POLICE BHAVAN KALABURAGI

POLICE BHAVAN KALABURAGI

03 March 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಧಾನಪ್ಪ ಅವುಟೆ ಸಾ|| ಯಳಸಂಗಿ ಇವರು ದಿನಾಂಕ 02-03-2014 ರಂದು 1350 ಗಂಟೆಗೆ ತಾನು ಯಳಸಂಗಿ ಗ್ರಾಮದ ಪ್ರಕಾಶ ತಳವಾರ ಇವರ ಕಿರಾಣಿ ಅಂಗಡಿ ಹತ್ತಿರ ನಿಂತಾಗ ದಶರಥ ತಂದೆ ಹೊನ್ನಪ್ಪ ಜೋಗನ ಸಾ|| ಹಡಲಗಿ ಇತನು ಸರಾಯಿ ಕುಡಿಯಲು ಹಣ ಕೇಳಿದ್ದು ಅದಕ್ಕೆ ಫಿರ್ಯಾದಿಯು ಇಲ್ಲ ಅಂತ ಅಂದಿದ್ದಕ್ಕೆ ಆರೋಪಿತನು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡುತ್ತಾ ಕೈಯಿಂದ ಕಪಾಳ ಮೇಲೆ ಹೊಡೆದು ಹಣ ಕೊಡಲಿಲ್ಲ ಅಂದರೆ ನಿನಗೆ ಬಿಡುವದಿಲ್ಲ ಅಂತ ಭಯ ಹಾಕಿ ಕಲ್ಲಿನಿಂದ ತಲೆಕಪಾಳಎಡ ಕಣ್ಣಿನ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾಥುರಾಮ ತಂದೆ ಲಕ್ಷ್ಮಣ ರಾಠೋಡ ಸಾ : ಹಳ್ಯಾಳ ತಾಂಡ ಮತ್ತು ಮಾದಾಬಾಳ ತಾಂಡಾದ ನಮ್ಮ ಸಮಾಜದವರಾದ ಅಪ್ಪು ತಂದೆ ಬಾಬು ರಾಠೋಡ ರವರು ಕೂಡಿಕೊಂಡು ಬಳೂರಗಿ ಹೆಚ್.ಎನ್ ತಾಂಡಾಕೆ ಹೋಗಿ ಅಲ್ಲಿ ಕೋಟು ತಂದೆ ಹೀರೂ ರಾಠೋಡ ರವರಿಗೆ ಆಮಂತ್ರಣ ಪತ್ರ ಕೊಟ್ಟು ಮನೆಯ ಮುಂದೆ ರಸ್ತೆಯ ಮೇಲೆ ನಿಂತಾಗ ಅದೇ ಸಮಯಕ್ಕೆ ಆನಂದ ರಾಠೋಡ ಇವನು ಬಂದು ಏ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾಕ ಯಾಕ ಬಂದಿರಲೇ ಅಂತಾ ಅಂದನು ಆಗ ನಾನು ನಮಗ್ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಆನಂದ ಇವನು ನನ್ನ ಹೆಸರಿಗೆ ಮಂಜುರಾದ ಕೊಳವೆ ಬಾಯಿಯನ್ನು ಇಲ್ಲಸಲ್ಲದ ಹೇಳಿ ಕ್ಯಾನ್ಸಲ್ ಮಾಡಸಿರಿತ್ತಿರಿ ಅಂತಾ ಅಂದು ನಮ್ಮೊಂದಿಗೆ ತಕರಾರು ಮಾಡಿಕೊಳ್ಳುತ್ತಿದ್ದಾಗ ಅದೆ ಸಮಯಕ್ಕೆ ಆನಂದ ರಾಠೋಡ, ಮನೋಹರ ತಂದೆ ರತನ್ ಸಿಂಗ ರಾಠೋಡ ಮತ್ತು ರೋಹಿದಾಸ ರಾಠೋಡ ಇವರು ನಮ್ಮ ಹತ್ತಿರ ಬಂದು ಏನಲೇ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾದಲ್ಲಿ ಉಳಕೊಂಡು ಬಂದಿರಿ ಈಗ ಯಾರ ಬಿಡಸತಾರಲೆ ಅಂತಾ ಅಂದು ಆನಂದ ಇವನು ನನ್ನ ಕೈ ತಿರುವಿ ಬೆನ್ನಿನ ಮೇಲೆ ಹೊಡೆಯುತ್ತಿದ್ದನು ಮನೋಹರ ಇವನು ನನ್ನೊಂದಿಗೆ ಇದ್ದ ಅಪ್ಪು ಇವನನ್ನು ಕೈಯಿಂದ ಕಪಾಳ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾತುರಾಮ ರಾಠೋಡ ಮತ್ತು ಅಪ್ಪು ರಾಠೋ ರವರು ನಮ್ಮ ತಾಂಡಾಕೆ ಬಂದಿದ್ದು ಅವರಿಗೆ ಕೊಳವೆ ಬಾವಿಯ ವಿಷಯದ ಬಗ್ಗೆ ಕೇಳಿದಕ್ಕೆ ನನ್ನೊಂದಿಗೆ ತಕರಾರು ಮಾಡಿಕೊಂಡರು ಆಗ ಅಲ್ಲೆ ಇದ್ದ ಕೋಲು ರಾಠೋಡ ರವರು ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾನು ಬೆಳಿಗ್ಗೆ 11 ಗಂಟೆಗೆ ಬಳುರ್ಗಿ ಬಸ್ಸ್ ನಿಲ್ದಾಣದ ಹತ್ತಿರ ಇದ್ದಾಗ ಸದರಿ ನಾತುರಾಮ ರಾಠೋಡ ಎಂಬುವವನಿಗೆ ಕರೆದುಕೊಂಡು ನನ್ನ ಹತ್ತಿರ ಬಂದು ನಾತುರಾಮ ಇವನು ಏನೋ ಭೋಸಡಿ ಮಗನಾ ನಿಮ್ಮ ತಾಂಡಾಕ ಬಂದರ ನಮ್ಮೊಂದಿಗೆ ಜಗಳ ತೆಗಿತಿ ಮಗನಾ ಅಂತಾ ಅಂದು ತನ್ನ ಕೈಯಿಂದ ನನ್ನ ಏದೆಯ ಮೇಲೆ ಹೊಡೆದನು ಅಪ್ಪು ರಾಠೋಡ ಇತನು ಅಲ್ಲೆ ಇದ್ದ ಕಲ್ಲನ್ನು ತೆಗೆದುಕೊಂಡು ನನ್ನ ಬೆನ್ನನ್ನ ಮೇಲೆ ಹೊಡೆದು ಜೀವ ಸಹಿತ ಬಿಡಬ್ಯಾಡರಿ ಅಂತಾ ಅಂದು ಕಾಲಿನಿಂದ ಬೆನ್ನಿನ ಮೇಲೆ ಒದ್ದು ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 11-09-2013 ರಂದು ಗುಲಬರ್ಗಾ ಜಿಲ್ಲಾ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎಸ್.ಎಸ್.ಹುಲ್ಲೂರ ರವರು ಮತ್ತು ಅವರ ಸಿಬ್ಬಂದಿಯವರು ಘತ್ತರಗಾ ಗ್ರಾಮದ ಹತ್ತಿರ ಇರುವ ಭೀಮಾನದಿಯ ಸೇತುವೆ ಬಳಿ ಲಾರಿ ನಂ: ಕೆಎ. 32-8421 ನೇದ್ದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 280 ಚೀಲಗಳನ್ನು ಲಾರಿ ಸಮೇತ ನಿಲ್ಲಿಸಿ ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರ ವಗ್ಗೇಕರ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದರಿಂದ ಅವರು ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರು ಸಾಯಂಕಾಲ 6-00 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿರುತ್ತಾರೆ. ಸ್ಥಳದಲ್ಲಿ ಸದರಿ ಲಾರಿ ಮಾಲಿಕನಾದ ಅಲ್ಲಾಭಕ್ಷ ಬಾಗವಾನ ಈತನಿರುತ್ತಾನೆ. ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ರವರು ಅಕ್ಕಿ ಚೀಲಗಳಿದ್ದ ಲಾರಿಯನ್ನು ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರರವರಿಗೆ ಒಪ್ಪಿಸಿ ಹೋಗಿರುತ್ತಾರೆ. ನಂತರ ಅಲ್ಲಾಭಕ್ಷ ಬಾಗವಾನ ಇವನು ಅನೀಲಕುಮಾರವರಿಗೆ ನಾನು ಇದೆ ದಂಧೆ ಮಾಡುತ್ತೇನೆ. ನೀನು ಯಾವುದೆ ಪ್ರಕರಣ ದಾಖಲು ಮಾಡಿಸಬೇಡ ಪ್ರಕರಣ ದಾಖಲು ಮಾಡಿಸಿದರೆ ನಿನಗೆ ಮುಂದೆ ನಾನು ಏನು ಮಾಡುತ್ತೇನೆ ನೋಡು, ನೀನು ಅಫಜಲಪೂರದಲ್ಲಿ ಹೇಗೆ ನೌಕರಿ ಮಾಡುತ್ತಿ ನೋಡುತ್ತೇನೆ ಅಂತ ಜೀವದ ಭಯ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಅನೀಲಕುಮಾರವರು ಹೆದರಿ ಅಕ್ಕಿಚೀಲಗಳನ್ನು ತುಂಬಿದ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಬಂದಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಮ್ಮ ಮೇಲಾಧಿಕಾರಿಯವರ ಆದೇಶದಂತೆ ಆಹಾರ ನಿರೀಕ್ಷಕರಾದ ಅನೀಲಕುಮಾರ ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರಿಗೆ ವಿಚಾರಿಸಿ ಹೇಳಿಕೆಗಳು ಪಡೆದುಕೊಂಡಿದ್ದು ಅವರು ಮೇಲಿನಂತೆ ತಮ್ಮ ಹೇಳಿಕೆಗಳು ನೀಡಿರುತ್ತಾರೆ. ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಯವರೊಂದಿಗೆ ಚರ್ಚಿಸಿ ದೂರು ಸಲ್ಲಿಸಲು ತಡವಾಗಿರುತ್ತದೆ. ಆರಕ್ಷಕ ವೃತ್ತ ನಿರೀಕ್ಷಕರು ಅಫಜಲಪೂರವರ ಸಮಕ್ಷಮ ಅನೀಲಕುಮಾರ ಆಹಾರ ನಿರೀಕ್ಷಕರು ಮತ್ತು ಲೋಕೇಶಪ್ಪ ಉಗ್ರಾಣ ವ್ಯವಸ್ಥಾಪಕರು ಅಫಜಲಪೂರರವರು ಹೇಳಿಕೆ ನೀಡಿದ್ದನ್ನು ಪರಿಶೀಲಿಸಿ ಮಾನ್ಯ ಪ್ರಾದೇಶಿಕ ಆಯುಕ್ತರು ಗುಲಬರ್ಗಾರವರು ಲಾರಿಯ ಮಾಲಿಕ (ಬಿಸಿ ಊಟದ ಕಾಂಟ್ರ್ಯಾಕ್ಟರ) ಆದ ಅಲ್ಲಾಬಕ್ಷ ಬಾಗವಾನ ಇವರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ  ಶಿವಕುಮಾರ ತಂದೆ ಮಹಾದೇವಪ್ಪ ಬಿರಾದಾರ ಸಾ: ಯಲ್ಹೇರಿ ತಾ:ಜಿ: ಯಾದಗಿರ ಹಾ:ವ: ದೂರದರ್ಶನ ಕ್ವಾಟರ್ಸ ನಂ: ಸಿ-5 ಹುಮನಾಬಾದ ರಸ್ತೆ ರೇವಣಾಸಿದ್ದೇಶ್ವರ ಕಾಲೋನಿ ಗುಲಬರ್ಗಾ.  ಇವರು  ದಿನಾಂಕ: 01-03-2014  ರಂದು 8:00 ಎಎಮ್ ಸುಮಾರಿಗೆ ನಾನು ಟಿಕೇಟ ಬುಕ್ ಮಾಡಲು ಗುಲಬರ್ಗಾ ಬಸ್ ನಿಲ್ದಾಣಕ್ಕೆ ಬಂದಾಗ ರಿಸರ್ವೆಷನ ಕೌಂಟರ ಹತ್ತಿರ ಒಬ್ಬ ಸಣ್ಣ ಹುಡುಗ ನಮ್ಮ ಹತ್ತಿರ ಬಂದು ಹೋಗಿದ್ದನ್ನು ಗಮನಿಸಿದೆ ನಂತರ ಬಸ್ ನಿಲ್ದಾಣದ ಹೋರಗಡೆ ಹೋಗಿ ನನ್ನ ಜೇಬಿನಲ್ಲಿ ಇಟ್ಟಿದ್ದ ಮೊಬೈಲ್ SONY EXPERIA. L WHITE ಐ.ಎಮ್.ಇ.ಐ ನಂ: 356605053532681 ಮತ್ತು ಅದರಲ್ಲಿದ್ದ ಸಿಮ್ ನಂ: 9611761455ಕೂಡಾ ಇದ್ದು ನೋಡಲು ಇರಲಿಲ್ಲ. ನಂತರ ಬಸ್ ನಿಲ್ದಾಣದಲ್ಲಿ ಹುಡುಕಾಡಿದ್ದು ನನ್ನ ಮೊಬೈಲಿಗೆ ಫೊನ ಮಾಡಿದಾಗ ಸ್ವೀಚ್ ಆಫ್ ಆಗಿರುತ್ತದೆ. ನಾನು ಗುಲಬರ್ಗಾ ಬಸ್ ನಿಲ್ದಾಣದಲ್ಲಿ ಟಿಕೆಟ ಬುಕ್ ಮಾಡಿಸುತ್ತಿರುವಾಗ ಒಬ್ಬ ಸಣ್ಣ ಹುಡುಗ ಡಿಕ್ಕಿ ಹೊಡೆದು ಹೋಗಿದ್ದು ಆ ಸಂದರ್ಭದಲ್ಲಿ ನನ್ನ ಮೊಬೈಲ್ ಕಳ್ಳತನವಾಗಿರುತ್ತದೆ. ಆ ಸಣ್ಣ ಹುಡುಗನ ಮೇಲೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಮಳಖೇಡ ಗ್ರಮದ ಉತ್ತರಾಧಿ ಮಠದಲ್ಲಿ ಸುಮಾರು 8 ವರ್ಷಗಳ ಹಿಂದೆ ಒಂಡು ಕಟ್ಟಿಗೆಯ ತೊಟ್ಟಿಲು ಮಾಡಿಸಿದ್ದು ಅದಕ್ಕೆ ಸುಮಾರು 8 ಕೆ.ಜಿ ಯಷ್ಟು ಬೆಳ್ಳಿಯ ತಗಡು ಬಡೆದಿದ್ದು ಅಂ.ಕಿ 3.84.000/-ರೂ ನೆದ್ದು ಮತ್ತು ಒಂದು ದೇವರ ಹುಂಡಿಯನ್ನು ಮಠದ ಪ್ರಾಕಾರದಲ್ಲಿ ಇಟ್ಟಿದ್ದು ನಿನ್ನೆ ದಿನಾಂಕ 02.03.2014 ರಂದು ರಾತ್ರಿ 10:30 ಪಿ.ಎಮ್ ಕ್ಕೆ ನಾವೆಲ್ಲ ಮಠದಲ್ಲಿ ಅದನ್ನು ನೋಡಿದ್ದು. ಇಂದು ದಿನಾಂಕ 03.03.2014 ರಂದು ಬೆಳಗ್ಗೆ ೦6:00 ಗಂಟೆಗೆ ಪೂಜೆ ಮಾಡಲು ಹೋಗಿ ನೋಡಿದಾಗ ಸದರಿ ಬೆಳ್ಳಿಯ ತಗಡು ಹಚ್ಚಿದ್ದ ತೊಟ್ಟಿಲು ಮತ್ತು ದೇವರ ಮುಂದೆ ಇಟ್ಟಿದ್ದ ಹುಂಡಿ  ಇರಲಿಲ್ಲ ಸದರಿ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ. ವೆಂಕಣ್ಣಾಚಾರಿ ತಂದೆ ಕ್ರೀಷ್ಣದಾಸ ಪುಜಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ ಲೈಕ ಉರ ರೇಹಮಾನ ತಂದೆ ಅಬ್ದುಲ ರೇಹಮಾನ್ ಸಾ|| ಐವನ ಇ ಶಾಹಿ ಮಜ್ಜಿದ ಹತ್ತಿರ ಗುಲಬರ್ಗಾ ಇವರು ದಿನಾಂಕ. 03.02.2014 ರಂದು 5.00 ಪಿ.ಎಂಕ್ಕೆ ನನ್ನ ಬಜಾಜ ಡಿಸ್ಕವರ ಮೊಟಾರ್ ಸೈಕಲ ನಂ. ಕೆಎ-23-ಎಸ್-7196  ಚಾ.ನಂ.  DSVBMG95333  ಇ.ನಂ. DSUBMG15465 ಅ.ಕಿ|| 19,000/- ರೂ ನೆದ್ದನ್ನು ಏಸಿಯನ ಮಹಲ ಹತ್ತಿರ ನಿಲುಗಡೆ ಮಾಡಿ ಕೆಲಸ ಮುಗಿಸಿಕೊಂಡು  7.00 ಪಿ.ಎಂಕ್ಕೆ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೊಟಾರ್ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.  

02 March 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 01-03-2014 ರಂದು 5;30 ಪಿ.ಎಂ ಕ್ಕೆ ಶ್ರೀ ಸಂದೀಪ ತಂದೆ ಧರೆಪ್ಪಾ ನರಳೆ ಸಾ: ಉಡಚಣ ರವರು  ಕರಜಗಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯಾ ವೃತ್ತದ ಹತ್ತಿರ ಇದ್ದಾಗ ನನಗೆ ಪರಿಚಯ ಇದ್ದ ಕರಜಗಿ ಗ್ರಾಮದ ಯಲ್ಲಪ್ಪ ತಂದೆ ಭೀಮರಾವ ಹಡಪದ ಮತ್ತು ಲಕ್ಷ್ಮಣ ಹಡಪದ ಇವರು ನನಗೆ ಕರೆದರು ಆಗ ನಾನು ಅವರ ಹತ್ತಿರ ಹೋದಾಗ ಯಲ್ಲಪ್ಪ ಇವನು ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನಿನಗ ಸೊಕ್ಕ ಬಹಳಾದ ಮಗನಾ ಕ್ರೋಜರ ಸ್ಟ್ಯಾಂಡನಾಗ ಬಹಳ ಧಿಮಾಕ ಮಾಡತಿ ಮಗನಾ ಅಂತಾ ಅಂದನು ಆಗ ನಾನು ನನಗ್ಯಾಕ ಬೈತಿ ಅಂತಾ ಕೇಳಿದ್ದಕ್ಕೆ ಲಕ್ಷ್ಮಣ ಇವನು ತನ್ನ ಹತ್ತಿರ ಇದ್ದ ಒಂದು ಸಣ್ಣ ಚಾಕುವಿನಿಂದ ನನಗೆ ಹೊಡೆಯಲು ಬಂದನು ಆಗ ನಾನು ಕೈ ಅಡ್ಡ ತಂದಾಗ ನನ್ನ ಬಲಗೈ ಹೆಬ್ಬೆರಳಿನ ಹತ್ತಿರ ರಕ್ತಗಾಯವಾಯಿತು. ನಂತರ ಯಲ್ಲಪ್ಪ ಇವನು ನನಗೆ ಕೈಯಿಂದ ಕಪಾಳ ಮೇಲೆ ಹೊಡೆದು ನೆಲಕ್ಕೆ ಕೆಡವಿ ಅಲ್ಲೆ ಬಿದ್ದಿದ್ದ ಕಲ್ಲಿನಿಂದ ನನ್ನ ಎದೆಯ ಮೇಲೆ ಗುದ್ದಿ ರಕ್ತಗಾಯ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀಮತಿ. ನಿರ್ಮಲಾ ಗಂಡ ಗುಂಡಪ್ಪಾ ಲಂಡನಕರ್ ಸಾ : ಮಹಾವೀರ ನಗರ ಗುಲಬರ್ಗಾ ರವರು ದಿನಾಂಕ 31-01-2014 ರಂದು 12-30 ಪಿ.ಎಂ ಸುಮಾರಿಗೆ ಇಬ್ಬರು ಅಪರಿಚಿತ ಹುಡುಗರು ಬಿಳಿ ಫ್ಯಾಶನ ದ್ವಿಚಕ್ರವಾಹನದ ಮೇಲೆ ಬಂದು ನನಗೆ ನಿಮ್ಮಲ್ಲಿ ಮನೆ ಬಾಡಿಗೆಯಿಂದ ಸಿಗುತ್ತವೆಯೇ ಅಂತಾ ಕೇಳಿ ಮತ್ತು ನಿನ್ನೆ ರಾತ್ರಿ ಎಲ್ಲಿಗೆ ಹೋಗಿದ್ದಿರಿ ಅಂತಾ ಕೇಳಿದರು ಅದಕ್ಕೆ ನಾನು ಶಹಬಜಾರ ನಾಕಕ್ಕೆ ಹೋಗಿದ್ದು ಅಂತಾ ಹೇಳಿದೇನು ಅದಕ್ಕೆ ಅವರು ಶ್ರೀಮತಿ ಸುಸಲಾಬಾಯಿ ಗಂಡ ಅರ್ಜುನ ಹತ್ತಗುಂದಿ ಇವಳಿಗೆ ಹೊಲಸು ಶಬ್ದಗಳಿಂದ ಯಾಕೆ ಬೈದಿರಿ ಅಂತಾ ನನಗೆ ಬ್ಲೆಡಿನಿಂದ ಬಲಗೈಗೆ ಮತ್ತು ಹೊಟ್ಟೆಗೆ ಹೊಡೆದರು ಆಗ ನಾನು ಚಿರಾಡಿದಾಗ ಅವರಿಬ್ಬರು ಇನ್ನೊಮ್ಮೆ ಸಿಕ್ಕಾಗ ನಿನಗೆ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಇಬ್ಬರು ಅಪಿರಿಚಿತರಿದ್ದು ಅವರ ಹೆಸರು ವಿಳಾಸ ಗೊತ್ತಿಲ್ಲ ನೋಡಿದರೆ ಗುರ್ತಿಸುತ್ತೇನೆ. ಇದಕ್ಕೆಲ್ಲಾ ಸುಸಲಾಬಾಯಿ ಗಂಡ ಅರ್ಜುನ್ ಹತಗುಂದಿ ಇವಳ ಪ್ರಚೊದನೆ ಮೇಲಿಂದ ಘಟನೆ ಜರೂಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಞೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಆನಂತರಾಮ ತಂದೆ ನಾರಾಯಣರಾವ ಹದಗಲ ಸಾಃ ಮನೆ ನಂ.9-586/ಐ ಶೇಖರೋಜಾ ರೋಡ ಆಳಂದ ಕಾಲೋನಿ ಗುಲಬರ್ಗಾ ಇವರು ದಿನಾಂಕ 25-02-2014 ರಂದು 03-30 ಪಿ.ಎಮ್ ಕ್ಕೆ ತಮ್ಮ ಬಜಾಜ ಕವಾಸಕಿ 4ಎಸ್ ಮೋಟಾರ್ ಸೈಕಲ ನಂ. ಕೆಎ 32 ಜೆ 2072 ಚೆಸ್ಸಿ ನಂ 31FBDE23056  ಇಂಜೀನ ನಂ. 31MBDE25123 ಅಕಿ. 20,000/- ನೇದ್ದು ಡಿ.ಡಿ.ಪಿ.ಐ ಆಫೀಸ ಆವರಣದಲ್ಲಿ ನಿಲ್ಲುಗಡೆ ಮಾಡಿ ಆಫೀಸ್ ಕೆಲಸ ಮುಗಿಸಿಕೊಂಡು 03-45 ಪಿ.ಎಮ್ ಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ಸದರಿ ಸೈಕಲ ಮೋಟಾರ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

01 March 2014

Gulbarga District Reported Crimes

ಸುಲಿಗೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ದೇವಮ್ಮ ಗಂಡ ರಾಮಚಂದ್ರರೆಡ್ಡಿ ಗದ್ವಾಲ ಸಾ : ವೇಮಲಾ ಮಂಡಲ : ಅಡ್ಡಾಕಲ ತಾ : ದೇವರಕದರಾ ಜಿ|| ಮಹೇಬೂಬನಗರ ಇವರು ದಿನಾಂಕ: 27-02-14 ರಂದು ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಬರುವ ಯಾನಾಗುಂದಿ ಬೆಟ್ಟದಲ್ಲಿ ಮಹಾಶಿವರಾತ್ರಿಯ ಹಬ್ಬದಂದು ಶ್ರೀ ಮಾತಾಮಾಣಿಕೇಶ್ವರಿ ದಿವ್ಯ ದರ್ಶನ ಇದ್ದ ಕಾರಣ ನಾನು ಹಾಗೂ ನಮ್ಮೂರಿನವರಾದ ಪೆದ್ದುಲ್ಲಾ ಕೌಶಲ್ಯ ಗಂಡ ಯುಗೇಂದ್ರರೆಡ್ಡಿ ಸಾ|| ವೇಮಲಾ ಹಾಗೂ ಕುಮಾರಆಂಜನೇಯಲು ತಂದೆ ರಾಮಣ್ಣ ಸಾ|| ವೇಮಲಾ ಇವರು ಕೂಡಿ ಒಂದು ಅಟೋದಲ್ಲಿ ಕುಳಿತು ನಮ್ಮೂರದಿಂದ ಬಂದು ದಿನಾಂಕ: 27-02-14  ರಂದು  ಮುಂಜಾನೆ 10:30 ಗಂಟೆಗೆ ಯಾನಾಗುಂದಿ ಬೆಟ್ಟಕ್ಕೆ ಬಂದೇವು. ಸದರಿ ದಿವಸದಂದು ಮತಾ ಮಾಣಿಕೇಶ್ವರಿ ರವರು ಬೆಟ್ಟದ ಹಿಂಬಾಗಕ್ಕೆ ದರ್ಶನ ನೀಡಿದ್ದರಿಂದ ನಾವು ಬೆಟ್ಟದ ಹಿಂದುಗಡೆ ಹೋಗಿ ದರ್ಶನವನ್ನು ಪಡೆದುಕೊಂಡು ಅಲ್ಲಿಂದ ಮರಳಿ ಆ ದಿವಸ ಮದ್ಯಾಹ್ನ 12:30 ಗಂಟೆ ಬೆಟ್ಟದಿಂದ ಇಳಿಯುತ್ತಿದ್ದೇವು. ಈ ಸಮಯದಲ್ಲಿ ಲಕ್ಷಾಂತರ ಜನರು ಸೇರಿದ್ದರು. ಆಗ ನಾನು ಬೆಟ್ಟವನ್ನು ಇಳಿಯುವ ಕಾಲಕ್ಕೆ ನಮ್ಮ ಹಿಂದಿನಿಂದ ಒಬ್ಬ ವ್ಯಕ್ತಿಯು ಬಂದು ತನ್ನ ಕೈಯನ್ನು ನನ್ನ ಕೊರಳಿಗೆ ಹಾಕಿ ನನ್ನ ಕೊರಳಲ್ಲಿದ್ದ ಎರಡು ಬಂಗಾರದ ತಾಳಿ ಪತ್ತಿ ಹಾಗೂ 5 ಬಂಗಾರದ ಗುಂಡುಗಳು ಇರುವ ಒಟ್ಟು 3 ತೊಲ5 ಗ್ರಾಂಮದ ಒಟ್ಟು ಅ ಕಿ 1,10,000/- ರೂ ಕಿಮ್ಮತ್ತಿನ ಬಂಗಾರದ ತಾಳಿ ಸರವನ್ನು ಕೊರಳಿನಿಂದ ದೋಚಿಕೊಂಡು ಸುಲೀಗೆ ಮಾಡಿಕೊಂಡು ಓಡಿಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ
ಅಫಜಲಪೂರ ಠಾಣೆ : ಸಿದ್ರಾಮಯ್ಯ ಡಿ ಹೀರೆಮಠ ಸಾ : ಮಣೂರ ಗ್ರಾಮ ಇವರು ದಿನಾಂಕ 05.11.13 ರಂದು ಫಿರ್ಯಾದಿ ತನ್ನ ಹೊಲ ಸರ್ವೇ ನಂ 440 ನೇದ್ದರ ಹೊಲಕ್ಕೆ ಹೋದಾಗ ಮಗ್ಗಲಿನ ಹೊಲದವರಾದ ಮಹಾದೇವ ತಂದೆ ಆನಂದಪ್ಪ ಅಲ್ಲಾಪೂರ ಇವನು ಹೊಲದ ಬಾಂದರಿನ ವಿಷಯ ಮುಂದು ಇಟ್ಟುಕೊಂಡು  ಫಿರ್ಯಾದಿ ಹೊಲದಲ್ಲಿ ಅತಿಕ್ರಮ ಮಾಡಿ ಹೊಸದಾಗಿ ಕಲ್ಲು ಹಾಕಿ ಬೆಳೆಗೂ ಹಾನಿ ಮಾಡಿ ಫಿರ್ಯಾದಿಗೆ ಮಹಾದೇವ ಹಾಗೂ ಅವರ ಮಕ್ಕಳಾದ ಬಸವರಾಜ, ಶಿವಪುತ್ರ ಇವರು ಅವಾಚ್ಯ ಬೈದು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 28-02-2014 ರಂದು 11-45 ಪಿ.ಎಮ್ ಕ್ಕೆ ಆರೋಪಿ ಪರಮೇಶ್ವರ ಇತನು ತನ್ನ ಕಾರ ನಂ. ಕೆ.ಎ  03 ಎಮ್. ಬಿ4909 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾದುಲ್ಲಾ ಕಾಲೂನಿಯಲ್ಲಿರು ಫಿರ್ಯಾದಿ ಮನೆಯ ಕಂಪೌಂಡ ಗೊಡೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಕಂಪೌಂಡ ಗೋಡೆ ಬಿದ್ದು ಹಾನಿ ಆಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.