POLICE BHAVAN KALABURAGI

POLICE BHAVAN KALABURAGI

14 October 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 13-10-2017 ರಂದು ಮೇಳಕುಂದಾ (ಬಿ) ಗ್ರಾಮದಲ್ಲಿ ರಸ್ತೆಯ ಮೇಲಿನ ಮಳೆ ನೀರಿನ ಸಂಬಂಧ 1) ಶಾಂತಲಿಂಗಪ್ಪ ತಂದೆ ಚೆನ್ನಣ್ಣ ಡೆಂಘಿ 2) ಶಿವಲಿಂಗಪ್ಪ ತಂದೆ ಚೆನ್ನಣ್ಣ ಡೆಂಘಿ 3) ರಾಜು ತಂದೆ ಮಹಾಂತಪ್ಪ ಡೆಂಘಿ 4) ಪ್ರಭು @ ಪರಮಾನಂದ ತಂದೆ ಶಿನಗಪ್ಪ ಗೌನಳ್ಳಿ  5) ಬಸವರಾಜ ತಂದೆ ಲಕ್ಷ್ಮಣ ಗೌನಳ್ಳಿ ಸಾಃ ಎಲ್ಲರೂ ಮೇಳಕುಂದಾ (ಬಿ) ಗ್ರಾಮ ತಾ.ಜಿಃ ಕಲಬುರಗಿ ರವರು ಶಾಮರಾಯ ತಂದೆ ಶಿವರಾಯ ಒಡೆಯವರ ಇತನೊಂದಿಗೆ ಜಗಳ ಮಾಡುತ್ತಿದ್ದಾಗ ಫಿರ್ಯಾದಿದಾರರು ಜಗಳ ಬೀಡಿ ಸಲು ಹೋದಾಗ ಆರೋಪಿತ ರೇಲ್ಲರೂ ಕೂಡಿಕೊಮಡು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು , ಹೊಡೆ ಬಡೆ ಮಾಡಿ ಜಾತಿ ನಿಂದನೆ ಮಾಡಿದಲ್ಲದೆ ಜೀವದ ಭೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಮಲ್ಲಿಕಾಜರ್ುನ ತಂದೆ ಧರ್ಮಣ್ಣ ಕೋಟಿ ಸಾಃ ಮೇಳಕುಂದಾ(ಬಿ) ತಾ.ಜಿಃ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ :ದಿನಾಂಕ 13-10-2017 ರಂದು ಮೇಳಕುಂದಾ (ಬಿ) ಗ್ರಾಮದಲ್ಲಿ ರಸ್ತೆಯ ಮೇಲಿನ ಮಳೆ ನೀರಿನ ಸಂಬಂಧ ಮಹಾದೇವಪ್ಪ ಒಡೆಯರ ಸಂಗಡ 07 ಜನರು ಸಾಃ ಎಲ್ಲರೂ ಮೇಳಕುಂದಾ(ಬಿ) ರವರು  ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ಶ್ರೀ ಬಸವರಾಜ ತಂದೆ ಲಕ್ಷ್ಮಣ ಉದನೂರ ಸಾಃ ಮೇಳಕುಂದಾ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 12-10-2017 ರಂದು ರಾಷ್ಟ್ರಿಯ ಹೆದ್ದಾರಿ 218ರ ಶಹಾಭಾದ ಕ್ರಾಸ ದಾಟಿ ಮುಂದೆ ರೊಡಿನ ಮೇಲೆ ಕಾರ ನಂ ಕೆಎ-32 ಪಿ-06/86 ನೆದ್ದರ ಚಾಲಕನು ತನ್ನ ಕಾರನ್ನು  ಅತೀ ವೇಗ ಮತ್ತು ಅಲಕ್ಷ್ಯತ ನದಿಂದ ಚಲಾಯಿಸಿಕೊಮದು ಬಂದು ಫಿರ್ಯಾದಿದಾರರ ಮೋಟಾರ ಸೈಕಲ ನಂ ಕೆಎ-28 ಇಎನ್-4146 ನೆದ್ದಕ್ಕೆ ಅಪಘಾತಪಡಿಸಿರುತ್ತಾಶನೆ ಅಂತಾ ಶ್ರೀ ಮಲ್ಲಪ್ಪ ತಂದೆ ಗೊಲ್ಲಾಳಪ್ಪ ಸಾಃ ಯಂಕಂಚಿ ತಾಃ ಸಿಂದಗಿ ಜಿಃ ವಿಂಯಜಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

13 October 2017

KALABURAGI DISTRICT REPORTED CRIMES

ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಭೌರಮ್ಮ ಗಂಡ ಈರಪ್ಪ ಹಸಗಿ ಸಾ: ಮಾಶಾಳ ಇವರ ಮಗಳಾದ ನಿಂಗಮ್ಮ ಇವಳಿಗೆ ಸುಮಾರು 02 ವರ್ಷಗಳ ಹಿಂದೆ ಬಗಲೂರ ಗ್ರಾಮದ ಪ್ರಕಾಶ ತಂದೆ ಶಂಕ್ರೆಪ್ಪ ಮಾದರ ಇತನೊಂದಿಗೆ ಮದುವೆ ಮಾಡಿಕೊಟಿದ್ದು. ಈಗ ಒಂದುವರೆ ವರ್ಷದಿಂದ ನನ್ನಮಗಳು ವಿಚಿತ್ರವಾಗಿ ವರ್ತನೆ ಮಾಡುವುದರಿಂದ ನನ್ನ ಮಗಳನ್ನು ನನ್ನ ಮನೆಯಲ್ಲಿ ಇಟ್ಟಿಕೊಂಡಿದ್ದು ನನ್ನ ಮಗಳು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 11-10-2017 ರಂದು ಮಧ್ಯಾಹ್ನ 01:30 ಗಂಟೆಗೆ ಮನೆಯಲ್ಲಿದ್ದ ಹೇನಿನ ಪುಡಿ ಸೇವನೆ ಮಾಡಿದ್ದು ಅವಳಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಫಲಕಾರಿ ಯಾಗದೆ ದಿ: 11-10-2017 ರಂದು ರಾತ್ರಿ 09:30 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 11-10-2017 ರಂದು ಬೆಳಗ್ಗೆ 10.30 ಗಂಟೆಯ ಸುಮಾರಿಗೆ ನಾನು ಭೋಗೆಶ್ವರ ಶಾಲೆಗೆ ಬಂದು ನನ್ನ ಮಗನಿಗೆ ಊಟದ ಡಬ್ಬಿ ಕೊಟ್ಟು ಮರಳಿ ಮನೆಗೆ ಹೋಗುವ ಕುರಿತು ಬೆಳಗ್ಗೆ ಸಂತೋಷ ಕಾಲೋನಿ ಕ್ರಾಸ ಹತ್ತಿರ ಬರುತ್ತಿದ್ದಾಗ ನನ್ನ ಎದರುಗಡೆಯಿಂದ ನನ್ನ ದೊಡ್ಡಪ್ಪನ ಮಗಳಾದ ಗೌರಿ ಇವಳ ಗಂಡ ಅಣ್ಣಪ್ಪ ಮತ್ತು ಅಣ್ಣಪ್ಪನ ಅಣ್ಣನಾದ ಅಶೋಕ ಇಬ್ಬರು ಕೂಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಅವರಲ್ಲಿ ಅಣ್ಣಪ್ಪ ಇತನು ಭೋಸಡಿ ಮಗನೆ ನಿಮ್ಮ ವಯಸ್ಸಾದ ತಂಗಿಗೆ ನನಗೆ ಕೊಟ್ಟು ಮದುವೆ ಮಾಡಿದ್ದಿರಿ ಈಗ ಅವಳಿಗೆ ಕರೆದುಕೊಂಡು ಹೋಗು ಅಂತಾ ನನಗೆ ದಬಾಯಿಸುತ್ತಿರಿ ರಂಡಿ ಮಕ್ಕಳೆ ನಿನಗೆ ಇವತ್ತು ಜೀವಂತ ಬಿಡುವದಿಲ್ಲಾ ಸೂಳಿ ಮಗನೆ ಅಂತಾ ಬೈಯುತ್ತಾ ತನ್ನ ಕೈ ಮುಷ್ಠಿಮಾಡಿ ನನ್ನ ಎಡಗಣ್ಣಿನ ಮೇಲೆ ಎದೆಗೆ ಮತ್ತು ಮುಖದ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ಅಶೋಕ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡುತ್ತಿದ್ದು ಸದರಿ ಜಗಳವನ್ನು ನೋಡಿ ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿದ್ದ ನಮ್ಮ ಅತ್ತೆ ಭಾಗಿರಥಿ ಅಳಿಯ ಸಂತೋಷ ಇಬ್ಬರೂ ಬಂದು ಯಾಕೆ ರಸ್ತೆಯ ಮೇಲೆ ಜಗಳ ಮಾಡಿಕೊಳ್ಳುತ್ತಿರಿ ಮನೆಗೆ ಹೋಗಿ ಮಾತಾಡಿ ಅಂತಾ ಹೇಳಿದ್ದು ಆಗ ಅಣ್ಣಪ್ಪಾ ಇತನು ರಂಡಿ ಮಗನಿಗೆ ಬಿಡುವದಿಲ್ಲಾ ಇವನ ಸಂಗಡ ಏನು ಮಾತನಾಡುವದು ಇದೆ ಅಂತಾ ಬೈಯುತ್ತಾ ತನ್ನ ತಲೆಯಿಂದ ನನ್ನ ತಲೆಗೆ ಜೋರಾಗಿ ಗುದ್ದಿದ್ದು ಆಗ ನನಗೆ ಕಣ್ಣಿಗೆ ಕತ್ತಲೆ ಬಂದ ಹಾಗೆ ಆಗಿ ಅಲ್ಲಿಯೇ ಕುಸಿದು ಬಿದ್ದಿದ್ದು ನಾನು ಬಿದ್ದಿರುವದನ್ನು ನೋಡಿ ಅಣ್ಣಪ್ಪಾ & ಅಶೋಕ ಇಬ್ಬರೂ ನನಗೆ ಹೊಡೆಯುವದನ್ನು ಬಿಟ್ಟು ಅಲ್ಲಿಂದ ಹೋಗಿದ್ದು ಇರುತ್ತದೆ. ನಂತರ ನಮ್ಮ ಅತ್ತೆ ಭಾಗಿರಥಿ ಅಳಿಯ ಸಂತೋಷ ಇಬ್ಬರೂ ಕೂಡಿಕೊಂಡು ನನಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ಶ್ರೀ ವೈಜನಾಥ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ.ವಿಜಯಲಕ್ಷ್ಮೀ ಗಂಡ ಪ್ರಲ್ಹಾದರಾವ ಕುಲಕರ್ಣಿ  ಇವರ ಹೆಸರನಿಂದ ನಮ್ಮ ಗ್ರಾಮದಲ್ಲಿ ರಾಜಶೇಖರ ತಂದೆ ಶಿವಪುತ್ರಪ್ಪ ಬುಜುರ್ಕೆ ಇವರ ಕೃಷಿ ಜಮೀನು  ಸರ್ವೆೇ ನಂ-58/6, 4 ಎಕರೆ 7 ಗುಂಟೆ ನೇದ್ದನ್ನು ಖರಿದಿಸಿ ಅವರಿಗೆ ಕೊಡಬೇಕಾದ ಸಂಪೂರ್ಣ ಹಣವನ್ನು ಕೊಟ್ಟು ಆಳಂದ ಉಪ-ನೊಂದಣಿ ಅಧಿಕಾರಿಗಳ ಕಛೇರಿಯಲ್ಲಿ ಖರದಿ ಪತ್ರದ ಮೂಲಕ ನೊಂದಣಿ ಮಾಡಿದ್ದು ಇರುತ್ತದೆ. ನಂತರ ರಾಜಶೇಖರ ಈತನ  ತಾಯಿ ಚಂದಮ್ಮ ಗಂಡ ಶಿವಪುತ್ರಪ್ಪ, ಅಕ್ಕ ಪಾರ್ವತಿ ಮತ್ತು ಅಣ್ಣ ಸಿದ್ದಾರೂಢ ಇವರುಗಳು ಆಳಂದ ಸಿವಿಲ್ ನ್ಯಾಯಲಯದಲ್ಲಿ ಸದರಿ ಆಸ್ತಿಯಲ್ಲಿ ತಮ್ಮ ಪಾಲು ಬರುತ್ತದೆ ಅಂತಾ ದಾವೆಯನ್ನು ಹಾಕಿದ್ದು ಅದರ ಓ.ಎಸ್.ನಂ-37/2017 ಇದ್ದು ಸದ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. ಸದರಿ ಹೊಲವನ್ನು ನಾವು ಊರಿನಲ್ಲಿನ ಪ್ರಮುಖರ ಮತ್ತು ರಾಜಶೇಖರನ ಸಂಬಂಧಿಕರ ಸಮಕ್ಷಮದಲ್ಲಿ ಎಲ್ಲರ ಒಪ್ಪಿಗೆಯಂತೆ ಖರಿದಿಸಿದ್ದು ಹೊಲವನ್ನು ನಮ್ಮ ಕಬ್ಜಗೆ ನೀಡಿರುತ್ತಾರೆ. ಸದರಿ ಹೊಲವನ್ನು ಸೊಸೆ ಹೆಸರಿಗೆ ನೊಂದಣಿಯಾಗಿದ್ದು ಮುಟ್ಯೇಷನ ಬಾಕಿ ಇರುತ್ತದೆ. ಹೊಲದ ಸಂಪೂರ್ಣ ಹಣವನ್ನು ನೀಡಿ ನಮ್ಮ ಕಬ್ಜಗೆ ತಗೆದುಕೊಂಡ ನಂತರ ಇಲ್ಲಿಯವರೆಗೆ ನಮ್ಮ ಹೊಲದಲ್ಲಿ ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಬಂದು ಜೂನ2017 ರಲ್ಲಿ ನಮ್ಮ ಹೊಲದಲ್ಲಿ ಎಳ್ಳನ್ನು ಬಿತ್ತನೆ ಮಾಡಿ ಕಾಲಕಾಲಕ್ಕೆ ಕಸ ತಗೆದು ಮತ್ತು ಇತರೆ ಚಟುವಟಿಗಳನ್ನು ಮಾಡಿಕೊಂಡು ಬಂದಿರುತ್ತೇನೆ. ದಿನಾಂಕ 09-10-2017 ರಂದು ನಾನು ನನ್ನ ಮಗ ಪ್ರಲ್ಹಾದ ಈತನ ಯೋಗಕ್ಷೇಮ ವಿಚಾರಿಸಿಕೊಂಡು ಬರುವುದಕ್ಕಾಗಿ ಬೆಳಿಗ್ಗೆ ಕಲಬುರಗಿಗೆ ಹೋಗಿರುತ್ತೇನೆ, ನಂತರ ದಿನಾಂಕ:10-10-2017 ರಂದು ಸಾಯಂಕಾಲ 7-00 ಗಂಟೆಗೆ ಊರಿಗೆ ಬಂದಿರುತ್ತೇನೆ. ನಾನು ಊರಿಗೆ ಬಂದು ದಿನಾಂಕ: 11-10-2017  ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ಹೊಲಕ್ಕೆ ಹೋಗಿ ನೋಡಲಾಗಿ ಕಟಾವಿಗೆ ಸಿದ್ದವಿದ್ದ ಎಳ್ಳಿನ ಬೆಳೆಯನ್ನು ಯಾರೋ ಕಟಾವು ಮಾಡಿಕೊಂಡು ಹೋಗಿರುತ್ತಾರೆ. ಈ ವಿಷಯ ಬಗ್ಗೆ ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುವ ಲಾಲಸಾಬ್ ಲದಾಫ್ ಇವರಿಗೆ ವಿಚಾರಿಸಲಾಗಿ ದಿನಾಂಕ:09-10-2017 ರಂದು ಬೆಳಿಗ್ಗೆ 10-30 ಗಂಟೆಯಿಂದ ಸಾಯಂಕಾಲ 5-00 ಗಂಟೆ ಅವಧಿಯಲ್ಲಿ ರಾಜಶೇಖರ, ಚಂದಮ್ಮ, ಸಿದ್ದಾರೂಢ ಇವರುಗಳು ಬಂದು ಬೆಳೆಯನ್ನು ಕಟಾವುಮಾಡಿಕೊಂಡು ಅವರ ಸಂಬಂಧಿಕರಾದ ಸಿದ್ದಾರೂಢ ಬುಜುರ್ಕೆ ಇವರ ಟ್ರ್ಯಾಕ್ಟರನಲ್ಲಿ ತಗೆದುಕೊಂಡು ಹೋಗಿ ತಮ್ಮ ಮನೆಯ ಅಂಗಳದಲ್ಲಿ ಇಟ್ಟಿಕೊಂಡಿರುತ್ತಾರೆ. ನಾನು ತಡೆಯಲು ಹೋದರೆ ನನಗೆ ಹೊಡೆಬಡಿ ಮಾಡಬಹುದು ಅಂತಾ ನಾನು ಸುಮ್ಮನಿದ್ದು ನೀವು ಬಂದ ನಂತರ ನಿಮಗೆ ವಿಷಯ ತಿಳಿಸಿರುತ್ತೇನೆ ಅಂತಾ ಹೇಳಿದನು. ನಾನು ರಾಜಶೇಖರ ಇವನ ಮನೆಯ ಹತ್ತಿರ ಹೋಗಿ ನೋಡಿ ಖಚಿತ ಪಡಿಸಿಕೊಂಡು ಅವನಿಗೆ ವಿಚಾರಿಸಲಾಗಿ ನಾವೆ ನಿಮ್ಮ ಎಳ್ಳನ್ನು ಕಟಾವ ಮಾಡಿಕೊಂಡು ಬಂದಿರುತ್ತೇವೆ ಅಂತಾ ತಿಳಿಸಿರುತ್ತಾನೆ. ದಿನಾಂಕ:09-10-2017 ರಂದು ಬೆಳಿಗ್ಗೆ 10-30 ಗಂಟೆಯಿಂದ ಸಾಯಂಕಾಲ 5-00 ಗಂಟೆ ಅವಧಿಯಲ್ಲಿ ರಾಜಶೇಖರ, ಚಂದಮ್ಮ, ಸಿದ್ದಾರೂಢ ಇವರುಗಳು ಅಕ್ರಮವಾಗಿ ನಮ್ಮ ಹೊಲಕ್ಕೆ ಪ್ರವೇಶಮಾಡಿ ನಮ್ಮ ಎಳ್ಳಿನ ಬೆಳೆಯನ್ನು ಕಟಾವು ಮಾಡಿ ಕಳ್ಳತನಮಾಡಿ ಸುಮಾರು 5 ಚೀಲ್ ಅಂದಾಜು ಬೆಲೆ 24000/- ರೂಗಳನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 07-10-2017  ರಂದು 8 ಪಿಎಮ ದಿಂದ ದಿನಾಂಕ 08-10-2017 ರಂದು 6 ಎಎಮ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಹುಣಸಿಹಡಗಿಲ ಗ್ರಾಮದ ಶ್ರೀ ಅಲ್ಲಮ್ಮ ಪ್ರಭು ದೇವಸ್ಥಾನದ ಗುಡಿಯ ಹುಂಡಿ ಯನ್ನು ಕಳವು ಮಾಡಿಕೊಂಡು ಹೋಗಿದ್ದು ಪ್ರತಿ ವರ್ಷ ಯುಗಾದಿ ಸಮಯದಲ್ಲಿ ಗಲ್ಲಾ ಪೆಟ್ಟಿಗೆ ತೆರೆದಾಗ ಅದರಲ್ಲಿ 20 ರಿಂದ 22 ಸಾವಿರ ರೂಪಾಗಳು ಇರುತ್ತಿದ್ದು ಸದರಿ ಗಲ್ಲಾ ಪೆಟ್ಟಿಗೆಯಲ್ಲಿ ಅಂದಾ ಜು 15000/- ಸಾವಿರ ರೂಪಾ ಯಿಗಳು ಇರಬಹುದು. ಅಂತಾ ಶ್ರೀ ರೊಮಕೋಟಿ ತಂದೆ ಶಿವಶರಣಪ್ಪ ಒಡೆಯರ ಸಾ; ಹುಣಸಿಡಗಿಲ ತಾ: ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 7-10-2017 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಸುಲ್ತಾನಪೂರ ರೋಡಿನ ನಾಗಲಿಂಗೇಶ್ವರ ಕಾಲೂನಿಯ ಮನೆಯಲ್ಲಿ ಊಟ ಮಾಡಿಕೊಂಡು ತಮ್ಮ ಗೆಳೆಯರದು ಯಾರದೋ ಪೋನ ಬಂದಿದ್ದು ಆಗ ಆಫೀಸಗೆ ಹೋಗುತ್ತೇನೆ ಅಂತಾ ಬ್ಯಾಗ ತೆಗೆದುಕೊಂಡು ತಮ್ಮ ಮೋಟಾರ ಸೈಕಲ್ ನಂ.ಕೆ.ಎ.32 ಇಸಿ. 6472 ನೆದ್ದರ ಮೇಲೆ ಒಬ್ಬರೆ ಹೋದರು . ಸಾಯಂಕಾಲ  4-30 ಗಂಟೆಯ ಸುಮಾರಿಗೆ ನಮ್ಮ ಮೈದುನ ಗುರುನಾಥ ಇವರು ಮನೆಗೆ ಬಂದಿದ್ದು ಆಗ ನನ್ನ ಗಂಡನಿಗೆ ಫೋನ ಮಾಡಲಾಗಿ ಅವರು ಹೇಳಿದ್ದೇನೆಂದರೆ ಮನೆಯ ಲಾಕರದಲ್ಲಿದ್ದ 6 ಲಕ್ಷ ರೂಪಾಯಿಯನ್ನು ಗುರುನಾಥನ ಕೈಯಲ್ಲಿ ಕೋಡು ಕಾಂಟ್ರ್ಯಾಕ್ಟ ಕೆಲಸ ಹಣ ಕೋಡುವದಿದೆ ಅಂತಾ ಹೇಳಿದರು ಆಗ ನಮ್ಮ ಲಾಕರದಲ್ಲಿದ್ದ 6 ಲಕ್ಷ್ಮ ರೂಪಾಯಿಗಳನ್ನು ನಮ್ಮ ಮೈದುನ ಗುರುನಾಥನ ಕೈಯಲ್ಲಿ ಕೊಟ್ಟೇನು ಆಗ ನನ್ನ ಮೈದುನ ಗುರುನಾಥ ಇವರು ಹಣ ತೆಗೆದುಕೊಂಡು ನಮ್ಮ ಮನೆಯಿಂದ ಮೋಟಾರ ಸೈಕಲ್ ಮೇಲೆ ಹೋದನು .ನಂತರ ಸಂಜೆ 7-00 ಗಂಟೆಯ ಸುಮಾರಿಗೆ ನನ್ನ ಮೈದುನ  ಗುರುನಾಥ ಇವರು ನಮ್ಮ ಮನೆಗೆ ಬಂದಿದ್ದು  ಅಣ್ಣ ಮೊನಪ್ಪಾ ಬಂದಿರುತ್ತಾನೆ  ಹೇಗೆ ಅಂತಾ ಕೇಳದರು ಆಗ ನಾನು ಇನ್ನೂ ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದೆನು. ನಂತರ ಆತನು ತಿಳಿಸಿದ್ದು ಏನೆಂದರೆ ಸಂಜೆ 6-00 ಗಂಟೆಯ ಸುಮಾರಿಗೆ ಬಿದ್ದಾಪುರ ಕಾಲೂನಿಯ ಹನುಮಾನ ಗುಡಿಯ ಹತ್ತಿರ ನನ್ನ ಗಂಡ ಮೋನಪ್ಪಾ ಇವರ ಸಾಹೇಬರ ಕಾರ ಚಾಲಕನ ಕೈಯಲ್ಲಿ 6 ಲಕ್ಷ ರೂಪಾಯಿ ಕೊಡು ಅಂತಾ ಹೇಳಿದಕ್ಕೆ ಅವರ ಕೈಯಲ್ಲಿ ಕೊಟ್ಟಿರುತ್ತೇನೆ ಅಂತಾ ತಿಳಿಸಿದನು. ತದನಂತರ  ರಾತ್ರಿ 10-45 ಗಂಟೆಯ ಸುಮಾರಿಗೆ ನನ್ನ ಗಂಡ ಮೋನಪ್ಪಾ ಇವರು ತಮ್ಮ ಮೋಬಾಯಿಲ್ ನಂ. 9900755619 ನೆದ್ದರಿಂದ ನಮ್ಮ ಮೊಬಾಯಿಲ್ ನಂ. 8105455165 ನೆದ್ದಕ್ಕೆ ಫೋನ ಮಾಡಿ ನಾನು ಬಸವಕಲ್ಯಾಣದಲ್ಲಿ ಇದ್ದು ಸಾಹೇಬರ ಸಂಗಡ ಇರುತ್ತೇನೆ , ಕಲಬುರಗಿಗೆ ಬರುತಿದ್ದೇನೆ ಅಂತಾ ಹೇಳಿದರು ಬರಬಹುದು ಅಂತಾ ಕಾಯಿದರು ಮನೆಗೆ ಬಂದಿರುವದಿಲ್ಲಾ  ದಿನಾಂಕ.    7-10-2017 ರಂದು 11-00 ಎ.ಎಂ.ದಿಂದ  ದಿನಾಂಕ. 9-10-2017 ರಂದು ಇಲ್ಲಿಯವರೆಗೂ ಮನೆಗೆ ಬಂದಿರುವದಿಲ್ಲಾ ಕಾಣೆಯಾಗಿರುತ್ತಾರೆ ಪತ್ತೆಮಾಡಿಕೊಡಬೇಕೆಂದು ದಿನಾಂಕ. 9-10-2017 ರಂದು ತಮ್ಮಲ್ಲಿ ಫಿರ್ಯಾದಿ ನೀಡಿರುತ್ತೇನೆ. ಅದರ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಂ. 345/2017 ಕಲಂ. ಮನುಷ್ಯ ಕಾಣೆಯಾದ  ಬಗ್ಗೆ ಪ್ರಕರಣದಾಖಲಾಗಿದ್ದು ಅಂದಿನಿಂದ  ನನ್ನ ಗಂಡ ಮೋನಪ್ಪಾ ಇವರ ಪತ್ತೆ ಕುರಿತು ನಾನು ಮತ್ತು ನನ್ನ ಮೈದುನ ಗುರುನಾಥ , ಬಸವರಾಜ , ಮತ್ತು ನಮ್ಮ ಗ್ರಾಮದ ಈರಣ್ಣಾ ಮಗಿ , ಶಿವಾನಂದಕಲ್ಲಕೋರೆ , ಶಾಂತಕುಮಾರ ಚಿಡಗುಂಪಿ ಹಾಗೂ ಗುರುಹಾವ ಎಲ್ಲರೂ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾತ್ತಾ ಮತ್ತು ನಮ್ಮ ಸಮ್ಮಂದಿಕರಿಗೂ ಕೂಡಾ ಫೋನ ಮೂಲಕ ಸಂಪಕರ್ಿಸಿಕೋಂಡು ನನ್ನ ಗಂಡನ ಇರುವಿಕೆಯ ಬಗ್ಗೆ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲಾ. ದಿನಾಂಕ. 11-10-2017 ರಂದು ಮತ್ತೆ ನಾವೆಲ್ಲರೂ ನನ್ನ ಗಂಡನ ಪತ್ತೆ ಕುರಿತು ಅವರ ಮಾಹಿತಿಯನ್ನು ಸಂಗ್ರಹಿಸುತ್ತಾ ತಿರುಗಾಡುತ್ತಿರುವಾಗ  ಸಾಯಂಕಾಲ 4-30 ಗಂಟೆಯ ಸುಮಾರಿಗೆ  ಸೈಯದ ಚಿಂಚೋಳೆ ಮತ್ತು ರಿಕ್ಕನ ಆಲೂರ ಕಡೆಯಿಂದ ರೋಡಿಗೆ ಹೋಗಿಬರುವ ಜನರು ಸೈಯದ ಚಿಂಚೋಳಿ ಸೀಮಾಂತರ ಆಲೂರ ರೋಡಿನ ಭೀಮಳ್ಳಿ ಡಿಪೂಗೋಳ ರವರ ಹೊಲದ , ರೋಡಿನ ಸಣ್ಣ ಬ್ರಿಚನ ಸಮೀಪದ ರೋಡನ ಪಕ್ಕದ ತಗ್ಗಿನ ಒಬ್ಬ ಗಂಡು ಮನುಷ್ಯ ಶವ ಬಿದ್ದಿರುತ್ತದೆ  ಅಂತಾ ಜನರು ಮಾತಾಡುವದನ್ನು ಕೇಳಿಕೊಂಡು ಗಾಬರಿಗೊಂಡು ನಾನು ಮತ್ತು ನನ್ನ ಮೈದುನಾಧ ಗುರುನಾಥ , ಬಸವರಾಜ ಹಾಗೂ ನಮ್ಮ ಗ್ರಾಮದ ಗುರುಹಾವ, ಈರಣ್ಣಾ ಮಗಿ ಶಾಂತಕುಮಾರ ಚಿಟಗುಂಪಿ , ಶಿವಾನಂದ ಕಲ್ಲಕೋರೆ ಎಲ್ಲರೂ ಕೂಡಿಕೊಂಡು 5-00 ಗಂಟೆ ಈ ಮೇಲಿನ ಸ್ಥಳಕ್ಕೆ  ಹೋಗಿ ನೋಡಲಾಗಿ ಸದರಿ ಶವವು ಅಂಗಾತವಾಗಿ ಬಿದ್ದಿದ್ದು, ಶವವು ಉಬ್ಬಿದ್ದು ನೋಡಲಾಗಿ ನನ್ನ ಗಂಡ ಮೊನಪ್ಪಾ ಸುತಾರ ಇವರೆದೆ ಶವವಾಗಿದ್ದು , ಅಂದು ದಿನಾಂಕ. 7-10-2017 ರಂದು ನನ್ನ ಗಂಡ ಮನೆಯಿಂದ ಹೋಗುವಾಗ ಧರಿಸಿಕೊಂಡು ಹೋದ  ಬಿಳಶರ್ಟ , ಕಪ್ಪು ಪ್ಯಾಂಟ ಗಳೆ ಇದ್ದವು  ಅವರ ಮುಖ ಮತ್ತು ತಲೆಯ ಭಾಗಕ್ಕೆ ಭಾರವಾದ ಕಲ್ಲಿನಿಂದ ಎತ್ತಿಹಾಕಿದಂತೆ  ಮತ್ತು ಕುತ್ತಿಗೆಯ ಭಾಗಕ್ಕೆ ಗಾಯವಾಗಿ ಯಾರೋ ದುಷ್ಕರಮಿಗಳು ಬಲವಾದ ಕಾರಣದಿಂದ ಕೊಲೆ ಮಾಡಿ ಬಿಸಾಕಿದು ಕಂಡು ಬಂದಿದ್ದು ದೇಹದ ಭಾಗದಿಂದ ರಸ್ಕೀ ಸೋರಿದಂತೆ ಆಗಿದ್ದು ಎರಡು ಕೈಗಳ ತೋಳಿನಿಂದ ಕೆಳ ಭಾಗವು ಮತ್ತು ಬಲಗಾಲೂ ಪಾದ ಅರ್ಧಭಾಗ ಯಾವುದೊ ಪ್ರಾಣಿಗಳು ತಿಂದಂತೆ ಕಂಡು ಬಂದಂತೆ ಇರುತ್ತದೆ. ದಿನಾಂಕ. 7-10-2017 ರಂದು 10-45 ಎ.ಎಂ.ಗಂಟೆಯ ನಂತರ  8-10-2017   ಅವಧಿಯಲ್ಲಿ  ಯಾರೋ ದುಷ್ಕರಮಿಗಳು ಯಾವುದೋ ಬಲವಾದ ಕಾರಣಕ್ಕೆ ಸದರಿ ಸ್ಥಳದಲ್ಲಿ ನನ್ನ ಗಂಡನಿಗೆ ಒಂದು ಭಾರವಾದ ಕಲ್ಲನ್ನು ಆತನ ಮುಖ ಮತ್ತು ತಲೆಯ ಮೇಲೆ ಎತ್ತಿಹಾಕಿ ಮುಖ ವಿರೂಪಗೊಳಿಸಿ ಹಾಗೂ ಇತರೆ ಯಾವುದೋ ರೀತಿಯಿಂದಲೂ ಕೂಡಾ ಕೊಲೆಮಾಡಿ ಶವವನ್ನು ಯಾರಿಗೂ ಕಾಣದಂತೆ ರೋಡಿನ ಪಕ್ಕದ ತಗ್ಗಿನಲ್ಲಿ ಬಿಸಾಗಕಿ ಸಾಕ್ಷಿನಾಶಮಾಡಿದ್ದು  ನನ್ನ ಗಂಡನಿಗೆ ಕೊಲೆ ಮಾಡಿದ್ದ ದುಷ್ರ್ಕಮಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ನಂದಾ ಗಂಡ ಮೋನಪ್ಪಾ ಸುತಾರ ವಿಳಾಸ; ತಾಜಸುಲ್ತಾನಪೂರ ಗ್ರಾಮ ತಾ;ಜಿ;ಕಲಬುರಗಿ ಹಾವ; ನಾಗಲಿಂಗೇಶ್ವರ ಕಾಲೂನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

09 October 2017

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ದತ್ತಪ್ಪಾ ತಂದೆ ನಾಗಪ್ಪ ಅತನುರೇ ಸಾ:ಯಳಸಂಗಿ ತಾ:ಆಳಂದ ಜಿ:ಕಲಬುರಗಿ ಹಾ:ವ: ಖಾದ್ರಿ ಚೌಕ ಹತ್ತಿರ ಸಂತೋಷ ಕಾಲೋನಿ ಕ್ರಾಸ ಕಲಬುರಗಿ ರವರ ತಮ್ಮನಾದ ದಾನಪ್ಪಾ ತಂದೆ ನಾಗಪ್ಪ ಅತನೂರೇ ಇತನು ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾನೆ. ಈಗ 8 ತಿಂಗಳ ಹಿಂದೆ ನನ್ನ ತಮ್ಮನಾದ ದಾನಪ್ಪ ಇತನು ಪೊಲೀಸ ಸಿ.ಇ.ಟಿ ಪರೀಕ್ಷೆ ಕೊಚಿಂಗ ಕ್ಲಾಸಗೆ ಹೋಗುವ ಕುರಿತು ಕಲಬುರಗಿ ನಗರದ ಶಾಹಾ ಬಜಾರದಲ್ಲಿ ಇರುವ ಆರಾಧನಾ ಕಾಲೇಜ ಹತ್ತಿರ ಒಂದು ಬಾಡಿಗೆ ಕೋಣೆ ಮಾಡಿಕೊಂಡು ಇದ್ದನು ಆ ಕೋಣೆಯಲ್ಲಿ ನನ್ನ ತಮ್ಮ ಹಾಗು ನಮ್ಮ ಗ್ರಾಮದ ಸಿದ್ದಲಿಂಗಯ್ಯಾ ತಂದೆ ಸಿದ್ರಾಮಯ್ಯಾ ಮಠಪತಿ, ಮತ್ತು ಸಂದೀಫ ತಂದೆ ಗುಂಡು ಚವ್ಹಾಣ ಮು:ಮಾಡ್ಯಾಳ ತಾಂಡಾ 03 ಜನ ಇರುತ್ತಾರೆ. ನನ್ನ ತಮ್ಮ ಕಲಬುರಗಿ ನಗರದ ರಾಜ ಕೊಚಿಂಗ ಸೆಂಟರಕ್ಕೆ ದಿನಾಲು ಹೋಗಿ ಬರುವುದು ಮಾಡುತ್ತಿದ್ದನು. ಊಟಕ್ಕೆ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದನು.ಈಗ 8 ದಿವಸಗಳ ಹಿಂದೆ ನಮ್ಮೂರಿನ ಪ್ರದೀಪ ತಂದೆ ಬಸವರಾಜ ಕಲಶೆಟ್ಟಿ ಇತನು ನಮ್ಮೂರಿನಿಂದ ಬಂದು ನಮ್ಮ ತಮ್ಮನ ರೂಮಿನಲ್ಲಿಯೇ ಇದ್ದನು. ದಿನಾಂಕ 05/10/2017 ರಂದು ಬೆಳಿಗ್ಗೆ ನಮ್ಮೂರ ಪ್ರದೀಪ ಕಲಶೆಟ್ಟಿ ಇತನು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ನಿನ್ನೆ ದಿನಾಂಕ 04/10/2017 ರಂದು ಮದ್ಯಾಹ್ನ 02:00 ಗಂಟೆ ಸುಮಾರಿಗೆ ನಿಮ್ಮ ತಮ್ಮನಾದ ದಾನಪ್ಪ ಇತನು ರಾಜ ಕೊಚಿಂಗ ಕ್ಲಾಸಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ರೂಮಿಗೆ ಬಂದಿರುವುದಿಲ್ಲಾ. ನಿಮ್ಮ ಮನೆಗೆ ಅಥವಾ ಊರಿಗೆ ಬಂದಿದ್ದಾನೆ ಅಂತಾ ಕೇಳಿದನು ಆಗ ನಾನು ನಮ್ಮ ಮನೆಗೆ ಮತ್ತು ಊರಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತೇನೆ ನಂತರ ನಮ್ಮ ತಮ್ಮನ ಮೋಬೈಲಿಗೆ ಪೋನ ಮಾಡಲಾಗಿ ಸ್ವೀಚ್ ಆಪ್ ಅಂತಾ ಬಂದಿರುತ್ತದೆ ದಿನಾಂಕ:- 05/10/2017 ರಿಂದ ನಿನ್ನೆ ದಿನಾಂಕ: 07/10/2017 ರವರೆಗೆ ನಮ್ಮ ಸಂಬಂದಿಕರ ಮನೆಗಳಲ್ಲಿ ಇತರೇ ಕಡೆಗಳಲ್ಲಿ ಹಾಗು ಆತನ ಗೆಳಯರಿಗೆ ಪೋನ ಮಾಡಿ ವಿಚಾರಿಸಲಾಗಿ ನಮ್ಮ ತಮ್ಮ ಎಲ್ಲಿಯೂ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ನಂತರ ದಿನಾಂಕ:- 07/10/2017 ರಂದು ಮದ್ಯಾಹ್ನ ನಾನು ಮತ್ತು ನನ್ನ ತಮ್ಮನಾದ ಈರಣ್ಣಾ ಕೂಡಿಕೊಂಡು ಕಲಬುರಗಿ ನಗರದ ಚೌಕ ಪೊಲೀಸ ಠಾಣೆಗೆ ಹೋಗಿ ನನ್ನ ತಮ್ಮ ದಾನಪ್ಪ ಅತನೂರೆ ಇತನು ದಿನಾಂಕ:- 04/10/2017 ರಂದು ಮದ್ಯಾಹ್ನ 02:00 ಗಂಟೆಗೆ ಶಹಾ ಬಜಾರದಲ್ಲಿರುವ ತನ್ನ ರೂಮಿನಿಂದ ಕೊಚಿಂಗ ಕ್ಲಾಸಗೆ ಹೋಗುತ್ತೇನೆ ಅಂತಾ ಹೋದವನು  ಇಲ್ಲಿಯವರೆಗೆ ಮರಳಿ ಬಂದಿರುವುದಿಲ್ಲಾ ಅಂತಾ ಈ ಬಗ್ಗೆ ಕೇಸು ದಾಖಲು ಮಾಡಲು ಹೇಳಿರುತ್ತೇವೆ. ಚೌಕ ಪೊಲೀಸ ಠಾಣೆ ಪೊಲೀಸರು ನಿಮ್ಮ ತಮ್ಮನ ಭಾವಚಿತ್ರಗಳನ್ನು ತೆಗೆದುಕೊಂಡು ಬನ್ನಿರಿ ಅಂತಾ ಹೇಳಿದ್ದರಿಂದ್ದ ನಾವು ಮರಳಿ ಬಂದಿದ್ದು  ದಿನಾಂಕ:- 08/10/2017 ರಂದು ಮದ್ಯಾಹ್ನ ಚೌಕ ಪೊಲೀಸ ಠಾಣೆಗೆ ಹೋಗಬೇಕು ಅಂತಾ ಮನೆಯಲ್ಲಿದ್ದಾಗ ಯಾರೋ ಜನರು ಆಳಂದ ಚೆಕ್ಕ ಪೊಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯ ಕಂಪೌಂಡ ಹಿಂದುಗಡೆ ಅಪರಿಚಿತ ಶವ ಬಿದ್ದಿರುತ್ತದೆ ಅಂತಾ ಮಾತನಾಡುತ್ತಿರುವುದು ಕೇಳಿ ನಾನು ಮತ್ತು ನಮ್ಮಗೆ ಪರಿಚಿಯದ ಶ್ರೀಶೈಲ್ ಮೇಲಶೆಟ್ಟಿ ಇಬ್ಬರು ಕೂಡಿಕೊಂಡು ಆಳಂದ ಚೆಕ್ಕ ಪೊಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯ ಕಂಪೌಂಡ ಹಿಂದುಗಡೆ ಬಂದು ತೊಗರಿ ಹೋಲದಲ್ಲಿ ನೋಡಲಾಗಿ ಕೊಳೆತ ಸ್ಥಿತಿಯಲ್ಲಿ ಶವ ಬಿದಿದ್ದು ಸದರಿ ಶವದ ಮೈಮೇಲೆ ಇರುವ ಶರ್ಟ ಮತ್ತು ಬೆಲ್ಟ್ ಹಾಗು ಶವ ನೋಡಲಾಗಿ ಸದರಿ ಶವ ನಮ್ಮ ತಮ್ಮ ದಾನಪ್ಪ ಇತನೆದೇ ಇರುತ್ತದೆ ಅಂತಾ ಗುರ್ತಿಸಿರುತ್ತೇನೆ. ಆತನ ಹೊಟ್ಟೆಯ ಮೇಲಭಾಗದಲ್ಲಿ ಹಾಗು ತಲೆಗೆ ಇತರೇ ಕಡೆಗಳಲ್ಲಿ ಯಾವುದೋ ಹರಿತವಾದ ವಸ್ತುವಿನಿಂದ ಅಥವಾ ಭಾರವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ.          ನನ್ನ ತಮ್ಮನಾದ ದಾನಪ್ಪ ಇತನಿಗೆ ದಿನಾಂಕ:- 04/10/2017 ರಂದು ಮದ್ಯಾಹ್ನ 02:00 ಗಂಟೆಯಿಂದ ದಿನಾಂಕ:- 08/10/2017 ರಂದು ಮದ್ಯಾಹ್ನ 04:00 ಗಂಟೆಯ ಮದ್ಯದ ಅವಧಿಯಲ್ಲಿ ಯಾವುದೋ ದುರುದ್ದೇಶದಿಂದ ಯಾವುದೋ ಕಾರಣಕ್ಕೆ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವವು ತೊಗರಿ ಹೋಲದಲ್ಲಿ ಬಿಸಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾರಣಾಂತಿಕ ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿದ ರೌಟಿಗಳ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 08-10-2017 ರಂದು ಬೆಳಿಗ್ಗೆ 04:00 ಗಂಟೆಗೆ ಅಶೋಕ ನಗರ ಪೊಲೀಸ್ ಠಾಣಾ ಗುನ್ನೆ ನಂ:162/2016 ಕಲಂ 363, 323,506, 392 ಸಂಗಡ 34 ಐಪಿಸಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 46/2017 ಕಲಂ 143,147,323,504, 307 ಸಂಗಡ 149 ಐಪಿಸಿ, ರಾಘವೇಂದ್ರ ನಗರ ಪೊಲೀಸ್ ಠಾಣೆ ಗುನ್ನೆ ನಂ 82/2017 ಕಲಂ 143, 147, 148, 323, 324, 307, 504, 506 ಸಂ/ 149 ಐಪಿಸಿ ಮತ್ತು ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ: 55/2017 ಕಲಂ 143, 147, 148, 307, 324 ಐಪಿಸಿ ಹಾಗೂ ಈ ಪ್ರಸ್ತುತ ಅಶೋಕ ನಗರ ಗುನ್ನೆ ನಂ; 181/2017 ಕಲಂ 143,147,148,323,324, 307 ಸಂಗಡ 149 ಐಪಿಸಿ  ಮತ್ತು ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 15/2017 ಕಲಂ 394 ಐಪಿಸಿ, 44/2017 ಕಲಂ 394 ಐಪಿಸಿ ನೆದ್ದರ ಪ್ರಕರಣದ ಆರೋಪಿತರಾದ 1]ಚೇತನ ತಂದೆ ಚಂದ್ರಕಾಂತ ಹೈಬತ್ತಿ 2] ಡೂಗ ಶಿವ್ಯಾ @ ಶಿವಕುಮಾರ ತಂದೆ ರಾಜು ಹೈಬತ್ತಿ ಇವರು ಕಲಬುರಗಿ ನಗರದ ರಿಂಗ್ ರೋಡ ಹತ್ತಿರ ಇರುವ ಡಬ್ರಾಬಾದ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಮೇಲಿನ ಆರೋಪಿತರು ಅರ್ಧ ಮರ್ಧ ಕಟ್ಟಿದ ಮನೆಯಲ್ಲಿ ವಾಸವಾಗಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಪ್ರಯುಕ್ತ ಪಿಐ ಅಶೋಕ ನಗರವರು ನನಗೆ ನಮ್ಮ ಸಿಬ್ಬಂದಿಯೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಬರುವಂತೆ ನಿರ್ದೇಶನದ ನೀಡಿದ ಪ್ರಯುಕ್ತ ನಾನು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ಪಿಐ ಅಶೋಕ ನಗರ ಮತ್ತು ಅವರ ಸಿಬ್ಬಂದಿಯವರು ಹಾಜರಿದ್ದು ಆರೋಪಿತರು ಇರುವಿಕೆಯ ಬಗ್ಗೆ ಪಿಐ ಅಶೋಕ ನಗರ ಠಾಣೆರವರು ನಮಗೆ ಮನವರಿಕೆ ಮಾಡಿಕೊಟ್ಟು ಬೆಳಿಗ್ಗೆ 05:00 ಗಂಟೆಗೆ ಠಾಣೆಯಿಂದ ಹೊರಟು 5:30 ಎಎಂಕ್ಕೆ ಡಬ್ರಾಬಾದ ಕ್ರಾಸಕ್ಕೆ ಹೋಗಿ ಎರಡು ತಂಡಗಳಾಗಿ ವಿಂಗಡಿಸಿ ಒಂದು ಮಾರ್ಗದಿಂದ ನಾನು ಮತ್ತು ಇನ್ನೊಂದು ಮಾರ್ಗದಿಂದ ಪಿಐ ಅಶೋಕ ನಗರರವರು ಹೋರಟೇವು, ನಾನು ಮತ್ತು ನಮ್ಮ ಸಿಬ್ಬಂದಿ ಆಶ್ರಯ ಕಾಲೋನಿಯಲ್ಲಿ ಆರೋಪಿತರ ಬಗ್ಗೆ ಹುಡುಕಾಡಲಾಗಿ ಸುಮಾರು 7 ಎಎಂಕ್ಕೆ ನಮ್ಮ ಜೀಪು ರೈಲ್ವೆ ಟ್ರ್ಯಾಕ ಬಳಿ ಇರುವ ಆಶ್ರಯ ಕಾಲೋನಿಯ ಒಂದು ಮನೆಯ ಹತ್ತಿರ ನಿಂತಾಗ ಶಿವುಕುಮಾರ @ ಡೂಗಶಿವ್ಯಾ@ಸೈಂಟಿಸ್ಟ್ ತಂದೆ ರಾಜು ಹೈಬತ್ತಿ ಈತನು ಮನೆಯ ಬಲಕ್ಕೆ ಇರುವ ರಸ್ತೆಯಿಂದ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಕುರಿತು ತನ್ನ ಕೈಯಲ್ಲಿರುವ ಮಚ್ಚಿನಿಂದ ನಾನು ಕುಳಿತಿರುವ ಭಾಗದ ಕಡೆಗೆ ಜೀಪಿನ ಮುಂಭಾಗದ ಗ್ಲಾಸಿಗೆ ಬಿಸಿ ಹೊಡೆದಿದ್ದರಿಂದ ಅದರ ರಭಸಕ್ಕೆ ಗ್ಲಾಸ್ ಒಡೆದು ಮಚ್ಚಿನ ಏಟು ನನ್ನ ಎಡಗೈಗೆ ಬಡೆದು ಗಾಯವಾಗಿದ್ದರಿಂದ ನಾನು ಜೀಪಿನ ಬಾಗೀಲು ತೆಗೆದು ಸರ್ವಿಸ ಪಿಸ್ತೂಲದೊಂದಿಗೆ ಕೆಳಗೆ ಇಳಿದು ಅವನಿಗೆ ನೀನು ಪ್ರವೀಣನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿತನು ಇರುತ್ತಿ ನಿನ್ನನ್ನು ದಸ್ತಗಿರಿ ಮಾಡಲು ಬಂದಿರುತ್ತೇವೆ ಅಂತ ಜೋರಾಗಿ ತಿಳಿಸಿದರು ಸಹ ಅವನು ನನಗೆ ನೂಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುತ್ತಾನೆ. ಆಗ ನಾನು ಅವನಿಗೆ ಶರಣಾಗು ಎಂದು ಎಚ್ಚರಿಕೆ ನೀಡಿದರೂ ಸಹ ಅವನು ನಿಲ್ಲದಿದ್ದಾಗ ನನ್ನ ಸರ್ವಿಸ ಪಿಸ್ತೂಲದಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದೆನು. ಆದರೂ ಅವನು ನಿಲ್ಲದೆ ಓಡಿ ಹೋಗಲು ಪ್ರಯತ್ನಿಸಿದ ಆಗ ನಾನು ಅವನನ್ನು ವಶಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಅವನ ಎಡಗಾಲಿಗೆ ಎರಡು ಸುತ್ತು ಗುಂಡು ಹೊಡೆದು ಅವನನ್ನು ವಶಕ್ಕೆ ಪಡೆದುಕೊಂಡಿರುತ್ತೇನೆ, ಅದೇ ಕಾಲಕ್ಕೆ ಆಶ್ರಯ ಕಾಲೋನಿಯ ಎಡಗಡೆ ರಸ್ತೆಯಿಂದ ಪಿಐ ಅಶೋಕ ನಗರ ಮತ್ತು ಅವರ ತಂಡ ಬಂದಿದ್ದು ಅವರು ಬರುವಾಗ ಚೇತನ ಈತನು ಮನೆಯಿಂದ ಹೊರಬಂದು ಸಿಪಿಸಿ ಪ್ರಹ್ಲಾದ ಕುಲಕರ್ಣಿ ಅವರ ಮೇಲೆ ಲಾಂಗ್(ತಲವಾರ) ಬಿಸಿ ಆತನ ಎಡಗೈಗೆ ಹೊಡೆದು ಮಾರಣಾಂತಿಕವಾಗಿ ಭಾರಿ ರಕ್ತಗಾಯ ಪಡಿಸಿ ಅವರಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ಪಿಐ ಅಶೋಕ ನಗರರವರು ಸದರಿಯವನಿಗೆ ನೀನು ಪ್ರವೀಣನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿತನು ಇರುತ್ತಿ ನಿನ್ನನ್ನು ದಸ್ತಗಿರಿ ಮಾಡಲು ಬಂದಿರುತ್ತೇವೆ ಅಂತ ತಿಳಿಸಿದರೂ ಸಹ ಕಿಮ್ಮತ್ತು ಕೊಡದೇ ಆರೋಪಿತನು ತಪ್ಪಿಸಿಕೊಳ್ಳಲು ಮುಂದಾದಾಗ ಅವನ ಮೇಲೆ ತಮ್ಮ ಸರ್ವಿಸ ಪಿಸ್ತೂಲದಿಂದ ಚೇತನ ಇತನ ಬಲಗಾಲಿಗೆ ಎರಡು ಗುಂಡು ಹೊಡೆದು ವಶಕ್ಕೆ ಪಡೆದುಕೊಂಡು  ನಾವು ಸಕರಕಾರಿ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಹಲ್ಲೆ ಮತ್ತು ಬಲ ಪ್ರಯೋಗ ಮಾಡಿ ಗಂಭೀರ ಸ್ವರೂಪದ ಗಾಯ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಕಾನೂನು ಬದ್ದವಾದ ದಸ್ತಗಿರಿಯನ್ನು ತಪ್ಪಿಸುವ ಸಲುವಾಗಿ ನನ್ನ ಮೇಲೆ ಮತ್ತು ಪ್ರಹ್ಲಾದ ಕುಲಕರ್ಣಿ ಪಿಸಿ ಮೇಲೆ ಹಲ್ಲೆ ಮಾಡಿದ ಆರೋಪಿತರಾದ ಶಿವುಕುಮಾರ@ ಡೂಗಶಿವ್ಯಾ@ಸೈಂಟಿಸ್ಟ್ ಹೈಬತ್ತಿ ಮತ್ತು ಚೇತನ ಹೈಬತ್ತಿ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಶ್ರೀಮತಿ ಅಕ್ಕಮಾಹಾದೇವಿ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅಲ್ಲಮ ಪ್ರಭು ತಂದೆ ಕರಿಘೋಳೆಪ್ಪ ಸಾ: ತೊನಸನಳ್ಳಿ (ಎಸ್ ) ಇವರು ತೊನಸನಹಳ್ಳಿ ಗ್ರಾಮದಲ್ಲಿ ಈಗ್ಗೆ ಸುಮಾರು 6-7 ವರ್ಷಗಳಿಂದ ಶ್ರೀ  ಸಾಯಿ ಎಂಬ ಹೆಸರಿನ ಮೇಲೆ ಫೈನಾನ್ಸ ನಡೆಸಿಕೊಂಡು ಬಂದಿದ್ದು ಅದಕ್ಕೆ ಮ್ಯಾನೆಜರ ಅಂತಾ ನಮ್ಮೂರಿನ ಶ್ರೀಶೈಲ ತಂದೆ ಶರಣಪ್ಪಾ ರಾಮಶೆಟ್ಟಿ ಇವರು ನಿರ್ವಹಿಸಿಕೊಂಡು ಬಂದಿರುತ್ತಾರೆ.  ದಿನಾಂಕ 06/10/2017 ರಂದು ಎಂದಿನಂತೆ ಬೆಳಗ್ಗೆ  10.00 ಗಂಟೆಗೆ ಶ್ರೀಶೈಲ ಇತನು ಫೈನಾನ್ಸಕೆ ಹೋಗಿ ಹಣ ಸಂಗ್ರಹ ಮಾಡಿಕೊಂಡು ರಾತ್ರಿ 8.30 ಪಿ ಎಂ ಕ್ಕೆ ಫೈನಾನ್ಸ ಲೆಕ್ಕ ಪತ್ರಗಳನ್ನು ಮುಗಿಸಿ ಫೈನಾನ್ಸದ ಅಲಮಾರದಲ್ಲಿ ನಗದು ಹಣ-75,000/- ರೂ, ಇಟ್ಟು  ಬಾಗಿಲು ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದರು. ದಿನಾಂಕ 07/10/2017 ರಂದು ಬೆಳಗ್ಗೆ 10.00 ಗಂಟೆಗೆ ಎಂದಿನಂತೆ ಶ್ರೀಶೈಲ ಇವರು ಫೈನಾನ್ಸಗೆ ಬಂದು ನೋಡಿದಾಗ ರಾತ್ರಿ ವೇಳೆ ಯಾರೋ ಕಳ್ಳರು ಫೈನಾನ್ಸದ ಬಾಗಿಲ ಕೀಲಿ ಮುರಿದು  ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಪೋನಮಾಡಿ ತಿಳಿಸಿದರಿಂದ ನಾನು & ಶಿವಕುಮಾರ ತಂದೆ ಶಂಕ್ರೆಪ್ಪಾ ಕಟ್ಟಿಮನಿ , ಸಿದ್ದಪ್ಪಾ ತಂ ಬರಗಾಲ ಸಿದ್ದ ಪೂಜಾರಿ ಹಾಗೂ ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಕೂಡಿ ಎಲ್ಲರೂ ಕೂಡಿ ಫೈನಾನ್ಸಗೆ ಬಂದು ನೋಡಲಾಗಿ ಅಲ್ಲಿಯೇ ಇದ್ದ ಶ್ರೀಶೈಲ ತಿಳಿಸಿದ್ದೇನೆಂದರೆ, ನಾನು ನಿನ್ನೆ ಹಣ ಸಂಗ್ರಹ ಮಾಡಿದ 75,000/- ರೂ ಅಲಮಾರದಲ್ಲಿ ಇಟ್ಟಿರುತ್ತೇನೆ ಅಂತಾ ತಿಳಿಸಿದ್ದು, ಎಲ್ಲರೂ ಕೂಡಿ ಒಳಗೆ ಹೋಗಿ ನೋಡಿದಾಗ ಫೈನಾನ್ಸದಲ್ಲಿದ್ದ ಅಲಮಾರಿ ಮುರಿದು ಅದರಲ್ಲಿದ್ದ ನಗದು ಹಣ 75,000/- ರೂ ಹಾಗೂ ರೂಮಿನಲ್ಲಿದ್ದ 1] ಒಂದು ಮಾನಿಟರ ಮತ್ತು ಹಾರ್ಡ ಡಿಸ್ಕ (ಸಿ.ಸಿ. ಟಿ.ವಿಗೆ ಸಂಬಂಧಿಸಿದ್ದು) ಅ.ಕಿ 5000/-ಒಂದು 2] ಇನ್ವಟರ ಅ.ಕಿ 1000/-, 3] ಇನ ಕೇಬಲ ಸೆಟ್ ಆಫ್ ಬಾಕ್ಸ ಅ.ಕಿ 600/- ಹಾಗೂ 4] ಫೈನಾನ್ಸದಲ್ಲಿ ಅಳವಡಿಸಿದ 3 ಸಿಸಿ ಕ್ಯಾಮೆರಾಗಳು ಅ ಕಿ 5,000 / ಹಾಗೂ ಸಿಸಿ ಟಿ.ವಿ ಅಳವಡಿಸಿದ ಎಲ್ಲಾ ಕೇಬಲ ವೈರಗಳನ್ನು ಕತ್ತರಿಸಿ ಲುಕ್ಸಾನ ಮಾಡಿರುತ್ತಾರೆ.  ಹೀಗೆ ಒಟ್ಟು 86,600/- ರೂ. ವಸ್ತಗಳು ಹಾಗೂ ನಗದು  ಹಣ ರಾತ್ರಿ ವೇಳೆ ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.