POLICE BHAVAN KALABURAGI

POLICE BHAVAN KALABURAGI

25 July 2017

Kalaburagi District Reported Crimes.

£ÀgÉÆÃuÁ oÁuÉ : ದಿನಾಂಕ:- 24/07/2017 ರಂದು ಬೆಳಿಗ್ಗೆ 11:00 ಗಂಟೆಗೆ ಶ್ರೀ ಆನಂದ ಪಿಸಿ-1258 ನರೋಣಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ದೇಗಾಂವ ಗ್ರಾಮದ ಸೀಮಾಂತರದಲ್ಲಿ ಪಿ.ಎಸ್.ಐ ಸಾಹೇಬರು ಸ್ವೀಕೃತ ಮಾಡಿಕೊಂಡ ಲಿಖಿತ ದೂರನ್ನು ಸದರಿ ಆನಂದ ಪಿಸಿ ರವರು ಹಾಜರು ಪಡಿಸಿದ್ದು ಸದರಿ ಲಿಖಿತ ದೂರಿನ ಸಾರಾಂಶವೇನೆಂದರೆ ಶಿವರಾಜ ತಂದೆ ಸೈಬಣ್ಣ ಮಾಲಿ ಪಾಟೀಲ್ ವ: 50ವರ್ಷ, ಉ: ಒಕ್ಕಲುತನ, ಜಾ: ಲಿಂಗಾಯತ ಸಾ: ದೇಗಾಂವ ತಾ: ಆಳಂದ ಜಿ; ಕಲಬುರಗಿ ಇದ್ದು. ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ ಇಂದು ದಿನಾಂಕ:- 24/07/2017 ರಂದು ಮುಂಜಾನೆ 08:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಲಿಂಗರಾಜ @ ಚನ್ನಬಸವ ತಂದೆ ಶಿವಣ್ಣಾ ಸಾಹು, ಶಮಶೋದ್ದಿನ ತಂದೆ ಸರದಾರಸಾಬ ಮುಲ್ಲಾ ರವರುಗಳು ಕೂಡಿಕೊಂಡು ಮಾತನಾಡುತ್ತಾ ಹನುಮಾನ ದೇವಸ್ಥಾನದ ಹತ್ತಿರ ನಿಂತಿರುವಾಗ ನಮ್ಮೂರಿನ ಸಿದ್ದಪ್ಪ ತಂದೆ ಮಹಾಲಿಂಗ ಪೂಜಾರಿ ಈತನು ಬಂದು ನಮ್ಮ ತಮ್ಮನಾದ ದಿಲೀಪ ಈತನ ಪಾಲಿಗೆ ಬಂದಿರುವ ಬಸವನ ಸಂಗೋಳಗಿ ರಸ್ತೆಯ ಪಕ್ಕದಲ್ಲಿರುವ ಮಸಗುರ್ತಿ ಹೊಲದ ಪಕ್ಕದಲ್ಲಿ ಒಬ್ಬ ಗಂಡು ಮನುಷ್ಯನ ಶವಕ್ಕೆ ಬೆಂಕಿ ಹತ್ತಿ ಉರಿಯುತ್ತಿದೆ ಎಂದು ತಿಳಿಸಿದ ಮೇರೆಗೆ ನಾವೆಲ್ಲರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮ ದಿಲೀಪನ ಹೊಲದ ಪಕ್ಕದಲ್ಲಿ ಸುಮಾರು 20 ರಿಂದ 22 ವಯಸ್ಸಿನ ಗಂಡು ಮನುಷ್ಯನ ಮೃತ ದೇಹಕ್ಕೆ ಬೆಂಕಿ ಹತ್ತಿ ಉರಿಯುತ್ತಿದ್ದು ಸದರಿ ವ್ಯಕ್ತಿಗೆ ಯಾರೋ ಯಾವುದೋ ದುರುದ್ದೇಶದಿಂದ ಕೊಲೆ ಮಾಡಿ ಅವನ ಶವವನ್ನು ಒಂದು ಚೀಲದಲ್ಲಿ ಹಾಕಿಕೊಂಡು ಬಂದು ಗುರುತು ಸಿಗಬಾರದೆಂದು ಶವದ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತಾರೆ ಅವನ ದೇಹವು ಪೂರ್ತಿ ಸುಟ್ಟಿದ್ದು ಸೊಂಟದ ಭಾಗದಲ್ಲಿ ಸ್ವಲ್ಪ ಪ್ಯಾಂಟ್ ಮಾತ್ರ ಅರ್ಧ ಮರ್ದ ಸುಟ್ಟ ಸ್ಥಿತಿಯಲ್ಲಿ ಇರುತ್ತದೆ. ದಿನಾಂಕ:- 24/07/2017 ರಂದು 02:00 ರಿಂದ 06:00 ಮದ್ಯದ ಅವಧಿಯಲ್ಲಿ ಯಾರೋ ಸದರಿ ಅಪರಿಚಿತ ಗಂಡು ಮನುಷ್ಯನನ್ನು ಯಾವುದೋ ದುರುದ್ದೇಶದಿಂದ ಕೊಲೆ ಮಾಡಿ ಸಾಕ್ಷಿ ನಾಶಪಡಿಸಬೇಕೆಂದು ಅವನ ಶವವನ್ನು ನನ್ನ ತಮ್ಮನ ಹೊಲದಲ್ಲಿ ಪಕ್ಕದಲ್ಲಿ ಬಿಸಾಕಿ ಮೈ ಮೇಲೆ ಸೀಮೆ ಎಣ್ಣೆ ಸುರಿದು ದೇಹಕ್ಕೆ ಬೆಂಕಿ ಹಚ್ಚಿರುತ್ತಾರೆ. ಈ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.


±ÀºÁ¨ÁzÀ £ÀUÀgÀ oÁuÉ : ದಿನಾಂಕಃ 24/07/2017 ರ ಮದ್ಯಾಹ್ನ 3-00 ಕ್ಕೆ ಗಂಟೆಗೆ ದೇವನ ತೆಗನೂರ, ಶಾಂತ ನಗರ  ಕಡೆಗೆ ಹೋದಾಗ ಪೊಲೀಸ ಬಾತ್ಮಿದಾರರಿಂದ ತಿಳಿದು ಬಂದಿದ್ದೇನೆಂದರೆ ಠಾಣೆಯ ರೌಡಿ ಶೀಟರಗಳಾಧ 1) ಇಬ್ರಾಹಿಂ ತಂದೆ ಅಬ್ದುಲಸಾಬ ಕೊಟನೂರ ಸಾ: ದೇವನ ತೆಗನೂರ 2) ಮಹ್ಮದ ರೀಯಾಜ ತಂದೆ ಹಾಜಿ ಕರೀಮ ಶೇಖ ಸಾ: ಶಾಂತ ನಗರ ಭಂಕೂರ ಇವರು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ನಿಲ್ಲುವದು, ಏರಿಯಾದಲ್ಲಿ  ಗುಂಪುಗಾರಿಕೆ ಮಾಡಿಕೊಂಡು ತಿರುಗಾಡುತ್ತಿದ್ದು, ಸದರಿಯವರು ಗಲಭೆ ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು  ಮಾಡಿ, ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ,  ಸದರಿಯವರ  ವಿರುದ್ದ ಮುಂಜಾಗ್ರತಾ ಕ್ರಮ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ.  

24 July 2017

Kalaburagi District Reported Crimes.


ಗ್ರಾಮೀಣ ಠಾಣೆ : ದಿನಾಂಕ. 23-7-2017 ರಂದು 4-30 ಪಿ.ಎಂ.ಕ್ಕ. ಫಿರ್ಯಾದಿ ಶ್ರೀ.  ಶ್ರೀ ರಿಯಾಜ ಅಹೇಮದ ಪಟೇಲ್ ತಂದೆ ಅಬ್ದುಲ ರಹೀಮ ವಯ;54 ವರ್ಷ ಜ್ಯಾತಿ; ಮುಸ್ಲಿಂ ಉ; ವ್ಯಾಪಾರ ಸಾ;  ನ್ಯೂ ;ಗಾಲೀಬ್ ಕಾಲೂನಿ ಎಂ.ಎಸ್.ಕೆ.ಮಿಲ್ಲ ಕಲಬುರಗಿ  ಇವರು ಕೊಟ್ಟ ಫಿರ್ಯಾದಿ ಹೇಳಿಕೆ ಸಂಕ್ಷಿಪ್ತ ಸಾರಂಶ ಏನೆಂದರೆ ಮಿಸಬಾನಗರದಲ್ಲಿ ಇರುವ ಬ್ರಹ್ಮಪೂರ ಸರ್ವೆ ನಂ. 122/1  ನೆದ್ದರಲ್ಲಿ  ಪ್ಲಾಟ ನಂ.1   40X60 ನೇದ್ದು ಫಿರ್ಯಾದಿದಾರ ಅಕ್ಕನ ಹೆಸರಿನಲ್ಲಿದ್ದು,ಸದರಿ ಪ್ಲಾಟು ಜಾಗೆ ಆರೋಪಿತರು ತಮಗೆ ಸಂಬಂಧಿಸಿದ್ದು  ಅಂತಾ 2015 ಸಾಲಿನಿಂದ ತಕರಾರು ಮಾಡುತ್ತಾ ಬಂದಿದ್ದು, ಇದರಿಂದಾಗಿ ಆರೋಪಿತರು ಮತ್ತು ಫಿರ್ಯಾದಿರಾರಿಗೂ ಜಗಳಾವಾಗಿ ವೈಷ್ಯಮ ಬೆಳೆದಿದ್ದು ಇರುತ್ತದೆ. ಇಂದು ದಿನಾಂಕ23/07/17 ರಂದು ಮಧ್ಯಾಹ್ನ 02-30 ಗಂಟೆ ಸುಮಾರಿಗೆ ಮುದ್ದಸೀರ @ ಇಲಿಯಾಸ ಇತನು ಸದರ ಪ್ಲಾಟ ನಂ.1 ಜಾಗೆಯಲ್ಲಿ ಇದ್ದಾಗ ಆರೋಪಿತರೆಲ್ಲರೂ ಅಲ್ಲಿಗೆ ಕೂಡಿಕೊಂಡು ಬಂದು ಮುದ್ದಸೀರನಿಗೆ ಮಾಕೆ ಲವಡೆ ಹಮಾರ ಪ್ಲಾಟ ಮೆ ಆಕೆ ಕ್ಯಾ ಕರರೇ  ಇಸಸೆ ಪಹಲೆ ತುಮಾರಕೂ ಪ್ಲಾಟ ನಹಿ ರೆಹನಾ ಬೋಲೇತೋ  ಬೀ ಪ್ಲಾಟ ಮೇಲೆ ಕ್ಯಾ  ಕಾಮ ಕರರಹೇ  ಅಂತಾ  ಅವಾಚ್ಯ ಶಬ್ದಗಳಿಂದ ಬೈಯುತ್ತಾ  1) ಇದ್ರೀಸ ಜಾಗೀರದಾರ ವಕೀಲ ಮತ್ತು 2) ಶೇಖ ಬಾಬಾ ತಂದೆ ಸಲೀಮ, 3)ಅಬ್ರಾರರ,4) ಆರೀಫ್ ತೋಲಾಪಾಶ 5) ಅಜರಜಾಗೀರದಾರ @ ಕ್ರೇಜಿ, 6) ಜಿಬ್ರಾನ 7) ಹಾಶಮ್ 8) ಸಾಜೀದ ಉರ ರೆಹಮಾನ, 9) ನಾಸೀರ ಉರ ರೆಹಮಾನ 10) ಜಾಕೀರ 11) ಇಮ್ರಾನ@ ಗೋವಿಂದ ಸಾ;ಎಲ್ಲರೂ ಕಲಬುರಗಿ 12) ಕುಷ್ಮಕರ ಸಾ;ಹೀರಾಪೂರ  ಮತ್ತು ಸಂಗಡ ಇತರರು ಎಲ್ಲರೂ ಕೂಡಿಕೊಂಡು ನನ್ನ ಅಳಿಯ ಮಹಮ್ಮದ ಮುದ್ದಸಿರನಿಗೆ ಕೆಳಗೆ ಹಾಕಿ ಸುತ್ತುವರೆದು ಕೈಯಿಂದ, ಕಾಲಿನಿಂದ ಮೈಮೇಲೆ ಸಿಕ್ಕಾಪಟ್ಟೆ ಹೊಡೆಬಡಿ ಮಾಡುತಿದ್ದರು ಅವರಲ್ಲಿ ಇದ್ರೀಸ್ ವಕೀಲ್ ಇತನು ತನ್ನ ಹತ್ತಿರವಿದ್ದ ಚಾಕುದಿಂದ ಮುದ್ದಸಿರನ ಹೊಟ್ಟೆಯಲ್ಲಿ ಹೋಡದು ಬಾರಿರಕ್ತಗಾಯಗೊಳಿಸಿದನು, ಶೇಖಬಾಬಾ ಇತನು ಮುದ್ದಸಿರನಿಗೆ ಒತ್ತಿಯಾಗಿ ಹಿಡಿಯಲು ಅರೀಫ್ ತೋಲಾಪಾಶಾ ಇತನು ಕೂಡಾತನ್ನ ಹತ್ತಿರವಿದ್ದ ಚಾಕು ತೆಗೆದುಕೊಂಡು ಮುದ್ದಸಿರನ ಎಡಗಾಲು ತೊಡೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದನು ಹಾಗೂ ಜಿಬ್ರಾನ ಇತನು ತನ್ನ ಹತ್ತಿರವಿದ್ದ ಚಾಕುದಿಂದ ಇದ್ರಿಸನ ತಲೆಯ ಮೇಲೆ  ಹೊಡೆದಾಗ ಬಾರಿ ರಕ್ತಸ್ರಾವವಾಗಿರುತ್ತದೆ. ಫಿರ್ಯಾದಿ ಚೀರಾಡುತ್ತಿದ್ದಾಗ ಅಕ್ಕ ಪಕ್ಕದ ಜನರು ಬರುತ್ತಿರುವುದನ್ನು ನೋಡಿ ಆರೋಪಿತರು ತಾವು ತಂದಿದ್ದ ಕಾರು ಮತ್ತು ಮೋಟಾರ ಸೈಕಲಗಳು ತೆಗೆದುಕೊಂಡು ಓಡಿ ಹೋಗಿದ್ದು ಇರುತ್ತದೆ. ಫಿರ್ಯಾದಿ  ಮತ್ತು ಮೊದಿನ , ನವೀದ , ಕಾಶಿಫ್ ಎಲ್ಲರೂ ನಮ್ಮ ಮನೆಯ ಜೀಪನಲ್ಲಿ ಮದ್ದಸೀರನಿಗೆ ಹಾಕಿಕೊಂಡು ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಮದ್ಯಾನ 3-25 ಗಂಟೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಲು ವೈದ್ಯರು ಮುದ್ದಸಿರನಿಗೆ ನೋಡಿ ಈಗಾಗಲೆ  ತರುವಾಗ ಮಾರ್ಗಧಲ್ಲಿ  ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ. ಪ್ಲಾಟ ನಂ.1 ನೆದ್ದರ ಜಾಗೆಯ ಕಬ್ಜಾ ತೆಗೆದುಕೊಳ್ಳುವ ಸಮ್ಮಂದವಾಗಿ  ಮತ್ತು ಈ ಮೇಲಿನ ವೈಷಮ್ಯದಿಂದ ಸದರಿ ಈ ಮೇಲಿನ ಆರೋಪಿತರು ಮಹಮ್ಮದ ಮುದ್ದಸೀರ @ ಇಲಿಯಾಸ ತಂದೆ  ಅಬ್ದುಲ ರಶೀದ ಕಿರಣಗಿ ವಯ;38 ವರ್ಷ ಸಾ;ನ್ಯೂ ಗಾಲಿಬ ಕಾಲೂನಿ ಕಲಬುರಗಿ  ಇತನಿಗೆ ಚಾಕುಗಳಿಂದ, ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕಾರಗುನ್ನೆ ದಾಖಲಾದ  ಬಗ್ಗೆ ವರದಿ .
¥sÀgÀºÀvÁ¨ÁzÀÀ oÁuÉ :  ದಿನಾಂಕ 23/07/2017 ರಂದು 8:15 ಪಿಎಮಗೆ  ಪಿರ್ಯಾದಿದಾರರಾದ ಶ್ರೀ ಸಾಹೇಬಗೌಡ ತಂದೆ ಚಂದ್ರಶೇಖರ ಮಸರಗೊಂಡ ವ: 38 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಸಾ: ನದಿಸಿನ್ನೂರ ಇವರು ಠಾಣೆಗೆ ಹಾಜರಾಗಿ ಕೊಟ್ಟು ಹೇಳಿಕೆಯ ಸಾರಾಂಶವೆನೆಂದರೆ. ಹೀಗಿದ್ದು  ಇಂದು ದಿನಾಂಕ 23/07/17 ರಂದು ಮದ್ಯಾಹ್ನ 1 ಗಂಟೆಗೆ ಖಾಸಗಿ ಕೆಲಸ ನಿಮಿತ್ಯ ಫರಹತಾಬಾದ ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ನನ್ನ ಮೋಟಾರ ಸೈಕಲ ಮೇಲೆ ಊರಿಗೆ ಹೋಗುವಾಗ ನಮ್ಮ ಹೊಲದಲ್ಲಿ ಇರುವ ತೋಗರಿ ಬೆಳೆಯಲ್ಲಿ ದನಗಳು ಮೇಯುವದನ್ನು ನೋಡಿ ನಾನು ನನ್ನ ಮೋಟಾರ ಸೈಕಲ ನಿಲ್ಲಿಸಿ ದನಗಳು ಓಡಿಸಲು ಹೋಗುವಾಗ ನಮ್ಮ ಹೊಲದ ಪಕ್ಕದಲ್ಲಿರುವ ರೋಡಿನ ನಾಲೆಯಲ್ಲಿ ಒಬ್ಬ ಗಂಡಸು ಮನುಷ್ಯನ ಶವ ಕಂಡಿದ್ದು ಆಗ ಸಾಯಂಕಾಲ 5 ಗಂಟೆಯಾಗಿತ್ತು ಸದರಿ ಶವ ಬಿದ್ದ ವಿಷಯ ದೂರವಾಣಿ ಮೂಲಕ ಫರಹತಾಬಾದ  ಪೊಲೀಸ ಠಾಣೆಗೆ ತಿಳಿಸಿದಾಗ ಆಗ ಪೊಲೀಸರು ಬಂದು ಶವ ನೋಡಿ ಪರಿಶಿಲಿಸಿದ್ದು ಸದರಿ ಅಪರಿಚಿತ ಗಂಡಸು ಮನುಷ್ಯನು ಅಂದಾಜು 40- 50 ವರ್ಷ ವಯಸ್ಸಿನವನಿದ್ದು. ಶವವು ಕೊಳೆತು ನಾರುತ್ತಿತ್ತು ಸದರಿ ಮೃತ ವ್ಯಕ್ತಿಯ ಮೈಮೇಲೆ ಒಂದು ಬಿಳಿ ಶ್ಯಾಂಡೊ ಬನಿಯನ್‌, ಬೂದು ಬಣ್ಣದ ಪುಲ ಪ್ಯಾಂಟ, ಧರಿಸಿದ್ದು. ನೀಲಿ ಬಣ್ಣದ ದಸ್ತಿಯಿದ್ದು. ಕೊರಳಲ್ಲಿ ಮಣಿ ಸರಯಿದ್ದು. ಹಾಗೂ ಮುಸ್ಲಿಂರು ಧರಿಸುವ ಬಿಳಿ ಟೋಪಿಯಿದ್ದು. ಸದರಿ ಮೃತ ವ್ಯಕ್ತಿಯು ಮುಸ್ಲಿಂರಂತೆ ಕಂಡು ಬಂದಿರುತ್ತಾನೆ ಹಾಗೂ ಒಂದು ತಾಮ್ರದ ಖಡೆ ಹತ್ತಾಳಿ ನಮೂನೆಯ ಉಂಗುರ ಆತನ ಹತ್ತಿರ ಇರುವುದು ಕಂಡು ಬಂದಿದ್ದು ಅದೆ. ಸದರಿ ಅಪರಿಚಿತ ಗಂಡಸು ಮನುಷ್ಯನ ಕುತ್ತಿಗೆಗೆ ಬಿಳಿ ಟಾವೆಲ ಸುತ್ತಿ ಜಗ್ಗಿದಂತೆ ಗಾಯವಾದಂತೆ ಕಂಡು ಬಂದಿದ್ದು ಇರುತ್ತದೆ. ಸದರಿಯವನಿಗೆ ಯಾವುದೋ ಕಾರಣಕ್ಕಾಗಿ ಯಾವುದೋ ದುರುದ್ದೇಷದಿಂದ ಎಲ್ಲಿಯೋ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಸಂಬಂಧ ಶವವು ಯಾರೋ ರೋಡಿನ ಪಕ್ಕದಲ್ಲಿ ಬಿಸಾಕಿ ಹೋಗಿರುತ್ತಾರೆ. ಸದರಿಯವನಿಗೆ ಮೂರು- ನಾಲ್ಕು ದಿವಸಗಳ ಹಿಂದೆ ಕೊಲೆ ಮಾಡಿ ಬಿಸಾಗಿ ಹೋದಂತೆ ಕಂಡು ಬಂದಿದ್ದು ಇರುತ್ತದೆ. ಕಾರಣ ಮಾನ್ಯರು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಗುನ್ನ ದಾಖಿಲಾದ  ಬಗ್ಗೆ ವರದಿ.

C¥sÀd®¥ÀÆgÀ oÁuÉ :   ದಿನಾಂಕ 23-07-2017 ರಂದು 3:45 ಪಿಎಮ್ ಕ್ಕೆ ನಮ್ಮ ಠಾಣೆಯ ಗುರುರಾಜ ಪಿಸಿ-1087 ಇವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿಯ ಸಾರಾಂಶವೇನೆಂದರೆ ದಿನಾಂಕ 23-07-2017 ರಂದು 3:00 ಪಿ ಎಮ್ ಕ್ಕೆ ತಮ್ಮ ಆದೇಶದಂತೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯ ಕುರಿತು ಠಾಣೆಯಿಂದ ಹೊರಟು, ಪೆಟ್ರೊಲಿಂಗ ಮಾಡುತ್ತಾ ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ 3:30 ಪಿಎಮ್ ಕ್ಕೆ ಬಂದಾಗ, ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲಿಂದ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಯುವುದು ಅಸಬ್ಯ ರೀತಿಯಿಂದ ವರ್ತಿಸುವುದು ಹಾಗೂ ಒದರಾಡುವುದು ಕೂಗಾಡುವುದು ಮಾಡಿ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದನು. ಹಾಗೂ ಸದರಿಯವನು ಅಲ್ಲಿ ತಿರುಗಾಡುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಕೊಟ್ಟು ಪಟ್ಟಣದಲ್ಲಿ ಉದ್ದಿಗ್ನ ವಾತಾವರಣ ಉಂಟು ಮಾಡುತ್ತಿದ್ದನು. ಮತ್ತು ತನ್ನ ಬಟ್ಟೆಗಳನ್ನು ಬಿಚ್ಚಿಕೊಳ್ಳುವುದು ಮಾಡಿ ಅಸಬ್ಯವಾಗಿ ವರ್ತಿಸುತ್ತಿದ್ದನು, ಸದರಿಯವನು ಸಾರ್ವಜನಿಕರ ಶಾಂತಿ ಭಂಗವನ್ನುಂಟು ಮಾಡುತ್ತಿದ್ದರಿಂದ, ಸದರಿಯವನನ್ನು ನಾನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹೇಶ @ ಮಾಯಪ್ಪ ದಬಾಡೆ ತಂದೆ ಸಿದ್ರಾಮಪ್ಪ ದಬಾಡೆ ವಯ|| 34 ವರ್ಷ ಜಾ|| ಗಾಣಿಗ ಉ|| ಟೆಂಪೊ ಚಾಲಕ ಸಾ|| ಯಳಸಂಗಿ ತಾ|| ಆಳಂದ  ಅಂತಾ ಏರು ಧ್ವನಿಯಲ್ಲಿ ಹೇಳಿದನು. ಸದರಿಯವನನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ ಪುನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಹಾಗೂ ಪಟ್ಟಣದ ಜನರಿಗೆ ತೊಂದರೆಯಾಗುತ್ತಿದ್ದರಿಂದ ಮತ್ತು ಸದರಿಯವನಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗುವ ಸಂಭವ ಇರುವುದರಿಂದ ಸದರಿಯವನನ್ನು ಹಿಡಿದುಕೊಂಡು  ಬಂದು ಸದರಿಯವನ ವಿರುದ್ದ ಮಾನ್ಯರವರು ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ವರದಿ ಸಲ್ಲಿಸಿದ್ದರ ಮೇರೆಗೆ ಠಾಣೆ ಪ್ರಕರಣ ಗುನ್ನ ದಾಖಿಲಾದ  ಬಗ್ಗೆ ವರದಿ.
ಯಡ್ರಾಮಿ ಪೊಲೀಸ್ ಠಾಣೆ : ದಿನಾಂಕ: 23-07-2017 ರಂದು ಎಂ.ಎಲ್.ಸಿ ವಿಚಾರಣೆಯಿಂದ ಎ.ಎಸ್.ಐ ರಾಜೇಂದ್ರಪ್ರಸಾದ ರವರು 3-30 ಪಿ.ಎಂ ಕ್ಕೆ ಪಿ.ಎಸ್ ಕ್ಕೆ ಹಾಜರಾಗಿ ಪಿರ್ಯಾದಿ  ರಾಯಪ್ಪ ತಂ ಸಿದ್ದಬಸಪ್ಪ ಪುಜಾರಿ ವ: 48 ವರ್ಷ ಜಾ:ಕುರುಬರ ಉ: ಒಕ್ಕಲುತನ ಸಾ:ಕಾಚಾಪೂರ ಗ್ರಾಮ ತಾ: ಜೇವರಗಿ ರವರ ಅರ್ಜಿಯನ್ನು ಹಾಜರುಪಡಿಸಿದರ ಸಾರಾಂಶವೆನೇಂದರೆ ನಮ್ಮ ಮನೆಯ ಪಕ್ಕದಲ್ಲಿ ಹೊನ್ನಪ್ಪ ದೊಡಮನಿ ಇವರು ಸಿದ್ದಾರೂಡ ಕೊಚಿಂಗ ಶಾಲೆ ನಡೆಸುತ್ತಾರೆ. ನಿನ್ನೆ ದಿನಾಂಕ: 22-07-2017 ರಂದು ರಾತ್ರಿ ಆ ಶಾಲೆಯಲ್ಲಿ ಕೆಲಸ ಮಾಡುವ ಶ್ರೀಕಾಂತ ಇತನಿಗೆ ನಾನು ಸಿದ್ದಾರೂಡ ಕೊಚಿಂಗ ಶಾಲೆ ನಡೆಸುತ್ತಾರೆ. ನಿನ್ನೆ ದಿನಾಂಕ: 22-07-2017 ರಂದು ರಾತ್ರಿ ಆ ಶಾಲೆಯಲ್ಲಿ ಕೆಲಸ ಮಾಡುವ ಶ್ರೀಕಾಂತ ಇತನಿಗೆ ನಾನು ಸಿದ್ದಾರೂಡ ಕೊಚಿಂಗ ಶಾಲೆ ನಡೆಸಲು ಪರವಾನಿಗೆ ಇದೆ ಇಲ್ಲ ಎಂದು ಕೇಳಿದಾಗ ಅವನು ಸಂಬಂದ ಪಟ್ಟು ಶಿಕ್ಷಣ ಇಲಾಖೆಯಿಂದ ಪರವಾನಿಗೆ ಪಡೆದಿದ್ದು ಇದೆ ಎಂದು ಹೇಳಿದನು. ಆಗ ನಾನು ಮನೆಗೆ ಹೋದೆನು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ 1] ರಾಜಕುಮಾರ ತಂ ಹೊನ್ನಪ್ಪ ದೊಡಮನಿ 2] ಶರಣಕುಮಾರ ತಂ ಹೊನ್ನಪ್ಪ ದೊಡಮನಿ 3] ಸಂಜುಕುಮಾರ ತಂ ಹೊನ್ನಪ್ಪ ದೊಡಮನಿ  4]ನಾಗಣ್ಣ ನಂದಿಹಾಳ 5] ಹೊನ್ನಪ್ಪ ತಂ ಬೀಮರಾಯ ದೊಡಮನಿ ಹಾಗೂ ಇತೆ ಎರಡು ಮೂರು ಜನರು ಕುಡಿಕೊಂಡು ಸಿದ್ದಾರೂಡ ಶಾಲೆಯವರು ಬಂದು ನಿಂತು ನನಗೆ ಏ ಬೋಸಡಿ ಮಗನೆ ನಮ್ಮ ಶಾಲೆಯ ನಡೆಸುವ ಬಗ್ಗೆ ನೀನು ಏನು ಪರಮಿಶನ ಕೇಳುತ್ತಿ ಶಿಕ್ಷಣ ಇಲಾಖೆಯವರು ಕೇಳುತ್ತಾರೆ. ನಿಯಾರೊ ನಮಗೆ ಕೇಳುವವನು ಎಂದು ಬೈಯುತ್ತಿದ್ದಾಗ ನಾನು ಅವರ ಹತ್ತಿರ ಹೋಗಿ ಶಾಲೆಯ ಪರಮಿಶನ ಕೇಳಿದರೆ ಎನಾಯಿತು ಎಂದಾಗ ಅದರಲ್ಲಿ ರಾಜಕುಮಾರ ಇತನು ತನ್ನ ಕೈಯಲ್ಲಿದ್ದ ಚೂರಿಯಿಂದ ಹೊಡೆಲು ಬಂದಾಗ ನಾನು ತಪ್ಪಿಸಿಕೊಂಡೆನು. ಇಲ್ಲವಾದರೆ ಅವನು ಚೂರಿಯಿಂದ ಚೂಚ್ಚಿ ಕೊಲೆ ಮಾಡುತ್ತಿದ್ದನು. ಶರಣಕುಮಾರ ಇತನು ರಾಡಿನಿಂದ ನನ್ನ ಎಡಗೈಣ್ಣಿನ ಹತ್ತಿರ & ಬೆನ್ನಿಗೆ ಹೊಡೆದನು. ಸಂಜೀವಕುಮಾರ ಇತನು ಬಡಿಗೆಯಿಂದ ತಲೆಗೆ ಬುಜಕ್ಕೆ ಹೊಡೆದನು. ನಾಗಣ್ಣ ಇತನು ಕೈಯಿಂದ ಕಪಾಳ ಮೇಲೆ , ಎದೆಯ ಮೇಲೆ ಹೊಡೆದನು ಮತ್ತು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ. ಹೊನ್ನಪ್ಪ ಇತನು ಸುಳೆ ಮಗನನ್ನು ಹೊಡೆಯಿರಿ ಇವನಿಗೆ ಸೊಕ್ಕು ಬಹಳ ಇದೆ ಖಲಾಸ ಮಾಡಿರಿ ಎಂದು ಜೀವದ ಬೆದರಿಕೆ ಹಾಕಿರುತ್ತಾನೆ. ಮತ್ತು ಅವರೆಲ್ಲರೂ ನನಗೆ ಕೊಲೆ ಮಾಡುವ ಉದ್ದೇಶದಿಂದ ಚಾಕು ತೋರಿಸಿ ರಾಡಿನಿಂದ , ಬಡಿಗೆಯಿಂದ ಹೊಡೆದು, ಕೈಯಿಂದ ಹೊಡೆದು ಕಾಲಿನಿಂದ ಒದ್ದು, ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ನನಗೆ ಹೊಡೆಯುವದನ್ನು ನೋಡಿ ನಮ್ಮೂರ ಜಟ್ಟೆಪ್ಪ ತಂ ಈರಪ್ಪ ಪೂಜಾರಿ , ಯಮನಪ್ಪ ತಂ ಸಾಯಬಣ್ಣ ಉಡಗಿ , ಪರಶುರಾಮ ತಂ ಬೋಜಪ್ಪ ಬೈರಾಮಡಗಿ  ಇವರು ಬಂದು ಬಿಡಿಸಿರುತ್ತಾರೆ. ಇಲ್ಲವಾದರೆ ನನಗೆ ಇನ್ನೂ ಹೊಡೆಯುತ್ತಿದ್ದರು. ನಂತರ ನಾನು ಬಸ್ಸಿನ ಸೌಕರ್ಯ ಇರಲಾರದಕ್ಕೆ ಮನೆಯಲ್ಲಿ ಇದ್ದು, ಇಮದು ದಿನಾಂಕ: 23-07-2017 ರಂದು ನನ್ನ ಹೆಂಡತಿ ತಂಗೆಮ್ಮ ಇವಳ ಸಂಗಡ ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿರುತ್ತೇನೆ. ನನಗೆ ಕೊಲೆ ಮಾಡಲು ಪ್ರಯತ್ನಿಸಿದವರ ವಿರುದ್ದ ಕಾನೂನು ಕ್ರಮ ಜರುಗಿಸಲಬೇಕೆಂದು ವಿನಂತಿ ಅರ್ಜಿ ಸಾರಾಂಶದ ಮೇಲಿಂದ ಪ್ರಕರಣ ಗುನ್ನ ದಾಖಿಲಾದ  ಬಗ್ಗೆ ವರದಿ.
ನೆಲೋಗಿ  ಠಾಣೆ : ದಿನಾಂಕ: 23/07/2017 ರಂದು 4:15 ಪಿಎಂಕ್ಕೆ ಹೇಳಿಕೆ ಪಡೆದುಕೊಂಡು ಸದರ ಹೇಳಿಕೆ ಸಾರಾಂಶವೆನೆಂದರೆ. ನಾವು 6 ಜನ ಅಣ್ಣ ತಮ್ಮಂದಿರು ಇದ್ದು ಎಲ್ಲರೂ ಬೇರೆ ಬೇರೆ ಯಾಗಿದ್ದು ಹೊಲ ಸರ್ವೇ ನಂ: 364 3 ಎಕ್ಕರೆ 26 ಗುಂಟೆ ಇದ್ದು ಅದರಲ್ಲಿ ನನಗೆ 36 ಗುಂಟೆ ಜಮೀನು ಬಂದಿದ್ದು ಅದರಲ್ಲಿ ಬಾವಿ ಇದ್ದು ಅದರಲ್ಲಿನ ನೀರು ಎಲ್ಲರೂ ತಗೆದುಕೊಳ್ಳುತ್ತಿದ್ದು ನನ್ನ 36 ಗುಂಟೆ ಜಮಿನ (ಹದ್ದಿಯ) ಬಾಂದಾರಿಯಲ್ಲಿ ಮುಳ್ಳು ಹಚ್ಚಿದ್ದು ಇಂದು ದಿನಾಂಕ: 23/07/2017 ರಂದು 2 ಗಂಟೆಯ ಸುಮಾರಿಗೆ ಜೇವರ್ಗಿಯಿಂದ ನಾನು ನಮ್ಮೂರಿಗೆ  ಬಂದು ನಿಂಗರಾಯ ದೇವರಿಗೆ ಕಾಯಿ ಒಡಿದು ಹೊಲ ನೋಡಲು ಹೊದಲ್ಲಿ 2-30 ಪಿ.ಎಂಕ್ಕೆ ಹೊದಾಗ ಅಲ್ಲಿ ನಮ್ಮ ಹೊಲದಲ್ಲಿನ ಬಾಂದಾರಿಯಲ್ಲಿಯ ಮುಳ್ಳು ನಮ್ಮ ಅಣ್ಣ ಕರೆಪ್ಪನು ಕಿತ್ತಿ ಒಗಿದಿದ್ದು ಅದನ್ನು ನೋಡಿ ಆ ಮುಳ್ಳುಗಳನ್ನು ಬಾಂದಾರಿಯಲ್ಲಿ ಹಚ್ಚುತ್ತಿದ್ದು ಆಗ ನಮ್ಮ ಅಣ್ಣ ಕರೆಪ್ಪ ತಂದೆ ಭೀಮರಾಯ, ಶರಣಬಸಪ್ಪ ತಂದೆ ಕರೆಪ್ಪ, ಬಸಪ್ಪ ತಂದೆ ಕರೆಪ್ಪ ಇವರು ಅಲ್ಲಿಗೆ ಬಂದು ಭೋಸಡಿ ಮಗನೆ ನಾವು ಕಿತ್ತದ ಮುಳ್ಳು ಯಾಕೆ ಹಚ್ಚುತ್ತಿ ಮಗನೆ ಅಂದವರೆ ಕರೆಪ್ಪನು ತನ್ನ ಕೈಯಲ್ಲಿ ಇದ್ದ ಹಿಡಿಕಲ್ಲಿನಿಂದ ಏಡಗಡೆ ಹಣೆಯ ಮೇಲಬಾಗದಲ್ಲಿ ಕಲ್ಲಿನಿಂದ ಹೋಡೆದು ರಕ್ತಗಾಯ ಮಾಡಿದನು. ಶರಣಬಸಪ್ಪನು ತನ್ನ ಕೈಯಲ್ಲಿ ಇದ್ದ ಬಡಿಗೆಯಿಂದ ಬೆನ್ನ ಮೇಲೆ ಹೋಡೆದನು. ಆಗ ಬಸಪ್ಪನು ಹೊಡೆರಿ ಈ ಭೋಸಡಿಮಗನಿಗೆ ಹೊಡೆದು ಖಲಾಸ ಮಾಡಿರಿ ಎಂದು ಕಾಲಿನಿಂದ ಒದ್ದನು ನನಗೆ ಹೊಡೆಯುವದನ್ನು ನೋಡಿ ನಿಂಗರಾಯನ ಗುಡಿಯ ಹತ್ತಿರ ಇದ್ದ ಮಹಾಂತಪ್ಪ ಹಟ್ಟಿ, ಹುಲ್ಲೆಪ್ಪ ಬಗಲೂರ ಇವರು ಬಂದು ಜಗಳ ಬಿಡಿಸಿದರು ವಿನಾಕಾರಣ ನನಗೆ ಹೊಡೆದು ದುಃಖಾಪತಗೋಳಿಸಿದವರ ವಿರುದ್ದ ಕ್ರಮ ಜರಗಿಸಬೇಕೆಂದು ಹೇಳಿ ಬರೆಯಿಸಿದ್ದು ಅದೆ. ಸದರ ಹೇಳಿಕೆ ಸಾರಾಂಶದ ಮೇಲಿಂದ  ಗುನ್ನ ದಾಖಿಲಾದ  ಬಗ್ಗೆ ವರದಿ.
±ÀºÁ¨ÁzÀ £ÀUÀgÀ oÁuÉ : ಶಹಾಬಾದ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಇಂದು ದಿನಾಂಕ 23/07/2017 ರ ಮುಂಜಾನೆ 09-30 ಗಂಟೆಗೆ ಬೇಂಡಿ ಬಜಾರ್ ಅಪ್ಪರ ಮಡ್ಡಿ ಶಹಾಬಾದ ಕಡೆಗೆ ಹೋದಾಗ ಪೊಲೀಸ್ ಬಾತ್ಮಿದಾರರಿಂದ ತಿಳಿದು ಬಂದಿದೇನೆಂದರೆ ಠಾಣೆಯ ರೌಡಿ ಶೀಟರ್ಗಳಾದ 1] ಗುಲಾಬ್ ಖಾನ್ ತಂ ಜಾಫರ್ ಖಾನ್ ವ:40 ವರ್ಷ ಬೇಂಡಿ ಬಜಾರ್ ಶಹಾಬಾದ 2] ಭೀಮಾಶಂಕರ್ ತಂದೆ ತಾಯಪ್ಪಾ ದಂಡಗೋಳಕರ್ ವ: 48 ವರ್ಷ ಸಾ: ಅಪ್ಪರ ಮಡ್ಡಿ ಶಹಾಬಾದ ಇವರು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ನಿಲ್ಲುವುದು ಏರಿಯಾದಲ್ಲಿ ಗುಂಪುಗಾರಿಕೆ ಮಾಡಿಕೊಂಡು ತಿರುಗಾಡುತ್ತಿದ್ದು ಸದರಿಯವರು ಗಲಭೆ ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿಗೆ ಹಾನುಇಯುಂಟು ಮಾಡುವ ಸಂಭವ ಕಂಡು ಬಂದಿದರಿಂದ ಇಂದು ಮುಂಜಾಣೆ 10-30 ಗಂಟೆಗೆ ಸದರಿಯವರ ವಿರುದ್ದ ಮುಂಜಾಗ್ರತಾ ಕ್ರಮ ಕುರಿತು ಠಾಣಾ ಗುನ್ನೆ ನಂ 127/2017 ಕಲಂ 107 ಸಿ ಆರ್ ಪಿ ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ .
±ÀºÁ¨ÁzÀ £ÀUÀgÀ oÁuÉ : ದಿನಾಂಕ 23/07/2017 ರಂದು ಮಧ್ಯಹ್ನ 03-00 ಗಂಟೆಗೆ ಶ್ರೀ ಮಲ್ಲಿಕಾರ್ಜುನ್ ಶಿವಪೂರು ಉಪ ತಹಸ್ಹೀಲ್ದಾರರು ಠಾಣೆಗೆ ಬಂದು ದೂರು ಅರ್ಜಿ ನೀಡಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 23/07/2017 ರಂದು ಬೆಳಿಗ್ಗೆ 07-30 ಗಂಟೆಗೆ ಬಾತ್ಮಿ ಬಂದಿದೇನೆಂದರೆ ಶಹಾಭಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಭಂಕೂರು ಗ್ರಾಮದ ವಿವಿಧ ಸರ್ವೆ ನಂಬರ್ ವುಳ್ಳ ಜಮೀನುಗಳಲ್ಲಿ ಅಕ್ರಮ ಹಾಗೂ ಕಳ್ಳತನದಿಂದ ಕಾಗಿಣಾ ನದಿಯಿಂದ ಮರಳನ್ನು ಹೊರತೆಗೆದು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಸಿಬ್ಬಂದಿಯವರೊಂದಿಗೆ ಮತ್ತು ಹಾಗೂ ಕಂದಾಯ ಇಲಾಖೆಯ ಪಿ ಡಬ್ಲೂ ಡಿ  ಅಧಿಕಾರಿಗಳೊಂದಿಗೆ ಹಾಗೂ ಭಂಕೂರು ಸೀಮಾಂತೆರದ ಹೊಲ ಸರ್ವೇ ನಂಬರ್ 118, 219 , 131/03 ,182/01 ರಲ್ಲಿ ಸಂಗ್ರಹಿಸಿದ ಮರಳು ಒಟ್ಟು 30.04 ಕ್ಯೂಬಿಕ್ ಮರಳು ಅಂ ಕಿ 21343 ಮರಳನ್ನು ಜಪ್ತಿ ಪಡಿಸಿಕೊಂಡು ಮರಳಿ ಶೇಖರಣೆ ಮಾಡಿದ ಜಮೀನು ಮಾಲಿಕರ ವಿರುದ್ದ ಠಾಣಾ ಗುನ್ನೆ ನಂಬರ್ 128/2017 ಕಲಂ  379 ಐ ಪಿ ಸಿ 4 [1ಎ] 21 [1] ಎಮ್ ಎಮ್ ಆರ್ ಡಿ ಸಂ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಗ್ಗೆ ವರದಿ.
ºÉZÀÄѪÀj ¸ÀAZÁj oÁuÉ : ¢£ÁAPÀ 23.07.2017 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ªÀÄÈvÀ C¥ÀjZÀvÀ 50 ªÀµÀðzÀ ªÀÄ£ÀĵÀå ²æÃ ±ÀgÀt§¸ÀªÉñÀégÀ zÉêÀ¸ÁÜ£À DªÀgÀtzÀ°è §gÀĪÀ CPÀ̪ÀĺÁzÉë PÁ¯ÉÃf£À JzÀÄj£À vÉÃgÀÄ ªÉÄÊzÁ£ÀzÀ°è PÀĽwgÀĪÁUÀ dUÀzÉêÀ¥Áà EvÀ£ÀÄ PÁgÀ £ÀA PÉJ-32/JªÀiï-5766 £ÉÃzÀÝ£ÀÄß ²æÃ ±ÀgÀt§¸ÀªÉñÀégÀ zÉêÀ¸ÁÜ£ÀzÀ »AzÀÄUÀqɬÄAzÀ CwêÉÃUÀªÁV ºÁUÀÆ C®PÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÀÄÈvÀ C¥ÀjZÀvÀ 50 ªÀµÀðzÀ ªÀÄ£ÀĵÀå¤UÉ rQÌ ¥Àr¹ C¥ÀWÁvÀ ªÀiÁr DvÀ¤UÉ ¨sÁj UÁAiÀÄUÉÆ½¹ DvÀ£À G¥ÀZÁgÀ PÀÄjvÀÄ ¸ÀPÁðj D¸ÀàvÉæUÉ PÀgÉzÀÄPÉÆAqÀÄ ºÉÆÃV ¸ÉÃjPÉ ªÀiÁrzÀÄÝ ªÀÄÈvÀ C¥ÀjZÀvÀ 50 ªÀµÀðzÀ ªÀÄ£ÀĵÀå£ÀÄ C¥ÀWÁvÀzÀ°è DzÀ G¥ÀZÁgÀ ¥sÀ®PÁjAiÀiÁUÀzÉ ¸ÀPÁðj D¸ÀàvÉæAiÀÄ°è ªÀÄzÁåºÀß 12-30 UÀAmÉUÉ ªÀÄÈvÀ ¥ÀnÖzÀÄÝ EgÀÄvÀÛzÉ .

22 July 2017

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ನಮ್ಮೂರಲ್ಲಿ ರೇಷನ ಅಂಗಡಿ ಇರುವುದಿಲ್ಲಾ, ನಮ್ಮೂರ ರೇಷನ  ಗಂವ್ಹಾರದ ರೇಷನ ಅಂಗಡಿಗೆ ಬರುತ್ತದೆ.  ನಾವು ಗಂವ್ಹಾರ ಗ್ರಾಮಕ್ಕೆ ಹೋಗಿ ರೇಷನ ತೆಗೆದುಕೊಂಡು ಬರುತ್ತೆವೆ. ಈ ತಿಂಗಳ ರೇಷನ ಬಂದಿದ್ದು ಗೊತ್ತಾಗಿ ಇಂದು ದಿ. 21.07.2017 ರಂದು ಮುಂಜಾನೆ ನಾನು ಮತ್ತು ನನ್ನ ಅಣ್ಣ ಮಲ್ಲಪ್ಪ ತಂದೆ ಭೀಮಶ್ಯಾ ದೊಡಮನಿ ಇಬ್ಬರೂ ಕೂಡಿ ನಮ್ಮೂರಿನಿಂದ ಗಂವ್ಹಾರಕ್ಕೆ ಬಂದು ರೇಷನ ತೆಗೆದುಕೊಳಲು ರೇಷನ ಅಂಗಡಿಯ ಮುಂದುಗಡೆ ಸಾಲಾಗಿ ಪಾಳಿಯಲ್ಲಿ ನಿಂತಿದ್ದೆವು, ನಮ್ಮಂತೆ ನಮ್ಮೂರ ಇತರೆ ಜನರು ಸಹ ರೇಷನ ತೆಗೆದುಕೊಂಡು ಹೋಗಲು ಸಾಲಾಗಿ ಪಾಳಿಯಲ್ಲಿ ನಿಂತಿದ್ದರು, ಮುಂಜಾನೆ 10.00 ಗಂಟೆಯ ಸುಮಾರಿಗೆ ನಮ್ಮೂರ ಬಸವರಾಜ ತಂದೆ ಶಿವರಾಯ ನಾಯ್ಕೊಡಿ ಇತನು ರೇಷನ ಅಂಗಡಿ ಮುಂದೆ ಸಾಲಿನಲ್ಲಿ ನಮ್ಮ ಹಿಂದೆ ನಿಂತಿದ್ದವನು, ಒಮ್ಮಲೆ ನಮ್ಮ ಮುಂದೆ ಬಂದು ಸಾಲಿನಲ್ಲಿ ನಿಂತುಕೊಂಡು ತನ್ನ ಕೈ ಚೀಲ ಇಟ್ಟನು. ಅದಕ್ಕೆ ನಾನು ಅವನಿಗೆ ನಾವು ಸಾಲಿನಲ್ಲಿ ಪಾಳಿಯಲ್ಲಿ ನಿಂತಿದ್ದೆವೆ ನೀನು ಒಮ್ಮಲೆ ಹಿಂದಿನಿಂದ ನಮ್ಮ ಮುಂದೆ ಹೋಗಿ ಪಾಳಿ ಹಚ್ಚಿ ನಿಲ್ಲುತ್ತಿದ್ದಿ ಯಾಕೆ? ಎಂದು ಕೇಳಿದಾಗ ಆಗ ಅವನು ನನಗೆ ಏ ಮಾದಿಗ ಸೂಳೆ ಮಗನೆ ನನಗೆ ನೀನು ಏನು ಕೇಳುತಿ ಎಂದು ಅವಾಚ್ಯವಾಗಿ ಬೈಯ   ಹತ್ತಿದ್ದನು, ಆಗ ನಾನು ಅವನಿಗೆ ಪಾಳಿ ಪ್ರಕಾರ ರೇಷನ ತೆಗೆದುಕೊಳಬೇಕು ಎಂದು ಅಂದಾಗ ಅವನು ಚಪ್ಪಲಿಯಿಂದ  ನನ್ನ ತಲೆಯ ಮೇಲೆ ಹೊಡೆದನು, ಮತ್ತು ನನಗೆ ನೇಲಕ್ಕೆ ಹಾಕಿ ಕಾಲಿನಿಂದ ಹೊಟ್ಟೆಯ ಮೇಲೆ ಒದೆಯುತ್ತಿದ್ದಾಗ ನನ್ನ ಅಣ್ಣ ಮಲ್ಲಪ್ಪ ಇತನು ಬಿಡಿಸಲು ಬಂದಾಗ ಬಸವರಾಜ ನಾಯ್ಕೊಡಿ ಇತನ  ಅಣ್ಣತಮ್ಮಂದಿರಾದ 1) ಈಶಪ್ಪ ತಂದೆ ಶಿವರಾಯ ನಾಯ್ಕೊಡಿ, 2) ದೇವಪ್ಪ ತಂದೆ ಶಿವರಾಯ ನಾಯ್ಕೊಡಿ, 3) ತುಳಜಪ್ಪ ತಂದೆ ಶಿವರಾಯ ನಾಯ್ಕೊಡಿ ಇವರು ಬಂದು ಎ ಮಾದಿಗ ಸೂಳೆಮಕ್ಕಳೆ ನಿಮಗೆ ಸೊಕ್ಕು ಬಹಳ ಇದೆ ಎಂದು ಅವಾಚ್ಯವಾಗಿ  ಬೈಯ್ದು, ಅವರಲ್ಲಿಯ ದೇವಪ್ಪ ಇತನು ಚಪ್ಪಲಿಯಿಂದ ನನ್ನ ಅಣ್ಣ ಮಲ್ಲಪ್ಪನ ಬೇನ್ನು ಮೇಲೆ ತಲೆಯ ಮೇಲೆ ಹೊಡೆದಿರುತ್ತಾನೆ, ತುಳಜಪ್ಪ ಇತನು ಕಾಲಿನಿಂದ ನನ್ನ ಅಣ್ಣನ ಸೊಂಟದ ಮೇಲೆ ಒದ್ದಿರುತ್ತಾನೆ, ಈಶಪ್ಪ ಇತನು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದು ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದಿರುತ್ತಾನೆ, ಮತ್ತು ಅವರೆಲ್ಲರೂ ಏ ಮಾದಿಗ ಸೂಳೆ ಮಕ್ಕಳೆ ಇನ್ನೂ ನಮ್ಮ  ತಂಟೆಗೆ ಬಂದರೆ ನೀಮ್ಮ  ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಜೇಟ್ಟೆಪ್ಪ  ತಂದೆ ಭೀಮಶ್ಯಾ ದೊಡ್ಡಮನಿ ಸಾಃ ಮಾರಡಗಿ (ಎಸ್.) ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ರವರು ದಿನಾಂಕ 24.08.2015 ರಂದು ನಮ್ಮ ದೂರದ ಸಂಬಂದಿಕನಾದ ನಿಖಿಲ ಎಂಬುವವರು ಪೇಸ್ಬುಕ್ ನಲ್ಲಿ ಪರಿಚಯನಾಗಿದ್ದು ಆವಾಗಿನಿಂದ ನಾವಿಬ್ಬರೂ ಪೋನಿನಲ್ಲಿ ಮಾತನಾಡುತ್ತಿದ್ದೇವು. ಮತ್ತು ನಿಖಿಲ ಇತನು ಆಗಾಗ ಕಲಬುರಗಿಗೆ ಬಂದು ಬೇಟಿಯಾಗಿ ಹೋಗುತ್ತಿದ್ದನು. ಸ್ವಲ್ಪ ದಿವಸಗಳು ಕಳೆದ ನಂತರ ನಿಖಿಲ ಇತನು ನನಗೆ ತನ್ನೊಂದಿಗೆ ದೈಹಿಕ ಸಂಪರ್ಕ ಮಾಡುವಂತೆ ಒತ್ತಾಯ ಮಾಡಿದನು. ನಾನು ಮದುವೆಯಾಗುವವರೆಗೂ ದೈಹಿಕ ಸಂಪರ್ಕ ಮಾಡುವುದು ಬೇಡ ಅಂತಾ ನಿರಾಕರಿಸಿದೆ. ಆದರೂ ಕೂಡ ನಿಖಿಲ ನಾನು ನಮ್ಮ ಮನೆಯಲ್ಲಿ ನಿನ್ನನ್ನು ನನ್ನ ಜೊತೆ ಮದುವೆಯಾಗಲು ಒಪ್ಪಿಸಿದ್ದೆನೆ. ನಾನು ನಿನ್ನನ್ನೆ ಮದುವೆ ಆಗುವದಾಗಿ ನಂಬಿಸಿ ದಿನಾಂಕ 09.12.2015 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ತನ್ನ ಸ್ವಂತ ಕಾರಿನಲ್ಲಿ ಫರತಾಬಾದ ಹತ್ತಿರ ಇರುವ ಇಂದಿರಾ ಲೇ ಔಟ ದಲ್ಲಿರುವ ಖುಲ್ಲಾ ಜಾಗದಲ್ಲಿ ತನ್ನ ಕಾರಿನಲ್ಲಿ ನಾನು ಬೇಡವೆಂದರೂ ನನಗೆ ಒತ್ತಾಯದಿಂದ ದೈಹಿಕ ಸಂಬೋಗ ಮಾಡಿ ನನಗೆ ಮತ್ತೇ ನನ್ನ ಪಿ.ಜಿ ಬಿಟ್ಟುಹೋದನು ಅದಾದ ನಂತರ ತಿಂಗಳಿಗೆ 2-3 ಸಲ ಕಲಬುರಗಿಗೆ ಬಂದು ತನ್ನ ಕಾರಿನಲ್ಲಿಯೇ ನನಗೆ ಅದೇ ಜಾಗಕ್ಕೆ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿರುತ್ತಾನೆ. ಸ್ವಲ್ಪ ದಿವಸಗಳ ನಂತರ ನಾನು ಗರ್ಭೀಣಿಯಾದೆ. ಈ ವಿಷಯ ಅವನಿಗೆ ತಿಳಿಸಿದಾಗ ಅವನು ನನಗೆ ತಾಳಿ ಕಟ್ಟ ನಮಗೆ ಈಗಲೇ ಮಗು ಬೇಡ ಅಂತಾ ಹೇಳಿ ಇಂದಿರಾ ಆಸ್ಪತ್ರೆಯಲ್ಲಿ ಹೋಗಿ ತನ್ನ ಹೆಂಡತಿ ಅಂತಾ ಹೇಳಿಕೊಂಡು ಟ್ಯಾಬಲೆಟ್ ಕೊಡಿಸಿದನು. ಆಗ ನನಗೆ ಗರ್ಭಪಾತವಾಯಿತು. ಅಷ್ಟರಲ್ಲಿಯೇ ನಿಖಿಲ ಇತನಿಗೆ ಅವರ ತಂದೆ ತಾಯಿ ಮದುವೆ ಮಾಡುವ ಸಲುವಾಗಿ ಹೆಣ್ಣು ನೋಡುತ್ತಿರುವ ವಿಷಯ ಗೊತ್ತಾಯಿತು. ಈ ವಿಷಯವನ್ನು ನಾನು ಅವರ ತಂದೆ ಪ್ರಕಾಶ ಖೇಣಿದ ಅವರಿಗೆ ತಿಳಿಸಿದೆನು. ಆಗ ಅವರ ತಂದೆ ಕೂಡ ನನಗೆ ನಿನ್ನ ಕ್ಯಾರಿಕ್ಟರ ಸರಿ ಇಲ್ಲಾ ನಿನಗೆ ನನ್ನ ಮಗನೊಂದಿಗೆ ಮದುವೆ ಮಾಡಲು ಸಾದ್ಯವಿಲ್ಲ ಎಂದು ಬೈದು ಬಿಟ್ಟರು. ಆದರೂ ಕೂಡ ನಿಖಿಲ ಇತನು ದಿನಾಂಕ 29.06.2016 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಮತ್ತೇ ಮೊದಲಿನ ಜಾಗಕ್ಕೆ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದೆನು. ಈ ವಿಷಯವನ್ನು ನಾನು ಸ್ವಲ್ಪ ದಿವಸಗಳು ಕಳೆದ ನಂತರ ನಮ್ಮ ತಂದೆ ತಾಯಿಗೆ ತಿಳಿಸಿದೆನು ದಿನಾಂಕ 24.03.2017 ರಂದು ನಾನು ನಮ್ಮ ತಾಯಿ ಅಕ್ಕ ಕೂಡಿ ನಿಖಿಲ ಇವರ ಮನೆಗೆ ಹೋಗಿ ನನ್ನೊಂದಿಗೆ ನಡೆದ ವಿಷಯವನ್ನೆಲ್ಲಾ ಅವರ ತಂದೆ ತಾಯಿಗೆ ತಿಳಿಸಿದಾಗ ಅವರು ಕೂಡ ನನ್ನ  ಮಗನಿಗೆ 20 ಜನ ಹುಡುಗಿಯರು ಇದ್ದಾರೆ ಅವರಲ್ಲಿ ನೀನು ಒಬ್ಬಳು ಹಾಗಂತ ನಿನಗೆ ನನ್ನ ಮಗನೊಂದಿಗೆ ಮದುವೆ ಮಾಡಲು ಸಾದ್ಯವಿಲ್ಲ. ನನಗೆ ಹಾಗೂ ನನ್ನ ತಾಯಿ ಅಕ್ಕಳಿಗೆ ಅವಮಾನ ಮಾಡಿ ನೀವು ಕೇಸು ಮಾಡಿದರೆ ನಿನಗೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದರು. ಅಲ್ಲದೇ ನಿಖಿಲ ಇತನು ಬೇರೆ ಹುಡುಗಿಯೊಂದಿಗೆ ಮದುವೆ ಆಗಿರುತ್ತಾನೆ. ಕಾರಣ ನಿಖಿಲ ನನ್ನೊಂದಿಗೆ ಮದುವೆ ಆಗುವದಾಗಿ ನಂಬಿಸಿ ದಿನಾಂಕ 09.12.2015 ರಿಂದ 07.03.2017 ರವರೆಗೆ ಜಬರದಸ್ತಿಯಿಂದ ದೈಹಿಕ ಸಂಬೋಗ ಮಾಡಿದ್ದು ಅಲ್ಲದೇ ಗರ್ಬಿಣಿಯಾದ ನನಗೆ ಟ್ಯಾಬಲೆಟ್ (ಮಾತ್ರೆ)  ಕೊಟ್ಟು ನನಗೆ ಗರ್ಭಪಾತ ಕೂಡ ಮಾಡಿಸಿದ್ದು ಮತ್ತು ನನಗೆ ಹಾಗೂ ನಮ್ಮ ಮನೆಯವರಿಗೆ ಜೀವದ ಬೆದರಿಕೆ ಹಾಕಿದ ನಿಖಿಲ ಇತನ ತಂಧೆ ಪ್ರಕಾಶ ತಾಯಿ ಸುವರ್ಣಾ ಇವರ ಮೇಲೆ ಕಾನೂನು ಕ್ರಮ  ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಮುಧೋಳ ಠಾಣೆ : ಶ್ರೀ ಅನಂತಪ್ಪ ತಂದೆ ಭೀಮಪ್ಪ ನೀರಟ್ಟಿ ಸಾ|| ಮದನಾ ಗ್ರಾಮ ಇವರು ದಿನಾಂಕ 28-06-2017 ರಂದು ಬುಧುವಾರ ಮುಧೋಳ ಸಂತೆ ಇದ್ದ ಕಾರಣ ಸಂತೆ ಮಾಡಿಕೊಂಡು ಬರಲು ನಾನು ಮತ್ತು ನನ್ನ ಸ್ನೇಹಿತ ವೆಂಕಟಪ್ಪಾ ತಂದೆ ಆಶಪ್ಪಾ ಕವಡಿ ಸಾ|| ಮದನಾ ಇಬ್ಬರೂ ಸೇರಿ ನನ್ನ ಮೋಟಾರ ಸೈಕಲ ನಂ ಕೆಎ 32, ಇಕೆ 1137 ನೆದ್ದನ್ನು ತೆಗೆದುಕೊಂಡು ನಮ್ಮೂರಿನಿಂದ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಮುಧೋಳಕ್ಕೆ ಬಂದು ಸದರಿ ನನ್ನ ಮೋಟಾರ ಸೈಕಲನ್ನು ಮುಧೋಳ ಬಸ್ಟಾಂಡದ ಹಿಂದುಗಡೆ ಮಿಸ್ಕೀನ ಡಾಕ್ಟರ ದವಾಖಾನೆಯ ಮುಂದುಗಡೆ ಕೀಲಿ ಹಾಕಿ ನಿಲ್ಲಿಸಿ ನಾನು ಮತ್ತು ನನ್ನ ಸ್ನೇಹಿತ ಇಬ್ಬರೂ ಕೂಡಿಕೊಂಡು ಸಂತೆ ಮಾಡಲು ಬಜಾರದಲ್ಲಿ ಹೋಗಿ ಸಂತೆ ಮಾಡಿಕೊಂಡು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ನಾವು ಮೋಟಾರ ಸೈಕಲ್ಲ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ನಾವು ನಿಲ್ಲಿಸಿದ ನಮ್ಮ ಮೋಟಾರ ಸೈಕಲ ಕಾಣೆಯಾಗಿದ್ದು ಇರುತ್ತದೆ.ನಂತರ ಮುಧೋಳ ಗ್ರಾಮದಲ್ಲಿ ಎಲ್ಲಾ ಕಡೆ ಹುಡಿಕಿದರೂ ನಮ್ಮ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ಮತ್ತು ಅಂದಿನಿಂದ ಇಂದಿನವರೆಗೆ ಮುಧೋಳ ಗ್ರಾಮದ ಸುತ್ತ ಮುತ್ತ ಹಾಗು ನಮ್ಮೂರ ಮದನಾ, ಹಾಗು ಕಡಚರ್ಲಾ, ಶಿಲಾರಕೋಟ, ಮೇದಕ, ಚಂದಾಪೂರ, ಕೊಲ್ಕುಂಧಾ, ಮೋತಕಪಲ್ಲಿ ಮುಂತಾದ ಗ್ರಾಮಗಳಲ್ಲಿ ಹುಡುಕಿದರೂ ಎಲ್ಲಿಯೂ ನಮ್ಮ ಮೋಟಾರ ಸೈಕಲ ಪತ್ತೆಯಾಗಿರುವುದಿಲ್ಲಾ  ದಿನಾಂಕ 28-06-2017 ರಂದು ಮಧ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯ ಅವಧಿಯಲ್ಲಿ ಮುಧೋಳ ಗ್ರಾಮದ ಬಸ್ಟಾಂಡದ ಹಿಂದುಗಡೆ ಮಿಸ್ಕೀನ ಡಾಕ್ಟರ ದವಾಖಾನೆಯ ಮುಂದುಗಡೆ ಕೀಲಿ ಹಾಕಿ ನಿಲ್ಲಿಸಿದ ನನ್ನ ಮೋಟಾರ ಸೈಕಲ ನಂ ಕೆಎ 32, ಇಕೆ 1137 ಅ,ಕಿ 20,000 ರೂಪಾಯಿ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.