POLICE BHAVAN KALABURAGI

POLICE BHAVAN KALABURAGI

16 October 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಮಳಖೇಡ ಠಾಣೆ:
ಇಂದು ದಿನಾಂಕ 15-10-2013 ರಂದು 3 ಪಿ.ಎಂ.ಕ್ಕೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಹೇಳಿಕೆ ಬರೆಸಿದ್ದು ಸಾರಾಂಶವೇನೆಂದೆರೆ ತಮ್ಮ ರಾಜಶ್ರೀ ಸಿಮೆಂಟ ಫ್ಯಾಕ್ಟ್ರಿಯ ಆರ್‌ಸಿ-4 ದ ಓಪನ ಯಾರ್ಡನಲ್ಲಿ ಆಗಸ್ಟ 2012 ರಲ್ಲಿ ವ್ಯಾಗನ ಲೋಡ್ರ ಪ್ಯಾನೆಲಗಳು ಮತ್ತು ಟ್ರಕ ಲೋಡರ ಪ್ಯಾನೆಲಗಳು ಮತ್ತು ಪ್ಯಾಕ್ರ ಸ್ಪೌಟ ಪ್ಯಾನೆಲಗಳು ತಂದು ಇಟ್ಟಿದ್ದು ದಿನಾಂಕ 12-10-2013 ರಂದು ಸದ್ರಿಯವುಗಳು ಅಳವಡಿಸುವ ಕುರಿತು ನೋಡಲಾಗಿ ಅದ್ರಲ್ಲಿ ಇದ್ದ ಎಂಪಿಸಿಬಿ ಎಲೆಕ್ಟ್ರಿಕಲ್ ಸಾಮಾನುಗಳು ಅ.ಕಿ 35,89,400-00 ರೂ. ನೇದ್ದವುಗಳು ವಸ್ತುಗಳನ್ನುಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾನೂನು ಕ್ರಮ ಜರುಗಿಸುವ ಕುರಿತು ಹೇಳಿಕೆ ವಸೂಲಾಗಿದ್ದು ಸದ್ರಿ ಹೇಳಿಕೆಯ ಸಾರಾಂಶದ ಮೇಲಿಂದ ನಾನು ರವಿಕುಮಾರ ದರ್ಮಟ್ಟಿ ಪಿ.ಎಸ್.ಐ ಮಳಖೇಡ ಠಾಣೆ ಗುನ್ನೆ ನಂ. 94/2013 ಕಲಂ 379ಐಪಿಸಿ ನೇದ್ದ್ರಲ್ಲಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ನೆಲೋಗಿ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ:
ಇಂದು ದಿನಾಂಕ: 15/10/2013 ರಂದು 08.00 ಎ ಎಮ್ ಕ್ಕೆ ನಮ್ಮ ತಮ್ಮ ಗುಂಡಪ್ಪ ಹಾಗೂ ನಮ್ಮ ಅಣ್ಣನ ಮಗ ಸಿದ್ದಪ್ಪ ಹೊಲಕ್ಕೆ ಹೋಗುತ್ತಿದ್ದಾಗ ನಮ್ಮೂರ ಶಾಲೆಯ ಮುಂದಿನ ರಸ್ತೆಯ ಮೇಲೆ ಹೋಗುತ್ತಿದ್ದಾಗ ಶಿವಪ್ಪ ಕಿರಣಗಿ ಇವನು ಬೋಸಡಿ ಮಕ್ಕಳು ಹ್ಯಾಂಗ ಹೋಗುತ್ತಾರೆ ನೋಡು ಯಾರದರೇ ಅಶ್ತಿ ತಿಂದು ಹ್ಯಾಂಗ ನಡೆದಾರ ಅಂದಾಗ ಇಬ್ಬರು ಯಾಕಪ್ಪ ಯಾರ ಆಸ್ತಿ ಯಾರು ತಿಂದಾರ ಅಂತಾ ಕೇಳಿ ಇಬ್ಬರು ಬಾಯಿ ಮಾಡುತ್ತಿದ್ದಾಗ ನಮ್ಮ ಮನೆಯಿಂದ ನಾನು ಎದ್ದು ಹೋಗಿ ಯಾಕ ಬಾಯಿ ಮಾಡುತ್ತೀರಿ ಅಂತಾ ಕೇಳಿದೇ, ಆಗ ರಾಜು ತಂದೆ ದೌಲತ್ತರಾಯ, ಮಹಾಂತಪ್ಪ  ತಂದೆ ದೌಲತ್ತರಾಯ, ಅರವಿಂದ ತಂದೆ ಸಾಯಿಬಣ್ಣ,ಚನ್ನಪ್ಪ ತಂದೆ ರುದ್ರಗೌಡ ಇವರೆಲ್ಲರೂ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ಬೋಸಡಿ ಮಕ್ಕಳೆ ನಿಮಗೆ ನಾವೇ ನಮ್ಮ ತಂದೆಯವರೆ ಊಟ ಮಾಡಲಿಕ್ಕ ಆಸ್ತಿ ಕೊಟ್ಟಾರ ಸೂಳೆ ಮಕ್ಕಳೆ ಅಂದವರೇ, ನನಗೆ ಶಿವಪ್ಪ ಕಿರಣಗಿ ಇವನು ಅಲ್ಲೆ ಬಿದ್ದ ಕಲ್ಲನ್ನು ತಗೆದುಕೊಂಡು ತಲೆಯ ಮೇಲೆ ಹೊಡೆದನು. ಆಗ ರಾಜು ಚೂರಿ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನಮ್ಮ ಗುಂಡಪ್ಪನ ಬೆನ್ನ ಮೇಲೆ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಅದೇ ಬಡಿಗೆಯಿಂದ ನಮ್ಮ ಅಣ್ಣನ ಮಗ ಸಿದ್ದಪ್ಪ ಇವನ ಎಡಗೈ ಮೊಳಕೈ ಮೇಲೆ ಹೊಡೆದನು. ಆಗ ನಮ್ಮ ತಾಯಿ ನೀಲಮ್ಮ, ಅಣ್ಣನ ಹೆಂಡತಿ ಸರುಬಾಯಿ, ಬೌರಮ್ಮ ಇವರು ಬಿಡಿಸಲು ಬಂದರು. ಆಗ ನಮ್ಮ ತಾಯಿಗೆ ಬಲಗಡೆ ಕಪಾಳ ಮೇಲೆ ಬಡಿಗೆಯಿಂದ ಹೊಡೆದನು. ಸರುಬಾಯಿ ಇವಳಿಗೆ ಅರವಿಂದನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯ ಮಾಡಿದನು. ಬೌರಮ್ಮ ಇವಳಿಗೆ ಚನ್ನಪ್ಪ ಕುರನಳ್ಳಿ ಇವನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನ ಮೇಲೆ ಹೊಡೆದು ಒಳ ಪೆಟ್ಟು ಮಾಡಿದನು. ಆಗ ನಮ್ಮೂರ ಶ್ರೀಮಂತ ಸಂಗೊಂಡ ಇವನು ಬಂದು ಜಗಳ ಬಿಡಿಸಿದನು.ನಮ್ಮ ತಮ್ಮ ನಮ್ಮ ಅಣ್ಣನ ಮಗ ಹೊಲಕ್ಕೆ ಹೋಗುವಾಗ ವೀನಾಕಾರಣ ಜಗಳ ತಗೆದು ಹೊಡೆ-ಬಡೆ ಮಾಡಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ಹೇಳಿಬರೆಯಿಸಿದ್ದು ಅದೇ.ಇಂದು ದಿನಾಂಕ: 15/10/2013 ರಂದು 10.00 ಎ ಎಮ್ ಕ್ಕೆ ಫಿರ್ಯಾದಿ ಹೇಳಿಕೆ ಪಡೆದುಕೊಂಡು,  ಸದರ ಹೇಳಿಕೆ ಸಾರಾಂಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ಮಾದನ ಹಿಪ್ಪರಗಾ ಪೊಲೀಸ್ ಠಾಣೆ:

ಹಲ್ಲೆ ಪ್ರಕರಣ:

ಶ್ರೀಮತಿ ಕವಿತಾ ಗಂಡ ಕಾಶಿನಾಥ ಸೂಜೆ ವಯ:30 ವರ್ಷ ಉ:ಹೊಲ-ಮನೆ ಕೆಲಸ ಸಾ:ಹಿರೋಳ್ಳಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೆನೆಂದರೆ ಇಂದು ದಿನಾಂಕ:15/10/2013 ರಂದು ನನ್ನ ಮನೆಯ ಎದುರಿನ ಸ್ಥಳದಲ್ಲಿ ನನ್ನ ಬಾವನಾದ ಸೋಮನಾಥ ತಂದೆ ನಾಗೇಂದ್ರ ಸೂಜೆ ಇತನು ನನ್ನ ಮನೆ ಕಡೆ ನೀರು ಚೆಲ್ಲಾಬೇಡ ಅಂದರು ನೀರು ಚೇಲುತಿ ಅಂತಾ ನನ್ನೊಂದಿಗೆ ಜಗಳ ತಗೆದು ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಸೀರೆ ಹಿಡಿದು ಜಗ್ಗಿ ಅವಮಾನ ಮಾಡಿರುತ್ತಾನೆ. ನಾನು ಬಿಡಿಸಿಕೊಂಡು ಹೋಗುತ್ತಿದ್ದಾಗ ನನಗೆ ತಡೆದು ನಿಲ್ಲಿಸಿ ಇನ್ನೊಮೆ ನನ್ನ ಮನೆಯ ಕಡೆಗೆ ನೀರು ಚೆಲ್ಲಿದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯದ ಬೇದರಿಕೆ ಹಾಕಿರುತ್ತಾನೆ. ಕಾರಣ ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಪಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ.ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ಕಳ್ಳತನ ಪ್ರಕರಣ:
«±Àé«zÁå®AiÀÄ ¥Éưøï oÁuÉ:
ಇಂದು ದಿನಾಂಕ: 15/10/2013 ರಂದು 12:00 ಗಂಟೆಗೆ ಶ್ರೀ.ಉಮೇಶ ತಂದೆ ರಾಮರಾವ ಸೊಂತ, ವಯ|| 42, ಉ|| ರೇತಿ ವ್ಯಾಪಾರ, ಸಾ|| ಪ್ಲಾಟ ನಂ: 23, ಲಕ್ಷ್ಮಿ ನಗರ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಕೊಟ್ಟಿದ್ದು ಸಾರಾಂಶವೆನೆಂದರೆ ನಾನು ದಿನಾಂಕ: 14/10/2013 ರಂದು ಸಾಯಂಕಾಲ 5:30 ಗಂಟೆಗೆ ನಮ್ಮ ಬಾಜು ಮನೆಯ ಸೂರ್ಯಕಾಂತ ಎ.ಆರ್.ಎಸ್.ಐ ರವರಿಗೆ ಭೇಟಿಯಾಗಿ ಊರಿಗೆ ಹೋಗಿ ತಂದೆ-ತಾಯಿಯವರಿಗೆ ಮಾತನಾಡಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ ಅಂತಾ ಹೇಳಿ ನನ್ನ ಮನೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಸೊಂತ ಗ್ರಾಮಕ್ಕೆ ಹೋಗಿದ್ದು, ಇಂದು ಬೆಳಿಗ್ಗೆ 0600 ಗಂಟೆಗೆ ಸೂರ್ಯಕಾಂತ ರವರು ಪೋನ್ ಮಾಡಿ ನಿಮ್ಮ ಮನೆಯ ಬಾಗಿಲದ ಕೊಂಡಿ ಮುರಿದಿದ್ದು, ಕಳ್ಳತನವಾದ ಹಾಗೆ ಕಾಣಿಸುತ್ತದೆ ಬೇಗನೆ ಬರಲು ಹೇಳಿದಾಗ ನಾನು ನನ್ನ ತಮ್ಮ ವಿರೇಶನಿಗೆ ಮನೆಯ ಕಡೆಗೆ ಹೋಗಲು ಹೇಳಿ ನಾನು ಕೂಡ ಬೆಳಿಗ್ಗೆ 0930 ಗಂಟೆಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೀಲಿ ಮುರಿದಿದ್ದು, ಒಳಗಡೆ ಹೋಗಿ ನೋಡಲು ಮನೆಯ ಅಲಮಾರಿಯಲ್ಲಿ ಇದ್ದ 1) 4 ತೊಲೆಯ ಬಂಗಾರದ ಸರ ಅ||ಕಿ|| 1,20,000/- 2) 4 ತೊಲೆ ಬಂಗಾರದ ಪಾಟ್ಲಿ ಅ||ಕಿ|| 1,20,000/-, 3) ನಗದು ಹಣ 11,000/- ಹೀಗೆ ಒಟ್ಟು 2,51,000/- ಬೆಲೆಬಾಳುವ ಬಂಗಾರ ಮತ್ತು ನಗದು ಹಣ ಯಾರೋ ಕಳ್ಳರು ದಿನಾಂಕ: 15/10/13 ರಂದು ರಾತ್ರಿ 12:00 ಗಂಟೆಯಿಂದ ಬೆಳಗಿನ ಜಾವ 5:00 ಗಂಟೆಯ ಅವಧಿಯಲ್ಲಿ ಕಳ್ಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ ಬಂಗಾರ ಹಾಗೂ ಹಣ ಕೊಡಬೇಕು ಅಂತಾ ಇತ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 








15 October 2013

GULBARGA DISTRICT REPORTED CRIMES

ನರೋಣಾಪೊಲೀಸ ಠಾಣೆ:
ಹಲ್ಲೆ ಪ್ರಕರಣ:
ನಾನು ಗಂಗಮ್ಮ ಗಂಡ ರಾಣಪ್ಪಾ ಗಡದೆ  ವಯಸ್ಸು 50 ವರ್ಷ ಉ: ಕೂಲಿಕೆಲಸ ಜಾ: ಪ. ಜಾತಿ ವಾಸ: ಕೇರಿ ಅಂಬಲಗಾ ಗ್ರಾಮ ತಾ:ಆಳಂದ ಹೇಳಿ ಬರೆಸಿದ್ದು, ಹೀಗಿರುವಾಗ ಮುಂಜಾನೆ 9-00 ಗಂಟೆಯ ಸುಮಾರಿಗೆ ನಾನು ನಮ್ಮ ಓಣಿಯಲ್ಲಿರುವ ಮಲ್ಲೇಶಪ್ಪ ಗೌಡ ಇವರ ಕಿರಾಣಾ ಅಂಗಡಿಗೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ನಮ್ಮ ಮನೆಗೆ ಅಂಬೇಡ್ಕರ ಕಟ್ಟೆಯ ಹತ್ತಿರ ರಸ್ತೆಯಿಂದಾ ಹೋಗುವಾಗ ನಮ್ಮ ಓಣಿಯ 1] ಹಣಮಂತ ತಂದೆ ಭೀಮಶ್ಯಾ ಗಡೆದೆ 2] ರಾಜು ತಂದೆ ನಾಗಪ್ಪ ಗಡೆದೆ 3] ಶಿವಪುತ್ರ ತಂದೆ ಲಕ್ಷ್ಮಣ ಗಡೆದೆ  ರವರುಗಳು ಕೂಡಿಕೊಂಡು ಬಂದು ನನ್ನನ್ನು ತಡೆದು ನಿಲ್ಲಿಸಿ ಹಣಮಂತನು ನನಗೆ  ನೀನು ಮತ್ತು ನಿಮ್ಮ ಮನೆಯವರು ಸೇರಿ ನಮ್ಮ ಮನೆಯ ಅಂಗಳದಲ್ಲಿ ನಿಂಬೆಕಾಯಿ ಇಡುತ್ತಿದ್ದಿರಿ ,ಅಂತಾ ಅವಾಚ್ಯ ಶಬ್ದಗಳಿಂದಾ ಬೈಯುತ್ತಿದ್ದನು, ಅದಕ್ಕೆ  ನಾನು ನಾನೇಕೆ ನಿಮ್ಮ ಅಂಗಳದಲ್ಲಿ ನಿಂಬೆಕಾಯಿ ಇಡಲಿ ಅಂತ ಕೇಳುತ್ತಿದ್ದೆ ಆಗ ರಾಜು ಮತ್ತು ಶಿವಪುತ್ರ ಇವರುಗಳು ಅವಮಾನ ಮಾಡುವ ಉದ್ದೇಶದಿಂದಾ ನನ್ನ ಕೂಡಲು ಹಿಡಿದು ಎಳೆದಾಡಿ ನೆಲಕ್ಕೆ ನೂಕಿಸಿದ್ದು ಅದರಿಂದಾ ನನ್ನ ಹಣೆಗೆ ಮತ್ತು ಎರಡು  ಗಲ್ಲಕ್ಕೆ ಒಳಪೆಟ್ಟಾಗಿ ಕಣ್ಣುಗಳ ಕೆಳಗೆ ಉಬ್ಬಿದಂತಾಗಿರುತ್ತದೆ. ಮತ್ತು ಕೈಮುಷ್ಠಿ ಮಾಡಿ ನನ್ನ ಬೆನ್ನ ಮೇಲೆ ಗುದ್ದಿರುತ್ತಾರೆ,  ಅಲ್ಲದೆ 3 ಜನ ಸೇರಿ ನನಗೆ ನಿಂದು ಬಹಳ ನಡೆದಾದ ನಿನಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.ಆಗ ಅಲ್ಲಿಯೇ ಅಂಬೇಡ್ಕರ ಕಟ್ಟೆ ಹತ್ತಿರ ನಿಂತಿದ್ದ ನನ್ನ ಮಕ್ಕಾಳಾದ ಸಂಜು ತಂದೆ ರಾಣಪ್ಪಾ ಗಡದೆ , ಪ್ರಕಾಶ ತಂದೆ ರಾಣಪ್ಪಾ ಗಡದೆ ಮತ್ತುಅಲ್ಲಿಯೇ ಇದ್ದ  ನಮ್ಮ ಓಣಿಯ ಶರಣಮ್ಮ ಗಂಡ ಬಾಬು ಸಿಂಗೆನವರ  ರವರು  ಕೂಡಿ ಜಗಳಾ ನೋಡಿ ಬಿಡಿಸಿರುತ್ತಾರೆ. ನನ್ನೊಂದಿಗೆ ಜಗಳಾ ಮಾಡಿದ 3 ಜನರು ನಮ್ಮ ಜತಿಯವರೆ ಆಗಿರುತ್ತಾರೆ. ನಾನು ನನಗೆ ಹೊಡೆ ಬಡೆ ಮಾಡಿದವರಿಗೆ ಹೆದರಿ ಠಾಣೆಗೆ ಇಂದು ಬಂದಿರುತ್ತೇನೆ. ನನಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿ ಸದರಿಯವರ ಮೇಲೆ ಕಾನೂನು ರಿತ್ಯಾ ಕ್ರಮ ಕೈಕೊಳ್ಳಬೇಕೆಂದು ಹೇಳಿ ಬರೆಸಿದ್ದು ನಿಜವಿದೆ.ಫಿರ್ಯಾದಿದಾರಳಾದ ಶ್ರೀಮತಿ ಗಂಗಮ್ಮ ಗಂಡ ರಾಣಪ್ಪಾ ಗಡದೆ ವಯ;50 ವರ್ಷ ವಾಸ: ಕೇರಿ ಅಂಬಲಗಾ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರೂ ನೀಡಿದ್ದು, ಸದರಿ ದೂರಿನ ಸಾರಂಶದ ಮೇಲಿಂದಾ ನಾನು ನರೋಣಾ ಪೊಲೀಸ ಠಾಣೆ ಅಪರಾಧ ಪ್ರಕಾರ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ:
 ದಿನಾಂಕ 13-10-2013 ರಂದು 10-00 ಪಿ.ಎಮ್ ಕ್ಕೆ ಫಿರ್ಯಾದಿ ಗಂಜ ಬಸ್ ಸ್ಟಾಂಡ ರೋಡಿಗೆ ಇರುವ ಎಸ್.ಬಿ.ಎಚ್ ಬ್ಯಾಂಕ ಎದರುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32 ಇ.ಡಿ 5078 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಾಲು ಪಾದಕ್ಕೆ ಗುಪ್ತಗಾಯವಾಗಿದ್ದು ಅಲ್ಲದೆ ತಲೆಗೆ ರಕ್ತಗಾಯವಾಗಿದ್ದು  ಇರುತ್ತದೆ ಅಂತ ಪಿರ್ಯಾದಿ ಸಾರಂಶ ಪ್ರಕಾರ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
                                                     
ಎಂ.ಬಿ.ನಗರ ಪೊಲೀಸ್ ಠಾಣೆ:
ಕಳವು ಪ್ರಕರಣ:
ಇಂದು ಫಿರ್ಯಾದಿ ಶ್ರೀ ಸಂಗಮೇಶ ತಂದೆ ಬಂಡೆಪ್ಪಾ ವಯಃ 27 ವರ್ಷ ಆಟೋ ಮೊಬೈಲ್ ಶಾಪ್ ಸಾಃ ಬಸವೇಶ್ವರ ಕಾಲೋನಿ 01 ನೇ ಕ್ರಾಸ್ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕಃ 13/10/2013 ರಂದು ಫಿರ್ಯಾದಿದಾರನು ಮತ್ತು ಫಿರ್ಯಾದಿಯ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಎಲ್ಲರೂ ಕೂಡಿಕೊಂಡು ದಸರಾ ಹಬ್ಬದ ಪ್ರಯುಕ್ತ ಮನೆಗೆ ಬೀಗ ಹಾಕಿ ತಮ್ಮ ಸ್ವಂತ ಗ್ರಾಮವಾದ ಬೀದರದ ಮುಚಳಂಬ್ ಗ್ರಾಮಕ್ಕೆ ಹೋಗಿರುತ್ತಾರೆ. ಇಂದು ದಿನಾಂಕಃ 14/10/2013 ರಂದು 04:00 ಪಿ.ಎಂ. ಕ್ಕೆ ಫಿರ್ಯಾದಿದಾರನ ತಂದೆಯು ಗುಲಬರ್ಗಾದ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ತೆರೆದಿದ್ದು ಮನೆಯ ಬೆಡರೂಮಿನ ಒಳಗಡೆ ಹೋಗಿ ಚೆಕ್ ಮಾಡಿ ನೋಡಲಾಗಿ ಅಲೆಮಾರಿಯಲ್ಲಿದ್ದ ಎಲ್ಲಾ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅದನ್ನು ಕಂಡು ತಂದೆಯವರು ನನಗೆ ಫೋನ್ ಮಾಡಿ ಮನೆ ಕಳ್ಳತನ ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾವೆಲ್ಲರೂ ಮನೆಗೆ ಬಂದು ನೋಡಲಾಗಿ ಬೆಡರೂಮಿನಲ್ಲಿಟ್ಟ ಅಲೆಮಾರಿಯನ್ನು ಕಟ್ಟರ್ ಮಷೀನ್ ನಿಂದ ಹಿಂದಿನಿಂದ ಕಟ್ ಮಾಡಿದ್ದು ಮತ್ತು ಅಲೆಮಾರಿಯಲ್ಲಿಟ್ಟ ಲಾಕರ್ ನಲ್ಲಿಟ್ಟು ಒಟ್ಟು 36 ತೊಲೆ ಬಂಗಾರದ ವಿವಿಧ ಆಬರಣಗಳು ಅಃಕಿಃ 9,00,000/- ರೂ. ಹಾಗು 03 ಕೆ.ಜಿ ಬೆಳ್ಳಿಯ ಆಭರಣಗಳು ಹಾಗು ಸಾಮಾನುಗಳು ಅಃಕಿಃ 1,50,000/- ರೂ. ಹೀಗೆ ಒಟ್ಟು 10,50,000/- ರೂ. ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಯಾರೋ ಕಳ್ಳರು ಮನೆಯ ಕೀಲಿ ಕಪ್ಪಿ ಮುರಿದ್ದು ಮನೆಯೊಳಗೆ ಪ್ರವೇಶ ಮಾಡಿ ಅಲೆಮಾರಿಯಲ್ಲಿಟ್ಟ ಲಾಕರ್ ನನ್ನು ಮುರಿದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಪತ್ತೆ ಮಾಡಿಕೊಡಬೇಕು ಮತ್ತು ಸದರಿ ಕಳ್ಳರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ವಗೈರೆ ಲಿಖಿತ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

14 October 2013

ಹಲ್ಲೆ ಪ್ರಕರಣ :
ರೋಜಾ ಠಾಣೆ :ಶ್ರೀ ಮಹ್ಮದ ರಫೀಕ ತಂದೆ ಮಹ್ಮದ ಶಫಿಕ ಸಾ: ಖಾಜಾ ಮಿಯಾ ಇವರ ಮನೆಯಲ್ಲಿ ಬಾಡಿಗೆ ಮೆಹಬೂಬ ನಗರ ಗುಲಬರ್ಗಾ ಇವರು ದಿನಾಂಕ: 11-10-2013 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ನನಗೆ ಆರ್.ಪಿ ಜಾಧವ  ಎ.ಈ.ಈ. ಮಹಾನಗರ ಪಾಲಿಕೆ ಗುಲಬರ್ಗಾ ರವರು ದೂರವಾಣಿ ಮೂಲಕ ಒಕ್ಕಲಗೇರಾದಲ್ಲಿ ಇರುವ ಮನೆಯ ಹತ್ತಿರ ಬರಲು ತಿಳಿಸಿದ ಮೇರೆಗೆ ನಾನು 9: 15 ಗಂಟೆಯ ಸುಮಾರಿಗೆ ಅಲ್ಲಿಗೆ ಬಂದಾಗ ಅಲ್ಲಿ 1] ಆರ.ಪಿ. ಜಾಧವ  ಎ.ಈ.ಈ  ಮಹಾನಗರ ಪಾಲಿಕೆ ಗುಲಬರ್ಗಾ 2] ಕರೀಮ ಮುಚಾಲೆ 3] ಮೋಹೀದ ಇಂಜಿನಿಯರ್ಸ್ ಇಂಟರನ್ಯಾಶನಲ್ ಬಿಲ್ಡರ್ಸ್ 4] ಶೆಫಿ ಅಹ್ಮದ [ಆರ್.ಟಿ.ಐ ] ಕಾರ್ಯಕರ್ತ [ಬ್ಲಾಕ ಮೇಲರ] ಹಾಗೂ ಮಹಾನಗರ ಪಾಲಿಕೆಯ ಸ್ಯಾನೇಟರಿ ಇನ್ಸಪೆಕ್ಟರ್ ಮತ್ತು ಅವರ ಕಛೇರಿಯ ಸಿಬ್ಬಂದಿ ಅವರು ಅಲ್ಲದೇ ಒಂದು ಜೆ.ಸಿ.ಪಿ, ಒಂದು ಟ್ರಾಕ್ಟರ್ , ಎರಡು ಟಾಟಾ ಸುಮೋ ಅಲ್ಲಿಯೇ ಇದ್ದು ನನಗೆ ಜಾಧವ ರವರು ಎದೆಯ ಮೇಲೆ ಹೊಡೆದರು ಮೋಹೀದ ಹಾಗೂ ಕರೀಮ ಮುಚಾಲೆ ಕೈಯಿಂದ ಮುಷ್ಠಿಮಾಡಿ ಹೊಡೆಬಡೆ ಮಾಡಿದರು ಇದಕ್ಕೆ ಕಾರಣ ನಾನು ಬಂದ ತಕ್ಷಣ ಸದರಿಯವರು ನನ್ನ ಅವಾಚ್ಯ ಶಬ್ದಗಳಿಂದ ಬೈದು ನಾವು ನಿಮಗೆ ಮನೆ ಖಾಲಿ ಮಾಡಲು ಹೇಳಿದರೂ ಸಹ ಮಗನೇ ನೀನು ಏಕೆ ಖಾಲಿಮಾಡಿಲ್ಲಾ ನಿನಗೆ ಜೀವದಿಂದ ಹೊಡೆಯುತ್ತೇವೆ ಎಂದು ಹೇಳಿ ಜೀವ ಬೆದರಿಕೆ ಹಾಕಿ ಹೊಡೆಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.