POLICE BHAVAN KALABURAGI

POLICE BHAVAN KALABURAGI

03 May 2014

Gulbarga District Reported Crimes


ಅನಧೀಕೃತವಾಗಿ ಇಟ್ಟುಕೊಂಡ ಪಿಸ್ತೂಲ ಜಪ್ತಿ ಬಂದನ :
ಬ್ರಹ್ಮಪೂರ ಠಾಣೆ : ದಿನಾಂಕ 02-05-2014 ರಂದು ಬ್ರಹ್ಮಪೂರ ಪೊಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಝಟ್-ಪಟ್ ಬಿಬಿ ದರ್ಗಾ ಹತ್ತಿರ ಆಕ್ರಮವಾಗಿ ಆಯುಧ ಇಟ್ಟುಕೊಂಡು ಸಂಸಯಾಸ್ಪದವಾಗಿ ನಿಂತಿದ್ದ ಟಿಪು ತಂದೆ ಖುರ್ಷಿದ ಅಲಿ ಶೇಖ ಸಾ|| ಹಜ್ ಕಮೀಟಿ ಹತ್ತಿರ ದರ್ಗಾ ಏರಿಯಾ ಗುಲಬರ್ಗಾ ಇವನನ್ನು ಖಚಿತ ಬಾತ್ಮಿ ಮೇರೆಗೆ  ಶ್ರೀ. ಅಮಿತ್ ಸಿಂಗ್ ಐ.ಪಿ.ಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಹಾಗು ಶ್ರೀ ಸವಿಶಂಕರ ನಾಯಕ ಡಿ.ಎಸ್.ಪಿ '''' ಉಪವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯ ಶ್ರೀ ಕೆ,ಎಂ ಸತೀಶ ಪಿ.ಐವಿನಾಯಕ ಪಿಎಸ್ಐ ಮತ್ತು ಸಿಬ್ಬಂದಿಯವರೆಲ್ಲರೂ ಕೂಡಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಈ ಬಗ್ಗೆ ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   ಬಂದಿತ ಟಿಪು  ಈತನ ಮೇಲೆ ಗುಲಬರ್ಗಾ ನಗರದ ಇತರೆ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಬಾಗಿಯಾಗಿದ್ದು ಕ್ರಿಮಿನಲ್ ಅಪರಾದ ಹಿನ್ನೆಲೆಯುಳ್ಳವರಾಗಿರುತ್ತಾರೆ. ಸದರಿಯವನಿಂದ ಒಂದು ನಾಡ ಪಿಸ್ತೂಲ್ ಮತ್ತು ಒಂದು ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಸುಚಿತ್ರ ಗಂಡ ದಯಾನಂದ ನಾಗನಹಳ್ಳಿ  ಸಾಃ ಪ್ಲಾಟ ನಂ. 91, ಗುರುಕೃಪಾ ಪ್ರಗತಿ ಕಾಲೋನಿ ಸೇಡಂ ರೋಡ್ ಗುಲಬರ್ಗಾ ಇವರಿಗೆ ಸುಮಾರು 16 ವರ್ಷಗಳಿಂದ ಹಿಂದೆ ದಯಾನಂದ ನಾಗನಹಳ್ಳಿ ಇವರೊಂದಿಗೆ ಹಿಂದು ಸಂಪ್ರದಾಯದಂತೆ ಗುರುಹಿರಿಯರ ಸಮಕ್ಷಮದಲ್ಲಿ ಮದುವೆಯಾಗಿದ್ದು ಇರುತ್ತದೆ. ನಂತರ ಕೆಲವು ವರ್ಷಗಳು ಗಂಡನ ಮನೆಯವರು ಚೆನ್ನಾಗಿ ನೋಡಿಕೊಳ್ಳುತ್ತಾ ಬಂದಿರುತ್ತಾರೆ. ಫಿರ್ಯಾದಿದಾರರಿಗೆ 01 ಹೆಣ್ಣು, 02 ಗಂಡು ಮಕ್ಕಳಿರುತ್ತಾರೆ. ಗಂಡನಾದ ದಯಾನಂದ ಈತನು ಫಿರ್ಯಾದಿದಾರಳ ಮೇಲೆ ಸಂಶಯ ಪಟ್ಟು ಏ ರಂಡಿ ನೀನು ಫೋನಿನಲ್ಲಿ ಯಾರಿಗೆ ಮಾತಾಡುತ್ತೀ ಏಕೆ ಮಾತಾಡುತ್ತೀ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿದ್ದು ಇದ್ದು ನನ್ನ ಗಂಡ ಸುಧಾರಿಸಬಹುದು ಅಂತಾ ಸಂಸಾರ ಬೇಕು ಅಂತಾ ಸಹಿಸಿಕೊಂಡು ಬಂದಿರುತ್ತೇನೆ. ಹಿರಿಯರ ಸಮಕ್ಷಮದಲ್ಲಿ ಫಿರ್ಯಾದಿದಾರಳಿಗೆ ಪ್ರತಿ ತಿಂಗಳು ಮನೆ ಖರ್ಚಿಗಾಗಿ 10 ಸಾವಿರ ರೂಪಾಯಿ ಮನೆ ಬಾಡಿಗೆ ವಿದ್ಯುತ್ ಬಿಲ್ಲು ಕೊಡುವಂತೆ ಮಾತಾಗಿದ್ದು ಅದರಂತೆ ಫಿರ್ಯಾದಿದಾರಳ ಗಂಡ ಹಣ ಕೊಡುತ್ತಾ ಬಂದಿದ್ದು ಈಗ ಸುಮಾರು 03 ತಿಂಗಳಿಂದ ಮನೆಯ ಖರ್ಚಿಗಾಗಿ ಹಣ ಕೊಡದೇ ಮನೆ ಬಾಡಿಗೆ ಕಟ್ಟದೇ ಇದ್ದಾಗ ದಿನಾಂಕಃ 11/02/2014 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಗಂಡನಿಗೆ ನೀನು ಈ ರೀತಿ ಮಾಡುವುದು ಸರಿ ಅಲ್ಲ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಸಂಸಾರಕ್ಕೆ ಹಣ ಕೊಡು ಅಂತ ಕೇಳಿದಕ್ಕೆ ಗಂಡನಾದ ದಯಾನಂದ ಇತನು ಭೋಸಡಿ ಮೊದಲು ನೀನು ಸರಿಯಾಗಿ ಇರುವುದನ್ನು ಕಲಿ, ನಾನು ಇಲ್ಲದ ಸಮಯದಲ್ಲಿ ಬೇರೆಯವರಿಗೆ ಫೋನ್ ಮಾಡುತ್ತಿ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ಇನ್ನು ಮುಂದೆ ನನಗೆ ಹಣ ಕೇಳಿದರೆ ನಿನಗೆ ಮತ್ತು ಮಕ್ಕಳಿಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 02-05-2014 ರಂದು 5-45 ಎಮ್ ಸುಮಾರಿಗೆ ಮೃತ ಭಾರತಿ @ ಶಿವಲಿಂಗಮ್ಮ ಹಾಗೂ ಅವಳ ಗಂಡನಾದ ಮಲ್ಲಿಕಾರ್ಜುನ ಇವರು ಬೆಳಗಿನ ವಾಯು ವಿಹಾರ (ವಾಕಿಂಗ್) ಮಾಡುತ್ತಾ ಆಳಂದ ಚೆಕ್ ಪೋಸ್ಟದಿಂದ ಡಬರಾಬಾದ ಕ್ರಾಸ್ ಕಡೆಗೆ ರೋಡಿನ ಎಡ ಬದಿಯಿಂದ ನಡೆದುಕೊಂಡು ಚೋರ ಗುಂಬಜ್ ಹತ್ತೀರ ಬರುವಾಗ ಅದೆ ವೇಳೆಗೆ ಹಿಂದಿನಿಂದ ಅಂದರೆ ಆಳಂದ ಚೆಕ್ ಪೋಸ್ಟ ಕಡೆಯಿಂದ ಇನೋವಾ ಕಾರ್ ನಂ: ಕೆಎ-32-ಎಮ್-6811 ನೇದ್ದರ ಚಾಲಕನಾದ  ಅಹೆಮದ್ ಪಾಷಾ ತಂದೆ ಅಬ್ದುಲ ರಶೀದ ಸಾ|| ಖದೀರ ಚೌಕ ಎಂ,ಎಸ್,ಕೆ,ಮಿಲ್ ಗುಲಬರ್ಗಾ ಈತನು ತನ್ನ ನೋವಾ ಕಾರನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಯಿಸಿಕೊಂಡು ಬಂದು ಭಾರತಿ @ ಶಿವಲಿಂಗಮ್ಮ ಇವಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಅವಳ ಬಲ ತೆಲೆಗೆ ಭಾರಿ ರಕ್ತಗಾಯವಾಗಿ ಎಡ ಕಣ್ಣಿನ ಹತ್ತೀರ ರಕ್ತಗಾಯವಾಗಿ ಮೂಗಿನಿಂದ ರಕ್ತ ಸ್ರಾವವಾಗಿ ಉಪಚಾರ ಕುರಿತು ಜಿಲ್ಲಾ ಸರಕಾರಿ  ಆಸ್ಪತ್ರೆಗೆ ತೆಗದುಕೊಂಡು ಹೋದಾಗ ಸದರಿಯವಳು ಮೃತ ಪಟ್ಟಿರುತ್ತಾಳೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ನರೋಣಾ ಠಾಣೆ : ಶ್ರೀ ರಾಜಕುಮಾರ ತಂದೆ ಸೂರ್ಯಕಾಂತ ಭಜಂತ್ರಿ ಸಾ:ಚಿಂಚನಸೂರ ರವರು  ದಿನಾಂಕ 30/04/2014 ರಂದು ನಮ್ಮ ಮಾವನಾದ ಮಾರುತಿ ಇವರು ತಮ್ಮ ಊರಾದ ಕರಹರಿ ಗ್ರಾಮದಲ್ಲಿ ಹಣಮಂತರಾಯ ಕಬ್ಬಲುಗಾ ಇವರ ಮನೆಯಲ್ಲಿ ಮಂಗಳ ಕಾರ್ಯಕ್ರಮವಿದ್ದು ದಿನಾಂಕ 01/05/2014 ರಂದು ಕರಹರಿಗೆ ಬರಲು ತಿಳಿಸಿದ್ದು ಅದರಂತೆ ನಾನು ಮತ್ತು ನಮ್ಮ ತಂದೆ ಕೂಡಿ ನಮ್ಮ ಸಾಮಾನುಗಳನ್ನು ತೆಗೆದುಕೊಂಡು ಸಾಯಂಕಾಲ 6-00 ಗಂಟೆಗೆ ಕರಹರಿ ಗ್ರಾಮಕ್ಕೆ ತಲುಪಿ ನಮ್ಮ ಮಾವನವರೊಂದಿಗೆ ಕೂಡಿದೇವು ಆಗ ಅದೆ ಗ್ರಾಮದ ಲಿಂಗಾಯತ ಜನಾಂಗದ ಪರಮೇಶ್ವರ ಧನ್ನೂರ ಇವರು ನಮ್ಮ ಹತ್ತಿರ ಬಂದು ನಾವೆಲ್ಲರೂ ನಮ್ಮ ಮಾವನ ಮನೆಯ ಮುಂದೆ ರೋಡಿನ ಮೇಲೆ ಕುಳಿತಾಗ ನಮ್ಮ ತಂದೆಗೆ ಪರಮೇಶ್ವರ ಇವರು ನನಗೆ ಕುಡಿಯಲಿಕ್ಕೆ ಒಂದು ಕ್ವಾಟರ್ ತರಿಸು ಅಂತಾ ಹೇಳಿದಾಗ ನಮ್ಮ ತಂದೆ ನಮ್ಮ ಹತ್ತಿರ  ದುಡ್ಡು ಇಲ್ಲಾ ಎಲ್ಲಿಂದ ಸಾರಾಯಿ ತರಿಸಲಿ ಅಂತಾ ಹೇಳಿದಾಗ ಪರಮೇಶ್ವರ ಇತನು ಲೇ ಕೊರವೇ ಸುಳ್ಯಾ ಮಗನೆ ಇಷ್ಟು ಬಾಜಿ ಬಾರಿಸುವ ಹಣ ಬರುತ್ತದೆ. ಕುಡಿಸುಂದರೆ  ಸೊಕ್ಕು ಬಹಳ ಬಂದಿದೆ ಅಂತಾ ಬೈಯುತ್ತಾ ಅಲ್ಲದೆ ಬಿದ್ದ ಒಂದು ಕಲ್ಲು ತೆಗೆದುಕೊಂಡು ನಮ್ಮ ತಂದೆಯ ತಲೆಯ ಎಡಭಾಗಕ್ಕೆ ಹೊಡೆದನು. ಇದ್ದರಿಂದ ರಕ್ತಗಾಯವಾಯಿತ್ತು. ಮತ್ತು ನಿನಗೆ ಖಲ್ಲಾಸ್ ಮಾಡುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

02 May 2014

GULBARGA DIST REPORTED CRIMES

ಆಕಸ್ಮಿಕ ಬೆಂಕಿ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ: 01.05.2014 ರಂದು ಶ್ರೀ ಅಪ್ಪಾಸಾಬ ತಂದೆ ಮಲ್ಲಿಕಾರ್ಜುನ ಹುಗ್ಗಿ ಸಾ: ಹಳೆ ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ 30.04.14 ರಂದು ರಾತ್ರಿ 9.30 ಪಿ.ಎಮ್.ಕ್ಕೆ ನಾನು ಅಡತಿ ಮುಚ್ಚಿಕೊಂಡು ಮನೆಗೆ ಹೋಗಿದ್ದು. ದಿ:01.05.2014 ರಂದು ಬೆಳಿಗ್ಗೆ 8.30 ಎ.ಎಮ್.ಸುಮಾರಿಗೆ ನನ್ನ ಅಡತಿಗೆ ಬೆಂಕಿಹತ್ತಿ ಕಡಲೆತೊಗರಿಯಚೀಲಗಳು & ಖಾಲಿ ಚೀಲಗಳು ಸುಟ್ಟಿದ್ದು. ಈ ಬಗ್ಗೆ ಚಿತ್ತಾಪೂರ ಅಗ್ನಿ ಶಾಮಕ ದಳಕ್ಕೆ ಮಾಹಿತಿ ತಿಳಿಸಿ.  ಬೆಂಕಿ ಹತ್ತಿದ್ದರಿಂದ ಅಡತಿಯಲ್ಲಿದ್ದ 3000/- ಬೆಲೆಯ ಖಾಲಿ ಚೀಲಗಳು,  2) ಕಡಲಕೆ ಕಾಳು ತುಂಬಿದ್ದ  20 ಚೀಲಗಳು, 3) ತೊಗರೆ ತುಂಬಿದ ಚೀಲಗಳು ಹಾಗು ಅಡಿಯಲ್ಲಿದ್ದ 2008 ರಿಂದ 2013 ನೇ ಸಾಲಿನ ಅಡತಿಯ & ನನ್ನ ಹೆಸರಿನಲ್ಲಿದ್ದ ಅಣವೀಭದ್ರೇಶ್ವರ ದಾಲಮಿಲ್ ಹಾಗೂ ಶ್ರೀ ವಿಶ್ವನಾಥ ದಾಲ ಮಿಲ್ ದಾಖಲಾತಿಗಳು ಸುಟ್ಟಿದ್ದು.  ಒಟ್ಟು ಅ.ಕಿ. 3,90,000/-ರೂ ಸುಟ್ಟು ಲುಕ್ಸಾನ ಆಗಿರುತ್ತದೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:

ಮಹಾಗಾಂವ ಪೊಲೀಸ್ ಠಾಣೆ : ಶ್ರೀ ಅನೀಲಕುಮಾರ ತಂದೆ ಮಹಾರುದ್ರಪ್ಪ ನಿಗ್ಗಡುಗಿ ಸಾ|| ಭೀಮನಾಳ ರವರು ಠಾಣೆಗೆ ಹಾಜರಾಗಿ ದಿನಾಂಕ 01-05-2014 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ತಮ್ಮ ಸೋದರ ಮಾವ ಹಣಮಂತರಾಯ ತಂದೆ ಶಿವಶರಣಪ್ಪ ಬಿರಾದಾರ ಮತ್ತು ಮೌನೇಶ್ವರ ತಂದೆ ಅಣ್ಣೇಪ್ಪ ಚೆಂದಿ ಇವರಿಬ್ಬರಿಗೆ ನಾವದಗಿ ಗ್ರಾಮದ ಹತ್ತೀರ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾವದಗಿ ಗ್ರಾಮಕ್ಕೆ ಹೋಗಿ ನೋಡಲಾಗಿ ಹಣಮಂತರಾಯ ಬಿರಾದಾರರಿಗೆ ತಲೆಗೆ ಭಾರಿ ರಕ್ತಗಾಯವಾಗಿ, ಮೂಗಿನಿಂದ ಮತ್ತು ಬಲಕಿವಿಯಿಂದ ರಕ್ತ ಸೋರಿ ಮೃತ ಪಟ್ಟಿದ್ದು , ಮೌನೇಶ್ವರ ಚೆಂದಿ ಈತನಿಗೆ ತಲೆಗೆ ರಕ್ತಗಾಯ ಮತ್ತು ಭಾರಿ ಗುಪ್ತ ಗಾಯವಾಗಿ ಎಡ ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿ ಮೃತ ಪಟ್ಟಿದ್ದು , ಲ್ಲಿದ ಸಾರ್ವಜನಿಕರಿಗೆ ವಿಚಾರಿಸಲಾಗಿ ಮೌನೇಶ್ವರನು ಹಿರೋ ಮೇಲೆ ಹಣಮಂತರಾಯನಿಗೆ ಹಿಂದೆ ಕೂಡಿಸಿಕೊಂಡು ಗುಲ್ಬರ್ಗಾ ಕಡೆಯಿಂದ ಕಮಲಾಪೂರ ಕಡೆಗೆ ಹೋಗುತ್ತಿರುವಾಗ ಹುಮ್ನಾಬಾದ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣದ ಟವೇರಾ ನಂ: ಕೆಎ-25-ಎನ್-5919 ನೇದ್ದರ ಚಾಲಕನು ಅತಿ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸುತ್ತಾ ಬಂದು ಮೌನೇಶ್ವರ ನಡೆಸುತ್ತಿದ್ದ ಮೊ.ಸೈ,ಗೆ ಅಪಘಾತಪಡಿಸಿದ್ದರಿಂದ ಮೌನೇಶ್ವರ ಮತ್ತು ಹಣಮಂತರಾಯ ಇಬ್ಬರೂ ರೋಡಿನ ಮೇಲೆ ಬಿದ್ದು ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಸತ್ತಿರುತ್ತಾರೆ ಅಂತಾ ತಿಳಿಸಿದ್ದು. ಅಪಘಾತಪಡಿಸಿದ ನಂತರ ತವೇರಾ ಚಾಲಕ ಗಾಡಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದು. ಟವೇರಾ ಕಾರ್ ಕೆಎ-25-ಎನ್-5919 ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

01 May 2014

GULBARGA DIST REPORTED CRIMES

¥ÀwæPÁ ¥ÀæPÀluÉ


         UÀÄ®§UÁð £ÀUÀgÀzÀ°è ªÉÄðAzÀ ªÉÄÃ¯É WÉÆÃgÀ ¥ÀæPÀgÀtUÀ¼ÀÄ ªÀgÀ¢ DUÀÄwÛzÀÝjAzÀ ªÀÄvÀÄÛ PÁ£ÀÆ£ÀÄ ¸ÀĪÀåªÀ¸ÉÜ PÁ¥ÁqÀĪÀ zÀȶ֬ÄAzÀ ²æÃ ¸À«±ÀAPÀgÀ £ÁAiÀÄPÀ r.J¸À.¦ (J) G¥À-«¨sÁUÀ UÀÄ®§UÁð, ²æÃªÀÄw «dAiÀÄ®Qëöä ¦.L gÀªÀgÀÄ ªÀÄÄ£ÉßZÀÑjPÉ PÀæªÀÄ PÀÄjvÀÄ C±ÉÆÃPÀ £ÀUÀgÀ ¥ÉưøÀ oÁuÉAiÀÄ MlÄÖ 20 d£À gËr d£ÀjUÉ »rzÀÄ vÀºÀ¹Ã¯ÁÝgÀgÀÄ ºÁUÀÆ vÁ®ÆèPÁ zÀAqÁ¢üPÁjAiÀĪÀgÀ ªÀÄÄAzÉ ºÁdgÀÄ ¥Àr¹ ¸À£ÀßqÀvÉUÁV ¨ÁAqÀ NªÀgÀ ªÀiÁr¸À¯ÁVzÉ
ಅಪಘಾತ ಪ್ರಕರಣ:
ಮಾದನ ಹಿಪ್ಪರತಾ ಠಾಣೆ: ದಿ: 25-04-2014 ರಂದು ಶ್ರೀ ನಾಗೇಶ ತಂ. ಹಣಮಂತರಾಯ ಕಲಶೆಟ್ಟಿ ಸಾ: ಬೋಳೆವಾಡ ರವರು ದೂರು ಸಲ್ಲಿಸಿದ್ದೇನೆಂದರೆ ದಿ: 24-04-2014 ರಂದು ತಾತ್ರಿ 09-30 ಗಂಟೆ ಸುಮಾರಿಗೆ ಹೊರೋಳ್ಳಿ ದೇಶಮುಖ ರವರ ಹೊಲದ ಹತ್ತಿರ ಲಾರಿ ನಂ ಕೆಎ25/ಸಿ492 ನೇದ್ದರ ಚಾಲಕ ಆತ್ಮರಾಮ ತಂ ಮಲ್ಲಿಕಾರ್ಜುನ ಬೆಳಮಗಿ ತನ್ನ ಲಾರಿಯನ್ನು ಅತಿವೇಗ ಮತ್ತು ನಿಶ್ಕಾಳಜಿತನದಿಂದ ಚಲಾಯಿಸಿ ನನ್ನ ಸಹೋದರ ಅನಿಲ @ ಅಣ್ಣಪ್ಪನಿಗೆ ಅಪಘಾತಪಡಿಸಿದ್ದು. ನನ್ನ ಸಹೋದರನಿಗೆ ಗುಲಬರ್ಗಾದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಮೃತ ಪಟ್ಟ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ;
ಫರಹತಾಬಾದ ಠಾಣೆ: ದಿನಾಂಕ: 27/04/2014 ರಂದು   ಶ್ರೀ ಶರಣಪ್ಪಾ ತಂದೆ ಭೀಮಣ್ಣಾ ಪವಾರ ಸಾ|| ಫರಹತಾಬಾದ ರವರು ಶ್ರೀ ಶರಣಬಸವೇಶ್ವ ಜಾತ್ರಾ ಸ್ಥಳದಲ್ಲಿ ಶರಣಪ್ಪಾ ತಂದೆ ಮರೇಪ್ಪಾ ಹಾಗೂ ಆತನ ಸ್ನೇಹಿತರು ಮತ್ತು ಆತನ ಚಿಕ್ಕಪ್ಪನಾದ ನಾಗಪ್ಪಾ. ಚಂದ್ರು ಇವರೆಲ್ಲರು ಸೇರಿಕೊಂಡು ಶ್ರೀ ಶರಣಪ್ಪನಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದಲ್ಲದೆ ಚಾಕು ತಗೆದುಕೊಂಡು ನನ್ನ ಎರಡು ಕೈಗಳಿಗೆ ಹರಿದು ಮುಷ್ಟಿಗಾತ್ರಗಳಿಂದ ಹೊಟ್ಟೆಗೆ ಹೋಡೆದು ಜಿವ ಬೆದರಿಕೆ ಹಾಕಿದ್ದು ಅವರಿಂದ ತಪ್ಪಿಸಿಕೊಂಡು ಗುಲಬರ್ಗಾದ ಸರ್ಕಾರಿ ಆಸ್ಪತ್ರೆ ಬಂದು ಪ್ರಥಮ ಚಿಕಿತ್ಸೆಗಾಗಿ ಸೆರ್ಪಡೆಗೊಂಡು ಉಪಚಾರ ಪಡೆಯುತ್ತಿರುವ ಬಗ್ಗೆ ಸಲ್ಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಆಪಾದಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಠಾಣೆ: ದಿನಾಂಕ:27/4/2014 ರಂದು ಶ್ರೀ ±ÀgÀt§¸ÀÄì vÀAzÉ ªÀÄgÉ¥Áà  ಸಾ:¥sÀgÀºÀvÁ¨ÁzÀ ರವರು ಶರಣಬಸವೇಶ್ವರ ಗುಡಿಯ ಮುಂದೆ ಅಂಗಳದಲ್ಲಿ ನಿಂತು ಕೊಂಡಾಗ ಅದೇ ಗ್ರಾಮದ  1) ಶಂಕರ ತಂದೆ ಭಿಮಣ್ಣ ಪವಾರ 2) ಶರಣಬಸು ತಂದೆ ಭೀಮಣ್ಣ ಪವಾರ ಮತ್ತು ಅವರ ಅಣ್ಣ ತಮ್ಮಕೀಯ 3) ರಂಗಪ್ಪ ಪವಾರ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ವಿನಾ ಕಾರಣವಾಗಿ ನಮ್ಮ ತಂಗಿಗೆ ಚುಡಯಿಸ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಶಂಕರನು ಕೈ ಮುಸ್ಠಿ ಮಾಡಿ ನನಗೆ ಎಡಗಡೆಯ ಕಣ್ಣಿನ ಮೇಲೆ ಹೊಡೆದನು. ಶರಣಬಸು ತನ್ನ ಕೈಯಲ್ಲಿಂದ ಬ್ಲೇಡಿನಿಂದ ನನ್ನ ಎರಡು ಕೈಗಳ  ಮೇಲೆ ಕೊಯ್ದು ರಕ್ತಗಾಯ ಮಾಡಿರುತ್ತಾನೆ. ರಂಗಪ್ಪ ಇತನು ಕಾಲಿನಿಂದ ಒದ್ದಿರುತ್ತಾನೆ. ನಂತರ ಅಲ್ಲೆ ಇದ್ದ ನಮ್ಮೂರಿನ ಯಲ್ಲಪ್ಪ ಹಾಗರಗಿಬಸವರಾಜ ಕವಲಗಿ ಇವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ನಮ್ಮ ತಂದೆ ಮರೆಪ್ಪ ಮತ್ತು ಯಂಕಪ್ಪ ಬಳವಾಡ ಬಂದು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಅವಾಚ್ಯವಾಗಿ ಬೈದು  ಹೊಡೆಬಡೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಠಾಣೆ:  ದಿನಾಂಕ:30/04/2014 ರಂದು ಶ್ರೀ ಹಣಮಂತ ತಂದೆ ಹುಣಚಪ್ಪಾ ನಾಟಿಕಾರ ಸಾ: ಖಣದಾಳ ಠಾಣೆಗೆ ಹಾಜರಾ ನಮ್ಮೂರಿನ ಶುಬ್ಬಣ್ಣಾ ನಾಟೀಕಾರ ಇವರು 20 ವರ್ಷದಿಂದ ನಮ್ಮ ಮನೆಯಲ್ಲಿ ಬಾಡಿಗೆ ಇದ್ದು.  ಸುಬ್ಬಣ್ಣಾ ಮತ್ತು ಅವರ ಅಣ್ಣ ತಮ್ಮಂದಿರಾದ ಮಲ್ಲಿನಾಥ ಇವರ ನಡುವೆ ಮನೆಯ ಸಲುವಾಗಿ ಮತ್ತು ಹೋಲದಲ್ಲಿ ಕಟ್ಟಿಗೆ ಸುಟ್ಟಿದರ ಸಂಬಂಧ ಆಗಾಗ ಜಗಳ ಆಗುತ್ತಿದ್ದು. ದಿನಾಂಕ: 29/04/2014 ರಂದು ಸುಬ್ಬಣ್ಣನ ತಮ್ಮನಾದ ಮಲ್ಲಿನಾಥನು ನಮ್ಮ ಮನೆಯಲ್ಲಿ ಬಂದು ಸುಬ್ಬಣ್ಣನೊಂದಿಗೆ ಜಗಳ ಆಡುತ್ತಿದ್ದಾಗ ನಾನು ನಮ್ಮ ಮನೆಯಲ್ಲಿ ಜಗಳ ಮಾಡಿಕೊಳ್ಳಬೇಡಿ ನಿಮ್ಮಿದು ಏನೆ ಜಗಳ ಇದ್ದರೊ ನಿವು ಹೋರಗೆ ಹೋಗಿ ಜಗಳವಾಡಿ ಎಂದು ಹೇಳಿದ್ದಕ್ಕೆ.  ನಾನು ಪಂಚಾಯತ ಎದುರಗಡೆ ನಿಂತಾಗ ಮಲ್ಲಿನಾಥನು ಕೋಡಲಿ ತಗೆದುಕೊಂಡು ಬಂದು ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಮ್ಮ ಅಣ್ಣತಮ್ಮರ ಜಗಳದಾಗ ನಿ ಏನು ಹೇಳುತ್ತಿ ಎನ್ನುತ್ತಾ ಕೈಗಳ ಮೇಲೆ ಹೋಡೆದು ರಕ್ತ ಗಾಯ ಮಾಡಿದ್ದು. ಅವರ ತಮ್ಮನಾದ ಗುರಪ್ಪಾ ಮತ್ತು ಶಿವಪ್ಪಾ ಜಗಳ ಬಿಡಿಸಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾ ಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.