POLICE BHAVAN KALABURAGI

POLICE BHAVAN KALABURAGI

24 September 2017

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಯೂಸುಫ ಪಟೇಲ ತಂದೆ ಖಾಜಾ ಪಟೇಲ ಸಾ:ಮೀಜಬಾನಗರ ಎಂ.ಎಸ್‌.ಕೆ ಮೀಲ್ಕಲಬುರಗಿ ದಿನಾಂಕ:13-09-2017 ರಂದು ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಗುನ್ನೆ ನಂ.189/17 ಕಲಂ:379 ಐಪಿಸಿ ಮತ್ತು 21 (1) ಎಮ್ಎಮ್‌‌ಆರ್‌‌ಡಿ ಕಾಯ್ದೆ 1957 ಪ್ರಕಾರ ಪ್ರಕರಣ ದಾಖಲಾಗಿದ್ದು ನಂತರ ಅರ್ಜಿದಾರನು ಮೇಲಾಧಿಕಾರಿಗಳಿಗೆ ಭೇಟಿ ಮಾಡಿ ಅರ್ಜಿ ನೀಡಿದ್ದು ಅದನ್ನು ಪರಿಶೀಲಿಸಲಾಗಿ ಅರ್ಜಿಯ ಜೊತೆ ಸಲ್ಲಿಸಿದ ಮೊಬೈಲ್ನಲ್ಲಿ ಮಾತನಾಡಿದ ಆಡಿಯೋ ಸಿಡಿ ಪರಿಶೀಲಿಸಲಾಗಿ ಕನಕರೆಡ್ಡಿ ಈತನು ಮೇಲಿಂದ ಮೇಲೆ ಅರ್ಜಿದಾರನಿಗೆ 15 ಸಾವಿರ ರೂ ಹಣದ ಕುರಿತು ಭೇಟಿಯಾಗಬೇಕು ಅಂತಾ ತಿಳಿಸಿದ್ದು ಅದರಂತೆ ಅರ್ಜಿದಾರನು ಹೆಚ್ಚುವರಿಯಾಗಿ ದಿನಾಂಕ 06-09-2017 ರಂದು 10 ಸಾವಿರ ರೂ ಹಣ ನೀಡಿರುವುದಾಗಿ ಮತ್ತು ಇನ್ನೂ 5 ಸಾವಿರ ರೂ ಕೊಡಲು ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ದಿನಾಂಕ:13-09-2017 ರಂದು ಅರ್ಜಿದಾರನ ಉಸುಕಿನ ಟಿಪ್ಪರ ಕನಕರೆಡ್ಡಿ ಈತನು ಹಿಡಿದು ಹೆಚ್ಚುವರಿಯಾಗಿ 25 ಸಾವಿರ ರೂ ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ಎಸಿಬಿ ದಾಳಿಯಿಂದಾಗಿ ಅಮಾನತ್ತು ಹೊಂದಿದ್ದ ಕನಕರೆಡ್ಡಿ ಹೆಚ್ಸಿ-262 ಈತನು ಹಣದ ಬಗ್ಗೆ ಬೇಡಿಕೆ ಇಟ್ಟಿರುತ್ತಾನೆ. ಮೇಲಿನ ಎಲ್ಲಾ ಘಟನೆ ಪರಿಶೀಲಿಸಿ  ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ ಲಕ್ಷ್ಮಣ ತಂದೆ ಶಿವನಿಂಗಪ್ಪ ಮಾಂಗ ಸಾ: ತಡಕಲ ತಾ:ಆಳಂದ ರವರು ದಿನಾಂಕ 13-09-2017 ರಂದು ಶರಣು ಚಿಮ್ಮನ ಇವರ ಹೊಟೇಲದಲ್ಲಿ ಊಟ ಮಾಡಲು ಹೊದಾಗ ಹೊಟೇಲದಲ್ಲಿ 1) ಶರಣು ಚಿಮ್ಮನ 2) ದೇವಪ್ಪ ತಂದೆ ರೇವಣಪ್ಪಾ ಚಿಮ್ಮನ 3) ಕಾಶಪ್ಪ ತಂದೆ ರೇವಣಪ್ಪಾ ಚಿಮ್ಮನ ಇವರು ಇದ್ದು ಅವರು ನನಗೆ ಊಟ ಕೊಡಲುವುದಿಲ್ಲಾ ಅಂತಾ ನನ್ನೊಂದಿಗೆ ತಕರಾರು ಮಾಡಿ ಹೊಟೇಲದಿಂದ ಹೊರಹಾಕಿರುತ್ತಾರೆ. ನಂತರ ಅದೆ ದಿವಸ ರಾತ್ರಿ ನನ್ನ ಮನೆಯ ಮೇಲೆ ಅವರು ಕಲ್ಲು ಹೊಡೆದು ಅವಾಚ್ಯವಾಗಿ ಬೈದಿರುತ್ತಾರೆ. ನಂತರ ದಿನಾಂಕ 14/09/2017 ರಂದು ಬೆಳಿಗ್ಗೆ 8:00 ಗಂಟೆಗೆ ನಾನು ನಮ್ಮ ಮನೆಯ ಮೆಲೆ ಏಕೆ ಕಲ್ಲು ಹೊಡೆದಿದ್ದಿರಿ ಎಂದು ಕೇಳಿದಾಗ ದೇವಪ್ಪ ಚಿಮ್ಮನ ಇತನು ರಂಡಿ ಮಗನೇ ಮಾದಿಗ ಸೂಳೆ ಮಗನೇ ನಾವು ಇನ್ನು ಕಲ್ಲು ಹೊಡೆಯುತ್ತೇವೆ ಏನು ಸೆಂಟಾ ಕಿತ್ತಕೊತ್ತಿ ಅಂತಾ ಅವಾಚ್ಯವಾಗಿ ಬೈಯುವಾಗ ಕಾಶಪ್ಪ ಚಿಮ್ಮನ ಹಾಗು ಶರಣು ಚಿಮ್ಮನ ಬಂದು ನನಗೆ ಕೈಹಿಡಿದು ಎಳೆದಾಡಿ ಜೊಲಾಜೊಲಿ ಮಾಡಿ ಕೈಯಿಂದ ಎದೆಯ ಮೆಲೆ ಮತ್ತು ಬೆನ್ನಿನ ಮೇಲೆ ಕೈಯಿಂದ ಗುತ್ತಿರುತ್ತಾರೆ ಆಗ ನಮ್ಮ ಗ್ರಾಮದ ರಾಣಪ್ಪ ತಂದೆ ನಾಗಪ್ಪ ಮಾಂಗ ಹಾಗು ಯಶ್ವಂತ ಇವರು ಬಂದು ಜಗಳ ಬಿಡಿಸುವಾಗ ಮಗನೇ ಇವತ್ತು ಉಳಿದಿದಿ ಇನ್ನೊಮ್ಮೆ ನೀನು ನಮ್ಮ ಹೊಟೇಲ ಕಡೆಗೆ ಬಂದರೆ ನಿನಗೆ ಖಲಾಷ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 September 2017

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ದಾಶಿಮಯ್ಯ ತಂದೆ ಶಂಕ್ರೇಪ್ಪ ವಡ್ಡನಕೇರಿ ಸಾ:ಕಮಲಾಪೂರ ತಾ:ಜಿ:ಕಲಬುರಗಿ ಇವರು ಕಮಲಾಪೂರ ಗ್ರಾಂ. ಪಂಚಾಯತಿಯ ವಾರ್ಡನಂ. 3 ರ  ಸದಸ್ಯನಿದ್ದು. ಈಗ್ಗೆ 3-4 ದಿವಸಗಳ ಹಿಂದೆ ನಮ್ಮೂರಿನ ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ ಇವಳು ವಾರ್ಡ ನಂ.4 ರ ನಿವಾಸಿಯಿದ್ದು. ತನ್ನ ಮನೆಯ ಮುಂದೆ ಸರಕಾರದ ವತಿಯಿಂದ ನಿರ್ಮಿಸಿದ ಸಿ.ಸಿ ರಸ್ತೆಯನ್ನು ತನ್ನ ಮನೆಗೆ ನಿರಿನ ಸಂಪರ್ಕ ಪಡೆಯುವ ಸಲುವಾಗಿ ವಿನಾಕಾರಣ ರಸ್ತೆಯನ್ನು ಒಡೆದು ಹಾಕಿದ್ದು. ಈ ವಿಷಯದ ಬಗ್ಗೆ ನಮ್ಮ ಗ್ರಾಮ ಪಂಚಾಯತ ಅಭೀವೃದ್ದಿ ಅಧಿಕಾರಿಗಳು ವಿಚಾರಣೆ ಕುರಿತು ಗ್ರಾಮ ಪಂಚಾಯತಗೆ ರಾಚಮ್ಮ ಇವಳಿಗೆ ಕರೆಯಿಸಿ ಅಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡಿ ಈ ರಿತಿಯಾಗಿ ಸಿ.ಸಿ ರಸ್ತೆಯನ್ನು ಒಡೆದು ಹಾಳು ಮಾಡಿದ್ದು ತಪ್ಪು ನಿಮಗೆ ನಿರಿನ ಸಂಪರ್ಕ ಬೇಕಾದರೆ ನಾವು ಪಂಚಾಯತ ವತಿಯಿಂದ ಮಾಡಿಸಿ ಕೋಡುತ್ತೆವೆ ಒಡೆದು ಹಾಕಿದ ಸಿ.ಸಿ ರಸ್ತೆಯನ್ನು ನಿಮ್ಮ ಖರ್ಚಿನಲ್ಲಿ ರಿಪೇರಿ ಮಾಡಬೇಕು ಅಂತಾ ಹೇಳಿದ್ದಕ್ಕೆ ಅವಳು ಒಪ್ಪಿಕೊಂಡು ಹೋದಳು. ಆದರು ಸಹ ದಿನಾಂಕ:19.09.2017 ರಂದು ರಾಚಮ್ಮ ಹಾಗೂ ಆಕೆಯ ಗಂಡನಾದ ವಿಜಯರಾಜ ಮಕ್ಕಳಾದ ಶಿವಕುಮಾರ ಮತ್ತು ಶರಣು @ ಸುನೀಲ ಇವರೆಲ್ಲರೂ ಕೂಡಿ ಮತ್ತೆ ಸಿ.ಸಿ ರಸ್ತೆಯನ್ನು ಒಡೆದುಹಾಕಿ ನಿರು ಸರಬರಾಜು ಆಗುವ ಮೇನ ಪೈಪಗೆ ಹೋಲಹಾಕಿ ಒಂದು ಇಂಚು ಪೈಪನ್ನು ಜೋಡಣೆ ಮಾಡಿ ತನ್ನ ಮನೆಗೆ ನಿರಿನ ಸಂಪರ್ಕ ತೆಗೆದುಕೊಂಡಿರುತ್ತಾರೆ ಈ ವಿಷಯ ಗ್ರಾಮ ಪಂಚಾಯತ ಅಧ್ಯಕ್ಷಕರು ಹಾಗೂ ಪಿ.ಡಿ.ಓ ಹಾಗೂ ಸದಸ್ಯರಿಗೆ ಗೋತ್ತಾಗಿ ಅವರು ಪಡೆದುಕೊಂಡಿದ್ದ ನಿರಿನ ಕನಕ್ಷನ್ ಅನ್ನು ನಿನ್ನೆ ದಿನಾಂಕ:20.09.2017 ರಂದು ಎಲ್ಲರೂ ಕೂಡಿ ಕಟ್ಟ ಮಾಡಿರುತ್ತೇವೆ. ಹೀಗಿದ್ದು ಇಂಧು ದಿನಾಂಕ:21.09.2017 ರಂದು ಬೆಳಿಗ್ಗೆ 07.30 ಗಂಟೆಗೆ ನಾನು ಬಜಾರ ಕಡೆಗೆ ಬರುವ ಕುರಿತು ಮನೆಯಿಂದ ಹೋರಟು ಸುಧಾಕರ ಲೊಂಡೆ ಈತನ ಮನೆಯ ಎದುರಿನ ರಸ್ತೆಯ ಮೇಲಿಂದ ಹೋಗುತ್ತಿದ್ದಂತೆ 1. ವಿಜಯರಾಜ ತಂದೆ ಶಿವಪ್ಪ ರಾಜೇಶ್ವರ 2.ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ 3. ಶಿವಕುಮಾರ ತಂದೆ ವಿಜಯರಾಜ ರಾಜೇಶ್ವರ ಮತ್ತು 4 ಶರಣು @ ಸುನೀಲ ತಂಧೆ ವಿಜಯರಾಜ ರಾಜೇಶ್ವರ ಹೀಗೆಲ್ಲರೂ ನನ್ನ ಎದುರಿನಿಂದ ಬರುತ್ತಿದ್ದಂತೆ ಅಲ್ಲಿಗೆ ಹಣಮಂತ ತಂದೆ ರುಕ್ಕಪ್ಪ ವಾಲಿಕರ ಈತನು ಸಹ ಅಲ್ಲಿಗೆ ಬಂದನು ಆಗ ಅವರೆಲ್ಲರೂ ನನಗೆ ಏ ಭೋಸಡಿ ಮಗನೆ ರಂಡಿ ಮಗನೆ ನಿನೆ ನಮ್ಮ ಮನೆಗೆ ತೆಗೆದುಕೊಂಡ ನಿರಿನ ಸಂಪರ್ಕ ಪಂಚಾಯತದವರಿಗೆ ಹೇಳಿ ಕಟ್ ಮಾಡಿಸಿದ್ದಿ ಅಂತಾ ಬೈದು ಅವರಲ್ಲಿ ಶಿವಕುಮಾರ ಈತನು ನನಗೆ ತಡೆದು ನನ್ನ ಬಲಗೈ ಹೆಬ್ಬರಳು ಹಿಡಿದು ತಿರುವಿದನು ಆಗ ವಿಜಯರಾಜ ಮತ್ತು ಶರಣು @ ಸುನೀಲ ಇಬ್ಬರೂ ನನಗೆ ಕೈಯಿಂದ ಮೈಕೈಗೆ ಬೆನ್ನಿಗೆ ಹೋಟ್ಟೆಗೆ ಹೋಡೆದು ಗುಪ್ತಪೆಟ್ಟು ಮಾಡಿರುತ್ತಾರೆ. ರಾಚಮ್ಮ ಇವಳು ನನಗೆ ಈ ಹಾಟ್ಯಾಂದು ಬಹಾಳ ಆಗ್ಯಾದ ಅಂತಾ ಬೈಯ ತೋಡಗಿದಳು ಆಗ ನನಗೆ ಹೋಡೆಯುವುದನ್ನು ಹಣಮಂತ ತಂದೆ ರುಕ್ಕಪ್ಪ ವಾಲಿಕಾರ ಈತನು ಬಿಡಿಸಿಕೋಳ್ಳು ಬಂದಾಗ ಅವರೆಲ್ಲರೂ ಆತನಿಗೆ ನಮ್ಮ ಜಗಳದಲ್ಲಿ ಈ ಹೋಲೆಯ ಮಾದಿಗರ ಕೆಲಸ ಏನಿದೆ ಅಂತಾ ಬೈದು ರಾಚಮ್ಮ ಇವಳು ಅಲ್ಲೆಬಿದ್ದ ಕಲ್ಲನ್ನು ತೆಗೆದುಕೊಂಡು ಅವನ ಎಡಗಡೆ ತಲೆಗೆ ಹೋಡೆಯಲು ಅವನ ತಲೆ ಒಡೆದು ರಕ್ತ ಸೋರ ಹತ್ತಿತು ಅಲ್ಲದೆ ಶಿವಕುಮಾರ ಈತನು ಹಣಮಂತ ಈತನಿಗೆ ಕಾಲಿನಿಂದ ಟೊಂಕಕ್ಕೆ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಸುನಂದಾ ಗಂಡ ಬಸವರಾಜ್ ಸಗರಕರ್ ಸಾಃ ಫಿಲ್ಟರ್ ಬೇಡ್ ಆಶ್ರಯ ಕಾಲೋನಿ ಕಲಬುರಗಿ ರವರ ಗಂಡನು ಕಳೆದ 15-16 ವರ್ಷದ ಹಿಂದೆ ತಿರಿಕೊಂಡಿದ್ದು ದಿನಾಂಕ 21-09-2017 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನನ್ನ ಕೆಲಸದ ಶಿಫ್ಟ್ ಇದ್ದುದ್ದರಿಂದ ನಾನು ಮನೆಯಿಂದ ಬೇಳಿಗ್ಗೆ 11-30 ಗಂಟೆಗೆ ಕೆಲಸಕ್ಕೆ ಬಂದು ರಾತ್ರಿ 8 ಪಿ.ಎಂದ ವರೆಗೆ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವ ಕುರಿತು ಯುನೆಟಡ್ ಆಸ್ಪತ್ರೆಯಿಂದ ಶಹಾಬಜಾರಾದ ಮೂಖಾಂತರ ಲಾಲ ಹನುಮಾನ ಗುಡಿ ಶಹಾಬಜಾರವೆರೆಗ ಆಟೋದಲ್ಲಿ ಕುಳಿತುಕೊಂಡು ಲಾಲ ಹನುಮಾನ ಗುಡಿ ಹತ್ತೀರ ಆಟೋ ಇಳಿದು ನಂತರ ಬಸವಲಿಂಗ ನಗರ ಮಾರ್ಗವಾಗಿ ಶಹಾಬಜಾರ ಸುವರ್ಣ ನಗರ ಕ್ರಾಸದಿಂದ ಫಿಲ್ಟರ್ ಬೇಡ್ ಆಶ್ರಯ ಕಾಲೋನಿಗೆ ಹೋಗುವ ಕುರಿತು ಜ್ಞಾನಜ್ಯೋತಿ ಕನ್ನಡ ಕಾನ್ಮೆಂಟ್ ಶಾಲೆಯ ಹತ್ತೀರ ರೋಡಿನ ಮೇಲೆ ನೆಡೆದುಕೊಂಡು ಬರುತ್ತಿದ್ದಾಗ ನನ್ನ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಅಪರಿಚಿತ ಹುಡುಗರು ಅಂದಾಜು 28-30 ವಯಸ್ಸಿನವರು ಮೋಟಾರ ಸೈಕಲ್ ಮೇಲೆ ಬಂದವರೆ ನನಗೆ ತಡೆದಯ ನಿಲ್ಲಿಸಲು ನಾನು ' ಯ್ಯಾಕೆ  ನಿವ್ಯಾರು ನನಗೆ ನಿಲ್ಲಿಸುತ್ತಿದ್ದಿರಿ' ಅಂತಾ ಕೇಳಲು ಒಬ್ಬನು ಗಾಡಿಯ ಮೇಲಿಂದ ಕಳೆಗೆ ಇಳಿದವನೆ '' ಎನೆ ರಂಡಿ ನಾನು ನಿನಗೆ ನಿಲ್ಲು ಅಂತಾ ಹೇಳಿದರೆ, ನಿಲ್ಲೋದಿಲ್ಲಾ ಬೋಸಡಿ' ಅವಾಚ್ಯವಾಗಿ ಬೈಯ್ಯಲು ಶರು ಮಾಡಿದ್ದು, ನನಗ್ಯಾಕೆ ಬೈಯ್ಯುತ್ತಿದ್ದಿ ಅಂತಾ ಕೇಳಿದ್ದಕ್ಕೆ, ಇನ್ನೊಬ್ಬನು ಸಹಃ ನನಗೆ ಕೈಯಿಂದ ಮುಖದ ಮೇಲೆ ಹೊಡೆದನು, ಈ ರಂಡಿಗೆ ಬಾಳ ಸೋಕ್ಕು ಬಂದಿದೆ ಮುಗಿಸಿಬಿಡಿ ಅಂತಾ ಅನ್ನಲು ಅವನ ಹಿಂದೆ ಇದ್ದ ಹುಡುಗ ತನ್ನ ಹತ್ತೀರ ಇದ್ದ ಚಾಕುವಿನಿಂದ ನನ್ನ ಹೊಟ್ಟೆಯಲ್ಲಿ ಬಲಭಾಗದ ಪಕ್ಕೆಯ ಹತ್ತೀರ ಚಿಚ್ಚಿ (ಹೊಡೆದನು) ಭಾರಿ ರಕ್ತಗಾಯ ಪಡಿಸಿದನು. ಇದರಿಂದ ನಾನು ಕೆಳಗಡೆ ಬಿದ್ದು ಚಿರಾಡಲು ಅದೆ ರೋಡಿಗೆ ನನಗೆ ಪರಿಚಯದ ಆಟೋ ಬರುತ್ತಿದ್ದು ನಾನು ಚಿರಾಡುವ ಸಪ್ಪಳ ಕೇಳಿ ಆಟೋದಲ್ಲಿದ್ದಂತಹ ಮಲ್ಲಿಕಾರ್ಜುನ & ಕಾಶಿಬಾಯಿ ಇವರು ಓಡಿ ಬಂದು ನೋಡುವಷ್ಠರಲ್ಲಿಯೆ ನನಗೆ ಹೊಡೆಯುತ್ತಿದ್ದ ಆ ಇಬ್ಬರು ಮೋಟಾರ ಸೈಕಲ ಮೇಲೆ ಬಂದ ಹುಡುಗರು ತಮ್ಮ ಗಾಡಿ ಸಮೇತ ಅಲ್ಲಿಂದ ಓಡಿ ಹೋದರು, ಅವರ ಹೆಸರು ವಿಳಾಸ ನನಗೆ ಗೋತ್ತಿಲ್ಲಾ ಅವರಿಗೆ ನೋಡಿದರೆ ಗುರುತಿಸುತ್ತೇನೆ. ಅವರಿಬ್ಬರು ಕನ್ನಡ ಮಾತಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 19-09-2017 ರಂದು ಸಾಯಂಕಾಲ 6 ಗಂಟೆಯಿಂದ ದಿನಾಂಕ 20-09-2017 ರಂದು 7-30 ಎಎಮ ಮದ್ಯದ ಅವಧಿಯಲ್ಲಿ ಪಿರೋಜಾ ಬಾದ ಗ್ರಾಮದ ಸೀಮಾಂತರದಲ್ಲಿ ಬರುವ ಶಹಾಬಾದ ಕ್ರಾಸ ಹತ್ತಿರ ಇರುವ ಹೊಲದಲ್ಲಿರುವ ಎರ ಟೇಲ ಟವರಿಗೆ ವಿದ್ಯುತ್ತ ಸರಬರಾಜಿಗಾಗಿ ಅಳವಡಿಸಿರುವ 48 ಓಲ್ಟೇಜಿನ ವರ್ಲಾ  ಪ್ಲಸ್ 600 ಎಹೆಚ್ನ 24ಬ್ಯಾಟರಿ ಶೆಲ್ಗಳು ಅ,ಕಿ 21,000/-  ರೂಪಾಯಿಗಳು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಬಾಬು ತಂದೆ ಶಿವರಾಯ ನಿಂಬರ್ಗಾ  ಸಾ : ಜಿ.ಆರ್ ನಗರ ಖಾದ್ರಿ ಚೌಕ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 September 2017

KALABURAGI DISTRICT REPORTED CRIMES

ಕಳವು ಪ್ರಕರಣ :
ಅಫಜಲಪೂರ ಠಾಣೆ :  ಶ್ರೀ ಅಮೋಗಸಿದ್ದ ತಂದೆ ಭೂತಾಳಿ ಪೂಜಾರಿ ಸಾ|| ಮಯೂರ ತಾ|| ಜೇವರ್ಗಿ ಹಾ|| || ಮಣೂರ ಇವರು ಅಶೋಕ ತಂದೆ ಬಾಲಯ್ಯ ಗುತ್ತೇದಾರ ಸಾ|| ಕಲಬುರಗಿ ಇವರ ಒಡೆತನದ ವೈನಶಾಪದಲ್ಲಿ ಮ್ಯಾನೇಜರ ಅಂತ ಕೆಲಸ ಮಾಡಿಕೊಂಡು ವಾಸವಾಗಿದ್ದು ಸದರಿ ವೈನಶಾಪದಲ್ಲಿ ನನ್ನ ಜೋತೆಗೆ 1) ಮಡಿವಾಳಪ್ಪ ತಂದೆ ಚಂದ್ರಶಾ ಕುಂಬಾರ ಸಾ|| ಚಿಂಚೋಳಿ 2) ಸಾಯಬಣ್ಣ ತಂದೆ ಹಸನಪ್ಪ ರೂಪನೂರ ಸಾ|| ರಾಮನಗರ 3) ಸಿದ್ರಾಮ ತಂದೆ ಭೀಮಶಾ ದಿಕ್ಸಂಗಾ ಸಾ|| ಮಾಶಾಳ ಇವರು ಸಹ ಕೆಲಸ ಮಾಡುತ್ತಾರೆ, ನಾವು ನಾಲ್ಕು ಜನರು ದಿನಾಲು ರಾತ್ರಿ 11 ಗಂಟೆಯ ಒರೆಗೆ ವೈನಶಾಪದಲ್ಲಿ ಕೆಲಸ ಮಾಡಿ, ವೈನಶಾಪ್ ಬಂದ ಮಾಡಿ ನಂತರ ವೈನಶಾಪ ಒಳಗಡೆನೆ ಇರುವ ಇನ್ನೊಂದು ಕೋಣೆಯಲ್ಲಿ ಮಲಗುತ್ತೇವೆ.  ದಿನಾಂಕ 18-09-2017 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ಹೊರಗಡೆ ಹೋಗಲು ವೈನಶಾಪ ಸೆಟ್ಟರ ತಗೆಯಲು ಹೋದಾಗ, ವೈನಶಾಪ ಶೇಟ್ಟರ ಮದ್ಯದಲ್ಲಿ ಕೆಳಭಾಗ ಬೆಂಡ್ ಮಾಡಿ ಹೋಗಿ ಬರುವಂತೆ ದಾರಿ ಮಾಡಿದ್ದು ಕಂಡು ಗಾಬರಿಯಾಗಿ ನಾನು ಮೂರು ದಿನ ವ್ಯಾಪಾರ ಮಾಡಿ ಡ್ರಾದಲ್ಲಿ ಇಟ್ಟಿದ್ದ ಒಟ್ಟು 2 ಲಕ್ಷ 16 ಸಾವಿರ ರೂಪಾಯಿ ಹಣವನ್ನು ಚೆಕ್ ಮಾಡಿ ನೋಡಲಾಗಿ ಹಣ ಇರಲಿಲ್ಲ ಹಣವನ್ನು ಯಾರೊ ಕಳ್ಳತನ ಮಾಡಿಕೊಂಡು ಹೋಗಿದ್ದರು, ನಂತರ ನಾನು ಸದರಿ ವಿಷಯವನ್ನು ವೈನಶಾಪ ಮಾಲಿಕರಾದ ಅಶೋಕ ಗುತ್ತಾದಾರ ರವರಿಗೆ ಪೋನ ಮಾಡಿ ತಿಳಿಸಿದೆನು, ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಮ್ಮ ಮಾಲಿಕರು ಬಂದ ನಂತರ ವೈನಶಾಪದಲ್ಲಿ ಕೂಡಿಸಿದ ಸಿಸಿ ಕ್ಯಾಮಾರವನ್ನು ಪರಿಶೀಲಿಸಿ ನೋಡಲಾಗಿ, ಮದ್ಯರಾತ್ರಿ 01:00 ಗಂಟೆಯಿಂದ 02:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಅಪರಿಚಿತ ಮೂರು ಜನರು ವೈನಶಾಪ ಅಂಗಡಿಯ ಶೇಟ್ಟರ ಎತ್ತಿ (ಮುರಿದು), ಡ್ರಾದಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೊಗುವುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಶೇಖಪ್ಪ ಹಾಗೂ ಆಪಾದಿತರಾದ ಶಿವಣ್ಣ ಸಿತನೂರ, ಭೀಮಣ್ಣಾ ಸಿತನೂರ ಹುಣಸಪ್ಪಾ ಸೀತನೂರ ಇವರುಗಳಿಗೂ ಹೊಲಕ್ಕೆ ಹೊಗುವ ದಾರಿ ಸಂಬಂಧ ತಂಟೆ ತಕರಾರು ನಡೆಯುತ್ತಾ ಬಂದಿದ್ದು,  ದಿನಾಂಕ 17/09/2017 ರಂದು ಫಿರ್ಯಾದಿದಾ ರು  ತಮ್ಮ ಹೊಲದಲ್ಲಿದ್ದಾಗ, ಶಿವಣ್ಣನ ಹೆಂಡತಿ ಮಲ್ಲಮ್ಮ, ಭಿಮಣ್ಣನ ಹೆಂಡತಿ ಮಹಾದೇವಿ, ಹುಣಚಪ್ಪನ ಹೆಂಡತಿ ಶಾಂತಮ್ಮ ಇವರುಗಳು ತಮ್ಮ ಹೊಲದಿಂದ ಮನೆಗೆ ಬರುತ್ತಿರುವಾಗ ಫಿರ್ಯಾದಿದಾರರ ಸದರಿಯವರಿಗೆ ನಮಗೆ ಹೊಲಕ್ಕೆ ಹೊಗಲು ಅಡ್ಡಿಪಡಿಸುತ್ತಿರಿ ಇಲ್ಲಿಂದ ಹೊಗಬೇಡಿ ಅಂದಿದ್ದಕ್ಕೆ ಅವರುಗಳು ಫಿರ್ಯಾದಿಗೆ ಹಾಟ್ಯಾ ನೀನು ನಮಗೆ ಏನು ಕೇಳುತ್ತಿ ಅಂತಾ ಬೈಯುತ್ತಿದ್ದಾಗ ಕಾಂತಮ್ಮಳ ಪೋನಿಗೆ ಆಕೆಯ ಭಾವ ಶಿವಣ್ಣ ಈತನು ಪೋನ ಮಾಡಿ ಶೇಕ್ಯಾನಿಗೆ ಸರಿಯಾಗಿ ಮೇತ್ತಗೆ ಮಾಡಿ ಹೊಗ್ರಿ ಎಂದು ಪ್ರಚೋದನೆ ನೀಡಿದ್ದರಿಂದ ಫಿರ್ಯಾದಿದಾರರಿಗೆ ಮಹಾದೇವಿ ಮತ್ತು ಕಾಂತಮ್ಮ ಇವರು ನನಗೆ ಒತ್ತಿ ಹಿಡಿದು ನೇಲಕ್ಕೆ ಹಾಕಿದಾಗ ಮಲ್ಲಮ್ಮ ಇವಳು ಎಡಗೈ ತೊರಬೇರಳಿಗೆ ಬಡಿಗೆಯಿಂದ ಹೊಡೆದಿದ್ದು, ಆಗ ಫಿರ್ಯಾದಿದಾರರು ಚಿರಾಡುತ್ತಿದ್ದಾಗ ಶಕೀಲ ತಂದೆ ಮಶಾಕ ಮುಲ್ಲಾ ಇವರು ಬಂದು ಜಗಳ ಬೀಡಿಸಿದ್ದು, ಸದರಿಯವರು ಇನ್ನೂ ಮುಂದೆ ಈ ದಾರಿಯಲ್ಲಿ ಹೊಗಲು ಅಡ್ಡಿಪಡಿಸಿದರೆ ನಿನಗೆ ಖಲಾಸ ಮಾಡುತ್ಥೇವೆ ನಂತರ ಫಿರ್ಯಾದಿದಾರರ ಮನೆಗೆ ಬಂದಾಗ  ಆರೋಪಿತರಾದ ಮಹಾದೇವಿ ಗಂಡ ಭೀಮಣ್ಣ, ಶಿವಲೀಲಾ ಗಂಡ ನಿಂಗಪ್ಪ, ಶರಣಮ್ಮ ಗಂಡ ಚಂದ್ರಮಪ್ಪ, ಇವರು ಬಂದು ಫಿರ್ಯಾದಿದಾರರ ಹೆಂಡತಿಯಾದ ಶರಣಮ್ಮಳಿಗೆ ರಂಡಿ ನಮಗೆ ದಾರಿ ಕೊಡಲ್ಲ ಎಂದು ಶಿವಲೀಲಾ ಇವಳು ಕೈಯಿಂದ ಎಡಗಣ್ಣಿನ ಮೇಲೆ ಹೊಡೆದಳು, ಮಹಾದೇವಿ ಇವಳು ಫಿರ್ಯಾದಿಗೆ ಸರಿಯಾಗಿ ಮೇತ್ತಗೆ ಮಾಡುತ್ತೇನೆಂದು ಕೈಯಿಂದ ಹೊಡೆದು ನೇಲಕ್ಕೆ ಹಾಕಿದಾಗ ಮಹಾದೇವಪ್ಪ ತಂದೆ ಮಾಸಣ್ಣ ಇವರು ಬೀಡಿಸಿಕೊಂಡಿರುತ್ತಾರೆ,  ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀಮತಿ ಕಾಂತಮ್ಮ ಗಂಡ ಹುಣಚಪ್ಪಾ ಸೀತನೂರ ಸಾ; ಫರಹತಾಬಾದ ತಾ: ಜಿ: ಕಲಬುರಗಿ ರವರ ಗಂಡನಿಗೆ 4 ಜನ ಅಣ್ಣ ತಮ್ಮಂದಿರಿದ್ದು ಎಲ್ಲರೂ ಕೂಡಿಯೇ ಇರುತ್ತವೆ  ನಮ್ಮ ಹೊಲ ಸರ್ವೇ ನಂ 13 ತಿಳಗೋಳ ಸೀಮಾಂತರದಲ್ಲಿ  ಇರುತ್ತದೆ. ನಾವು ನಮ್ಮ ಹೊಲಗಳಿಗೆ ಹೋಗಬೇಕಾದರೆ ಶೇಖಪ್ಪಾ ಪೂಜಾರಿ  ರವರ ಸರಡಗಿ ಸೀಮೆಯ ಹೊಲ ಸರ್ವೆ ನಂ 62 ರ ಮುಖಾಂತರ ದಾಟಿ ಹೋಗುತ್ತೇವೆ ನಮ್ಮ ಹೊಲ ಸರ್ವೇ ನಂ 13 ದಾಟಿ ಶೇಕಪ್ಪಾ  ಪೂಜಾರಿ ತನ್ನ ಹೊಲ ಸರ್ವೇ ನಂ 14 ರಕ್ಕೆ ಹೋಗಬೇಕಾಗುತ್ತದೆ ಹೊಲಕ್ಕೆ ಹೋಗಿ ಬರುವ ದಾರಿಯ ಸಂಬಂಧ ಸುಮಾರು 2 ವರ್ಷದಿಂದ ತಕರಾರು ಜಗಳ ನಡೆಯುತ್ತಾ ಬಂದಿರುತ್ತದೆ.  ಹೀಗಿದ್ದು ದಿನಾಂಕ 17/09/17 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ  ನಾನು ನಮ್ಮ ನೆಗಣಿಯರಾದ ಮಲ್ಲಮ್ಮ ಗಂಡ ಶಿವಣ್ಣಾ, ಮಹಾದೇವಿ ಗಂಡ ಭೀಮಣ್ಣಾ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ  ನಾವು ಶೇಖಪ್ಪಾ  ಪೂಜಾರಿ ಹೊಲದ ಮುಖಾಂತರ ದಾರಿಯಿಂದ ಬರುವಾಗ ಅಲ್ಲಿ ಶೇಖಪ್ಪಾ ಪೂಜಾರಿ ಹಾಗೂ ಅವನ ಮಗ ಭೀಮಾಶಂಕರ ಇದ್ದು ಸದರಿಯವರು  ನಮಗೆ ತಡೆದು ಇಲ್ಲಿಂದ  ನಿಮಗೆ ದಾರಿ ಇಲ್ಲಾ ಏಕೆ ಹೋಗುತ್ತೀರಿ ಎಂದು ತಡೆದಾಗ ನಾವು ಅದಕ್ಕೆ ನಮ್ಮ ಹೊಲದಿಂದ ನೀನು ಹೋಗುತ್ತೀ ಎಂದಿದಕ್ಕೆ ಶೇಖಪ್ಪನು  ನಿಮ್ಮ ರಂಡಿರದು ಎಷ್ಟು ಜಿದ್ದು ಹೋಗಬೇಡ ಎಂದರು ಹೋಗುತ್ತೀರಿ ಎಂದು ಶೇಖಪ್ಪನು ತನ್ನ ಕೈಯಲ್ಲಿದ ಕೊಡಲಿ ಕಾವಿನಿಂದ ನನ್ನ ಎಡಗಾಲಿನ ಮೇಲೆ ಬಲಗೈ ರಟ್ಟೆಗೆ ಹೊಡೆದಾಗ ನಾನು ನೆಲಕ್ಕೆ ಬಿದ್ದೇನು, ಅವನ ಮಗ ಭೀಮಾಶಂಕರ ಕೈಯಿಂದ ಮುಖದ ಮೇಲೆ ಹೊಡೆದು ಈ ರಂಡಿದು ಬಹಳವಾಗಿದೆ ಎಂದು ಕೂದಲು ಹಿಡಿದು  ಎಳೆದಾಡಿ ಮಾನಬಂಗ ಮಾಡಿರುತ್ತಾನೆ ಆಗ ನಮ್ಮ ನೆಗೆಣಿ ಮಲ್ಲಮ್ಮಳಿಗೆ ಶೇಖಪ್ಪನು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾನೆ. ಇನ್ನೊಬ್ಬ ನೆಗೆಣಿ ಮಹಾದೇವಿ ಗಂಡ ಭೀಮಣ್ಣಾ ಇವಳು ಓಡಿಸಿದ್ದು ಸದರ ಘಟನೆ ಸಿದ್ದಮ್ಮ ಗಂಡ ಸೈಬಣ್ಣಾ ನೋಡಿದ್ದು ಇದೆ ಸದರಿಯವರು ಇವಳನ್ನು ಮುಂದೆ ಈ ದಾರಿಯಿಂದ ಹೋದರೆ ನಿಮಗೆ ಜೀವ ಸಹಿತ ಇಡುವುದಿಲ್ಲಾ ಅಂತಾ ಜೀವದಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಭೀಮಣ್ಣ ವಾರಿಕ  ಸಾ:ಕಮಲಾಪೂರ ತಾ:ಜಿ:ಕಲಬುರಗಿ ಇವರು. ದಿನಾಂಕ:16.-09-2017 ರಂದು ಸಾಯಂಕಾಲ ನಾನು ನನ್ನ ಮನೆಯ ಮುಂದಗಡೆ ಕುಳಿತಿದ್ದು ಅದೇ ವೇಳೆಗೆ ನನ್ನ ತಮ್ಮ ಹಣಮಂತ ವಾರಿಕ ಈತನು ಕುಡಿದ ನಶೆಯಲ್ಲಿ ಮನೆಯ ಕಡೆಗೆ ಬರುತ್ತಿದ್ದಾಗ ಅದನ್ನು ನೋಡಿ ನಾನು ಮನೆಯ ಒಳಗೆ ಹೋಗುತ್ತಿದ್ದಾಗ ಹಣಮಂತನು ನನಗೆ ಸೂಳೆ ಮಗನೆ ಬಾರೋ ಹೆಂಗಸ್ಯಾನಂಗ ಒಳಗ ಹೋಗ್ತಿ ಬಾರೋ ಅಂತಾ ಅಂದಿದ್ದು ಆಗ ನಾನು ಹೋರಗಡೆ ಬಂದು ತುಳಸಿ ಕಟ್ಟಿಯ ಹತ್ತೀರ ಕುಂತಾಗ ಅದೇ ವೇಳೆಗೆ ಮಹಾದೇವಿ ವಾರಿಕ ಇವಳು ಹೋರಗಡೆ ಬಂದು ನೀವು 3 ತಿಂಗಳಲ್ಲಿ ನಿಮ್ಮ ಮನೆಯವರೆಲ್ಲರೂ ಸಾಯಿತಿರಿ ಅಂತಾ ನನಗೆ ಬೈಯುತ್ತಿದ್ದಾಗ ನಾನು ಅವಳಿಗೆ ಅಮ್ಮಾ ನೀವು ಸುಮ್ಮನೆ ನಮಗ ಹೋಲಸಾಗಿ ಬೈಯುವುದು ಸರಿಯಲ್ಲ ಅಂತಾ ಅಂದಾಗ ಸಚಿನ ವಾರಿಕ ಈತನು ಓಡಿ ಬಂದವನೆ ನನ್ನ ಕುತ್ತಿಗೆ ಹಿಡಿದು ತುಳಸಿ ಕಟ್ಟಿಗೆ ಹೋಡೆದು ನನ್ನ ತಲೆಯ ಹಿಂಭಾಗಕ್ಕೆ ರಕ್ತ ಮತ್ತು ಗುಪ್ತಗಾಯ ಮಾಡಿದ್ದು ನಾನು ಒಮ್ಮಿಲೆ ಚಿರಿ ನೆಲದ ಮೇಲೆ ಬಿದ್ದೇನು ನಾನು ಚಿರಿದ ಸಪ್ಪಳ ಕೇಳಿ ಒಳಗಿನಿಂದ ನನ್ನ ಹೆಂಡತಿ ಶರಣಮ್ಮ ವಾರಿಕ ಇವಳು ಹೋರಗಡೆ ಬಂದಾಗ ಮಹಾದೇವಿ ಇವಳು ನನ್ನ ಹೆಂಡತಿಗೆ ಹಿಡಿದು ನಿಲ್ಲಿಸಿ ಅವಳ ತಲೆಯ ಮೇಲೆ ಚಪ್ಪಲಿಯಿಂದ 4-5 ಸಾರಿ ರಪರಪನೆ ಹೋಡೆದಳು ಆಗ ನಾನು ಮತ್ತು ನನ್ನ ಹೆಂಡತಿ ಚಿರಾಡುತ್ತಿದ್ದಾಗ ನಮಗೆ ಹೋಡೆಯುತ್ತಿದ್ದನ್ನು ನೊಡುತ್ತಿದ್ದ ಕಾಶಿನಾಥ ಉಪ್ಪಾರ ಮತ್ತು ಶಂಕ್ರೇಮ್ಮ ಬಂಡಿವಡ್ಡರ ಇವರು ಬಂದು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ರೇವೂರ ಠಾಣೆ : ದಿನಾಂಕ 17/09/2017 ರಂದು ಸಾಯಂಕಾಲ ನನ್ನ ಮಗ ಜಗಧೀಶನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಸುನೀಲ ತಂದೆ ಶ್ರೀಮಂತ ನಿಂಬಾಳ ಎಂಬಾತನು ಬಂದು ನನ್ನ ಮಗ ಜಗಧೀಶನಿಗೆ ಟ್ರ್ಯಾಕ್ಟರದಲ್ಲಿ ಉಸುಕು(ಮರಳು) ತುಂಬುವ ಕೆಲಸಕ್ಕೆ ಅಂತ ಕರೆದುಕೊಂಡು ಹೋಗಿರುತ್ತಾನೆ. ನನ್ನ ಮಗ ರಾತ್ರಿಯಾದರೂ ಮನೆಗೆ ಬರದ ಕಾರಣ ನಾನು ನಿಂಬಾಳದವರ ಮನೆಗೆ ಕೇಳಲು ಹೋದಾಗ ನನ್ನ ಮಗನಿಗೆ ಎಕ್ಸಿಡೆಂಟ ಆಗಿರುತ್ತದೆ ಅಂತಾ ಗೊತ್ತಾಯಿತು. ದಿನಾಂಕ: 18/09/2017 ರಂದು ಮದ್ಯರಾತ್ರಿ 03-00 ಗಂಟೆಯ ಸುಮಾರಿಗೆ ನನ್ನ ಮಗನಿಗೆ ಅಫಜಲಪೂರ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆ ಅಂತ ಗೊತ್ತಾಗಿದ್ದರಿಂದ ನಾನು ಸರಕಾರಿ ಆಸ್ಪತ್ರೆಗೆ ಹೋದಾಗ ನನ್ನ ಮಗ ಮೃತಪಟ್ಟಿ ಬಗ್ಗೆ ಗೊತ್ತಾಗಿರುತ್ತದೆ. ನಂತರ ನನ್ನ ತಮ್ಮನಾದ ಲಕ್ಷ್ಮಿಪುತ್ರ ಎಂಬಾತನಿಂದ ಕೇಳಿ ಗೊತ್ತಾಗಿದ್ದೇನೆಂದರ ನಿನ್ನೆ ದಿನಾಂಕ: 17/09/2017 ರಂದು ರಾತ್ರಿ ಭೋಗನಳ್ಳಿ ಗ್ರಾಮಕ್ಕೆ ಹೋಗುವ ರೋಡಿಗೆ ಮಲ್ಲು ಖೇಮಜಿ ರವರ ಹೋಲದ ಹತ್ತಿರ ಜಗಧೀಶನು ಸುನೀಲ ನಿಂಬಾಳ ರವರ ಟ್ರ್ಯಾಕ್ಟರದಲ್ಲಿ ಕುಳಿತು ಹೋಗುತ್ತಿದ್ದಾಗ ಅದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಜಗಧೀಶನು ಟ್ರ್ಯಾಕ್ಟರನಿಂದ ಕೆಳಗೆ ಬಿದ್ದಿದ್ದು ಟ್ರ್ಯಾಕ್ಟರಗಾಲಿ ಮುಖ ಮತ್ತು ತಲೆಯ ಮೇಲೆ ಹಾಯ್ದು ಹೋಗಿದ್ದರಿಂದ ತಲೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೌಂಸ ಖಂಡಗಳು ಹೊರ ಬಂದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಗೊಟತ್ತಾಗಿದ್ದು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೆಲೆ ಬ್ರೇಕ ಹಾಕಿ ನನ್ನ ಮಗನ ಸಾವಿಗೆ ಕಾರಣನಾದ ಸುನೀಲ ನಿಂಬಾಳ ರವರ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ನೀಲಮ್ಮ ಗಂಡ ಭಾಗಪ್ಪ  ಕಡಜಿನವರ ಸಾ: ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.