POLICE BHAVAN KALABURAGI

POLICE BHAVAN KALABURAGI

22 August 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ 21-08-14 ರಂದು 3 ಪಿಎಂಕ್ಕೆ ಕುರಿಕೋಟ ಸಿಮಾಂತರದ ವೀರಭದ್ರಯ್ಯಾ ಸಾಹು ಮತ್ತು ರವಿ ಸಾಹು ಇವರ ಹೋಲದ ಮದ್ಯದ ಬಂದಾರಿಯಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರನ್ನು ಮತ್ತು ಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಬಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ  5 ಜನರಿಗೆ ಹಿಡಿದು ವಿಚಾರಿಸಲು 1. ಚಂದ್ರಕಾಂತ ತಂ ಹಣಮಂತಪ್ಪ ಸಿಂಗೆ 2. ರೇವಣಸಿದ್ದಪ್ಪ ತಂ ಮಲ್ಲಿಕಾರ್ಜುನ ಅಂಬಲಗಿ 3.  ದೇವಿಂದ್ರಪ್ಪ ತಂ ಗುಂಡಪ್ಪ ಜಾಲೇಕರ 4. ಸಿದ್ದಪ್ಪ ತಂ ಶಿವಶರಣಪ್ಪ ಬಡಿಗೇರ 5. ಸುರೇಶ ತಂ ಶಿವಶರಣಪ್ಪ ಅಂಬಲಗಿ ಸಾ|| ಎಲ್ಲರೂ ಕುರಿಕೋಟಾ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಇಸ್ಪೇಟ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 4300 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ ಮರಳಿ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : 2013 ನೇ ಸಾಲಿನಲ್ಲಿ   ಇ.ಎಸ್.ಐ. ಕಾರ್ಪೋರೆಷನ ರೀಜನಲ್ ಆಫೀಸ, ಕರ್ನಾಟಕದಲ್ಲಿ ಅಪ್ಪೆರ ಡಿವಿಜನ ಕ್ಲರ್ಕ ಹುದ್ದೆ ಖಾಲಿ ಇದೆ ಅಂತಾ ನೋಟಿಪೀಕೇಶನ ಕೊಟ್ಟಿದ್ದು ದಿನಾಂಕ : 23-06-2013 ರಂದು ಗುಲಬರ್ಗಾ ನಗರದಲ್ಲಿ N.V Boys High School,  ದಲ್ಲಿ ಭಾಗ - 1 ಪರೀಕ್ಷೆ ನಡೆಸಿದ್ದು ರಮೇಶ ಕುಮಾರ ತಂದೆ ರಬಿಂದ್ರ ಪ್ರಸಾದ ಮನೀಶ ರಾಣಾ ಪ್ರತಾಪ ನಗರ ಇಸ್ಲಾಮಪೂರ ನಾಲಂದ  ರಾಜ್ಯ ಬಿಹಾರ ಇವನು ತನ್ನ ಪರವಾಗಿ ನಿಜವಾದ ಅಭ್ಯರ್ಥಿ ತಾನೆ ಎಂದು ಬೇರೆಯವರಿಂದ ಪರೀಕ್ಷೆ ಬರೆಸಿ ದಿ : 19-01-2014 ರಂದು ನಡೆದ Computer Skill ಪರೀಕ್ಷೆಗೆ ಸ್ವತಹ ಮೇಲ್ಕಂಡ ಆರೋಪಿ ಹಾಜರ ಅಗಿ ಪರೀಕ್ಷೆ ಎದರಿಸುತ್ತಾನೆ ನಂತರ  ESI Corporation  ಯಿಂದ  UDC ಹುದ್ದೆಗೆ ಅಯ್ಕೆಯಾಗಿ ಹಾಲಿ  Regional Office, ಬೆಂಗಳೂರ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮೇಲ್ಕಂಡ ಆರೋಪಿ ಇಲಾಖೆಗೆ ವಂಚಿಸಿ ತಾನೆ ಅಭ್ಯರ್ಥಿ ಎಂದು ಬೇರೆ ವ್ಯಕ್ತಿಯಿಂದ ಪರೀಕ್ಷೆ ಬರೆಯಿಸಿ ಹುದ್ದೆ ಗಿಟ್ಟಿಸಿಕೊಂಡು ಮೋಸ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ  ಶ್ರೀ ಎಸ್. ಶಿವಾರಾಮಕೃಷ್ಣನ ತಂದೆ ಶಂಕರನ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಯಲ್ಲಿದ್ದ ಮಾರ್ಬಲ ಕಲ್ಲುಗಳನ್ನು ಇಳಿಸುವಾಗ ನಿರ್ಲಕ್ಷದಿಂದ ಕಾರ್ಮಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹಿಬೂಬಸಾಬ ತಂದೆ ಮಶಾಕಸಾಬ ಮುಲ್ಲಾ ಸಾ: ಆಶ್ರಯ  ಕಾಲೊನಿ ಸತ್ರಾಶವಾಡಿ ಎಂ ಜಿ ರಸ್ತೆ ಗುಲಬರ್ಗಾ ರವರ ಮಗ ಖುತ್ಬುದ್ದಿನ ಇವನು ದಿನಾಲು ನನ್ನ ಜೊತೆಯಲ್ಲಿಯೆ  ಕುಲಿ ಕೆಲಸ ಮಾಡುತ್ತಿದ್ದು ದಿನಾಂಕ 21-08-2014 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಗುಲಬರ್ಗಾ ನಗರದದ ಎಮ್ ಎಸ್ ಕೆ ಮಿಲ ಬಡಾವಣೆಯ ಹುಸೇನಿ ಗಾರ್ಡನದಲ್ಲಿ ಲಾರಿ ನಂ ಆರ್ ಜೆ 27 ಜಿಎ 5673 ನೆದ್ದರಲ್ಲಿದ್ದ  ಶ್ರೀ ಡಾ : ಅರ್ಷದ ಇವರಿಗೆ ಸಂಬಂದಿಸಿದ ಅಂದಾದ  10 ಫಿಟ್ ಉದ್ದ 6 ಫೀಟ್ ಅಗಲ ಉಳ್ಲ ಮಾರಬಲಗಳು ಇದ್ದು ಅವುಗಳನ್ನು ಖಾಲಿಮಾಡಲು ಡಾ :ಅರ್ಷಧ ಮತ್ತು ಲಾರಿ ಡ್ರೈವರ ಇವರು  ನಮಗೆ 4500/ರೂ ಗುತ್ತಿಗೆ ಕೊಟ್ಟರುತ್ತಾರೆ ಆಗ ನಾನು ಮತ್ತು  ನನ್ನ ಮಗ 2) ಖುತ್ಬೋದ್ದಿನ 3) ಲಾಲಹ್ಮದ 4) ಜಾಫರ್ 5) ಈರಣ್ಣಾ 6) ಬಸಣ್ಣಾ 7) ಬಾಬುರಾವ 8) ಸಮೀರ  9) ಲಕ್ಷುಣ ಎಲ್ಲರು ಕೂಡಿಕೊಂಡು ಲಾರಿನಲ್ಲಿದ್ದ ಮಾರ್ಬಲ್ ಕಲ್ಲುಗಳು ಖಾಲಿ ಮಾಡುತ್ತಿರುವಾಗ. ನನ್ನ ಮಗ ಖುತ್ಬೊದ್ದಿನ್ .ಲಕ್ಷ್ಮಣ ಮತ್ತು ಜಾಫರ್ ಇವರು ಲಾರಿಯಲ್ಲಿ  ಏರಿ ಮೇಲಿಂದ ಕಲ್ಲು ಕೊಡುತ್ತಿದ್ದರು. ಉಳಿದ ನಾವೆಲ್ಲರು ಕೆಳಗೆನಿಂತು ಕಲ್ಲುಗಳು ಹಿಡಿದ್ದುಕೊಂಡು ಕೇಳಗೆ ಇಳಿಸುತ್ತಿದ್ದೆವು. ಅದೆ ವೆಳೆಯಲ್ಲಿ ಲಾರಿಯಲ್ಲಿ ಮಾರ್ಬಬಲಗಳು ಹಚ್ಚಿದ  ಅಂದಾಜ 6 ಫೀಟ್ ಅಗಲ 10 ಫಿಟ್ ಉದ್ದ ಇರುವ ಮಾರ್ಬಲ್ ಕಲ್ಲುಗಳ ಥಪ್ಪಿ ಉರುಳಿ ನನ್ನ ಮಗ ಖುತ್ಬುದ್ದಿನ ಇವರ ಮೈ ಮೇಲೆ ಬಿದ್ದಿದರಿಂದ ಅವನ ಕುತ್ತಿಗೆ ಮತ್ತು ಎಡಗಲ್ಲದ ಮೇಲೆ  ಹತ್ತಿದ್ದರಿಂದ ಭಾರಿ ರಕ್ತಗಾಯ ಆಗಿ ಲಾರಿಯಲ್ಲಿಯೆ ಮೃತ ಪಟ್ಟಿರುತ್ತಾನೆ. ಕಾರಣ ಮಾರ್ಬಲ್ ಮಾಲಿಕನಾದ ಡಾ. ಅರ್ಷದ ಇವನು  ನಮಗೆ ಮಾರ್ಬಲ ಕಲ್ಲುಗಳು ಲಾರಿಯಿಂದ ಕೇಳಗೆ ಇಳಿಸಲು ಕೂಲಿ ಕೆಲಸಕ್ಕೆ ಹಚ್ಚಿದ್ದು ಲಾರಿಯಲ್ಲಿನ ಕಲ್ಲುಗಳು ತೆಗೆಯುವ ಸಮಯದಲ್ಲಿ ಕಲ್ಲುಗಳಿಂದ ಕುಲಿಕೆಸ ಮಾಡುವ ಜನರ ಜಿವಕ್ಕೆ ಧಕ್ಕೆ ಯಾಗದಂತೆ  ಹಾಗು ಜೀವ ಹಾನಿ ಆಗದಂತೆ ಯಾವದೆ ವ್ಯೆವಸ್ಥೆ ಮಾಡಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಶೇಖ ಫರೀದ ತಂದೆ ಉಸ್ಮಾನ ಸಾಬ ಸಾ : ದಸ್ತಗೀರ ಮೊಹಲ್ಲಾ ಚಿಟಗುಪ್ಪಾ ತಾ : ಹುಮನಾಬಾದ ಜಿಲ್ಲೆ ಬೀದರ ರವರು  ದಿನಾಂಕ: 21-08-2014 ರಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಸುಪರ ಮಾರ್ಕೆಟ ಗುಲಬರ್ಗಾದ ಮೈಬಾಸ ಮಜ್ಜೀದ ಮುಂದೆ ನಿಲ್ಲಿಸಿದ ತನ್ನ ಹಿರೋ ಫ್ಯಾಷನ ಪ್ರೋ ಮೋಟಾರ ಸೈಕಲ್  ನಂ: ಕೆಎ 39 ಕೆ-2077 ಅ.ಕಿ. 40,000/- ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿದ್ದು ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ.ನಿಲೋಫರ ಬೇಗಂ ಗಂಡ ಮಹ್ಮದ ಸರಫರಾಜ ಸುಲ್ತಾನ, ಸಾ: ಜಾನಿ ಮೊಹಲ್ಲಾ, ಜಂಡಾ ಕಟ್ಟಾ ರಾಯಚೂರ ಹಾ:: ಸರಸ್ವತಿಪುರಂ ಗುಲಬರ್ಗಾ ರವರನ್ನು ನನಗೆ ನಮ್ಮ ತಂದೆ-ತಾಯಿಯವರು ಸುಮಾರು ಒಂದುವರೆ ವರ್ಷದ ಹಿಂದೆ ಮಹ್ಮದ ಸರಫರಾಜ ಸುಲ್ತಾನ ತಂದೆ ಮಹ್ಮದ ಸುಲ್ತಾನ ಇವರಿಗೆ ಸಂಪ್ರದಾಯದಂತೆ ಗುಲಬರ್ಗಾ ಬಾಕರ್ ಫಂಕ್ಷನ್ ಹಾಲ್ದಲ್ಲಿ ನಮ್ಮ ತಂದೆ-ತಾಯಿಯವರು 2 ಲಕ್ಷ ರೂಪಾಯಿ ಮತ್ತು 3ತೊಲೆ ಬಂಗಾರ ಉಡುಗೋರೆಯಾಗಿ ಕೊಟ್ಟಿದ್ದು ಅಲ್ಲದೆ ಮದುವೆ ಸಮಯದಲ್ಲಿ ನನ್ನ ಮೈಮೇಲೆ 9 ತೊಲೆಯ ಬಂಗಾರದ ಆಭರಣಗಳು ಹಾಕಿ ಮದುವೆ ಮಾಡಿಕೊಟ್ಟಿರುತ್ತಾರೆ. ನಂತರ ನನ್ನ ಗಂಡ ನನಗೆ ರಾಯಚೂರಕ್ಕೆ ಕರೆದುಕೊಂಡು ಹೋಗಿ ಒಂದು ತಿಂಗಳ ವರೆಗೆ ರಾಯಚೂರದಲ್ಲಿ ಇಟ್ಟು ನನ್ನ ಗಂಡ ಬೆಂಗಳೂರದಲ್ಲಿ ಸಾಫ್ಟವೇರ್ ಇಂಜನೀಯರಿಂಗ್ ಕೆಲಸ ಮಾಡುತ್ತಿದ್ದರಿಂದ ಅಲ್ಲಿಂದ ನನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾನೆ. ಅಲ್ಲಿ ನನ್ನ ಗಂಡ ನನಗೆ ದಿನಾಲೂ ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನಗೆ ದಿನಾಲೂ ಹೊಡೆಬಡೆ ಮಾಡುತ್ತಾ ಇದ್ದ. ನಂತರ ನಾನು ಅಗಷ್ಟ-2013 ತಿಂಗಳಲ್ಲಿ ರಂಜಾನ ಹಬ್ಬಕ್ಕೆಂದು ರಾಯಚೂರಕ್ಕೆ ಬಂದಿದ್ದು, ಅಲ್ಲಿ ನನಗೆ ನನ್ನ ಗಂಡ ಮತ್ತು ಅತ್ತೆ ಸೈಯದಾ ಫರೀದಾ ಬೇಗಂ ಇಬ್ಬರು ನನಗೆ ನಿಮ್ಮ ತವರು ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನ್ನ ಅತ್ತೆ ನನಗೆ ನನ್ನ ಮಗ ನೀನು 10 ಲಕ್ಷ ರೂಪಾಯಿ ತಂದರೆ ಕೆಲಸ ಮಾಡುತ್ತಾನೆ. ಅಂತಾ ಅಂದು ನನ್ನ ಗಂಡ ಮತ್ತು ಅತ್ತೆ ಇಬ್ಬರು ನನಗೆ ನಿನ್ನ ಹೊಟ್ಟೆಯಲ್ಲಿ ಹೆಣ್ಣು ಮಗು ಇದೆ ಅಂತಾ ಬಯ್ಯುತ್ತಾ ಕೈಯಿಂದ ಮತ್ತು ಕಾಲಿನಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ಆದರೂ ನಾನು ಆವತ್ತು ತಾಳಿಕೊಂಡು ಬಂದಿದ್ದು, ನಂತರ ನಾನು ಮತ್ತೆ ನನ್ನ ಗಂಡನ ಸಂಗಡ ಬೆಂಗಳೂರಿಗೆ ಹೋಗಿದ್ದು, ಅಲ್ಲಿ ನನ್ನ ಗಂಡ ಮತ್ತೆ ನನಗೆ ಅದೇ ರೀತಿ ನೀನು ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ನನ್ನ ಕುತ್ತಿಗೆಯ ಮೇಲೆ ಚಾಕು ಇಟ್ಟು ಅಂಜಿಕೆ ಹಾಕಿರುತ್ತಾನೆ. ಆಗ ನಮ್ಮ ಮನೆಯ ಮಾಲೀಕರು ನನ್ನ ತಂದೆಯವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದು, ನಂತರ ನಮ್ಮ ತಂದೆ ಬೆಂಗಳೂರಿಗೆ ಬಂದು ನನಗೆ ಅಲ್ಲಿಂದ ಗುಲಬರ್ಗಾಕ್ಕೆ ಕರೆದುಕೊಂಡು ಬಂದು ತಮ್ಮ ಹತ್ತಿರ ಇಟ್ಟಿಕೊಂಡಿರುತ್ತಾರೆ. ನನ್ನ ಗಂಡ ಮದುವೆ ಸಮಯದಲ್ಲಿ ನನ್ನ ಮೇಲೆ ಹಾಕಿದ್ದ ಬಂಗಾರವೆಲ್ಲಾ ಮಾರಿಕೊಂಡಿರುತ್ತಾನೆ. ನನಗೆ ಡಿಸೆಂಬರ್-2013 ರಲ್ಲಿ ನಾನು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತೇನೆ. ನಾನು ಆಸ್ಪತ್ರೆಯಲ್ಲಿ ಇದ್ದಾಗಲೂ ಕೂಡ ಅಲ್ಲಿಯು ನನ್ನ ಗಂಡ ಬಂದು ಜಗಳ ಮಾಡಿಕೊಂಡು ಹೋಗಿರುತ್ತಾನೆ. ಸುಮಾರು 7-8 ತಿಂಗಳಿಂದ ನಾನು ನನ್ನ ತವರು ಮನೆಯಾದ ಸರಸ್ವತಿಪೂರಂ ಕುಸನೂರ ರೋಡ ಗುಲಬರ್ಗಾದಲ್ಲಿ ಇದ್ದಾಗಲೂ ಕೂಡ ಆಗಾಗ ನಮ್ಮ ಮನೆಗೆ ಬಂದು ನನ್ನ ಜೊತೆ ನಮ್ಮ ಹಾಗೂ ನಮ್ಮ ತಂದೆ-ತಾಯಿ ಜೊತೆ ಜಗಳ ಮಾಡಿಕೊಂಡು ಬಂದಿದ್ದು ದಿನಾಂಕ:21/08/14 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ನನ್ನ ತಾಯಿ ಹಾಗೂ ನನ್ನ ಮಗುವಿನೊಂದಿಗೆ ತವರು ಮನೆಯಲ್ಲಿ ಇದ್ದಾಗ ಆಗ ಯಾರೋ ಬಾಗಿಲು ಬಡಿದಾಗ ನಾನು ಹೋಗಿ ಬಾಗಿಲು ತೆಗೆದಾಗ ಆಗ ನನ್ನ ಗಂಡ ಇದ್ದು, ಅವನು ನನಗೆ ಒಮ್ಮಿದೊಮ್ಮಲೆ ನನ್ನ ಕುತ್ತಿಗೆ ಹಿಡಿದು ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಿನ್ನ ತಂದೆ ಎಲ್ಲಿ ಹಣ ಕೇಳಿದರೆ ಕೊಡುವದಿಲ್ಲ ಅಂತಾ ಅನ್ನುತ್ತಿದ್ದಾನೆ ಎಲ್ಲಿ ಇದ್ದಾನೆ ಆ ರಂಡಿ ಮಗ ಅಂತಾ ಅನ್ನುತ್ತಾ ನನ್ನ ಕುತ್ತಿಗೆ ಹಿಡಿದು ನನಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 August 2014

Gulbarga District Reported Crimes

ಕಳವು ಪ್ರಕರಣಗಳು :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಸಾತಣ್ಣಾ ತಂದೆ ಶಿವಬಸಪ್ಪ ಪಾಗಾ ಸಾ: ನಿಂಬಾಳ ತಾ:ಆಳಂದ. ಇವರು ನಿಂಬಾಳ ಗ್ರಾಮದಲ್ಲಿನ ನನ್ನ ಹೊಲದಲ್ಲಿನ ಬಾವಿಯಲ್ಲಿ ನೀರು ಎತ್ತುವ ಸಲುವಾಗಿ ಕುಡಿಸಿದ 3 H.P ಸಬ್ ಮರ್ಸಿಬಲ್ ಮೋಟಾರ ಅಂದಾಜು. ಕೀ.4000/- ಇದನ್ನು ದಿನಾಂಕ: 06-08-14 ರಂದು ರಾತ್ರಿ 08:00 ಗಂಟೆಯಿಂದ  ದಿ:07/08/2014ರ ಬೇಳಗಿನ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ನಂತರ ಸದರಿ ಕಳುವಾದ ಮೋಟರ ಸಲುವಾಗಿ ನಾನು ಮತ್ತು ನನ್ನ ಮಗ ನಮ್ಮ ಹೊಲದ ಹತ್ತಿರ ಇರುವ ಮೇಟಗಿಗಳಿಗೆ ಹೋಗಿ ವಿಚಾರಿಸಲಾಗಿ ನನ್ನ ಮೋಟರ್ ಬಗ್ಗೆ ನಮ್ಮಗೆ ಏನು ಗೊತ್ತಾಗಲಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ.ಸುಧಾಕರ ತಂದೆ ಗುರುಶಾಂತಪ್ಪಾ ಮಾಳಗೆ ಸಾ: ನಿಂಬಾಳ ತಾ:ಆಳಂದ. ಇವರು ನಿಂಬಾಳ ಗ್ರಾಮದ ಸಿಮಾಂತರದಲ್ಲಿ ನಮ್ಮ ಹೊಲವಿದ್ದು ಆ ಹೋಲದಲ್ಲಿ ನಾವು ನೀರಿಗಾಗಿ ಬಾವಿ ತೊಡಿದ್ದು. ಆ ಬಾವಿಯಲ್ಲಿ  ನೀರೆತ್ತುವ ಸಲುವಾಗಿ ಕುಡಿಸಿದ 5 H.P ಸಬ್ ಮರ್ಸಿಬಲ್ ಮೋಟಾರ ಬಿಟ್ಟಿದ್ದು. ಆ ಮೋಟಾರನಿಂದಲ್ಲೆ ನಮ್ಮ ಬೇಳೆಗಳಿಗೆ ನೀರು ಬಿಡುತ್ತಿದ್ದು. ಹಿಗಿದ್ದು ದಿನಾಂಕ:07-07-14 ರಂದು ರಾತ್ರಿ 07:00 ಗಂಟೆಯಿಂದ ದಿ:08/07/2014 ರ ಬೇಳಗಿನ 06;00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಹೊಲದ ಬಾವಿಯಲ್ಲಿದ 5.H.P ಸಬ್ ಮರ್ಸಿಬಲ್ ಮೋಟಾರ ಅಂದಾಜು ಕಿಮ್ಮತ್ತು 8000/- ರೂ.ಉಳದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀ.ಪರಮೇಶ್ವರ ತಂದೆ ತಮ್ಮಣಪ್ಪಾ ಮಾಳಗೆ ಸಾ:ನಿಂಬಾಳ ತಾ:ಆಳಂದ. ಇವರು ನಿಂಬಾಳ ಗ್ರಾಮದ ಸಿಮಾಂತರದಲ್ಲಿ ನಮ್ಮ ಹೊಲವಿದ್ದು ಆ ನಮ್ಮ ಹೋಲದಲ್ಲಿ ಕೊಳವೆ ಬಾವಿ ತೊಡಿದ್ದು. ಆ ಕೊಳವೆ ಬಾವಿಯಲ್ಲಿ ನೀರೆತ್ತುವ ಸಲುವಾಗಿ ಕುಡಿಸಿದ 5 H.P ಸಬ್ ಮರ್ಸಿಬಲ್ ಬೋರ ಮೋಟಾರ ಬಿಟ್ಟಿದ್ದು. ಆ ಮೋಟಾರನಿಂದ ನಮ್ಮ ಬೇಳೆಗಳಿಗೆ ನೀರುಣಿಸುತ್ತಿದ್ದೆವು. ಹಿಗಿದ್ದು ದಿನಾಂಕ:13-03-14 ರಂದು ಸಾಯಂಕಾಲ 06:00 ಗಂಟೆಯಿಂದ ದಿ:14/03/2014 ರ ಬೆಳಗಿನ 06;00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಹೊಲದ ಕೊಳವೆ ಬಾವಿಯಲ್ಲಿನ 5.H.P ಸಬ್ ಮರ್ಸಿಬಲ್ ಬೋರ ಮೋಟಾರ ಅಂದಾಜು ಕಿಮ್ಮತ್ತು 8000/- ಮತ್ತು ಅದರ ಕೇಬಲ್ ವಾಯರ್ ಅ.ಕೀ.7000/- ರೂ. ಕೀಮ್ಮತಿನದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀ ಮರಲಿಂಗಪ್ಪ ತಂದೆ ಸಾಬಣ್ಣಾ ಸಾ : ಲಾಡ್ಲಾಪೂರ ಇವರು  ರಸ್ತೆ  ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಕುರಿತು ಯುನೈಟೆಡ್  ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಸಾಬಣ್ಣಾ ಈತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ್ದರಿಂದ ಆತನ ತಂದೆ ಸಾಬಣ್ಣಾ ತಂದೆ ಮಲ್ಲಪ್ಪಾ ರವರು  ದಿನಾಂಕ 04-08-2014 ರಂದು ಪ್ರತಿ ದಿನದಂತೆ ಮರಲಿಂಗಪ್ಪಾ ತಂದೆ ಸಾಬಣ್ಣಾ ಈತನು ತನ್ನ ಟಂಟಂ ಆಟೊ ನಂ ಕೆಎ-33 7693 ನೆದ್ದನ್ನು ತೆಗೆದುಕೊಂಡು ಲಾಡ್ಲಾಪೂರದಿಂದ ಅಳ್ಳೊಳ್ಳಿ ವರೆಗೆ ಜನರಿಂದ ಹಣ ಪಡೆದು ಬಾಡಿಗೆ ಹೊಡೆಯುತ್ತಿದ್ದು ರಾತ್ರಿ ಅಳ್ಳೊಳ್ಳಿಯಲ್ಲಿ ಜನರಿಗೆ ಬಿಟ್ಟು ತಾನು ಮತ್ತು ತಮ್ಮ ಗ್ರಾಮದ ಮಲ್ಲಪ್ಪಾ ಭಜಂತ್ರಿ ಮತ್ತು ಸಿದ್ದಪ್ಪಾ ಇವರೊಂದಿಗೆ ಲಾಡ್ಲಾಪೂರಕ್ಕೆ ಹೊರಟಾಗ ರಾಮಾ ನಾಯಕ ತಾಂಡಾ ದಾಟಿ ಮರಲಿಂಗಪ್ಪಾ ಈತನು ಟಂಟಂ ಅಟೊವನ್ನು ಅತಿವೇಗವಾಗಿ ಓಡಿಸಿಕೊಂಡು ಹೊರಟು ರೊಡಿಗೆ ಅಡ್ಡಲಾಗಿ ದನ ಬಂದಿದ್ದರಿಂದ ಟಂಟಂ ಅಟೊ ಕಟ ಹೊಡೆಯಲು ಹೊಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮಲ್ಲಪ್ಪನಿಗೆ ಅಲ್ಲಲ್ಲಿ ಅಲ್ಪಗಾಯವಾಗಿದ್ದು ಮರಲಿಂಗ ಈತನ ಎದೆಗೆ ಎರಡು ಭುಜ ಹಾಗು ಕೈಗಳಿಗೆ ತೆರಚಿದ ರಕ್ತಗಾಯಗಳಾಗಿದ್ದು ಅಲ್ಲದೆ ಬಲ ತಲೆಗೆ ಭಾರಿ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಹೆಚ್ಚಿನ ಉಪಚಾರ ಕುರಿತು ಸೊಲಾಪೂರದ ಮಾರ್ಕಂಡೇಯ ಸಹಕಾರಿ ರುಗ್ನಾಲಯ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದು ಸದರಿ ಗಾಯಾಳು ಮರಲಿಂಗಪ್ಪಾ ಈತನು ಆಸ್ಪತ್ರೆಯಲ್ಲಿ ಉಪಚಾರ ಹೊಂದುವ ಕಾಲಕ್ಕೆ ದಿನಾಂಕ 14-08-2014 ರಂದು 04-30 ಎ,ಎಮ್,ಕ್ಕೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

20 August 2014

Gulbarga District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಗುಂಡೆರಾಯ ತಂದೆ ಸಿದ್ರಾಮಪ್ಪ ಪಾಟ್ಲಿ ಸಾ: ಸಾ: ಜಂಬಗಾ ತಾ:ಜಿ: ಗುಲಬರ್ಗಾ ರವರ 3ನೇ ಮಗಳಾದ ಹೀರಾಬಾಯಿ ಇವಳಿಗೆ ಶ್ರೀನಿವಾಸ ಸರಡಗಿ ಗ್ರಾಮದ ಹಣಮಂತರಾಯ ಇವನ ಮಗನಾದ ಸಂತೋಷ ಎಂಬುವನಿಗೆ ಮೂರುವರೆ ವರ್ಷದ ಹಿಂದೆ ಸಾಂಪ್ರದಾಯಕವಾಗಿ ಮದುವೆ ಮಾಡಿಕೊಟ್ಟಿದ್ದು. ಮದುವೆ ಕಾಲಕ್ಕೆ 5.1/2 ತೊಲೆ ಬಂಗಾರ ಮತ್ತು ಒಂದು ಲಕ್ಷ ರೂಪಾ ಹಾಗೂ ಗೃಹ ಬಳಕೆ ಸಾಮಾನುಗಳು ಕೊಟ್ಟು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಟ್ಟಿರುತ್ತೇವೆ. ಮದುವೆ ನಂತರ ಅದರ ಪ್ರತಿಫಲದಿಂದ ಒಂದು ಹೆಣ್ಣು ಮಗು ಜನಿಸಿದ್ದು. ಮದುವೆಯಾದ 6 ತಿಂಗಳು ಸರಿಯಾಗಿದ್ದು ನಂತರ ನಿಮ್ಮ ತವರು ಮನೆಯಿಂದ ನಿನ್ನ ತಂದೆ ಹತ್ತಿರ ಇನ್ನು ಹಣ ತೆಗೆದುಕೊಂಡು ಬಾ ಎಂದು ಮಾನಸಿಕ ಕಿರುಕುಳ ಮತ್ತು ದೈಹಿಕವಾಗಿ ದಂಡಿಸಿ ಇದರಲ್ಲಿ ಸಂತೋಷನ  ತಾಯಿ ಶಿವಗಂಗಮ್ಮ, ಸಿದ್ದು ತಂದೆ ಹಣಮಂತರಾಯ, ಮಹೇಶ ತಂದೆ ಹಣಮಂತರಾಯ ಸಹೋದರರು ಸೇರಿ ದಿನನಿತ್ಯ ಕಿರುಕುಳ ನೀಡುವದು ಹೊಡೆಬಡೆ ಮಾಡುತ್ತಿದ್ದರು. ಇದರ ಬಗ್ಗೆ ನನ್ನ ಮಗಳು ಆಗಾಗ ತಿಳಿಸುತ್ತಿದ್ದಳು. ಆದರೂ ನಾನು ಮತ್ತು ನನ್ನೂರಿನ ಹಿರಿಯರು ತಿಳಿಹೇಳಿ ಬಂದಿದ್ದು ದಿನಾಂಕ: 20/08/2014 ರಂದು ಮದ್ಯರಾತ್ರಿ 12 ಗಂಟೆ ಸುಮಾರಿಗೆ ಶ್ರೀನಿವಾಸ ಸರಡಗಿ ನನ್ನ ಮಗಳು ಮೊಬಾಯಿಲದಿಂದ ಕರೆ ಮಾಡಿ ನನಗೆ ನನ್ನ ಗಂಡ ಸಂತೋಷ ಮತ್ತು ಅತ್ತೆ ಶಿವಗಂಗಮ್ಮ ಇವರುಗಳು ತವರು ಮನೆಯಿಂದ ಹಣ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಹೇಳಿ ಹೊಡೆಯುತ್ತಿದ್ದಾರೆ ಎಂದು ಹೇಳಿ ಮೊಬಾಯಿಲ ಕರೆ ಬಂದಗೊಳಿಸಿದಳು ಪುನಃ ನಾನು ಮರಳಿ ಅಳಿಯನಿ ಪೋನಗೆ ಕರೆ ಮಾಡಿದಾಗ ಯಾವುದೇ ಪ್ರತುಕ್ರೀಯೆ ನೀಡಲಿಲ್ಲ ಆದರೆ ಮನೆಯಲ್ಲಿ ಜಗಳದ ಸಪ್ಪಳ ಜೋರಾಗಿ ಕೇಳಿ ಬರುತ್ತಿತ್ತು. ನಂತರ ಗಾಬರಿಗೊಂಡು ನಾನು ಮತ್ತು ನನ್ನ ಹೆಂಡತಿ ಸುಜಾತ ನನ್ನ ತಮ್ಮ ನಾಗೇಂದ್ರಪ್ಪ, ಹಣಮಂತರಾಯ ಭೂತಿ ಇನ್ನಿತರ ಊರಿನ ಜನ ಸೇರಿ ಶ್ರೀನಿವಾಸ ಸರಡಗಿಗೆ ಹೋಗಿ ನೋಡಲು ಮನೆಯಲ್ಲಿ ಯಾರೂ ಇರಲಿಲ್ಲ ನನ್ನ ಮಗಳು ಮನೆಯಲ್ಲಿ ಕಾಣಲಿಲ್ಲ ನಂತರ ಪೊಲೀಸ ಠಾಣೆಗೆ ಮಾಹಿತಿ ನೀಡಿ ಪೊಲೀಸ ಸಿಬ್ಬಂದಿ ಬಂದ ನಂತರ ನನ್ನ ಮಗಳನ್ನು ಹುಡುಕಲು ಮನೆಯ ಅಂಗಳದಲ್ಲಿರುವ ಬಾವಿಯಲ್ಲಿ ಬ್ಯಾಟರಿ ಹಾಕಿ ನೋಡಲು ಬಾವಿಯಲ್ಲಿ ಮಗಳ ಶವ ಕಂಡಿದ್ದು. ನನ್ನ ಮಗಳಿಗೆ ಅತ್ತೆ ಶಿವಗಂಗಮ್ಮ, ಗಂಡ ಸಂತೋಷ ಇವರು ತವರು ಮನೆಯಿಂದ ಇನ್ನು ಒಂದು ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಎಂದು ಹೇಏಳಿ ಮಾನಸಿಕ ದೈಹಿಕ ಕಿರುಕುಳ ನೀಡಿ ಹೊಡೆಬಡೆ ಮಾಡಿ ಕೊಲೆ ಮಾಡಿ ಬಾವಿಯಲ್ಲಿ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶಾಮಲಾಬಾಯಿ ಗಂಡ ವಿಠಲಭಟ ಸಾ: ರಾಘವೇಂದ್ರ ಕಾಲೋನಿಗುಲಬರ್ಗಾ ರವರು ದಿನಾಂಕ 19-08-2014 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಕೊಠಾರಿ ಭವನ ಹಿಂದುಗಡೆ ಇರುವ ವಿದ್ಯಾಸಾಗರ ಕುಲಕರ್ಣಿ ರವರ ಮನೆಯಲ್ಲಿ ಕಾರ್ಯಾಕ್ರಮ ಮುಗಿಸಿಕೊಂಡು ನಮ್ಮ ಮನೆಗೆ ಅಟೋರಿಕ್ಷಾ ಮೂಲಕ ಹೋಗುವ ಸಲುವಾಗಿ ಕೊಠಾರಿ ಭವನ ಹಿಂದುಗಡೆಯಿಂದ ನಡೆದುಕೊಂಡು ಕೊಠಾರಿ ಭವನ ಎದುರಿನ ಪಕ್ಕದ ರೋಡ ದಾಟುತ್ತಿರುವಾಗ ಆರ್.ಪಿ ಸರ್ಕಲ ಕಡೆಯಿಂದ ಮೋ/ಸೈಕಲ ನಂಬರ ಕೆಎ-32 ಹೆಚ್-2926 ನೇದ್ದರ ಸವಾರ ಕಲ್ಯಾಣಿ ತಂದೆ ಬಸಣ್ಣ ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶರಣಬಸಪ್ಪಾ ತಂದೆ ರೇವಣಸಿದ್ದಪ್ಪಾ ಓಗಿ ಸಾ: ಬಸವಣ್ಣ ಟೆಂಪಲ ಎದುರುಗಡೆ ಭಾರತ ಕಾಲೋನಿ ಗುಲಬರ್ಗಾ  ರವರು ದಿನಾಂಕ 19-08-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಆಮಂತ್ರಣ ಹೋಟಲಕ್ಕೆ ಬಂದು ನಮ್ಮ ಸಾಹೇಬರನ್ನು ಭೇಟಿಯಾಗಿ ವಾಪಸ್ಸ ಮನೆಗೆ ಹೋಗುವ ಕುರಿತು ಬರುವಾಗ ತಂದಿದ್ದ ನನ್ನ ಮೋ/ಸೈಕಲ ನಂಬರ ಕೆಎ-32ಡಬ್ಲೂ-2148 ನೇದ್ದನ್ನು ಚಲಾಯಿಸಿಕೊಂಡು ವಾಪಸ್ಸ ಮನೆಗೆ ಹೋಗುವ ಕುರಿತು ಬಲಗಡೆ ರೋಡಿನಿಂದ ಎಡಗಡೆ ರೋಡಿಗೆ ಹೋಗುವ ಕುರಿತು ರೋಡ ಕ್ರಾಸ್ ಮಾಡುತ್ತಿರುವಾಗ ಜಗತ ಸರ್ಕಲ ಕಡೆಯಿಂದ ಅರುಣಕುಮಾರ ಇತನು ತನ್ನ ಮೋ/ಸೈಕಲ ನಂಬರ ಕೆಎ-32 ಇಇ-2762 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಬಲಗಾಲಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿಗೆ ಗೋದಾಮು ಸುಟ್ಟು ಭಸ್ಮ :
ಚೌಕ ಠಾಣೆ : ಶ್ರೀ ಸ್ನೇಹಲ್ ತಂದೆ ಘನಶ್ಯಾಮ ಸೊನಸಾಳೆ ಸಾ: ಪ್ಲಾಟ ನಂ 139 ಜೆ.ಆರ್. ನಗರ ಗುಲಬರ್ಗಾ ಇವರು ಸುಮಾರು 3 ವರ್ಷಗಳಿಂದ ಗುಲಬರ್ಗಾ ನಗರದ ನೆಹರು ಗಂಜದಲ್ಲಿ ಸವೇರಾ ಹೊಟೆಲ ಪಕ್ಕದಲ್ಲಿ ಶ್ಯಾಪ ನಂ 1279 ನೇದ್ದು ಖರೀದಿಸಿ ಸದರಿ ಶ್ಯಾಪದಲ್ಲಿ ಸಾಯಿ ಇಂಜನಿಯರಿಂಗ್ ಟ್ರೇಡಸ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು ನನ್ನ ಅಂಗಡಿಯಲ್ಲಿ ಮಾರಾಟ ಕುರಿತು ಹೊರಗಿನಿಂದ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಬಂದಿದ್ದು ನನ್ನ ಅಂಗಡಿಯಲ್ಲಿ ಇಟ್ಟಿಕೊಳ್ಳಲು ಸ್ಥಳಾವಕಾಶ ಇಲ್ಲದಕ್ಕೆ ನಾನು ನೆಹರು ಗಂಜದಲ್ಲಿರುವ ಅವಣ್ಣ ಉದನೂರ ಇವರ ಅಂದಾಜ 70 X 30 ಅಳತೆಯ ಅಂಗಡಿಯನ್ನು ಬಾಡಿಗೆಯ ಮೇಲೆ ಪಡೆದುಕೊಂಡು ಗೊಡೌನ ಮಾಡಿಕೊಂಡಿದ್ದು ನಾನು ಹೊರಗಿನಿಂದ ಖರಿದಿಸಿದ ಸಾಮಾನುಗಳಲ್ಲಿ ಸ್ವಲ್ಪ ಪ್ರಮಾಣದ ಸಾಮಾನುಗಳನ್ನು ನನ್ನ ಅಂಗಡಿಯಲ್ಲಿ ಇಟ್ಟಿಕೊಂಡು ಹೆಚ್ಚಿನ ಪ್ರಮಾಣದ ಸಾಮಾನುಗಳನ್ನು ನನ್ನ ಗೊಡೌನನಲ್ಲಿ ಇಟ್ಟಿಕೊಂಡು ಬಂದಿದ್ದು ಇರುತ್ತದೆ. ದಿನಾಂಕ 13.08.2014 ರಂದು ನನ್ನ ಖಾಸಗಿ ಕೇಲಸಕ್ಕೆ ಬೆಂಗಳೂರಕ್ಕೆ ಹೋಗಿದ್ದು ನಮ್ಮ ಅಂಗಡಿಯ ವ್ಯವಹಾರವನ್ನು ನಮ್ಮ ತಂಗಿಯಾದ ಕು: ಪ್ರೀತಿ ಇವರು ನೋಡಿಕೊಂಡು ಬಂದಿರುತ್ತಾಳೆ. ದಿನಾಂಕ 16.08.2014 ರಂದು ರಾತ್ರಿ ನಾನು ಬೆಂಗಳೂರಿನಿಂದ ಗುಲಬರ್ಗಾಕ್ಕೆ ಬರುತ್ತಿದ್ದು ಮಾರ್ಗ ಮಧ್ಯದಲ್ಲಿ ರಾತ್ರಿ 12:10 ಗಂಟೆಯ ಸುಮಾರಿಗೆ ನಮ್ಮ ಗೊಡೌನ ಅಂಗಡಿಯ ಮಾಲಿಕರಾದ ಅವ್ವಣ್ಣ ಉದನೂರ ಇವರು ನನಗೆ ಪೋನ ಮಾಡಿ ನನ್ನ ಗೊಡೌನಕ್ಕೆ ಬೆಂಕಿ ಹತ್ತಿರುವ ವಿಷಯ ತಿಳಿಸಿದ್ದು ಆಗ ನಾನು ನಮ್ಮ ತಂಗಿಗೆ ಹಾಗೂ ನಮ್ಮ ಅಂಗಡಿಯಲ್ಲಿ ಕೇಲಸ ಮಾಡುವ ಹುಡುಗನಾದ ನರೇಂದ್ರ ಇವರಿಗೆ ಗೊಡೌನಕ್ಕೆ ಬೆಂಕಿ ಹತ್ತಿರುವ ವಿಷಯ ತಿಳಿಸಿದ್ದು ನಮ್ಮ ತಂಗಿ ಸ್ಥಳಕ್ಕೆ ಹೋಗಿ ಅಗ್ನಿಶ್ಯಾಮಕ ಸಿಬ್ಬಂದಿಯವರಿಗೆ ಸಹಾಯದಿಂದ ನಮ್ಮ ಗೊಡೌನಕ್ಕೆ ಹತ್ತಿದ ಬೆಂಕಿಯನ್ನು ಆರಿಸಿದ್ದು ದಿನಾಂಕ 17.08.2014 ರಂದು ಬೆಳ್ಳಿಗ್ಗೆ ಬಂದು ನನ್ನ ಗೊಡೌನ ಅಂಗಡಿ ನೋಡಲು ಅದರಲ್ಲಿ ಇಟ್ಟಿದ ಸಾಮಾನುಗಳು ಸುಟ್ಟಿಹೊಗಿದ್ದು ನನ್ನ ಗೊಡೌನಕ್ಕೆ ಬೆಂಕಿ ಹತ್ತಿದ್ದರಿಂದ ಅಂಗಡಿಯಲ್ಲಿ ಇಟ್ಟಿದ್ದ ಸರಿ ಸುಮಾರು 17 ಲಕ್ಷ ರೂಪಾಯಿ ಬೇಲೆಯ ಮಾಲು ಬೆಂಕಿಗೆ ಸುಟ್ಟು ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಕಿರಣ ಕುಮಾರ ತಂದೆ ಅಪ್ಪಾಶಾ ಸಿಂಧೆ ಸಾ: ಹಿರೋಳಿ ತಾ: ಆಳಂದ ಇವರು ದಿನಾಂಕ: 19-08-2014 ರಂದು 08:30 ಪಿ.ಎಂ. ಗಂಟೆಯ ಸುಮಾರಿಗೆ ನಾನು ಅಂಬಾಭವಾನಿ ಗುಡಿಯ ಮುಂದಿನ ರಸ್ತೆಯ ಮೇಲಿಂದ ಬರುವಾಗ ನಮ್ಮೂರಿನ ನಾಗಪ್ಪ ಕಾಂಬಳೆ ಈತನು ಎದುರಿಗೆ ಬಂದು ನನಗೆ ತಡೆದು ನಿಲ್ಲಿಸಿ ಏ ಬೋಸಡಿ ಮಗನೆ ನಿನ್ನದು ಬಹಳ ಆಗಿದೆ ನನಗೆ ಎದರು ಮಾತನಾಡುತ್ತಿ ಅಂತಾ ನನಗೆ ಬೈಯುವಾಗ ಆತನ ಮಕ್ಕಳಾದ ಸೋಮನಾಥ ಕಾಂಬಳೆ ಮತ್ತು ಕಿರಣ ಕಾಂಬಳೆ ಹಾಗೂ ನಾಗಪ್ಪ ಕಾಂಬಳೆ ಈತನ ಅಣ್ಣನ ಮಗನಾದ ಲಕ್ಷ್ಮಣ ತಂದೆ ವಿಲಾಸ ಕಾಂಬಳೆ ಇವರು ಓಡಿ ಬಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿದರು ಆಗ ಅವರಲ್ಲಿಯ ಸೋಮನಾಥ ಕಾಂಬಳೆ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಮತ್ತು ಎದೆಗೆ ಹೊಡೆದನು ಆಗ ಕಿರಣ ಇತನು ನನ್ನ ಸೊಂಟದ ಮೇಲೆ ಕಾಲಿನಿಂದ ಒದ್ದು ಕೈಯಿಂದ ಕಪ್ಪಾಳದ ಮೇಲೆ ಹೊಡೆದನು ಲಕ್ಷ್ಮಣ ಕಾಂಬಳೆ ಇತನು ಸಹ ಕೈಮುಷ್ಠಿ ಮಾಡಿ ನನ್ನ ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶಂಕ್ರಮ್ಮಾ ಗಂಡ ಶರಣಪ್ಪಾ ಇವರು ದಿನಾಂಕಃ 18/08/2014 ರಂದು 08:00 ಪಿ.ಎಂ. ಸುಮಾರಿಗೆ ನಾವೆಲ್ಲರೂ ಊಟ ಮಾಡಿ ಮನೆಯ ಮುಂದೆ ಕುಳಿತುಕೊಂಡಾಗ ಅದೇ ವೇಳೆಗೆ ನಮ್ಮ ಓಣಿಯ ಸಂಜು ತಂದೆ ಮಲ್ಲಪ್ಪಾ ಈತನು ಬಂದು ನಾವು ಕುಳಿತಲ್ಲಿಂದಲೇ ದಾಟಿ ಹೋಗುತ್ತಿದ್ದನು. ಆಗ ನನ್ನ ಮಗನಾದ ರಾಜಶೇಖರ ಇತನು ಇಲ್ಲಿ ಹೆಣ್ಣು ಮಕ್ಕಳು ಕುಳಿತ್ತಿದ್ದಾರೆ ಹೀಗೆ ಅವರ ಮೇಲಿಂದ ಹೋಗುವುದು ಸರಿಯಲ್ಲಾ ಅಂತಾ ಅಂದಿದಕ್ಕೆ ಸಂಜು ಈತನು ನನ್ನ ಮಗನಿಗೆ ಇದೆಲ್ಲಾ ಕೇಳುವವ ನೀನು ಯಾರು ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈದು ಕೈಗಳಿಂದ ಬೆನ್ನಿನ ಮೇಲೆ ಕಪಾಳದ ಮೇಲೆ ಹೊಡೆಯ ಹತ್ತಿದ್ದ ಆಗ ನಾನು ಮತ್ತು ನನ್ನ ಮಕ್ಕಳಾದ ಸುಭದ್ರ ಮತ್ತು ಸುಧಾಮಣಿ ಎಲ್ಲರೂ ಬಿಡಿಸಿಕೊಳ್ಳುವಾಗ ಸುಭದ್ರ ಇವಳಿಗೆ ಕೈಯಿಂದ ಕಪಾಳಕ್ಕೆ ಹಾಗು ಸುಧಾಮಣಿ ಇವಳಿಗೆ ತಲೆಯ ಕೂದಲು ಹಿಡಿದು ಜಗ್ಗಾಡಿದನು. ಮತ್ತು ಅಲ್ಲೇ ಇದ್ದ ಕಲ್ಲು ತೆಗೆದುಕೊಂಡು ನನ್ನ ಎದೆಗೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.