POLICE BHAVAN KALABURAGI

POLICE BHAVAN KALABURAGI

04 January 2013

REPORTED CRIME


ಹಣ ದೋಚಿದ ಬಗ್ಗೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ. ಬಸವರಾಜ ತಂದೆ ಕಲ್ಯಾಣರಾವ ಚಟ್ಟಿ ವಯ; 32 ವರ್ಷ ಜ್ಯಾತಿ;ಲಿಂಗಾಯತ ಉದ್ಯೋಗ;ಕಣ್ಣಿ ಮಾರ್ಕೆಟನಲ್ಲಿ ವ್ಯಾಪಾರ ಸಾ||ಬಸನಾಳ ತಾ||ಅಫಜಲಪೂರ ಜಿ||ಗುಲಬರ್ಗಾ ಹಾವ ಪ್ಲಾಟ ನಂ:217 ಜಾಧವ ಲೇಔಟ  ಬಿದ್ದಾಪೂರ ಕಾಲೋನಿ ಅಫಜಲಪೂರ ರೋಡ ಗುಲಬರ್ಗಾರವರು ನಾನು ದಿನಾಂಕ:01-01-2013 ರಂದು  ರಾತ್ರಿ 11-00 ಗಂಟೆಯ ಸುಮಾರಿಗೆ  ಕಣ್ಣಿ ಮಾರ್ಕೆಟನಲ್ಲಿ ಮೆಣಸಿನಕಾಯಿ ವ್ಯಾಪಾರ ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಬಿದ್ದಾಪೂರ ಕಾಲೋನಿಯ  ಉದ್ಯಾನ ವೈನ ಶ್ಯಾಪ ಹತ್ತಿರ ಬಸ್ಸ ಸ್ಟಾಪ ಸಮೀಪ ಹೋಗುತ್ತಿರುವಾಗ ಪರಿಚಯದವನಾದ ವಿಜಯಕುಮಾರ ಪರಂಜಪೆ ಕಾರ್ಪೊರೆಟರ ಜೇವರ್ಗಿ ಕಾಲೋನಿ ಸಾ;ಸಂತೋಷ ಕಾಲೋನಿ ಉದನೂರ ರೋಡ ಗುಲಬರ್ಗಾ ಇತನು ನನಗೆ ಕರೆದು ನೋಡದ ಹಾಗೆ ಹೋಗುತ್ತಿದ್ದಿರಿ ಬರ್ರೀ ಅಂತಾ ಅಂದಿದ್ದಕ್ಕೆ ನಾನು ಹೋಗಿದ್ದು, ವಿಜಯಕುಮಾರನು  ಸರಾಯಿ ಕುಡಿದ ನಶೆಯಲ್ಲಿದ್ದನ್ನು  ನನಗೆ ಹಣ ಬೇಕಾಗಿದೆ ಹಣ ಕೊಡು ಅಂತಾ ಅಂದಾಗ ನಾನು ಹಣ ಕೋಡುವದಿಲ್ಲಾ ಅಂದಾಗ ಆಗ ಅವನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು  ಆಗ ನಾನು ಕೆಳಗೆ ಬಿದ್ದೇನು  ಆಗ ದಾರಿಗೆ ಹೋಗುತ್ತಿದ್ದ  ಮಹಿಬೂಬ ಪಟೇಲ್, ಶ್ರೀನಿವಾಸ ಪಾಟೀಲ್ @ ಸೀನೂ  ಎನ್.ಜಿ.ಓ. ಕಾಲೂನಿ ಗುಲಬರ್ಗಾ ಇವರು ಬಂದು ಏಕೆ ತಕರಾರು ಮಾಡುತ್ತಿದ್ದಿರಿ ಸುಮನೆ ಹೋಗಿರಿ ಅಂತಾ ಅಂದುದಕ್ಕೆ ಇಬ್ಬರು ಗೆಳೆಯರಿದ್ದೇವು ಮಜಾಕ ಮಾಡುತ್ತಿದ್ದೇವೆ ಅಂತಾ ಹೇಳಿದನು. ವಿಜಯಕುಮಾರನು ಯಾರಿಗೋ ಫೋನ ಮಾಡಿ  ಸಾಮಾನುಗಳನ್ನು ತೆಗೆದುಕೊಂಡು ಬಾ ಅಂತಾ  ಹೇಳಿ  ನನಗೆ ಹೆದರಿಸಿ ನನ್ನ ಜೇಬಿನಲ್ಲಿದ್ದ 18,000/- ರೂಪಾಯಿಗಳನ್ನು ಕಿತ್ತಿ ಕೊಂಡನು  ಆತನ ಗೆಳೆಯ ತಂದಿರುವ ಮಚ್ಚು ತೆಗೆದು ರೂಪಾಯಿ ಕೊಡು ಅಂತಾ ಹೆದರಿಸಿದನು, ಆಗ ನಾನು ಅವನಿಗೆ ಅವನು ನನ್ನ ಹತ್ತಿರವಿರುವ ರೂಪಾಯಿ ಕಿತ್ತಿಕೊಂಡಿರುತ್ತಾನೆ ಅಂತಾ ತಿಳಿಸಿದೇನು, ನಂತರ ಇಬ್ಬರು ಕೂಡಿಕೊಂಡು  ಈ ವಿಷಯದ ಬಗ್ಗೆ ಪೊಲೀಸ ಕಂಪ್ಲೆಂಟ ಕೊಟ್ಟರ ನಿನಗೆ ಬಿಡುವದಿಲ್ಲಾ ಅಂತಾ ಹೆದರಿಸಿ  ಜೇವರ್ಗಿ ಕಾಲೂನಿ ಕಡೆಗೆ ಹೋದರು. ವಿಜಯಕುಮಾರ ಇವನು ಕಾರ್ಪೋರೆಟರ ಆಗಿದ್ದು ಅವನನ್ನು ವಿಚಾರಿಸಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಅಂತಾ ನಾನು ಯಾವುದೇ ದೂರು ಕೊಟ್ಟಿರುವದಿಲ್ಲ. ಸದರಿ ವಿಜಯಕುಮಾರ ಇಲ್ಲಿಯವರೆಗೆ ಕಾಣದೆ ಇರುವದರಿಂದ ಸದರಿಯವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಗುನ್ನೆ ನಂ:8/2013 ಕಲಂ.394 ಐಪಿಸಿ. ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

03 January 2013

GULBARGA DISTRICT REPORTED CRIME


ಕಳ್ಳತನ ಪ್ರಕರಣ:

ಚೌಕ ಪೊಲೀಸ್ ಠಾಣೆ:ಶ್ರೀ ಶಶಿಕಾಂತ ತಂದೆ ಚಂದ್ರಕಾಂತ ಶೆಟ್ಟಿ ಮಹಾಜನ ಉ|| ವ್ಯಾಪಾರ ಸಾ|| ಬ್ಯಾಂಕ್ ಕಾಲೋನಿ ಗುಲಬರ್ಗಾರವರು ನಾನು ಟ್ರೇಡಿಂಗ್ ಕಂಪನಿಯ ಪಾರ್ಟಿಗಳಿಗೆ ಹಣ ಕೊಡುವ ಸಲುವಾಗಿ ಅಡಿತಿಯ ಲಾಕರದಲ್ಲಿ ನಗದು ಹಣ 95,000/- ರೂಪಾಯಿಗಳು ಇಟ್ಟು ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು, ದಿನಾಂಕ: 03-01-2013 ರಂದು ಬೆಳಿಗ್ಗೆ 10-00 ಗಂಟೆಗೆ ಅಡತಿಗೆ ಬಂದು ನೋಡಲು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲ್ಲದೇ ಅಂಗಡಿಯ ಮೇಲಿನ ಪತ್ರಾ ಕತ್ತರಿಸಿ ಆಲಮಾರಿ ಒಡೆದು ಅದರಲ್ಲಿರುವ 95,000/- ರೂಪಾಯಿಗಳು ಕಳ್ಳತನವಾಗಿದ್ದು, ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಮಾನ್ಯ ಎಸ್‌.ಪಿ ಸಾಹೇಬ ಗುಲಬರ್ಗಾರವರ ಆದೇಶ ಮೇರೆಗೆ ನಾನು ಪಿಎಸ್‌ಐ ಫರತಾಬಾದ ಮತ್ತು ನನ್ನ ಜೊತೆ ಹೇಮಂತಕುಮಾರ ಪಿಎಸ್‌ಐ ಹಾಗೂ ಸಿಬ್ಬಂದಿಯೊಂದಿಗೆ ಶಹಾಬಾದಲ್ಲಿ ಜೂಜಾಟ ನಡೆದಿದೆ ಎಂದು ಬಾತ್ಮಿ ಬಂದ ಮೇರೆಗೆ ಮಾನ್ಯ ಡಿವೈಎಸ್‌ಪಿ ಸಾಹೇಬ ಶಹಾಬಾದರವರ ನೇತೃತ್ವದಲ್ಲಿ ಶಹಾಬಾದದ ಭೀಮಾಶಂಕರ ವಡ್ಡರರವರ ಮನೆಯ  ಮೇಲೆ ದಾಳಿ ಮಾಡಿ 6 ಜನ ಆರೋಪಿತರು ಮತ್ತು ನಗದು ಹಣ 50,170/- ರೂ ಹಾಗೂ ದ್ವಿ-ಚಕ್ರ ವಾಹನಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ:01/2013 ಕಲಂ:79,80 ಕೆಪಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಧನು ತಂದೆ ಡೊಂಗ್ರು ಪವಾರ ವ:23 ಸಾ:ಬಾಲುನಾಯಕ ತಾಂಡಾ  ಮುಗಳನಾಗಾಂ ರವರು ನಾನು ದಿನಾಂಕ:02/01/2013 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಶಹಾಬಾದ ಬಸ ನಿಲ್ದಾಣದಿಂದ ಟಂಟಂ ನಂ:ಕೆಎ-32/ಬಿ-7160 ನೇದ್ದರಲ್ಲಿ ಕುಳಿತುಕೊಂಡು ಹೋಗುತ್ತಿರುವಾಗ ಶಾಂತನಗರ ಮಜೀದ ಹತ್ತಿರವಿರುವ ಸಣ್ಣ ಬ್ರೀಡ್ಜ ಹತ್ತಿರ ಎದರುಗಡೆಯಿಂದ ಒಂದು ಟಂ ಟಂ ಅಫೇ ಮೀನಿಗೂಡ್ಸ್‌ ನಂ.ಕೆಎ-32 ಬಿ-1650 ನೇದ್ದರ ಚಾಲಕ ರಮೇಶ ತಂದೆ ಸಿದ್ರಾಮಪ್ಪ ಇತನು ತನ್ನ ಟಂಟಂ ನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನನಗೆ ತಲೆಗೆಟೊಂಕಕ್ಕೆಬಲಗಾಲ ಮೋಳಕಾಲಿಗೆ ತರಚಿದ ರಕ್ತಗಾಯ ಮತ್ತು ಬೆನ್ನಿಗೆ ಒಳಪೆಟ್ಟು ಆಗಿರುತ್ತದೆ. ಮತ್ತು ನಮಗೆ ಡಿಕ್ಕಿ ಪಡಿಸಿದ ಟಂಟಂದಲ್ಲಿ ಕುಳಿತಿದ್ದ ಶರಣ ತಂದೆ ಲಕ್ಷ್ಮಣ ಇತನಿಗೆ ಗಾಯಗಳಾಗಿರುತ್ತವೆ. ಚಾಲಕರಿಗೆ ಯಾವುದೆ ಗಾಯಗಳಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2013 ಕಲಂ:279,337  ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.