POLICE BHAVAN KALABURAGI

POLICE BHAVAN KALABURAGI

17 April 2016

Kalaburagi District Reported Crimes

ಕಿರುಕಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಕಾಳಗಿ ಠಾಣೆ : ಶ್ರೀಮತಿ ಚಂಗಾಬಾಯಿ  ಗಂಡ ರಾಮು ಚವ್ಹಾಣ ಸಾಃ ಕೋರವಾರತಾಂಡಾ ತಾಃ ಚಿತ್ತಾಪೂರ ಜಿಃ ಕಲಬುರಗಿ  ರವರ ಮೂರನೇ ಮಗಳಾದ ಕವಿತಾ ಇವಳಿಗೆ 18 ವರ್ಷಗಳ ಹಿಂದೆ ನಮ್ಮ ತಾಂಡಾದ ಮಾಣಿಕ ಜಾಧವ ಎಂಬುವನಿಗೆ ಲಗ್ನಮಾಡಿಕೊಟ್ಟಿದ್ದು ಅವಳಿಗೆ 5 ಮಕ್ಕಳಾಗಿದ್ದು ನನ್ನ ಅಳಿಯ ಲಗ್ನವಾದಾಗಿನಿದ್ದ ನನ್ನ ಮಗಳಿಗೆ ನಿನು ಸರಿಯಾಗಿ ಇಲ್ಲಾ ನಿನಗೆ ಅಡಿಗೆ ಮಾಡಲು ಬರುವುದಿಲ್ಲಾ ಹಾಗೆ ಹೀಗೆ ಅಂತಾ ಜಗಳ ತೆಗೆದು ಹೊಡೆಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ಈ ಬಗ್ಗೆ ಕೆಲವು ಬಾಗಿ ನಾನು ನನ್ನ ಗಂಡ ಹಾಗೂ ನನ್ನ ಮಗ ಕೂಡಿ ನನ್ನ ಅಳಿಯನಿಗೆ ಈ ತರಹ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುವುದು ಸರಿ ಅಲ್ಲಾ ಸಂಸಾರ ಕಟ್ಟಿ ಹೋಗುತ್ತದೆ ಅಂತಾ ಬುದ್ದಿ ಮಾತು ಹೇಳುತ್ತಾ ಬಂದಿದರು ಅದೆ ರೀತಿ ಹೊಡೆಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ಮಾಡುತ್ತಾ ಬಂದು ಇಂದು ದಿನಾಂಕ-16/04/2016 ರಂದು 4-30 ಪ.ಎಮ್ ಸುಮಾರಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿ ಹೋಗಿದರಿಂದ ನನ್ನ ಮಗಳು ಸದರಿಯವನ ಕಾಟ ತಾಳಲಾರದೆ ಮನೆಯಲ್ಲಿದ್ದ ಕ್ರಮಿನಾಶಕ ಔಷಧಿ ಸೇಮನೆ ಮಾಡಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿಸ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ ಗಾಜರೇ ನೀಲಪ್ಪ ತಂ ಚಂದ್ರಶ್ಯಾ ಸಾ:ಭೋದನ ಇವರು ದಿನಾಂಕ: 15/04/2016 ರಂದು ಮುಂಜಾನೆ 7-00 ಗಂಟೆಗೆ ನಾನು ನಮ್ಮ  ಮನೆಯಲ್ಲಿದ್ದಾಗ ನಮ್ಮ ಶಾಲಾ ವಿಧ್ಯಾರ್ಥಿಯಾದ ಶರಣಬಸಪ್ಪ ತಂ ಸೂರ್ಯಕಾಂತ ವಾಲೆ, ಮು:ಮುನ್ನಹಳ್ಳಿ ಈತನು ಫೋನ್ ಮಾಡಿ ನಮ್ಮ ಶಾಲೆಯ ಕಂಪ್ಯೂಟರ್ ಕೋಣೆಯ ಕೊಂಡಿ ಮುರಿದು ಬಾಗಿಲು ತೆರೆದಿರುತ್ತವೆ. ಅಂತಾ ನನಗೆ ತಿಳಿಸಿದ ಮೇರೆಗೆ ವಿಷಯವನ್ನು ನಮ್ಮ ಶಾಲೆ ಎಲ್ಲಾ ಶಿಕ್ಷಕರಿಗೆ ತಿಳಿಸಿ ನಾನು ಮುಂಜಾನೆ 9-00 ಗಂಟೆಗೆ ಬಂದು ನೋಡಲಾಗಿ ನಮ್ಮ ಶಾಲೆಯ ಕಂಪ್ಯೂಟರ್ ಕೋಣೆಯ TUBULAR BATTERIES ಕೊಂಡಿ ಮುರಿದು ಮಾಗಿಲು ತರೆದಿದ್ದು ನಾನು ಹಾಗೂ ನಮ್ಮ ಶಿಕ್ಷಕರಾದ ಸುಭಾಷ ಎನ್ ನಡಗೇರಿ ಹಾಗೂ ಶಾಲಾ ಅಧ್ಯಕ್ಷರಾದ ಶಾಂತಕುಮಾರ ವೇದಶೆಟ್ಟಿ ಎಲ್ಲರೂ ಕೂಡಿ ಒಳಗೆ ಹೋಗಿ ನೋಡಲಾಗಿ ಶಾಲಾ ವಿಧ್ಯಾರ್ಥಿಗಳ ಭೋದನೆಗಾಗಿ ವದಗಿಸಿರುವ ಕಂಪ್ಯೂಟರಗಳ 16 ಬ್ಯಾಕಪ್ ಬ್ಯಾಟರಿಗಳು ಮತ್ತು ಒಂದು ಸ್ಟ್ಯಾಂಡ್ ಕಳುವು ಮಾಡಿಕೊಂಡು ಹೊಗಿದ್ದಾರೆ, ಕಳವುವಾದ 16 ಬ್ಯಾಟರಿಗಳು 2011ನೇ ಸಾಲಿನಲ್ಲಿ EDUCOMP ರವರು ಸರಬರಾಜು ಮಾಡಿದ SOUTHER MARK HIPUER XL TT 10012 V 100 AH PP 10 TUBULAR BATTERIES,ಕಂಪನಿಗಳಿದ್ದು ಬ್ಯಾಟರಿಗಳು ಅಂದಾಜು 24500 /- ರೂಪಾಯಿ ಆಗಿರಭಹುದಾಗಿದೆ ಘಟನೆ ದಿನಾಂಕ: 14/04/2016 ರಾತ್ರಿ 10 ಗಂಟೆಯಿಂದ ದಿನಾಂಕ: 15/04/2016 ಮುಂಜಾನೆ 6-00 ಗಂಟೆಯ ಮಧ್ಯ ಅವಧಿಯಲ್ಲಿ ಆಗಿರಭಹುದು ಕಳುವಾಗಿರುವ ಬ್ಯಾಟರಿಗಳು ಪತ್ತೆ ಹಚ್ಚಿಕೊಡಲು ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.
ಸಾಲಬಾದೆಯಿಂದ ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀ ಭೀಮರಾಯ ಮೇಳಕುಂದಿ ಸಾ|| ಚಿನಮಳ್ಳಿ ಇವರ ಕಿರಿಯ ಮಗನಾದ ಸಿದ್ದಪ್ಪ ಮೇಳಕುಂದಿ ಈತನ ಹೆಸರಿನಿಂದ ಚಿನಮಳ್ಳಿ ಸೀಮಾಂತರದ ಹೊಲ ಸರ್ವೆ ನಂ 150 ನೇದ್ದರಲ್ಲಿ 05 ಎಕರೆ 20 ಗುಂಟೆ ಹೊಲವಿರುತ್ತದೆ, ಸದರಿ ಹೊಲದ ಮೇಲೆ ಸುಮಾರು 5-6 ವರ್ಷಗಳ ಹಿಂದೆ ಸಾಗನೂರ ಗ್ರಾಮದ ಎಸ್.ಬಿ.ಹೆಚ್ ಬ್ಯಾಂಕಿನಲ್ಲಿ 2.50.000/- ರೂಪಾಯಿ ಹಾಗೂ ಹಸರಗುಂಡಗಿ ಗ್ರಾಮದ ವಿ.ಎಸ್.ಎಸ್.ಎನ್. ಸೊಸೈಟಿಯಲ್ಲಿ 23.000/- ಸಾವಿರ ರೂಪಾಯಿ ಹೀಗೆ ಒಟ್ಟು 2.73.000/- ರೂಪಾಯಿಗಳನ್ನು ಬೆಳೆ ಸಾಲವಾಗಿ ಪಡೆದುಕೊಂಡಿದ್ದು ಇರುತ್ತದೆ, ಈಗ ಸುಮಾರು 02 ವರ್ಷಗಳಿಂದ ಮಳೆ ಸರಿಯಾಗಿ ಆಗದೆ ಇರುವದರಿಂದ ಹೊಲ ಬೆಳೆಯದೆ ಇದ್ದ ಕಾರಣ ಆಗಾಗ ನನ್ನ ಮಗನು ನಾನು ಮಾಡಿದ ಸಾಲವನ್ನು ಹೇಗೆ ತಿರಿಸಲಿ ಅಂತ ನನ್ನ ಮುಂದೆ ಮತ್ತು ನನ್ನ ಮಕ್ಕಳ ಮುಂದೆ ಹೇಳುತ್ತಿದ್ದನು ಆಗ ನನ್ನ ಮಗನಿಗೆ ನಾನು ಸಾಲದ ಬಗ್ಗೆ ಚಿಂತೆ ಮಾಡಬೇಡ ಹೊಲ ಸರಿಯಾಗಿ ಬೆಳೆದ ಮೇಲೆ ಬ್ಯಾಂಕಿನ ಸಾಲ ಕಟ್ಟೋಣ ಅಂತ ಸಮದಾನ ಹೇಳುತ್ತಿದ್ದೇನು. ಹೀಗಿದ್ದು ನಿನ್ನೆ ದಿನಾಂಕ 15-04-2016 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನನ್ನ ಮಗನಾದ ಸಿದ್ದಪ್ಪ ಈತನು ನಾನು ಹೊಲಕ್ಕೆ ಹೋಗಿ ಬರುತ್ತೇನೆ, ಅಂತ ಹೇಳಿ ಮನೆಯಿಂದ ಬಂದಿರುತ್ತಾನೆ ಇಂದು ದಿ:16-04-2016 ರಂದು ಬೆಳಿಗ್ಗೆ 8-00 ಗಂಟೆಯಾದರು ನನ್ನ ಮಗ ಮರಳಿ ಮನೆಗೆ ಬಾರದೆ ಇರುವದರಿಮದ ಗಾಬರಿಯಾಗಿ ನಾನು ಮತ್ತು ನನ್ನ ಮಕ್ಕಳು ಮತ್ತು ನನ್ನ ಅಣ್ಣನ ಮಗನಾದ ಶ್ರೀಶೈಲ ತಂದೆ ಮಲಕಣ್ಣ,ಮತ್ತು ನನ್ನ ತಮ್ಮನ ಮಗನಾದ ನಾಗರಾಜ ತಂದೆ ಚನ್ನಬಸಪ್ಪ ಮೇಳಕುಂದಿ ಎಲ್ಲರೂ ಕೂಡಿಕೊಂಡು ಹೊಲಕ್ಕೆ ಬಂದು ನನ್ನ ಮಗನನ್ನು ಹುಡುಕಾಡಿದರು ಸಿಕ್ಕಿರುವದಿಲ್ಲ ನಂತರ ಹೊಳೆಯ ದಂಡೆಯ ಕಡೆಗೆ ಬಂದು ಹುಡುಕುತ್ತಿರುವಾಗ ಇಂದು ದಿನಾಂಕ 16-04-2016 ರಂದು ಮುಂಜಾನೆ 10-00 ಗಂಟೆಗೆ ನನ್ನ ಮಗನ ಶವವು ಭೀಮಾ ನದಿಯಲ್ಲಿ ದೊರೆತಿದ್ದು ಇರುತ್ತದೆ, ಕಾರಣ ನನ್ನ ಮಗನು ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಅಂತ ಸಾಲದ ಬಾದೆಯಿಂದ ಮನನೊಂದು ದಿ: 15-04-2016 ರಂದು ರಾತ್ರಿ 10-00 ಗಂಟೆಯಿಂದ ದಿ: 16-04-2016 ರಂದು ಮುಂಜಾನೆ 10-00 ಗಂಟೆಯ ಮದ್ಯದ ಅವದಿಯಲ್ಲಿ ಸಾಲದ ಬಾದೆಯಿಂದ ಮನನೊಂದು ಭೀಮಾ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿ ರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಂಬರಾಯ ತಂದೆ ಮಲ್ಲಪ್ಪಾ ಮುದ್ದಡಗಿ ಸಾ : ಆಲ್ಗೂಡ ತಾ;ಜಿ;ಕಲಬುರಗಿ ಇವರ  ಮಗಳು ಶ್ರೀಮತಿ ಮಹಾದೇವಿ  ಗಂಡ ಶರಣಪ್ಪಾ ಲೇಂಗಟಿಕರ ವಯ;24 ವರ್ಷ ಇವಳು ಲಂಗಾ ಬಟ್ಟೆ ತರುತ್ತೇನೆ ಅಂತಾ ಹೇಳಿ ಆಲ್ಗೂಡದಿಂದ ತಾರಫೈಲ್ ಕಲಬುರಗಿಗೆ  ಹೋಗಿ ಬರುತ್ತೇನೆ ಅಂತಾ ಮನೆಯಿಂದ ಹೋದವಳು ಮರಳಿ ಮನಗೆ ಬಂದಿರುದಿಲ್ಲಾ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

16 April 2016

Kalaburagi District Reported Crimes

ಕೊಲೆ ಪ್ರಕರಣ :
ಚಿತ್ತಾಪೂರ ಠಾಣೆ : ಶ್ರೀಮತಿ ಗೋದಾವರಿ ಗಂಡ ಸಾಬಣ್ಣ ಜಡಿ ಸಾ:ಢೋಣಗಾಂವ್ ತಾ:ಚಿತ್ತಾಪೂರ ಜಿ:ಕಲಬುರಗಿ ಇವರ ನಮ್ಮೂರ ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ ಹಾಗೂ ರಾಜಪ್ಪ ತಂದೆ ಮಲ್ಲಪ್ಪ ಜಡಿ ನನ್ನ ಗಂಡ ಸಾಬಣ್ಣನ ಗೆಳೆತನ ಇತ್ತು. ಆಗಾಗ ಇವರೆಲ್ಲರು ಕೂಡಿಯೆ ಇರುತ್ತಿದ್ದರು. ಈಗ ಸುಮಾರು 15 ದಿವಸಗಳ ಹಿಂದೆ ಸದರ ಮಾರ್ತಂಡಪ್ಪ ರಟಕಲ ಮತ್ತು ರಾಜಪ್ಪ ಜಡಿ ಇಬ್ಬರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ರೊಕ್ಕ ಯಾವಾಗ ಕೊಡುತ್ತಲೆ ಅಂತ ಬಾಯಿ ಮಾಡುತ್ತಿದ್ದರು. ಆಗ ನಾನು ನನ್ನ ಗಂಡನಿಗೆ ಕೇಳಿದಾಗ, ನನ್ನ ಗಂಡ ಸಾಬಣ್ಣ ನಾನು ಅವರ ಹತ್ತಿರ 20 ಸಾವೀರ ರೂಪಾಯಿ ತೆಗೆದುಕೊಂಡಿದ್ದೇನೆ. ಅದಕ್ಕೆ ಅವರು ಕೇಳುತ್ತಿದ್ದಾರೆ, ನಿನಗೇನು ಮಾಡುವುದಿದೇ ಸುಮ್ಮನೀರು ಅಂತ ಅಂದನು ನಾನು ಸುಮ್ಮನಾದೆ. ದಿನಾಂಕ:-09/04/2016 ರಂದು ರಾತ್ರಿ 7 ಗಂಟೆ ಸುಮಾರಿಗೆ ನಮ್ಮ ಮನೆ ಕಟ್ಟೆಯ ಮೇಲೆ ನಾನು ಮತ್ತು ನನ್ನ ಗಂಡ ನಾದ ಸಾಬಣ್ಣ ತಂದೆ ಸುಬಣ್ಣ ಜಡಿ ಇಬ್ಬರು ಮಾತಾಡುತ್ತಾ ಕುಳಿತ್ತಿದ್ದಾಗ. ನನ್ನ  ಗಂಡನ ಗೆಳೆಯರಾದ 1] ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ 2] ರಾಜಪ್ಪ ತಂದೆ ಮಲ್ಲಪ್ಪ ಜಡಿ ಸಾ: ಇಬ್ಬರು ಢೋಣಗಾಂವ್. ಇಬ್ಬರು ನಮ್ಮ ಮನೆಯ ಮುಂದೆ ಸ್ವಲ್ಪ ದೂರದಲ್ಲಿ ನಿಂತು ಮಾರ್ತಂಡಪ್ಪ ಈತನು ನನ್ನ ಗಂಡನಿಗೆ ಕೈ ಸನ್ನೆ ಮಾಡಿ ಕರೆದನು. ನನ್ನ ಗಂಡನು ಅವನು ಕಡೆಗೆ ಹೊಗುತ್ತಿದ್ದಾಗ. ನಾನು ಅವನಿಗೆ ಊಟ ಮಾಡು ಅಂತ ತಡೆದೆ. ಅದಕ್ಕೆ ಅವನು ನೀನು ಊಟ ಮಾಡಿ ಮಲಗು ನಾನು ಹೊಗಿ ಬರುತ್ತೇನೆ ಅಂತ ಹೇಳಿ ಹೋದನು. ರಾತ್ರಿಯಾದರು ನನ್ನ  ಗಂಡ ಮನೆಗೆ ಬರಲಿಲ್ಲ. ಮರುದಿನ ದಿನಾಂಕ:-10/04/2016 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನಮ್ಮ ಓಣಿಯ ಜನರೆಲ್ಲರು ಹಳಿಮನಿ  ಮರೆಪ್ಪನ ಮನೆ ಕಪೌಂಡಿಗೆ ಹತ್ತಿ ಒಬ್ಬ ಮನುಷ್ಯ ಸತ್ತು ಬಿದ್ದಾನ ಅಂತ ಓಡುತ್ತಿದ್ದಾಗ, ನಾನು ಸಹ ಅವರೊಂದಿಗೆ ಹೋಗಿ ನೋಡಲಾಗಿ ನನ್ನ ಗಂಡ ಸಾಬಣ್ಣ ತಂದೆ ಸುಬಣ್ಣ ಜಡಿ ಈತನು ಸತ್ತಿದ್ದು ನೋಡಿದೆ. ನಾನು ಗಾಬರಿಯಾಗಿ ಅಳತೊಳಗಿದೆ. ನಂತರ ಮಾರ್ತಂಡಪ್ಪ ತಂದೆ ಮಲ್ಲಪ್ಪ ರಟಕಲ, ಸಾಬಣ್ಣ ತಂದೆ ಬಸಪ್ಪ ಚವನೂರು, ದೇವೀಂದ್ರ ತಂದೆ ಶರಣಪ್ಪ ರಟಕಲ ವರೆಲ್ಲರು ನನ್ನ  ಗಂಡನ ಶವವನ್ನು ಪ್ಲಾಸ್ಟೀಕ ತಾಡಪತ್ರಿಯಲ್ಲಿ ನನ್ನ  ಮನೆಯ ಮುಂದೆ ತಂದು ಹಾಕಿದರು. ನನ್ನ ಗಂಡನ ಶವವನ್ನು ನೋಡಲಾಗಿ. ತಲೆಯ ಹಿಂದೆ ರಕ್ತ ಬಂದಿದ್ದು. ಮತ್ತು ಹಳೆಣೆ ಕಚ್ಚಿನ ಗಾಯ ಬಿದ್ದಿದ್ದು. ಕುತ್ತಿಗಿಗೆ ಎದುರುಗಡೆ ಕಂದುಗಟ್ಟಿದ ಗಾಯ ನೋಡಿದೆ. ಏನಾಗಿದೆ ನನ್ನ ಗಂಡನಿಗೆ ಅಂತ ಅಳುತ್ತಿದ್ದಾಗ ಬಿಸಿಲು ಜಾಸ್ತಿ ಆದ ಕೊಡದಂಗ ಕಾಣ್ತಾನ ಅದಕ್ಕೆ ಸತ್ತಾನ ಅಂತ ಅನ್ನುತ್ತಿದ್ದರು. ಅದೆ ದಿವಸ ನಮ್ಮ ಹೋಡ ಹೊಲದಲ್ಲಿ ಮಣ್ಣು ಮಾಡಿದರು. ನಂತರ ಊರಲ್ಲಿ ಜನರು ಸಾಬಣ್ಣ ಜಡಿ ಕುಡಿದು ಸತ್ತಿಲ್ಲ. ಅವನಿಗೆ ಕೊಲೆ ಮಾಡಿದ್ದಾರೆ ಅಂತ  ಅಂದಾಡುತ್ತಿದ್ದಾಗ ನಾನು ರಾಜಪ್ಪ ಮತ್ತು ಮರ್ತಾಂಡಪ್ಪನಿಗೆ ನನ್ನ ಗಂಡನಿಗೆ ಏನು ಮಾಡಿದ್ದಿರಿ ಅಂತ ಕೇಳಿದಾಗ ಅವರು ನೀನೆ ನಿನ್ನ ಗಂಡಗ ಹೊಡೆದು ಕೊಲೆ ಮಾಡಿದ್ದಿ ಅಂತ ಕೇಸ ಕೊಡುತ್ತೇವೆ ಸುಮ್ಮನೀರು ಅಂತ ಅಂಜಿಸಿದರು. ನನ್ನ ಗಂಡ ಸಾಬಣ್ಣನಿಗೆ ದಿನಾಂಕ:-09/04/2016 ರಂದು 7 ಪಿ.ಎಮ್. ದಿಂದ ದಿನಾಂಕ:-10/04/2016 ರಂದು 7 .ಎಮ್. ಅವಧಿಯಲ್ಲಿ ನಮ್ಮೂರ ಮಾರ್ತಂಡಪ್ಪ ರಟಕಲ ಹಾಗೂ ರಾಜಪ್ಪ ಜಡಿ ಇವರು ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 April 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 10.04.2016 ರಂದು ಮದ್ಯಾಹ್ನ 12:15 ಗಂಟೆಯ ಸುಮಾರಿಗೆ ಜೇವರಗಿ ಪದವಿ ಪೂರ್ವ ಕಾಲೇಜ ಹತ್ತಿರ ಜೇವರಗಿ- ಶಹಾಪೂರ ರೋಡಿನ ಮೆಲೆ ಆನಂದ ಈತನು ತನ್ನ ಮೋಟಾರು ಸೈಕಲ್ ನಂ ಕೆಎ32ಇಎಪ್4283 ನೇದ್ದರ ಮೇಲೆ ನನಗೆ ಕೂಡಿಸಿಕೊಂಡು ಶಹಾಪೂರ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಮುಂದುಗಡೆ  ಒಂದು ಕಾರ್ ಎಮ್.ಹೆಚ್-10-ಎವಿ- 5734 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಯಾವದೇ ಸೂಚನೆ ತೋರಿಸದೆ ಒಮ್ಮಲೇ ಬಲ ಸೈಡಿಗೆ ಹೊರಳಿಸಿ ನಮ್ಮ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಆನಂದ ಯಾನೂರನಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಅಪಘಾತದ ನಂತರ ಸದರಿ ಕಾರ್ ಚಾಲಕನು ತನ್ನ ಕಾರ್‌ ಅನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ತೇಜು ತಂದೆ ಮಲ್ಲಿಕಾರ್ಜುನ ಹೊಸಮನಿ ಸಾಃ ರೇವನೂರ ತಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 10.04.2016 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ಸರಕಾರಿ ಶಾಲೆಯ ಮುಂದಿನ ಸಾರ್ವಜನಿಕ  ಬೋರ್‌ವೆಲ್ ನಲ್ಲಿ ನೀರು ತುಂಬುತ್ತಿದ್ದಾಗ 1. ರೆಹಮಾನ್ ತಂದೆ ರತನ್‌ಪಟೆಲ ಮಿರಾಗೌಡ 2. ಲಾಡ್ಲೆಪಟೇಲ ತಂದೆ ರಹೀಮಾನ್ ಪಟೆಲ್  ಮಿರಾಗೌಡ  3. ಮಹೇಬೂಬ ಪಟೆಲ  ದೆರಹೀಮಾನ್ ಪಟೇಲ್ ಮಿರಾಗೌಡ ಸಾ|| ಎಲ್ಲರು ಯಾಳವಾರ ಗ್ರಾಮ  ಕೂಡಿಕೊಂಡು ಬಂದು ವಿನಾಃಕಾರಣ ನನ್ನೊಂದಿಗೆ ಜಗಳ ತೆಗೆದು ನನ್ನ ಕೈ ಮತ್ತು ಸಿರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿದ್ದು ಮತ್ತು ನನಗೆ ಕೈಯಿಂದ ಹೊಡೆಬಡೆ ಮಾಡಿದ್ದು ಮತ್ತು ಪ್ಲಾಸ್ಟೀಕ್‌ ಬುಟ್ಟಿಯಿಂದ ಹೊಡೆದು, ಕಾಲಿನಿಂದ ಒದ್ದಿರುತ್ತಾರೆ  ಅಂತಾ ಶ್ರೀಮತಿ ಶರಣಮ್ಮ ಗಂಡ ಸಿದ್ದಣ್ಣ ಕಂದಗಲ್ ಸಾ : ಯಾಳವಾರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಥಾವರು ಚವ್ಹಾಣ ಸಾ: ಕಪಾನಿ ಫನವೇಲ್ ಏರಿಯಾ ವಾಯಾ ಘರ ಮುಂಬೈ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳೀಕೆ ನೀಡಿದ್ದರ ಸಾರಾಂಶವೇನೆಂದರೆ, ತನ್ನ ಮಗಳಾದ ಪೂಜಾ ವ:20 ವರ್ಷ ಇವಳಿಗೆ ಆರಾಮ ಇಲ್ದದ ಕಾರಣ ತಮ್ಮ ಅಕ್ಕಳಾದ ದೇವಿಬಾಯಿ ಇವಳು ವಾಡಿಯಲ್ಲಿ ತನ್ನ  ಮನೆಯಲ್ಲಿ ಕಳೆದ 6 ತಿಂಗಳ ಹಿಂದೆ ಬಿಟ್ಟಿದ್ದು ಇರುತ್ತದೆ. ತನ್ನ ಮಗಳು ದಿನಾಂಕ:02/04/2016 ರಂದು 3.45 ಪಿಎಮ್ ಕ್ಕೆ ನನ್ನ ಅಕ್ಕಳ ಮನೆಯಾದ ಹನುಮಾನ ನಗರ ತಾಂಡದಲ್ಲಿ ಬ್ರೇಡ ತರಲು ಹೊದವಳು ಮನೆಗೆ ಬಂದಿರುವದಿಲ್ಲಾ ಅಂತಾ ನನ್ನ ಅಕ್ಕ ದೇವಿಬಾಯಿ ಇವಳು ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ನಮ್ಮ ಸಂಬಂದಿಕರ ಮನೆಗಳಿಗೆ ತಿರುಗಾಡಿದರೂ ಸಹ ನನ್ನ ಮಗಳು ಸಿಕ್ಕಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶಿವಪ್ಪಾ ತಂದೆ ಚಂದಪ್ಪಾ ದೊಡ್ಡಮನಿ  ಸಾಃ ಕೆ.ಇ.ಬಿ ಕ್ವಾಟರ್ಸ ಪಂಚಶೀಲ ನಗರ ಕಲಬುರಗಿ ಇವರು ಮಗ ಶರಣಬಸವ ತಂದೆ ಶಿವಪ್ಪಾ ದೊಡ್ಡಮನಿ ವಯಃ 15 ವರ್ಷ ಈತನು ಸೆಂಟ ಮೇರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ 8 ನೇ ತರಗತಿ ಓದುತ್ತಿದ್ದು ನಿನ್ನೆ ದಿನಾಂಕ 09/04/2016 ರಂದು 8 ನೇ ತರಗತಿಯ ಫಲಿತಾಂಶ ಇದ್ದರಿಂದ ನನ್ನ ಮಗ ಮಧ್ಯಾಹ್ನ 12:30 ಪಿ.ಎಮ್ ಕ್ಕೆ ಶಾಲೆಗೆ ಫಲಿತಾಂಶ ನೋಡಿಕೊಂಡು ಬರಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ರಾತ್ರಿಯಾದರು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಲ್ಲಿ ಹುಡುಕಾಡಿದರು ಮತ್ತು ಸಂಬಂಧಿಕರಲ್ಲಿ ವಿಚಾರಿಸಿದರು ಕೂಡಾ ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿದ್ದು ಅವನನ್ನು ಹುಡುಕಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಬಾಬು ತಂದೆ ಸಾಯಬಣ್ಣ ಹರಳಯ್ಯ,  ಮು:ಗೋಳಾ ಬಿ, ತಾ:ಆಳಂದ ಇವರ ಗ್ರಾಮದ ಸಿದ್ರಾಮ ತಂ ಮಹಾದೇವಪ್ಪಾ ಅಲ್ದೆನೂರ, ಇವರು ನಮ್ಮ ಜಾಗೆಯನ್ನು ಸುಮಾರು 2 ವರ್ಷಗಳಿಂದ 2000/- ರೂಪಾಯಿಗೆ ಬಡ್ಡಿಯಂತೆ ತಿಪ್ಪೆ ಜಾಗೆಯನ್ನು ಬಡ್ಡಿಯಲ್ಲಿ ಜಾಗೆಯನ್ನು ಹಾಕಿಕೊಂಡಿದ್ದು  ದಿನಾಂಕ: 07/04/20165 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಸಿದ್ರಾಮ ತಂದೆ ಮಹಾದೇವಪ್ಪಾ ಹಾಗೂ ಆತನ ಮಗನಾದ ಜಗಪ್ಪ ತಂ ಸಿದ್ರಾಮ ಇಬ್ಬರು ಕೂಡಿ ತಿಪ್ಪೆ ಜಾಗೆಯಲ್ಲಿ ಕಟ್ಟಿಗೆ ಹಾಗೂ ಇನ್ನೀತರ ಸಾಮಾನು ಹಾಕಲು ಬಂದಾಗ ನಾನು ಅವರಿಗೆ ಈ ಜಾಗವು ತಿಪ್ಪೆ ಜಾಗವಿದ್ದು ಇಲ್ಲಿ ಕಟ್ಟಿ ಹಾಗೂ ಇನ್ನೀತರ ಸಾಮಾನುಗಳನ್ನು ಏಕೆ ಹಾಕುತ್ತಿದ್ದಿರಿ ಅಂತಾ ವಿಚಾರಿಸಿದಾಗ, ಸಿದ್ರಾಮ ತಂ ಮಹಾದೇವಪ್ಪಾ ಈತನು ಈ ಜಾಗವು ನಾವು ಬಡ್ಡಿಯಿಂದ ಹಾಕಿಕೊಂಡಿದ್ದು ಇದನ್ನು ನೀನು ಯಾರು ಕೇಳುವನು ಎಂದು ಅಂತಾ ನಿಂದು ಸಮಗಾರ ಜಾತಿ ಬಹಳ ಸೊಕ್ಕು ಬಂದಿದೆ ನಿಮ್ದು ಇತ್ತಿತ್ತಾಲಾಗಿ ಊರಾಗ ಬಹಳ ಒದರಾಡುತ್ತಿರಿ ಅನ್ನುತ್ತಾ, ಒಮ್ಮೇಲೆ ನನ್ನ ಮೈಮೇಲೆ ಬಂದವನು ನನಗೆ ನೂಕಿಕೊಟ್ಟಿದ್ದು ನಾನು ಕೇಳಗೆ ಬಿದ್ದಿದ್ದು ಇದನ್ನು ನೋಡಿ ನನ್ನ ಹೆಂಡತಿಯಾದ ರತ್ನಬಾಯಿ ಇವಳು ಬಂದು ನನಗೆ ಎಬ್ಬಿಸಿದ್ದು ನಂತರ ನಾನು ಸಿದ್ರಾಮ ಈತನಿಗೆ ಏಕೆ ಹೀಗೆ ಮಾಡುತ್ತಿದ್ದಿರಿ ಅಂತಾ ಕೇಳಿದಾಗ, ಅಸ್ಟರಲ್ಲಿ ಆತನ ಮಕ್ಕಳಾದ ಜಗಪ್ಪ ತಂದೆ ಸಿದ್ರಾಮ ಹಾಗೂ ಮಹಾದೇವಪ್ಪ ತಂದೆ ಸಿದ್ರಾಮ ಇವರು ಬಂದು ಏಕೆ ನಮ್ಮ ತಂದೆಗುಡ ಜಗಳ ಮಾಡುತ್ತಿದ್ದಿ ಅನ್ನುತ್ತಾ ನನಗೆ ಜಗಪ್ಪ ಈತನು ನನಗೆ ಎದೆ ಮೇಲೆ ಕೈ ಹಿಡಿದು ಕೈಮುಷ್ಠಿಮಾಡಿ ಎದೆಯಮೇಲೆ ಮತ್ತು ಮುಖಕ್ಕೆ ಹೊಡೆದು ನೂಕಾಡಿ ಕಾಲಿನಿಂದ ಎದೆಯ ಮೇಲೆ ಒದ್ದು ಕೆಳಗೆ ನೂಕಿದನು. ನಂತರ ಮಹಾದೇವಪ್ಪ ಈತನು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ಹೊಡೆದಿದ್ದು ಇದಲ್ಲಾ ನೋಡಿ ನನ್ನ ಹೆಂಡಿತಿಯಾದ ರತ್ನಬಾಯಿ ಇವಳು ಚಿರುತ್ತಿದ್ದಾಗ ಕಸ್ತೂರಿಬಾಯಿ ಗಂ ಮಹಾದೇವಪ್ಪಾ ಮತ್ತು ಸೊನಿ ಗಂ ಜಗಪ್ಪ ಇವರು ಇಬ್ಬರು ಕೂಡಿ ನನ್ನ ಹೆಂಡಿತಿಗೆ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಹೊಡೆಬಡಿ ಮಾಡಿದ್ದು ಇರುತ್ತದೆ. ನಂತರ ಇವರೆಲ್ಲರು ಕೂಡಿ ನನಗೆ ಮತ್ತು ನನ್ನ ಹೆಂಡತಿಗೆ ನಿಮ್ಮ ಸಮಗಾರ ಜಾತಿ ಎಲ್ಲಿ ಇಡಬೇಕಾಗಿತ್ತಂದರ ಚಪ್ಪಲಿ ತೆಳಗ ಇಟ್ಟರ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆಬಡಿ ಮಾಡಿದ್ದು ಅಲ್ಲದೇ ನನ್ನ ಹೆಂಡತಿಗೆ ಜಗಪ್ಪ ಈತನು ಕಾಲಿನಿಂದ ಒದ್ದು ಜಗ್ಗಾಡಿದ್ದು ಇರುತ್ತದೆ. ಇದಲ್ಲಾ ನೋಡಿ ಅಲ್ಲೆ ಇದ್ದ ನಮ್ಮ ಗ್ರಾಮದ ರಾಜಪ್ಪ ತಂ ಚಂದ್ರಾಮಪ್ಪ ಗಣಮುಖೆ ಹಾಗೂ ಕಲ್ಲಪ್ಪ  ತಂ ಸಾತಲಿಂಗಪ್ಪ ಮತ್ತು ನನ್ನ ಮಗಳಾದ ಪುತಳಾಬಾಯಿ ಗಂ ಶ್ರೀಮಂತ ಹರಳಯ್ಯ ಇವರೆಲ್ಲ ನೋಡಿ ಈ ಜಗಳವನ್ನು ಬಿಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.