಲಿಕ ಇವರ ಮುಖವನ್ನು ನಾಯಿಯ ದೇಹದ ಭಾವಚಿತ್ರದ ಮುಖದ ಭಾಗಕ್ಕೆ ಅಂಟಿಸಿ ಸಿದ್ದಪಡಿಸಿ ಇವನಂತಹ ಕೋಟಿ ನಾಯಿಗಳು ಬಂದರು ಮುಸ್ಲಿಂರ ಒಂದು ಕೂದಲು ಅಲ್ಲಾಡಿಸಲು ಸಾದ್ಯವಿಲ್ಲ. ಇವ್ನಿಗೆ ಮುಸ್ಲಿಂರ ಕಕ್ಕ ನಕ್ಕದಿದ್ದರೆ ನಿದ್ದೇನೆ ಬರಲ್ಲ, ಗಾಂಡು ಮೂತ್ರಲೀಕ್ಈತನ ಮೊಗಕ್ಕೆ ಎಲ್ಲರೂ ಉಚ್ಚೆ ಒಯ್ಯಿರಿ ಥೂ.... ಎಂದು ಮತ್ತು ಹುಚ್ಚು ನಾಯಿ ಕಂಡರೆ ಕಲ್ಲು ಎಸೆದು ಓಡಿಸಿ, ಮಂಗಳೂರಿನಲ್ಲಿ ಮುಸ್ಲಿಂರ ಬಗ್ಗೆ ಮತ್ತೆ ಹುಚ್ಚು ಹಿಡಿದು ಬೊಗಲಿದೆ ನಾಯಿ ಮುತಾಲಿಕಎಂದು ಫೇಸ್ಬುಕ್ದಲ್ಲಿ ಹರಿಬಿಟ್ಟು ಹಿಂದು ದರ್ಮಕ್ಕೆ ಸವಾಲೆಸೆದು ಹಿಂದು ಧರ್ಮದ ಜನರ ಭಾವನೆಗಳನ್ನು ಕೆರಳಿಸಿ ಅಪಮಾನ ಮಾಡಿ & ನಮ್ಮ ಹಿಂದು ಪರ ಸಂಘಟನೆಯ ನಾಯಕನ ಸಾಮಾಜಿಕ ಘನತೆಯನ್ನು ಮತ್ತು ಸ್ಥೈರ್ಯವನ್ನು ಕುಗ್ಗಸಿ ಬೌದ್ದಿಕ ಚಾರಿತ್ರ್ಯವನ್ನು ಮತ್ತು ವ್ಯಕ್ತಿಯ ಘನತೆಯನ್ನು ಕುಗ್ಗಿಸುವ ಅವರ ವೃತ್ತಿ ಜೀವನವನ್ನು ಹಾಳು ಮಾಡುವ ಉದ್ದೇಶದಿಂದ ದೇಹವನ್ನು ಅಸಹ್ಯಕರವಾಗಿ ಸಿದ್ದಪಡಿಸಿ ಚಿತ್ರಿಸಿ ಅಪಮಾನ ಮಾಡಿದ್ದು, ಅಲ್ಲದೆ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಮತ್ತು ಕೋಮು ಗಲಬೆ ಉಂಟಾಗುವಂತೆ ಪ್ರಚೋದನೆ ನೀಡಿದ್ದು ಇರುತ್ತದೆ. ಬಗ್ಗೆ ನಾನು ನಮ್ಮ ಸಂಘಟನೆಯವರೊಂದಿಗೆ ವಿಚಾರಿಸಿಕೊಂಡು ಇಂದು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿರುತ್ತೆನೆ. ಕಾರಣ ಶ್ರೀರಾಮ ಸೇನಾ ಸಂಸ್ಥಾಪಕ ನಾಯಕರಾದ ಶ್ರೀ ಪ್ರಮೊದ ಮುತ್ತಾಲಿಕ ಇವರ ಮುಖದ ಬಾವ ಚಿತ್ರವನ್ನು ನಾಯಿ ದೇಹದ ಬಾವ ಚಿತ್ರದ ಮುಖದ ಭಾಗಕ್ಕೆ ಅಂಟಿಸಿ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲ ತಾಣದಲ್ಲಿ ಬಿತ್ತರಿಸಿ ಅಪಮಾನ ಮಾಡಿ ಹಿಂದು ಧರ್ಮದ ಸ್ವಾಸ್ತ್ಯವನ್ನು ಹಾಳು ಮಾಡಿದ್ದಲ್ಲದೆ ಹಿಂದು ಜನರ ಬಾವನೆಗಳನ್ನು ಕೆರಳಿಸಿದ ರಿಯಾಜ ಅಹ್ಮದ್ಇತನನ್ನು ಪತ್ತೆ ಮಾಡಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ನೀಡಿದ ದೂರಿನ ಮೇರೆಗೆ ಠಾಣೆ ಗುನ್ನೆ ನಂ: 333/2017 ಕಲಂ; 153 (ಬಿ) ಐಪಿಸಿ ಮತ್ತು ಕಲಂ 66, ಮಾಹಿತಿ ತಂತ್ರಜ್ಞಾನ ಕಾಯ್ದೆ 2008 (.ಟಿ ಆಕ್ಟ್‌) ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ಬಗ್ಗೆ ವರದಿ ಇದೆ.
¥sÀgÀºÀvÁ¨ÁzÀÀ ಠಾಣೆ : ¢£ÁAPÀ 01/12/2017 gÀAzÀÄ 7.00 ¦.JªÀÄzÀ ¸ÀĪÀiÁjUÉ ¹Gà£ÀÆgÀ - vÁqÀvÉÃUÀ£ÀÆgÀ gÉÆÃr£À ªÉÄÃ¯É ¸ÉƯÁgÀ ¥ÁèlzÀ 02 Q«Ä CAvÀgÀzÀ°è ¦üAiÀiÁð¢zÁgÀgÀ ªÀÄUÀ£ÁzÀ ¤wñÀ FvÀ£ÀÄ ZÀ¯Á¬Ä¸ÀÄwÛzÀÝ ªÉÆmÁgÀ ¸ÉÊPÀ® £ÀA PÉJ-32 E¹-9629 £ÉÃzÀÝ£ÀÄß AiÀiÁªÀÅ zÉÆÃ C¥ÀjavÀ ªÁºÀ£ÀzÀ ¸ÀªÁgÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀ ªÀÄvÀÄÛ C®PÀëöåvÀ£À ¢AzÀ ZÀ¯Á¬Ä¹PÉÆAqÀÄ §AzÀÄ rQÌ¥Àr¹ ಬಗ್ಗೆ ವರಿದಿ ಇರತ್ತದ.
C¥sÀd®¥ÀÆgÀ oÁuÉ : ದಿನಾಂಕ 02-12-2017 ರಂದು 2:15 ಪಿ ಎಮ್ ಕ್ಕೆ ನಮ್ಮ ಠಾಣೆಯ ಅರವಿಂದ ಪಿಸಿ-501 ರವರು ಎರಡು ಜನ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿಯ ಸಾರಾಂಶವೇನೆಂದರೆ ದಿನಾಂಕ 02-12-2017 ರಂದು 2:00 ಪಿಎಮ್ ಕ್ಕೆ ಅಫಜಲಪೂರ ಪಟ್ಟಣದಲ್ಲಿ ಪೇಟ್ರೊಲಿಂಗ ಮಾಡುತ್ತಾ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದಾಗ, ಇಬ್ಬರು ವ್ಯೆಕ್ತಿಗಳು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಯುವುದು ಅಸಭ್ಯ ರೀತಿಯಿಂದ ವರ್ತಿಸುವುದು ಹಾಗೂ ಒದರಾಡುವುದು ಕೂಗಾಡುವುದು ಮತ್ತು ಸಾರ್ವಜನಿಕರಿಗೆ ನಾವು ರೌಡಿಗಳು ಇದ್ದೆವೆ ನಮಗೆ ಎದುರು ಹಾಕಿಕೊಂಡರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಎಂದು ಸಾರ್ವಜನಿಕರಿಗೆ ಹೆದರಿಸುತ್ತಾ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದರಿಂದ ಸದರಿಯವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 1) ಕಾಸಿಮಸಾಬ ತಂದೆ ಜಾಫರಸಾಬ ಚಂದನ್ ವಯ|| 35 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ 2) ಬಸವರಾಜ ತಂದೆ ಸಂಗಪ್ಪ ಚಿಂಚನಸೂರ ವಯ|| 55 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಚಿಂಚೋಳಿ ತಾ|| ಅಫಜಲಪೂರ ಅಂತಾ ಏರು ಧ್ವನಿಯಲ್ಲಿ ಹೇಳಿದರು. ಸದರಿಯವರನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ ಪುನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಹಾಗೂ ಪಟ್ಟಣದ ಜನರಿಗೆ ತೊಂದರೆಯಾಗುತ್ತಿದ್ದರಿಂದ ಮತ್ತು ಸದರಿಯವರಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗುವ ಸಂಭವ ಇರುವುದರಿಂದ ಹಾಗು ಸದರಿಯವರು ನಮ್ಮ ಈ ಹಿಂದೆ ಅಕ್ರಮ ನಾಡ ಪಿಸ್ತೂಲುಗಳನ್ನು ಇಟ್ಟುಕೊಂಡ ಪ್ರಕರಣದಲ್ಲಿ ಆರೋಪಿತರಾಗಿರುವುದರಿಂದ ಸದರಿಯವರನ್ನು ಹಿಡಿದುಕೊಂಡು ಠಾಣೆಗೆ 2:15 ಪಿ ಎಮ್ ಕ್ಕೆ ಬಂದು ಸದರಿಯವರ ವಿರುದ್ದ ಕಾನೂನು ಕ್ರಮ ಜರೂಗಿಸಲು ವರದಿ ನೀಡಿದ್ದರ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರಿದಿ ಇರತ್ತದ.
±ÀºÁ¨ÁzÀ £ÀUÀgÀ oÁuÉ : ದಿನಾಂಕ: 02/12/2017 ರಂದು 6-00 ಗಂಟೆಗೆ ಸರಕಾರಿ ಆಸ್ಪತ್ರೆ ಶಹಾಬಾದನಲ್ಲಿ ಶ್ರೀಮತಿ ಸವಿತಾ ಗಂಡ ಚರಣಸಿಂಗ ಸಾ: ಸಂಜಯಗಾಂಧಿ ಚೌಕ ರೈಲ್ವೆ ಕಾಲೋನಿ ಇವರ ಪಿರ್ಯಾದಿ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಂಶವೆನೆಂದರೆ ನನ್ನ ತಮ್ಮನಾದ ಗೊನೇಶ ತಂದೆ ಇಂದ್ರಪಾಲ ವಾಲ್ಮಿಕಿ ವಯಾ: 27 ವರ್ಷ ಇತನು ದಿನಾಂಕ: 29/11/2017 ರಂದು ಮುಂಜಾನೆ 11-30 ಗಂಟೆಗೆ ನಾನು ಪಾರ್ಟಿ ಮಾಡಬೇಕಿದೆ ಅಂತಾ ಮನೆಯಿಂದ ಹೋದವನು ಮರಳಿ ವಾಪಸ ಬರದೆ ಇರುವುದರಿಂದ ಎಲ್ಲಾರೂ ಇಲ್ಲಿವರಿಗೆ ಹುಡುಕಾಡಲು ಸಿಕ್ಕಿರುವುದಿಲ್ಲಾ ಇಂದು ಮದ್ಯಾಹ್ನ ಗೊಳಾ (ಕೆ) ಗ್ರಾಮದ ಕಾಗಿಣಾ ನದಿಯಲ್ಲಿ ಒಂದು ಗಂಡಸು ಮೃತ ದೇಹ ಇದೆ ಗೊತ್ತಾಗಿ ಹೋಗಿ ನೋಡಲಾಗಿ ನನ್ನ ತಮ್ಮನದೆ ಇದ್ದು ನಮ್ಮ ತಮ್ಮನ ಮರಣದಲ್ಲಿ ಸಂಶಯಾವಿರುತ್ತದೆ. ಕಾರಣ ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ನೀಡಿದ ಪಿರ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 6-30 ಪಿ ಎಮ್ ಕ್ಕೆ ಬಂದು ಠಾಣಾ ಯು.ಡಿ ಅರ್ ನಂಬರ 15/2017 ಕಲಂ 174 (ಸಿ) ಸಿ.ಅರ್.ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರಿದಿ ಇರತ್ತದ.