POLICE BHAVAN KALABURAGI

POLICE BHAVAN KALABURAGI

05 April 2016

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಶಿವಶಂಕರ ತಂದೆ ಶರಣಪ್ಪ ಪಾಸೋಡಿ ಪಾಟೀಲ ಸಾ: ಹಾವನೂರ ಹಾ;; ಶಾಂತಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ  ನಮ್ಮದು ಅವಿಭಕ್ತ ಕುಟುಂಬವಿದ್ದು ಒಟ್ಟು 6 ಜನ ಅಣ್ಣ ತಮ್ಮಂದಿರುತ್ತೇವೆ. 6 ಜನರಲ್ಲಿ ಬಸವರಾಜ ಮತ್ತು ಮಹಾಂತ ಇವರು ಮೃತಪಟ್ಟಿರುತ್ತಾರೆ. ಮಹಾಂತ ಇವರಿಗೆ ಪಾರ್ವತಿ ಮತ್ತು ಅನಿತಾ ಅಂತಾ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಅನಿತಾ ಇವಳು ಗೋದುತಾಯಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವಿದ್ಯಾಬ್ಯಾಸ ಮಾಡಿಕೊಂಡು ಶಾಂತಿ ನಗರದ ನಮ್ಮ ಮನೆಯಲ್ಲಿಯೇ ಇರುತ್ತಿದ್ದಳು. ನಮ್ಮ ಊರಿನ ಶಿವಯೋಗಪ್ಪ  ಕಲಶೆಟ್ಟಿ ಇತನ ಮಗನಾದ ಪ್ರಭಾಕರ ಇತನು ಯಾವಾಗಲು ನಮ್ಮ ಮನೆಯ ಮುಂದೆ ತಿರುಗಾಡುವುದು ನಮ್ಮ ಮನೆಯ ಸುತ್ತ ಮುತ್ತ ಅಡ್ಡಾಡುತ್ತಿದ್ದನು. ಈ ವಿಷಯ ಬಗ್ಗೆ ನಾವು ಎರಡು ಮೂರು ಸಲ ನಾನು ಪ್ರಭಾಕರ ಇತನಿಗೆ ನಮ್ಮ ಮನೆಯ ಮುಂದೆ ಏಕೆ ಅಡ್ಡಾಡುತ್ತಿಯಾ ಅಂತಾ ಕೇಳಿ ಬುದ್ದಿವಾದ ಹೇಳಿದ್ದು ಕೂಡ ಇರುತ್ತದೆ, ಪ್ರಭಾಕರ ಇತನು ನನ್ನ ಇನ್ನೊಬ್ಬ ತಮ್ಮನ ಮಕ್ಕಳಾದ ಶರಣಗೌಡ ವಿನೋದ ಮತ್ತು ವಿಶಾಲ ಇತನಿಗೆ ನೀನು ರಸ್ತೆ ಕಟ್ಟಿ ಆಳುತ್ತಿ ನಿಮಗೆ ನೋಡಿ ಕೊಳ್ಳುತ್ತೇನೆ ಅಂತಾ ಹೆದರಿಸಿದ್ದು ಕೂಡ ಇರುತ್ತದೆ.         ದಿನಾಂಕ 03.04.2016 ರಂದು  ತಮ್ಮ ಮಹಾಂತ  ಇತನ ಮಗಳಾದ ಅನಿತಾ ಇವಳು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ಹೊರಗಡೆ ಗೇಟ ಹತ್ತಿರ ನಿಂತುಕೊಂಡಾಗ ಪ್ರಭಾಕರ ಇತನು ಬಂದವನೇ ತನ್ನ ಯಾವುದೋ ಮೋಟಾರ ಸೈಕಲ ಮೇಲೆ ಅನಿತಾ ಇವಳಿಗೆ ಕೂಡಿಸಿಕೊಂಡು ಹೊರಟು ಹೋದನು.  ನಾನು ಕೂಡಲೇ ಅವನಿಗೆ  ಹಿಂಬಾಲಿಸಿದಾಗ ಅವನು  ನನ್ನಿಂದ ತಪ್ಪಿಸಿಕೊಂಡು ಓಡಿ ಹೋದನು  ಕಾರಣ ಅಪ್ರಾಪ್ತ ವಯಸ್ಸಿನ ನನ್ನ ತಮ್ಮನ ಮಗಳಾದ ಅನಿತಾ ಇವಳಿಗೆ ಅಪಹರಿಸಿಕೊಂಡು ಹೋದ ಪ್ರಭಾಕರ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ಮಲ್ಲಪ್ಪ ತಂದೆ ಕಲ್ಲಪ್ಪಾ ಮರಗುtiತಿ ಸಾ:ತೆಲಕೂರ ಇವರ ತಾಯಿ ಫೋನ ಮಾಡಿ ಊರಲ್ಲಿಯ ಜೀಪ ಮಾಡಿಕೊಂಡು ಬಾ ಕಾಮರೆಡ್ಡಿ ಆಸ್ಪತ್ರೆಗೆ ಹೋಗಿ ನಿಮ್ಮ ಅಣ್ಣ ನಾಗಪ್ಪ ಇತನಿಗೆ ಕರೆದುಕೊಂಡು  ಬರೋಣ ಅಂತ ತಿಳಿಸಿದ ಮೇರೆಗೆ ನಮ್ಮ ಗ್ರಾಮದ ಬಸವರಾಜ ಕೊಂಡಂಪಳ್ಳಿ ಇವರ ಜೀಪ ನಂ.ಎಂಎಚ-26-5146 ನೇದ್ದನ್ನು ಕಿರಾಯಿ ಮಾಡಿಕೊಂಡು ಫೀರ್ಯಾದಿ ಹಾಗೂ ಆತನ ಗೆಳೆಯನಾದ ಯಲ್ಲಾಲಿಂಗ ಹಾಗೂ ಜೀಪ ಚಾಲಕ ಶರಣಪ್ಪ ಆತನ ಗೆಳೆಯ ಅಂಬರೀಶ 4 ಜನರೂ ಕೂಡಿ 6 ಪಿಎಂಕ್ಕೆ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಬಂದು ನಂತರ 9 ಪಿಎಂದ ಸುಮಾರಿಗೆ ಫಿರ್ಯಾದಿಯ ಅಣ್ಣ ನಾಗಪ್ಪ ತಾಯಿ ಸರಸ್ವತಿ ಹಾಗೂ ಗೆಳೆಯ ಯಲ್ಲಾಲಿಂಗ ಹಾಗೂ ಅವರ ಸಂಗಡ ಬಂದಿದ ಅಂಬರೀಶ ಎಲ್ಲರೂ ಕೂಡಿ ಸದರಿ ಜೀಪನಲ್ಲಿ ಕುಳಿತುಕೊಂಡು ಹೊರಟಾಗ ಜೀಪನು ಶರಣಪ್ಪ ಇತನೂ ಚಲಾಯಿಸುತ್ತಿದ್ದು ಅಂದಾಜು 10 ಪಿಎಂದ ಸುಮಾರಿಗೆ ಮಲಕೂಡ ಹದ್ದಿಯ ಪೆಟ್ರೋಲ ಪಂಪ ಸ್ವಲ್ಪ ದಾಟಿದ ನಂತರ ಸದರಿ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಎದುರಿಗೆ ಹೋಗುತ್ತಿದ್ದ ಒಂದು ಟ್ರ್ಯಾಕ್ಟರಗೆ ಹಿಂದುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಪಡಿಸಿ ನಿಲ್ಲಿಸಿ ಆಗ ಫಿರ್ಯಾದಿದಾರನಾದ ಮಲ್ಲಪ್ಪ ಇತನಿಗೆ ಬಲಭುಜಕ್ಕೆ,ಎಡಗಾಲ ತೊಡೆಗೆ ಗುಪ್ತಗಾಯವಾಗಿದ್ದು ಅವರ ತಾಯಿ ಸರಸ್ವತಿ ಇವಳಿಗೆ ತಲೆಯ ಹಿಂದೆ ಭಾರಿ ರಕ್ತಗಾಯ ಮತ್ತು ಎಡಗಣ್ಣಿಗೆ,ಎಡಕಪ್ಪಾಳಕ್ಕೆ ಕಂದುಗಟ್ಟಿದ ತೆರಚಿದ ಗಾಯಗಳಾಗಿದ್ದು, ಅಣ್ಣ ನಾಗಪ್ಪನಿಗೆ ಬಲ ಮುಖಕ್ಕೆ,ಹಣೆಗೆ ತಲೆಯ ಮಧ್ಯ ಭಾರಿ ರಕ್ತಗಾಯವಾಗಿದ್ದು, ಯಲ್ಲಾಲಿಂಗ ಇತನಿಗೆ ಎಡಗಾಲಿನ ತೊಡೆಯ ಮೂಳೆ ಮುರಿದು ಭಾರಿರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು, ಅಂಬರೀಶನಿಗೆ ಎರಡು ಹಲ್ಲುಗಳು ಮುರಿದು ರಕ್ತಗಾಯವಾಗಿದ್ದು ಬಲ ತೊಡೆಗೆ ರಕ್ತಗಾಯವಾಗಿದ್ದು ನಂತರ ಟ್ರ್ಯಾಕ್ಟರನಲ್ಲಿ ಕುಳಿತ ಹೆಣ್ಣುಮಗಳಾದ ಲಕ್ಷ್ಮಿ ಸಾ:ಹೂಡಾ(ಬಿ) ಇವಳಿಗೆ ಬೆನ್ನಿಗೆ,ಟೊಂಕಕ್ಕೆ ಒಳಪೆಟ್ಟಾಗಿದ್ದು, ಹಾಗೂ ಕಾರಿನಲ್ಲಿ ಕುಳಿತ ಹೆಣ್ಣು ಮಗಳಾದ ಕಾಂಚನಾ ಗುತ್ತೆದಾರ ಇವಳಿಗೆ ಬಲ ತೊಡೆಗೆ ಎಡಪಾದಕ್ಕೆ ರಕ್ತಗಾಯವಾಗಿದ್ದು ನಂತರ ರಸ್ತೆಗೆ ಹೋಗಿ ಬರುವವರು ಜಿವಿಆರ ಅಂಬುಲೇನ್ಸ ಹಾಗೂ 108ಗೆ ಫೋನ ಮಾಡಿ ತಿಳಿಸಿದರಿಂದ ನಮ್ಮಗೆಲ್ಲರಿಗೂ ಅದರಲ್ಲಿ ಹಾಕಿಕೊಂಡು ಸರರ್ಕಾರಿ ಆಸ್ಪತ್ರೆ ಕಲಬುರಗಿಗೆ ಬಂದಾಗ ಮಾನ್ಯ ವೈದ್ಯಾಧಿಕಾರಿಗಳು ಫಿರ್ಯಾದಿದಾರನ ತಾಯಿ ಸರಸ್ವತಿ ಹಾಗೂ ಅಣ್ಣನಾದ ನಾಗಪ್ಪ ಇವರನ್ನು ಚಕ್ ಮಾಡಿ ನೋಡಲಾಗಿ ಸದರಿಯವರು ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದು  ಫಿರ್ಯಾದಿದಾರನಾದ ಮಲ್ಲಪ್ಪ ಇತನೂ ಹೋರ ರೋಗಿ ಅಂತ ಚಿಕಿತ್ಸೆ ಪಡೆದುಕೊಂಡಿದ್ದು ಅಂಬರೀಶ,ಯಲ್ಲಾಲಿಂಗ ಮತ್ತು ಲಕ್ಷ್ಮಿ ಸದರಿಯವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಯಲ್ಲಾಲಿಂಗ ಹೆಚ್ಚಿನ ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆಗೆ ಕಳಿಸಿದ್ದು ಕಾಂಚನಾ ಎಂಬುವವರಿ ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ. ಸದರಿ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ ಎದುರಿಗೆ ಹೋಗುತ್ತಿದ್ದ ಒಂದು ಟ್ರ್ಯಾಕ್ಟರ ನಂ ಕೆಎ-32 ಟಿಎ-7401 ನೇದ್ದಕ್ಕೆ ಹಿಂದುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರ ನಂ.ಕೆಎ-32 ಎನ-4757 ನೇದ್ದಕ್ಕೆ  ಡಿಕ್ಕಿ ಪಡಿಸಿ ಭಾರಿ ರಕ್ತಗಾಯ,ಗುಪ್ತಗಾಯ,ಸಾದಾಗಾಯ ಪಡಿಸಿ ತನ್ನ ಜೀಪನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 03.04.2016 ರಂದು ಸಾಯಂಕಾಲ 06:30 ಗಂಟೆಯ ಸುಮಾರಿಗೆ ಜೇವರಗಿಯ ಕಡೆಗೆ ಬರುವ ಕುರಿತು ಬಿ.ಎನ್. ಪಾಟೀಲ್ ಇವರ ದಾಲ್‌ ಮಿಲ್‌ ಎದುರುಗಡೆ ಜೇವರಗಿ ಶಹಾಪುರ ರಸ್ತೆ ಮೆಲೆ ಕಿರಣ ಈತನು ನಡೆಸುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ಈಕೆ1767 ನೇದ್ದರ ಮೇಲೆ  ನಾನು ಮತ್ತು ಈಶ್ವರ ಮೂವರು ಕುಳಿತುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಜೇವರಗಿ ಕಡೆಯಿಂದ ಒಂದು ಮಿನಿ ಲಾರಿ ನಂ ಕೆ.ಎ37ಎ3370 ನೇದ್ದರ ಚಾಲಕನ ತನ್ನ ಮಿನಿ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಾವು ಕುಳಿತುಕೊಂಡುಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಎದುರಾಗಿ ಡಿಕ್ಕಿ ಪಡಿಸಿದ್ದರಿಂದ ನಮ್ಮೆಲ್ಲರಿಗೆ ಭಾರಿ ಗಾಯಗಳಾಗಿದ್ದು ಅಪಘಾತದ ನಂತರ ಸದರಿ ಮಿನಿ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ಗೌತಮ ತಮದೆ ಲೋಕೇಶ ಕೊಡಚಿ ಸಾ : ಶಾಸ್ತ್ರಿ ಚೌಕ್ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 April 2016

Kalaburagi District Reported Crimes

ಸಿಡಿಲು ಬಡಿದು ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ: 03/04/2016 ರಂದು ಸಾಯಂಕಾಲ 4:15 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದ  ಹೊಲ ಸರ್ವೇ ನಂ 3 ರಲ್ಲಿ ಬೇವಿನ ಗಿಡದ ಕೆಳೆಗೆ ಹಾಕಿರುವ ಉಳ್ಳಾಗಡ್ಡಿಯ ಮೇಲೆ ತಾಡಪತ್ರಿ ಹಾಕಲು ಹೋದಾಗ ಅದೇ ವೇಳೆಗೆ ಒಮ್ಮೇಲೆ ಅಕಾಲಿಕವಾಗಿ ಮಳೇ ಗಾಳಿ  ಗುಡುಗು ಸಿಡಿಲು ಬಂದು. ಅಲ್ಲಿ ಕೆಲಸ ಮಾಡುತ್ತಿದ್ದ ಸದರಿ ಮೃತ ಭೀಮ್ಮಪ್ಪಾ ತಂದೆ ಶರಣಪ್ಪ ನಾಯ್ಕೋಡಿ ಇವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶರಣಪ್ಪಾ ತಂದೆ ಮರೇಣ್ಣಾ ನಾಯ್ಕೋಡಿ ಸಾ:ಕದ್ದರಗಿ ತಾ:ಚಿತ್ತಾಪೂರ ಹಾ::ಸೀತನೂರ ತಾ: ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 22.03.2016 ರಂದು 10:30 ಗಂಟೆಯಿಂದ 16:00 ಗಂಟೆಯ ಮಧ್ಯದ ಅವಧಿಯಲ್ಲಿ 1) ಸೋಮಲಿಂಗಪ್ಪ ತಂದೆ ಬಸವಂತರಾಯ ಹೇರೂರ 2) ಹುಲಕಂಠರಾಯ ತಂದೆ ಬಸವಂತರಾಯ ಹೇರೂರ 3) ಚಂದ್ರಾಮಪ್ಪ ತಂದೆ ರಾವುತಪ್ಪ ಚೀರಲದಿನ್ನಿ ಸಾ|| ಮೂರು ಜನರು ಮುರಗಾನುರ 4) ಪ್ರೇಮನಗೌಡ ತಂದೆ ಕುಪ್ಪನಗೌಡ ಸಾ|| ನೆಲೋಗಿ  ಎಲ್ಲರು ಕೂಡಿಕೊಂಡು ಜೇವರಗಿ ಪಟ್ಟಣದ ಉಪ ನೊಂದವಣಾಧೀಕಾರಿ ಕಾರ್ಯಾಲಯದಲ್ಲಿ ವಂಚನೆಯಿಂದ ಮತ್ತು ನಂಬಿಕೆ ದ್ರೋಹ ಮಾಡಿ ಬೇರೆಯವರಂತೆ ನಟನೆ ಮಾಡಿ ನನಗೆ ಮೋಸ ಮಾಡಿ ನನ್ನ ಹೆಸರಿನಲ್ಲಿ ಇದ್ದ ಮುರಗಾನೂರ ಸೀಮಾಂತರದ ಹೊಲದ ಸರ್ವೇ ನಂ 3/4 ನೇದ್ದರಲ್ಲಿನ 3 ಎಕರೆ 3 ಗುಂಟೆ ಜಮಿನನ್ನು ತಮ್ಮ ಹೆಸರಿಗೆ ನೊಂದಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತಾ ಶ್ರೀ ಕಾಮಣ್ಣ ತಂದೆ ಸಾಯಬಣ್ಣ ಮಾದರ್ ಸಾ : ಮುರಗಾನೂರ ತಾ: ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ ಪ್ರಭುಲಿಂಗ  ತಂದೆ ಮಲ್ಲಪ್ಪ ದೊಡ್ಡಮನಿ ಸಾ:ಜಂಬಗಾ(ಜೆ) ತಾ: ಆಳಂದ ರವರ ಚಿಕ್ಕ ಮಗಳಾದ  ಕಾಂಚನಾ ವಯ: 19 ವರ್ಷ ಇವಳು 10ನೇ ತರಗತಿಯಲ್ಲಿ ಅನುತಿರ್ಣ ವಾಗಿದ್ದರಿಂದ ಶಾಲೆ ಬಿಡಿಸಿ ನಮ್ಮೂಂದಿಗೆ ಕೂಲಿ ಕೆಲಸ ಮಾಡುತ್ತಾ ಬಂದಿದ್ದು ದಿನಾಂಕ:30/03/2016 ರಂದು  ಬುಧುವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಮಗಳು ಕಾಂಚನಾ ಇವಳು ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ನನ್ನ ಹೆಂಡತಿ ನಂದಾಬಾಯಿಗೆ ತಿಳಿಸಿ ಹೋದಳು  ಆಕೆಯ ಹೋಗಿ 2 ಗಂಟೆ ಆದರೂ ಮನೆಗೆ ಬರದಿದ್ದರಿಂದ ನಾನು ನಮ್ಮ ಊರಲ್ಲಿ ಆಕೆಯ ಗೆಳತಿಯ ಮನೆಗೆ ಹೋಗಿ ವಿಚಾರಿಸಿದ್ದು ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನಾನು ಹಾಗೂ ನನ್ನ ಹೆಂಡತಿ ಕೂಡಿ ಸಂಬಂಧಿಕರಿಗೆ ಪೋನ ಮುಖಾಂತರ ವಿಚಾರಿಸಿದ್ದು ಬಂದಿರುವುದಿಲ್ಲಾ. ಅಂತಾ ತಿಳಿಸಿರುತ್ತಾರೆ. ನಾವು ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 April 2016

Kalaburagi District Reported Crimes

ಕೊಲೆ ಪ್ರಕರಣ :
ಕಾಳಗಿ ಠಾಣೆ : ಶ್ರೀ ಶಿವಾನಂದ ತಂದೆ ಶಾಮಯ್ಯ ಗುತ್ತೆದಾರ ಸಾ:ಕುಡ್ಡಳ್ಳಿ ತಾ:ಚಿಂಚೋಳಿ ರವರ ತಂಗಿಯಾದ ಜ್ಯೋತಿ ಇವಳಿಗೆ ಈಗ ಸುಮಾರು 2 ವರ್ಷಗಳ ಹಿಂದೆ ತಾವರಗೇರಾ ಗ್ರಾಮದ ಆರೋಪಿತನಾದ ಶಿವಕುಮಾರ ತಂದೆ ಅಂಬಾರಾಯ ಗುತ್ತೇದಾರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇವಳಿಗೆ ವರ್ಷಾ ಎಂಬುವವಳು 1 ವರ್ಷದ ಮಗು ವಿದ್ದು ಫಿರ್ಯಾದಿಯ ತಂಗಿ ಇವಳು ಮದುವೆಯಾದ ನಂತರ 5-6 ತಿಂಗಳ ಚೆನ್ನಾಗಿಯ ತನ್ನ ಅತ್ತೆ ಗಂಡನೊಂದಿಗೆ ವಾಸವಾಗಿದ್ದು ನಂತರ ಫಿರ್ಯಾದಿಯ ಮಾವ ಇತನು ಫಿರ್ಯಾದಿಯ ತಂಗಿಯ ಶೀಲದ ಶಂಕೆ ಕುರಿತು ಅನುಮಾನ ಮಾಡಿ ಫಿರ್ಯಾದಿಯ ತಂಗಿಯ ಜೋತೆಯಲ್ಲಿ ನೀನು ಚೆನ್ನಾಗಿಲ್ಲ ನಿನಗೆ ಒಂದಲ್ಲಾ ಒಂದು ದಿವಸ ನಿನ್ನ ಕತೆ ಮುಗಿಸಿ ಬೀಡುತ್ತೆನೆ ನಿನ್ನ ನಡತೆ ಸರಿ ಇಲ್ಲ ನೀನು ನನಗೆ ಚೆನ್ನಾಗಿ ನೋಡಿಕೊಂಡಿರುವುದಿಲ್ಲ ಅಂತಾ ಕಿರಕುಳ ಕೊಟ್ಟು ತಂಟೆ ತಕರಾರು ಮಾಡುತ್ತಿದ್ದಾ, ಈ ವಿಷಯದ ಬಗ್ಗೆ ನನ್ನ ತಂಗಿ  ಹಾಗೂ ನನ್ನ ತಮ್ಮ ನನ್ನ ತಂದೆ ತಾಯಿ ನಾವೆಲ್ಲಾರೂ ಅವಳ ಹತ್ತಿರ ಊರಿಗೆ ಹೋದಾಗ ಹೇಳುತ್ತಿದ್ದಳು, ನಾವು ನಮ್ಮ ತಂಗಿಗೆ ಅಲ್ಲಿಂದ ನಮ್ಮ ಊರಿಗೆ ಕರೆದುಕೊಂಡು ಬಂದೇವು, ನಂತರ 1 ತಿಂಗಳವಾದ ನಂತರ ನನ್ನ ತಂಗಿಯ ಗಂಡ ನಮ್ಮ ಊರಿಗೆ ಬಂದು ನಿಮ್ಮ ತಂಗಿಗೆ ಸರಿಯಾಗಿ ನೋಡಿಕೊಳ್ಳುತ್ತೆನೆ ನನ್ನ ಜೋತೆಗೆ ಕಳಿಸಿ ಕೊಡಿ ಅಂತಾ ಹೇಳಿದ ಮೇರೆಗೆ ನಾವು ಅದಕ್ಕೆ ಒಪ್ಪಿ ನನ್ನ ತಂಗಿಗೆ ಅವರ ಜೋತೆ ಕಳಿಸಿಕೊಟ್ಟೆವು, ನಂತರ ಕೆಲವು ದಿವಸಗಳ ನಂತರ ಹಾಗೇ ಕಿರಕುಳ ಕೊಡುತ್ತಿರುವದರಿಂದ ನಾವು ನನ್ನ ತಂಗಿಗೆ ತಾಳ್ಮೆ ಹೇಳಿ ಹಾಗೆ ಜೀವನ ಸಾಗಿಸು ಅಂತಾ ಇಂದಲ್ಲಾ ನಾಳೆ ನಿನ್ನ ಗಂಡ ಸರಿ ದಾರಿಗೆ ಬರುತ್ತಾನೆ ಅಂತಾ ತಾಳ್ಮೆ ಹೇಳಿ ಬರುತ್ತಿದ್ದೆವೆ, ಅದೇ ರೀತಿಯಾಗಿ ಪುನಃ ನನ್ನ ತಂಗಿಯ ಗಂಡ ನನ್ನ ತಂಗಿಯ ಜೋತೆಯಲ್ಲಿ ಕಿರಕುಳ ಕೊಡುವುದು ಶುರು ಮಾಡಿದ್ದರಿಂದ ನನ್ನ ತಂಗಿ ನಮಗೆ ಫೋನ ಮಾಡಿ ತಾವು ಊರಿಗೆ ಬಂದು ನನ್ನ ಗಂಡನಿಗೆ ಬುದ್ದಿವಾದ ಹೇಳಿ ಹೋಗಿ ಅಂತಾ ತಿಳಿಸಿದ ಮೇರೆಗೆ ಈಗ ಸುಮಾರು 3 ತಿಂಗಳ ಹಿಂದೆ ನಾನು ಮತ್ತು ನನ್ನ ತಮ್ಮ, ನನ್ನ ತಾಯಿ ಕೂಡಿಕೊಂಡು ತಾವರಗೇರಾ ಗ್ರಾಮಕ್ಕೆ ಹೋಗಿ ನನ್ನ ತಂಗಿಯ ಗಂಡನಿಗೆ ಈ ರೀತಿ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೊಡುವುದು ಸರಿ ಇಲ್ಲಾ ಸಂಸಾರ ಕೇಟ್ಟು ಹೋಗುತ್ತಿದೆ ಅಂತಾ ಬುದ್ದಿವಾದ ಹೇಳಿ ಹೊರಟು ಹೋಗಿದ್ದೇವೆ, ದಿನಾಂಕ 02/04/2016 ರಂದು 07-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಮ್ಮ ತಾಯಿ ಮನೆಯಲ್ಲಿದ್ದಾಗ ಸೂಗೂರ ಗ್ರಾಮದ ನಮ್ಮ ಮಾವ ಕತ್ತಲಯ್ಯಾ ಇವರು ಫೋನ ಮಾಡಿ ನಮ್ಮ ಗ್ರಾಮದ ನಾಗಯ್ಯ ತಂದೆ ಮಲ್ಲಯ್ಯ ಗುತ್ತೇದಾರ ಇವರು ಮನೆಗೆ ಬಂದು ತಿಳಿಸಿದೇನೆಂದೆರೆ ಸದರಿಯವನು ಖಾಸಗಿ ಕೆಲಸದ ನಿಮಿತ್ಯ ಮೋಟರ ಸೈಕಲ ಮೇಲೆ ಚಿಂಚೋಳಿ (ಹೆಚ್) ಗ್ರಾಮಕ್ಕೆ ಹೋಗಿ ಮರಳಿ ಸಾಯಂಕಾಲ 06-30 ಪಿ.ಎಂಕ್ಕೆ ಊರಿಗೆ ಬರುವಾಗ ಬಸಣ್ಣ ಮಾಸ್ತರ ಇವರ ಹೊಲದ ರೋಡಿನ ಪಕ್ಕದ ತೆಗ್ಗಿನಲ್ಲಿ ಒಂದು ಹೆಣ್ಣುಮಗಳಿಗೆ ಚಾಕುವಿನಿಂದ ಹೊಡೆದು ಕೊಲೆ ಮಾಡಿ ನನ್ನನ್ನು ನೋಡಿ ಆ ವ್ಯಕ್ತಿ ಮೋಟರ ಸೈಕಲ ಸಮೇತ ಓಡಿ ಹೋಗಿದ್ದು ನಾನು ಸಮೀಪ ಹೋಗಿ ನೋಡಲಾಗಿ ಸದರಿ ಹೆಣ್ಣುಮಗಳು ನಮ್ಮ ಗ್ರಾಮದ ಕತ್ತಲಯ್ಯಾ ಇತನ ಸೊಸೆ ಇದ್ದಿದ್ದನು ನೋಡಿ ಗುರುತಿಸಿ ಮನೆಗೆ ಬಂದು ನನಗೆ ವಿಷಯ ತಿಳಿಸಿರುತ್ತಾನೆ, ನಿನ್ನ ತಂಗಿ ಜ್ಯೋತಿ ಇವಳಿಗೆ ಅವಳ ಗಂಡ ತಾವರಗೇರಾ ಗ್ರಾಮದಿಂದ ಮೋಟರ ಸೈಕಲ ಮೇಲೆ ಕುಡಿಸಿಕೊಂಡು ತವರೂರಿಗೆ ಬರುತ್ತಿರುವಾಗ ಸೂಗೂರ ಹಾಗೂ ಚಿಂಚೋಳಿ (ಹೆಚ್) ಮಾರ್ಗ ಮಧ್ಯದ ರೋಡಿನ ಪಕ್ಕದಲ್ಲಿದ್ದ ಸುಗೂರ ಸೀಮಾಂತರದ ಬಸಣಪ್ಪ ಮಾಸ್ತರ ಇವರ ಹೊಲದ ರೋಡಿನ ತೆಗ್ಗಿನಲ್ಲಿ ಚಾಕುವಿನಿಂದ ಹೊಡೆದು ಕೊಲೆ ಮಾಡಿ ಬೀಸಾಕಿ ಮೋಟರ ಸೈಕಲ ಸಮೇತ ಹೋಗಿರಬಹುದು ತಾವು ಬೇಗ ಬನ್ನಿ ಅಂತಾ ತಿಳಿಸಿದಾಗ ಆಗ ನಾವು ಗಾಬರಿಗೊಂಡು ನಾನು ಮತ್ತು ನನ್ನ ತಾಯಿ ಶಕುಂತಲಾ, ತಮ್ಮ ಆನಂದ, ತಂದೆ ಶಾಮಯ್ಯಾ ಹಾಗೂ ನಮ್ಮ ಸಮಾಜದ ಅಶೋಕ ಗುತ್ತೇದಾರ ನಾವೆಲ್ಲಾರು ಒಂದು ಖಾಸಗಿ ವಾಹನ ಮಾಡಿಕೊಂಡು ಸುಗೂರ (ಕೆ) ಗ್ರಾಮಕ್ಕೆ ಬಂದು ನನ್ನ ಅಕ್ಕ ಮಾಹಾನಂದ ಹಾಗೂ ಮಾವ ಕತ್ತಲಯ್ಯಾ ಹಾಗೂ ಸುಗೂರ ಗ್ರಾಮದ ನಾಗಯ್ಯ ತಂದೆ ಮಲ್ಲಯ್ಯ, ರವಿ ತಂದೆ ಶೀವಯ್ಯಾ, ಸಂಜು ತಂದೆ ಕಾಳು ರಾಠೋಡ, ಶಿವಪ್ಪ ತಂದೆ ಸಿದ್ದಣ್ಣ ಕುಂಬಾರ ಎಲ್ಲಾರೂ ಕೂಡಿ ರಾತ್ರಿ 09-00 ಪಿ.ಎಂ ಸುಮಾರಿಗೆ ಘಟನಾ ಸ್ಥಳಕ್ಕೆ ಹೋಗಿ ಬ್ಯಾಟ್ರಿ ಹಾಕಿ ನನ್ನ ತಂಗಿಗೆ ನೋಡಲಾಗಿ ನನ್ನ ತಂಗಿ ರೋಡಿನ ಎಡಭಾಗದ ತೆಗ್ಗಿನಲ್ಲಿ ಬಲ ಮಗ್ಗಲಾಗಿ ಸತ್ತು ಬಿದ್ದಿದ್ದು ಅವಳಿಗೆ ಹಣೆ ಮೇಲೆ, ಎರಡು ಕಣ್ಣಿನ ಹುಬ್ಬಿನ ಮೇಲೆ ಚಾಕುವಿನಿಂದ ಹೊಡೆದ ಭಾರಿ ರಕ್ತಗಾಯವಾಗಿದ್ದು ಮತ್ತು ಮೂಗಿನ ಮೇಲೆ ಎಡಪಕ್ಕದಲ್ಲಿ ಭಾರಿ ರಕ್ತಗಾಯವಾಗಿದ್ದು ನಂತರ ಹೊಟ್ಟೆಯ ಬಲ ಎಡ ಭಾಗಕ್ಕೆ ಚಾಕುವಿನಿಂದ ತೀವಿದ್ದು ಭಾರಿ ರಕ್ತಗಾಯವಾಗಿದ್ದು ಎರಡು ತೊಡೆಯ ಮೇಲೆ ಚಾಕುವಿನಿಂದ ಚುಚ್ಚಿ ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನೆಲೋಗಿ ಠಾಣೆ : ದಿನಾಂಕ 01.04.2016 ರಂದು ರಾತ್ರಿ 11-00 ಗಂಟೆಯಿಂದ 02.04.2016 ರ ಬೆಳಿಗ್ಗೆ 01-30 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬೆಡ್ ರೂಮ ನೂಗ್ಗಿ ಬೆಡ್ ರೂಮಿನ ಅಲಮಾರಿಯಲ್ಲಿ ಇಟ್ಟಿದ್ದ ಒಂದುವರೆ ತೊಲೆ ಬಂಗಾರದ ಉಂಗುರ ಅ;ಕಿ: 22,000=00 ರೂಪಾಯಿ, ಹಾಗೂ ಮನೆಯ ತೆಲೆ ದೂಂಬಿನಲ್ಲಿ ಇಟ್ಟಿದ್ದ ಎರಡು ಮೊಬೈಲಗಳು ಅ:ಕಿ: 2900=00 ರೂಪಾಯಿ ಹೀಗೆ ಒಟ್ಟು 24,900=00 ರೂಪಾಯಿ ಕಿಮ್ಮತ್ತಿನವುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀಮಂತ ತಂದೆ ತಿಪ್ಪಣ್ಣಾ ಜಿಡಗಿ ಸಾ : ಮಂದೇವಾಲ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.