POLICE BHAVAN KALABURAGI

POLICE BHAVAN KALABURAGI

02 June 2015

Kalaburagi District Reported Crimes

ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶ್ರೀಕಾಂತ ತಂದೆ ಕವಿರಾಜ ಮಾಲಿ ಪಾಟೀಲ ಸಾ: ದಸ್ತಾಪೂರ ತಾ:ಜಿ: ಕಲಬುರಗಿ ಇವರು ದಿನಾಂಕ:01/06/2015 ರಂದು ಕಾರ ಹುಣ್ಣಿಮೆ ಹಬ್ಬವಿದ್ದ ಪ್ರಯುಕ್ತ ನಮ್ಮೂರ ದಸ್ತಾಪೂರ ಗ್ರಾಮಕ್ಕೆ ನಾನು, ನನ್ನ ತಂಗಿ ಅಕ್ಷತಾ ಇಬ್ಬರು ಕೂಡಿಕೊಂಡು ನನ್ನ ಕೆ.ಟಿ.ಎಂ. ಡ್ಯೂಕ ಹೊಸ ಮೋ.ಸೈಕಲ ಮೇಲೆ ಕುಳಿತುಕೊಂಡು ಕಲಬುರಗಿ ಮನೆಯಿಂದ ಕಲಬುರಗಿ ಹುಮನಾಬಾದ ಎನ್.ಹೆಚ್. 218 ರೋಡಿನ ಮುಖಾಂತರ ಹೊರಟಿದ್ದು ಮೋ.ಸೈಕಲನ್ನು ನಾನೇ ಚಲಾಯಿಸುತ್ತಿದ್ದು. ಮುಂದೆ ಕುರಿಕೋಟಾ ಸೇತುವೆ ಮೇಲೆ ಹೋಗುತ್ತಿದ್ದಾಗ ನನ್ನ ಮುಂದುಗಡೆ ಹೋಗುತ್ತಿದ್ದ ಟ್ಯಾಂಕರ ನಂ. ಕೆಎ:38-6206 ನೇದ್ದಕ್ಕೆ ಹಾರ್ನ ಮಾಡಿದಾಗ ಅದರ ಚಾಲಕನು ಬಲಗಡೆ ಸೈಡ ಕೊಡುವ ಹಾಗೆ ಮಾಡಿದಾಗ ನಾನು ನನ್ನ ಮೋ.ಸೈಕಲನ್ನು ಸೈಡ ತೆಗೆದುಕೊಂಡು ಮುಂದೆ ಹೋಗುವಷ್ಟರಲ್ಲಿ ಟ್ಯಾಂಕರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಒಮ್ಮೇಲೆ ಬಲಭಾಗಕ್ಕೆ ತೆಗೆದುಕೊಂಡು ನಮ್ಮ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನಾವು ರೋಡಿನ ಮೇಲೆ ಬಿದ್ದಾಗ ನಮ್ಮ ಹಿಂದುಗಡೆ ಮೋ.ಸೈಕಲ ಮೇಲೆ ಬರುತ್ತಿದ್ದ ನಮ್ಮೂರಿನ ಜಯವಂತ  ಧಮ್ಮೂರ ಮತ್ತು ಪರಮೇಶ್ವರ ಕೊಟ್ಟರಗಿ ಇವರು ಬಂದು ನಮಗೆ ಎಬ್ಬಿಸುತ್ತಿದ್ದಾಗ ಟ್ಯಾಂಕರ ಚಾಲಕನು ಕೂಡಾ ತನ್ನ ವಾಹನವನ್ನು ಮುಂದೆ ಹೋಗಿ ನಿಲ್ಲಿಸಿ, ಬಂದು ನೋಡಲಾಗಿ, ನನ್ನ ತಂಗಿ ಅಕ್ಷತಾ ಇವಳಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದು ಎಡಗೈ ಬಲಗ ಹತ್ತಿರ, ಬೆನ್ನು ಮತ್ತು ಟೊಂಕ್ಕೆ ರಕ್ತಗಾಯವಾಗಿದ್ದು, ನನಗೆ  ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ಟ್ಯಾಂಕರ ಚಾಲಕನ ಹೆಸರು ವಿಚಾರಿಸಲಾಗಿ, ಆತನು ತನ್ನ ಹೆಸರು ಮಹಾದೇವ ತಂದೆ ಅಣ್ಣಾರಾವ ಸಾ: ಹಳ್ಳಿಖೇಡ(ಕೆ) ಅಂತಾ ತಿಳಿಸಿದನು. ನಾವು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಳ್ಳುವಾಗ ಸದರಿ ಟ್ಯಾಂಕರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ನಂತರ ನಾವು ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿ ತಂಗಿ ಅಕ್ಷತಾ ಇವಳು ರಾತ್ರಿ ಮೃತಪಟ್ಟಿರುತ್ತಾಳೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಪ್ರಕಾಶರೆಡ್ಡಿ ತಂದೆ ರಘುನಾಥರೆಡ್ಡಿ ಪಾಟೀಲ ಸಾ|| ಯಾನಾಗುಂದಿ ಗ್ರಾಮ ಇವರು ಈ ವರ್ಷ ಗ್ರಾಮಪಂಚಾಯತಿ ಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಆಗಿದ್ದು ನಮ್ಮ ಎದರಾಳಿಯಾಗಿ ನಮ್ಮುರ ನಮ್ಮ ಜಾತಿಯವರಾದ ವೆಂಕಟರೆಡ್ಡಿ ತಂ/ ನಾರಾಯಣರೆಡ್ಡಿ ಪೊತಲ ಇತನು ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದು ಇರುತ್ತದೆ ನಾನು ಈ ಚುನಾವಣೆಯಲ್ಲಿ ಗ್ರಾಮದಲ್ಲಿ ಪ್ರಚಾರ ಮಾಡಲು ಹೊದಾಗ ನನಗೆ ಸದರಿ ನಮ್ಮ ಎದುರಾಳಿಯಾದ ವೆಂಕಟರೆಡ್ಡಿ ಹಾಗು ಅವರ ಭೆಂಬಲಿಗರು ನನಗೆ ಭೋಸಡಿ ಮಗನೆ ನಮ್ಮ ಎದರು ನೀನು ಯಾಕೆ? ನಿಂತಿದ್ದಿ ನೀನು ಊರಲ್ಲಿ ಪ್ರಚಾರ ಮಾಡಬೇಡಾ ಅಂತಾನನಗೆ ಹಾಗು ನನ್ನ ಬೆಂಬಲಿಗರಿಗೆ ಹೇದರಿಸುತಿದ್ದರು ನಾನು ಈ ಚುನಾವಣೆ ಸಂಧ್ರರ್ಭದಲ್ಲಿ ಜಗಳ ಮಾಡುವದು ಬೇಡಾ ಅಂತಾ ಅವರ ಬೈದರು ನಾನು ಬೈಯಿಸಿ ಕೊಂಡು ಸುಮ್ಮನೆ ಪ್ರಚಾರ ಮಾಡಿದ್ದು ನನಗೆ ಜನರ ಬೆಂಬಲವಿದ್ದರಿಂದ ಅವರು ನನಗೆ ಹೇಗಾದರು ಮಾಡಿ ಹೆದರಿಸಿ ನನಗೆ ಚುನಾವಣೆಯಲ್ಲಿ ಸೋಲಿಸಬೇಕು ಅಂತಾ ಜಗಳ ಮಾಡುತಿದ್ದು ದಿನಾಂಕ 02-06-2015 ರಂದು ರಾತ್ತಿ 12-30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ಅಣ್ಣತಮ್ಮಕಿವರು ಎಲ್ಲೋರು ಮಾತಾಡುತ್ತಾ ನಮ್ಮ ಮನೆಯ ಮುಂದೆ ಕುಳಿತಿದ್ದಾಗ ನಮ್ಮ ಎದುರಾಳಿ ಪಕ್ಷದವರಾದ 1] ವೆಂಕಟರೆಡ್ಡಿ ತಂ/ ನಾರಾಯಣರೆಡ್ಡಿ ಪೊತುಲ ಹಾಗು ಅವರ ಬೆಂಬಲಿಗರಾದ 2] ಮಲ್ಲೇಶ ತಂ/ ರಾಮುಲು  ಕುರಬರ 3] ರಾಮರೆಡ್ಡಿ ತಂ/ ಸಾಯಿರೆಡ್ಡಿ ದ್ಯಾಪೊರ, 4] ವಿಷ್ಣುವರ್ದನರೆಡ್ಡಿ ತಂ/ ಬಸರೆಡ್ಡಿ ನಾಣಾಪುರ, 5] ಮೈಪಲರೆಡ್ಡಿ ತಂ/ ನಾರಾಯಣರೆಡ್ಡಿ ಪೊತುಲ 6] ಸಂಜೀವರೆಡ್ಡಿ ತಂ/ ಅನಂತರೆಡ್ಡಿ ಪೊತುಲ  7] ಲಕ್ಷ್ಮಿಕಾಂತರೆಡ್ಡಿ ತಂ/ ಅನಂತರೆಡ್ಡಿ ಪೊತುಲ 8] ಹಣಮಿರೆಡ್ಡಿ ತಂ/ ಬಸರೆಡ್ಡಿ ದುಗನೂರ 9] ರಾಮರೆಡ್ಡಿ ತಂ/ ಬಸರೆಡ್ಡಿ ದುಗನೂರ 10] ತಿರುಪತಿರೆಡ್ಡಿ ತಂ/ ವೆಂಕಟರೆಡ್ಡಿ  ದುಗನೂರ .11] ಶಾಮಪ್ಪಾ ಮುಸ್ಟಿ ಕಬ್ಬಲಿಗೇರ 12] ಶ್ರೀನಿವಾಸ ತಂ/ ರಾಮುಲು ಕುರಬರ 13] ಮಹೆಂದ್ರರೆಡ್ಡಿ ತಂ/ ನರಸರೆಡ್ಡಿ ಪೊತುಲ 14] ನರೆಂದ್ರೆಡ್ಡಿ ತಂ/ ನರಸರೆಡ್ಡಿ ಪೊತುಲ 15] ಗೋಪಾಲರೆಡ್ಡಿ ತಂ/ ರಾಮರೆಡ್ಡಿ ಪೊತುಲ 16] ಅಶೋಕರೆಡ್ಡಿ ತಂ/ ಶ್ರೀನಿವಾಸರೆಡ್ಡಿ ಕುಲಕರ್ಣಿ 17] ದೊಡ್ಡ ಮೌಲಾನಾ ತಂ/ ಕರಿಮಸಾಬ ಪಠಾಣ 18] ಸಣ್ಣ ಮೌಲಾನಾ ತಂ/ ಕರಿಮಸಾಬ ಪಠಾಣ 19] ಪಾಶ್ಯಾ ತಂ/ ಕರೀಮಸಾಬ ಫಠಾಣ 20] ಸದ್ದಾಮ ಹುಸೇನ ತಂ/ ದೊಡ್ಡ ಮೌಲಾನಾ ಪಠಾಣಾ ಸಾ|| ಎಲ್ಲೋರು ಯಾನಾಗುಂದಿ ಎಲ್ಲೋರು ಕೂಡಿ ಕೈಯಲ್ಲಿ ಕಲ್ಲು ಬಡಿಗೆ ರಾಡ ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ನನಗೆ ಸದರಿ ವೆಂಕಟರೆಡ್ಡಿ ಹಾಗು ಅವರ ಬೆಂಬಲಿಗರು ಕೂಡಿ ಏ ಭೋಸಡಿ ಮಗನೆ ಪ್ರಕಾಶ್ಯಾ ಕುಂಡ್ಯಾಗ ದಮ್ಮ ಇದ್ದರ ಹೊರಗಡೆ ಬಾರಲೆ ಸೂಳೆ ಮಗನೆ ನೀನು ನಮ್ಮ ಎದರು ಚುನವಣೆಗೆ ನಿಲ್ಲುತ್ತಿ ಭೋಸಡಿ ಮಗನೆ ನಿನಗೆ ಸೊಕ್ಕು ಬಂದಿದೆ ಮಗನೆ ಇವತು ನಿನಗೆ ಬಿಡುವದಿಲ್ಲಾ ಹೊಡೆದು ಖಲಾಸ ಮಾಡುತ್ತವೆ ಅಂತಾ ಬೈಯುತಿದ್ದಾಗ ನಾನು ಹಾಗು ನಮ್ಮ ಅಣ್ಣಾ ತಮ್ಮಂದಿರಾದ ಬ್ರಹ್ಮನಂದರೆಡ್ಡಿ ತಂ/ ರಾಮಚೆಂದ್ರರೆಡ್ಡಿ , ಸತ್ಯಾನಾರಾಯಣರೆಡ್ಡಿ ತಂ/ ರಾಮಚೆಂದ್ರರೆಡ್ಡಿ ಇವರುಗಳು ಕೂಡಿ ಸದರಿ ವೆಂಕಟರೆಡ್ಡಿ  ಹಾಗು ಸಂಗಡಿಗರಿಗೆ ನೀವು ಹಿಗೆ ಜಗಳ ಮಾಡುವದು ಸರಿ ಅಲ್ಲಾ ನಾವು ನಿಮಗೆ ಎನು ಮಾಡಿದ್ದೆ ವೆ ಅಂತಾ ಕೇಳಿದಕ್ಕೆ 1) ವೆಂಕಟರೆಡ್ಡಿ ಇತನು ಭೋಸಡಿ ಮಗನೆ ನಮ್ಮ ಎದರು ಚುನಾವಣೆಗೆ ಯಾಕೆ? ನಿಂತಿದ್ದಿ ಅಂತಾ ನನ್ನ ಎದೆಯ ಮೆಲಿನ ಅಂಗಿ ಹಿಡಿದು ಕೈಯಿಂದ ಹೊಟ್ಟೆಗೆ ಗುದ್ದಿದನು ಇವರ ಬೆಂಬಲಿಗರು ನಮಗೆಲ್ಲರಿಗು ಕೈಯಿಂದ ಕಲ್ಲಿನಿಂದ ಬಡಿಗಯಿಂದ ರಾಗಳಿಂದ ಹೊಡೆ ಬಡೆ ಮಾಡಿ ಗುಪ್ತಗಾಯ ರಕ್ತಗಾಯಪಡಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮುಧೋಳ ಠಾಣೆ : ಶ್ರೀ ಮೈಪಾಲರೆಡ್ಡಿ ತಂದೆ ನಾರಾಯಣರೆಡ್ಡಿ ಪೋತುಲ್ ಸಾ|| ಯಾನಾಗುಂದಿ ತಾ|| ಸೇಡಂ ಇವರ ತಮ್ಮನಾದ ವೆಂಕಟರಡ್ಡಿ ತಂದೆ ನಾರಾಯಣ ರಡ್ಡಿ ಪೋತುಲ್ ಇವನು ನಮ್ಮ ಯಾನಾಗುಂದಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ನಿಂತಿರುತ್ತಾನೆ ನಮ್ಮ ತಮ್ಮನ ಎದುರಾಳಿಯಾಗಿ ನಮ್ಮ ಯಾನಾಗುಂದಿ ಗ್ರಾಮದ ಪ್ರಕಾಶ ರಡ್ಡಿ ತಂದೆ ರಘುನಾಥ ರಡ್ಡಿ ಪಾಟೀಲ್ ಇವರು ಗ್ರಾಮ ಪಂಚಾಯತಿ ಚುನಾವಣೆಗೆ ನಿಂತಿರುತ್ತಾನೆ ಈ ಗ್ರಾಮ, ಪಂಚಾಯತಿಯ ಚುನಾವಣೆಯಲ್ಲಿ  ನಮ್ಮ ತಮ್ಮನಾದ ವೆಂಕಟ ರಡ್ಡಿ ಇವನಿಗೆ ನಮ್ಮ ಗ್ರಾಮದಲ್ಲಿ ಜನ ಬೆಂಬಲ ಹೆಚ್ಚಾಗಿರುತ್ತದೆ ನಮ್ಮಯಾನಾಗುಂದಿ ಗ್ರಾಮದ ಹನುಮಾನ ಗುಂಡಿಯ ಹಿಂದೆ ದಿನಾಂಕ 02-06-2015 ರಂದು ರಾತ್ರಿ 12-45 ಗಂಟೆಯ ಸುಮಾರಿಗೆ ನಾನು ಮತ್ತು  ನಮ್ಮ ಅಣ್ಣ ತಮ್ಮಕಿಯವರಾದ ಲಕ್ಷ್ಮಿಕಾಂತ ರಡ್ಡಿ ತಂದೆ ಅನಂತರಡ್ಡಿ ಪೊತುಲ್ ಮತ್ತು ಮಾಣಿಕರಡ್ಡಿ ತಂದೆ ಶಿವರಾಮ ರಡ್ಡಿ  ಮಲ್ಲೇಶಿ ತಂದೆ ರಾಮಲು ಹಾಗು ಪಾಶ್ಯಾ ತಂದೆ ಕರೀಮಸಾಬ ಚುನಾವಣೆಯ ಬಗ್ಗೆ ಮಾತಾಡುತ್ತಾ ನಿಂತಿದೆವು ಆಗ ಇದನ್ನು ಸಹಿಸದ 1] ಪ್ರಕಾಶ ರಡ್ಡಿ ತಂದೆ ರಘುನಾಥ ರಡ್ಡಿ ಪಾಟೀಲ್ ಇವರು ಮತ್ತು ಇವನ ಬೆಂಬಲಿಗರಾದ 2] ಪ್ರತಾಪರಡ್ಡಿ ತಂದೆ ರಘುನಾಥ ರಡ್ಡಿ ಪಾಟೀಲ್ 3] ಬ್ರಹ್ಮಾನಂದ ರಡ್ಡಿ ತಂದೆ ರಾಮಚಂದ್ರ ರಡ್ಡಿ ಪಾಟಿಲ್ 4] ಸತ್ಯನಾರಾಯಣ ರಡ್ಡಿ ರಾಮಚಂದ್ರ ರಡ್ಡಿ ಪಾಟಿಲ್ 5] ಅಮೀರ ಹುಸೇನ್ ತಂದೆ ಖಾಜಾಗುಸೇನ್ 6] ಮೈನೊದ್ದಿನ ತಂದೆ ತಂದೆ ಖಾಜಾ ಹುಸೇನ್ 7] ಜಾಕೀರ ಹುಸೇನ್ ತಂದೆ ಇಬ್ರಾಹಿಂಸಾಬ 8] ರಾಜಶೇಖರ ತಂದೆ ಶರಣಪ್ಪಾ ಅವಂಟಿ 9] ರಾಮರಡ್ಡಿ ತಂದೆ ಬ್ರಹ್ಮಾನಂದರಡ್ಡಿ 10] ರಾಘವೆಂದ್ರ ರಡ್ಡಿ ತಂದೆ ಸತ್ಯನಾರಾಯಣ ರಡ್ಡಿ ಪಾಟೀಲ್ 11] ರಘುನಾಥರಡ್ಡಿ ತಂದೆ ಪ್ರಕಾಶರಡ್ಡಿ ಪಾಟೀಲ್ 12] ರವಿಕುಮಾರ ರಡ್ಡಿ ತಂದೆ ಪ್ರಕಾಶ ರಡ್ಡಿ 13] ಭೀಮರಡ್ಡಿ ತಂದೆ ರಾಮರಡ್ಡಿ ಸಾ|| ನಾರಾಯಣಪೇಟ 14] ರಘುಪತ ರಡ್ಡಿ ತಂದೆ ರಾಮರಡ್ಡಿ ಪಾಟೀಲ್ ಪಾಟೀಲ್ 15] ಚಂದ್ರಶೇಖರ ತಂದೆ ಶರಣಪ್ಪಾ ಅವಂಟಿ 16] ರಾಮರಡ್ಡಿ ತಂದೆ ಸತ್ಯನಾರಾಯಣರಡ್ಡಿ ಪಾಟೀಲ್ 17] ಖಲೀಲ್ ತಂದೆ ಕರೀಮ ಸಾ || ಚಂಡಕ್ರಿ 18] ಸಂದಿರಡ್ಡಿ ತಂದೆ ರಾಮರಡ್ಡಿ ದುಗನೂರ   ಇವರು ಕೂಡಿ ಇವರಿಗೆ ನೀವು ಏ ಭೋಸಡಿ ಮಕ್ಕಳೆ ನಾವು ಈ ಊರಿನ ಪೋಲಿಸ ಪಾಟೀಲ್ ಇದ್ದೆವೆ ನೀವು ಪ್ರಕಾಶ ರಡ್ಡಿ ತಂದೆ ರಘುನಾಥ ರಡ್ಡಿ ಪಾಟೀಲ್ ಇವರಿಗೆ ನಿಮ್ಮ ಓಟು ಹಾಕಬೇಕು ನೀವು ಓಟ ಹಾಕದ್ದಿದರೆ ಊರಲ್ಲಿ ಹೇಗೆ ಸಂಸಾರ ಮಾಡುತ್ತಿರಿ ನಾವು ನೋಡುತ್ತೆವೆ ಎಂದು ಹೆದರಿಸುತ್ತಿದ್ದರು ಆಗ ನಾನು ಅವರಿಗೆ ನಮ್ಮ ಬೆಂಬಿಗರಿಗೆ ಯಾಕೆ ? ಹೆದರಿಸುತ್ತಿದ್ದರಿ ಅಂತಾ ಕೇಳಿರುತ್ತೆನೆ ಅದಕ್ಕೆ ಅವರು ನನಗೆ ಏ ಭೋಸಡಿ ಮಗನೇ ನೀನು ನಮ್ಮಗೆ ಏದರು ಮಾತಾಡುವಷ್ಟು ಬೆಳೆದಿದೆನು ಅಂತಾ ಅವ್ಯಾಚ ಶಬ್ದ ಗಳಿಂದ ಬೈದ್ದು ನನಗೆ ಮತ್ತು ನಮ್ಮ ತಮ್ಮನಿಗೆ ಹಾಗು ಅವನ ಸಂಗಡಿಗರಿಗೆ ಕಲ್ಲಿನಿಂದ ಕೈಕಿಂದ ಬಡಿಗೆಯಿಂದ ಹಾಗು ಕಬ್ಬಿಣದ ರಾಡನಿಂದ ಹೊಡೆ ಬಡೆ ಮಾಡಿ ಗುಪ್ತಗಾಯ ಹಾಗು ರಕ್ತಗಾಯಪಡಿಸಿ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ನರಸಪ್ಪ ತಂದೆ ಮಹಾದೇವಪ್ಪ ಹಡಪದ ಸಾ|| ಇಟಕಾಲ ಗ್ರಾಮ ಇವರ ಅಣ್ಣ ಮಾರುತಿ ತಂದೆ ಮಹಾದೇವಪ್ಪ ಹಡಪದ ಇಬ್ಬರೂ ಅಣ್ಣತಮ್ಮಂದಿರು ಇದ್ದು ನಾವಿಬ್ಬರು ಇಗ 8-10 ವರ್ಷಗಳ ಹಿಂದೆ ಬೇರೆ ಬೇರೆಯಾಗಿದ್ದು ನಮ್ಮದು ಒಟ್ಟು 8 ಎಕರೆ ಹೊಲವಿದ್ದು ಇದರಲ್ಲಿ ನಮ್ಮ ಅಣ್ಣ ಮಾರುತಿ ಇತನು 5 ಎಕರೆ ಹೊಲ ತೆಗೆದುಕೊಂಡು ನನಗೆ 3 ಎಕರೆ ಹೊಲ ಪಾಲು ಕೊಟ್ಟಿದ್ದು ಆದರೆ ಎಲ್ಲಾ ಒಟ್ಟು 8 ಎಕರೆ ಹೊಲವು ತನ್ನ ಹೆಸರಿನಿಂದ ಮಾಡಿಸಿಕೊಂಡಿದ್ದು ನಾನು ಇಗ 5-6 ವರ್ಷಗಳಿಂದ ನನ್ನ ಪಾಲಿಗೆ ಬಂದ ಹೊಲ ನನ್ನ ಹೆಸರಿನಿಂದ ಮಾಡಿಸು ಅಂತಾ ನಮ್ಮ ಅಣ್ಣನಾದ ಮಾರುತಿ ಇತನಿಗೆ ಕೇಳುತ್ತಾ ಬಂದಿದ್ದು ನಮ್ಮ ಅಣ್ಣ ಮಾರುತಿ ಹಾಗೂ ಇತನ ಮಕ್ಕಳಾದ ಲಾಲಪ್ಪ, ದೊಡ್ಡ ಮಹಾದೇವಪ್ಪ ಇವರು ನನಗೆ ಬೋಸಡಿ ಮಗನೆ ನಿನಗೆ ಯಾವುದೇ ಹೊಲ ಕೊಡುವುದಿಲ್ಲ ನಿನಗೆ ಹೊಡೆದು ಖಲಾಸ್ ಮಾಡಿ 3 ಎಕರೆ ಹೊಲವು ಸಹ ನಾವೆ ತೆಗೆದುಕೊಳ್ಳುತ್ತೇವೆ ಅಂತಾ ಆಗಾಗ ನನ್ನೊಂದಿಗೆ ಜಗಳ ತೆಗೆಯುತ್ತಿದ್ದರು. ದಿನಾಂಕ: 31-05-15 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿ ಕಮಲಮ್ಮ ಗಂಡ ನರಸಪ್ಪ ಹಡಪದ ಇಬ್ಬರೂ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತ್ತಿದ್ದಾಗ ನಮ್ಮ ಮನೆಯ ಪಕ್ಕದಲ್ಲಿರುವ ನಮ್ಮ ಅಣ್ಣನಾದ ಮಾರುತಿ ತಂದೆ ಮಹಾದೇವಪ್ಪ ಹಾಗೂ ಇತನ ಇಬ್ಬರೂ ಮಕ್ಕಳಾದ ಲಾಲಪ್ಪ ತಂದೆ ಮಾರುತಿ ಮತ್ತು ದೊಡ್ಡ ಮಹಾದೇವಪ್ಪ ತಂದೆ ಮಾರುತಿ ಇವರು ಮೂರು ಜನರು ಕೂಡಿ ನನಗೆ ಬೋಸಡಿ ಮಗನೆ ನೀನು 3 ಎಕರೆ ಹೊಲ ನಿನ್ನ ಹೆಸರಿಗೆ ಮಾಡಿಸು ಅಂತಾ ಜಗಳ ಮಾಡುತ್ತಿ ಮಗನೆ ನೀವು ಈ ಹೊಲ ಮನೆ ಬಿಟ್ಟು ಊರು ಬಿಟ್ಟು ಎಲ್ಲಿಯಾದರು ಹೊಗಿರಿ ಈ ಹೊಲ ಮನೆ ನಮ್ಮ ಹೆಸರಿನಿಂದ ಇರುತ್ತವೆ ಅಂತಾ ಜಗಳ ತೆಗೆದಿದ್ದು, ಆಗ ನಾನು ಸದರಿಯವರಿಗೆ ಊರಲ್ಲಿ ಪಂಚಾಯಿತಿ ಮಾಡಿ ನನ್ನ ಪಾಲಿನ ಹೊಲ ನಾನು ತೆಗೆದುಕೊಳ್ಳುತ್ತೇನೆ ಅಂತಾ ಹೇಳಿದಾಗ ನಮ್ಮ ಅಣ್ಣನ ಮಗನಾದ 1) ಲಾಲಪ್ಪ ತಂದೆ ಮಾರುತಿ ಇತನು ತನ್ನ ಮನೆಯಲ್ಲಿ ಹೋಗಿ ಒಂದು ಕೊಡಲಿಯನ್ನು ತೆಗೆದುಕೊಂಡು ಬಂದು ಆಸ್ತಿಯ ಪಾಲಿನ ಸಂಬಂಧವಾಗಿ ನನಗೆ ಕೊಲೆ ಮಾಡುವ ಉದ್ದೇಶದಿಂದ ಕೊಡಲಿಯಿಂದ ನನ್ನ ತಲೆಗೆ ಮುಂದುಗಡೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಅಲ್ಲದೆ ಇನ್ನೊಂದು ಎಟು ಕೊಡಲಿಯಿಂದ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದು ಕೊಡಲಿಯು ನನ್ನ ಎಡ ಕಿವಿಗೆ ತಗುಲಿ ಸ್ವಲ್ಪ ರಕ್ತಗಾಯವಾಗಿದ್ದು ಇದೆ. ಅಲ್ಲದೆ ಲಾಲಪ್ಪ ಇತನು ಕೊಡಲಿ ಹಿಂದುಗಡೆ ತುಂಬಿನಿಂದ ನನ್ನ ಬಲಗೈ ಮೊಣಕೈಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಅದೆ. ಇವರ ತಮ್ಮನಾದ 2) ದೊಡ್ಡ ಮಹಾದೇವಪ್ಪ ತಂದೆ ಮಾರುತಿ ಹಡಪದ ಇತನು ಬಡಿಗೆಯಿಂದ ನನ್ನ ಬಲಗಡೆ ಬೆನ್ನಿಗೆ ಎರಡು ಮೂರು ಎಟು ಹೊಡೆದು ಗುಪ್ತಗಾಯ ಪಡಿಸಿದ್ದು ಹಾಗೂ ಎಡಗಡೆ ಬುಜದ ಮೇಲೆ ಹೊಡೆದು ಗೀರಿದ ರಕ್ತಗಾಯ ಪಡಿಸಿದ್ದು ಅದೆ. ಆಗ ನನ್ನ ಹೆಂಡತಿ ಕಮಲಮ್ಮ ಇವಳು ನನ್ನ ಗಂಡನಿಗೆ ಹೊಡೆಯ ಬೇಡಿರಿ ಅಂತಾ ಬಿಡಿಸಲು ಬಂದಾಗ ಇವಳಿಗೆ ನಮ್ಮ ಅಣ್ಣನಾದ 3) ಮಾರುತಿ ತಂದೆ ಮಹಾದೇವಪ್ಪ ಹಡಪದ ಇತನು ಕೈಯಿಂದ ಬೆನ್ನ ಮೇಲೆ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ. ಅನಸೂಯಾ  ಗಂಡ  ಹಣಮಂತ  ರಾಮಗೋಳ  ಸಾ: ಧನ್ನೂರ  ಸದ್ಯ ಓಕಳಿ  ಗ್ರಾಮ  ತಾ;ಜಿ ಕಲಬುರಗಿ ರವರ ಮಗಳಾದ  ಕುಮಾರಿ. ಅಪೂರ್ವ  ಇವಳು  ದಿನಾಂಕ: 31/05/2015  ರಂದು  ಮನೆಯಲ್ಲಿ  ಯಾರೂ ಇರದ  ಸಮಯದಲ್ಲಿ  ಅಪೂರ್ವ  ಇವಳು ನೀರು  ತುಂಬಲು ಕಮಲಾಪೂರ  ವರನಾಳ  ರಸ್ತೆಯ  ನೀರಿನ  ಟಾಕಿಯ  ಹತ್ತಿರ ಬಂದಾಗ  ಅವಳನ್ನು  ವಿನೋದಕುಮಾರ  ತಂದೆ ಜಯಪ್ಪ ಗೊಟ್ಟೆನೋರ  ಸಾ: ಹಾರಕೂಡ  ಈತನು  ಓಕಳಿ  ಗ್ರಾಮದ  ಸುನೀಲ  ತಂದೆ  ನಾಮದೇವ ರಾಮಗೋಳ, ಶಾಲುಬಾಯಿಗಂಡ  ನಾಮದೇವ  ರಾಮಗೋಳ , ವಿಜಯಕುಮಾರ  ತಂದೆ  ಶಾಮರಾವ  ಶೇಟಗೋಳ, ಸತೀಶ  ಹಾರಕೂಡ,  ಗುಂಡಮ್ಮಗಂಡ  ಸತೀಶ , ಅನೀಲಕುಮಾರ ಶೇಟಗೋಳ, ಅಂಬಿಕಾ  ಗಂಡ  ಗುಂಡಪ್ಪ  ಧನ್ನಿ,  ಕುಮಾರ  ತಂದೆ ಶಾಮರಾವ  ಶೇಟಗೋಳ  ಇವರೆಲ್ಲರೂ  ಕೂಡಿಕೊಂಡು ಅಪೂರ್ವ  ಇವಳನ್ನು  ಪುಸುಲಾಯಿಸಿ ಒತ್ತಾಯಪೂರ್ವಕವಾಗಿ ತಾವು  ತಂದಿದ್ದ  ಕಾರಿನಲ್ಲಿ  ಅಪಹರಣ  ಮಾಡಿಕೊಂಡು ಹೋಗಿರುತ್ತಾರೆ, ಎಲ್ಲಾ ಕಡೆ ಹುಡುಕಾಡಿದರು ಸಹ ಸಿಕ್ಕಿರುವದಿಲ್ಲ.,  ಸದರಿ ಹುಡಗಿ ಗುಲಾಬಿ  ಬಣ್ಣದ ಚುಡಿದಾರ ಪೈಜಾಮ ಧರಿಸಿರುತ್ತಾಳೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

31 May 2015

Kalaburagi District Reported Crimes

ಅತ್ಯಾಚಾರ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಶಮಶೋದ್ದೀನ್ ತಂದೆ ಮೌಲಾನಸಾಬ ಸುಲ್ತಾನ ಸಾ: ದಂಡೋತಿ ರವರ ಮನೆಗೆ ಹೊಂದಿಕೊಂಡು ಸುನ್ನಿ ಮಜ್ಜಿದ ಇದ್ದು ಸುಮಾರು 8 ತಿಂಗಳಿಂದ ನಿಸಾರ ತಂದೆ ಮಹ್ಮದ ಅಬ್ಬಾಸ್ ವ: 22 ಸಾ: ಕೆ1-18/458 ಸಂಗಮ ವಿಹಾರ ಕಾಲಖಾಜಿ ದಕ್ಷಿಣ ದಿಲ್ಲಿ 110019 ಈತನು ನಮ್ಮ ಮುಸ್ಲಿಂ ಜನಾಂಗದ ಸಣ್ಣ ಮಕ್ಕಳಿಗೆ ಉದರ ಹಾಗೂ ಅರಬ್ಬಿಯ ಭಾಷಯಲ್ಲಿ ಕುರಾನ್ ಪಾಠ ಮಾಡುವುದು ಮತ್ತು ನಮಾಜ ಮಾಡಿಸುವುದು ಕೆಲಸ ಮಾಡುತ್ತಿದ್ದನು.  ಸದರಿ ನಿಸಾರ ಈತನು ಕೆಲವು ದಿವಸಗಳಿಂದ ನನ್ನ ಎರಡನೇ ಮಗಳಾದ ಜಬೀನ ಬೇಗಂ ಇವಳ ಸಂಗಡ ಮಾತನಾಡುವುದು ನೀರು ತರಿಸಿಕೊಂಡು ಕುಡಿಯುವುದು ಮಾಡುತ್ತಾ ಬಂದಿದ್ದು ನಾನು ಸದರಿ ನೀಸಾರ ಒಬ್ಬ ಧಾರ್ಮಿಕ ಶಿಕ್ಷಕನಿದ್ದು   ಒಳ್ಳೆಯ ವ್ಯಕ್ತಿ ಇರುತ್ತಾನೆ ಅಂತಾ ನಂಬಿ ನಾನು ಮತ್ತು ನನ್ನ ಹೆಂಡತ್ತಿ ಅವನಿಗೆ ಏನೋ ಅನ್ನದೆ ಸುಮ್ಮನೆ ಇರುತ್ತಿದ್ದೇವು. ದಿನಾಂಕ-30/05/2015 ರಂದು 10 ಎ.ಎಮ್ ಸುಮಾರಿಗೆ ನಾನು ನನ್ನ ದಿನನಿತ್ಯದ  ಕೆಲಸ ಕುರಿತು ಟಂ ಟಂ ತೆಗೆದುಕೊಂಡು ವಚ್ಚಾ, ಕಲಗುರತಿ ಗ್ರಾಮಗಳ ಹದ್ದಿಯಲ್ಲಿ ನಡೆದಿರುವ ಚಕ್ಕ ಡ್ಯಾಮ ಕಟ್ಟಡಗಳಿಗೆ ಸಾಮಾನುಗಳು ಒಯ್ದು ಇಳಿಸಿ ಮರಳಿ ರಾತ್ರಿ 1 ಎ.ಎಮ್ ಸುಮಾರಿಗೆ ಮನೆಗೆ ಬಂದು ಟಂ ಟಂ ನಿಲ್ಲಿಸಿ ಮನೆಯಲ್ಲಿ ಹೋಗಿ ನೋಡಲಾಗಿ ನನ್ನ 2 ನೇ ಮಗಳಾದ ಕುಮಾರಿ ಇವಳು ಹಾಸಿಗೆಯಲ್ಲಿ ಕಾಣಲ್ಲಿಲ ನಂತರ ನಾನು ನನ್ನ ಹೆಂಡತ್ತಿಗೆ ಎಬ್ಬಿಸಿ ಕೇಳಲಾಗಿ ರಾತ್ರಿ 8 ಗಂಟೆ ಸುಮಾರಿಗೆ ಎಲ್ಲರೂ ಊಟ ಮಾಡಿ ಇಲ್ಲೆ ಮಲಗಿದೇವು. ಎಲ್ಲಾದರೂ ಸಂಡಾಸಕ್ಕೆ ಅಥವಾ ಏಕಿಗೆ ಹೋಗಿರಬಹುದು ಅಂತಾ ತಿಳಿಸಿದಳು. ಆಗ ನಾನು ಮತ್ತು ನನ್ನ ಹೆಂಡತ್ತಿ ಸ್ವಲ್ಪ ಹೊತ್ತು ಕಾಯುತ್ತಾ ಇದ್ದಾಗ ನಮ್ಮ ಮನೆಯ ಬಾಜು ಇರುವ ಮಜೀದದಲ್ಲಿ ಗುಸು ಗುಸು ಮಾತನಾಡುವ ಸಪ್ಪಳ ಕೇಳಿ ಬಂದಿತ್ತು. ಆಗ ನಾವಿಬ್ಬರೂ ಮಜೀದದಲ್ಲಿ ಹೋಗಿ ನೀಸಾರ ವಾಸಮಾಡುವ ಕೋಣೆ ಹತ್ತಿರ ನಿಂತ್ತಾಗ ಒಳಗಿನಿಂದ ಮಾತನಾಡುವ ಸಪ್ಪಳ ಕೇಳಿ ಬಂದಿತ್ತು. ನಾವಿಬ್ಬರೂ ನಿಸಾರ ಈತನಿಗೆ ಬಾಗಿಲು ತೇರೆ ಅಂತಾ ಬಾಗಿಲು ಬಾರಿಸಿದರು ನಿಸಾರ ಈತನು ಬಾಗಿಲು ತೆರೆಯಲ್ಲಿಲ್ಲಾ ನಂತರ ನಾನು ನನ್ನ ಹೆಂಡತ್ತಿಗೆ ಅಲ್ಲೆ ಬಿಟ್ಟು ನಮ್ಮ ಮಜೀದ ಖಜಾಂಚಿ ಆದ ದಾದಾಮಿಯ್ಯಾ ಡೂಂಗಾ ಇವರ ಮನೆಗೆ ಹೋಗಿ ಅವರಿಗೆ ಎಬ್ಬಿಸಿ ಕರೆದುಕೊಂಡು ಬರವಷ್ಟರಲ್ಲಿ ಸದರಿ ನಿಸಾರ ಈತನು ಕೋಣೆಯ ಬಾಗಿಲು ತೆರೆದು ನನ್ನ ಮಗಳಿಗೆ ಹೊರಗೆ ಹೋಗು ಅಂತಾ ನೋಕಿಸಿ ಕೂಟ್ಟಿದನು. ಅಷ್ಟರಲ್ಲಿ ನಾವು ಬಂದು ಎಲ್ಲರೂ ಕೂಡಿ ನನ್ನ ಮಗಳಿಗೆ ಇಷ್ಟು ರಾತ್ರಿ ನಿಸಾರನ ಕೋಣೆಯಲ್ಲಿ ಏಕೆ ಹೋಗಿರಿವಿ ? ಅಂತಾ ವಿಚಾರಿಸಿದಾಗ ನನ್ನ ಮಗಳು ತಿಳಿಸಿದೇನೆಂದರೆ. ನಿಸಾರ ಈತನು ರಾತ್ರಿ 12-30 ಎ.ಎಮ್ ಸುಮಾರಿಗೆ ನಿನ್ನ ಸಂಗಡ ಸ್ವಲ್ಪ ಮಾತನಾಡುವುದು ಇದೆ ನನ್ನ ಕೋಣೆಗೆ ಬಾ ಅಂತಾ ಕರೆದನು. ಅದರಂತೆ ನಾನು ಆತನ ಕೋಣೆಗೆ ಹೋದಾಗ ನಿಸಾರ ಈತನು ನಾನು ನಿನಗೆ ಬಹಳ ಪ್ರೀತಿ ಮಾಡುತ್ತಿದ್ದೇನೆ ಹಾಗೂ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿ ಕೋಣೆಯ ಬಾಗಿಲ ಚಿಲಕ ಹಾಕಿ ನನಗೆ ವತ್ತಿ ಹಿಡಿದು ನನ್ನ ಅಂಗಾಂಗಗಳನ್ನು ಒತ್ತಿ ಹಿಡಿದು ಈಗ ಸದ್ಯ ಬೇಡ ಮದುವೆ ಆದ ನಂತರ ಮಾಡೋಣ ಅಂತಾ ತಿಳಿಸಿದರು ಕೂಡ  ನನ್ನ ಮಾತಿಗೆ ಬೆಲೆ  ಕೊಡದೆ  ಜಬ್ಬರದಸ್ತಿಯಿಂದ ನನ್ನ ಮೈಮೇಲಿನ ಚೋಡಿದಾರ ಪೈಜಾಮ ನಾಡಿ ಬಿಚ್ಚಿ ಕಳೆದು ಕೆಳಗೆ ಮಲಗಿಸಿ ಜಬರಿ ಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ 31-05-2015 ರಂದು ರಾತ್ರಿ 10 ಗಂಟೆ ಸುಮಾರಿಗೆ ಕಲ್ಲೂರ (ಕೆ) ಗ್ರಾಮದಲ್ಲಿ ಗ್ರಾಮ ಪಂಚಾಯತ ಚುನಾವಣೆ ಪ್ರಚರ ಸಂಬಂಧ ಎರಡು ಗುಂಪುಗಳ ಮಧ್ಯ ಗಲಾಟೆ ನಡೆಯುತ್ತಿದೆ ಅಂತಾ ತಿಳಿದು ಬಂದ ಮೇರೆಗೆ ಪಿ.ಎಸ್.ಐ. ಕಪೀಲ ದೇವ ಹಾಗು ಸಿಬ್ಬಂದಿಯವರಾದ ಚಂದ್ರಕಾಂತ ಹೆಚ್.ಸಿ. ಮಲ್ಲಣ್ಣ ಪಿ.ಸಿ. ಹಾಗು ಡಿ.ಎ.ಆರ. ಪ್ಹಾರ ಬಲವನ್ನು ತೆಗೆದುಕೊಂಡು ಸದರ ಗ್ರಾಮಕ್ಕೆ ಹೋದಾಗ ಕಲ್ಲೂರ (ಕೆ) ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಹರಿಜನ ಸಮಾಜದವರಿಗೂ ಮತ್ತು ಗ್ರಾಮಸ್ಥರ ಮಧ್ಯ ಬಾಯಿ ಮಾತಿನ ತಕರಾರು ನಡೆಯುತ್ತಿದ್ದುದನ್ನು ಗಮನಿಸಿ ಎರಡು ಗುಂಪಿನ ಜನರಿಗೆ ತಿಳಿಹೇಳಿದರು ಕೇಳದೆ ಗಲಾಟೆ ಮಾಡುತ್ತಿರುವಾಗ ನಾವು ಜನರಿಗೆ ಚದುರಿಸಲು ಮುಂದೆ ಹೋದಾಗ ಅವರಲ್ಲಿ ಭೂತಾಳಿ ತಂದೆ ಓಗಪ್ಪಾದಾವಜಿ, ರಮೇಶ ತಂದೆ ಓಗಪ್ಪಾ ದಾವಜಿ, ಶ್ರೀಶೈಲ ತಂದೆ ಮಲ್ಲೇಶಿ, ಶ್ರೀಕಾಂತ ತಂದೆ ಮಲ್ಕಣ್ಣ,ಬಾಬು ತಂದೆ ಸಿದ್ದಪ್ಪ, ಶಿವಕುಮಾರ ತಂದೆ ಓಗಪ್ಪಾ ದಾವಜಿ, ಸೋಮರಾಯ ದಾವಜಿ, ಬಾಪು ಎಲಗೋಡ, ರಮೇಶ ಕಲಶೆಟ್ಟಿ, ಹಾಗು ಇನ್ನು 15-20 ಜನರು ಕೈಯಲ್ಲಿ ಬಡಿಗಡ ,ಕಲ್ಲು, ರಾಡಗಳನ್ನು ಹಿಡಿದುಕೊಂಡು ಆಕ್ರಮ ಕೂಟ ರಚಿಸಿಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹೊಡೆ ಬಡೆ ಮಾಡಿ ಗಾಯಗೊಳಿಸಿ ಸರಕಾರಿ ವಾಹನಗಳನ್ನು ಜಕಂಗೊಳಿಸಿರುತ್ತಾರೆ ಅಂತಾ  ಶ್ರೀ ಕಪೀಲದೇವ ಪಿ.ಎಸ್.ಐ. ನೆಲೋಗಿ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

30 May 2015

Kalaburagi District Reported Crimes

ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಚಂದ್ರಕಾಂತ ರಾಠೋಡ ಸಾ|| ಮಾದಾಬಾಳ ತಾಂಡಾ ರವಎ ಮಗಳಾದ ಕುಮಾರಿ ಇವಳು ದಿನಾಂಕ 29-05-2015 ರಂದು 6;30 ಪಿ.ಎಂ ಸುಮಾರಿಗೆ ನನ್ನ ಮಗಳು ಬೈಹಿರದೆಸೆಗೆ ಹೋಗಿದ್ದು  ಸ್ವಲ್ಪಹೊತ್ತಾದ ನಂತರ ನನ್ನ ಮಗಳು ಗಾಬರಿಗೊಂಡು ಓಡುತ್ತಾ ಬಂದು ಹೇಳಿದ್ದೇನೆಂದರೆ, ನಾನು ಮತ್ತು ತಂಗಿ ಕೂಡಿ ಬೈಹಿರದೆಸೆಗೆ ಶಿವಪ್ಪಾ ಕರಜಗಿ ರವರ ಹೊಲದ ಅರಣಿಯ ಮೇಲಿಂದ ಹೋಗುತ್ತಿದ್ದಾಗ, ಎದುರುಗಡೆಯಿಂದ ಒಬ್ಬನು ಮೋಟರ ಸೈಕಲ ತೆಗೆದುಕೊಂಡು ಬಂದು ನಮಗೆ ತಡೆದು ನಿಲ್ಲಿಸಿ ನಿಮ್ಮ ತಾಂಡಾದಲ್ಲಿ ಮೋತಿರಾಮ ಎಂಬುವನು ಯಾರು ಅಂತಾ ಕೇಳಿದನು, ಆಗ ನಾನು ಗಾಬರಿಗೊಂಡು ನಮಗೆ ಗೊತ್ತಿಲ್ಲಾ ಅಂತಾ ಹೇಳಿ ಮುಂದೆ ಹೊರಟೆನೆ, ತನ್ನ ಬೈಕನ್ನು ಸ್ಥಳದಲ್ಲೆ ನಿಲ್ಲಿಸಿ ನನ್ನ ಹಿಂದೆ ಬಂದು ನನ್ನ ಕೈಹಿಡಿದು ಎಳೆದು ಏ ಲಂಬಾಣಿ ನಿನಗ ಮೋತಿರಾಮ ಯಾರು ಅಂತಾ ಗೊತ್ತಿಲ್ಲಾ ಅಂತಾ ಅಂತಿಯಾ ಅಂದು ನನ್ನ ಕೈಹಿಡಿದು ಎಳೆಯುತ್ತಿದ್ದನು, ಆಗ ನಾನು ಅವನ ಕೈಗೆ ಕಚ್ಚಿ ಅವನಿಂದ ಬಿಡಿಸಿಕೊಂಡು ಓಡುತ್ತಿದ್ದಾಗ ಪುನಃ ಅವನು ನನಗೆ ಹಿಡಿದು ಎಡಗಡೆ ರಟ್ಟೆಯ ಮೇಲೆ ಕಚ್ಚಿದನು, ನಂತರ ನನ್ನ ಮೈ ಮೇಲಿನ ಚುಡಿದಾರನ್ನು ಹಿಂದಿನಿಂದ ಹರಿದು ನೆಲದ ಮೇಲೆ ಕೆಡವಿದನು. ಇವತ್ತು ನಿನಗ ಬಿಡುವುದಿಲ್ಲಾ ಮಾಡೆ ಬಿಡುತ್ತೇನೆ ಅಂತಾ ಅನ್ನುತ್ತಿದ್ದಾಗ ನಾನು ಅವನಿಂದ ತಪ್ಪಿಸಿಕೊಂಡು ಓಡಿ ಬಂದಿರುತ್ತೇನೆ. ಅಂತಾ ಹೇಳಿದಳು. ನಂತರ ಅವನ ಹೆಸರು ಕೇಳಲಾಗಿ ಅಫಜಲಪೂರದ ಬಸವರಾಜ ತಂದೆ ಗುರಪ್ಪಾ ಅಳ್ಳಗಿ ಎಂಬುವನು ಇರುತ್ತಾನೆ ಅಂತಾ ತಿಳಿಸಿದಳು. ಸದರಿ ನನ್ನ ಮಗಳು ಅಪ್ರಾಪ್ತ ವಯಸ್ಸಿನವಳಿದ್ದು, ಇವಳು ಬಹಿರದೇಸೆಗೆ ಹೋದಾಗ  ಮೇಲ್ಕಂಡ ಬಸವರಾಜ ಅಳ್ಳಗಿ ಎಂಬುವನು ತಡೆದು ನಿಲ್ಲಿಸಿ, ಜಾತಿ ನಿಂದನೆ ಮಾಡಿ, ದೈಹಿಕ ಹಲ್ಲೆ ಮಾಡಿ, ಅತ್ಯಾಚಾರ ಎಸಗಲು ಪ್ರಯತ್ನ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ವ್ಯಕ್ತಿ ಸಾವು ಪ್ರಕರಣ :
ಜೇವರಗಿ ಠಾಣೆ : ದಿನಾಂಕ 29.05.2015 ರಂದು ಮಧ್ಯಾನ್ಹ ಮಾರಡಗಿ ಎಸ್.ಎ ಗ್ರಾಮದ ಶ್ರೀ. ಯಲ್ಲಮ್ಮ ದೇವಿ ಗುಡಿಯ ಪಕ್ಕದ ಬೇವಿನ ಗಿಡದ ಕೆಳಗೆ ಶ್ರೀ ಶರಣಪ್ಪ ತಂದೆ ಸಂಗಪ್ಪ ಕಂಚಲಕಾಯಿ ಸಾ|| ವರ್ಚನಳ್ಳಿ ಮತ್ತು ನಿಂಗಪ್ಪತಂದೆ ಭೀಮಪ್ಪ ಶೆಟ್ಟಿಗೇರ ಹಾಗು ಇತರ ಜನರು ಊಟಕ್ಕೆ ಕುಳಿತಾಗ ಆ ಸಮಯಕ್ಕೆ ಒಮ್ಮೇಲೆ ಆಕಸ್ಮಿಕವಾಗಿ ಮಳೆ-ಗಾಳಿ ಜೋರಾಗಿ ಬಂದು ಒಮ್ಮೇಲೆ ಸೀಡಿಲು ಬಂದು ಅದರ ಶಾಖ ನನಗೆ ಮತ್ತು ನಿಂಗಪ್ಪ ಶೆಟ್ಟಿಗೇರ ಹಾಗು ಇತರರಿಗೆ ತಗಲಿದ್ದು ಅದರಲ್ಲಿ ನಿಂಗಪ್ಪನಿಗೆ ತಲೆಗೆ ಎದೆಗೆ ಶಾಖ ತಗಲಿ ಅವನಿಗೆ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದಾಗ ಸಾಯಂಕಾಲ ಪರತಬಾದ್ ಸಮೀಪ ಸಿಡಿಲಿನ ಶಾಖದಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಜೇವರಗಿ ಠಾಣೆ : ದಿನಾಂಕ 29-05-2015 ರಂದು ಮದ್ಯಾನ್ಹ ಜೇವರ್ಗಿ ಪಟ್ಟಣದ .ಪಿ.ಎಮ್.ಸಿ  ಯಾರ್ಡ ಹತ್ತಿರ ಸಾರ್ವಜನಿಕ ರಸ್ತೆಯ ಬಾತ್ಮಿದಾರನಿಂದ ಫೋನ ಮೂಲಕ ಬಾತ್ಮೀ ಬಂದಿದ್ದೆನೆಂದರೆ ಒಬ್ಬ ಮನುಷ್ಯನು  ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಸಾಹೇಬ ಜೇವರಗಿ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಪ್ರಿಯದರ್ಶನಿ ಉಡಪಿ ಹೋಟಲ ಗೊಡೆಯ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆ ಮೇಲೆ ಒಬ್ಬನು 1 ರೂಪಾಯಿಗೆ 80- ರೂಪಾಯಿ ಕೊಡುತ್ತನೆ ಅಂತ ಹೇಳಿ, ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು, ದಾಳಿ ಮಾಡಿ ಅವನಿಗೆ ಹಿಡಿದುಕೊಂಡು ಹೆಸರು ವಿಳಾಸ ಕೇಳಿ ವಿಚಾರಿಸಲಾಗಿ ಅವನು ತನ್ನ ಹೆಸರು ಚೆನ್ನಬಸ್ಸು ತಂದೆ ಶರಣಪ್ಪ ಕಂಟಿ ಸಾ: ಜನಿವಾರ ಹಾವ: ಲಕ್ಷ್ಮೀ ಚೌಕ ಜೇವರ್ಗಿ ಅಂತಾ ತಿಳಿಸಿದನು,ಅವನಿಂದ ಮಟಕಾ ಜೂಜಾಟಕ್ಕೆ ಬಳಸಿದ  ನಗದು ಹಣ 500/-ರೂ. ಮತ್ತು ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ಔಶಪಡಿಸಿಕೊಂಡು ಸದರಿಯವನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.