POLICE BHAVAN KALABURAGI

POLICE BHAVAN KALABURAGI

09 December 2016

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಶಿವಶಣಪ್ಪ ತಂದೆ ಶಾಂತಪ್ಪ ಸನಾದಿ ಸಾ: ಬೆಳಮಗಿ ಇವರು ತಂದೆತಾಯಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇದ್ದು ಅವಳ ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಯಲ್ಲಿ ಇರುತ್ತಾಳೆ ಗಂಡು ಮಕ್ಕಳಲ್ಲಿ ನಾನೆ ಹಿರಿಯವನಾಗಿದ್ದು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ನಮ್ಮೂರಿನಲ್ಲಿ ಇರುತ್ತೇನೆ ನನ್ನ ತಂದೆ 2005 ರಲ್ಲಿ ಮೃತಪಟ್ಟಿದ್ದು ನಮ್ಮ ತಾಯಿ ನನ್ನೊಂದಿಗೆ ಇರುತ್ತಾಳೆ, ನನ್ನ ತಮ್ಮನಾದ ಶಿವಕುಮಾರ ಇವನು ತನ್ನ ಪರಿವಾರದೊಂದಿಗೆ ಪೂನಾದಲ್ಲಿ ವಾಸವಾಗಿರುತ್ತಾನೆ, ನಮ್ಮ ತಂದೆಯಾದವರು ಜಿವಂತವಿದ್ದಾಗ ಬೆಳಮಗಿ ಗ್ರಾಮದ ಸರ್ವೆ ನಂ. 213(ಅ) ದಲ್ಲಿಯ ಸರಕಾರಿ ಗೈರಾಣ ಜಮೀನು 2 ಎಕರೆ ಸರಕಾರವು ನಮ್ಮ ತಂದೆಗೆ ಮಂಜುರುಮಾಡಿದ್ದು ನಮ್ಮ ತಂದೆಯವರು ಆ ಜಮೀನನ್ನು ಉಳಿಮೆ ಮಾಡುತ್ತಾ ಬಂದಿದ್ದು ನಮ್ಮ ತಂದೆ ಮರಣದ ನಂತರ ಸದರಿ ಜಮೀನು ನನ್ನ ತಾಯಿಯಾದ ಗುಜಬಾಯಿ ಇವರ ಹೆಸರಿನಲ್ಲಿ ಇರುತ್ತದೆ, ಸದ್ಯ ಆ ಜಮೀನನ್ನು ನಾನೆ ಉಳಿಮೆ ಮಾಡಿಕೊಂಡು ಬಂದಿದ್ದೇನೆ ನಮ್ಮ ಜಮೀನಿಗೆ ಹೊಂದಿ ನಮ್ಮ ಗ್ರಾಮದ ಅಣ್ಣಪ್ಪ ತಂದೆ ಹಣಮಂತರಾಯ ಸುರಪ್ಪಗೋಳ ಇವರ ಜಮೀನಿದ್ದು ಸದರಿ ಅಣ್ಣಪ್ಪ ಸುರಪ್ಪಗೋಳ ಮತ್ತು ಆತನ ಮಗನಾದ ಈರಣ್ಣ ಸುರಪ್ಪಗೋಳ ಇವರುಗಳು ನಮ್ಮ ಹೊಲದ ಬಾಂದಾರಿಯನ್ನು ಒತ್ತುವರಿ ಮಾಡುತ್ತ ಬಿತ್ತನೆ ಮಾಡುತ್ತಿದ್ದರಿಂದ ನಾನು ಅವರಿಗೆ ಈ ರೀತಿ ಒತ್ತುವರಿ ಮಾಡುವದು ಸರಿಯಲ್ಲವೆಂದು ಹೇಳಿದರು ಸಹಾ  ಕೂಡಾ ನಮ್ಮ ಹೊಲವನ್ನು ಒತ್ತುವರಿ ಮಾಡಿ ತೊಗರಿ ಬಿತ್ತನೆ ಮಾಡಿರುತ್ತಾರೆ, ಈಗ ತೊಗರಿ ಬೆಳೆಯು ಕಟಾವು ಮಾಡುವ ಹಂತಕ್ಕೆ ಬಂದಿದ್ದರಿಂದ ಬೇಗನೆ ಕಟಾವು ಮಾಡಿ ರಾಶಿ ಮಾಡಿಕೊಳ್ಲುವಂತೆ ಹೇಳಿದ್ದು ಅದಕ್ಕೆ ಅವನು ನನ್ನೊಂದಿಗೆ ಆಗಾಗ ತಕರಾರು ಮಾಡುತ್ತ ಬಂದಿರುತ್ತಾರೆ ಅಲ್ಲದೆ ಅದೇ ವಿಷಯವಾಗಿ ನನ್ನ ಮೇಲೆ ದ್ವೇಷ ಸಾದಿಸಿಕೊಂಡು ದಿನಾಂಕ:- 06/12/2016 ರಂದು ರಾತ್ರಿ 10:30 ಸುಮಾರಿಗೆ ನಾನು ತಿರುಗಾಡುತ್ತಾ ನಮ್ಮ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಕಡೆಗೆ ಹೋದಾಗ ಹುಣಸಿ ಮರದ ಕೆಳಗೆ ನಮ್ಮ ಗ್ರಾಮದ ಲಿಂಗಾಯತ ಜಾತಿಯವರಾದ ಈರಣ್ಣ ತಂದೆ ಅಣ್ಣಪ್ಪ ಸುರಪ್ಪಗೋಳ ಹಾಗೂ ಅವರ ತಂದೆಯಾದ ಅಣ್ಣಪ್ಪ ತಂದೆ ಹಣಮಂತರಾಯ ಸುರಪ್ಪಗೋಳ ಇವರಿಬ್ಬರು ನನ್ನನ್ನು ತಡೆದು ನಿಲ್ಲಿಸಿ ಏ ಹೊಲೆಯ ಜಾತಿ ಸುಳೇ ಮಗನೆ ನಾವು ನಿಮ್ಮ ಹೊಲದಲ್ಲಿ ಒತ್ತುವರಿ ಮಾಡಿಲ್ಲ ಎಂದು ಎಷ್ಟು ಬಾರಿ ಹೇಳಿದರು ಸಹಾ ಕೇಳದೆ ಪ್ರತಿ ವರ್ಷ ನಾವು ಬಿತ್ತುವಾಗ ರಾಶಿಮಾಡುವಾಗ ಒತ್ತುವರಿ ಮಾಡಿದಿರಂತ ನಮ್ಮೊಂದಿಗೆ ತಕರಾರು ಮಾಡುತ್ತಿದ್ದಿರಾ ಮಗನೇ ಎಂದು ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಜಾತಿ ನಿಂದನೆ ಮಾಡುತ್ತಿರುವಾಗ ನಾನು ಅವರಿಗೆ ನೀವು ಈ ರೀತಿ ಜಾತಿ ನಿಂದನೆ ಮಾಡುವುದು ಸರಿಯಲ್ಲ ಎಂದು ಹೇಳುತ್ತಿರುವಾಗ ಅವರಿಬ್ಬರು ಸೇರಿ ಮಗನೇ ಇವತ್ತು ಒಬ್ಬನೆ ಸರಿಯಾಗಿ ಸಿಕ್ಕಿದಿಯಾ ಇವತ್ತು ಏನೆಯಾಗಲಿ ನಿನಗೆ ಕೊಲೆ ಮಾಡಿಯೇ ಬಿಡುತ್ತೇವೆಂದು ಚಿರಾಡುತ್ತಾ ಈರಣ್ಣನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಎಡಗಾಲು ಮೊಳಕಾಲು ಕೆಳಭಾಗಕ್ಕೆ ಹೊಡೆದಿದ್ದರಿಂದ ಭಾರಿ ರಕ್ತ ಗಾಯವಾಗಿ ನಾನು ನೆಲಕ್ಕೆ ಬಿದ್ದಾಗ ಅಣ್ಣಪ್ಪನು ಅದೇ ಕೊಡಲಿ ಕಾವಿನಿಂದ ನನ್ನ ಎಡಗಾಲು ಮೊಳಕಾಲು ಕೆಳಭಾಗಕ್ಕೆ ಹೊಡೆದಿದ್ದರಿಂದ ಒಳಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಹಣಮಂತರಾವ ತಂದೆ ಶಂಕರರಾವ ಬಿರಾದಾರ ಸಾ: ಮೇಳಕುಂದಾ (ಬಿ) ತಾ: ಜಿ: ಕಲಬುರಗಿ ರವರು ದಿನಾಂಕ : 07/12/16 ರಂದು 8 ಪಿಎಮಕ್ಕೆ ಗುಟಖಾ ತರಲು ಮಲ್ಲಣ್ಣಾ ಹೋಡೆದ ಕಿರಾಣಿ ಅಂಗಡಿಗೆ ಹೊಗಿ ಮರಳಿ ಮನೆಗೆ ಬರುವಾಗ 1) ಶರಣಬಸು ಗುಂಡಗುರ್ತಿ 2) ಹಣಮಂತರಾಯ ಗುಂಡಗುರ್ತಿ ಸಾ: ಇಬ್ಬರೂ ಮೇಳಕುಂದಾ (ಬಿ)  ರವರು ವಿನಾ ಕಾರಣ ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವನ ಬುಜಕ್ಕೆ  ಡಿಕ್ಕಿ ಹೊಡೆದು  ಜಗಳ ತೆಗೆದು ಕಲ್ಲಿನಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

08 December 2016

KALABURAGI DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ ಠಾಣೆ: ದಿನಾಂಕ 5-12-2016 ರಂದು ಶ್ರೀಮತಿ ತೇಜಸ್ವಿನಿ ಗಂಡ ಸಚಿನ ಪಾಟೀಲ ಸಾ: ಸ್ಟೇಶನ ಬಜಾರ  ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನಗೆ ಮದುವೆ ಆದ ದಿನದಿಂದ ನನಗೆ ನನ್ನ ಗಂಡ, ಭಾವ ನನಗೆ ಹಿಂಸೆ ನೀಡಿ ಮತ್ತು ನನ್ನ ತವರು ಮನೆಯಿಂದ ಒಟ್ಟು 7ಲಕ್ಷ ರೂಪಾಯಿ ಮತ್ತು 21 ತೊಲೆ ಬಂಗಾರ ಒತ್ತಾಯಪೂರ್ವಕವಾಗಿ ತೆಗೆದುಕೊಂಡಿದ್ದು. ಮತ್ತೇ ಇನ್ನೂ  10ಲಕ್ಷ ರೂಪಾಯಿ ತೆಗೆದುಕೋಂಡು ಬಾ ಎಂದು  ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದ ಕಾರಣ ದಿನಾಂಕ 3-12-2016 ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಗಂಡನ ವಿರುದ್ದ ದಾವೆ ಹಾಕಿದ್ದು. ವಿಚಾರಣೆ ಇದ್ದ ಪ್ರಯುಕ್ತ ತಾನು ತನ್ನ ತಂದೆ ತಾಯಿ ಕಾಕಾ ಪ್ರಕಾಶ ಮತ್ತು ಅಣ್ಣ ಮಲ್ಲಿಕಾರ್ಜುನ,  ನಿಲೇಶ ,ಪ್ರದೀಪ ಇವರೊಂದಿಗೆ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಿದ್ದಾಗ ನನ್ನ ಗಂಡ ಸಚಿನ ಅವನ ಅಣ್ಣ ಸಂದೀಪ ಮತ್ತು ಅವರ ಗೆಳೆಯರೊಬ್ಬರು ನಿನ್ನ  ಜೊತೆ ಏಕಾಂತದಲ್ಲಿ ಮಾತನಾಡುವುದಿದೆ ಎಂದು ತಿಳಿಸಿ  ಕೌಟುಂಬಿಕ ನ್ಯಾಯಾಲಯದ ಮುಂದೆ ಎ.ಡಿ ಆರ ಕಟ್ಟಡದ ಹತ್ತಿರ ಕರೆದೊಯ್ದುನೀನು ನಮ್ಮ ಮೇಲೆ ಹಾಕಿರುವ ಕೇಸುಗಳನ್ನು ಹಿಂದೆ ಪಡೆಯಬೇಕು ಇಲ್ಲದಿದ್ದರೆ ನಿನ್ನ ಗ್ರಹಚಾರ ಚೆನ್ನಾಗಿರುವುದಿಲ್ಲಾ ಎಂದು  ನನ್ನ ಕೂದಲು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು. ನನ್ನ ಭಾವ ಸಂದೀಪ ಸಹ ಅಲ್ಲಿಗೆ ಬಂದು ನೀನು ನಮ್ಮ ಮೇಲೆ ಕೇಸು ಹಾಕುತ್ತಿಯಾ ಎಂದು ನನ್ನ ಮೇಲೆ  ಹಲ್ಲೆ ಮಾಡಿ ಎಳೆದಾಡಿದ್ದು. ನನ್ನ ಗಂಡ ನನ್ನ ಕತ್ತು ಹಿಡಿದು ಇಂದು ನಾವು ನಿನ್ನನು ಮಗಿಸಿ ಬಿಡುತ್ತೇವೆ ಅಂತಾ ಹೇಳಿತ್ತಾ ಅವರ ಜೊತೆಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ಅವಳನ್ನು ಚೆನ್ನಾಗಿ ಹೊಡೆಯಿರಿ ಅಂತಾ ಪ್ರಚೋದಿಸುತ್ತಿದ್ದನು. ನನ್ನ ಕಿರುಚಾಟ ಕೇಳಿ ನನ್ನ ತಂದೆ ತಾಯಿ ಕಾಕಾ ಪ್ರಕಾಶ ಮತ್ತು ಅಣ್ಣ ಮಲ್ಲಿಕಾರ್ಜುನ, ನಿಲೇಶ, ಪ್ರದೀಪ ಇವರೆಲ್ಲರೂ ನನ್ನ ಹತ್ತಿರ ಬರುವಷ್ಟರಲ್ಲಿ ಅವರೆಲ್ಲರೂ ಅಲ್ಲಿಂದ ಓಡಿಹೋಗಿದ್ದು. ಕಾರಣ ನನ್ನ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಗಂಡ ಸಚಿನ, ಭಾವ ಸಂದೀಪ ಮತ್ತು ಅವರ ಸ್ನೇಹಿತ ಹಾಗೂ ಇದಕ್ಕೆ ಕಾರಣಳಾದ ಅಪರ್ಣಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

07 December 2016

Kalaburagi District Reported Crimes

ಇಸ್ಪೀಟ ಜೂಜಾಟಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 06/12/2016 ರಂದು ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶಿವಶಂಕರ ಸಾಹು ಪಿ.ಎಸ್.ಐ ನರೋಣಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಬಾತ್ಮಿ ಬಂದ ಸ್ಥಳವಾದ ಬೆಳಮಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಅಂದರ ಬಾಹರ ಎಂಬ ಜುಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ  1] ಚಿತಂಬರಾಯ ತಂದೆ ಕಲ್ಯಾಣವಾರ ಡೋಲೆ 2) ಸಿದ್ದಾರೋಡ ತಂದೆ ಶಾಂತಪ್ಪ ತಿಮ್ಮಾಜಿ 3) ಅರುಣಕುಮಾರ ತಂದೆ ಶಾಂತಯ್ಯ ಹಿರೇಮಠ 4) ಅಂಬರೀಶ ತಂದೆ ನಾಗೇಂಧ್ರಪ್ಪ 5) ಪ್ರಕಾಶ ತಂದೆ ಶ್ರೀಮಂತರಾಯ ದಾಮದೆ 6) ಬರಗಾಲೆ ತಂದೆ ಮಾಳೇಶ ಪೂಜಾರಿ ಸಾ : ಎಲ್ಲರು ಬೆಳಮಗಿ ಅಂಥಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 950 ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು  ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ಪ್ರಭುದೇವ ತಂದೆ ಗುರಣ್ಣ ಬೀದರಕುಂದಿ ಸಾ|| ಶಾಂತಿ ನಗರ ಕಲಬುರಗಿ ಕಾರ ನಂಬರ ಕೆಎ-32 ಎನ್-8421 ನೇದ್ದರ ಚಾಲಕನು  ತನ್ನ ಕಾರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಗಂಗಾರಾವಲಪಲ್ಲಿ ಗೇಟ ಹತ್ತಿರ ರಸ್ತೆಯ ಬದಿಯಲ್ಲಿ ಗಿಡಕ್ಕೆ ಡಿಕ್ಕಿ ಪಡಿಸಿದ್ದು ಆರೋಪಿತನು ಸ್ಥಳದಲ್ಲಿಯೆ ಮೃತಪಟ್ಟಿದ್ದು ಇನ್ನೀಬ್ಬರಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಲಲೀತಾ ಗಂಡ ಪ್ರಭುದೇವ ಬೀದರಕುಂದಿ ಸಾ|| ಶಾಂತಿನಗರ ಕಲಬುರಗಿ.ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ರೇವೂರ ಠಾಣೆ : ಈರಣ್ಣಾ ತಂದೆ ಗಬಗಪ್ಪಾ ರಾಂಪೂರೆ ಇವರು ಲೀವರ ತೊಂದರೆಯಿಂದ ಬಳಲುತ್ತಿದ್ದು ಹಾಗು ಸುಮಾರು ಎರಡುವರೆ ತಿಂಗಳ ಹಿಂದೆ ಹೆಂಡತಿ ಮೃತಪಟ್ಟಿದ್ದು ಜೀವನದಲ್ಲಿ ಜಿಗುಪ್ಸೆಯಾಗಿ ಖಿನ್ನತೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಶ್ರೀ ಪ್ರವೀಣಕುಮಾರ ತಂದೆ ಈರಣ್ಣಾ ರಾಂಪೂರೆ ಸಾ : ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಪದ್ಮಾವತಿ ಗಂಡ  ದಿ: ವೆಂಕಟೇಶ ಕುಲಕರ್ಣಿ  ಸಾ: ಇಟಗಾ (ಕೆ) ತಾ: ಜಿ: ಕಲಬುರಗಿ ಇವರು ಮಗನಾದ  ರಾಮಚಂದ್ರ ವ: 26 ವರ್ಷ ಈತನು. ದಿನಾಂಕ: 05/12/16 ರಂದು ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಜೋಳದ ಬೆಳೆಗೆ ಹೊಡೆಯುವ ಕ್ರೀಮಿನಾಶಕ ಜೌಷದ ತರುತ್ತೇನೆಂದು ಕಲಬುರಗಿಗೆ ತನ್ನ ಮೋಟಾರ ಸೈಕಲ ನಂಬರ ಸಿಡಿ 100 ಸಿಟಿಪಿ 1194 ರ ಮೇಲೆ ಹೋಗಿ ವೀರಭದ್ರೇಶ್ವರ ಅಗ್ರೋದಲ್ಲಿ ಕ್ರೀಮಿನಾಶಕ ಜೌಷದ ಖರಿದಿ ಮಾಡಿಕೊಂಡಿದ್ದು. ಮರಳಿ ಬಾರದಿದ್ದರಿಂದ ಆತನ ಮೋಬೈಲ ನಂಬರ 8105555435 & 8139939677 ನೇದ್ದಕ್ಕೆ ಸಂಪರ್ಕಿಸಲಾಗಿ ನಾಟ್‌ ರಿಚೇಬಲ್‌ ಆಗಿದ್ದು ಆತನಿಗಾಗಿ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ ಹಾಗೂ ವೀರಭದ್ರೇಶ್ವರ ಅಂಗಡಿಗೆ ಹೋಗಿ ವಿಚಾರಿಸಿದ್ದು ಕ್ರೀಮಿನಾಶಕ ಜೌಷದ ತೆಗೆದುಕೊಂಡು ಹೋದ ಬಗ್ಗೆ ತಿಳಿಸಿರುತ್ತಾರೆ ಆತನ ಗೆಳೆಯರಿಗೆ ಹಾಗು ನಮ್ಮ ಸಂಬಂಧಿಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಿಸಲು ಸದರಿಯವನು ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಮಾಡಿಕೊಳ್ಳುತ್ತೆನೆ ಅಂತಾ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಕುಮಾರಿ ಇವರು ಸುನೀಲ ತಂದೆ ಲಕ್ಷ್ಮಣ ಇವರ ಮನೆ ಕೂಡಾ ಇರುತ್ತದೆ. ಈಗ 2 ತಿಂಗಳಿಂದ ಸುನೀಲ ಇತನು ನಮ್ಮ ಮನೆಗೆ ಬಂದು ಹೋಗುವದು ಮಾಡುವದರಿಂದ ಅವನ ಪರಿಚಯವಾಗಿರುತ್ತದೆ. ಅವನು ನನ್ನ ಸಂಗಡ ಸಲುಗೆಯಿಂದ ಮಾತನಾಡುವದರಿಂದ ಇಬ್ಬರ ಪರಿಚಯವಾಗಿರುತ್ತದೆ. ಅವನು ನನಗೆ ಪ್ರೀತಿ ಮಾಡುತ್ತೇನೆ ಅಂತ ಹೇಳುವದು ಮಾಡುತ್ತಾ ಬಂದಿರುತ್ತಾನೆ. ನಾನು ಅದಕ್ಕೆ ನಮ್ಮ ಮನೆಯಲ್ಲಿ ಒಪ್ಪುವದಿಲ್ಲಾ ಅಂತ ಹೇಳಿದರು ಅವನು ನಮ್ಮ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ನಮ್ಮ ಮನೆಯೊಳಗೆ ಬಂದು ನನಗೆ ಅಂಜಿಸಿ ಒತ್ತಿಯಾಗಿ ಹಿಡಿದುಕೊಳ್ಳುವದು ಮಾಡುತ್ತಿದ್ದನು. ಅಲ್ಲದೇ ನಾನು ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳುವದರಿಂದ ನಾನು ಸುಮ್ಮನಿದ್ದೇನು. ನೀನು ಯಾರಿಗಾದರು ಹೇಳಿದರೆ ನಿನಗೆ ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇದರಿಸುತ್ತಿದನು.  ನಾನು ಅದಕ್ಕೆ ಅಂಜಿ ಯಾರಿಗೂ ಹೇಳಿರುವದಿಲ್ಲಾ. ನಂತರ ಅವನು ನನಗೆ 2-3 ಸಲ ರೇವನೂರ ಸೀಮೆಯಲ್ಲಿ ಒಂದು ಹೊಲದ ಕಡೆಗೆ ಕರೆದುಕೊಂಡು ಹೋಗಿ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಸಂಬೋಗ ಮಾಡಿರುತ್ತಾನೆ. ಅಲ್ಲದೆ ಈಗ ಸುಮಾರು ಒಂದು ತಿಂಗಳದ ಹಿಂದೆ ಅಂದರೆ ದಿ: 20.09.16 ರಂದು ಮದ್ಯಾಹ್ನ ಸಮಯದಲ್ಲಿ ನನಗೆ ಒಂದು  ಆಟೋದಲ್ಲಿ ಕೂಡಿಸಿಕೊಂಡು ರೇವನೂರ ಸಿಮಾಂತರದ ಒಂದು ಹೊಲಕ್ಕೆ ಕರೆದುಕೊಂಡು ಹೋಗಿ ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ನಾನು ಬೇಡ ಅಂತ ಹೇಳಿದರು ಮದ್ಯಾಹ್ನ 1.00 ಗಂಟೆ ಸುಮಾರಿಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ. ನಂತರ ನಾನು ಅವನಿಗೆ ಮದುವೆ ಮಾಡಿಕೊಳ್ಳು ಅಂತ ಹೇಳಿದರೆ ಅವನು ನನಗೆ ಈಗಾಗಲೇ ಮದುವೆ ಆಗಿರುತ್ತದೆ ನಾನು ಮದುವೆ ಮಾಡಿಕೊಳ್ಳುವದಿಲ್ಲಾ ಅಂತ ಹೇಳುತ್ತಾ ಬಂದಿರುತ್ತಾನೆ. ಅದಕ್ಕೆ ನಾನು ನಮ್ಮ ಮನೆಯಲ್ಲಿ ನಮ್ಮ ಅಜ್ಜಿಗೆ ಮತ್ತು ನಮ್ಮ ಸಂಭಂದಿಕರಾದ ಚಂದ್ರಕಾಂತ ಗಂವ್ಹಾರ್ ನಮ್ಮ ಸಮಾಜದ ಮುಖಂಡರಾದ ರವಿ ದೊಡ್ಡಮನಿ, ಮರೆಪ್ಪ ಗಂವ್ಹಾರ, ದೇವಿಂದ್ರ ಗಂವ್ಹಾರ್ ಇವರಿಗೆ ವಿಷಯ ತಿಳಿಸಿದಾಗ ಅವರು ನನಗೆ ಸುಮ್ಮನಿರು ಅವನಿಗೆ ಕರೆಯಿಸಿ ಮಾತಾಡಿದರಾಯಿತು ಅಂತ ಹೇಳಿ ಅವನಿಗೆ ಕೇಳಿದಾಗ ಅವರ ಮುಂದೆಯೂ ಕೂಡಾ ನನಗೆ ಮದುವೆ ಮಾಡಿಕೊಳುವುದಿಲ್ಲಾ ಅಂತಾ ಹೇಳಿರುತ್ತಾನೆ, ನಮ್ಮ ಮನೆಯಲ್ಲಿ ನನಗೆ ಬೇರೆ ಕಡೆ ಮದುವೆ ಮಾಡಲು ಓಡಾಡುತ್ತಿದ್ದಾಗ ಅವನು ಅವರ ಮನೆಯವರಿಗೆ ಫೋನ ಮಾಡಿ ಅವಳಿಗೆ ಮದುವೆ ಮಾಡಿಕೊಳ್ಳದಂತೆ ಧಮಕಿ ಹಾಕುತ್ತಾ ಬಂದಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 01-12-2016 ರಂದು ಕವಲಗಾ (ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಮ್‌‌ಸಿ ಚುನಾವಣೆ ನಡೆದಿದ್ದು. ತಮ್ಮೂರಿನ ಖಲೀಲ ತಂದೆ ದಸ್ತಗಿರಿಸಾಬ ಇನಾಮದಾರ ಈತನು ದಿನಾಂಕ 02-12-2016 ರಂದು ಬೆಳ್ಳೀಗ್ಗೆ ಶಿವಪ್ಪಾ ಪೂಜಾರಿ ಇವರ ಹೊಟೇಲ ಹತ್ತಿರ ನನಗೆ ಮಾದಿಗ ಸೂಳೇ ಮಗನೇ ನೀನು ನಿನ್ನೆ ನಡೆದ ಎಸ್‌ಡಿಎಮ್‌ಸಿ ಚುನಾವಣೆಯಲ್ಲಿ ನನಗೆ ಓಟು ಹಾಕಿರುವುದಿಲ್ಲಾ ಅಂತಾ ಅವ್ಯಾಚ್ಛ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾನೆ  ಅಂತಾ ಶ್ರೀ ಹಣಮಂತ ತಂದೆ ಶಿವಪ್ಪಾ ಬಬಲಾದ ಸಾ: ಕವಲಗಾ (ಕೆ) ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.