POLICE BHAVAN KALABURAGI

POLICE BHAVAN KALABURAGI

27 July 2013

GULBARGA DIST REPORTED CRIME


ಶಹಾಬಾದ ನಗರ ಠಾಣೆ:
ಯು.ಡಿ.ಆರ್ ಪ್ರಕರಣ:
ದಿನಾಂಕ:25/07/2013 ರಂದು ಶ್ರೀ ನೀಲಕಂಠ ತಂದೆ ಸಿದ್ದಪ್ಪ ಪಾಣಿಗಾಂವ ಸಾ:ಗೋಳಾ (ಕೆ) ರವರು ಠಾಣೆಗೆ ಹಾಜರಾಗಿ ಬೆಳಗ್ಗೆ 10.30 ಎಎಂ ಸುಮಾರಿಗೆ ಮಾಲಗತ್ತಿ ಸೀಮಾಂತರದಲ್ಲಿರುವ ತಮ್ಮ ಹೊಲಕ್ಕೆ ಹೋದಾಗ ಅವರ ಹೊಲದಲ್ಲಿರುವ ಬನ್ನಿ ಗಿಡಕ್ಕೆ ಒಬ್ಬ ವ್ಯಕ್ತಿ ನೇತಾಡುತ್ತಿರುವದನ್ನು ನೋಡಿ ಸಮೀಪ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ನೇಣು ಹಾಕಿ ಕೊಂಡಿದ್ದು ನೋಡಲಾಗಿ ಆತನು ಯಾರೋ ಅಪರಿಚಿತನಿದ್ದು ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಆತನ ವಯಸ್ಸು ಅಂದಾಜು 23/25 ವರ್ಷ ಇದ್ದು ಮೃತ ವ್ಯಕ್ತಿಯು ಬನ್ನಿ ಗಿಡದ ಮೇಲ್ಬಾಗದಲ್ಲಿ ಗುಲಾಬಿ ಬಣ್ಣದ ನೂಲಿನ ಹಗ್ಗ ಕಟ್ಟಿ ಅದಕ್ಕೆ ಕೆಳಭಾಗದಲ್ಲಿ ಕಪ್ಪು ವಾಯರ  ಹಗ್ಗ ಕಟ್ಟಿ ನೇಣು ಹಾಕಿಕೊಂಡಿರುತ್ತಾನೆ. ಸದರಿಯವನ ಮೈ ಮೇಲೆ ಒಂದು ಬಿಳಿ ಗೇರಿ-ಗೇರಿ ಶರ್ಟ ಮತ್ತು ಒಂದು ಚಾಕಲೇಟ ಬಣ್ಣದ ಚೌಕಡಿ ಲುಂಗಿ ಇರುತ್ತದೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಶೋಕನಗರ ಠಾಣೆ:
ಕಳವು ಪ್ರಕರಣ:
ಶ್ರೀ. ಸಮೀರ  ತಂದೆ ರಶೀದ ಬಾಗವಾನ  ಸಾ:ಭಗವತಿ ನಗರ ಗುಲಬರ್ಗಾ ರವರು ಠಾಣೆಗೆ ದಿನಾಂಕ 25/07/2013 ರಂದು ಬೆಳಿಗ್ಗೆ 3-30 ರಿಂದ 4 ಗಂಟೆ ಸುಮಾರಿಗೆ  ತಾವು ಮನೆಯಲ್ಲಿ ಮಲಗಿರುವ ಸಮಯದಲ್ಲಿ ಯಾರೋ ಕಳ್ಳರು ಕಂಪೌಂಡ ಹಾರಿ ಮನೆಯ ಕಿಟಕಿ ಮುರಿದು ಒಳಗಡೆ ಬಂದು  ಮನೆಯಲ್ಲಿದ್ದ ಒಂದು ಐ-ಫೋನ ಮೊಬೈಲ ಅದರ ಸೀಮ ನಂ 9611869999 ಮತ್ತು ಪ್ಯಾಂಟನ ಜೇಬಿನಲ್ಲಿದ್ದ 15,000/- ರೂಪಾಯಿಗಳನ್ನು ತೆಗೆದುಕೊಂಡು ಬೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೈಕೊಳ್ಳಲಾಗಿದೆ. 

25 July 2013

GULBARGA DIST REPORTED CRIME

ಮಹಿಳಾ ಪೊಲೀಸ್ ಠಾಣೆ
ವರದಕ್ಷಿಣೆ ಕಿರುಕುಳ ಪ್ರಕರಣ:
ದಿನಾಂಕ 24.7.2013 ರಂದು ಶ್ರೀಮತಿ ಜ್ಯೋತಿ @ ಶರಣಮ್ಮಾ ಗಂಡ ವಿಶಾಲ ತಿಪರಾದಿ ಸಾ; ಬ್ಯಾಂಕ ಕಾಲನಿ ಇವರು ಠಾಣೆಗೆ ಹಾಜರಾಗಿ ದಿ 13.5.2013 ರಂದು ಪೂನಾದ ವಿಶಾಲ ಇತನೊಂದಿಗೆ ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ತನ್ನ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ ವರದಕ್ಷಿಣೆಯಾಗಿ 12 ತೊಲೆ ಬಂಗಾರ ಮತ್ತು ಬೆಲೆ ಬಾಳುವ  ಗ್ರಹಬಳಕೆಯ ಸಾಮಾನುಗಳು ಕೊಟ್ಟಿದ್ದು, ಮದುವೆಯಾದ 3 ದಿನಗಳಲ್ಲಿಯೇ ನನ್ನ ಗಂಡ ಅತ್ತೆ ಬಾವ ಮನೆಯ ಸಣ್ಣಪುಟ್ಟ ವಿಷಯಕ್ಕೆ ಜಗಳ ತೆಗೆಯುವುದು ನನಗೆ ಸರಿಯಾಗಿ  ಅಡುಗೆ ಮಾಡಲು ಬರುವದಿಲ್ಲಾ ಅಂತಾ ಜಗಳ ತೆಗದು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದು ಅಲ್ಲದೇ  ನಾವು ಪ್ಲಾಟ ಖರೀದಿ ಮಾಡುತ್ತಿದ್ದು ಅದಕ್ಕಾಗಿ ನಿಮ್ಮ ತಂದೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ನನಗೆ ನನ್ನ ತವರು ಮನೆಗೆ ತಂದು  ಬಿಟ್ಟಿರುತ್ತಾರೆ.

ದಿನಾಂಕ 16.6.2013 ರಂದು ನನ್ನ ಗಂಡ ವಿಶಾಲ ಅತ್ತೆ ಶೆಶಿಕಲಾ ಇವರು ಗುಲಬರ್ಗಾದ ಬ್ಯಾಂಕ ಕಾಲನಿಯಲ್ಲಿರುವ ನಮ್ಮ ತವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಿನಗೆ 4 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂದರೆ ಬಂದು ಇಲ್ಲೇ ಕುಳಿತಿರುವಿಯಾ ಅಂತಾ ಕೈಯಿಂದ ಹೊಡೆಬಡೆ ಮಾಡಿದ್ದು. ನನ್ನ ಗಂಡ ವಿಶಾಲ ಅತ್ತೆ ಶೆಶಿಕಲಾ ಮತ್ತು ಭಾವ ವೈಭವ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ ದೂರು  ಸಾರಾಂಶದ  ಮೇಲಿಂದ ಮಹಿಳಾ ಪೊಲೀಸ್ ಠಾಣೇ ಗುಲಬರ್ಗಾದಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಸೇಡಂ ಪೊಲೀಸ ಠಾಣೆ.
ಕಳವು ಪ್ರಕರಣ:
ದಿನಾಂಕ:23-07-2013 ರಂದು ರಾತ್ರಿ ಅಂದಾಜು 01-00 ಗಂಟೆ ಸುಮಾರಿಗೆ ಬಿಚ್ಚಪ್ಪ ತಂದೆ ಶಿವಲಿಂಗಪ್ಪ ಮಾಡನೊರ ಸಾ: ಕೊಡ್ಲಾ ಇವರ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿದ್ದ 10,000/- ರೂಪಾಯಿ ಹಾಗೂ ಒಂದು ಮೊಬೈಲ್ ಸೆಟ್ ಅದರ ಸಿಮ್ ನಂ-9917553542 ಇದರ ಅಂದಾಜು ಕಿಮ್ಮತ್ತು 1200/- ರೂಪಾಯಿ ಹೀಗೆ ಒಟ್ಟು 11200/- ರೂಪಾಯಿ ಕಿಮ್ಮತ್ತಿನ ಮಾಲು ಮತ್ತು ಹಣ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ
ಹಲ್ಲೆ ಪ್ರಕರಣ:
ದಿನಾಂಕ: 23/07/2013 ರಂದು ಸಾಯಂಕಾಲ ಲಕ್ಷ್ಮೀಣ ತಂದೆ ಸೋಮಣ್ಣಾ ಘೋಡಕೆ ಸಾ:ನಾಗಲೇಗಾಂವ ಇವರು ಸೂರ್ಯಕಾಂತ ತಂದೆ ರಾಮಚಂದ್ರ ಘೋಡಕೆ ರವರ ಹೊಲದಲ್ಲಿ ದನಗಳು ಬಿಟ್ಟು ಮೇಯಿಸುತ್ತಿರುವಾಗ ಸೂರ್ಯಕಾಂತನ ತಂದೆ ನಮ್ಮ ಹೊಲದಲ್ಲಿ ದನಗಳು ಬಿಟ್ಟು ಮೇಯಿಸಬೇಡ ಅಂತಾ ಹೇಳಿದಾಗ ಲಕ್ಷ್ಮಣನು ಸೂರ್ಯಕಾಂತನ ತಂದೆಯವರಿಗೆ ಅವಾಚ್ಯ ಶಬ್ದಗಳೀಂದ ಬಯ್ದು ಕಲ್ಲಿನಿಂದ ತಲೆಗೆ ಹೊಡೆದಿದ್ದು. ಬಿಡಿಸಲು ಹೋದ ಸೂರ್ಯಕಾಂತನಿಗೆ ಸಹ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

24 July 2013

GULBARGA DIST REPORTED CRIME

ಗುಲಬರ್ಗಾ ಗ್ರಾಮೀಣ ಠಾಣೆ:
ಅಪಘಾತ ಅಪರಿಚಿತ ಮೋ.ಸೈಕಲ್ ಸವಾರನ ಸಾವು

            ಇಂದು ದಿನಾಂಕ. 23-07-2013 ರಂದು 7-00 ಪಿ.ಎಂ.ಕ್ಕೆ ಅವರಾಧ ಸೀಮಾಂತರದ ದರ್ಮಾ ಹೊಡೆಲ ಇವರ ಹೊಲದ ಎದರುಗಡೆ ಘಟನಾ ಸ್ಥಳದಲ್ಲಿ  ಹಾಜರಿದ್ದ  ಶ್ರೀ ಅಜ್ಮೀರ ತಂದೆ ಚಾಂದಸಾಬ ಕಣಜಿ ವಯ;24 ವರ್ಷ ಜ್ಯಾತಿ;ಮುಸ್ಲಿಂ ಉ;ಕ್ರೋಜರ ಚಾಲಕ  ಸಾ;ಅವರಾದ (ಬಿ) ತಾ;ಜಿ;ಗುಲಬರ್ಗಾ.ಇತನು ಕೋಟ್ಟ ಹೇಳಿಕೆ ಫಿರ್ಯಾದಿ ಸಾರಂಶ ವೆನೆಂದರೆ.
ದಿನಾಂಕ. 23-7-2013 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂ. ಎಂ.ಹೆಚ.13 ವಾಯ-189 ನೆದ್ದರ ಸವಾರನು ಗುಲಬರ್ಗಾದಿಂದ ಹುಮನಾಬಾದ ಕಡೆಗೆ ನಿಧಾನವಾಗಿ ಹೋಗುತ್ತಿರುವಾಗ ಹುಮನಾಬಾದ ಕಡೆಯಿಂದ ಬರುತ್ತಿದ್ದ ಕ್ರೋಜರ ಕೆ.ಎ.32 ಬಿ-2266 ನೆದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ  ಚಲಾಯಿಸುತ್ತಾ ಬಂದು ಮೋಟಾರ ಸೈಕಲ ಸವಾರನಿಗೆ ಅಪಘಾತಪಡಿಸಿದ ಪ್ರಯುಕ್ತ ಮೋ.ಸೈಕಲ್ ಸವಾರನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಶ್ರೀ ಅಜ್ಮೀರ ತಂದೆ ಚಾಂದಸಾಬ ಕಣಜಿ ಸಾ;ಅವರಾದ (ಬಿ) ತಾ;ಜಿ;ಗುಲಬರ್ಗಾ ರವರು ಸಲ್ಲಿಸಿದ ಹೇಳಿಕೆ ಸಾರಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

        ಮೃತ ಮೋ.ಸೈಕಲ್ ಸವಾರನು ಅಪರಿಚಿತನಾಗಿದ್ದು ಆತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, ಮೃತನು ಅಂದಾಜು  25 ರಿಂದ 30 ವರ್ಷ ವಯಸ್ಸಿನವನಿದ್ದು. JvÀÛgÀ 5 ಅಡಿ 6  ಇಂಚು, ಗೋಧಿ ಮೈಬಣ್ಣಾ, ಕೋಲು  ಮುಖ, ನೇರವಾದ  ಮೂಗು ತೆಳ್ಳನೆಯ ಸದೃಡ ಮೈಕಟ್ಟು ಹೊಂದಿದ್ದು, ಮೈಮೇಲೆ ) ಒಂದು ಬಿಳಿ ಮತ್ತು ಕಪ್ಪು ಚುಕ್ಕೆವುಳ ಬೂದು ಬಣ್ಣದ ಜಾಕೇಟ , 2) ಒಂದು ಬಿಳಿ ಲೈನ್ಸವುಳ್ಳ ಶರ್ಟ3)  ಒಂದು  ಬಿಳಿ ಬಣ್ಣದ ಬನಿಯನ 3) ಒಂದು ಮೆಹೆಂದಿ ಬಣ್ಣದ ಪ್ಯಾಂಟ  ಧರಿಸಿರುತ್ತಾನೆ.ಮೃತನ ಬಗ್ಗೆ ಮತ್ತು ವಾರಸುದಾರರ ಬಗ್ಗೆ  ಎನಾದರೂ ಮಾಹಿತಿ ಸಿಕ್ಕಿಲ್ಲಿ ಪಿ.ಎಸ್.ಐ ಗ್ರಾಮೀಣ ಪೊಲೀಸ ಠಾಣೆ 9480803553,9986487025, ಸಿಪಿಐ ಗ್ರಾಮೀಣ 9480803530, ಡಿ.ಎಸ್.ಪಿ. (ಗ್ರಾ) ಉಪವಿಭಾಗ ಅಥವಾ ಪೊಲೀಸ್ ಕಂಟ್ರೋಲ ರೂಮ 08472-263604 ಗೆ ಮಾಹಿತಿ ಸಲ್ಲಿಸಲು ಕೋರಲಾಗಿದೆ .