POLICE BHAVAN KALABURAGI

POLICE BHAVAN KALABURAGI

05 July 2015

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಂಜುನಾಥ ತಂದೆ ಮಹಾದೇವ ಮಾಯನ್ನವರ ಉ;ಕೆ.ಎಸ್.ಆರ್.ಟಿ.ಸಿ. ಡಿಪೂ ನಂ.2 ನೆದ್ದರಲ್ಲಿ ಮ್ಯಾನೇಜರ ಸಾ; ಮನೆ ನಂ.ಎಂ.ಐ.ಜಿ.-19 ರಾಜೀವ ನಗರ ಚಿಕ್ಕೋಡಿ ಜಿ;ಬೆಳಗಾಂವ ಹಾವ; ಕ್ವಾರಟರ್ಸ ನಂ. 6 ಕೆ.ಎಸ್.ಆರ್.ಟಿ.ಸಿ.ಕ ಆಫೀಸರ ಕ್ವಾಟರ್ಸ ಕಲಬುರಗಿ ಇವರು ದಿನಾಂಕ.4-7-2015 ರಂದು ಮುಂಜಾನೆ ನನ್ನ ಗೆಳೆಯರಾದ ಸಂಕೇತ ತಂದೆ ಶಶೀಕಾಂತ ಚಿಕ್ಕಡೆ  ಸಾ;ಚಿಕ್ಕೋಡಿ , ಮತ್ತು ಆಶಿಷ ತಂದೆ ಪ್ರಕಾಶ ಕಟ್ಟಿ ಸಾ;  ಮಿಲಿಟರಿ ಕ್ಯಾಂಪ ಹತ್ತಿರ ಬೆಳಗಾಂವ ಇವರು ನನ್ನನ್ನು ಬೇಟಿಯಾಗಲು ಚಿಕ್ಕೊಡಿಯಿಂದ ಕಲಬುರಗಿಗೆ ಬಂದಿದ್ದು ನಾನು ಮತ್ತು ಸದರಿ ನನ್ನ ಇಬ್ಬರ ಗೆಳೆಯರು ಕೂಡಿಕೊಂಡು ಸಂಕೇತ ಚಿಕ್ಕಡೆ ಇತನು ತೆಗೆದುಕೊಂಡು ಬಂದ ತನ್ನ ಟೋಯೋಟೋ ಕರೋಲಾ ಕಾರ ನಂ. ಎಂ.ಹೆಚ.12 ಸಿ.ಡಿ-8252 ನೆದ್ದರಲ್ಲಿ ಮೂರು ಜನರು ಹೊರಗಡೆ ಊಟ ಮಾಡಿಬರಲು ಕಲಬುರಗಿ ಆಳಂದ ರೋಡಿನ ಕೆರಿಬೋಸಗಾ ಕ್ರಾಸ ಹತ್ತಿರ ಇರುವ ದಾಬಕ್ಕೆ ಹೋಗಿದ್ದೇವು ರಾತ್ರಿ 11-00 ಗಂಟೆಯ ಸುಮಾರಿಗೆ ದಾಬಾದಲ್ಲಿ ಊಟ ಮಾಡಿ ಮರಳಿ ಕಲಬುರಗಿಗೆ ಬರುವಾಗ ಸದರಿ ಕಾರನ್ನು ಸಂಕೇತ ಚಿಕ್ಕಡೆ ನಡೆಯಿಸುತ್ತಿದ್ದನು ಅವನ ಪಕ್ಕದ ಶೀಟನಲ್ಲಿ ನಾನು ಕುಳಿತಿದ್ದೆ.  ನನ್ನ ಹಿಂದೆ ಆಶೀಷ ಕಟ್ಟಿ ಇತನು ಕುಳಿತಿದ್ದನು ದಾಬಾದಿಂದ ಹೊರಟು ವೇಗವಾಗಿ ಹೋಗುತ್ತಿರುವಾಗ ಕೆರಿಬೋಸಗಾ ಕ್ರಾಸ ಹತ್ತಿರ ಎದರುಗಡೆಯಿಂದ ವಾಹನಗಳು ಬರುತ್ತಿದ್ದು ಅವುಗಳ ಬೆಳಕಿನಲ್ಲಿ ಕೆರಿಬೋಸಗಾ ಕ್ರಾಸ ಕರ್ವಿನಲ್ಲಿರುವ ಜಂಪಗಳನ್ನು ಕಾಣದೆ ಇದ್ದಾಗ ಕಾರನ ವೇಗ ಕಂಟ್ರೋಲ ಮಾಡದಕ್ಕೆ ಆಗದೆ ರೋಡ ಜಂಪಗಳಲ್ಲಿ ನಾವು ಕುಳಿತ ಕಾರು ಪಲ್ಟಿಯಾಗಿರುತ್ತದೆ. ಇದರಿಂದ ನನಗೆ ಬಲಗೈ ಅಂಗೈಗೆ ರಕ್ತಗಾಯ , ಎಡಗೈ ಮೋಳಕೈಗೆ ತರಚಿದಗಾಯ , ಬಲಗಾಲು ಮದ್ಯದ ಬೆರಳಿಗೆ ರಕ್ತಗಾಯ , ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಹಾಗೂ ನನ್ನ ಹಿಂದೆ ಕುಳಿತಿದ್ದ ಆಶೀಷ ಕಟ್ಟಿ ಇತನಿಗೆ ಬಲಗೈ ಮುಂಗೈ ಹತ್ತಿರ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ.  ಮತ್ತು ನಾವು ಕುಳತ ಕಾರು ನಡೆಯಿಸುತ್ತಿದ್ದ ನನ್ನ ಗೆಳೆಯ ಸಂಕೇತ ಚಿಕ್ಕಡೆ ಇತನಿಗೆ  ತಲೆಯ ಬಲಭಾಗದಲ್ಲಿ,ತಲೆಯ ಮೇಲಿನಬಾಗದಲ್ಲಿ ಮುಖಕ್ಕೆ ಭಾರಿಗಾಯವಾಗಿ ತಲೆಯಿಂದ ಮೂಗಿನಿಂದ ,ಬಾಯಿಯಿಂದ ,ಕಿವಿಯಿಂದ ರಕ್ತಸ್ರಾವವಾಗುತ್ತಿತ್ತು. ಆಗ ನಾವು ಚಿರಾಡುವಾಗ ರೋಡಿಗೆ ಹೋಗುತ್ತಿದ್ದ ಒಬ್ಬ ವ್ಯಕ್ತಿ ಬಂದಿದ್ದು ಹೆಸರು ಕೇಳಿಗೊತ್ತಾದ  ರವಿಕುಮಾರ ತಂದೆ ಲಕ್ಷ್ಮಣರಾವ ಕಟವಟಿ ಸಾ;ಪುಟಾಣಿ ಗಲ್ಲಿ ಕಲಬುರಗಿ  ಇತನು ಬಂದಿದ್ದು ಇತನು ಮತ್ತು ನಾನು ಹಾಗೂ ಆಶಿಷ ಕಟ್ಟಿ ಕೂಡಿಕೊಂಡು ಒಂದು ಆಟೋರಿಕ್ಷಾದಲ್ಲಿ ಸಂಕೇತ ಚಿಕ್ಕಡೆ ಇತನಿಗೆ ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯಾದಿಕಾರಿಗಳಿಗೆ ತೋರಿಸಲು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀ. ರಾಜಶೇಖರ ತಂದೆ ಶಿವಪ್ಪ ಜಟ್ಟೂರ ಸಾ:ನಿಡಗುಂದಾ ರವರು ದಿನಾಂಕ :02-07-2015 ರಂದು ಕಾಳಗಿ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮವಿದ್ದು ಅಲ್ಲಿಗೆ ಹೋಗಿ ಸಂಗೀತ ಮುಗಿಸಿಕೊಂಡು ಟೆಂಗಳಿ ಗ್ರಾಮದಲ್ಲಿ ವಸತಿ ಮಾಡಿ ದಿ:03-07-2015 ರಂದು ಕಲಬುರಗಿಗೆ ಹೋಗಿ ಮರಳಿ ನಿಡಗುಂದಾ ಗ್ರಾಮಕ್ಕೆ ಹೋಗಬೇಕೆಂದು ರಾತ್ರಿ 08-00 ಗುಲಬರ್ಗಾ ಬಿಟ್ಟು ಸೇಡಂಕ್ಕೆ ರಾತ್ರಿ 10-00 ಗಂಟೆಗೆ ಬಂದಾಗ  ಹಸಿವು ಆಗಿದ್ದರಿಂದ ಅಯೊಧ್ಯಾ ಹೋಟೆಲ್ ಗೆ ಹೋಗಿ ಊಟ ಮಾಡಿಕೊಂಡು ಕೈತೊಳೆದುಕೊಳ್ಳಲು ಹ್ಯಾಂಡ ವಾಶಗೆ ಹೋದಾಗ ಅಲ್ಲಿ ಸೇಡಂ ಪಟ್ಟಣದ ತನಗೆ ಪರಿಚಯ ಇರುವ ಮಲ್ಲು ಡೀಲ್  ಇವರು ಕೈ ತೊಳೆದುಕೊಳ್ಳುತ್ತಿದ್ದರು. ಅವರು ಕೈ ತೊಳೆದುಕೊಂಡ ಮೇಲೆ ನಳ ಹಾಗೆ ಚಾಲು ಇರಲಿ ಅಂತ ಹೇಳಿದ್ದಕ್ಕೆ ಅವರುಗಳು ತನಗೆ ಯಾವುದೋ ಕಾರಣಕ್ಕೆ ನನ್ನ ಮೇಲೆ ಸಿಟ್ಟಿಗೆ ಬಂದು ಮಾದಿಗ ಸೂಳೆಮಗನೇ ನಿನ್ನ ಕೈಗೆ ಏನಾಗಿದೆ ಅಂತ ಬೈಯ ಹತ್ತಿದ್ದನ್ನು, ಅದಕ್ಕೆ ನಾನು ನಿಮಗೆ ಏನು ಹೇಳಿದ್ದೀನಿ ಅಂತ ಕೇಳಿದರೆ, ಮಲ್ಲು ತನ್ನ ಕೈಯಲ್ಲಿದ್ದ ಸ್ಟೀಲ್ ಗ್ಲಾಸಿನಿಂದ ನನ್ನ ಎಡಭಾಗದ ತಲೆಗೆ ಹೊಡೆದನು, ಸತೀಶ ಖಾನವಳಿ ಇತನು ಕೈ ಮುಷ್ಠಿ ಮಾಡಿ ಎಡಗಣ್ಣಿನ ಮೇಲೆ ಹಾಗೂ ಬಲಮಗ್ಗಲಿಗೆ ಹೊಡೆದು ಹೊಟೆಲ್ ನಿಂದ ನನಗೆ ಹೊರಗೆ ಎಳೆದು ತಂದಿದ್ದು ಅಲ್ಲಿ ಅವರ ಗೆಳೆಯರಾದ, ರವಿ ಗುಡ್ಡದ್, ನಾಗು ಗುಡ್ಡದ್, ಉಮೇಶ ಬಡಿಗೇರ ಇವರು ಇದ್ದು ಇವರೂ ಸಾಹ ಅವರೊಂದಿಗೆ ಬಂದು ಏನಂತನ ಮಾದಿಗ ಸೂಳೆ ಮಗನೇ ಅಂತ ಜಾತಿ ಎತ್ತಿ ಬೈದು ಸಿಕ್ಕಾ ಪಟ್ಟೆ ಎಲ್ಲರೂ ಕೂಡಿ ಬೈದು ಕೈಯಿಂದ ಮೈಮೇಲೆ ಹೊಡೆದು ಗಾಯಗೊಳೀಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 July 2015

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 03-07-2015 ರಂದು ಗುಡ್ಡೇವಾಡಿ ಗ್ರಾಮದ ಕಡೆಯಿಂದ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಕಳ್ಳತನದಿಂದ ಟಿಪ್ಪರಗಳಲ್ಲಿ ಮರಳು ತುಂಬಿಕೊಂಡು ಹೊಗುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳ್ಳುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಎರಡು ಟಿಪ್ಪರಗಳು ಬರುತ್ತಿದ್ದು ನೋಡಿ ನಾವು ಸದರಿ ಟಿಪ್ಪರಗಳನ್ನು ನಿಲ್ಲಿಸಿ  ಚಾಲಕರ ಹೆಸರು ವಿಳಾಸ ವಿಚಾರಿಸಲಾಗಿ ತಮ್ಮ ಹೆಸರು 1) ಸಂತೋಷ ತಂದೆ ಸುಬಾಷಶ್ಚಂದ್ರ ಹದನೂರ ಸಾ: ಖೈನೂರ ತಾ: ಸಿಂದಗಿ 2) ಸಂತೋಷ ತಂದೆ ಭೀಮರಾಯ ಯಂಕಂಚಿ ಸಾ: ಯರಗಲ (ಕೆ.ಡಿ)  ತಾ: ಸಿಂದಗಿ ಅಂತಾ ತಿಳಿಸಿದರು. ಟಿಪ್ಪರಗಳನ್ನು ಚಕ್ಕ ಮಾಡಲು, 1) ಟಾಟಾ ಕಂಪನಿಯ ಟಿಪ್ಪರ ಇದ್ದು ಅದರ ನಂ ಕೆಎ-28 ಎ-3055 ನೇದ್ದು ಇದ್ದು, ಸದರಿ ಟಿಪ್ಪರನಲ್ಲಿ ಮರಳು ತುಂಬಿದ್ದು ಇದ್ದಿತ್ತು, 2) ಮಹೆಂದ್ರಾ ಕಂಪನಿಯ ಟಿಪ್ಪರ ಇದ್ದು ಅದರ ನಂ ಕೆಎ-28 ಬಿ-7977 ಇದ್ದು, ಸದರಿ ಟಿಪ್ಪರದಲ್ಲಿ ಸಹ ಮರಳು ತುಂಬಿದ್ದು ಇದ್ದಿತ್ತು. ನಂತರ ಸದರಿ ಟಿಪ್ಪರ ಚಾಲಕರಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧೀಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು, ಸದರಿಯವರು ನಾವು ಈಗಾಗಲೆ ಒಂದು ಟ್ರಿಪ್ ಮರಳನ್ನು ಸಾಗಾಣಿಕೆ ಮಾಡಿರುತ್ತೆವೆ, ಈಗ ಎರಡನೆ ಟ್ರೀಪ್ಪ ತುಂಬಿಕೊಂಡು ಹೋಗುತ್ತಿದ್ದೆವೆ ಅಂತಾ ಹೇಳಿ ಅವರು ತಮ್ಮ ಹತ್ತಿರ ಇದ್ದ ರಾಯಲ್ಟಿಗಳನ್ನು ತೋರಿಸಿದರು, ಸದರಿ ರಾಯಲ್ಟಿಗಳನ್ನು ಪರಿಶಿಲಿಸಿ ನೋಡಲು 1 ನೇ ರಾಯಲ್ಟಿ ಮೇಲೆ ಟಿಪ್ಪರ ನಂ ಕೆಎ-28 ಎ-3055 ನೇದ್ದರಲ್ಲಿ ದಿನಾಂಕ 03-07-2015 ರಂದು ದಿನಾಂಕ 03-07-2015 ರಂದು ಸಾಯಂಕಾಲ 6:00 ಗಂಟೆಯ ಒಳಗೆ ಕಲ್ಲೂರ ಸ್ಟಾಕ ಯಾರ್ಡ-2 ನಿಂದ ಮಳ್ಳಿ ಡಿ.ವಾಯ್. ಉಪ್ಪಾರ ಗೇ ಸಾಗಾಟ ಮಾಡಬೇಕು ಅಂತಾ ನಮೂದಿಸಿದ್ದು ಇತ್ತು, ಹಾಗೂ ಇನ್ನೊಂದು ರಾಯಲ್ಟಿಯಲ್ಲಿ ಟಿಪ್ಪಿರ ನಂ ಕೆಎ-28 ಬಿ-7977 ನೇದ್ದರಲ್ಲಿ ದಿನಾಂಕ 03-07-2015 ರಂದು ಬೆಳಿಗ್ಗೆ 10:56 ಗಂಟೆಯಿಂದ ದಿನಾಂಕ 03-07-2015 ರಂದು ಸಾಯಂಕಾಲ 6:00 ಗಂಟೆಯ ಒಳಗೆ ಕಲ್ಲೂರ ಸ್ಟಾಕ ಯಾರ್ಡ-2 ನಿಂದ ಮಳ್ಳಿ ಡಿ.ವಾಯ್.ಉಪ್ಪಾರ ಗೇ ಸಾಗಾಟ ಮಾಡಬೇಕು ಅಂತಾ ನಮೂದಿಸಿದ್ದು ಇತ್ತು, ಸದರಿ ಟಿಪ್ಪರ ಚಾಲಕರು ರಾಯಲ್ಟಿ ಯನ್ನು ಒಂದು ಬಾರಿ ಉಪಯೋಗಿಸಿ, ರಾಯಲ್ಟಿಯ ಅವದಿ ಮುಗಿದ ನಂತರವು, ಸದರಿ ರಾಯಲ್ಟಿಯನ್ನು ಉಪಯೋಗಿಸಿ ಅನದಿಕೃತವಾಗಿ ಟಿಪ್ಪರಗಳಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದರಿಂದ, ಸದರಿ ಎರಡು ಟಿಪ್ಪರಿನ ಅವದಿ ಮುಗಿದ ರಾಯಲ್ಟಿಗಳನ್ನು ಹಾಗೂ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಣಿಕೆ ಮಾಡುತ್ತಿದ್ದ ಎರಡು ಮರಳು ತುಂಬಿದ ಟಿಪ್ಪರಗಳನ್ನು  ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ನಂತರ ಸದರಿ ಮರಳು ತುಂಬಿದ ಎರಡು ಟಿಪ್ಪರಗಳನ್ನು ಮತ್ತು ಆರೋಪಿತರೊಂದಿಗೆ ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಗಾಯ ಗೋಳಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಜಯ ಕುಮಾರ ತಂದೆ ಹಣಮಂತ ಪೂಜಾರಿ ಬಸ್ ಡ್ರೈವರ ನಂ.7143  4ನೇ ಬಸ್ ಡಿಪೋ ಎನ.ಇ.ಕೆ.ಆರ.ಟಿ.ಸಿ ಕಲಬುರಗಿ ರವರು  ದಿನಾಂಕ 03/07/2015 ರಂದು ಮದ್ಯಾನ 1:00 ಗಂಟೆಗೆ ರೂಟ ನಂ.02/202 ಸೂಪರ ಮಾರ್ಕೆಟದಿಂದ ಅಂಬೇಡ್ಕರ ನಗರ (ಶರಣ ಸಿರಸಗಿ ಮಡ್ಡಿ ) ರೋಡಿನಲ್ಲಿ ನೃಪತುಂಗ ನಗರ ಸಾರಿಗೆ ಬಸ ನಂ. ಕೆ.ಎ 32 ಎಫ.1781 ನೇದ್ದರಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಅಂಬೇಡ್ಕರ ನಗರದಿಂದ ಎನ,ಜಿ,ಒ ಕಾಲೋನಿ ಮಾರ್ಗವಾಗಿ ಬರುತ್ತಿರುವಾಗ ಬೇಂದ್ರೆ ನಗರ ಬ್ರಿಜ್ ಹತ್ತಿರದ ಕೋಹಿನೂರ ಬಿಲ್ಡಿಂಗ ಮುಂದುಗಡೆ 1:20 ಪಿ.ಎಮ್ ಕ್ಕೆ ಒಂದು ಟಾಟಾ ಎಸಿ ವಾಹನ ಚಾಲಕನು ಬಸ್ಸಿಗೆ ಸೈಡ್ ಹೊಡೆದು ಮುಂದೆ ಹೋಗಿ ವಾಹನ ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು  ಅವನ ಜೊತೆಗೆ ಇನ್ನೂ ಎರಡು ಟಂಟಂ ದಲ್ಲಿದ್ದವರು ಟಂಟಂ ದಲ್ಲಿನ ಡ್ರೈವರ ಜನರು ಬಂದು ಈ ಸಿಟಿ ಬಸ್ ನರವರು ಬಹಳ ಆಗಿದೆ ಎಂದು ಹೇಳಿ ಅವರ ವಾಹನಗಳಿಂದ ರಾಡ ಮತ್ತು ಬಡಿಗೆ ತೆಗೆದುಕೊಂಡು ಬಂದು ಸ್ಟೇರಿಂಗ ಮೇಲಿಂದ ನನ್ನ ಸಮವಸ್ತ್ರ ಹಿಡಿದು ಕೆಳಗಡೆ ಇಳಿಸಿ ಅದರಲ್ಲಿ ಒಬ್ಬನು ಕಬ್ಬೀಣದ ರಾಡಿನಿಂದ ತಲೆಯ ಮೇಲೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಮತ್ತು ಇನ್ನೂಳಿದವರು ಕೈಯಿಂದ ಸಮವಸ್ತ್ರ ಹಿಡಿದು ಮೈ ಕೈ ಮೇಲೆ ಹೊಡೆದು ಒಳಪೆಟ್ಟು ಗೊಳಿಸಿರುತ್ತಾರೆ ನಾನು ರಕ್ತಗಾಯಗೊಂಡು ನನ್ನ ಮೇಲೆ ಹಲ್ಲೆಮಾಡಿದ ಒಬ್ಬನನ್ನು ಹಿಡಿದು ನಮ್ಮ ಬಸ್ ಕಂಡೆಕ್ಟರ್ ಅಶೋಕ ರಾಠೋಡ ರವರಿಗೆ ಕೊಟ್ಟು ಭಾರಿ ರಕ್ತಸ್ರಾವ ಆಗುತ್ತಿದ್ದರಿಂದ ಬಸ್ಸಿನಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಹಾಗೂ ಬಸ್ ಕಂಡೆಕ್ಟರ್ ಅಶೋಕ ರಾಠೋಡ ರವರೊಂದಿಗೆ ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಮಾಡಿ ಅಪಹರಣ ಮಾಡಿದ ಪ್ರಕರಣ :

ಮಾಡಬೂಳ ಠಾಣೆ : ಶ್ರೀ ಸಣ್ಣ ಹಣಮಂತ ತಂದೆ ನಾಗಪ್ಪ ಬಳಿಚಕ್ರ ಸಾ: ಖಾನಳ್ಳಿ ತಾ:ಜಿ: ಯಾದಗಿರಿ ಇವರ ಊರು ಖಾನಳ್ಳಿ ಅರಿಕೇರಾ[ಬಿ] ಗ್ರಾಮ ಪಂಚಾಯತಿಗೆ ಒಳಪಡುತ್ತಿರುವುದರಿಂದ ನಮ್ಮ ಊರಿಗೆ 1] ಎಸ್.ಸಿ-1 2] ಎಸ್.ಟಿ-1 3] ಸಾಮಾನ್ಯ-1 ಹೀಗೆ 3 ಸದಸ್ಯರ ಆಯ್ಕೆಗಾಗಿ ಇರುವಾಗ ಸಾಮಾನ್ಯ ಖೊಟದಲ್ಲಿ ನಮ್ಮ ಅಣ್ಣನ ಹೆಂಡತ್ತಿಯಾದ ಹೊನ್ನಮ್ಮ ಗಂಡ ದೊ.ಹಣಮಂತ ಈಕೆಯನ್ನು ಊರಿನ ಜನರು ಆಯ್ಕೆ ಮಾಡಿದರು ಹೀಗೆ ಅರಕೇರಾ ಗ್ರಾಮ ಪಂಚಾಯತ ಸದಸ್ಯರು ಒಟ್ಟು 22 ಸದಸ್ಯರು ಇದ್ದು ದಿನಾಂಕ-12/06/2015 ರಂದು ಸದರಿ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಿಸಲಾತಿ ಎಂದು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಪರಶಿಷ್ಟ ಜಾತಿ ಎಂದು ಬಹಿರಂಗ ಆದೇಶವಾಗಿದರಿಂದ ನಮ್ಮ ಅಣ್ಣನ ಹೆಂಡತ್ತಿ ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದರಂದ ಆಕೆಗೆ ಅಧ್ಯಕ್ಷ ಮಾಡಬೇಕು ಅಂತಾ ಆಕಾಂಕ್ಷಿಯಾಗಿದ್ದೆವು ಹೀಗಿರುವಾಗ ಅರಕೇರಾ [ಬಿ] ಗ್ರಾಮದ 1] ಫ್ರಭು ಗೌಡ ತಂದೆ ಮಾಲಕ ರಡ್ಡಿ ಗ್ರಾಮ ಪಂಚಾಯತ ಸದಸ್ಯ 2] ಪರವತ ರಡ್ಡಿ ತಂದೆ ಶರಣಗೌಡ ಮಾಲಿ ಪಾಟೀಲ 3] ಮಾಲಕರಡ್ಡಿ ತಂದೆ ಸಾಹೇಬಗೌಡ ಪೋಸ್ಟ್ ಮಾಸ್ಟರ 4] ಬೊದಣ್ಣಗೌಡ ತಂದೆ ಸಾಹೇಬಗೌಡ ಎಮ್.ಆರ್.ಮಡಿಕಲ್ ಕಾಲೇಜ ಕಲಬುರಗಿ 5] ಶರಣಗೌಡ ತಂದೆ ಪರವತ ರಡ್ಡಿ ಮಾಲಿ ಪಾಟೀಲ 6] ಸಿದ್ರಾಮ ರಡ್ಡಿ ವಡ್ನಳ್ಳಿ ಇವರೆಲ್ಲರೂ ಎಲ್ಲಾ ಸದಸ್ಯರನ್ನು ಪಂಚಾಯತ ಆಫೀಸಗೆ ಕರೆಯಿಸಿ ಈ ಸಲ ಅಧ್ಯಕ್ಷ ಸ್ಥಾನ ಸಾಮಾನ್ಯ ಸದಸ್ಯರಿಗೆ ಬಂದಿದೆ ಅದಕ್ಕೆ ಫ್ರಭುಗೌಡ ತಂದೆ ಮಾಲಕರಡ್ಡಿ ಇವರನ್ನು ಅಧ್ಯಕ್ಷರನ್ನಾಗಿ ಅವಿರೊಧವಾಗಿ ಆಯ್ಕೆ ಮಾಡೋಣಾ ಅಂತಾ ಹೇಳಿದರು ಆಗ ಉಳಿದ 13 ಸದಸ್ಯರು ಸೇರಿ ಖಾನಳ್ಳಿ ಗ್ರಾಮದ ನಮ್ಮ ಅಣ್ಣನ ಹೆಂಡತ್ತಿಯಾದ ಹೊನ್ನಮ್ಮ ಕೂಡ ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದ್ದಾಳೆ ಅದಕ್ಕೂ ಮುಂಚೆ ಮೊದಲಿನಿಂದ ಸಾಮಾನ್ಯ ಸ್ಥಾನವಾದಾಗ ನೀವೆ ಗೌಡರು ಆಗುತ್ತಾ ಬಂದಿದ್ದಿರಿ ಈ ಸಲ ಹಿಂದುಳಿದವರ ನಾವು ಸಾಮಾನ್ಯ ಸ್ಥಾನದಿಂದ ಆಯ್ಕೆಯಾಗಿದಾರೆ ಅದಕ್ಕೆ ಆಕೆಗೆ ಅಧ್ಯಕ್ಷರಾಗಿ ಮಾಡೋಣಾ ಅಂತಾ ಅಂದಿದಕ್ಕೆ ನಮ್ಮ ನಡುವೆ ಮತ್ತು ಅವರ ನಡುವೆ ಮಾತಿನ ಚಕಿಮಕಿಯಾಗಿ 22 ಸದಸ್ಯರಲ್ಲಿ 13 ಜನ ನಮ್ಮ ಅಣ್ಣನ ಹೆಂಡತ್ತಿ ಹೊನ್ನಮ್ಮಳಿಗೆ ಅಧ್ಯಕ್ಷರಾಗಲು ಬೆಂಬಲಕ್ಕೆ ನಿಂತಾಗಾ ದಿನಾಂಕ-01/07/2015 ರಂದು ಅಧಕ್ಷರ ಆಯ್ಕೆ ಚುನಾವಣೆ ಇರುವುದರಿಂದ ನಮ್ಮ ಅತ್ತಿಗೆ ಸೇರಿ 13 ಸದಸ್ಯರಾದ ಅಂದರೆ 1] ಹೊನ್ನಮ್ಮ ಗಂಡ ಹಣಮಂತ ಸಾ: ಖಾನಳ್ಳಿ 2] ಪ್ರೇಮಕುಮಾರ ತಂದೆ ಚತಸಿಂಗ್ ಸಾ: ಅರಕೇರಾ[ಬಿ] ತಾಂಡಾ 3] ನೆಹರು ತಂದೆ ಹೀರು ಸಾ: ಸಿದ್ದಾರ್ಥನಗರ 4] ರಾಜು ತಂದೆ ಶಂಕರ ಸಾ: ಬಾಲಾಜಿ ನಗರ 5] ಭೀಮಬಾಯಿ ಗಂಡ ನಾಮದೇವ ಸಾ: ಬಾಲಾಜಿನಗರ 6] ಶರಣಮ್ಮ ಗಂಡ ಶಿವಶರಣಪ್ಪ ಸಾ: ಬಸವಂತಪೂರ 7] ಗೋವಿಂದಪ್ಪ ತಂದೆ ಮುಖಣ್ಣ ಸಾ: ಬಸವಂತಪೂರ 8] ಮೋತಿಬಾಯಿ ಗಂಡ ಹಣಮಂತ ಸಾ: ಖಾನಳ್ಳಿ 9] ದೊಡ್ಡತಾಯಮ್ಮ ಗಂಡ ಮಲ್ಲಣ್ಣಾ ಸಾ: ಅಚ್ಚೋಲಾ 10] ಮಲ್ಲಪ್ಪ ತಂದೆ ಮಹಾದೇವಪ್ಪ ಸಾ: ಅರಕೇರಾ[ಬಿ] 11] ಲಕ್ಷ್ಮಿ ಗಂಡ ಹೊನ್ನಪ್ಪ ಸಾ: ಅರಕೇರಾ [ಬಿ] 12] ಶಾಂತಿಬಾಯಿ ಗಂಡ ವಾಲು ಸಾ: ಸಿದ್ದಾರ್ಥನಗರ 13] ಈರಮ್ಮ ಗಂಡ ಚಂದ್ರಾಮಪ್ಪ ಸಾ: ವಡ್ನಳ್ಳಿ. ಈ ಎಲ್ಲರೂ ಕೂಡಿ ನಾಳೆ ಚುನಾವಣೆ ಇದೆ ಎಂದು ದಿನಾಂಕ-30/06/2015 ರಂದು ಎಲ್ಲರೂ ಸೇರಿ ನಾವು ದೂರ ದೂರ ಇದ್ದರೆ ನಮ್ಮ ನಮ್ಮಲ್ಲೇ ವೈಮನಸ್ಸು ಮಾಡಿಸಿ ಅಥವಾ ಹಣದ ಆಸೆ ತೂರಿಸಿ ಅಥವಾ ಹೆದರಿಸಿ ತಮ್ಮ ಕಡೆ ಮಾಡಿಕೊಳ್ಳುವ ಸಂಭವ ಇರುವುದರಿಂದ 13 ಜನ ಸದಸ್ಯರು ಮಾತನಾಡಿಕೊಂಡು ನಾವು ಒಟ್ಟಾಗಿ ಚುನಾವಣೆ ಮಾಡೋಣಾ ಅಂತಾ ತಿರ್ಮಾನಿಸಿ 13 ಜನ ಸದಸ್ಯರು ಹಾಗೂ ಅವರ ಸಂಭಂದಿಕರಾದ 1] ಮಲ್ಲಣ್ಣಾ ತಂದೆ ಸಾಬಣ್ಣಾ 2] ವಾಲು ಸಿದ್ದಾರ್ಥನಗರ 3] ಚಂದ್ರಾಮ ಹಂಪ್ಪಿನ ವಡ್ನಳ್ಳಿ 4] ವಿಕ್ರಮ ಬಾಲಾಜಿನಗರ 5] ಮಲ್ಲಕಾಜರ್ುನ ತಂದೆ ಸಾಬಣ್ಣಾ 6] ಹಣಮಂತ ತಂದೆ ನಾಗಪ್ಪಾ ಖಾನಳ್ಳಿ 7] ಭೀಮು ತಂದೆ ತುಳುಜಾರಾಮ 8] ಹಣಮಂತ ತಂದೆ ನಾಗಪ್ಪಾ ಅಚ್ಚೋಲಾ 9] ಗೋಪಾಲ ಬಾಲಾಜಿನಗರ 10] ರವಿ ತಂದೆ ಹಣಮಂತ ಖಾನಳ್ಳಿ ಎಲ್ಲಾ ಜನರು ಸೇರಿ ಜೀಪ ನಂ ಕೆಎ-33 ಎ-1853 ಮತ್ತು ಕೆಎ-33 ಎಮ್-3638 ರಲ್ಲಿ ದಿನಾಂಕ-30/06/2015 ರಂದು ಅರಕೇರಾ [ಬಿ] ದಿಂದ ಬಿಟ್ಟು ಕಲಬುರಗಿಗೆ ಹೋಗಿ ಶರಣಬಸವೇಶ್ವರ ದರ್ಶನ ಮಾಡಿ ರಾತ್ರಿ ಅಲ್ಲೆ ಒಂದು ಕಡೆ ಉಳಿದು ದಿನಾಂಕ-01/07/2015 ರಂದು ಮುಂಜಾನೆ ನೇರವಾಗಿ ಅರಕೇರಾ [ಬಿ] ಗ್ರಾಮ ಪಂಚಾಯತ ಬಂದು ಮತ ಹಾಕೋಣಾ ನಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡೋಣಾ ಅಂತಾ ನಿರ್ಧರಿಸಿ ಕಲಬುರಗಿಯಿಂದ 8 ಎ.ಎಮ್ ಸುಮಾರಿಗೆ ನಾವು ತೆಗೆದುಕೊಂಡ ಹೋದ ವಾಹನಗಳಲ್ಲಿ ಕುಳಿತು ಕಲಬುರಗಿಯಿಂದ ವಾಯಾ ಚಿತ್ತಾಪೂರ ಮೂಲಕ ಹೋಗೋಣಾ ಅಂತಾ ದಂಡೋತಿ ಶಾಲೆಯ ಹತ್ತಿರ ರೊಡಿನ ಮೇಲೆ ಹೋಗುತ್ತಿರುವಾಗ ನಮ್ಮ ಹಿಂದಿನಿಂದ 2 ಟವೇರಾ ವಾಹನಗಳು ಬಂದು ನಮಗೆ ಸೈಡ ಹೊಡೆದು ನಮ್ಮ ವಾಹನಗಳ ಮುಂದೆ ಬಂದು ನಿಲ್ಲಿಸಿ ಆ ಎರಡು ವಾಹನದಿಂದ ಅರಕೇರಾ [ಬಿ] ಗ್ರಾಮದ ಶಿವಾನಂದ ತಂದೆ ಭೂದಣ್ಣ ಗೌಡ ಈತ ಹಾಗೂ ಅವನ ಹಿಂದೆ ಕೆಲವು ಜನರು ಕೈಯಲ್ಲಿ ತಲವಾರ, ಲಾಂಗ, ಕ್ರಿಕೇಟ ಬ್ಯಾಟ್, ಹಿಡಿದುಕೊಂಡು ಬಂದವರೆ ನಮ್ಮ ಜೀಪಿನಲ್ಲಿ ಕುಳಿತ್ತಿದ್ದವರಿಗೆ ಕೇಳಗೆ ಇಳಿಯದಂತೆ ತಡೆದು ನಮಗೆ ಶಿವಾನಂದ ಈತನು ಲೇ ಬ್ಯಾಡ ಹಣಮ್ಯಾ ಕೆಳಗೆ ಇಳಿ ಅಂತಾ ನನ್ನ ಕುತ್ತಿಗೆಗೆ ಲಾಂಗ ಹಿಡಿದು ನನನ್ನು ಹೊರೆಗೆ ಎಳೆದ. ಅದೆ ರೀತಿ ರವಿ ಖಾನಳ್ಳಿ ತಾಂಡಾ ಈತನಿಗೆ ಲೇ ಲಂಬಾಣಿ ಸೋಳ್ಳೆ ಮಗನೇ ನೀನು ಯಾರಿಗೆ ಓಟು ಹಾಕಲು ಹೊರಟ್ಟಿದೆಇ ಕೇಳಗೆ ಇಳಿ ಅಂತಾ ಬೈದು ಅವನ ಸಂಗಡ ಇದ್ದ ವ್ಯಕ್ತಿ ರವಿ ಕುತ್ತಿಗೆಗೆ ತಲಾವಾರ ಹಚ್ಚಿ ಕೆಳಗೆ ಇಳಿಸಿದಾ. ಅದೇ ರೀತಿ ಮಲ್ಲಪ್ಪ ತಂದೆ ಮಹಾದೇವಪ್ಪಾ ಬೆಡಗೇರ ಈತನಿಗೆ ಲೇ ಕಬ್ಬಲಿಗ ಸೋಳ್ಳೆ ಮಗನೇ ನೀನು ನಮ್ಮೋರಿನವನಾಗಿದ್ದು ನಮ್ಮ ದೊಡ್ಡಪ್ಪನ ಮಗ ಫ್ರಭು ಗೌಡನಿಗೆ ಓಟು ಹಾಕಲ್ಲಾ ಅಂತಿಯಾ ಅಂತಾ ಬೈದು ಕೆಳಗೆ ಇಳಿಸಿದನು. ಅದೆ ರೀತಿ ಮಲ್ಲಿಕಾರ್ಜುನ ಪೂಜಾರಿಗೂ ಸಹ ಲೇ ಕುರುಬ ನೀನು ಊರ ಕುರುಬನಾಗಿದ್ದು ಊರ ಗೌಡರಿಗೆ ಎದುರು ಹಾಕುತ್ತಿ ಅಂತಾ ಬೈದು ಅವನ ಅಂಗಿ ಹಿಡಿದು ಜೀಪಿನಿಂದ ಕೆಳಗೆ ಇಳಿಸಿ ನಮ್ಮ 4 ಜನರನ್ನು ಶಿವಾನಂದ ಈತನು ತಾನು ತಂದ ಟವೇರಾ ವಾಹನದಲ್ಲಿ ಹಾಕಿಕೊಂಡು ನಮಗೆ ಅಪಹರಿಸಿಕೊಂಡು ಹೋಗಿ ಮಹಾಗಾಂವ್ ಕ್ರಾಸ್ ಹತ್ತಿರ ಇರುವ ದೋಸ್ತಿ ಲಾಡ್ಜ ರೋವಿನಲ್ಲಿ ಕೂಡಿಹಾಕಿ ನಾವು ಚಿರಾಡುತ್ತಿದ್ದಾಗ ನಮಗೆ ಕೈಯಿಂದ ಹೊಡೆ ಬಡೆ ಮಾಡಿದ್ದು ನಂತರ 2-45 ಪಿ.ಎಮ್ ಸುಮಾರಿಗೆ ನಮಗೆ ಅಲ್ಲಿಂದ ಬಿಡುಗಡೆ ಮಾಡಿದ್ದು ಈ ಬಗ್ಗೆ ನೀವು ಏನಾದರೂ ಪೊಲೀಸ್ ಠಾಣೆಗೆ ಹೋಗಿ ಕೇಸ್ ಮಾಡಿದರೆ ನಿಮ್ಮ 4 ಜನರಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 July 2015

Kalaburagi District Reported Crimes

ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಗೌರಮ್ಮಾ ವಾರ್ಡ ನಂ.23 ಶಹಾಬಜಾರ ಸ್ವಾದಿಗಲ್ಲಿ ಅಂಗನವಾಡಿ ಸಹಾಯಕಿ ಗೌರಮ್ಮ ತಂದೆ ದಿ. ಶ್ರೀವೀರ ಗಂದಿಗುಡಿ ಆಗಿದ್ದು, ನನಗೆ ಅಂಗನವಾಡಿ ಕೆಲಸದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಪ್ರಮಿಳಾ ಮತ್ತು ಇತರೆ 5 ಜನ ಮಹಿಳೆಯವರು ಸೇರಿ ಹಲ್ಲೆ ಮಾಡಿದ್ದಾರೆ. ನನ್ನ ಮೋಬೈಲನಲ್ಲಿ ಅಂಗನವಾಡಿ ಕಾರ್ಯಕರ್ತೆ ಮಾಡಿರುವ ಕಿರುಕುಳದ ಬಗ್ಗೆ ರೇಕಾರ್ಡ ಮಾಡಲಾಗಿತ್ತು. ನನ್ನನ್ನು ಹೊಡೆದು ಮೆಮೋರಿ ಕಸಿದುಕೊಂಡಿದ್ದಾರೆ. ಈ ಘಟನೆ ಕುರಿತು ಚೌಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಠಾಣೆಗೆ ಹೋದಾಗ ನಮ್ಮ ದೂರನ್ನು ಸ್ವೀಕರಿಸಿರುವುದಿಲ್ಲಾ. ಈಗ ಅಂಗನವಾಡಿ ಕಾರ್ಯಕರ್ತೆ ಮತ್ತು ಅಲ್ಲಿನ 5 ಜನ ಮಹಿಳೆಯವರು ಸೇರಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಾ ಇಲ್ಲದಿದ್ದರೆ ನೌಕರಿ ಬಿಡು, ನೌಕರಿ ಬಿಡಲಿಲ್ಲ ಎಂದರೆ ನಿನ್ನ ಮಾನಭಂಗ ಮಾಡುತ್ತೇವೆ. ಎಂದು ಹೆದರಿಸುತ್ತಿದ್ದಾರೆ. ರಾತ್ರಿ ವೇಳೆ ನಿನ್ನ ಮನೆಗೆ ಗಂಡಸರಿಗೆ ಕಳುಹಿಸುತ್ತೇನೆ. ನಿನ್ನ ಮಾನ ತೆಗೆಯುತ್ತೇವೆ ಎಂದು ಭೀತಿ ನಿಡುತ್ತಿದ್ದಾರೆ. ದಿನಾಂಕ 22/06/2015 ರಂದು ನಾನು ಅಂಗನವಾಡಿ ಕೇಂದ್ರಕ್ಕೆ ಹೋದಾಗ ಅಲ್ಲಿಯ ಮಹಿಳೆ ಕಾಂತಬಾಯಿ ಕೋಗನೂರ ಎಂಬುವಳು ಮತ್ತು ಅಂಗನವಾಡಿ ಕಾರ್ಯಕರ್ತೆ ಸೇರಿ ನನ್ನನ್ನು ಅಂಗನವಾಡಿ ಒಳಗಿನಿಂದ ಕೊದಲು ಹಿಡಿದುಕೊಂಡು ಹೊರಗಡೆ ಎಳೆದುಕೊಂಡು ಬಂದು ನನ್ನ ಮೋಬೈಲ ಕಸಿದುಕೊಂಡು ಚರಂಡಿಯಲ್ಲಿ ಹಾಕುವ ಪ್ರಯತ್ನ ಮಾಡಿದರು ಈ ಮೂದಲು ದಿನಾಂಕ 16/06/15 ರಂದು ಕೂಡಾ ಅಂಗನವಾಡಿ ಕಾರ್ಯಕರ್ತೆ ನನ್ನ ಮೋಬೈಲ್ ಕಸಿದುಕೊಂಡು ಅದರಲ್ಲಿಯೆ ಮೆಮೋರಿ ಕಾರ್ಡ ತೆಗೆದುಕೊಂಡು ಈರಮ್ಮ ಬೋಗುಂಡೆಯವರ ಕೈಯಲ್ಲಿ ಕೊಟ್ಟಿದ್ದಾಳೆ. ಇದಲ್ಲದೆ ಸ್ವತ: ತಾನೆ ಹೋಗಿ ನನ್ನ ಮೇಲೆ ಪೊಲೀಸ ದೂರು ನೀಡಿದ್ದಾರೆ. ಅದರಲ್ಲಿ 16 ಜನ ಮಹಿಳೆಯರ ಹೆಸರು ನಿಡಿದ್ದಾರೆ. ಎಲ್ಲರ ಹೆಸರಿನ ಮುಂದೆ ಒಬ್ಬರೆ ಸಹಿ ಮಾಡಿರುತ್ತಾರೆ. ಸ್ವಾದಿಗಲ್ಲಿ ಅಂಗನವಾಡಿಗೆ ಸರ್ವೆಯಲ್ಲಿ ಇಲ್ಲದ ಹೆಣ್ಣು ಮಕ್ಕಳ ಹೆಸರು ಸಹ ಇದರಲ್ಲಿ ಇವೆ. ಚೆನ್ನಮ್ಮ ಸಾಲಿಮಠ., ಮಹಾನಂದ ಸಾಲಿಮಠ, ಮಹಾದೇವಿ ಸಾಲಿಮಠ, ಲಲ್ಲು ಗೌಳಿ, ನಿರ್ಮಲ ಕೋಣೆ, ಗಂಗಮ್ಮಾ ಮಂಗಶೆಟ್ಟಿ, ಇವರಗಳದು ಜೈಭೀಮ ನಗರ ವಿಜಯಲಕ್ಷ್ಮಿ ಅಂಗನವಾಡಿ ಕಾರ್ಯಕರ್ತೆ ಕೇಂದ್ರ ಸರ್ವೆಯಲ್ಲಿ ಬರುತ್ತಾರೆ. ಭಾರತಿ ತಂದೆ ಶಾಂತಯ್ಯಾ ಸ್ವಾಮಿ ಮಠಪತಿ ಇವರ ಹೆಸರು ಒತ್ತಾಯಪೂರ್ವಕವಾಗಿ ಬರೆಸಿರುತ್ತಾರೆ. ಇವಳು ಗಾಜಿಪೂರದವರು ಇದ್ದಾರೆ. ಅಂಗನವಾಡಿಗೆ ಸಂಬಂಧ ವಿಲ್ಲದ ಮಹಿಳೆಯವರು ಅಂಗನವಾಡಿಗೆ ಬರುತ್ತಾರೆ. ಅವರುಗಳ ಹೆಸರು ಈ ರೀತಿ ಇವೆ. ಕಾಂತಾಬಾಯಿ ಕೊಗನೂರ, ಚೆನ್ನಮ್ಮ ಸಾಲಿಮಠ, ಮಹಾನಂದ ಸಾಲಿಮಠ, ಮಹಾದೇವಿ ಸಾಲಿಮಠ, ಮಹಾದೇವಿ ಚೆಟ್ಟಿ, ಈರಮ್ಮ ಬೋಗುಂಡೆ, ಶರನಮ್ಮಾ ಸ್ವಾದಿ, ಇರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 30-06-2015 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನನ್ನ ಮಗಳಲಾದ ಮಾಲಾಶ್ರೀ ಇವಳು ನಮ್ಮ ಮನೆಯಿಂದ ಬಹರದೇಶೆಗೆ  ಹೋಗಿ ಬರುತ್ತನೆ ಅಂತಾ ಹೋದವಳು ಬಹಳ ಹೊತ್ತಾದರು ಮರಳಿ ಬಂದಿರುವುದಿಲ್ಲಾ  ನಾನು ನನ್ನ ಗಂಡ ಮಕ್ಕಳು ಬಹಿರದೇಶೆಗೆ ಹೋದ ಜಾಗಕ್ಕೆ ಹೋಗಿ ನೋಡಲು ಅಲ್ಲಿ ಇರಲಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಶ್ರೀಮತಿ ಶರಣಮ್ಮ ಗಂಡ ಶರಣಪ್ಪಾ ಮಾಂಗ ಸಾ : ಅಫಜಲಪೂರ ಠವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 09/07/2013 ರಂದು ಚೈಲ್ಡ್ ಲೈನ್ ಕಲಬುರಗಿ ಯಿಂದ ನಮ್ಮ ಸಂಸ್ಥೆಗೆ ಅಗ್ನಿ ತಂದೆ ಹಣಮಂತ ವಯಃ 16 ವರ್ಷ ಈತನು ದಾಖಲಾಗಿರುತ್ತಾನೆ. ಈತನು ದಿನಾಂಕಃ 01/07/2015 ರಂದು ಸರಕಾರಿ ಪ್ರೌಡ ಶಾಲೆ ಆದರ್ಶ ನಗರ ಕಲಬುರಗಿ ಶಾಲೆಗೆ ಇತರೆ ನಿವಾಸಿಗಳ ಜೊತೆಗೆ ಹೋಗಿ ಸಾಯಂಕಾಲ 05:30 ಗಂಟೆಯವರೆಗೆ ಮರಳಿ ಸಂಸ್ಥೆಗೆ ಬಂದಿಲ್ಲ. ಶಾಲಾ ನಿವಾಸಿಗಳನ್ನು ವಿಚಾರಿಸಿದಾಗ ಅಗ್ನಿ 09 ನೇ ತರಗತಿ ಈತನು ಶಾಲೆಯಿಂದ ಓಡಿ ಹೋಗಿರುತ್ತಾನೆ ಎಂದು ಮಕ್ಕಳು ತಿಳಿಸಿರುತ್ತಾರೆ. ಸಾಯಂಕಾಲ 05:30 ಗಂಟೆಯಿಂದ ರಾತ್ರಿ 08 ಗಂಟೆಯವರೆಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಸ್ಥಳೀಯ ಸಾರ್ವಜನಿಕ ಸ್ಥಳಗಳಲ್ಲಿ ಹುಡುಕಲು ಪ್ರಯತ್ನಿಸಲಾಗಿರುತ್ತದೆ. ಆದರೆ ಈತನು ಸಿಕ್ಕಿರುವುದಿಲ್ಲಾ. ಅಂತಾ ಶ್ರೀ ಸೈಯದ ಹಮೀದ ಅಲಿ, ಅಧೀಕ್ಷಕರು ಸರಕಾರಿ ಬಾಲಕರ ಬಾಲ ಮಂದಿರ ಪ್ರಗತಿ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಂಆಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 03-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಮೂರು ಟ್ರ್ಯಾಕ್ಟರಗಳ್ಳಿ ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಡಿಗ್ರಿ ಕಾಲೇಜ ಕ್ರಾಸ ಹತ್ತಿರ ಇದ್ದಾಗ ಎದುರುಗಡಯಿಂದ ಮೂರು ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಬರುತ್ತಿದ್ದವು, ಸದರಿ ಮೂರು ಟ್ರ್ಯಾಕ್ಟರ ಚಾಲಕರು ನಮ್ಮ ವಾಹನವನ್ನು ನೋಡಿ ತಮ್ಮು ಟ್ರ್ಯಾಕ್ಟರಗಳನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಮೂರು ಟ್ರ್ಯಾಕ್ಟರಗಳು ಚಕ್ಕ ಮಾಡಲು ಟ್ರ್ಯಾಕ್ಟರಗಳಲ್ಲಿ ಮರಳು ಇತ್ತು, ಮತ್ತು ಸದರಿ ಟ್ರ್ಯಾಕ್ಟರಗಳ ನಂ ನೋಡಲಾಗಿ 1] ಸ್ವರಾಜ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ 43-3008SSA01932, 2] ಅರ್ಜುನ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ-32/ಟಿ.ಎ-6673, 3] ಅರ್ಜುನ ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ NNHY06327 ಅಂತಾ ಇದ್ದವು, ಸದರಿ ಮೂರು ಟ್ರ್ಯಾಕ್ಟರಗಳಲ್ಲಿದ್ದ ಮರಳಿನ ಅಂದಾಜ ಕಿಮ್ಮತ 9,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಮರಳು ತುಂಬಿದ ಮೂರು ಟ್ರ್ಯಾಕ್ಟರಗಳೊಂದಿಗೆ ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.