POLICE BHAVAN KALABURAGI

POLICE BHAVAN KALABURAGI

02 December 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀ,ಸೋಮಶೇಖರ ತಂದೆ ಚಿಕ್ಕತಮ್ಮೆಗೌಡ ಸಾ|| 1507/1 8 ನೇ ಮುಖ್ಯೆ ರಸ್ತೆ ಮುನ್ನೇಶ್ವರ ಬ್ಲಾಕ ಬೆಂಗಳೂರು 560026 ನಿವಾಸಿ ಇದ್ದು ರೋಬೊ ರೆಮಿಡೆಸ್ ಕಂಪನಿ ಬೆಂಗಳೂರ ಇವರ ಕಂಪನಿಯ ಜಾಹಿರಾತು ಪ್ರಕಟಣೆಗಾಗಿ ನನ್ನ ಬಿಳಿಯ ಬಣ್ಣದ ಟಾಟಾ ಸುಮೋ ವಾಹನ ನಂ ಕೆಎ 01 ಎ 9892 ನೇದ್ದು ಈಗಾ ಸುಮಾರು ಒಂದೂವರೆ ವರ್ಷದಿಂದ ಬಾಡಿಗೆಗೆ ನೀಡಿ ನಾನು ಸಹ ಸಂಬಳದ ಮೇಲೆ ವಾಹನ ಚಲಾಯಿಸುತ್ತೇನೆ. ದಿನಾಂಕ 26/11/2012 ರಂದು ಸದರಿ ಕಂಪನಿಯವರ ಆದೇಶದಂತೆ ನಾನು ಬಾಡಿಗೆಗೆ ನೀಡಿದ ಟಾಟಾ ಸುಮೋ ನಂ:ಕೆಎ-01 ಎ-9892   ನೇದ್ದರಲ್ಲಿ ನನ್ನೊಂದಿಗೆ  ರೋಬೊ ರೆಮಿಡಸ್ ಕಂಪನಿಯಲ್ಲಿ [ಔಷದ] ಕೆಲಸ ಮಾಡುವ ಮಂಜುನಾಥ, ದರ್ಶನ್, ರಮೇಶ, ಸುದರ್ಶನ್ ಇವರು ಸಹ ಬಂದರು.ನಾವು ಕಂಪನಿಯ ಔಷದ ಜಾಹಿರಾತ ಪ್ರಕಟಣೆ ಮಾಡುತ್ತಾ ಟಾಟಾ ಸುಮೊದೊಂದಿಗೆ ದಿನಾಂಕ:26/11/2012 ರಂದು ಆಳಂದಕ್ಕೆ ರಾತ್ರಿ 9.00 ಗಂಟೆ ಸುಮಾರಿಗೆ ಬಂದು ಆಳಂದದ ಆರ್.ಟಿ.ಓ  ಚೆಕ್ ಪೊಸ್ಟ ಹತ್ತಿರವಿರುವ ಸಾಯಿರಾಮ ಹೋಟಲಗೆ ಹೋಗಿ ಬಾಡಿಗೆಗೆ ರೂಮ ಪಡೆದು ಅಲ್ಲೇ ಉಳಿದುಕೊಂಡೆವು. ಬೆಳಿಗ್ಗೆ ಎದ್ದು ಆಳಂದ ತಾಲೂಕಿನ ಕೆಲವು ಹಳ್ಳಿಗಳಿಲ್ಲಿ  ತಿರುಗಾಡಿ ಜಾಹಿರಾತು ಪ್ರಕಟಣೆ ಮಾಡಿ ದಿನಾಂಕ:28/11/2012 ರಂದು ದಿನಿತ್ಯದಂತೆ ಸಾಯಿರಾಮ ಹೋಟಲ ಎದುರಿಗೆ ನಮ್ಮ ಟಾಟಾ ಸುಮೊ ನಂ ಕೆಎ-01 ಎ-9892   ನೇದ್ದು ನಿಲ್ಲಿಸಿ ಮಲಗಿಕೊಂಡಿದ್ದೆವು. ದಿನಾಂಕ:29/11/2012 ರಂದು ಬೆಳಗ್ಗೆ 6.00 ಗಂಟೆಗೆ ಎದ್ದು ನೋಡಲಾಗಿ ಯಾರೋ ಕಳ್ಳರು ನಮ್ಮ ಟಾಟಾ ಸುಮೊವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 237/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಗಲು ಕಳವು ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ. ಶ್ರೀ.ವಿನಾಯಕ ತಂದೆ ನಾರಾಯಣರಾವ ಪಡವಳೆಸಾ|| ಮನೆ ನಂ: 51ಕೆ.ಹೆಚ್.ಬಿ ಪಿ.ಡಬ್ಲು.ಡಿ ಕ್ವಾರ್ಟಸ ಹಿಂದುಗಡೆ ರಾಜಾಪೂರ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:30/11/2012 ರಂದು ಮಧ್ಯಾಹ್ನ ಯಾರೋ ಕಳ್ಳರು ಶಹಾಬಾದ ರಸ್ತೆಯ ರಾಜಾಪೂರ ಕಾಲೋನಿ ಕೆ.ಹೆಚ್.ಬಿ ಪಿ.ಡಬ್ಲು.ಡಿ ಕ್ವಾರ್ಟಸ ಹಿಂದುಗಡೆ ಮನೆ ನಂ: 51ನೇದ್ದರ ಬಾಗಿಲ ಕೀಲಿ ಹಾಗೂ ಒಳಗಡೆ ಅಲಮಾರಿ ಕೀಲಿಗಳನ್ನು ತೆಗೆದು ಒಳಗಿನಿಂದ 39 ಗ್ರಾಂ ಬಂಗಾರದ ಆಭರಣಗಳುಬೆಳ್ಳಿ ಸಾಮಾನುಗಳುನಗದು ಹಣ 10,000/- ಹೀಗೆ ಒಟ್ಟು 1,10,000/- ಬೆಲೆಬಾಳುವ ಮಾಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:125/12 ಕಲಂ: 457380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದರೋಡೆ ಪ್ರಕರಣ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ಶ್ರೀಮತಿ ಸುಮಾ ಗಂಡ ಶಿವಪ್ರಕಾಶ ಗಂಗಾಧರ ಮಠ ಸಾ|| ಎಂ.ಬಿ.ನಗರ ಹೊಸ ಬಡಾವಣೆ ಗುಲಬರ್ಗಾ ರವರು ನಾನು ಮತ್ತು ದಾನಮ್ಮ, ರೂಪಾ ಕೂಡಿಕೊಂಡು ದಿನಾಂಕ:01/12/2012 ರಂದು ಸಾಯಂಕಾಲ 5-20 ಗಂಟೆ ಸುಮಾರಿಗೆ  ಬಳೆ ಹಾಕಿಕೊಳ್ಳುವ ಸಂಬಂಧ ಬಸವೇಶ್ವರ ಚೌಕ್ ಹತ್ತಿರ ಇರುವ ಅಂಗಡಿಗೆ ಹೋಗಿ ಬಳೆಗಳನ್ನು ಹಾಕಿಕೊಂಡು ಎಲ್ಲರು ನಡೆದುಕೊಂಡು ಮನೆ ಕಡೆ ಬರುತ್ತಿರುವಾಗ ಮಾಣಿಕರೆಡ್ಡಿ ಇವರ ಮನೆಯ ಹತ್ತಿರ ಬರುತ್ತಿದ್ದಂತೆ ಒಂದು ಕಪ್ಪು ಬಣ್ಣದ ಮೋಟಾರು ಸೈಕಲ್ ಮೇಲೆ  ಇಬ್ಬರು ಅಪರಿಚಿತ ವ್ಯಕ್ತಿಗಳು ಅತೀ ವೇಗವಾಗಿ ಬಂದವರೆ ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ ಬಂಗಾರದ ಒಡವೆಗಳನ್ನು ಕಿತ್ತುಕೊಂಡು ಹೋದರು. ನನ್ನ ಕೊರಳಲ್ಲಿದ್ದ 5 ತೊಲೆಯ ಬಂಗಾರದ ಮಂಗಳ ಸೂತ್ರದಲ್ಲಿ 2 ತೊಲೆ ಮತ್ತು 10 ಗ್ರಾಂ ದ ಬಂಗಾರದ ಚೈನ್ ಹಾಗು ಇನ್ನೊಂದು 10 ಗ್ರಾಂ ಚೈನ್ ನಲ್ಲಿಯ 5 ಗ್ರಾಂ. ಬಂಗಾರ ಹೀಗೆ ಒಟ್ಟು 3.1/2 ತೊಲೆ ಬಂಗಾರ ಅ.ಕಿ. 1,05,000=00 ರೂಪಾಯಿ ಬೆಲೆ ಬಾಳುವುದನ್ನು ಕಿತ್ತುಕೊಂಡು ಮೋಟಾರು ಸೈಕಲ್ ಮೇಲೆ ಓಡಿ ಹೋಗಿರುತ್ತಾರೆ. ಸದರಿಯವರ ವಯಸ್ಸು 20 ರಿಂದ 25 ವರ್ಷ ಇದ್ದು ಮೋಟಾರು ಸೈಕಲ್ ನಡೆಸುವನು ಚೌಕಡಿ ಬಣ್ಣದ ಶರ್ಟ ಧರಿಸಿದ್ದು ಉದ್ದನೇಯ ಕೂದಲು ಮತ್ತು ಮೋಟಾರು ಸೈಕಲ್ ಮೇಲೆ ಹಿಂದುಗಡೆ ಕುಳಿತವನು ತನ್ನ ಕೊರಳಲ್ಲಿಯ ಬಂಗಾರದ ಒಡವೆಗಳನ್ನು ಕಿತ್ತುಕೊಂಡವನು ಬಿಳಿ ಟೀ-ಶರ್ಟ ಧರಿಸಿದ್ದನು. ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:132/2012 ಕಲಂ.392 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ದಾಮೋಧರ ತಂದೆ ಬನಸಿಲಾಲಜೀ ಕಲಂತ್ರಿ ಸಾ: ಕಲಂತ್ರಿ ಕುಂಜ ಎಸ್.ಬಿ.ಹೆಚ. ನೆಹರು ಗಂಜ ಕಾಲೋನಿ ಗುಲಬರ್ಗಾ ರವರು ನಾನು ಟಾಟಾ 2515 ಇಎಕ್ಸ್ ಲಾರಿ ನಂ. ಕೆ.ಎ. 32 ಬಿ 5321 ಇದರ ಮಾಲೀಕನಿದ್ದು, ರಾಜು ತಂದೆ ಬಾಳಾಸಾಹೇಬ ಕುಲಕರ್ಣಿ ವರು ದಿನಾಂಕ:27/11/2012 ರಂದು 12:15 ಎಎಮ್ ಕ್ಕೆ ಲಾಹೋಟಿ ಶೋರೂಮ್ ಮತ್ತು ಲಾಹೋಟಿ ಪೆಟ್ರೋಲ್ ಬಂಕ ಮದ್ಯದಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋಗಿದ್ದು ದಿನಾಂಕ:28/11/2012 ರಂದು ಬೆಳಿಗ್ಗೆ ಬಂದು ನೋಡಿದಾಗ ನಮ್ಮ ಡ್ರೈವರ ನಿಲ್ಲಿಸಿದ ಟಾಟಾ 2515 ಇಎಕ್ಸ್ ಲಾರಿ ನಂ. ಕೆಎ. 32 ಬಿ 5321 ಬಣ್ಣ ಕೆಂಪು ಬಣ್ಣ NP COLOR, ಇಂಜನ ನಂ.60F62485719, ಚೆಸ್ಸಿ ನಂ.  426031FTZ123253 ನೇದ್ದು ಇರಲಿಲ್ಲಾ ಅವನು ಈ ವಿಷಯ ನಾನು ಲಾತೂರದಲ್ಲಿ ಆಸ್ಪತ್ರೆಗಾಗಿ ಹೋದಾಗ ನನಗೆ ತಿಳಿಸಿದ್ದು ನಾನು ನಮ್ಮ ಇನ್ನೂಳಿದ ಮುನೀಮರವರಿಗೆ ನಮ್ಮಲಾರಿಯ ಬಗ್ಗೆ ಹುಡುಕಾಡಿರಿ ಅಂತಾ ತಿಳಿಸಿದ್ದು ನಾನು ಕೂಡಾ ದಿನಾಂಕ:28/11/2012 ರಂದು ರಾತ್ರಿ 8:00 ಗಂಟೆಗೆ ಗುಲಬರ್ಗಾ ಕ್ಕೆ ಬಂದು ನನ್ನ ಲಾರಿಯ ಬಗ್ಗೆ ಎಲ್ಲಾ ಕಡೆ ಹುಡುಕಾಡಲು ಸಿಕ್ಕಿರುವದಿಲ್ಲಾ ಯಾರೋ ಕಳ್ಳರು ನ್ನ ಲಾರಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ನನ್ನ ಲಾರಿ ಅ.ಕಿ.8,40,000/-ರೂಪಾಯಿ ಬೆಲೆವುಳ್ಳದ್ದು  ಪತ್ತೆ ಮಾಡಿಕೊಡಬೇಕಾಗಿ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:86/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

01 December 2012

GULBARGA DISTRICT REPORTED CRIMES


ಕಾರು ಕಳ್ಳತನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ. ಮಲ್ಲಪ್ಪಾ ತಂದೆ ವೀರಸಂಗಪ್ಪಾ ಭೀಮನಳ್ಳಿ  ಸಾ|| ರಘೋಜಿ ಲೇಔಟ   ಹುಮಾನಾಬಾದ ರೋಡ  ರೇವಣಸಿದ್ದೇಶ್ವರ ಕಾಲೂನಿ ಗುಲಬರ್ಗಾ ರವರು ನಾನು  ದಿನಾಂಕ. 27-11-2012 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಕೆಲಸದಿಂದ ಮರಳಿ ಮನೆಗೆ ಬಂದಾಗ ಮನೆಯ ಎದರುಗಡೆ ರೋಡ ಮತ್ತು ನಾಲಿ ಕೆಲಸ ನಡೆದಿದ್ದ ಪ್ರಯುಕ್ತ  ನನ್ನ ಟಾಟಾ ಇಂಡಿಕಾ ಡಿ.ಎಲ್.ಎಸ್.  ಕಾರ ನಂ.ಕೆ.ಎ.32 ಎಂ.  5797  ನೇದ್ದು, ಆಕಾಶ ನೀಲಿ,  ಅಕಿ. 1,75,000/- ರೂ ಬೆಲೆ ಬಾಳುವದು ಮನೆಯ ಎದರುಗಡೆ  ಇರುವ ರೋಡ ಬದಿಗೆ ಲಾಕ್ ಮಾಡಿ ಮನೆಗೆ ಹೋಗಿದ್ದು, ದಿನಾಂಕ:28-11-2012 ರಂದು ಬೆಳಗ್ಗೆ 7-00 ಗಂಟೆಗೆ ಎದ್ದು ನೋಡಲಾಗಿ ಮನೆ ಎದರುಗಡೆ ರೋಡಿನ ಬದಿಗೆ ನಿಲ್ಲಿಸಿದ  ನನ್ನ ಕಾರು ಇರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನನ್ನ ಗೆಳೆಯರು ಕೂಡಿಕೊಂಡು  ಎಲ್ಲಾ ಕಡೆಗೂ ಹುಡುಕಾಡಲಾಗಿ  ಸಿಕ್ಕಿರುವದಿಲ್ಲ ಕಾರಣ ಕಾರು ಪತ್ತೆ ಮಾಡಿಕೊಡಬೇಕಾಗಿ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:399/2012 ಕಲಂ.  379  ಐಪಿಸಿ ನೆದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾರು ಕಳ್ಳತನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಶಿವಶರಣಪ್ಪ ತಂದೆ ಮ್ಲಲೇಶಪ್ಪ ಹೊನಗುಂಟಾ ಸಾ: ಶಹಾಬಜಾರ ಗುಲ್ಬರ್ಗಾರವರು ನಾನು ದಿನಾಂಕ:30/11/2012 ರಂದು ಮುಂಜಾನೆ ನನ್ನ ಮೋ ಸೈಕಲನಂ ಕೆಎ 32 ಎಕ್ಸ್‌‌ 6744 ನೇದ್ದರ ಮೇಲೆ ಶಿವಾಜಿ ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುವ ದೇವಕಮ್ಮ ಇವಳನ್ನು ಕೂಡಿಸಿಕೊಂಡು  ಆರ್‌ಎಸ್ ಕಾಲೋನಿಯಿಂದ ಮುಖ್ಯ ರಸ್ತೆಗೆ ಬಂದು, ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಕ್ರೋಜರ ಜೀಪ  ಕೆಎ 32 ಎ- 5405 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೋಡಿದಿದ್ದರಿಂದ ಕೆಳಗೆ ಬಿದ್ದು ನನಗೆ ರಕ್ತಗಾಯವಾಗಿದ್ದು ಮತ್ತು ಹಿಂದೆ ಕುಳಿತ ದೇವಕಮ್ಮ ಇವಳಿಗೆ ತಲೆಗೆ ಹಿಂದುಗಡೆ ಗಾಯವಾಗಿದ್ದು ಮತ್ತು ಅಲಲ್ಲಿ ತರಚಿದ ಗಾಯವಾಗಿರುತ್ತವೆ ಜೀಪ ಚಾಲಕ ತನ್ನ ವಾಹನವನ್ನುಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 398/2012 ಕಲಂ, 279, 338 ಐಪಿಸಿ ಸಂಗಡ 187 ಐ.,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಲಕ್ಷತನದಿಂದ ಬಿ.ಎಸ್.ಎನ್.ಎಲ್. ಕೇಬಲ್ ಗೆ ಕಟ್ಟ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಗುಂಡೆರಾವ ತಂದೆ ನರಹರರಾವ ಕುಲಕರ್ಣಿ || ಬಿ.ಎಸ್.ಎನ್.ಎಲ್ ಉಪ-ವಿಭಾಗದ ಅಧಿಕಾರಿ ಆಳಂದ, ಸಾ||ವಿನಾಯಕ ಕಾಲೋನಿ ಕರುಣೆಶ್ವರ ನಗರ ಜೇವರ್ಗಿ ರೋಡ ಗುಲಬರ್ಗಾ ಹಾ|| || ಬಿ.ಎಸ್.ಎನ್.ಎಲ್ ವಸತಿ ಗೃಹ ಆಳಂದ ರವರು ಆಳಂದ ತಾಲೂಕಿನ ಎಲ್ಲಾ ಬಿ.ಎಸ್.ಎನ್.ಎಲ್ ಎಕ್ಸೆಂಜಗಳು ತಮ್ಮ ಉಪ ವಿಭಾಗದ ವ್ಯಾಪ್ತಿಗೆ ಬರುತ್ತಿದ್ದು, ದಿನಾಂಕ:28-11-2012 ರಂದು ನಾನು  ಆಫೀಸ ಕೆಲಸದ ನಿಮಿತ್ಯವಾಗಿ ಕಡಗಂಚಿಗೆ ಹೋದಾಗ ತಮ್ಮ ಮೋಬೈಲ ನಂ.9449799967 ಕ್ಕೆ ಎಸ್.ಎಮ.ಎಸ್ ಮೂಲಕ ಮಾಡಿಯಾಳ, ಅರ್ಜುಣಗಿ, ನಿಂಬಾಳ ಮತ್ತು ಮಾದನ ಹಿಪ್ಪರಗಾ ಟವರ್ ಫೇಲಾಗಿದ್ದ ಬಗ್ಗೆ ಮೆಸೇಜ ಬಂದಿದ್ದು, ನಾನು ಆ ಏರಿಯಾದ ಲೈನಮ್ಯಾನ ಲಕ್ಷ್ಮಣ ತಂದೆ ಶ್ರೀಪತಿ ಛತ್ರಿ ಸಾ|| ಹಿತ್ತಲ ಶಿರೂರ ಇವರಿಗೆ ಫೋನ ಮಾಡಿ ಟವರ್ ಫೇಲ ಆದ ವಿಚಾರಿಸಲು ಆತನು ಲೈನ ಚೆಕ್ಕ ಮಾಡಿ ನಿಂಬರ್ಗಾದಿಂದ ಮಾಡಿಯಾಳಕ್ಕೆ ಹೋಗುವ ಲೈನಿನ ಮಧ್ಯದಲ್ಲಿ ಅಂದರೆ ನಿಂಬರ್ಗಾದ ನಿಲಂಕರ ಗುಡ್ಡದ ಹತ್ತಿರ ಓ.ಎಫ.ಸಿ ಕೇಬಲ ಕಟ್ ಮಾಡಿದ ಬಗ್ಗೆ ತಿಳಿಸಿದ್ದು, ನಾನು ಸ್ಥಳಕ್ಕೆ ಭೇಟ್ಟಿ ನೀಡಿ ಪರಿಶೀಲಿಸಿ ಮತ್ತು ನನ್ನ ಜೊತೆಗೆ ಹಾಜರಿದ್ದ ಲಕ್ಷ್ಮಣ ಲೈನಮನ ಇವರನ್ನು ವಿಚಾರಿಸಲಾಗಿ ಕೆ.ಇ.ಬಿ ಇಲಾಖೆಯ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿ ಅಡಿಯಲ್ಲಿ ವಿಧ್ಯುತ ಕಂಬಗಳನ್ನು ಹೂಳುವ ಸಲುವಾಗಿ ಗುತ್ತಿಗೆ ಹಿಡಿದಿರುವ ಜೈನ ಎಲೆಕ್ಟ್ರಿಕಲ್ ಕಂಪನಿಯ ಮಾಲೀಕರಾದ ಅನಂತ ಜೈನ ಇವರ ಅಧೀನದಲ್ಲಿ ಕೆಲಸ ಮಾಡುವ ಸೈಟ ಸೂಪರ ವೈಜರ ಆದ ಶರಣಯ್ಯ ತಂದೆ ಶಿವರಾಚಯ್ಯಾ ಸ್ವಾಮಿ ಸಾ|| ಆಲೂರ (ಬಿ) ಇತನು ದೇವೆಂದ್ರ ಇವನು ಚಲಾಯಿಸುತ್ತಿರುವ  ಜೆ.ಸಿ.ಬಿ ಯಿಂದ ದಿನಾಂಕ:28-11-2012 ಸಾಯಂಕಾಲ 5-30 ಗಂಟೆಗೆ ತಗ್ಗು ತೋಡಿಸುವಾಗ ಓ.ಎಫ.ಸಿ ಕೇಬಲನ್ನು ಕಟ ಮಾಡಿರುವ ಬಗ್ಗೆ ಗೊತ್ತಾಗಿರುತ್ತದೆ. ಈ ಕಟ್ಟಾಗಿರುವ ಓ.ಎಫ.ಸಿ ಕೇಬಲನಿಂದ ನಮ್ಮ ಇಲಾಖೆಗೆ ಅಂದಾಜು1,50,000/- (ಒಂದು ಲಕ್ಷ ಐವತ್ತು ಸಾವಿರ) ರೂಪಾಯಿಗಳಷ್ಟು ಹಾನಿಯಾಗಿರುತ್ತದೆ. ಸಾರ್ವಜನಿಕ ಸೇವೆಗಾಗಿ ಹಾಕಿರುವ ಓ.ಎಫ.ಸಿ ಕೇಬಲನ್ನು ಕಟ್ ಮಾಡಿ ಸಾರ್ವಜನಿಕ ಸ್ವತ್ತಿಗೆ ಹಾನಿ ಮಾಡಿರುವ ಜೈನ ಎಲೆಕ್ಟ್ರಿಕಲ ಗುಲಬರ್ಗಾದ ಮಾಲೀಕರಾದ ಅನಂತ ಜೈನ, ಸೂಪರ ವೈಜರನಾದ ಶರಣಯ್ಯ ಸ್ವಾಮಿ ಮತ್ತು ಜೆ.ಸಿ.ಬಿ ಚಾಲಕನಾದ ದೇವಿಂದ್ರ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2012 ಕಲಂ427 ಸಂ. 34 ಐಪಿಸಿ ಮತ್ತು 2(ಎ) ಪ್ರವೇನಶನ  ಆಫ ಡಿಸ್ಟ್ರಕ್ಷನ ಆ್ಯಂಡ ಲಾಸ ಆಫ ಪ್ರಾಪರ್ಟಿ ಆಕ್ಟ 1981. ಪ್ರಕಾರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಮಹ್ಮದ ಶರೀಫ   ತಂದೆ ಮಹಿಮೂದ ಅಲಿ    ಸಾ: ನಿಮರಾ ಮಜೀದ ಹತ್ತಿರ ಅಂಬಿಕಾ ನಗರ  ಗುಲಬರ್ಗಾ  ರವರು   ನಾನು ದಿನಾಂಕ:29-11-2012 ರಂದು ರಾತ್ರಿ  10-10- ನಮ್ಮ ಓಣಿಯ ಶಮೀಮ ಅಹ್ಮದ ತಂದೆ ಲಾಡ್ಲೆ ಸಾಬ ಮುಲ್ಲಾ ಇವರ ಮೋಟಾರ ಸೈಕಲ್ ನಂ:ಕೆಎ 32 ಎಕ್ಸ 2256 ನೇದ್ದರ ಮೇಲೆ ರೈಲ್ವೆ ಸ್ಟೆಶನ ಕಡೆಗೆ ಬರುವ ಕುರಿತು ನಾನು ಆತನ ಮೋಟಾರ ಸೈಕಲ್ ಹಿಂದೆ ಕುಳಿತು ಅಂಬಿಕಾ ನಗರ ದಿಂದ ಹಳೆ ಜೇವರ್ಗಿ ರೋಡ ಕಡೆಗೆ ಹೋಗುತ್ತಿದ್ದಾಗ ಪಿ  & ಟಿ ಕಾಲೋನಿ ಎದುರು ರೋಡಿನ ಮೇಲೆ ಶಮೀಮ ಅಹಮದ ಇನು ತನ್ನ ಮೋಟಾರ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಕಟ್ ಹೊಡೆದು ಬ್ರೇಕ್ ಹಾಕಿದಾಗ ನಾನು ಮೋಟಾರ ಸೈಕಲ್ ಮೇಲಿಂದ ಪುಟಿದು ಕೆಳಗೆ ಬಿದ್ದು ಬಾರಿ ಗಾಯ ಹೊಂದಿರುತ್ತೇನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 117/2012 ಕಲಂ, 279,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

30 November 2012

GULBARGA DISTRICT REPORTED CRIMES


ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ 7 ದ್ವಿ-ಚಕ್ರ ವಾಹನಗಳು ಜಪ್ತಿ, ಎರಡು ಜನ ಆರೋಪಿತರ ಬಂಧನ.
ನಗರದಲ್ಲಿ ನಡೆಯುತ್ತಿರುವ ದ್ವಿ-ಚಕ್ರ ವಾಹನಗಳ ಕಳ್ಳತನದ ಪತ್ತೆ ಕುರಿತು ಮಾನ್ಯ ಶ್ರೀ.ಕಾಶಿನಾಥ ಹೆಚ್ಚುವರಿ ಎಸ್.ಪಿ ಗುಲಬರ್ಗಾ, ಶ್ರೀ.ಭೂಷಣ ಜಿ ಬೋರಸೆ ಐ.ಪಿ.ಎಸ್., ಸಹಾಯಕ ಪೊಲೀಸ ಅಧೀಕ್ಷಕರು (ಎ) ಉಪ-ವಿಭಾಗ ಗುಲಬರ್ಗಾ, ಶ್ರೀ.ಹೆಚ್. ತಿಮ್ಮಪ್ಪ ಡಿ.ವೈಎಸ್.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ ಠಾಣೆಯ ಶ್ರೀ.ಶರಣಬಸವೇಶ್ವರ ಭಜಂತ್ರಿ ಪೊಲೀಸ್ ಇನ್ಸಪೇಕ್ಟರ, ಶ್ರೀ.ಸತ್ಯನಾರಾಯಣ ಪಿ.ಎಸ್.ಐ,,ಮಾರುತಿ ಎ.ಎಸ್.ಐ., ಪ್ರಕಾಶ, ಮಹಾಂತೇಶ, ಅಶೋಕ ಹಾಗೂ (ಎ) ಉಪ-ವಿಬಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಮಹ್ಮದ ರಫೀಕ, ರಾಮು ಪವಾರಶಿವಪ್ರಕಾಶ, ದೇವಿಂದ್ರ ರವರು ರಾಜಕುಮಾರ@ಚನ್ನಪ್ಪ ತಂದೆ ವಕೀಲರಾಯ ಮಾಲಿ ಬಿರಾದಾರ@ಆಲೂರೆ, ವಯ|| 26 ವರ್ಷ, || ಖಾಸಗಿ ಕೆಲಸ, ಸಾ|| ತೋರಿವಾಡಿ@ವಳವಂಡವಾಡಿ ತಾ||ಆಳಂದ, ಹಾ||||ಲಾಲ ಹನುಮಾನ ಗುಡಿಯ ಹತ್ತಿರ ಶಹಾಬಜಾರ. ಸಂತೋಷಕುಮಾರ ತಂದೆ ಸುಬಾಶ್ಚಂದ್ರ ರಂಗೋಜಿ, ವಯ|| 32 ವರ್ಷ, || ಟ್ರ್ಯಾಕ್ಟರ ಡ್ರೈವ್ಹರ, ಸಾ|| ದೇಗಾಂವ ತಾ|| ಆಳಂದ, ಹಾ|||| ಮಲಂಗ ಹೊಟೇಲ ಶಿವಾಜಿ ಖಾನಾವಳಿ ಮನೆಯ ಹತ್ತಿರ ಶಹಾಬಜಾರ ಗುಲಬರ್ಗಾ,ರವರನ್ನು ಬಂಧಿಸಿ ಅವರಿಂದ ನಗರದ ಸಂಗಮ ಥೇಟರದಿಂದ, ಕೋಠಾರಿ ಭವನದಿಂದ, ಸರಾಫ ಬಜಾರದಿಂದ, ಸುಪರ ಮಾರ್ಕೆಟದಿಂದ ಕಳ್ಳತನ ಮಾಡಿದ ವಿವಿಧ ಏಳು (7) ಮೋಟರ ಸೈಕಲಗಳು ಅ||ಕಿ||2,35,000/- ರೂಪಾಯಿಗಳ ಬೆಲೆಬಾಳುವದ್ದು ಜಪ್ತ ಮಾಡಿಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಶ್ರೀಮತಿ ಶಾಹೀನ ಅಂಜುಮ್  ಗಂಡ ತೌಸೀಫ್ ಅಹ್ಮದ ಸಾ: ಬಾಂಬೆ ಹೋಟೆಲ್ ಬಿಲಾಲಾಬಾದ ಬ್ಯಾಂಕ ಕಾಲೋನಿ ಗುಲಬರ್ಗಾರವರು ಮಾನ್ಯ 2 ನೇ ಅಪರ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶದಂತೆ ಕಲಂ 156(3) ಸಿ.ಆರ್.ಪಿ.ಸಿ ಪ್ರಕಾರ ತನಿಖೆ ಕೈಕೊಳ್ಳುವಂತೆ ಆದೇಶಿದ ಪ್ರಕಾರ ಮತ್ತು ಅದರ ಸಾರಂಶವೇನೆಂದರೆ, ಶಾಹೀನ ಅಂಜುಮ್ ಲಗ್ನವು ದಿನಾಂಕ:06.10.2008 ರಂದು ತೌಸೀಫ್ ಅಹ್ಮದ ದಿ|| ಹಾಜಿ ಅಬ್ದಲ್ ರಸೂಲ್ ಬಾಂಬೆ ಇತನೊಂದಿಗೆ ಆಗಿದ್ದು. ಮದುವೆ ಕಾಲಕ್ಕೆ  2 ½  ತೊಲೆ ಬಂಗಾರ ಕೊಟ್ಟಿದ್ದು.ಮದುವೆಯಾದ ನಂತರ ನನ್ನ ಗಂಡನ ಮನೆಯಾದ ಬಾಂಬೆಗೆ ಹೋಗಿದ್ದು ತನ್ನ ಗಂಡ, ತೌಸೀಫ್ ಅತ್ತೆ ಅಬೇದಾ, ಮೈದುನ  ರೀಜ್ವಾನ, ನಾದಿನಿ ಶಾಹಜೀಯಾ  ಇವರು 3 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೇ ನಿನಗೆ ತಲಾಖ್ ಕೊಡುತ್ತೇವೆ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದು ನನ್ನ ತಂದೆ ತಾಯಿಯವರು ಬಡವರಿದ್ದಾರೆ ಅಂತಾ ತನ್ನ ಗಂಡ , ಅತ್ತೆ, ಮೈದುನ, ಮತ್ತು ನಾದಿನಿ ಇವರಿಗೆ ಹಣ ಕೊಡುವುದು ಆಗುವುದಿಲ್ಲಾ ಅಂತಾ ಹೇಳಿದರು ಕೂಡ ಎಲ್ಲರು ಕೂಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ 3 ತಿಂಗಳ ನಂತರ ನನ್ನ ತವರು ಮನೆಯಾದ ಗುಲಬರ್ಗಾಕ್ಕೆ ತಂದು ಬಿಟ್ಟಿರುತ್ತಾರೆ.2010 ರಲ್ಲಿ  ನನ್ನ ಗಂಡ ,ಅತ್ತೆ, ಮೈದುನ, ನಾದಿನಿ ಇವರೆಲ್ಲರು ಕೂಡಿ ಗುಲಬರ್ಗಾದ ಮೋಮಿನಪೂರಕ್ಕೆ ಬಂದಾಗ ನಾನು ಮತ್ತು ನನ್ನ ತಂದೆ ಕೂಡಿ ಆ ನಾಲ್ಕು ಜನರಿಗೆ  ನಮ್ಮಗೆ 3 ಲಕ್ಷ ರೂಪಾಯಿ ಕೊಡುವುದು ಆಗುವುದಿಲ್ಲಾ. ಅಂತಾ ವಿನಂತಿಸಿಕೊಂಡರು ಕೂಡ ನನಗೆ ಕರೆದುಕೊಂಡು ಹೋಗದೇ ಇಲ್ಲೇ ಬಿಟ್ಟು ಹೋಗಿರುತ್ತಾರೆ. ಮತ್ತೆ ಸ್ವಲ್ಪ ದಿವಸದ ನಂತರ ನನ್ನ ತಂದೆ ನನಗೆ ಗಂಡನ ಮನೆಯಾದ ಬಾಂಬೆಯಲ್ಲಿ ಬಿಟ್ಟು ಬಂದರು ಮತ್ತೇ ನಾಲ್ಕು ತಿಂಗಳ ನಂತರ 3 ಲಕ್ಷ  ರೂಪಾಯಿ ತಂದ್ದರೇ ಮಾತ್ರ ನಮ್ಮ ಮನೆಯಲ್ಲಿ ಇರು ಅಂತಾ  ಹೊಡೆ ಬಡೆ ಮಾಡಿ  ಮನೆಯಿಂದ ಹೊರ ಹಾಕಿದ್ದು. ಬಾಂಬೆಯಲ್ಲಿ ಪಂಚಾಯಿತ ಮಾಡಿದರು ಕೂಡ ಯಾರ ಮಾತು ಕೇಳದೇ ಹೊಡೆ ಬಡೆ ಮಾಡುತ್ತಿದ್ದರಿಂದ. ನನ್ನ ತವರು ಮನೆಗೆ ಬಂದು ಉಳಿದುಕೊಂಡಿರುತ್ತೇನೆ.ದಿನಾಂಕ: 18.03.2012 ರಂದು ನನ್ನ ಗಂಡ ಗುಲಬರ್ಗಾದ  ಬಡಿ ಮಜೀದ  ಹತ್ತಿರವಿರುವ ಮನೆಗೆ ಬಂದಾಗ ನಾನು ಮತ್ತು ನನ್ನ ತಂದೆ ಹೋಗಿ ಸರಿಯಾಗಿ ಇಟ್ಟುಕೊಳ್ಳು ಬಾಂಬೆಗೆ ಕರೆದುಕೊಂಡು ಹೋಗು ಅಂತಾ ವಿನಂತಿಸಿಕೊಂಡರು ಕೂಡ ತವರು ಮನೆಯಲ್ಲಿಯೇ ಬೀಟ್ಟು  ಹೋಗಿರುತ್ತೇನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:83/2012 ಕಲಂ 498(ಎ) ಐ.ಪಿ.ಸಿ 3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.