POLICE BHAVAN KALABURAGI

POLICE BHAVAN KALABURAGI

26 August 2017

Kalaburagi District Reported Crimes

ಸಜಾಬಂಧಿ ಖೈದಿ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಕೃಷ್ಣಕುಮಾರ  ಮುಖ್ಯ ಅಧಿಕ್ಷಕರು  ಕೇಂದ್ರ ಕಾರಾಗೃಹ  ಕಲಬುರಗಿ ರವರು ಕಾರಾಗೃಹದ ಸಜಾ ಬಂಧಿ ಸಂಖ್ಯೆ 19992 ಪ್ರಕಾಶ ತಂದೆ ಮಲ್ಕಪ್ಪಾ ಕನ್ನಡಗಿ ಸಾ: ರಾಮನಗರ ಕಲಬುರಗಿ ಸದರಿಯವನು ಇಂದು ದಿನಾಂಕ 25/08/2017 ರಂದು ಎದೆ ನೋವು ಆಗುತ್ತಿದೆ ಎಂದು ತಿಳಿಸಿದ ಪ್ರಯುಕ್ತ  ಜೈಲಿನ ಒಳ ಆಸ್ಪತ್ರೆಯಲ್ಲಿ  ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ  ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ಸಲಹೆ ನೀಡಿದ ಮೇರೆಗೆ ಜೈಲು ಸಿಬ್ಬಂದಿ ಬೆಂಗಾವಲು ಮೂಲಕ  ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ ಸದರಿ ಬಂದಿಗೆ ತಪಾಸಣೆ  ಮಾಡಿರುವ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರು ಸದರಿ ಬಂಧಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ಬೆಂಗಾವಲು ಸಿಬ್ಬಂದಿಯವರು ಈ ಸಂಸ್ಥೆಯ  ಮುಖ್ಯ ದ್ವಾರಪಾಲಕರಿಗೆ ದೂರವಾಣಿ ಮೂಲಕ ತಿಳಿಸಿರುತ್ತಾರೆ. ಸದರಿ ಬಂಧಿಗೆ ಗೌರವಾನ್ವಿತ 1 ನೇ ಅಪರ ಜೆಎಮ್‌ಎಪ್‌‌ಸಿ ನ್ಯಾಯಾಲಯ ಕಲಬುರಗಿ ಇವರ ಸಿಸಿ ಸಂಖ್ಯೆ 1563/08 (ಕಮಲಾಪೂರ ಪೊಲೀಸ ಠಾಣೆಯ ಗುನ್ನೆ ಸಂಖ್ಯೆ 50/08) ರಲ್ಲಿ ದಿನಾಂಕ: 30/11/2016 ರಂದು 2 ವರ್ಷ 6 ತಿಂಗಳು ಕಠಿಣ ಶಿಕ್ಷೆ ಹಾಗೂ ದಂಡ ರೂ 10.000/- ರೂದಂಡ ಕಟ್ಟಲು ತಪ್ಪಿದಲ್ಲಿ 09 ತಿಂಗಳು 15 ದಿನ ಶಿಕ್ಷೆ ಅನುಭವಿಸುವಂತೆ ಆದೇಶವಿರುತ್ತದೆ. ಸದರಿ ಬಂಧಿಯು ಮೃತಪಟ್ಟ ವಿಷಯವನ್ನು ಮೃತ ಬಂಧಿಯ ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಲಾಗಿದೆ ಹಾಗೂ ಈ ವಿಷಯವನ್ನು ಕಮಲಾಪೂರ ಪೊಲೀಸ ಠಾಣೆ ಅಧಿಕಾರಿಗಳಿಗೂ ಸಹ ದೂರವಾಣಿ ಮೂಲಕ ತಿಳಿಸಲಾಗಿರುತ್ತದೆ. ಮೃತ ಬಂಧಿಯ ಶವವನ್ನು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಶವದ ಮರಣೊತ್ತರ ಪರೀಕ್ಷೆ, ಶವ ಪಂಚನಾಮೆ, ಮಾಡಿಸಲು ಕೋರಿದ ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ಜೈನಾಬಾಯಿ ಗಂಡ ಶಿವಾಜಿ ಚವ್ಹಾಣ ಸಾ:ಭೀಮನಾಳ  ತಾಂಡಾ ತಾ:ಜಿ:ಕಲಬುರಗಿ ಇವರ ಗಂಡನಿಗೆ ಕುಷ್ಟರೋಗ ಆಗಿದ್ದು  ಈಗ ಸೂಮಾರು 8 ವರ್ಷಗಳ ಹಿಂದೆ ನಾವು ಮತ್ತು ನಮ್ಮ ತಾಂಢಾದ ಕಾರಬಾರಿ ಖಾಂದಾನದವರು ಕೂಡಿಕೊಂಡು ನಮ್ಮ ತಾಂಡಾದ ಎದುರಿಗೆ ಲೋಕಮಾಸಂದ ಮತ್ತು ಮಹಾಂಕಾಳಿ ಸಣ್ಣ ಗುಡಿಯು ಕಟ್ಟಿ ಪ್ರತಿ ಶ್ರಾವಣ ಮಾಸದ ಅಮವಾಸೆಯ ದಿವಸ ತಾಂಡಾದ ಎಲ್ಲರೂ ಜನರು ಕೂಡಿ ಜಾತ್ರೆ ಮಾಡುತ್ತಾ ಬಂದಿರುತ್ತೆವೆ. ಇದೆ ಸೋಮವಾರ ಖಾಂಡ ಮಾಡಿ ಮಂಗಳವಾರದ ದಿವಸ ಮಹಾಂಕಾಳಿ ದೇವಿಯ ಪೂಜೆ ಮಾಡಿ ದಿವಸ ತಾಂಢಾದ ಎಲ್ಲಾ ಜನರಿಗೆ ಊಟ ಪ್ರಸಾದ ಕೋಟ್ಟಿರುತ್ತೆವೆ. ಅಂದಿನಿಂದ ನಮ್ಮ ತಾಂಢಾದ ಸಂಜುಕುಮಾರ ತಂದೆ ತುಕಾರಾಮ ಚವ್ಹಾಣ ನಮ್ಮ ಮೇಲೆ ವೈಷಮ್ಯ ಸಾಧಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ಹಿಗಿದ್ದು ಇಂದು ದಿನಾಂಕ:24.08.2017 ರಂದು ಬೆಳಿಗ್ಗೆ 08.30 ಗಂಟೆಗೆ ನಾನು ನನ್ನ ಗಂಡ ಮಗನಾದ ಚಂದ್ರಕಾಂತ ಎಲ್ಲರೂ ರೇಖು ಪೂಜಾರಿ ಅಂಗಡಿಯ ಎದುರಿಗೆ ನಿಂತುಕೊಂಡಾಗ ಅಲ್ಲಿಗೆ ಬಂದ ಸಂಜುಕುಮಾರ ಈತನು ನನ್ನ ಗಂಡನಿಗೆ ನೋಡಿ ಕುಷ್ಟ ರೋಗ ಇದೆ ಅವನಿಗ್ಯಾರು ಮುಟ್ಟಿಸಿಕೋಳ್ಳಬಾರದು ಆದರು ಸಹ ಮಹಾಂಕಾಳಿ ಜಾತ್ರೆಯಲ್ಲಿ ಓಡಾಡಿರುತ್ತಾನೆ ಅಂತಾ ಬೈಯ ತೊಡಗಿದನು ಆಗ ನಾನು ಯಾಕ ನನ್ನ ಗಂಡನಿಗೆ ಬೈಯುತ್ತಿ ದೇವರು ತಂದ ವೇಳೆ ಇದೆ ಅಂದರು ಸಂಜುಕುಮಾರ ಈತನು ನನಗೆ ರಂಡಿ ನನಗೆ ಎದುರು ಮಾತನಾಡುತ್ತಾಳೆ ಅಂತಾ ಬೈದು ಅಲ್ಲೆಬಿದ್ದಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಎಡಗೈ ಹಸ್ತದ ಮೇಲ್ಬಾದಲ್ಲಿ ಹೋಡೆದು ರಕ್ತಗಾಯ ಪಡಿಸಿದನು. ಅಲ್ಲದೆ ಅದೇ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಎರಡು ಛಪ್ಪಿಯ ಮೇಲೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ ಆಗ ನನ್ನ ಮಗ ಚಂದ್ರಕಾಂತ ಜಗಳ ಬಿಡಿಸಲು ಬಂಧಾಗ ಅವನಿಗು ಕೈಯಿಂದ ಹೋಡೆಬಡೆ ಮಾಡಿರುತ್ತಾನೆ. ಆಗ ಅಲ್ಲೆಇದ್ದ ನನ್ನ ಗಂಡ, ನನ್ನ ಭಾವ ತುಕಾರಾಮ,ಮೋನು ಚವ್ಹಾಣ ಎಲ್ಲರೂ ಕೂಡಿಕೊಂಡು ನನಗೆ ಹೋಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸಂಜುಕುಮಾರ ತಂಧೆ ತುಕಾರಾಮ ಚವ್ಹಾಣ ಸಾ:ಭೀಮನಾಳ ತಾಂಡಾ ತಾ:ಜಿ:ಕಲಬುರಗಿ ರವರು ತಾಂಡಾದಲ್ಲಿ ಲೋಕಮಸಾಂದ ಮತ್ತು ಮಹಾಂಕಾಳಿ ದೇವಿಯ ಸಲುವಾಗಿ ತಾಂಡಾದವರೆಲ್ಲರು ಕೂಡಿ 65.65 ಜಾಗವನ್ನು ಕೋಟ್ಟಿದ್ದು ಜಾಗದಲ್ಲಿ ತುಕಾರಾಮ ಮತ್ತು ಅವರ ತಮ್ಮ ಶಿವಾಜಿ ಆಜಾಗವನ್ನು ತಮ್ಮ ಕಬ್ಜೆಯಲ್ಲಿ ತೆಗೆದುಕೊಂಡಿದ್ದು. ನಮ್ಮ ತಾಂಢಾದವರೆಲ್ಲರೂ ದೇವರಿಗೆ ಕೋಟ್ಟ ಜಾಗ ಬಿಟ್ಟು ಕೋಡಿರಿ ಅಂತಾ ಹೇಳಿದಾಗ ಅವರು ಜಾಗ ಬಿಟ್ಟುಕೊಡದೆ ಅವರೆ ಬಳಸಿಕೋಳ್ಳುತ್ತಿದ್ದಾರೆ. ಹಿಗಿದ್ದು ನಿನ್ನೆ ದಿನಾಂಕ:24.08.2017 ರಂದು  ಬೆಳಿಗ್ಗೆ 08.30 ಗಂಟೆಯ ಸೂಮಾರಿಗೆ ನಾನು ರೇಖು ಪುಜಾರಿ ಅಂಗಡಿಯ ಎದುರಿಗೆ ನಿಂತಾಗ 1. ಚಂದ್ರಕಾಂತ ತಂದೆ ಶಿವಾಜಿ ಚವ್ಹಾಣ 2. ತುಕಾರಾಮ ತಂದೆ ಮೇಗು ಚವ್ಹಾಣ ಪಂಡಿತ ತಂದೆ ತುಕಾರಾಮ ಚವ್ಹಾಣ ಜೈನಾಬಾಯಿ ಗಂಡ ಶಿವಾಜಿ ಚವ್ಹಾಣ ಸಾ:ಎಲ್ಲರೂ ಭೀಮನಾಳ ತಾಂಡಾ ಇವರೆಲ್ಲರೂ ನಾನು ಇದ್ದಲ್ಲಿಗೆ ಬಂದು ಅವರಲ್ಲಿ ಚಂಧ್ರಕಾಂತ ಈತನು ನಗೆ ಭೋಸಡಿ ಮಗನೆ ದೇವಿಯ ಜಾಗ ಯಾರು ಕೇಳುತ್ತಿಲ್ಲ ನಿನೆಕೆ ಕೇಳುತ್ತಿ ಅಂತಾ ಬೈದು ತನ್ನ ಕೈಯಲ್ಲಿದ್ದ ಬಿಡಿಗೆಯಿಂದ ನನ್ನ ತಲೆಯ ಮೇಲೆ ಹೋಡೆದು ರಕ್ತಗಾಐ ಪಡಿಸಿದನು ತುಕಾರಾಮ ಈತನು ರಂಡಿ ಮಗನಿಗೆ ಬಹಾಳಸೋಕ್ಕು ಆದಾ ಅಂತಾ ಬೈದು ಚಂಧ್ರಕಾಂತನ ಕೈಯಲ್ಲಿದ್ದ ಬಡಿಗೆಯನ್ನು ಕಸಿದುಕೊಂಡು ನನ್ನ ಬಲಗೈ ಬೆರಳುಗಳ ಮೇಲೆ ಹೋಡೆದು ರಕ್ತಗಾಯ ಮಾಡಿದನು. ನನ್ನ ಹೆಬ್ಬರಳಿಗೆ, ಹೆಬ್ಬರಳಿನ ಪಕ್ಕದ ಬೆರಳಿಗೆ ಹೋಡೆದಿದ್ದರಿಂದ ಮುರಿದಂತೆ ಆಗಿದೆ ಪಂಡಿತ ಈತನು ನನಗೆ ಕೈಯಿಂದ ಹೋಟ್ಟೆಗೆ ಬೆನ್ನಿಗೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ. ಜೈನಾಬಾಯಿ ಇವಳು ಹಾಟ್ಯಾ ಯಾವಾಗಲು ನನಗೆ ಜಾಗದ ವಿಷಯದಲ್ಲಿ ತಕರಾರು ಮಾಡುತ್ತಾನೆ. ಇವನಿಗೆ ಬಿಡಬ್ಯಾಡರಿ ಖಲಾಸ ಮಾಡರಿ ಅಂತಾ ಒದರಾಡಿರುತ್ತಾಳೆ. ಅಲ್ಲೆಇದ್ದ ಭೋಜು ತಂಧೆ ಸೋಮು ನಾಯಕ ಮಾರುತಿ ತಂದೆ ಪೋಮು ಚವ್ಹಾಣ ಗೇಮು ತಂದೆ ಶಿವರಾಮ ಚವ್ಹಾಣ ಮೋನು ತಂದೆ ಢಾಕು ಚವ್ಹಾಣ ಇವರುಗಳು ಜಗಳವನ್ನು ಬಿಡಿಸಿಕೊಂಡಿರುತ್ತಾರೆ ಕಾರಣ ನನಗೆ ಹೋಡೆಬಡೆ ಮಾಡಿದ ಚಂಧ್ರಕಾಂತ ಹಾಗೂ ಇತರರ ವಿರುದ್ದ ಕಾನೂನ ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 August 2017

Kalaburagi District Reported Crimes

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶರಣಬಸಪ್ಪ ತಂದೆ ಬಸವರಾಜ ಹಿರಾಪೂರ ಸಾ|| ಕೋಳಕುರ ಹಾ.. ಲಕ್ಕಪ್ಪ ಲೇಔಟ್ ಜೇವರಗಿ ಇವರ ಹಿರಿಯ ಮಗ ಬಸವರಾಜ ವಯಸ್ಸು 14 ವರ್ಷ ಇರುತ್ತದೆ ಇತನು  ಜೇವರಗಿ ನಗರದ ಸರ್ಕಾರಿ ಹೈಸ್ಕೂಲನಲ್ಲಿ  8 ನೇ ಓದುತ್ತಿದ್ದಾನೆ ಎಂದಿನಂತೆ ಸದರಿ ನನ್ನ ಮಗ ಬಸವರಾಜ ಇತನು ದಿನಾಂಕ 16.08.2017 ರಂದು ಬೆಳಗ್ಗೆ 09.00 ಗಂಟೆ ಸೂಮಾರಿಗೆ ಶಾಲೆಗೆ ಹೋಗುತ್ತೇನೆ ಅಂತಾ ಹೇಳಿ  ಮನೆಯಿಂದ ಹೋಗಿರುತ್ತಾನೆ , ನಂತರ ಅಂದು ಸಾಯಾಂಕಾಲವಾದರು ಕೂಡಾ ಮನೆಗೆ ಬಾರದ ಕಾರಣ ನಾನು ನನ್ನ ಹೆಂಡತಿ ಮತ್ತು ನಮ್ಮ ಓಣಿಯ ಚಾಂದಸಾಬ ಮೂವರು ಕೂಡಿಕೊಂಡು ಜೇವರಗಿ ನಗರ ತುಂಬೆಲ್ಲಾ ಹುಡುಕಾಡಿದರು ನನ್ನ ಮಗ ಬಸವರಾಜ ಸಿಕ್ಕಿರುದಿಲ್ಲಾ ನಂತರ ನಮ್ಮ ಬೀಗರು ಮತ್ತು ಸಂಬಂದಿಕರ ಊರುಗಳಿಹೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಣೆ ಮಾಡಿದರು ಕೂಡಾ ನನ್ನ ಮಗನ ಬಗ್ಗೆ ಪತ್ತೆಯಾಗಿರುವುದಿಲ್ಲಾ ನಾವು ಅಂದಿನಿಂದ ಇಂದಿನ ವರೆಗೆ ನನ್ನ ಮಗನನ್ನು ಜೇವರಗಿ,ಸುತ್ತ ಮುತ್ತಾ ಹಳ್ಳಿಗಳಲ್ಲಿ ಹುಡುಕಾಡಿರು ಅವನು ಸಿಕ್ಕಿರುವುದಿಲ್ಲಾ , ನನ್ನ ಮಗ ಬಸವರಾಜನು ದಿನಾಂಕ 16.08.2017 ರಂದು ಬೆಳಗ್ಗೆ ಶಾಲೆಗೆ ಹೋಗುವಾಗ ಯಾರೋ ಅಪರಿಚಿತರು ಅಪಹರಿಸಿಕೊಂಡು (ಅಪಹರಣ ) ಮಾಡಿಕೊಂಡು ಹೋಗಿರಬಹುದು , ನನ್ನ ಮಗ ಬಸವರಾಜನ ಚಹರಾ ಪಟ್ಟಿ :- ಅಂದಾಜು 4 ಅಡಿ ಎತ್ತರ ಗೋಧಿ ಮೈಬಣ್ಣ ದುಂಡನೆ ಮುಖ ಇದ್ದು ಕನ್ನಡ ಭಾಷೆ ತೊದಲು ಮಾತನಾಡುತ್ತಾನೆ ಅವನು ಅಂದು ಹಳದಿ,ಕಪ್ಪು ಹಾಗೂ ಬಿಳಿ ಬಣ್ಣದ ಹಾಫ ಶರ್ಟ ಹಾಗೂ ಒಂದು ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿರುತ್ತಾನೆ , ಅವನಿಗೆ ಬಲಗಣ್ಣಿನ ಕೇಳಗೆ ಹಳೆಯ ಗಾಯದ ಗುರುತು ಇರುತ್ತದೆ .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ಜಮೀರ ತಂದೆ ಮಹ್ಮದ ರಫೀಕ ಬಂದೇಲಿ ಸಾ: ಚಾಂದಾ ಬಾಡಾ ಶಹಾಬಾದ ಇವರು ದಿನಾಂಕ: 23/08/2017 ರಂದು ಮದ್ಯಾಹ್ನ ಶಹಾಬಾದದ ಮಹೆಬೂಬ ಸುಭಾನಿ ದರ್ಗಾ ಹತ್ತಿರದಿಂದ  ನಾನು ಮತ್ತು ಗಣೆಶ ವರ್ಮಾ ಕೂಡಿಕೊಂಡು ಹೋಗುತ್ತಿದ್ದಾಗ ಬಿಲಾಲ ಕೋಲಾರಕರ ಇತನು ನಿಂತಿದ್ದನು ಅವನಿಗೆ ನಾನು ನನ್ನ ಅಣ್ಣನಾದ ಮಹ್ಮದ ವಸೀಮ ನಿನ್ನಿಂದಲೇ ಸತ್ತಿರುತ್ತಾನೆ ಅಂತಾ ಅಂದಿದ್ದಕ್ಕೆ ಅವನು ಒಮ್ಮಲೆ ಸಿಟ್ಟಿಗೆ ಒಂದು ನನಗೆ ಹೋಗಲು ಬಿಡದೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕೈ ಮುಷ್ಟಿ ಮಾಡಿ ಎಡಗೈ ಗೆ ಮತ್ತು ಕುತ್ತಿಗೆ ಹಿಂದೆ ಹೊಡೆದು ಗುಪ್ತಗಾಯಾ ಪಡಿಸಿ ನಿನಗೆ ಬಿಡುವುದಿಲ್ಲಾ ಮಗನೆ ಅಂತಾ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಪುತ್ರ ತಂದೆ ಸಾಯಬಣ್ಣ :50 ಸಾ:ಕಡಬೂರ ಇವರು ದಿನಾಂಕ:11.08.2017 ರಂದು ಬೆಳಗಿನ ವೇಳೆ ತಮ್ಮೂರ ರೇವಣಸಿದ್ದಪ್ಪಾ ತಂದೆ ಶ್ರೀಮಂತ ಇತನು ಚಲಾಯಿಸುವ ಕ್ರೂಸರ್ ಜೀಪ್ ನಂ.ಕೆಎ-32 ಎಮ್-8420 ನೇದ್ದರಲ್ಲಿ ಫಿರ್ಯಾದಿ ಮಗ ಅಭಿಶೇಕ ಇತನಿಗೆ ಕೂಡಿಸಿಕೊಂಡು ಶಹಾಬಾದ ಮಾರ್ಗವಾಗಿ ಚಿತ್ತಾಪೂರಕ್ಕೆ ಹೋಗುವಾಗ 4.00 ಎಎಂಕ್ಕೆ  ಮಾಲಗತ್ತಿ ದಾಟಿ ರಸ್ತೆಯ ತಿರುವಿನಲ್ಲಿ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋಗಿ ಕಟ್ ಹೊಡೆದಿದ್ದರಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿ ಮಗ್ಗಲಾಗಿ ಬಿದ್ದು ಅಪಘಾತ ವಾಗಿರುತ್ತದೆ ಅಂತಾ ವಿಷಯ ಗೊತ್ತಾಗೆ ಸ್ತಳಕ್ಕೆ ಬಂದು ಗಾಯ ಪೆಟ್ಟು ಹೊಂದಿದ್ದ ಫಿರ್ಯಾದಿ ಮಗ ಅಭಿಶೇಕ ಇತನಿಗೆ ನೋಡಲಾಗಿ ಹಣೆಗೆ ಗದ್ದಕ್ಕೆ ತಲೆಗೆ ಮತ್ತು ಬಲಗೈ ಗೆ ರಕ್ತಗಾಯವಾಗಿ ಅಲ್ಲಲ್ಲಿ ರತಚಿದ ಗಾಯವಾಗಿ ಬೇ ಹೋಶ್ ಆಗಿದ್ದು ಚಾಲಕನಿಗೆ ನೋಡಲಾಗಿ ಎದೆಗೆ ಮತ್ತು ತಲೆಗೆ ಒಳಪೆಟ್ಟಾಗಿದ್ದು ಗಾಯ ಪೆಟ್ಟು ಹೊಂದಿದ ಅಭಿಶೇಕ ಇತನಿಗೆ ಕಲಬುರಗಿಯ ಸರೋಜಿನಿ ಮೋದಿ ಆಸ್ಪತ್ರೆಗೆ ದಾಖಲುಮಾಡಿದ್ದು  ಕ್ರೂಸರ್ ಜೀಪ್ ನಂ.ಕೆಎ-32 ಎಮ್-8420 ನೇದ್ದರ ಚಾಲಕ ಅತೀ ವೇಗ ಮತ್ತು ನಿಶ್ಕಾಳಜಿತನದಿಂದ ನಡೆಸುತ್ತಾ ಬಂದು ಅಪಘಾತ ಮಾಡಿದ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.