POLICE BHAVAN KALABURAGI

POLICE BHAVAN KALABURAGI

20 February 2014

Gulbarga Dist Reported Crimes

ಮಟಕಾ ಜೂಜುಕೋರರ ಬಂಧನ
ಕಾಳಗಿ ಪೊಲೀಸ್ ಠಾಣೆ: ದಿನಾಂಕ 19/02/2014 ರಂದು ಕಾಳಗಿ  ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಜಗದೇವಪ್ಪ ಪಿ.ಎಸ್.ಐ ಕಾಳಗಿ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಕಾಳಗಿ  ಗ್ರಾಮದ ಸನ್ನಿ ಟೇಲರ ಅಂಗಡಿಯ ಮುಂದಿನ ಸಾರ್ವಜನಿಕ ರಸ್ತೆಯ ಹತ್ತಿರ  ಹೋಗಿ ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುತ್ತೆನೆ ಅಂತಾ ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ಆತ ತನ್ನ ಹೆಸರು ಲಕ್ಷ್ಮಣ ತಂದೆ ತುಕಾರಾಮ ಸಾ: ಕಾಳಗಿ ಅಂತಾ ತಿಳಿಸಿದ್ದು . ಸಂಗಡ ಇದ್ದ ಪಂಚರ ಸಮಕ್ಷಮ ನಗದು ಹಣ 2015ರೂಪಾಯಿಗಳು, ಒಂದು ಬಾಲ ಪೆನ್ನುಒಂದು ಮಟಕಾ ನಂಬರ ಬರೆದ ಚೀಟಿ ಜಪ್ತಿ ಮಾಡಿಕೊಂಡು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಪೊಲೀಸ್ ಠಾಣೆ:  ದಿನಾಂಕ 19.02.2014 ರಂದು  ರೇಲ್ವೆ ಸ್ಟೇಷನ ಹತ್ತಿರ ಇರುವ ನಾಗರ ಕಟ್ಟಾ ಗಿಡದ ಕೆಳಗೆ ಕಟ್ಟೆಯ ಮೇಲೆ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ದೈವ ಲೀಲೆ ಆಟ ಆಡುತ್ತಿರುವ ಖಚಿತ ಬಾತ್ಮಿ ಬಂದ ಮೇರೆಗೆ  ಠಾಣೆಯ ಸಿಬ್ಬಂದಿಯವರಾದ  1) ಧನಸಿಂಗ ಹೆಚ್.ಸಿ.-45, 2) ತಮ್ಮಣ್ಣ ಸಿಪಿಸಿ-201, ನಾಗೇಂದ್ರ ಸಿಪಿಸಿ-651, 4) ಬಸವರಾಜ ಸಿಪಿಸಿ 799 5) ಅರ್ಜುನರಾವ ಸಿಪಿಸಿ -1075 ಹಾಗೂ ಇಬ್ಬರು ಪಂಚರಾದ 1) ಶ್ರೀ ರಜನಿಕಾಂತ ತಂದೆ ಮೋಹನರಾವ ಗಾಯಕವಾಡ ಸಾ: ಶಹಾಬಾದ  2) ಪರಶುರಾಮ ತಂದೆ ಶರಣಪ್ಪಾ ಬಡಿಗೇರ ಸಾ: ಶಹಾಬಾದ ರವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 1) ಮೋಹನ ತಂಧೆ ಕಿಶನ ನಾಯಕ ಸಾ: ಹನುಮಾನ ತಾಂಡಾ ಶಹಾಬಾದ 2) ರಂಗಪ್ಪಾ ತಂದೆ ಯಲ್ಲಪ್ಪಾ ಮಾನೆ ಸಾ: ಸುಭಾಸ ಚೌಕ ಶಹಾಬಾದ 3) ಮಲ್ಲೇಶಿ ತಂದೆ ಹೊನ್ನಪ್ಪಾ ಭಂಢಾರಿ ಸಾ:ಕೊಳಸಾ ಫೈಲ ಶಹಾಬಾದ 4) ಬಿಜು ತಂದೆ ಅರ್ಜುನ ಕಮಾನೆ ಸಾ: ಶಹಾಬಾದ 5) ಶರಣು ತಂದೆ ಶಿವಪ್ಪಾ ಭಂಡಾರಿ ಸಾ: ಶಹಾಬಾದ  6) ಯಶವಂತ ತಂಧೆ ಪ್ರಕಾಶ ಸುಮನ ಸಾ: ಶಹಾಬಾದ 7) ಆಬೀದ ಹುಸೇನ ತಂದೆ ಅಬ್ದುಲ ಮಜೀದ ಸಾ: ಶಹಾಬಾದ ರವರನ್ನು ದಸ್ತಗೀರ ಮಾಡಿ ಅವರಿಂದ ಜೂಜಾಟಕ್ಕೆ ತೊಡಗಿಸಿದ್ದ ಒಟ್ಟು 4080/-ರೂ ನಗದು ಹಣ ಮತ್ತು ಸ್ಥಳದಲ್ಲಿದ್ದ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಪಂಚನಾಮೆ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ:  
ಮಹಿಳಾ ಪೊಲೀಸ್ ಠಾಣೆ: ದಿನಾಂಕ:19.02.2014 ರಂದು 8 ಶ್ರೀಮತಿ ಶ್ರೀದೇವಿ ಗಂಡ ಲಕ್ಕಪ್ಪಾ ಸಾ: ಫಿಲ್ಟರಬೇಡ ಆಶ್ರಯ ಕಾಲೋನಿ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ತನ್ನ ಮಗಳು ಕು: ಇಂದುಬಾಯಿ ಯು  ದಿನಾಂಕ: 07.02.2014 ರಂದು  5.00 ಗಂಟೆಗೆ  ಮಾರ್ಕೇಟ್ ಹೋಗುತ್ತೇನೆ  ಅಂತಾ ಮನೆಯಿಂದ ಹೊದವಳು ವಾಪಸ ಮರಳಿ ಮನೆಗೆ ಬರದೇ ಇದ್ದ ಕಾರಣ ನಾವು ಗಾಬರಿಯಾಗಿ ಎಲ್ಲಾ ಕಡೆ ಹುಡುಕಾಡಿ ಮತ್ತು ನಮ್ಮ ಸಂಭಂದಿಕರಲ್ಲಿ ವಿಚಾರಿಸದರೂ ಕೂಡಾ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ನನ್ನ ಮಗಳು ಕು: ಇಂದುಬಾಯಿ ಇವಳ ಪತ್ತೆ ಮಾಡಿ ಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು ;
ಮಹಾಗಾಂವ ಠಾಣೆ: ದಿನಾಂಕ 19-02-14 ರಂದು  ಶ್ರೀ ಪಂಡಿತ ತಂದೆ ತಿಪ್ಪಣ್ಣಾ ಹಾದಿಮನಿ ಸಾ: ಬಬಲಾ ಐ.ಕೆ.ಮತ್ತು ಬಾಬು  ಜಮಾದಾರ  ಇಬ್ಬರು ಹಿರೋ ಹೊಂಡಾ ಸ್ಪೆಂಡರ  ಕೆಎ 34 ಎಸ್ 2019 ನೇದ್ದರ ಮೇಲೆ ನಾಡ ತಹಸೀಲ್ದಾರ ಕಚೇರಿ ಮಾಹಾಗಾಂವಕ್ಕೆ ಹೋಗುತ್ತಿರುವಾಗ ಮಾಹಾಗಾಂವ ಕ್ರಾಸ ಮತ್ತು ಕುರಿಕೋಟಾ ಗ್ರಾಮದ ಮಧ್ಯದಲ್ಲಿ ಇರುವ ಗುಲಬರ್ಗಾ- ಹುಮನಾಬಾದ ಮುಖ್ಯ ರಸ್ತೆಯ ಕೆನಲ್ ಹತ್ತಿರ  ಹೋಗುತ್ತಿರುವಾಗ ಸುಹಾಸ ಕೆ.ಎಸ್.ಅರ್.ಟಿ.ಸಿ. ಬಸ್ಸು ನಂಬರ  ಕೆಎ 32 ಎಫ 1807 ನೇದ್ದರ ಚಾಲಕ ಶೇಕ ಮೋಬಿನ ತಂದೆ ಶೇಕ ಮಹೆತಾಬ ಡಿವಿಜನ್ ನಂ.1 ಡಿಪೋ ನಂ.1 ಗುಲಬರ್ಗಾ ಸಾ: ಹಳ್ಳಿಖೇಡ (ಬಿ) ತನ್ನ ಬಸ್ಸನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸುತ್ತಾ ಮೋಟಾರ ಸೈಕಲಗೆ  ಓವರ ಟೇಕ ಮಾಡಲು ಹೋಗಿ ಮೋಟಾರ ಸೈಕಲನ  ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದಇಬ್ಬರೂ ರೋಡಿನ ಎಡಭಾಗಕ್ಕೆ  ಮೋಟಾರ ಸೈಕಲದೊಂದಿಗೆ ಬಿದ್ದು  ರಕ್ತಗಾಯಗಳಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಮಾಹಾಗಾಂವ ಪೊಲೀಸ  ಠಾಣೆ : ದಿನಾಂಕ 19-02-14 ರಂದು ಶ್ರೀ ಬಸವರಾಜ ತಂದೆ ಶಿವಶೆಟ್ಟಿ @ ಶಿವಪುತ್ರಪ್ಪ  ಬೋರೆ ಸಾ: ಬಸವೇಶ್ವರ ಕಾಲನಿ ಗುಲಬರ್ಗಾ ಮತ್ತು ಆತನ ಅಣ್ಣ ಶಿವಾನಂದ ಮತ್ತು ಅತ್ತಿಗೆ ಪ್ರಿಯಾಂಕಾ ಮಕ್ಕಳಾದ ಖುಷಿ, ಶರಣು ಹಾಗೂ ತಾಯಿ ಸುಗಲಾ ಇವರು ಕಾರ ನಂ ಕೆಎ03/ ಸಿ2512 ನೇದ್ದರಲ್ಲಿ ಗುಲಬರ್ಗಾದಿಂದ ಹೋಗುತ್ತಿರುವಾಗ ಸಂಜೆ 5-30 ಗಂಟೆ ಮಾಹಾಗಾಂವ ಕ್ರಾಸನ ಕ್ಯಾನಲ ಹತ್ತಿರ ಎದುರಿಗೆ ಹುಮನಾಬಾದ ಕಡೆಯಿಂದ ಬರುತ್ತಿದ್ದ ಟಿಪ್ಪರ ಕೆಎ32/ ಬಿ3991 ನೇದ್ದರ  ಚಾಲಕ ತನ್ನ ಟಿಪ್ಪರನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸುತ್ತಾ ಬಂದು ನಮ್ಮ ಕಾರಿನ  ಮುಂದಿನ ಭಾಗಕ್ಕೆ  ಅಪಘಾತ ಪಡಿಸಿದ್ದು ಅಪಘಾತದಿಂದ ಕಾರಿನಲ್ಲಿದ್ದ ಶಿವಾನಂದ, ಶರಣು, ಪ್ರಿಯಾಂಕಾ ರವರಿಗೆ ಭಾರಿ ರಕ್ತಗಾಯಗಳಾಗಿ ಮೃತಪಟ್ಟಿದ್ದು.  ಉಳಿದವರಿಗೆ ಸಹ ಭಾರಿ ರಕ್ತಗಾಯಗಳಾಗಿದ್ದು ಟಿಪ್ಪರ  ಕೆಎ 32 ಬಿ 3991 ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 

19 February 2014

Gulbarga Dist Reported Crimes

ನರೋಣಾ ಪೊಲೀಸ್ ಠಾಣೆ:
ಅಪಘಾತ ಪ್ರಕರಣ: ದಿ:17/02/2014 ರಂದು ಶ್ರೀ ಕೃಷ್ಣ ತಂ. ನರಸಿಂಗ್ರಾವ ಖೇಮಜಿ ಸಾ: ನಾಡೇಪಲ್ಲಿ ಸಾ: ಸೇಡಂ ರವರು ಅವರ  ತಂದೆ ನರಸಿಂಗರಾವ,  ಹೆಂಡತಿ ಅಂಜನಾಬಾಯಿ , ಅಕ್ಕ ಲಕ್ಷ್ಮಿಬಾಯಿ ಮತ್ತು ಮಕ್ಕಳಾದ ನಿಖಿತಾ, ಕಾರ್ತಿಕ, ಮತ್ತು ಸೌಮ್ಯಾ ರವರೊಂದಿಗೆ ಬಾಲಪ್ಪಾ ಇವರ ಟಾಟಾ ಇಂಡಿಕಾ ಕಾರ ನಂ: ಕೆ.ಎ33 5399 ರಲ್ಲಿ ಕಾರನಲ್ಲಿ ಚಾಲಕ ಶೇಖ ಮಹೇಬೂಬ ತಂದೆ ಶೇಖ ಚಾಂದಪಾಶಾ ಸಾ: ಗುರುವಿಠಕಲ್ ರವರೊಂದಿಗೆ ತುಳಜಾಪೂರಕ್ಕೆ ಹೋಗುತ್ತಿರುವಾಗ  ಕಡಗಂಚಿ ದಾಟಿ ಆಳಂದ ಕಡೆಗೆ ಹೋಗುವಾಗ ಕಾರ ಚಾಲಕ ಶೇಖ ಮಹೇಬೂಬ ತಂದೆ ಶೇಖ ಚಾಂದಪಾಶಾ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಾ ಲಾಡ ಚಿಂಚೊಳ್ಳಿ ಕ್ರಾಸ ಇನ್ನೂ ಸ್ವಲ್ಪ ದೂರದಲ್ಲಿರುವಾಗ ಮುಂದೆ ಹೋಗುತ್ತಿದ್ದ ಒಂದು ಕಬ್ಬಿನ ಲೋಡ ಇದ್ದ ಲಾರಿಗೆ ಕಾರನ್ನು ಹಿಂದಿನಿಂದ ಅಪಘಾರ ಪಡಿಸಿದನು. ಇದರಿಂದ ಕಾರ ಪೂರ್ತಿ ಡ್ಯಾಮೇಜ್ ಆಗಿ ಒಳಗಡೆ ಕುಳುತ್ತಿದ್ದ ನರಸಿಂಗರಾವರವರಿಗೆ ಬಾಯಿಗೆ ಭಾರಿ ಪೆಟ್ಟಾಗಿ ಮುಂದಿನ ಹಲ್ಲುಗಳು ಬಿದ್ದಿದ್ದು, ಮತ್ತು ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ ಹಾಗೂ ತಲೆಗೆ ಒಳಪೆಟ್ಟಾಗಿ ಕಿವಿಯಿಂದಾ ರಕ್ತ ಸ್ರಾವವಾಗಿರುತ್ತದೆ. ಮತ್ತು ಮಗಳಾದ ನಿಖಿತಾಳಿಗೆ ಬಲಗಡೆ ಹುಬ್ಬಿನ ಹತ್ತಿರ ರಕ್ತಗಾಯವಾಗಿದೆ. ಎದೆಗೆ ಒಳಪೆಟ್ಟಾಗಿದ್ದು ನನಗೆ ಮತ್ತು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು.  ಅಪಘತದ ನಂತರ ಕಾರ ಚಾಲಕನು ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ನಂತರ ನಾನು 108 ವಾಹನದಲ್ಲಿ ನಮ್ಮ ತಂದೆಗೆ ಹಾಗೂ ನಮ್ಮ ಮಗಳಾದ ನಿಖಿತಾಗೆ ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ನಮ್ಮ ತಂದೆಯವರಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 18/02/2014 ರಂದು ನಸುಕಿನ ಜಾವ 4:30 ಗಂಟೆಗೆ ಮೃತಪಟ್ಟಿರುತ್ತಾರೆ. ಕಾರಣ ಅಪಘಾತಪಡಿಸಿದ  ಕಾರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆ:
ಕಳವು ಪ್ರಕರಣ: ದಿನಾಂಕ. 18.02.2014 ರಂದು ಶ್ರೀ ಮಹ್ಮದ ರಫೀಕ ತಂದೆ ನವಾಬಮಿಯಾ ಸಾ: ಮಂಜೂರ ಮಜ್ಜಿದ ಇಸ್ಲಾಮಬಾದ ಕಾಲೂನಿ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ. 15.02.2014 ರಂದು ತನ್ನ ಹೊಂಡಾ ಶೈನ್ ನಂ. ಕೆಎ32/ಯು4651 ಅ.ಕಿ. 30,000/- ರೂ ನೆದ್ದನ್ನು ಜಿಲ್ಲಾ ನ್ಯಾಯಾಲಯದ ಗೇಟ ಮುಂದಿ ನಿಲ್ಲಿಸಿ ನ್ಯಾಯಾಲಯದಲ್ಲಿ ಹೋಗಿ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಂದಿನ ವೆರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇರೆಗೆ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬ್ರಹ್ಮಪೂರ ಪೊಲೀಸ್ ಠಾಣೆ:
ಸುಲಿಗೆ ಪ್ರಕರಣ: ದಿನಾಂಕ: 18/02/2014 ರಂದು  ಶ್ರೀ.ಐನೋದ್ದಿನ್ ತಂದೆ ಮಹ್ಮದ್ ಪೀರಅಹೆಮದ್ ಘರವಾಲೆ ಸಾ|| ಗುಲ್ಲಾ ಜಕ್ಕಲ ಮಂಡಲ ತಾ|| ಮದನೂರ್ ಜಿ|| ನಿಜಾಮಬಾದ ಹಾಲವಸ್ತಿ ಕುಸನೂರ ತಾಂಡಾ ಗುಲಬರ್ಗಾ.ರವರು ಠಾಣೆಗೆ ಹಾಜರಾಗಿ ದಿನಾಂಕ 17/02/14 ರಂದು ರಾತ್ರಿ 10 ಗಂಟೆಯ ಸುಮಾರಿಗೆ ತಮ್ಮ ಗೆಳೆಯ ಊರಿಗೆ ಹೋಗುವುದು ಇದ್ದ ಕಾರಣಾ ಅವರಿಗೆ ಬಸ್ಸ್ಟ್ಯಾಂಡಿಗೆ ಬಿಟ್ಟು ಮರಳಿ ತನ್ನ ಹೀರೊ ಹೊಂಡಾ ಮೋಟಾರ ಸೈಕಲ್ ಮೇಲೆ ಮತಳಿ ಬರುತ್ತಿರುವಾಗ ರಾತ್ರಿ 1230 ಗಂಟೆಯ ಸುಮಾರಿಗೆ ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜು ಎದುರುಗಡೆ ಹೋಗುತ್ತಿರುವಾಗ ಎದುರಿನಿಂದ ಒಬ್ಬ ಅಂದಾಜು 20 ರಿಂದ 25 ವಯಸ್ಸಿನವನು ಮೈ ಮೇಲೆ ಹಸಿರು ಬಣ್ಣದ ತೋಳಿನ ಶರ್ಟ ಜೀನ್ಸ ಪ್ಯಾಂಟ್ ಉಟ್ಟವನು ನನ್ನ ಮೋಟಾರ ಸೈಕಲ್ಲಿಗೆ ಅಡ್ಡಗಟ್ಟಿ ನಿಂತು ಕುತ್ತಿಗೆಗೆ ಚಾಕು ಹಚ್ಚಿ ಹೆದರಿಸಿ ತನ್ನ ಹತ್ತಿರ ಇದ್ದ ನಗದು ಹಣ 600/- ರೂ. ಮತ್ತು ಒಂದು ಕಾರ್ಬನ ಮೋಬಾಯಿಲ್ 1600/- ಬೆಲೆಯುಳ್ಳದು ಹೀಗೆ ಒಟ್ಟು 2200/- ಬೆಲೆಯ ಮಾಲನ್ನು ಕಸಿದುಕೊಂಡು ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

18 February 2014

Gulbarga District Reported Crimes

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ವೆಂಕಟ ತಂದೆ ವಿರಣ್ಣ ತಡೋಳೆ ವಾಸ ರಾಮಪೂರ ತಾ: ಬಸವ ಕಲ್ಯಾಣ ಜಿ: ಬಿದರ ಇವರು ಹಾಗು ಬಾಪು ತಂದೆ ಗುಂಡಪ್ಪ ಗೆದಗೆ, ಮತ್ತು ಹೆಣ್ಣುಮಕ್ಕಳಾದ ರೇಣುಕಾ ಗಂಡ ಗುಂಡಪ್ಪಾ ಬಾರಾಬಾಯಿ , ದ್ರೌಪತಿ ಗಂಡ ಪ್ರಹಲಾದ ತಿಳಗುಂಟೆ , ಶಾಂತಾಬಾಯಿ ಗಂಡ ರವಿ ರಂಗನೂರ, ರೇವಣ್ಣಮ್ಮ ಗಂಡ ಅಣ್ಣಪ್ಪ ಬಾರಬಾಯಿ , ಹಿಗೆ ಎಲ್ಲರೂ, ಕೂಡಿ ಲಾರಿ ಮೇಲೆ ಕೂಲಿ ಕೆಲಸಕ್ಕೆ ಹೋಗಿರುತ್ತೇವೆ. ದಿನಾಂಕ 17-02-2014 ರಂದು ಬೆಳ್ಳಿಗ್ಗೆ ನಾನು ಮತ್ತು ಸಂಗಡಿಗರು ಕೂಡಿ ನಮ್ಮೂರಿನಿಂದ ಶಿರಗಾಪೂರ ಕ್ರಾಸ ಹತ್ತಿರ ಜೀಪನಲ್ಲಿ ಬಂದು ನಿಂತಾಗ ಅಲ್ಲೆ ನಮ್ಮ ಮಾಲಿಕನಾಧ ನಾಶಿರ ಪಟೇಲ ಇವರ ಲಾರಿ ನಂ: ಹೆಚ್.ಆರ್.-38 ಎಲ್-5324 ನೇದ್ದು, ಅದರ ಜೋತೆ ಲಾರಿ ಚಾಲಕ ನಬಿಸಾಬ ಬಸವ ಕಲ್ಯಾಣ ಇತನು ನಿಂತಿದು, ನೋಡಿ ಲಾರಿ ಹತ್ತಿರ ಹೋಗಿದ್ದಾಗ , ಲಾರಿಯಲ್ಲಿ ಉಸುಕು ಇತ್ತು. ನನಗೆ ಹೊಡಲ ಗ್ರಾಮದಲ್ಲಿ ಖಾಲಿ ಮಾಡಿ ಊರಿಗೆ ಹೋಗುವುದು. ಅಂತಾ ತಿಳಿಸಿದಾಗ ನಾವೆಲ್ಲರು ಲಾರಿಯಲ್ಲಿದ್ದ, ಉಸುಕು ಮೇಲೆ ಕುಳೀತೆವು. ಲಾರಿ ಚಾಲಕ ಚಲಾಯಿಸುತ್ತಿದ್ದ ಬಬಲಾದ ಶ್ರೀಚಂದ ಗ್ರಾಮದಿಂದ ಚಿಂಚನಸೂರ ಕಡೆಗೆ ಹೋಗುವ ರೋಡಿಗೆ ಜವಳಗಾ ಬಿ ಗ್ರಾಮದ ಕ್ರಾಸ ರೋಡಿನಿಂದ ಚಾಲಕನು ಚಲಾಯಿಸುತ್ತಿದ್ದನು. ಚಾಲಕನು ಅತೀ ವೇಗದಿಂದ ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದನು. ಟಾಯರ್ ಒಮ್ಮೆಲೆ ಬಸ್ಟಾಗಿದ್ದರಿಂದ ಲಾರಿ ವೇಗ ಆಯಾ ತಪ್ಪಿ ರೋಡಿನ ಬಲಬಾಗದಲ್ಲಿ ಪಲ್ಟಿಯಾಯಿತು. ಅಪಘಾತದಲ್ಲಿ ನನಗೆ ಎಡಗಾಲ ಪಾದದ ಹಿಂಬದಿಗೆ ಭಾರಿ ಒಳ ಗುಪ್ತಗಾಯವಾಗಿರುತ್ತದೆ. ಹಾಗು ಬಾಪು ತಂದೆ ಗುಂಡಪ್ಪ ಗೆದಗೆ, ಮತ್ತು ಹೆಣ್ಣುಮಕ್ಕಳಾದ ರೇಣುಕಾ ಗಂಡ ಗುಂಡಪ್ಪಾ ಬಾರಾಬಾಯಿ , ದ್ರೌಪತಿ ಗಂಡ ಪ್ರಹಲಾದ ತಿಳಗುಂಟೆ , ಶಾಂತಾಬಾಯಿ ಗಂಡ ರವಿ ರಂಗನೂರ, ರೇವಣ್ಣಮ್ಮ ಗಂಡ ಅಣ್ಣಪ್ಪ ಬಾರಬಾಯಿ ರವರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಚಾಲಕನಿಗೆ ನೋಡಲು ತಲೆಗೆ ಬಲಬಾಗ ಪೂರ್ತಿ ಜಜ್ಜಿದ್ದು, ಲಾರಿ ಹಾಯ್ದು ಬಲಗೈ ಮುಂಗೈ ಮುರುದಿದ್ದು, ಎಡಗೈ ಹೊಟ್ಟೆಗೆ ಭಾರಿ ರಕ್ತಗಾಯವಾಗಿ  ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ದಿನಾಂಕ 17-02-2014  ರಂದು 08-15 ಪಿ.ಎಮ್ ಕ್ಕೆ ಶ್ರೀ ಬಾಬುರಾವ ತಂದೆ ಪೀರಪ್ಪಾಸಾಃ ಪಿ.ಡಬ್ಲು.ಡಿ ಕ್ವಾಟರ್ಸ, ಆರ್.ಟಿ.ಓ ಕ್ರಾಸ್ ಹತ್ತಿರ ಗುಲಬರ್ಗಾ ರವರು ಆರ್.ಟಿ.ಓ ಕ್ರಾಸ್ ಹತ್ತಿರ ರಸ್ತೆ ದಾಟುತ್ತಿದ್ದಾಗ ಮೋಟಾರ ಸೈಕಲ ಕೆ.ಎ 32 ಇ.ಬಿ 9282 ನೇದ್ದನ್ನು ಜಿ.ಜಿ.ಎಚ್ ಆಸ್ಪತ್ರೆಯ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಿದ್ದಣ್ಣ ತಂದೆ ಮಲ್ಲೇಶಪ್ಪ ನಿಂಬರಗಾ ಸಾಃ ಪ್ಲಾಟ್ ನಂ.220ಎ ಅನುಗ್ರಹ ನಿಲಯ, ವೀರೇಂದ್ರ ಪಾಟೀಲ್ ಬಡಾವಣೆ ಗುಲಬರ್ಗಾ ಇವರು ದಿನಾಂಕ 14-02-2014 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಮನೆಗೆ ಬೀಗ ಹಾಕಿಕೊಂಡು ತಂಗಿಯ ಮಗಳ ಮದುವೆಗೆ ರೋಣ ಮತ್ತು ಗದಗಕ್ಕೆ  ಹೋಗಿ. ಮರಳಿ ಇಂದು ದಿನಾಂಕ 17-02-2014 ರಂದು ರಾತ್ರಿ 11.00 ಪಿಎಂ ಗಂಟೆಗೆ ಗುಲಬರ್ಗಾದ ಮನೆಗೆ ಬಂದು ನೋಡಲು, ಮನೆಯ ಮುಖ್ಯ ಬಾಗಿಲ ಚನಲ್ ಗೇಟಿನ ಕೀಲಿ ತೆರೆದಿತ್ತು, ನಂತರ ಚನಲ್ ಗೇಟ್ ತೆಗೆದು ನೋಡಲು ಬಾಗಿಲ ಕೀಲಿ ಇರಲಿಲ್ಲಾ ಮತ್ತು ಬಾಗಿಲ ತೆರೆದಿದ್ದು ಇರುತ್ತದೆ. ಮನೆಯೊಳಗೆ ಹೋಗಿ ಚೆಕ್ ಮಾಡಿ ನೋಡಲು ಬೆಡ್ ರೂಮಿನ ಬಾಗಿಲು ಮುರಿದಿದ್ದು ಮತ್ತು ಅಲೆಮಾರಿಯನ್ನು ನೋಡಲು ಅಲೆಮಾರಿಯ ಬಾಗಿಲು ಮುರಿದಿದ್ದು ಲಾಕರ್ ಕೂಡಾ ತೆರೆದಿತ್ತು ಅಲ್ಲದೆ ಎಲ್ಲಾ ಬಟ್ಟೆಗಳು ಹಾಗೂ ಕಾಗದ ಪತ್ರಗಳು ಚೆಲ್ಲಾಪಿಲ್ಲಿಯಾಗಿದ್ದು, ಅಲಮಾರಿ ಚೆಕ್ ಮಾಡಿ ನೋಡಲಾಗಿ ಅಲಮಾರಿಯಲ್ಲಿದ್ದ ನಗದು ಹಣ ಃಆಗು ಬಂಗಾರದ ಆಭರಣಗಳು ಹೀಗೆ  ಒಟ್ಟು 64,800/-ರೂ. ಬೆಲೆ ಬಾಳುವಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.