POLICE BHAVAN KALABURAGI

POLICE BHAVAN KALABURAGI

23 October 2013

Gulbarga District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಚಿದಾನಂದ ತಂದೆ ಭೋಜರಾಯ ಪಾನಾಗಾಂವ ಸಾ: ಇಟಗಾ ತಾ: ಜೇವರ್ಗಿ ದಿನಾಂಕ 22-10-13 ರಂದು ಸಂಜೆ 5-00 ಗಂಟೆಯ ಸುಮಾರಿಗೆ  ಸಂಧ್ಯಾಕಾಲ ದಿನ ಪತ್ರಿಕೆ ನೋಡಿದಾಗ ಅದರಲ್ಲಿ  ದಿನಾಂಕ 21-10-13 ರಂದು ರಾತ್ರಿ ಸಮಯದಲ್ಲಿ  ಕೆರೆ ಭೋಸಗಾ ಕ್ರಾಸ ಹತ್ತಿರವಿದ್ದ ವೇರ ಹೌಸ ಸಮೀಪ  ಯಾವುದೋ ಒಂದು ವಾಹನ  ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಒಬ್ಬ ವ್ಯಕ್ತಿ ಮೃತಪಟ್ಟಿರುತ್ತಾನೆ  ಅನ್ನುವ  ಸುದ್ಧಿ ಓದಿದೆ ಅದರಲ್ಲಿಯ ಭಾವಚಿತ್ರ ನೋಡಲಾಗಿ ಅದು ನನ್ನ ಖಾಸ ತಂಗಿ ಗಂಡನಾದ ಮಲ್ಲಿನಾಥ ತಂದೆ ಶಂಕ್ರೆಪ್ಪ ಅವರಾದಿ ಇತನದು ಅಂತಾ ಕಂಡು ಬಂದಿದ್ದರಿಂದ ನಾನು ಮತ್ತು  ನಮ್ಮೂರಿನ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಶೈಲ ಶೀಲವಂತ ಹಾಗೂ ಇತರರು ಕೂಡಿ  ಜೀಪು ಕಟ್ಟಿಕೊಂಡು  ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಗೆ ಹೋಗಿ  ಅಲ್ಲಿ ಸುರಕ್ಷತೆಯಲ್ಲಿ ಇಟ್ಟ ಶವವನ್ನು ನೋಡಲಾಗಿ ಅದು  ನನ್ನ ತಂಗಿಯ ಗಂಡನಾದ ಮಲ್ಲಿನಾಥ ತಂದೆ ಶಂಕ್ರೆಪ್ಪ ಅವರಾದಿ ಈತನದೇ ಇತ್ತು. ಅವರ ಎಡಗಾಲ ಮೊಳಕಾಲ ಮೇಲಿಂದ ಕೆಳಗಿನ ಪಾದದವರೆಗೆ ಹರಿದ ಭಾರಿ ರಕ್ತಗಾಯವಾಗಿ ಮಾಂಸ ಕಂಡು ಬರುತ್ತಿದ್ದು, ಮೂಗಿನಿಂದ ರಕ್ತ ಸೋರಿದ್ದು, ಎಡ ಭುಜದ ಹಿಂಭಾಗಕ್ಕೆ ಕಂದು ಗಟ್ಟಿದಗಾಯ, ಎಡ ಹಣೆಯ ಮೇಲೆ ಕಂದು ಗಟ್ಟಿದ ಗಾಯಗಳು ಇದ್ದವು. ಸದರಿ ನನ್ನ ತಂಗಿಯ ಗಂಡನಾದ ಮಲ್ಲಿನಾಥ ಈತನು  ಗುಲಬರ್ಗಾ ರಾಣೇಶ ಪೀರ ದರ್ಗಾ ಹತ್ತಿರ ನಿರ್ಮಾಣಗೊಳ್ಳುತ್ತಿರುವ  ಕೃಷಿ ಬಾಲಕರ ವಸತಿ ಗೃಹದ  ಕಟ್ಟಡ ವಾಚಮ್ಯಾನ ಅಂತಾ ಕಳೆದ 3 ತಿಂಗಳಿಂದ ಕೆಲಸ ಮಾಡುತ್ತಿದ್ದರು.  ನಿನ್ನೆ ದಿನಾಂಕ 21-10-13 ರಂದು ರಾತ್ರಿ ಸಮಯದಲ್ಲಿ  ಯಾವುದೋ ಒಂದು ವಾಹನದ ಚಾಲಕನು  ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಿಜಿತನದಿಂದ ನಡೆಯಿಸಿ ನನ್ನತಂಗಿ ಗಂಡನಾದ ಮಲ್ಲಿನಾಥ ಅವರಾದಿ  ಈತನಿಗೆ  ಡಿಕ್ಕಿ ಹೊಡೆದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು  ಇರುತ್ತದೆ. ಡಿಕ್ಕಿ ಪಡಿಸಿದ ವಾಹನ ಚಾಲಕನು ವಾಹನ ನಿಲ್ಲಿಸದೇ ಹಾಗೇ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 22-10-2013 ರಂದು ಶ್ರಿ ದತ್ತಪ್ಪ ತಂದೆ ಸಿದ್ದಣ್ಣ ಕಮಸಗಿ ಸಾ||ಅಫಜಲಪೂರ ರವರು ಮತ್ತು ತಮ್ಮ  ಹೆಂಡತಿ ಇಬ್ಬರು ಕೂಡಿ ಹೊಲಕ್ಕೆ ಹೋಗಿ ಕೆಲಸ ಮಾಡಿ ಮರಳಿ 6 ಪಿಎಮ್ಮದ ಸುಮಾರಿಗೆ ಮನೆಗೆ ಬರುವಾಗ ಶರಣಪ್ಪ ಶಿರವಾರ ವರ ಕಟ್ಟಿಗೆ ಅಡ್ಡದ ಹತ್ತಿರ ರೋಡಿನ ಏಡ ಬಾಜು ಒಂದು ಟಾಕ್ಟರ ಚಾಲಕ ಅತಿವೇಗ ಹಾಗೂ ನಿಸ್ಕಾಳಜಿಒತನದಿಂದ ನಡೆಸಿಕೊಂಡು ಬಂದು ನನಗೆ ಹಾಗೂ ನನ್ನ ಹೆಮಡತಿಗೆ ಡಿಕ್ಕಿ ಪಡಿಸಿ ತನ್ನ ಟಾಕ್ಟ್ ಸಮೆತ ಡಿ ಹೋಗಿರುತ್ತಾನೆ ಸದರಿ ಚಾಲಕನ ಹೆಸರು ಮಲ್ಲು ತಂದೆ ಶರನಪ್ಪ ಭಂಗಿ ಅಂತ ಇರುತ್ತದೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 13-10-2013 ರಂದು 4-00 ಪಿ.ಎಮ್ ಕ್ಕೆ ಶ್ರೀ ಸಮಿಯೋದ್ದಿನ ತಂದೆ ಮಹ್ಮದ ಹಮಿದೊದ್ದಿನ  ಸಾಃ ಮ. ನಂ. 6-535 ಬಟ್ಲೆ ಅಲಾವಾ ಮೋಮಿನಪೂರ ಗುಲಬರ್ಗಾ ತನ್ನ ಮೋಟಾರ ಸೈಕಲ ನಂ. ಕೆ.ಎ 07 ಎಲ್2261 ನೇದ್ದನ್ನು ಕೆ.ಬಿ.ಎನ್ ಕಡೆಯಿಂದ ಚಲಾಯಿಸಿಕೊಂಡು ತನ್ನ ಮನೆಗೆ ಹೋಗುವ ಕುರಿತು ಪರಾಹನಾ ಹೈಸ್ಕೂಲ ಹತ್ತಿರ ಹೋಗುತ್ತಿದ್ದಾಗ ಮೋಟಾರ ಕೆಂಪು ಬಣ್ಣದ ಹೀರೊ ಹೊಂಡಾ ಮೋಟಾರ ಸೈಕಲ ನಂ. ಕೆ.ಎ 32 ವಿ 6080 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ಮೇಲೆ ಹಿಂದ ಒಬ್ಬನನ್ನು ಕೂಡಿಸಿಕೊಂಡು ಡಂಕಾ ಕ್ರಾಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ತನಗೆ ಬಲಗೈ ಬುಜಕ್ಕೆ ಮತ್ತು ಬಲಗಾಲು ಪಾದಕ್ಕೆ ಭಾರಿ ಗುಪ್ತ ಪೆಟ್ಟಾಗಿ ರಕ್ಗಗಾಯವಾಗಿದ್ದು ಆಗ ಅಲ್ಲಿನ ಜನರು ಅಪಘಾತ ಪಡಿಸಿದ ಮೋಟಾರ ಸೈಕಲ ಮತ್ತು ಅಲ್ಲಿದ್ದ  ಇನ್ನೊಬ್ಬನನ್ನು ಕರೆದುಕೊಂಡು ರೋಜಾ ಪೊಲೀಸ್ ಠಾಣೆಗೆ ಒಪ್ಪಿಸಿ ಉಪಚಾರ ಕುರಿತು ಹೋಗಿ ಉಪಚಾರ ಪಡೆದುಕೊಂಡು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 October 2013

Gulbarga District Reported Crimes

ಎ.ಟಿ.ಎಮ್. ನಲ್ಲಿ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮೇಲಗಿರಾಚಾರ್ಯ ತಂದೆ ಹೈಗ್ರವಚಾರ್ಯ ಸಾ|| ಪ್ಲಾಟ ನಂ.107 ಶಕ್ತಿನಗರ ಗುಲಬರ್ಗಾ  ರವರು ದಿನಾಂಕ. 04.11.2012 ರಂದು  ನಾನು ಎ.ಟಿ.ಎಂ ಎಸ್.ಬಿ.ಐ ಜೇವರ್ಗಿ ಕಾಲೂನಿಯಿಂದ ಹಣ ತಗೆದುಕೊಳ್ಳಲು ಹೋದಾಗ ಎ.ಟಿ.ಎಂ ಕೀ ಬೋರ್ಡ ಸರಿಯಾಗ ಕೆಲಸ ನಿರ್ವಹಿಸುತ್ತಿರಲಿಲ್ಲ ಆಗ ನಾನು ಪ್ರಯತ್ನಿಸಿದರು ಹಣ ಬರಲಿಲ್ಲ ನಾನು ಹೋದ ನಂತರ ಯಾರೋ ನನ್ನ ಅಕೌಂಟನಲ್ಲಿಯ 34,000/- ರೂ ಹಣ ಡ್ರಾ ಮಾಡಿಕೋಂಡು ಹೋಗಿರುತ್ತಾರೆ ಅಂತಾ ನೀಡಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದರೋಡೆಕೊರರ ಬಂಧನ:
ರೋಜಾ ಠಾಣೆ : ದಿನಾಂಕ 21-10-2013 ರಂದು ರಾತ್ರಿ ವೇಳೆಯಲ್ಲಿ ರೋಜಾ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆಸಿಟಿ ಇಂಜಿನೀಯರಿಂಗ ಕಾಲೇಜು ಹತ್ತಿರ ರಿಂಗ ರೋಡಿಗೆ ದರೋಡೆಗೆ ಸಿದ್ದತೆ ಮಾಡಿಕೊಂಡು ಕುಳಿತಿದ್ದ 1) ಸತೀಶ @ ಮಾರ್ಕೇಟ ಸತೀಶ @ ಸಂಗಮ ಸತೀಶ ತಂದೆ ವೆಂಕಟಸ್ವಾಮಿ ಸ್ವಾಮಿ ರೆಡ್ಡಿ ಸಾ: ಯಾಕುಬ ಮನಿಯಾರ ಚಾಳ ಪೋಸ್ಟ ಆಫೀಸ ಹತ್ತಿರ ಗುಲಬರ್ಗಾ 2) ರಶೀದ @ ಶೇಖರಸೀದ ತಂದೆ ಶೇಖ ಬಸೀರ ಅಹ್ಮದ ಸಾ: ಸಾಹೇಬ ಸ್ಕೂಲ ಹತ್ತಿರ ಇಸ್ಲಾಮಾಬಾದ ಗುಲಬರ್ಗಾ 3) ನಾಗರಾಜ @ ಸ್ಮಾಟ ನಾಗ ತಂದೆ ವೆಂಕಟೇಶ ಯಾದವ ಸಾ : ಬಂಬು ಬಜಾರ ಗಂಜ ಗುಲಬರ್ಗಾ 4) ವಿಶಾಲ ತಂದೆ ರಾಜಸಿಂಗ ಟಾಕ್ ಸಾ: ಮೇಹತ್ತಾರ ಗಲ್ಲಿ ಗಾಜೀಪೂರ ಗುಲಬರ್ಗಾ 5) ಸಾಗರ ತಂದೆ ಬಲರಾಜ ಲಾಹೋಟಿ ಸಾ : ಮೇತ್ತಾರ ಗಲ್ಲಿ ಗುಲಬರ್ಗಾ 6) ಸಾಗರ ತಂದೆ ರಾಜು ರಿಡ್ಲಾನ ಸಾ: ಮೇಹತ್ತಾರ ಗಲ್ಲಿ ಗಾಜೀಪೂರ ಗುಲಬರ್ಗಾ 7) ಸಾಜೀದ ತಂದೆ ಸೈಯ್ಯದ ಹುಸೇನ ಸಾ: ಮಹ್ಮದಿ ಮಜೀದ ಹತ್ತಿರ ಎಮ್.ಎಸ್.ಕೆ. ಮಿಲ್ ಗುಲಬರ್ಗಾ 8) ಮೊಸಿನ ತಂದೆ ಅಮಿರ ಪಾಷಾ ಸಾ: ಸಂತ್ರಾಸ ವಾಡಿ ನೀಚೆ ಗಲ್ಲಿ ಗುಲಬರ್ಗಾ ಇವರನ್ನು ಶ್ರೀ ಅಮೀತ್ ಸಿಂಗ್ ಐ.ಪಿ.ಎಸ್. ಜಿಲ್ಲಾ ಪೊಲೀಸ ಅಧೀಕ್ಷಕರು ಶ್ರೀ ಕಾಶೀನಾಥ ತಳಕೇರಿ ಅಪರ ಪೊಲೀಸ ಅಧೀಕ್ಷಕರು ಗುಲಬರ್ಗಾ ಹಾಗು ಶ್ರೀ ಸವಿಶಂಕರ ನಾಯಕ ಡಿ.ಎಸ್.ಪಿ.  ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹ ದಳದ ಅಧೀಕಾರಿಯಾದ ವಿನಾಯಕ ಪಿ.ಎಸ್.ಐ. ಬ್ರಹ್ಮಪೂರ ಠಾಣೆ ಮತ್ತು ಹೇಮಂತ ಕುಮಾರ ಪಿ.ಎಸ್.ಐ ರಾಘವೇಂದ್ರ ನಗರ ಠಾಣೆ ಹಾಗು ನಾರಾಯಣಪ್ಪಾ ಪಿ.ಐ. ರೋಜಾ ಠಾಣೆ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ. ಶಿವಕುಮಾರ ಹೆಚ್.ಸಿ. ಶಿವಪ್ಪಾ ಕಮಾಂಡೋ ಎಚ್.ಸಿ ದೇವಿಂದ್ರಪ್ಪಾ ಪಿಸಿ ರಾಮುಪವಾರ ಪಿಸಿ ರಫಿಯೋದ್ದಿನ ಪಿಸಿ ಶಿವಪ್ರಕಾಶ ಪಿಸಿ ಸುಭಾಷ ಪಿಸಿ ಚನ್ನಪ್ಪ ಸಾಹುಕಾರ ಪಿಸಿ ರವರರೆಲ್ಲರು ಕುಡಿಕೊಂಡು ದಾಳಿ ಮಾಡಿ ಮೇಲ್ಕಂಡ ದರೋಡೆಕೊರರನ್ನು ಬಂಧೀಸುವಲ್ಲಿ ಯಶಸ್ವಿಯಾಗಿದ್ದು ಈ ಬಗ್ಗೆ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಬಂದಿತ ಆರೋಪಿತರೆಲ್ಲರು ಕುಖ್ಯಾತ ರೌಡಿಗಳಿದ್ದು ಗುಲಬರ್ಗಾದ ನಗರ ಹಾಗು ಇತರೆ ಪೊಲೀಸ ಠಾಣೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕ್ರಿಮಿನಲ್ ಅಪರಾಧ ಹಿನ್ನೆಲೆಯುಳ್ಳವರಾಗಿರುತ್ತಾರೆ ಸದರಿ ದರೋಡೆಕೊರರಿಂದ ದರೋಡೆ ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ ತಲವಾರಗಳು ಚಾಕುಗಳನ್ನು ಖಾರದ ಪುಡಿ ಮತ್ತು ಹಗ್ಗ ಹಾಗು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಟಕಾ ಜುಜಾಟ ನಿರತ ವ್ಯಕ್ತಿಯ ಬಂಧನ :
ಮಾಹಾಗಾಂವ ಠಾಣೆ :ದಿನಾಂಕ 21-10-13 ರಂದು ಪಿ,ಎಮ್,ಕ್ಕೆ ಹರಸೂರ ಗ್ರಾಮದ ಬಸ್ಸನಿಲ್ದಾಣದ ಹತ್ತಿರದ ಕಟ್ಟೆಯ ಮೇಲೆ ಸಾರ್ವಜನಿಕ ರಸ್ತೆಯ ಮೇಲೆ  ಒಬ್ಬ ವ್ಯಕ್ತಿ  ಕುಳಿತುಕೊಂಡು ಮಟಕಾ ಜುಜಾಟಕ್ಕೆ ಸಂಬಂದಿಸಿದ ಅಂಕಿ ಸಂಖ್ಯೆಯ ಚೀಟಿಗಳನ್ನು ಹೋಗಿ ಬರುವ ಸರ್ವಜನಿಕರಿಂದ ಹಣ ಪಡೆದುಕೊಂಡು 1 ರೂ ಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಮೋಸ ವಂಚನೆ ಮಾಡುತ್ತಿದ್ದಾನೆ ಅಂತಾ ಖಚೀತ ಮಾಹಿತಿ ಬಂದಿದ್ದರಿಂದ ತಾನು ಇಬ್ಬರೂ ಪಂಚರು ಸಮಕ್ಷಮದಲ್ಲಿ ಪಿ,ಐ ಡಿ,ಸಿ,,ಬಿ, ರವರ ಮಾರ್ಗದರ್ಶನದಲ್ಲಿ ನಮ್ಮ ಠಾಣೆಯ ಸಿಬ್ಬಂದಿಯವರಾದ ಫೈಜುಲ್ಲಾ ಖಾನ ಎ,ಎಸ್,ಐ ಶಿವರಾಯ ಪಿ,ಸಿ, 946, ಡಿ,ಸಿ,ಐ ಘಟಕ ಗುಲಬರ್ಗಾದ ಅಧೀಕಾರಿ ಎ,ಎಸ್,ಐ ದತ್ತಾತ್ರೆಯ ಶಿವಯೋಗಿ ಹೆಚ್,ಸಿ, 220,ಪ್ರಕಾಶ ಹೆಚ್,ಸಿ, 370, ಮಹಾದೇವ ಹೆಚ್,ಸಿ, 11 ಮಲ್ಲಣ್ಣ ಹೆಚ್,ಸಿ, 98, ರವರೊಂದಿಗೆ  ಠಾಣೆಯಿಂದ ಹೋರಟು 8.15 ಪಿ,ಎಮ್,ಕ್ಕೆ ಹರಸೂರ ಗ್ರಾಮದ ಹೋರವಲಯದಲ್ಲಿ ಜೀಪ ನಿಲ್ಲಿಸಿ ನಡೆಯುತ್ತಾ ಸದರ  ಸ್ಥಳಕ್ಕೆ 8.30 ಪಿ,ಎಮ್,ಕ್ಕೆ ತಲುಪಿ ಒಂದು ಶಾಲೆಯ ಗೋಡೆಯ ಮರೆಯಲ್ಲಿ ನಿಂತ್ತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬಸ್ಸ ನಿಲ್ದಾಣದ ಪಕ್ಕದ ಕಟ್ಟೆಯ ಮೇಲೆ ಕುಳಿತು ಹೋಗಿ ಬರುವ ಸಾರ್ವಜನಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಮಟಕಾ ಜೂಜಾಟಕ್ಕೆ ಸಂಬಂದಿಸಿದ ಅಂಕಿ ಸಂಖ್ಯೆ ಯುಳ್ಳ ಚೀಟಿ ಬರೆದುಕೊಡುತ್ತಿದ್ದ ಹಣ ಸಂಗ್ರಹ ಮಾಡುತ್ತಾ ಸಾರ್ವಜನಿಕರಿಗೆ ಮೋಸ ವಂಚನೆ ಮಾಡುತ್ತಿದ್ದನ್ನು ಕಂಡು ಪಂಚರ ಸಮಕ್ಷಮ ಆ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಆತನ  ಹೆಸರು ವಿಚಾರಿಸಿ ಅಂಗ ಶೋದನೆ ಮಾಡಲಾಗಿ ಆತ ತನ್ನ ಹೆಸರು ಅಂಬಾದಾಸ ತಂ ಬಾಬುರಾವ ಕಂಭಾರ ವ||28 ಜಾ|| ಕಂಭಾರ /ಗಿಸ್ಸಾಡಿ ಸಾ|| ಹರಸೂರ ಅಂತಾ ಹೆಳಿದ್ದು ಅಂಗ ಶೋಧನೆ ಮಾಡಲಾಗಿ ಆತನ  ಹತ್ತಿರ 12,000=00 ರೂ ನಗದು ಹಣ ಒಂದು ಕಪ್ಪು ಬೂದಿ ಬಣ್ಣದ ಇಂಟೆಕ್ಸ ಕಂಪನಿಯ ಮೊಬಾಯಿಲ ಹ್ಯಾಂಡ ಸಟ್ಟ ಅ||ಕಿ|| 300=00 ರೂ 12 ಮಟಕಾ ಅಂಕಿಸಂಖ್ಯೆ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ನ ದೊರೆತ್ತಿದ್ದು ಸದರಿ ಮುದ್ದೆ ಮಾಲು ಹಾಗೂ ಅರೋಪಿತನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 


Gulbarga District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಪ್ರಭುಲಿಂಗ ತಂದೆ ದಯಾನಂದ  ಬಿರಾದಾರ   ಸಾ; ಕಲಕುಟಗಿ ತಾ; ಆಳಂದ  ಜಿ: ಗುಲಬರ್ಗಾ  ಇವರ  ತಾಯಿಯಾದ ಶ್ರೀಮತಿ.ಬಸಮ್ಮ ಗಂಡ ದಯಾನಂದ ಬಿರಾದಾರ ವ; 60 ವರ್ಷ ಇವಳಿಗೆ ಕಣ್ಣಿನ ತೊಂದರೆ ಇದ್ದರಿಂದ ಅವಳನ್ನು ಉಪಚಾರ ಕುರಿತು ಮಹಾಗಾಂವ ಆಸ್ಪತ್ರೆಗೆ ತೋರಿಸಿಕೊಂಡು ಬರಲು ನಾನು ಮತ್ತು ನನ್ನ ತಾಯಿ ಬಸಮ್ಮ ಮತ್ತು ನನ್ನ ತಮ್ಮನ ಮಗನಾದ ನಾಗರಾಜ  ತಂದೆ ಶಂಭುಲಿಂಗ  ಬಿರಾದಾರ  ವ: 06 ವರ್ಷ ಈತನನ್ನು ಕರೆದುಕೊಂಡು ಇಂದು ದಿನಾಂಕ: 21-10-2013 ರಂದು ಬೆಳೆಗ್ಗೆ ನಮ್ಮೂರಿನಿಂದ ಖಾಸಗಿ ಜೀಪಿನಲ್ಲಿ ಕುಳಿತು ಹೊರಟು ಕಮಲಾಪೂರದ ಓಕಳಿ ಕ್ರಾಸ್ ಹತ್ತಿರ ಬಂದು ಜೀಪಿನಿಂದ ಇಳಿದು ಮುಂದೆ ಗುಲಬರ್ಗಾ - ಹುಮನಾಬಾದ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯನ್ನು ನಾವು ದಾಟುತ್ತಿದ್ದಾಗ  ನನ್ನ ತಮ್ಮನ ಮಗ ನಾಗರಾಜ ಈತನು ನಮಗಿಂತ ಸ್ವಲ್ಪ ಮುಂದೆ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ  ಹುಮನಾಬಾದ ಕಡೆಯಿಂದ ಒಬ್ಬ ಡಿ.ಸಿ.ಎಂ ಟೆಂಪೋ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ತಮ್ಮನ ಮಗ ನಾಗರಾಜ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಅಷ್ಟರಲ್ಲಿ ನಾನು, ನನ್ನ ತಾಯಿ ಮತ್ತು ನಮ್ಮ ಪರಿಚಯದ  ಬಸವರಾಜ ತಂದೆ ಅಣ್ಣಾರಾವ ಚಿತಲಿ ಸಾ: ಅಂಬಲಗಾ ತಾ; ಆಳಂದ ಎಲ್ಲರೂ ಕೂಡಿ ಓಡಿ ಹೋಗಿ ನೋಡಲಾಗಿ ನಾಗರಾಜನ ಹೊಟ್ಟೆಯ ಮೇಲೆ ಟೆಂಪೋದ ಮುಂದಿನ ಚಕ್ರ ಹಾದು ಹೋಗಿದ್ದು, ನಾಗರಾಜನ ಮೈಕೈಗಳಿಗೆ ಭಾರಿ ರಕ್ತಗಾಯಗಳಾಗಿದ್ದು ಆಸ್ಪತ್ರೆಯಗೆ ತೆಗೆದುಕೊಂಡು ಹೋಗಿದ್ದು ವೈದ್ಯರು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ವಿಶ್ವನಾಥ ತಂ ಭೀಮಸಿಂಗ ಪವಾರ  ಸಾ: ಮಹಾಗಾಂವ ತಾಂಡ  ರವರು ಮತ್ತು ಪ್ರಕಾಶ ತಂದೆ ಶಿವರಾಮ ಚವಾಣ  ಇವರು ಕ್ರಿಕೇಟ ಆಟ ಆಡುವ ಸಂಬಂದ ದಿನಾಂಕ 20-10-2013 ರಂದು  ತಮ್ಮ  ತಾಂಡದವನೆಯಾದ ಸಂಜು ತಂದ ಶಂಕರ  ಚವಾಣ ಇತನ ಹತ್ತಿರ ಇದ್ದ ಮೋಟಾರ ಸೈಕಲ ಹೀರೊ ಪ್ರೊ ನಂ ಕೆ,, 32 ಇಡಿ, 5219 ನೇದ್ದನ್ನು ತೆಗೆದುಕೊಂಡು ಭೂಸಣಗಿಗೆ ತಾಂಡಾದಿಂದ ಬೆಳಗ್ಗೆ 10.00 ಗಂಟೆಗೆ ಹೊರಟು ಅಲ್ಲಿ ಕ್ರಿಕೇಟ ಆಡಿ  ಸಾಯಂಕಾಲ 7,00 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸಿಗೆ ಬಂದು ಚಾಹ ಕುಡಿದು ಎಲ್ಲಾ ಹುಡುಗರು ಟಂಟಂ ಹಿಡಿದುಕೊಂಡು ತಾಂಡಗೆ ಹೋಗಿದ್ದು ತಾನು ಪ್ರಕಾಶ ತಂದಿದ್ದ ಸದರ ಮೋಟಾರ ಸೈಕಲ ಮೇಲೆ ಹಿಂದೆ ಕುಳಿತಿದ್ದು ಪ್ರಕಾಶ ಇತನು ಮೋಟಾರ ಸೈಕಲ ಚಲಾಯಿಸುತ್ತಿದ್ದು 7.45 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸದಿಂದ ತಾಂಡಾ ಕಡೆಗೆ ಹೊರಟಿದ್ದು 8.00 ಪಿ,ಎಮ್,ಕ್ಕೆ ಮಹಾಗಾಂವ ಗ್ರಾಮದ ಪ್ರೌಡ ಶಾಲೆ ದಾಟಿ ಸ್ವಲ್ಪ ಮುಂದೆ ಇದ್ದ ಬ್ರಿಡ್ಜ ಹತ್ತಿರ ಹೋಗುತ್ತಿದ್ದಾಗ ಪ್ರಕಾಶ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಸ್ಕೀಡ್ ಮಾಡಿ ಆ ಬ್ರಿಡ್ಜಗೆ ಡಿಕ್ಕಿ ಹೊಡೆದಿದ್ದರಿಂದ ನನಗೆ ತಲೆಗೆ ಮೈಕೈಗಳಿಗೆ ಭಾರಿ ರಕ್ತಗಾಯಗಲಾಗಿದ್ದು ಪ್ರಕಾಶನಿಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯವಾಗಿ ಬಹಳ ರಕ್ತ ಸೋರುತ್ತಿತ್ತು ಮತ್ತು ಎಡಗಾಲ ಪಾದದ ಹತ್ತಿರ ರಕ್ತಗಾಯಗಳಾಗಿದ್ದು ನಂತರ  ಬಂದು 108 ದಲ್ಲಿ ಹಾಕಿಕೊಂಡು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾರೆ ಪ್ರಕಾಶ ಇನ್ನು ಮಾತಾಡುತ್ತಿಲ್ಲಾ  ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಉದಯ ತಂ ಸುಭಾಶ ದೊಡ್ಡಮನಿ  ಸಾ : ಪ್ರಶಾಂತ ನಗರು (ಎ) ಗುಲಬರ್ಗಾ ರವರು ದಿನಾಂಕ 20-10-2013 ರಂದು ಆತನ ಗೆಳೆಯನಾದ ಕುಸನೂರ ಗ್ರಾಮದ ಸರಸ್ವತಿಪೂರದ ಸಿದ್ದರಾಜ ತಂ ರಮೇಶ ಒಂಟೆ ಇತನು ಬಂದು ತನ್ನ ಅಜ್ಜಿಗೆ ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮಕ್ಕೆ ಹೋಗಿ ಮಾತನಾಡಿಸಿ ಬರೋಣ ನಿನ್ನ ಮೋಟಾರ ಸೈಕಲ ತೊಗು ಅಂತಾ ಅಂದಿದ್ದಕ್ಕೆ ಪಿರ್ಯಾದಿದಾರನು ತನ್ನ ಮನೆಯಲ್ಲಿದ್ದ ತನ್ನ ಅಣ್ಣನಾದ ಉತ್ತಮ ಇತನ ಟಿ,ವಿ,ಎಸ್, ಸ್ಟಾರ ಸೀಟಿ ನಂ ಕೆ,, 32 ಡಬ್ಲೂ 7516 ನೇದ್ದನ್ನು ತೆಗೆದುಕೊಂಡಿದ್ದು 3.15 ಪಿ,ಎಮ್,ಕ್ಕೆ ಗುಲಬರ್ಗಾದಿಂದ ಗಡವಂತಿ ಗ್ರಾಮಕ್ಕೆ ಹೊರಟಿದ್ದು 4.45 ಪಿ,ಎಮ್,ಕ್ಕೆ  ಸಿದ್ದರಾಜು ಇತನು ಸದರ ಮೋಟಾರ ಸೈಕಲ ಚಲಾಯಿಸುತ್ತಿದ್ದು ತಾನು ಹಿಂದೆ ಕುಳತಿದ್ದು ಮಹಾಗಾಂವ ಕ್ರಾಸ ಹತ್ತಿರ ಇರುವ ಸಿದ್ದಭಾರತಿ ಶಾಲೆ ದಾಟುತಿದ್ದಂತೆಯ ಸಿದ್ದರಾಜ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡಿನ ಎಡಗಡೆ ಇರುವ ಗುಟದ ಕಲ್ಲಿಗೆ ಜೋರಾಗಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗು ಮತ್ತು ಸಿದ್ದರಾಜು ಇತನಿಗು ಕಾಲು ಮತ್ತು ಮೈಕೈಗಳಿಗೆ ಬಾರಿ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.