POLICE BHAVAN KALABURAGI

15 July 2013
GULBARGA DIST REPORTED CRIME
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ
ಶ್ರೀ. ಜಯಕುಮಾರ ತಂದೆ ಧನಸಿಂಗ ಪವ್ಹಾರ ಸಾ:ಉದನೂರ ತಾಂಡಾ ತಾ:ಜಿ:ಗುಲಬರ್ಗಾ ಕೊಟ್ಟ ಹೇಳಿಕೆ ಸಾರಂಶ ಏನೆಂದರೆ ತನ್ನ ಹೆಂಡತಿ ಸುರೇಖಾಳು ತನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿ ವಿಷಸೇವನೆ ಮಾಡಿ ತನ್ನ ವಿರುದ್ದ ಹೆಂಡತಿಗೆ ಕಿರುಕುಳ ಕೊಡುತ್ತೇನೆ ಅಂತಾ ತನ್ನ ಅತ್ತೆ ಶಾರದಾಬಾಯಿ ಕೇಸು ದಾಖಲಿಸಿದ್ದು ಕೇಸು ಕೊರ್ಟಿನ ವಿಚಾರಣೆಯಲ್ಲಿ ಇದ್ದು. ದಿನಾಂಕ:-10/07/2013 ರಂದು ಕೇಸಿನ ವಿಚಾರಣೆ ಇದ್ದ ಕಾರಣ ಕೋರ್ಟಿಗೆ ಹೋದಾಗ
ರಾಜಿ ಆಗೋಣಾ ಅನ್ಯೋನದಿಂದ ಮಕ್ಕಳೊಂದಿಗೆ ಸಂಸಾರ ಮಾಡೋಣಾ ಅಂತಾ ತನ್ನ ಹೆಂಡತಿಗೆ ತಿಳಿ ಹೇಳಿದಾಗ ಅತ್ತೆ ಶಾರಾದಾಬಾಯಿ ಮತ್ತು ಬನಸಿ ರಾಠೋಡ ಅವರೆಲ್ಲರೂ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಮಾನಸಿಕ ಕಿರುಕುಳ ಕೊಟ್ಟು ಮದುವೆ ಸಮಯದಲ್ಲಿ ಕೊಟ್ಟ
ಬಂಗಾರ ವಾಪಸ್ಉ ಕೋಡು ಇಲ್ಲದಿದ್ದರಿ ನಿನಗೆ ಖಲ್ಲಾಸ ಮಾಡಿ ಬೀಡುತ್ತೇವೆ ಅಂತಾ ಜೀವದ ಭಯ ಹಾಕಿದ್ದು. ನಾನು ಮನ ನೊಂದು 3 ತೋಲಿ ಬಂಗಾರ ಹೇಗೆ ಮುಟ್ಟಿಸಲಿ ಎಂದು ಮನಸ್ಸಿನ ಮೇಲೆ ಮಾನಸಿಕವಾಗಿ ಪರಿಣಾಮ ಮಾಡಿಕೊಂಡು ಅವರು ಪದೇ ಪದೇ ಕೊಟ್ಟ ಕಿರುಕುಳದಿಂದ ಬೆಸತ್ತು ಕೊರ್ಟಿನಿಂದ ನೇರವಾಗಿ ಮನೆಗೆ ಹೋಗಿ ಮನೆಯಲ್ಲಿ ಸಂಜೆ 06:30 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಗಾಸಲೇಟ ಎಣ್ಣೆ ಡಬ್ಬಿ ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡಿದ್ದರಿಂದ ತಲೆಯಿಂದ ತೊಡೆಯವರೆಗೆ ಪೂರ್ತಿ ಮೈ ಸುಟ್ಟಿರುತ್ತದೆ ಕಾರಣ ಸದರಿ ನನ್ನ ಹೆಂಡತಿ ಸುರೇಖ , ಅತ್ತೆ ಶಾರದಾಬಾಯಿ
ಮತ್ತು ಬನಸಿರಾಠೋಡ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳ ಬೇಕು ಅಂತಾ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುಲಬರ್ಗಾ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾದ್ದು.
ಇಂದು ದಿನಾಂಕ 14-07-2013 ರಂದು ಸಾಯಂಕಾಲ 08-30 ಗಂಟೆಗೆ ಜಯಕುಮಾರನು
ಆಸ್ಪತ್ರೆಯಲ್ಲಿ ಗುಣ ಮುಖನಾಗದೆ ಮೃತ ಪಟ್ಟಿದ್ದು ಈ ಬಗ್ಗೆ ಮೃತನ ತಾಯಿ ಚಾಂದಿಬಾಯಿ ಕೊಟ್ಟ
ಹೇಳಿಕೆ ಮೇಲಿಂದ ಮುಂದಿನ ಕ್ರಮ ಕೈಕೊಳ್ಳಲಾಗಿದೆ.
13 July 2013
GULBARGA DIST REPORTED CRIMES
ಕಳ್ಳತನ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ: ಅಶೋಕ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಮನೆ ಕಳ್ಳತನ ಸ್ವತ್ತಿನ
ಅಪರಾಧಗಳು ಆಗುತ್ತಿದ್ದರಿಂದ ನೂತನ ಎಸ.ಪಿ ಅಮಿತಸಿಂಗ ಐ.ಪಿ.ಎಸ, ಕಾಶೀನಾಥ ತಳಕೇರಿ ಹೆಚ್ಚುವರಿ ಎಸ.ಪಿ, ರವರು ಸ್ವತ್ತಿನ ಅಪರಾಧಗಳ ಪತ್ತೆಗಾಗಿ ಉದಯಕುಮಾರ ಡಿ.ಎಸ.ಪಿ ರವರ ನೇತೃತ್ವದಲ್ಲಿ
ಟಿ.ಹೆಚ್.ಕರಿಕಲ್ ಪಿ.ಐ ಅಶೋಕ ನಗರ, ಎಸ.ಎಸ. ಹುಲ್ಲೂರ ಪಿ.ಐ ಶಹಾಬಾದ, ಕೆ.ಎಸ.ಕಲ್ಲದೇವರು ಪಿಎಸಐ ಅಶೋಕ ನಗರ ಹಾಗೂ ಸಿಬ್ಬಂದಿ ಜನರಾದ ಮೌಲಾಲಿ ಹೆಚ್.ಸಿ
264, ರಫಿಕ ಪಿಸಿ 370, ಶಿವಪ್ರಕಾಶ ಪಿಸಿ 615, ಚಂದ್ರಕಾಂತ ಪಿಸಿ 176, ಸುರೇಶ ಪಿಸಿ 534, ಬಸವರಾಜ ಪಿಸಿ 765, ಗುರುಮೂರ್ತಿ ಪಿಸಿ 264, ರವರನ್ನು ಒಳಗೊಂಡ ತಂಡವನ್ನು ರಚಿಸಿದ್ದು, ಈ ತಂಡವು ಕಳೆದ ಒಂದುವರೆ ವರ್ಷದಿಂದ ಮನೆ ಕಳ್ಳತನ ಮಾಡುತ್ತಿದ್ದ, ಕುಖ್ಯಾತ ಕಳ್ಳ ಭೀಮಾಶಂಕರ @ ಭೀಮಾ ತಂದೆ ಸಂಬಣ್ಣ ಬೋಳೆವಾಡ ಸಾ: ಬೋಳೆವಾಡ ಹಾ:ವ: ಬಾಪುನಗರ ಗುಲಬರ್ಗಾ ಇತನಿಗೆ
ದಸ್ತಗಿರಿ ಮಾಡಿ ಅಶೋಕ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಕ್ತಿನಗರದ ಬೆಂಜಮಿನ್
ಸುಮಿತ್ರ ರವರ ಮನೆ , ಸಂತೋಷ ಕಾಲೋನಿ ಕಲ್ಯಾಣರಾವ ಕುಲಕರ್ಣಿ , ಕೋತಂಬರಿ ಲೇಔಟದ ಮಲ್ಲಿಕಾರ್ಜುನ ಪಾಟೀಲ, ಎನ್.ಜಿ.ಓ ಕಾಲೋನಿಯ ಶಶಿಕಲಾ, ವಿದ್ಯಾನಗರದ ವೀರಶೇಟ್ಟಿ ದೊಡ್ಡಮನಿ , ಶಾಂತಿನಗರದ ಅಪ್ತಾಬ ತಂದೆ ಅಬ್ದುಲ ರಜಾಕ ರವರುಗಳ ಮನೆ ಕಳ್ಳತನ ಆಗಿದ್ದು. ಈ 6 ಬಡಾವಣೆಗಳಲ್ಲಿ ಮನೆ ಕಳ್ಳತನವಾದ ಪ್ರಕರಣಗಳನ್ನು ಬೇದಿಸಿದ್ದು ಅಲ್ಲದೇ ಸ್ಪೇಶನ ಬಜಾರ ಪೊಲೀಸ
ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಾಸ್ತ್ರಿನಗರ, ರಹೆಮತ ನಗರ, ಪಿ&ಟಿ ಕಾಲೋನಿ, ವಿರೇಶ ನಗರ 4 ಬಡಾವಣೆಗಳಲ್ಲಿ ಮನೆ ಕಳ್ಳತನ ಮಾಡಿದ ಪ್ರಕರಣಗಳನ್ನು ಹೀಗೆ ಒಟ್ಟು
10 ಪ್ರಕರಣಗಳು ಬೇಧಿಸಿ ಆರೋಪಿತನಿಂದ ಒಟ್ಟು 250 ಗ್ರಾಂ ಬಂಗಾರದ ಆಭರಣಗಳು ಹಾಗೂ 1 ಕೆ.ಜಿ
ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿ ಭೀಮಾಶಂಕರ @ ಭೀಮಾ ಬೊಳೆವಾಡ ಇತನು 2011 ನೇ ಸಾಲಿನಲ್ಲಿ ಎನ್.ಜಿ.ಓ ಕಾಲೋನಿಯ ಪ್ರಾಣೇಶ ಹೆರೂರಕರ ರವರ ಮನೆ ಕಳ್ಳತನ ಪ್ರಕರಣದಲ್ಲಿ
ದಸ್ತಗಿರಿಯಾಗಿ ಜೈಲಿಗೆ ಹೋಗಿದ್ದು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ನಂತರ ವಿಚಾರಣೆಗೆ
ಹಾಜರಾಗದೇ ಕಳೆದ ಒಂದೂವರೆ ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಇತನ ವಿರುದ್ದ ನ್ಯಾಯಾಲಯದಿಂದ 3 ದಸ್ತಗಿರಿ ವಾರೆಂಟಗಳು ಜಾರಿಯಾಗಿದ್ದು, ಸದರಿ ಕುಖ್ಯಾತ ಕಳ್ಳನು ಒಬ್ಬಳು ಹೆಂಡತಿ ಅಲ್ಲದೆ 3 ಹೆಣ್ಣು ಮಕ್ಕಳೊಂದಿಗೆ
ಸಂಬಂಧ ಬೆಳೆಸಿದ್ದು ವಿಚಾರಣೆಯಿಂದ ತಿಳಿದುಬಂದಿರುತ್ತದೆ. ಅಲ್ಲದೆ ಸುಮಾರು 7-8 ಕಡೆ ರಾತ್ರಿ
ವೇಳೆ ಬೆಡ್ ರೂಮ ಕಿಟಕಿಯಿಂದ ಬಂಬೂದಿಂದ ಪಾಂಟ್ಯ ಶರ್ಟಗಳನ್ನು ತೆಗೆದು ಹಣ ಕಳ್ಳತನ ಮಾಡಿರುವ ಬಗ್ಗೆ, ಹೇಳಿದ್ದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
11 July 2013
GULBARGA DIST REPORTED CRIMES
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ: ದಿನಾಂಕ 09-07-2013 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ
ಹುಮನಾಬಾದ ರೋಡಿಗೆ ಇರುವ ಖಾನ ಮೋಟಾರ್ಸ ಅಂಗಡಿ ಮುಂದೆ ಮೃತ ಮಹ್ಮದ ಖಯುಮ ತಂದೆ ಅಬ್ದುಲ
ಹಮೀದ ಈತನು ನಡೆದುಕೊಂಡು ಗಂಜ ಬಸ್ ಸ್ಟಾಂಡ ಕಡೆಗೆ
ಹೋಗುತ್ತಿದ್ದಾಗ ಒಂದು ಟಂ.ಟಂ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನ ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಮೃತ ಮಹ್ಮದ ಖಯುಮ ತಂದೆ ಅಬ್ದುಲ
ಹಮೀದ ಈತನಿಗೆ ಹಿಂದಿನಿಂಡ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನ ಸಮೇತ ಓಡಿ
ಹೋಗಿದ್ದು ನಂತರ 108 ಅಂಬುಲೈನ್ಸ ವಾಹನದಲ್ಲಿ
ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಆತನು ಅಪಘಾತದಲ್ಲಿ ಆದ
ಭಾರಿಗಾಯಗಳಿಂದ ರಾತ್ರಿ 08-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತ ಫಿರ್ಯಾದಿ ಇಂದು ಮೃತ ದೇಹವು
ಗುರ್ತಿಸಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:ಇಂದು ದಿನಾಂಕ 10/07/2013 ರಂದು 9-30 ಪಿ.ಎಂ.ಕ್ಕೆ ಪಿರ್ಯಾಧಿ ನಾಗೇಶ ತಂದೆ ಶ್ರೀಮಂತ ರೆಡ್ಡಿ
ವ: 43 ಸಾ: ಜೈನಗಲ್ಲಿ ಆಳಂದ ತಾ: ಆಳಂದ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ಅರ್ಜಿ ಕೊಟ್ಟಿದ್ದು
ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ 10/07/2013 ರಂದು ಮದ್ಯಾಹ್ನ ಆಳಂದ ಎಸ್.ಬಿ.ಎಚ್ ಬ್ಯಾಂಕಿಗೆ ಹೋಗಿ
ಲಾಕರದಲ್ಲಿಟ್ಟ ಬಂಗಾರದ ಆಭರಣಗಳನ್ನು ಅಂದರೆ 1) ಬಂಗಾರದ ನೇಕಲೇಸ್ ಅಂದಾಜು 8 ತೊಲೆ ಅ.ಕಿ. 2
ಲಕ್ಷ 2)
ಗಂಟನಾ (ಬಂಗಾರದ ತಾಳಿ ) 8 ತೊಲೆ ಅ.ಕಿ. 2 ಲಕ್ಷ 3) ಪಾಟಲಿ ಬಂಗಾರದ 6 ತೊಲೆ ಅ.ಕಿ. 1,1/2 ಲಕ್ಷ 4) ಬ್ರಾಸಲೇಟ್ ಬಂಗಾರದ 2 ತೊಲೆ ಅ.ಕಿ. 50 ಸಾವಿರ 5) ನೇಕಲೇಸ (ಲಾಕೇಟ) ಬಂಗಾರದ 1 ವರೇ
ತೊಲೆ ಅ.ಕಿ. 30 ಸಾವಿರ 6) 2 ಡಿಸೈನ್ ಉಂಗುರ ಬಂಗಾರದ 7 ಗ್ರಾಂ ಅ.ಕಿ. 20 ಸಾವಿರ 7) 1 ಸಾದಾ ಬಂಗಾರದ ಉಂಗುರ 5 ಗ್ರಾಂ ಅ.ಕಿ. 13
ಸಾವಿರ 8) ಕಿವಿಯ ಬಂಗಾರದ ಓಲೆ 5 ಗ್ರಾಂ ಅ.ಕಿ. 13 ಸಾವಿರ 9) 2 ಜೊತೆ ಕಾಲುಂಗರ ಬೆಳ್ಳಿ 2 ತೊಲೆ ಅ.ಕಿ. 8 ಸಾವಿರ 10) 2 ಜೊತೆ ಕಾಲು ಚೈನ್ ಬೆಳ್ಳಿ 8 ತೊಲೆ 28 ಸಾವಿರ 11) ಬಂಗಾರದ ತಾಳಿ ಬಂಗಾರದ 1,1/2 ತೊಲೆ 38 ಸಾವಿರ ಲಾಕರ ಇಂದ ತೆಗೆದಕೊಂಡು ನಾಳೆ ನನ್ನ ಚಿಕ್ಕಮ್ಮನ ಮಗನ ಮುದುವೆಗೆ
ಹೋಗಲು ಗುಲಬರ್ಗಾಕ್ಕೆ ಸುಮಾರು 4 ಗಂಟೆಗೆ ಬಂದು ಇಲ್ಲಿ ನನ್ನ ಹೆಂಡತಿ ಲಕ್ಷ್ಮಿ ಹಾಗು ಮಕ್ಕಳು
ವಿಕ್ರಮ್, ಆದಿತ್ಯಾ
ಹಾಗು ನಂದಿನಿ ಅಅವರು ಗುಲಬರ್ಗಾದಲ್ಲಿ ಶಾಲೆಯ ಸಲುವಾಗಿ ಇದ್ದು ಶ್ರೀ ಶ್ರೀಮಂತ ರಡ್ಡಿ ರವರ ಮನೆ
ನಂ. 10-105/4 ಶರಣ ನಗರದಲ್ಲಿ ಬಾಡಿಗೆ ಮನೆ ಮಾಡಿ ಇರುತ್ತಾರೆ. ಅವರಿಗೆ ಕರೆದುಕೊಂಡು ಸಾಯಂಕಾಲ
5-35 ಕ್ಕೆ ಎನ್.ಜಿ.ಓ ಕಾಲೋನಿಯಿಂದ ಆಟೋ ತೆಗೆದುಕೊಂಡು 5-45 ಪಿ.ಎಂ.ಕ್ಕೆ ಬಸ್ ಸ್ಟ್ಯಾಂಡಗೆ
ಬಂದು ಸುಮಾರು 5-50 ಪಿ.ಎಮ್. ಗಂಟೆಗೆ ಬೀದರಗೆ ಹೋಗುವ ಬಸ್ಸ ನಂ. ಕೆ.ಎ-38 ಎಫ್- 588 ಕುಳಿತು
ಕೊಂಡು ರಾಜಹಂಸ ಬಸ್ಸ ಕ್ಯಾರಿಯರ ಮೇಲೆ ಸೂಟಕೇಸ್ ಇಟ್ಟು ಟಿಕೇಟ ತೆಗೆದುಕೊಂಡು ಕುತ್ತಿದ್ದೇವು.
ಸುಮಾರು 6 ಪಿ.ಎಂ ಗಂಟೆಗೆ ನಮ್ಮ ಮುಂದೆ ಒಬ್ಬ ಮನುಷ್ಯ ಅಡ್ಡ ಬಂದು
ಕೆಳಗೆ ನಿಂತ ವ್ಯಕ್ತಿಗೆ Hello by by ಅಂತಾ
ಹೆಳಿದ ಆಗ ನಾವು ಅವನಿಗೆ ಏ ಮೇಲೆ ಬಿಳಬೇಡ ಅಂದ ಗದರಿಸಿದೇವು ಆಗ ಕೆಳಗೆ ನಿಂತ ವ್ಯಕ್ತಿ ನಮಗೆ
ತೊದಲುತ್ತಾ Time ಕೇಳಿದ ಆಗ ನಾವು ಅವನಿಗೆ ಬಗ್ಗಿ ಟೈಮ್ ಹೇಳಿದೇವು. ಆಗ ಸಮಯದಲ್ಲಿ
ನಮ್ಮ ಚಿತ್ತ ಬೇರೆ ಕಡೆ ತಿರುಗಿಸಿ 3 ಜನ ಸೇರಿ carrier ಮೇಲೆ ಇಟ್ಟ ನಮ್ಮ ಸೂಟಕೇಸ್ ಹಾಗು ಅದರಲ್ಲಿ ಇದ್ದ ಬಂಗಾರದ ಒಡವೇಗಳು
ಹಾಗು 6-7 ಜೊತೆ ಬಟ್ಟೆಗಳು ಕಳ್ಳತನ ಮಾಡಿ ತೆಗೆದುಕೊಂಡು ಓಡಿ ಹೋಗಿರುತ್ತಾರೆ.
ಆ ಕಳ್ಳರನ್ನು ನಾವು ನೋಡಿದರೇ ಗುರುತು ಹಿಡಿಯುತ್ತೇವೆ. ಆದ್ದರಿಂದ ತಾವುಗಳು ಕಳ್ಳರನ್ನು
ಹಿಡಿದು ನಮ್ಮ ವಸ್ತುಗಳನ್ನು ಕೊಡಿಸಬೇಕಾಗಿ ಹಾಗು ಅವರ ಮೇಲೆ ಸೂಕ್ತ ರೀತಿಯ ಕಾನೂನು ರೀತಿಯ ಕ್ರಮ
ಕೈಕೊಳ್ಳಬೇಕಾಗಿ ವಿನಂತಿ ಅಂತಾ ವಗೈರೆ ಪಿರ್ಯಾಧಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ
ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 106/2013 ಕಲಂ. 379 ಐಪಿಸಿ ನೇದ್ದರ ಪ್ರಕಾರ ಗುನ್ನೆ
ದಾಖಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.
Subscribe to:
Posts (Atom)