POLICE BHAVAN KALABURAGI

POLICE BHAVAN KALABURAGI

10 June 2015

Kalaburagi District Reported Crimes

ಹಲ್ಲೆ ಪ್ರಕರಣಗಳು
ಯಡ್ರಾಮಿ ಠಾಣೆ : ಶ್ರೀ ಮಲ್ಲಣ್ಣಗೌಡ ತಂದೆ ಗುರಪ್ಪಗೌಡ ಹೊಸಗೌಡ್ರ ಸಾ|| ಕುಳಗೇರಾ ಇವರ ಹೊಲ ಕುಳಗೆರಾ ಸೀಮಾಂತರದ ಸರ್ವೆ ನಂ 115 ನೆದ್ದರಲ್ಲಿ 21 ಎಕರೆ ಜಮೀನು ಇರುತ್ತದೆ. ನಮ್ಮ ಹೊಲದ ಮೆಲ್ಭಾಗದಲ್ಲಿ  ಶಿವಣ್ಣಗೌಡ ಇವರ ಹೊಲ ಇದ್ದು. ನಮಗೂ ಮತ್ತು ನಮ್ಮ ಅಣ್ಣ ಶಿವಣ್ಣಗೌಡನಿಗೂ ಹೊಲದಲ್ಲಿಯ ಬಾಂದಿನಲ್ಲಿ ಎತ್ತುಗಳು ತಿರುಗುವ ವಿಷಯದಲ್ಲಿ ಆಗಾಗ ತಂಟೆ ತಕರಾರು ಆಗುತ್ತಾ ಬಂದಿದ್ದು ದಿನಾಂಕ 09-06-2015 ರಂದು ಬೆಳಿಗ್ಗೆ ಹೊಲಕ್ಕೆ ಗಳೆ ಹೊಡೆಯಲು ಹೊದಾಗ ಶಿವಣ್ಣಗೌಡ ತಂದೆ ಗುರಪ್ಪಗೌಡ ಹೊಸಗೌಡ್ರ  ಹಾಗು ಇನ್ನೊಬ್ಬ ಕುಡಿ ಅವಚ್ಯವಾಗಿ ಬೈದು ಕೊಲೆ ಮಾಡುವ ಉದ್ದೆಶದಿಂದ ಅವರಿಬ್ಬರು ಕೈಯಿಂದ ಮತ್ತು ಬಡಿಗೆಯಿಂದ  ಹೊಡೆದು ಮಾರಣಾಂತಕ ಹಲ್ಲೆ ಮಡಿ ಕೊಲೆ ಮಾಡಲು ಪ್ರಯತ್ನಿ ಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.:
ಯಡ್ರಾಮಿ ಠಾಣೆ : ಶ್ರೀ ಅಶೋಕ ತಂದೆ ಶಿವಣ್ಣಗೌಡ ಹೊಸಗೌಡ್ರ ಸಾ|| ಕುಳಗೇರಾ ಇವರ ಹೊಲ ಕುಳಗೆರಾ ಸೀಮಾಂತರದ ಸರ್ವೆ ನಂ 115 ನೆದ್ದರಲ್ಲಿ 21 ಎಕರೆ ಜಮೀನು ಇರುತ್ತದೆ. ನಮ್ಮ ಹೊಲದ ಕೆಳ ಭಾಗದಲ್ಲಿ ನಮ್ಮ ಕಾಕಾ ಮಲ್ಲಣ್ಣಗೌಡ ತಂದೆ ಗುರಪ್ಪಗೌಡ ಇವರ ಹೊಲವು ಇರುತ್ತದೆ. ನಮಗೂ ಮತ್ತು ನಮ್ಮ ಕಾಕಾ ಮಲ್ಲಣ್ಣಗೌಡನಿಗೂ ಹೊಲದಲ್ಲಿಯ ಬಾಂದಿನಲ್ಲಿ ಎತ್ತುಗಳು ತಿರುಗುವ ವಿಷಯದಲ್ಲಿ ಆಗಾಗ ತಂಟೆ ತಕರಾರು ಆಗುತ್ತಾ ಬಂದಿದ್ದು ದಿನಾಂಕ 09-06-2015 ರಂದು ಬೆಳಿಗ್ಗೆ ನಾನು ನನ್ನ ತಂದೆ ಇಬ್ಬರೂ ಗಳೆ ಹೊಡೆಯಲು ಹೊಲಕ್ಕೆ ಹೊದೆವು. ಹೊಲದಲ್ಲಿ ನನ್ನ ಕಾಕಾ ಮಲ್ಲಣ್ಣಗೌಡ ಇತನು ನಿನ್ನೆ ತನ್ನ ಹೊಲದಲ್ಲಿ ಟ್ರಾಕ್ಟರ್ ಹೊಡೆದು ನಮ್ಮ ಹೊಲದಲ್ಲಿ ಟ್ರಾಕ್ಟರ್ ತಿರುವಿಕೊಂಡು ಹೊಗಿದ್ದು ನೋಡಿ. ನಾನು ಮತ್ತು ನನ್ನ ತಂದೆ ಶಿವಣ್ಣಗೌಡ ಇಬ್ಬರು ಕೂಡಿಕೊಂಡು ಮಲ್ಲಣ್ಣಗೌಡ ಇತನಿಗೆ ಯಾಕೆ ನಮ್ಮ ಹೊಲದಲ್ಲಿ ಟ್ರಾಕ್ಟರ್ ತಿರಿವಿಕೊಂಡು ಹೊಗಿದ್ದಿ ಅಂತಾ ಕೆಳಿದ್ದಕ್ಕೆ 1. ಮಲ್ಲಣ್ಣಗೌಡ ತಂದೆ ಗುರಪ್ಪಗೌಡ ಹೊಸಗೌಡ್ರ 2. ಅನೀಲ ಕುಮಾರ ತಂದೆ ಭೀಮಣ್ಣಗೌಡ ಹೊಸಗೌಡ್ರ 3. ದೊಡ್ಡಪ್ಪಗೌಡ ತಂದೆ ಗುರಪ್ಪಗೌಡ ಹೊಸಗೌಡ್ರ 4. ಭೀಮಣ್ಣಗೌಡ ತಂದೆ ಭೀಮಣ್ಣಗೌಡ ಹೊಸಗೌಡ್ರ ಹಿಗೆಲ್ಲರೂ ಕೂಡಿಕೊಂಡು ಕೈ ಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯವಾಗಿ ಬೈದು ಕೈಯಿಂದ ಬಡಿಗೆಯಿಂದ, ರಾಡಿನಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 09.06.2015 ರಂದು ರಾತ್ರಿ ಶ್ರೀ ನಾಗಣ್ಣ ತಂದೆ ದೇವಪ್ಪ ತಳವಾರ ಸಾ|| ಶಖಾಪುರ ಎಸ್.ಎ ರವರು ತನ್ನ ಮಕ್ಕಳೋಂದಿಗೆ ಮನೆಯಲ್ಲಿದ್ದಾಗ ರಾಮಣ್ಣಗೌಡ ತಂದೆ ಮಲ್ಲಣ್ಣಗೌಡ ಮಾಲಿಪಾಟೀಲ. ಸಂಗಡ 21 ಜನರು ಸಾ|| ಎಲ್ಲರು ಶಖಾಪುರ ಎಸ್.ಎ ಗ್ರಾಮ ರವರು ಗುಂಪುಕಟ್ಟಿಕೊಂಡು ತಮ್ಮ ಕೈಗಳ್ಳಿ ಬಡಿಗೆಗಳನ್ನು ಹಿಡಿಕೊಂಡು ನನ್ನ ಮನೆಯೋಳಗೆ ಅಕ್ರಮ ಪ್ರವೇಶ ಮಾಡಿ ಮೊನ್ನೆ ನಡೆದ ಗ್ರಾಮ ಪಂಚಾಯತ ಚುನಾವಣೆಯ ವೈಶಮ್ಯದಿಂದ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ನನಗೆ ಮತ್ತು ನನ್ನ ಮಕ್ಕಳಿಗೆ ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 10-062015 ರಂದು ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯ  ಕಳಿಂಗ ಲಾಡ್ಜ ಎದುರಗಡೆಯಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀ  ಎಸ್.ಎಸ್‌ ದೊಡ್ಮನಿ ಪಿ.ಎಸ್.ಐ  ಸ್ಟೇಷನ್ ಬಜಾರ ಪೊಲೀಸ್ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಶ್ರೀ ಮಹಾನಿಂಗ ನಂದಗಾವಿ ಡಿ,ಎಸ್,ಪಿ ಸಾಹೇಬ ಎ ಉಪ-ವಿಭಾಗ ಕಲಬುರಗಿ, ಮಾನ್ಯ ಶ್ರೀ ರಾಜಶೇಖರ ಹಳಗೊದಿ ಪಿಐ  ಸ್ಟೇಶನ ಬಜಾರ ಠಾಣೆ ರವರ ಮಾರ್ಗದರ್ಶನದಲ್ಲಿ ಠಾಣಾ ವ್ಯಾಪ್ತಿಯ  ಕಳಿಂಗ ಲಾಡ್ಜ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1. ಮಳೆಂದ್ರ  ತಂದೆ ಶಿವಾನಂದ ಕಲ್ಲಮನಿ ಸಾ: ಶಹಬಾದ ರಿಂಗ್‌ ರೋಡ ಕಲಬುರಗಿ 2. ಬಾಬುರಾವ ತಂದೆ ಶಿವಶರಣಪ್ಪ ದಣ್ಣುರಕರ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ 3. ಗುರುನಾಥ ತಂದೆ ಶಿವಕುಮಾರ ಮಣೂರ ಸಾ: ಐ ವಾನ್‌ ಶಾಯಿ ಜಾಜಿ ಬ್ಲಾಕ್‌ ಕಲಬುರಗಿ 4. ಅಬಿಶೇಕ ತಂದೆ ಗುಂಡಪ್ಪಾ ಪಾಟೀಲ್‌  ಸಾ: ಆಳಂದ ಚೇಕ್‌ ಪೊಸ್ಟ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  4850/- ರೂ. ಮತ್ತು 52 ಇಸ್ಪೆಟ್ ಎಲೆಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

08 June 2015

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 08-06-2015 ರಂದು ಸ್ಟೇಷನ್ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ,ಎಮ ಬಿರಾದಾರ ಆಸ್ಪತ್ರೆ ಹಿಂದುಗಡೆ ಕಲ್ಯಾಣಕರ ಬಿಲ್ಡಿಂಗ ಹತ್ತಿರ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ. ಮನೋಹರ ಗಾಜರೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ,ಎಸ್,ಪಿ ಸಾಹೇಬ ಎ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ  ಪಿ,ಎಮ ಬಿರಾದಾರ ಆಸ್ಪತ್ರೆ ಹಿಂದುಗಡೆ ಕಲ್ಯಾಣಕರ ಬಿಲ್ಡಿಂಗ ಹತ್ತೀರ ಹೋಗಿ ಮರೆಯಾಗಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1) ರೇವಣಸಿದ್ದಪ್ಪ ತಂದೆ ಗುಂಡುರಾವ ಪಾಟೀಲ ಸಾ: ದೇವಂತಗಿ ತಾ:ಆಳಂದ ಹಾವ: ಜೇವರ್ಗಿ ಕಾಲೋನಿ ಕಲಬುರಗಿ, 2) ಮಹಾದೇವ ತಂದೆ ರಾಮಚಂದ್ರ ಕಲ್ಯಾಣಶೆಟ್ಟಿ ಸಾ: ಬಾಳನಕೇರಿ ಆಳಂದ   3) ಬಾಬುರಾವ ತಂದೆ ಶರಣಪ್ಪ ದೊಣ್ಣುರಕರ ಸಾ: ಡೊಣ್ಣುರು ತಾ: ಆಳಂದ ಹಾವ: ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ  4) ಫೀರೋಜ ಖಾನ ತಂದೆ ಮಜೀದ ಖಾನ ಸಾ: ಎಮ್.ಎಸ್.ಕೆ ಮಿಲ್ ಜೀಲಾನಾಬಾದ ಕಾಲೋನಿ ಕಲಬುರಗಿ 5) ದತ್ತಾತ್ರೇಯ ತಂದೆ ಗುರುಮೂರ್ತಿ ಸ್ಥಾವರಮಠ ಸಾ: ಡೊಣ್ಣುರು ತಾ:ಆ ಆಳಂದ ಹಾವ: ಮಾಣಿಕೇಶ್ವರಿ ಕಾಲನಿ ಕಲಬುರಗಿ 6) ಸಚೀನ ತಂದೆ ಚಂದ್ರಶೇಖರ ಪಾಟೀಲ ಸಾ: ಸುಲ್ತಾನಪೂರ ಗಲ್ಲಿ ಆಳಂದ ಇತನಿಂದ 7) ಗುರುನಾಥ ತಂದೆ ಶಿವುಕುಮಾರ ಮಣೂರ ಸಾ: ಜಾಜೀ ಬ್ಲ್ಯಾಕ್ ಐವಾನ ಇ ಶಾಹಿ ಕಲಬುರಗಿ 8) ವಿನೋಧಕುಮಾರ ತಂದೆ ಕಾಂತರಾವ ಕುಲಕರ್ಣಿ ಸಾ: ಮನೆ ನಂ- 234 ವಿದ್ಯಾ ನಗರ ಕಲಬುರಗಿ 9) ಯೋಗಿ ತಂದೆ ಸುಬಾಸ ಬಸೂತಕರ ಸಾ: ಆದರ್ಶ ನಗರ 2ನೇ ಫೇಸ್ ಕಲಬರುಗಿ  10) ಸೋಮನಾಥ ತಂದೆ ಹಣಮಂತರಾವ ಪಾಟೀಲ ಸಾ: ತೀರ್ಥ ತಾ: ಆಳಂದ ಜಿ: ಕಲಬುರಗಿ 10 ಜನರಲ್ಲಿದ್ದ  ಹಣ ಮತ್ತು ನೆಲದ ಮೇಲೆ ಬಿದ್ದ ಹಣ ಹೀಗೆ ಒಟ್ಟು. 57.500/- ರೂ. ಮತ್ತು 52 ಇಸ್ಪೆಟ್ ಎಲೆಗಳು ಮತ್ತು 9 ವಿವಿಧ ಕಂಪನಿಯ ಮೊಬೈಲ್ ಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ವೆಸಗಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಹಣಮಂತ ತಂದೆ ಸಿದ್ರಾಮ ಜಮಾದಾರ ಸಾ : ಅಫಜಲಪೂರ  ರವರ ಮಗಳಾದ ಭಾಗ್ಯಶ್ರೀ  ಇವಳನ್ನು ದಿನಾಂಕ 18-05-2015 ರಂದು ಅಪಹರಣವಾದ ಬಗ್ಗೆ ಪ್ರಕರಣ ದಾಖಲಿಸಿದ್ದು ಸದರಿಯವಳು ಇಂದು ಮರಳಿ ಬಂದಿದ್ದು ಸದ್ರಿಯವಳನ್ನು ವಿಚಾರಿಸಲು ದಿನಾಂಕ 18-05-2015 ರಂದು ಸಾಯಂಕಾಲ ನಾನು ಲಕ್ಷ್ಮೀ ಗುಡಿಯ ಮುಂದಿನಿಂದ ಬರ್ಹಿದೇಶೆಗೆ ಹೋಗುತ್ತಿದ್ದಾಗ  ಮಲ್ಕಪ್ಪ ತಂದೆ ಶಂಕರ ದೊಡಮನಿ ಸಾ: ಶಿವಪೂರ ಇವನು ನಾನು ನಿಗೆ ಪ್ರಿತಿಸುತ್ತಿದ್ದು ಮದುವೆ ಮಾಡಿಕೊಳ್ಳುತ್ತೆನೆ ಅಂಥಾ ಅಂದಾಗ ನಾನು ನನಗು ನಿನಗು ಎನು ಸಂಬಂಧ ಅಂತಾ ಕೇಳಿದ್ದು ಅವನು ನನ್ನಂದಿಗೆ ಬರದೆ ಇದ್ದರೆ ಮದುವೆನು ಮಾಡಿಕೊಳ್ಳುವುದಿಲ್ಲಾ ಮತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿ ಒತ್ತಾಯಪೂರಕವಾಠಗಿ ನನ್ನನ್ನು ಅಪಹರಿಕೊಂಡು ಹೋಗಿ  ಸಿಂದಗಿ ತಾಲೂಕಿನ ಮಾರ್ಸನಳ್ಳಿ ಗ್ರಾಮದ ತನ್ನ ಸಂಭಂದಿಕರ ಹೊಲದಲ್ಲಿನ ಮನೆಯಲ್ಲಿ ಇಟ್ಟು ಒತ್ತಾಯ ಪೂರ್ವಕವಾಗಿ ಜಬರಿ ಸಂಭೋಗ ಮಾಡಿ, ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆ. ಮತ್ತು ಹೊರಗೆ ಎಲ್ಲಿಗೂ ಹೋಗದಂತೆ ಹಾಗೂ ಯಾರ ಜೋತೆಯು ಮಾತಾಡಲು ಬಿಡದೆ 4-5 ದಿವಸಗಳ ನಂತರ ಸೊಲ್ಲಾಪೂರ, ತುಳಜಾಪೂರ ಮತ್ತು ಬೆಂಗಳುರ ನಗರಗಳಿಗೆ ಕರೆದುಕೊಂಡು ಹೋಗಿ ಸುತ್ತಾಡಿ ಇಂದು ದಿನಾಂಕ 06-06-2015 ರಂದು ಮಾರ್ಸನಳ್ಳಿ  ಗ್ರಾಮದಿಂದ ಕರೆದುಕೊಂಡು ಬಂದು ಅಫಜಲಪೂರ ಬಸ್ಸ ನಿಲ್ದಾಣದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ವಿಶ್ವವಿದ್ಯಾಲಯ ಠಾಣೆ : ಶ್ರೀ.ರಾಘವೇಂದ್ರ ಪಿ.ಎಸ್.ಐ (ಕಾ.ಸು) ವಿಶ್ವವಿದ್ಯಾಲಯ ಪೊಲೀಸ ಠಾಣೆ ಕಲಬುರಗಿ ರವರು ದಿನಾಂಕ: 07-06-2015 ರಂದು ಬೆಳಿಗ್ಗೆ ನಂದೂರ ಕೆ ಗ್ರಾಮದ ಕಮಾನ ಹತ್ತಿರ ಎರಡು ಟ್ರಾಕ್ಟರಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ ನಾನು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ ನಂದೂರ ಕೆ ಗ್ರಾಮದ ಹತ್ತಿರ ಹೋಗಿ ನಂದೂರ ಗ್ರಾಮ ಸ್ವಲ್ಪ ದೂರದಲ್ಲಿ ಇರುವಾಗಲೆ ನಮ್ಮ ವಾಹನ ಮರೆಯಲ್ಲಿ ನಿಲ್ಲಿಸಿ ನಾವು ಹಾಗೂ ಪಂಚರು ನಡೆಯುತ್ತಾ ಬಾತ್ಮಿಯಂತೆ ನಂದೂರ ಕೆ ಗಾಮದ ಕಮಾನ ಹತ್ತಿರ ರಸ್ತೆಯ ಮೇಲೆ ಕಾಯುತ್ತಾ ನಿಂತಾಗ 11:00 ಗಂಟೆಗೆ ಸುಮಾರಿಗೆ ನಂದೂರ ಗ್ರಾಮದ ಕಡೆಯಿಂದ ಮರಳು ತುಂಬಿದ ಎರಡು ಟ್ಯ್ರಾಕ್ಟರಗಳು ಬರುವುದನ್ನು ಗಮನಿಸಿ ಕೈ ಸನ್ನೆ ಮಾಡಿ ನಿಲ್ಲಿಸಿ ನೋಡಲು ಎರಡು ಟ್ಯಾಕ್ಟರಗಳಲ್ಲಿ ಮರಳು ತುಂಬಿದ್ದು, ಟ್ಯಾಕ್ಟರ್ ನಂಬರ ನೋಡಲು 1) ಕೆಎ 32 ಟಿ.ಎ 7166 ಟ್ರ್ಯಾಲಿ ನಂ: ಕೆಎ 32 ಟಿ 1314-15 ಇದ್ದು ಚಾಲಕ ಹೆಸರು ವಿಚಾರಿಸಲು ರಾಘವೇಂದ್ರ ತಂದೆ ಸಾಯಿಬಣ್ಣ ಭೋವಿ, ಸಾ|| ಕಾಟಮ ದೇವರ ಹಳ್ಳಿ ಅಂತಾ ಹೇಳಿದ್ದು, ಇನ್ನೊದ್ದು ಟ್ರ್ಯಾಕ್ಟರ್ ನಂಬರ ನೋಡಲು ನಂಬರ ಪ್ಲೇಟ್ ಇರುವದಿಲ್ಲ ಇಂಜನ ನಂಬರ ನೋಡಲು 3100ELI43H438896F3 ಛಸ್ಸಿ ನಂಬರ MI3T11 ಚಾಲಕ ಹೆಸರು ವಿಚಾರಿಸಲು ಸಿದ್ದಲಿಂಗ ತಂದೆ ಕಲ್ಯಾಣಿ ಜಡಗಿ, ಸಾ|| ಕಾಟಮದೇವರ ಹಳ್ಳಿ ತಾ|| ಚಿತ್ತಾಪೂರ ಅಂತಾ ತಿಳಿಸಿದ್ದು ಸದರಿಯವರಿಗೆ ಮರಳು ಎಲ್ಲಿಂದ ತಂದಿರುವಿರಿ ಅಂತಾ ವಿಚಾರಿಸಲು ನಾವು ಚಿತ್ತಾಪೂರ ತಾಲೂಕಿನ ಕಾಟಮದೇವರ ಹಳ್ಳಿಯ ಕಾಗಿಣಾ ನದಿಯಿಂದ ತುಂಬಿಕೊಂಡು ನಗರದಲ್ಲಿ ಎಲ್ಲಾದರೂ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದೇವೆ ಅಂತಾ ಹೇಳಿದ್ದು ನಂತರ ಸದರಿ ಮರಳಿನ ದಾಖಲಾತಿ ಕೇಳಲು ಟ್ರ್ಯಾಕ್ಟರ್ ಟ್ರ್ಯಾಲಿಯ ಟೂಲ ಬಾಕ್ಸದಲ್ಲಿ ದಾಖಲಾತಿಗಳು ಇವೆ ಅಂತಾ ಹೇಳಿ ದಾಖಲಾತಿ ಹಾಜರ ಪಡಿಸುತ್ತೇವೆ ಅಂತಾ ಕುಸಿರಿಕೊಂಡು ಓಡಿ ಹೋಗಿದ್ದು ಇರುತ್ತದೆ. ಸದರಿ ಟ್ಯಾಕ್ಟರಗಳಲ್ಲಿ ಅಂದಾಜು 10,000/- ಬೆಲೆಬಾಳುವ ಮರಳು, ಎರಡು ಟ್ರ್ಯಾಕ್ಟರಗಳ ಅಂದಾಜು ಬೆಲೆ 3,00,000/- ಹೀಗೆ ಒಟ್ಟು 3,10,000/- ಬೆಲೆಬಾಳುವ ಮರಳು ಹಾಗೂ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ವಾಹನಗಳೊಂದಿಗೆ ವಿಶ್ವವಿದ್ಯಾಲಯ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

07 June 2015

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ಅಶೋಕ ತಂದೆ ರೇವಣಸಿದ್ದಪ್ಪಾ ಕಂದಗೂಳ ಸಾ: ಮನೆ ನಂ 11-861/45 ಬೀರಪ್ಪ ಗುಡಿ ಹತ್ತಿರ ಬಸವ ನಗರ  ಕಲಬುರಗಿ ಇವರ ಮಗಳಾದ ಅಕ್ಷತಾ ವಯಸ್ಸು 17 ವರ್ಷ ಇವಳು 10 ನೇ ತರಗತಿಯಲ್ಲಿ ಅನುತ್ತಿರ್ಣವಗಿರುವದರಿಂದ ಮನೆಯಲ್ಲಿಯೇ ಇರುತ್ತಾಳೆ. ದಿನಾಂಕ 01.06.2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಅಜಯ ಎಂಬುವ ಹುಡುಗನು ನಮ್ಮ ಮನೆಗೆ ಬಂದು ನನ್ನ ಮಗಳಾದ ಅಕ್ಷತಾ ಇವಳಿಗೆ ಹೆದರಿಸಿ  ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನೀನು ನನ್ನ ಜೊತೆಗೆ ಬರದೇ ಇದ್ದರೆ ನಿನ್ನ ತಂದೆ ತಾಯಿಯವರಿಗೆ ಜೀವ ಹೊಡೆದು ನಿನಗೆ ಎತ್ತಿಕೊಂಡು ಹೋಗುತ್ತೇನೆ ಅಂತಾ ಮಗಳಿಗೆ ಕೈಯಿಂದ ಹೊಡೆಬಡೆ ಮಾಡಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ಬಸವರಾಜ ತಂದೆ ಗುಂಡಪ್ಪಾ ಮರತೂರ ಸಾ : ಭಾಗೋಡಿ  ತಾ : ಚಿತ್ತಾಪೂರ ರವರು ಮತ್ತು ತಮ್ಮ ಸಮಾಜದ ನಿಂಗಣ್ಣಾ ಪೂಜಾರಿ ಇಬ್ಬರೂ ಕೊಡಿ ಖಾಸಗಿ ಕೆಲಸದ ನಿವಿತ್ಯ ನನ್ನ ಮೋ.ಸೈಕಲ ನಂ ಕೆಎ-56 ಹೆಚ್-682 ನೇದ್ದನ್ನು ತೆಗೆದುಕೊಂಡು ಕಲಬುರಗಿಗೇ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಭಾಗೋಡಿಗೆ ಹೋಗಬೇಕೆಂದು ಸದ್ರಿ ಮೋಟಾರ ಸೈಕಲ ನಿಂಗಣ್ಣಾ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತ್ತಿದ್ದು ನಮ್ಮಂತೆ ಮಲ್ಲಿಕಾರ್ಜುನ ಹಾಗೂ ತಿಪ್ಪಣ್ಣಾ ಇವರೂ ಸಹ ನಮ್ಮ ಹಿಂದೆನೇ ಬರುತ್ತಿದ್ದು 12-30 ಪಿ.ಎಮ್ ಕ್ಕೆ ಮುಗುಟಾ ಸಿಮಾಂತರ ದಲ್ಲಿರುವ ವಿ.ಕೆ.ಜಿ. ಕಂಕರ ಮಶಿನ್ ಎದುರುಗಡೆ ಹೋಗುತ್ತಿದ್ದಂತೆ ಒಬ್ಬ ಮೋಟಾರ ಸೈಕಲ ಚಾಲಕನು ಒಬ್ಬ ಹೆಣ್ಣು ಮಗಳಿಗೆ ಕೊಡಿಸಿಕೊಂಡು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಾನು ಹೋಗುವ ರಸ್ತೆಯನ್ನು ಬಿಟ್ಟು ನಾವು ಹೋಗುವ ರಸ್ತೆಗೆ ಬಂದು ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿದ ಪರಿಣಾಮ ನಾವಿಬ್ಬರೂ ಪುಟಿದು ಕೆಳಗೆ ಬಿದ್ದೇವು ನಮ್ಮಂತೆ ಅವರು ಬಿದ್ದಿದ್ದು ನನಗೆ ತೆಲೆಗೆ ಬಲಗಣಿನ ಹತ್ತಿರ, ಮೂಗಿನ ಹತ್ತಿರ, ಭಾರಿ ರಕ್ತಗಾಯ ಹಾಗೂ ಬಲಭುಜಕ್ಕೆ . ಬಲಕಪಾಳಿಗೆ ಭಾರಿ ಗುಪ್ತಗಾಯವಾಗಿರುತ್ತವೆ. ನಂತರ ನಿಂಗಣ್ಣಾ ಇವರಿಗೆ ನೋಡಲಾಗಿ ತೆಲೆಗೆ ಹಾಗೂ ಎಡ. ಬಲ ಕಪಾಳ ಹತ್ತಿರ ಭಾರಿ ಗುಪ್ತಗಾಯವಾಗಿದ್ದು ಅಲ್ಲದೆ ಕಿವಿಯಿಂದ ಮೊಗಿನಿಂದ ರಕ್ತಸ್ರಾವ ಆಗುತ್ತಿತ್ತು ಬಲಗಾಲ ಮುರಿದಂತೆ ಕಂಡುಬರುತ್ತಿತ್ತು. ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲಾ . ನಮ್ಮಂತೆ ನಮಗೆ ಅಪಘಾತ ಪಡಿಸಿದವರಿಗೆ ನೋಡಲಾಗಿ ತೆಲೆಗೆ ಕೈಕಾಲಗಳಿಗೆ ಗುಪ್ತಗಾಯ ರಕ್ತಗಾಯವಾಗಿದ್ದು ಆತನ ಹಿಂದುಗಡೆ ಕುಳಿತ ಹೆಣ್ಣು ಮಗಳಿಗೆ ನೋಡಲಾಗಿ ಎದೆಗೆ ಹಾಗೂ ಭುಜಕ್ಕೆ ತಲೆಗೆ ಒಳಪೆಟ್ಟಾಗಿದ್ದು ನಮಗೆ ಅಪಘಾತ ಪಡಿಸಿದ ಮೋ.ಸೈಕಲ ನಂಬರ ನೋಡಲಾಗಿ ಕೆಎ-32 ಇಎ-8704 ಅಂತಾ ಇದ್ದು  ಸದರಿಯವನ ಹೆಸರು ಗುರು ತಂದೆ ಶಿವಶರಣ ನಾಯಿಕೂಡಿ ಹಾಗೂ ಸುಜಾತಾ ಗಂಡ ಗುರುನಾಯ್ಕಿವಾಡಿ ಸಾ: ಇಬ್ಬರೂ ಸಂಗಾವಿ  ಅಂತಾ ಗೋತ್ತಾಯಿತ್ತು ನಂತರ 108 ಗೆ ಪೋನ್ ಮಾಡಿ ಕರೆಯಿಸಿ ಅದರಲ್ಲಿ ಹಾಕಿಕೊಂಡು  ಬರುವಾಗ ಮಾರ್ಗ ಮದ್ಯದಲ್ಲಿ ನಿಂಗಣ್ಣಾ ಇತನು ಮೃತ ಪಟ್ಟಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 05/06/2015 ರಂದು ಬೆಳಿಗ್ಗೆ ಕ್ರುಜರ ನಂ- ಕೆಎ23 ಎಮ್-6712 ನೇದ್ದರಲ್ಲಿ ಆನೂರ ದಿಂದ ಅಫಜಲಪೂರಕ್ಕೆ ಹೋಗುತ್ತಿದ್ದಾಗ ಬಸವಣ್ಣನ ಕಟ್ಟೆಯ  ಸಮೀಪ ಗೂಡ್ಸ ಟಂ ಟಂ ನಂ ಕೆಎ-32 ಬಿ-2104 ನೇದ್ದರ ಚಾಲಕ ಟಂ ಟಂ ನೇದ್ದನ್ನು ಅತೀ ವೇಗವಾಗಿ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಕ್ರೂಜರಕ್ಕೆ ಡಿಕ್ಕಿ ಪಡಿಸಿದ್ದು ಡಿಕ್ಕಿಯಿಂದ ಕ್ರುಜರದಲ್ಲಿ ಕುಳತಿದ್ದ ಮಡಿವಾಳಮ್ಮ ಇವರ ಹಣೆಗೆ ಬಾರಿ ರಕ್ತಗಾಯವಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯ ಮೃತ ಪಟ್ಟಿದ್ದು  ಹಾಗೂ ಡಿಕ್ಕಿ ಪಡಿಸಿದ ಟಂ ಟಂ ನೇದ್ದರಲ್ಲಿದ್ದ ಸುನೀತಾ ಗಾಡಿವಡ್ಡರ, ಸಂಗೀತಾ ಗಾಡಿವಡ್ಡರ, ರೇಖಾ ಗಾಡಿವಡ್ಡರ, ಮಲ್ಲಮ್ಮ ಗಾಡಿವಡ್ಡರ, ಕುಲಗಪ್ಪ ಗಾಡಿವಡ್ಡರ, ತಿಮ್ಮವ್ವ ಗಾಡಿವಡ್ಡರ ಸಾ: ಎಲ್ಲರು ಅಫಜಲಪೂರ ಇವರಿಗೆ ಡಿಕ್ಕಿಯಿಂದ ಬಾರಿ ಮತ್ತು ಸಾದಾ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿರುತ್ತವೆ ಅಂತಾ ಶ್ರೀ ಚನ್ನಣಗೌ ತಂದೆ ಮಲ್ಲೇಶಪ್ಪ ಪೊಲೀಸ ಪಾಟೀಲ ಸಾ : ಆನೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ಗುರುಶಾಂತಯ್ಯ ತಂದೆ ರೇವಣಸಿದ್ದಯ್ಯ ಮಠ ಸಾ-ಜೇರಟಗಿ ತಾ-ಜೇವರ್ಗಿ ಜಿ-ಕಲಬುರ್ಗಿ  ರವರು ತನ್ನ ಟಂಟಂ ತಗೆದುಕೊಂಡು ನಮ್ಮೂರ ರೇಣುಕಾ ವೈನ ಶಾಪದ ಹತ್ತಿರ ನಿಲ್ಲಿಸಿದ್ದೆ ನನ್ನ ಟಂಟಂ ದಲ್ಲಿ ಅಬ್ದುಲ ಗನಿ ನದಾಫ ಇದ್ದು ಇಬ್ಬರು ಮಾತನಾಡುತ್ತಾ ಕುಳಿತ್ತಿದ್ದೇವು ಅಷ್ಟರಲ್ಲಿ ಜೇರಟಗಿ ಬಸ್ಸ ನಿಲ್ದಾಣದಿಂದ ಒಂದು ಕೆ.ಎಸ್.ಆರ್.ಟಿ.ಸಿ.ಬಸ್ಸ ಬಂದಿತು ಅದರ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಕಡೆನೇ ಬರುತ್ತಿದ್ದೆ ಸಚೀನ ತಂದೆ ಮನೊಹರ ಶಾಹಾಪೂರ ಇತನಿಗೆ ಡಿಕ್ಕಿ ಪಡಿಸಿದನು ಆಗ ಅವನು ಕೇಳಗಡೆ ಬಿದ್ದನು ಆಗ ನಾವಿಬ್ಬರು ಓಡುತ್ತಾ ಹೊಗಿ ಅವನಿಗೆ ಎಬ್ಬಿಸಿ ನೊಡಲಾಗಿ ಅವನ ಮುಖಕ್ಕೆ ರಕ್ತಗಾಯವಾಗಿತ್ತು ಬಾಯಿ ,ತುಟಿ ಬಡಿದು ರಕ್ತ ಗಾಯವಾಗಿತ್ತು ನಂತರ ಬಸ್ಸ ಚಾಲಕನು ಬಸ್ಸ ಅಲ್ಲೇ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಸಬಾನಾ ಗಂಡ ಮಹ್ಮದ ಶೇಖ, ಸಾ|| ಶ್ರೀನಿವಾಸ ಸರಡಗಿ ಗ್ರಾಮ ಇವರು ದಿನಾಂಕ: 06/06/2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಆಬೀದಾಬೇಗಂ ಗಂಡ ಉಸ್ಮಾನ ಸಾಬ ಶೇಖ ಇಬ್ಬರು ಮಜೀದ ಎದುರುಗಡೆ ರಸ್ತೆಯ ಮೇಲೆ ನಡೆಯುತ್ತಾ ಹೊರಟಾಗ 1) ಅಬ್ದುಲ ಜಲೀಲ ತಂದೆ ಖಾಜಾಸಾಬ ಲದಾಫ,  2) ಖಲೀಲ ತಂದೆ ಖಾಜಾಸಾಬ ಲದಾಫ, 3) ಮಹಿಬೂಬ ತಂದೆ ರುಸ್ತುಮ ಲದಾಫ,  4) ತೌಸಿಫ ತಂದೆ ಲಿಯಾಖತ ಲದಾಫ, 5) ಅಲಿ ತಂದೆ ಇಬ್ರಾಹಿಂ ಲದಾಫ, 6) ಮೈಮುದಾ ಗಂಡ ಜಾವೀದ ಲದಾಫ, 7) ಬೀಬೀ ಗಂಡ ಲಿಯಾಖತ ಲದಾಫ, 8) ಪರವಿನ ಗಂಡ ಇಬ್ರಾಹಿಂ ಲದಾಫ, 9) ಸರೀಫಾ ಗಂಡ ರುಸ್ತುಮ ಲದಾಫ ಎಲ್ಲರೂ ಸಾ|| ಶ್ರೀನಿವಾಸ ಸರಡಗಿ ಗ್ರಾಮ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದ್ದು ಅಲ್ಲದೆ ಅಬೀದಾಬೇಗಂ ಇವಳೀಗೂ ಸಹ ಕೈಯಿಂದ ಮೈಕೈಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಅಬ್ದುಲ ಜಲೀಲ ತಂದೆ ಖಾಜಾಸಾಬ ಲದಾಫ, ಸಾ|| ಶ್ರೀನಿವಾಸ ಸರಡಗಿ ಇವರು ದಿನಾಂಕ: 06/06/2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಫರವೀನ ಗಂಡ ಇಬ್ರಾಹಿಂ, ಶರೀಫಾ ಗಂಡ ರುಸ್ತುಮ, ಕೂಡಿಕೊಂಡು ನಮ್ಮೂರ ಮಜೀದ ಹತ್ತಿರ ರಸ್ತೆಯ ಮೇಲೆ ನಡೆಯುತ್ತಾ ಹೊರಟಾಗ ನಮ್ಮೂರ 1) ಮಹ್ಮದ ತಂದೆ ಶರಫೋದ್ದಿನ ಮುಲ್ಲಾ,  2) ಅನ್ಸರ ತಂದೆ ಬಶೀರಸಾಬ ಮುಲ್ಲಾ 3) ಅಶ್ಪಾಕ ತಂದೆ ಬಶೀರಸಾಬ ಮುಲ್ಲಾ  4) ಸೈಯದ ತಂದೆ ಮಹೆಬೂಬ ಮುಲ್ಲಾ 5) ರಶೀದ ತಂದೆ ಬಾಷುಮಿಯಾ ಮುಲ್ಲಾ 6) ರಫೀಕ ತಂದೆ ರಶೀದ ಮುಲ್ಲಾ  7) ರಜಾಕ ತಂದೆ ಬಾಬುಮಿಯಾ ಮುಲ್ಲಾ, 8) ತೋಲು ತಂದೆ ರಜಾಕ ಮುಲ್ಲಾ  9) ಸಬಾನಾ ಗಂಡ ಮಹ್ಮದ ಶೇಖ ಸಾ|| ಎಲ್ಲರೂ ಶ್ರೀನಿವಾಸ ಸರಡಗಿ ಗ್ರಾಮ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದವರೆ ನಮಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲೆ ಬಿದ್ದ ಹಿಡಿ ಗಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ. ನಮ್ಮ ಅಣ್ಣತಮ್ಮಕೀಯವರು ಬಿಡಿಸಲು ಬಂದಾಗ ಫರವೀನ ಇವಳಿಗೆ ಮಹ್ಮದ ಈತನು ಅವಾಚ್ಯ ಶಬ್ದಗಳಿಂದ ಬೈದು, ಲೈಂಗಿಕ ಕಿರುಕುಳ ನೀಡಿದ್ದು ಅಲ್ಲದೆ ಸರೀಫಾ ಇವಳಿಗೆ ಕೈಯಿಂದ ಮೈಕೈಗಳಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.