POLICE BHAVAN KALABURAGI

POLICE BHAVAN KALABURAGI

13 November 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರಿ ಹಣಮಂತ ತಂದೆ ಯಲ್ಲಪ್ಪಾ ಯಾಳಗಿ ವ:35 ಜಾ:ಭೋವಿ ವಡ್ಡರ ಉ:ಖಣಿ ಕೆಲಸ ಸಾ:ಶೀಬರ ಕಟ್ಟಾ ಶಹಾಬಾದ ರವರು ನನ್ನ ಅಳಿಯ ನರೇಶ ತಂದೆ ಹುಲಗಪ್ಪಾ ವ:18 ಇತನ ಸಂಗಡ ತಿರುಪತಿ, ಭೀಮಣ್ಣಾ, ಹಳ್ಳೆಪ್ಪಾ ಇವರು ಪರ್ಶಿ ತುಂಬಲು ಲಾರಿ ನಂ.ಎಮ್‌ಹೆಚ್‌‌-09/ಎಲ್‌-8555 ನೇದ್ದರಲ್ಲಿ ದಿನಾಂಕ:12/11/2012 ರಂದು ಮುಂಜಾನೆ  ಲಾರಿಯ ಕ್ಯಾಬಿನ ಮೇಲೆ ಕುಳಿತುಕೊಂಡು ಶೀಬರ ಕಟ್ಟಾದಿಂದ ತರನಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು ಸದರಿ ಲಾರಿಯನ್ನು ಮೌಲಾಲಿ ತಂದೆ ಹಸನಸಾಬ ಇತನು ಚಲಾಯಿಸುತ್ತಿದ್ದನು.ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಳೆ ಶಹಾಬಾದದ ಫಕೀರಪ್ಪಾ ಹೊತಿನ ಮಡ್ಡಿ ರವರ ಮನೆಯ  ಎದರುಗಡೆ ರೋಡಿನ ಮೇಲೆ ಜಂಪಿನಲ್ಲಿ ಒಮ್ಮಲೆ ಬ್ರೇಕ ಹಾಕಿದ್ದರಿಂದ ಅಳಿಯ ನರೇಶ ಇತನು ಲಾರಿಯ ಕ್ಯಾಬಿನ ಮೇಲಿಂದ ಕೆಳಗೆ ಬಿದ್ದಿದ್ದರಿಂದ ಸದರಿಯವನಿಗೆ ಬಲಗಾಲ ತೊಡೆಗೆ ಒಳಪೆಟ್ಟಾಗಿರುತ್ತದೆ. ಮತ್ತು ಬಲಗೈಗೆ ಒಳಪೆಟ್ಟು  ಮತ್ತು ರಕ್ತಗಾಯವಾಗಿರುತ್ತದೆ. ಮತ್ತು ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ  ಉಳಿದವರಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲಾ.ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 148/2012 ಕಲಂ:279,337 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಡಾ. ಗೌಸುದ್ದಿನ ಆರೀಫ್ ಸಾ|| ಮನೆ ನಂ. 1-406 ಓನ್ ವೆ ಸ್ಟೇಷನ್ ರೋಡ ಸ್ಟೇಷನ್ ಬಜಾರ ಗುಲಬರ್ಗಾ ರವರು ನಾನು ದಿನಾಂಕ.05.11.2012 ರಂದು 3.00 ಗಂಟೆಯ ಸುಮಾರಿಗೆ ನಮ್ಮ ಆಸ್ಪತ್ರೆಯ ಮುಂದೆ ನನ್ನ ಮಾರುತಿ ಎ-ಸ್ಟಾರ್ ಕಾರ್ ನಂ. ಕೆಎ-32-ಎಮ್-7825 ನೆದ್ದು ನಿಲ್ಲುಗಡೆ ಮಾಡಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಉಪಚಾರ ಮಾಡಿ ನಂತರ 4.30 ಪಿ.ಎಂ ಗೆ ಹೊರಗಡೆ ಬಂದು ನೋಡಲು ನನ್ನ ಕಾರ್ ಇರಲಿಲ್ಲ ಇಲ್ಲಿಯ ವರೆಗೆ ಎಲ್ಲಾ ಕಡೆ ಹುಡುಕಾಡಿದರು ನನ್ನ ಕಾರ್ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ನನ್ನ ಕಾರ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಮಾರುತಿ ಎ-ಸ್ಟಾರ್ ಕಾರ್ ನಂ. ಕೆಎ-32-ಎಮ್-7825  ಮಾಡಲ್-2009 , ಚೆಸ್ಸಿ ನಂ.148129, ಅಂದಾಜು ಕಿಮತ್ತು . 2,50,000/- ರೂ ಇರುತ್ತದೆ. ಕಾರಣ ನನ್ನ ಆಸ್ಪತ್ರೆ ಮುಂದುಗಡೆ ನಿಲುಗಡೆ ಮಾಡಿದ್ದ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.138/2012 ಕಲಂ.138/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ವಿನಾಯಕ ತಂದೆ ತುಳಜಾರಾಮ  ನಾಯಿಂದ್ರಕರ ವಯ;31 ಸಾ; ಬಂಬೂಬಜಾರ ಹುಮನಾಬಾದ ಬೇಸ್ ಗುಲಬರ್ಗಾ ರವರು  ನಾನು ದಿನಾಂಕ. 09-11-2012 ರಂದು 9-30 ಪಿ.ಎಂ. ಗಂಟೆಯ ಸುಮಾರಿಗೆ ಇಂಡಸ್ಟ್ರೀಯಲ್ ಏರಿಯಾದಿಂದ ಮನೆಗೆ ಬರುವಾಗ ಹುಮನಾಬಾದ ರೋಡಿನ  ಟಿ.ವಿ. ಸ್ಟೇಶನ ಎದರುಗಡೆ ರೋಡಿನ ಮೇಲೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ವೇಗದಲ್ಲಿ ನಡೆಯಿಸಿಕೊಂಡು ಬಂದು ಒಬ್ಬ ಪಾದ ಚಾರಿಗೆ ಡಿಕ್ಕಿ ಹೊಡೆದು ಹೋಗಿದ್ದು ,ಆ ವ್ಯಕ್ತಿಯ ತಲೆಗೆ ಭಾರಿ ಪೆಟ್ಟಾಗಿ ಮೆದಳು ಹೊರ ಬಿದ್ದು ಭಾರಿ ರಕ್ತಸ್ರಾವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ  ಮೇಲಿಂದ ಠಾಣೆ ಗುನ್ನೆ ನಂ.362/12 ಕಲಂ.279,304(ಎ)ಐಪಿಸಿ ಸಂಗಡ 187 ಐಎಂವಿ ಎಕ್ಟ ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ಸದರಿ ವ್ಯಕ್ತಿಯ ಚಹರೆ ಪಟ್ಟಿ ,ಅಪರಿಚಿತ ಗಂಡು ಮನುಷ್ಯ, ಎತ್ತರ 5 5 ತೆಳುವಾದ ಮೈಕಟ್ಟು, ಸಾದಾಗಪ್ಪು  ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಕೂದಲು, ಬಡಕಲು ಶರೀರ ಒಂದು ಬಿಳಿ ಪ್ಯಾಂಟು, ಒಂದು ಕಪ್ಪು ಪ್ಯಾಂಟ ಇರುತ್ತದೆ. ಸದರಿ ವ್ಯಕ್ತಿಯ ವಾರಸುದಾರರು ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ 08472263631,  ಅಥವಾ ಸಿಪಿಐ ಗ್ರಾಮೀಣ 08472263630 ಅಥವಾ ಕಂಟ್ರೋಲ್ ರೂಮ 08472263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.

11 November 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರೀ ಪ್ರದೀಪ ತಂದೆ ವಿಠಲರಾವ ಮಸ್ತಾಪೂರ ಸಾ|| ಗಡಿನಿಂಗದಳ್ಳಿ ರವರು ನಾನು ಟಾವರಿಗೆ REVAN BACK SECURITY OF INDIA LTD BENGALORE  ಕಂಪನಿ ವತಿಯಿಂದ ಟವರ ಕಾವಲುಗಾರನಾಗಿ ಸುಮಾರು ಒಂದು ವರ್ಷದಿಂದ  ಕೆಲಸ ಮಾಡುತ್ತಿದ್ದೆನೆ ನನಗೆ ದಿನಾಂಕ 01.11.2012 ರಂದು ರಾತ್ರಿ ವೇಳೆಯಲ್ಲಿ ಟಾವರ ಕಾಯುತ್ತಿದ್ದಾಗ ವಾಂತಿಬೇದಿಯಾಗಿ ಜ್ವರ ಬಂದ ಕಾರಣ ನಾನು ವಿಶ್ರಾಂತಿ ತೆಗೆದುಕೊಂಡಿದ್ದು, ಅದೆ ನಸುಕಿನ ಜಾವಾ 02.45  ಗಂಟೆ ಸುಮಾರಿಗೆ ಟವರಕ್ಕೆ ಅಳವಡಿಸಿದ ‘’ಎಲ್ ಸಿ ಯು’’  ವೈರ್  ಕಳುವಾಗಿದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೋಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.116/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಶೇಕ ಜಾಫರ ಹುಸೇನ ತಂದೆ ಶೇಕ ಮಹ್ಮದ ಹುಸೇನ  ಸಾ:ಬಿಲಾಲಬಾದ ಕಾಲನಿ ಗುಲಬರ್ಗಾರವರು ನಾನು ತಾಜ ಸುಲ್ತಾನಪುರ ಸೀಮೆಯಲ್ಲಿ ಬರುವ  ಹೊಲ ಸರ್ವೆ ನಂ. 186/4 ರಲ್ಲಿ 2 ಎಕರೆ ಜಮೀನನ್ನು ಮಹ್ಮದ ಇಲಿಯಾಸ ತಂದೆ ಅಬ್ದುಲ ಕರೀಮ ಸಾ:ತಾಜ ಸುಲ್ತಾನಪೂರ ಸಧ್ಯ  ಖಾದ್ರಿ ಚೌಕ  ಶೇಖ ರೋಜಾ ಆಳಂದ ರೋಡ ಗುಲಬರ್ಗಾ ಇತನಿಂದ  11,70,000/- ರೂ.ಗೆ ಖರೀದಿ ಮಾಡಿದ್ದು  ದಾಖಲಾತಿ ಸಂಖ್ಯೆ 6923/2012-13 ದಿನಾಂಕ 21-08-12 ಇರುತ್ತದೆ. ಆದರೆ ಮಹ್ಮದ ಇಲಿಯಾಸ ಇತನು ಮತ್ತು ಹಣಮಂತರಾಯ ತಂದೆ ಶಂಕ್ರೆಪ್ಪ ಸಾ: ತಾಜ ಸುಲ್ತಾನಪೂರ ಇಬ್ಬರು ಕೂಡಿಕೊಂಡು ಖೊಟ್ಟಿ ದಾಖಲಾತಿ ತಯಾರಿಸಿ ನನಗೆ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:363/2012 ಕಲಂ, 420, 463, 467, 468 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಅನೀಲಕುಮಾರ ತಂದೆ ನಾರಾಯಣರಾವ ಕುಲಕರ್ಣಿ   ಸಾ: ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಗುಲಬರ್ಗಾ  ಕಲೋನಿ  ಗುಲಬರ್ಗಾ ನಾನು ದಿನಾಂಕ:10-11-2012 ರಂದು ನಾನು ನನ್ನ ಮೋಟಾರ ಸೈಕಲ ನಂ ಕೆಎ-32 ಇಬಿ- 7683 ನೇದ್ದರ  ಮೇಲೆ ಹಳೆ ಜೇವರ್ಗಿ ರಸ್ತೆಯಿಂದ ಮೋಹನ ಲಾಡ್ಜ ಕಡೆಗೆ ಹೋಗುತ್ತಿದ್ದಾಗ ನಾಗಾರ್ಜುನ ಲಾಡ್ಜ  ಎದರು ರೋಡಿನ ಮೇಲೆ ಕಾರ  ನಂ:ಕೆಎ-32 ಎನ್ -19 ನೇದ್ದರ ಚಾಲಕ  ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ  ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡಿಸಿ  ಗಾಯಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 113/2012 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಧ್ಯದ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ10/11/2012 ರಂದು ದೇವಿಂದ್ರ ಎ.ಎಸ್.ಐ ರವರು ಮತ್ತು ಪಿಸಿ ರಾಮಚಂದ್ರ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ದಂಗಾಪೂರ ಗ್ರಾಮದಿಂದ ಕಡಗಂಚಿ ಕಡೆಗೆ ಹೋಗುವ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಹೋಗಿ ನೋಡಲಾಗಿ ದಂಗಾಪೂರ ಗ್ರಾಮದಿಂದ ಕಡಗಂಚಿ ಕಡೆಗೆ ಹೋಗುವ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಪ್ಲಾಸ್ಟೀಕ ಚೀಲದಲ್ಲಿ ಮಧ್ಯದ ಬಾಟಲಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಅನಧೀಕೃತವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಮಧ್ಯದ ಬಾಟಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು ಸದರಿ ಮಧ್ಯದ ಬಾಟಲಿಗಳನ್ನು ಪರಿಶೀಲಿಸಲಾಗಿ  ರೂ. 1735/-  ರೂಪಾಯಿಗಳ ಮೌಲ್ಯದ ಮಧ್ಯದ ಬಾಟಲಿಗಳಿದ್ದು ಜಪ್ತಿ ಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 96/2012  ಕಲಂ 32,34 ಕೆ.ಇ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಆನಂದ ತಂದೆ ಗಿಡ್ಡೇಪ್ಪಾ ವಡ್ಡರ ವಯ: 26 ವರ್ಷ ಉ: ಕಾರ ಚಾಲಕ ಜಾ: ವಡ್ಡರ ಸಾ: ಸಿರನೂರ, ತಾ:ಜಿ: ಗುಲಬರ್ಗಾ ರವರು ನನ್ನ ತಮ್ಮ ಶಂಕರ ಡಿಪ್ಲೊಮ ಓದಿಕೊಂಡು ಇರುತ್ತಾನೆ ನನ್ನ ತಂಗಿಯರಾದ ನಾಗಮ್ಮ ಮತ್ತು ರೂಪಾ ಇವರು ಕೂಡಾ ನನ್ನ ಮನೆಯಲ್ಲಿರುತ್ತಾರೆ. ನನ್ನ ತಂಗಿಯಾದ ರೂಪಾ ಇವಳು ಈಗ ಸುಮಾರು 6 ತಿಂಗಳ ಹಿಂದೆ ನಮ್ಮೂರಿನ ಯಲ್ಲಪ್ಪಾ ತಂದೆ ಶೇಟ್ಟೇಪ್ಪ ಮೇಳಕುಂದಿ ಇವನಿಗೆ ಮದುವೆಯಾಗಿ 2 ಮಕ್ಕಳಿದ್ದರೂ ಕೂಡಾ ನನ್ನ ತಂಗಿ ಇವಳು ಅವನೊಂದಿಗೆ ಪ್ರಿತಿಸಿ ನಂದೂರ ಗ್ರಾಮದ ದೇವಸ್ಥಾನದ ಹತ್ತಿರ ಮದುವೆಯಾಗಿರುತ್ತಾರೆ. ನಮ್ಮ ತಂಗಿಯಾದ ರೂಪಾ ಇವಳು ತನ್ನ ಗಂಡನ ಮನೆಗೆ ಹೋದಳು. 3 ತಿಂಗಳವರೆಗೆ ನಮ್ಮೂರ ಬಿಟ್ಟು ಚಿಂಚೋಳಿಗೆ ಹೋಗಿ ಅಲ್ಲಿಂದ ಪುನಃ ವಾಪಸ ಊರಿಗೆ ಬಂದಿರುತ್ತಾರೆ. ಊರಿಗೆ ಬಂದು ತನ್ನ ಗಂಡನ ಮನೆಯಲ್ಲಿದ್ದಾಗ ನನ್ನ ತಂಗಿಯ ಗಂಡನಾದ ಯಲ್ಲಪ್ಪ ಮೇಳಕುಂದಿ, ಮಾವನಾದ ಶೇಟ್ಟೆಪ್ಪಾ ಮೇಳಕುಂದಿ, ಅತ್ತೆಯಾದ ರಾಮಬಾಯಿ ಮೇಳಕುಂದಿ, ಇವರು ನನ್ನ ತಂಗಿ ರೂಪಾಳಿಗೆ ತೊಂದರೆ ಕೊಡುತ್ತಿದ್ದರು, ನಮ್ಮ ಮನೆ ಅವರ ಮನೆ ಎದರು ಬದರು ಇದ್ದು ನಮ್ಮ ತಂಗಿಗೆ ತೊಂದರೆ ಕೊಡುವುದನ್ನು ತಾಳಲಾರದೆ ವಾಪಸ ಗಂಡನ ಮನೆಯಿಂದ ನಮ್ಮ ಮನೆಯಲ್ಲಿ ಬಂದು ಈಗ ಸುಮಾರು  ಒಂದೂವರೆ ಗಳಾಗಿರಬಹುದು. ಈ ವಿಷಯ ಇವತ್ತು ನಾಳೆಗೆ ಸರಿ ಹೋಗಬಹುದು ಅಂತಾ ನಾವು ನಮ್ಮ ಪಾಡಿಗೆ ಸುಮ್ಮನೆ ಇದ್ದೇವು. ದಿನಾಂಕ: 09-11-2012 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನಮ್ಮೂರಿನ ನೀಲಮ್ಮ ಹೊಟೇಲದ ಮುಂದೆ ಶೆಟ್ಟೇಪ್ಪ ತಂದೆ ಬಸಪ್ಪಾ ಮೇಳಕುಂದಿ, ಯಲ್ಲಪ್ಪಾ ತಂದೆ ಶೆಟ್ಟೇಪ್ಪಾ ಮೇಳಕುಂದಿ,  ರಾಮಬಾಯಿ ಗಂಡ ಶೆಟ್ಟೇಪ್ಪಾ ಮೇಳಕುಂದಿ,ಕಳ್ಳೊಳಿ ತಂದೆ ದುರ್ಗಾಪ್ಪಾ ಮೇಳಕುಂದಿ,ಯಲ್ಲಪ್ಪಾ ತಂದೆ ದುರ್ಗಾಪ್ಪಾ ಮೇಳಕುಂದಿ,ಬಸಪ್ಪಾ ತಂದೆ ದುರ್ಗಪ್ಪಾ ಮೇಳಕುಂದಿ,ವಿಜಯಲಕ್ಷ್ಮಿ ತಂದೆ ಶೆಟ್ಟೇಪ್ಪಾ ಮೇಳಕುಂದಿ,ಶಂಕರ ತಂದೆ ಈರಪ್ಪಾ ನಿಂಗನಕಲ್ಲ, ಶೀವು ತಂದೆ ಭೀಮರಾವ ಕಡಗಂಚಿ ಹಾಗೂ ಇತರರು ಕೂಡಿಕೊಂಡು ನಮ್ಮೂರಿನ ಶಂಕರ ಮತ್ತು ಆನಂದ ಇವಳ ತಂಗಿಯಾದ ರೂಪಾ ಇವಳು ನನ್ನ ಮಗ ಯಲ್ಲಪ್ಪ ಈತನ ಮದುವೆಯಾದರೂ ಕೂಡಾ ರೂಪಾ ಇವಳು ಮತ್ತೆ ಮದುವೆ ಮಾಡಿಕೊಂಡಿರುತ್ತಾಳೆ. ಇದ್ದರಿಂದ ನಮ್ಮ ಮನೆಯ ಮರ್ಯಾದೆ ಹಾಳಾಗಿದೆ ಅಂತಾ ಶೆಟ್ಟೇಪ್ಪಾ ಮೇಳಕುಂದಿ ಮಾತಾನಾಡುತ್ತಿದ್ದನು. ಶಂಕರ ವಡ್ಡರ ಮತ್ತು ನನಗೆ ಕೊಲೆ ಮಾಡಿದರೆ 1 ಲಕ್ಷ ರೂಪಾಯಿ ಕೊಡುತ್ತೇನೆ ಮತ್ತು ನಮ್ಮಗೆ ಕೊಲೆ ಮಾಡಲು ಅವರೆಲ್ಲರೂ ಕೂಡಿ ಒಳಸಂಚು ರೂಪಿಸುವುದನ್ನು ನನ್ನ ತಂಗಿಯಾದ ನಾಗಮ್ಮ ಇವಳು ಕೇಳಿ ಮನೆಗೆ ಬಂದು ಸದರಿ ವಿಷಯವನ್ನು ನನಗೆ ಮತ್ತು ನನ್ನ ತಮ್ಮ ಶಂಕರನಿಗೆ ತಿಳಿಸಿದಳು. ಆದರೂ ಕೂಡಾ ನಾವು ನಮ್ಮ ಪಾಡಿಗೆ ಸುಮ್ಮನಿದ್ದೇನು.ದಿನಾಂಕ:10-11-2012 ರಂದು ಬೆಳಗ್ಗೆ 9-00 ಗಂಟೆಯ ಸುಮಾರಿಗೆ ನನ್ನ ಕ್ರೂಜರ ವಾಹನ ತಗೆದುಕೊಂಡು ಗುಲಬರ್ಗಾಕ್ಕೆ ಹೋದೇನು. ನಾನು ಮನೆಯಿಂದ ಹೋಗುವಾಗ ನನ್ನ ತಾಯಿಯಾದ ಕಮಲಾಬಾಯಿ, ತಮ್ಮನಾದ ಶಂಕರ, ತಂಗಿಯರಾದ ನಾಗಮ್ಮ, ರೂಪಾ ಇವರು ಮನೆಯಲ್ಲಿದ್ದರು. ನಾವು ಊರಲ್ಲಿ ಮನೆ ಕಟ್ಟುತ್ತಿದ್ದು ಹಗ್ಗ ಕಡಿಮೆ ಬಿದಿದ್ದರಿಂದ ನನ್ನ ತಮ್ಮ ಶಂಕರ ನನಗೆ ಫೊನ ಮಾಡಿ ಹಗ್ಗ ತಗೆದುಕೊಂಡು ಬರಲು ಬೆಳಗ್ಗೆ 11-30 ಗಂಟೆಯ ಸುಮಾರಿಗೆ ಹೇಳಿದನು. ನಾನು ಅವನಿಗೆ ನೀನೆ ಮೊಟಾರ ಸೈಕಲ ತೆಗೆದುಕೊಂಡು ಬಂದು ತೆಗೆದುಕೊಂಡು ಹೋಗು ಅಂತಾ ಹೇಳಿದನು. ಅದರಂತೆ ನನ್ನ ತಮ್ಮ ಹೀರೋ ಹೊಂಡಾ ಮೊಟಾರ ಸಕಲ ನಂ: ಕೆಎ-32 ಇಬಿ-2342 ನೇದ್ದರ ಮೇಲೆ ನಮ್ಮೂರಿಂದ ಗುಲಬರ್ಗಾಕ್ಕೆ ಬಂದು ಹಗ್ಗ ಖರೀದಿ ಮಾಡಿಕೊಂಡು ಸಾಯಂಕಾಲ 6 ಗಂಟೆಯ ಸುಮಾರಿಗೆ ನಾನು ಅವನಿಗೆ ಫೊನ ಮಾಡಿದಾಗ ನಾನು ಈಗ ಊರಿಗೆ ಹೋಗುತ್ತಿದ್ದೆನೆ ಅಂತಾ ತಿಳಿಸಿದನು. ಅವನು ಗುಲಬರ್ಗಾದಿಂದ ಊರಿಗೆ ಹೋಗಿರಬಹುದು ಅಂತಾ ನಾನು ತಿಳಿದಿದ್ದು, ಆದರೂ ಕೂಡಾ ರಾತ್ರಿಯಾದರು ಮನೆಗೆ ಬರಲಿಲ್ಲ. ನಂತರ ನಾನು ನನ್ನ ತಮ್ಮನ ಫೊನಿಗೆ ಫೊನ ಮಾಡಿದರು ಕೂಡಾ ಅವನು ತನ್ನ ಫೊನ ಎತ್ತಿರುವುದಿಲ್ಲ. ನಂತರ ರಾತ್ರಿ 9 ಗಂಟೆಯ ಸುಮಾರಿಗೆ ನನ್ನ ತಮ್ಮನ ಪೋನಿಗೆ ಕರೆ ಮಾಡಿದಾಗ ಪೊಲೀಸನವರು ಮಾತನಾಡಿ ನಂದಿಕೂರ ಕ್ರಾಸ ಹತ್ತಿರ ಇರುವ ಇಟ್ಟಿಗೆ ಭಟ್ಟಿ ಹತ್ತಿರ ಬರಲು ತಿಳಿಸಿದರು. ನಾವು ಹೋಗಿ ನೋಡಲಾಗಿ ರಸ್ತೆಯ ಪಕ್ಕದ ತೆಗ್ಗಿನಲ್ಲಿ ಹುಲ್ಲಿನ ಮೇಲೆ ನನ್ನ ತಮ್ಮ ಶಂಕರನ ಕೊಲೆಯಾಗಿದ್ದು ಬೊರಲಾಗಿ ಬಿದಿದ್ದು ಅವನಿಗೆ ಬಲ ಕುತ್ತಿಗೆ ಹತ್ತಿರ ಮತ್ತು ಹೊಟ್ಟೆಗೆ ತಲವಾರದಿಂದ ಹೊಡೆದು ಭಾರಿ ರಕ್ತಗಾಯ ಗೊಳಿಸಿ ಕೊಲೆ ಮಾಡಿರುತ್ತಾರೆ. ನನ್ನ ತಮ್ಮನ ಕೊಲೆಯು ರಾತ್ರಿ ಸುಮಾರು 7 ಗಂಟೆಯಿಂದ 9 ಗಂಟೆಯ ಅವಧಿಯ ಮಧ್ಯದಲ್ಲಿ ನಡೆದಿರಬಹುದು. ನನ್ನ ತಮ್ಮನಾದ ಶಂಕರ ಕೊಲೆ ಮಾಡಿದ ನಂತರ ತಲವಾರನ್ನು ಅಲ್ಲೇ ಬಿಟ್ಟು ಅವನ ಮೊಟಾರ ಸೈಕಲ ನಂ: ಕೆಎ-32 ಇಬಿ-2342 ಕೂಡಾ ಸ್ಥಳದಲ್ಲಿ ಇರಲಿಲ್ಲ. ಸದರಿ ನನ್ನ ತಮ್ಮನಾದ ಶಂಕರ ಇತನಿಗೆ ನಮ್ಮ ತಂಗಿಯಾದ ರೂಪಾಳ ವಿಷಯದಲ್ಲಿ ಒಳಸಂಚು ರೂಪಿಸಿ ಕೊಲೆ ಮಾಡಿರುತ್ತಾರೆ. ನಮ್ಮ ತಮ್ಮನ ಕೊಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 136/2012 ಕಲಂ, 143, 147, 148, 302, 102 (ಬಿ) ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

09 November 2012

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸರ್ ಕಾರ್ಯಚರಣೆ,
ಅನಧಿಕೃತ ಆಯುಧಗಳು ಮಾರಾಟ ಮಾಡುತ್ತಿರುವ ಆರೋಪಿತರ ಬಂದನ,
       
ಇತ್ತಿಚಿಗೆ ಗುಲಬರ್ಗಾ ನಗರದಲ್ಲಿ ಅನಧಿಕೃತವಾಗಿ ಪರವಾನಿಗೆ ಇಲ್ಲದೇ ಆಯುಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ್ದಿದ್ದು, ಮಾಹಿತಿ ಅನ್ವಯ  ದಾಳಿ ಮಾಡಿ ಕ್ರಮ ಜರೂಗಿಸಲು ಶ್ರೀ ಪ್ರವೀಣ ಮಧುಕರ ಪವಾರ  ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, 1) ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾ, ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ ಬಸವರಾಜ, ಹೆಚಸಿ ಗಳಾದ ಬಸವರಾಜ ಪಾಟೀಲ, ಪ್ರಕಾಶ, ಅಣ್ಣರಾವ, ಶಿವಯೋಗಿ, ಲಕ್ಕಪ್ಫಾ, ವಿಜಯಕುಮಾರ, ಅಣ್ಣಪ್ಪಾ ಬೆಳ್ಳಿ, ವಾಹನ ಚಾಲಕ ವೀರಣ್ಣಾ ಎಪಿಸಿ, ಮತ್ತು 2) ಶ್ರೀ ಶರಣಬಸವೇಶ್ವರ ಪೊಲೀಸ್ ಇನ್ಸಪೇಕ್ಟರ ಬ್ರಹ್ಮಪೂರ ಠಾಣೆ, ಮತ್ತು ಪಿ.ಎಸ.ಐ ಬಸವರಾಜ ತೇಲಿ ಪಿ.ಎಸ.ಐ ರಾಘವೇಂದ್ರ  ನಗರ ಠಾಣೆ, ಮತ್ತು ಹಾಗು ರಾಘವೇಂದ್ರ ನಗರ ಠಾಣೆಯ ಹೆಚ.ಸಿ ಪಾಂಡುರಂಗ, ಮತ್ತು (ಎ) ಉಪ-ವಿಭಾಗ ಅಪರಾದ ಪತ್ತೆ ದಳದ  ಸಿಬ್ಬಂದಿಗಳಾದ ರಪೀಕ, ದೇವಿಂದ್ರ, ಗುಲಬರ್ಗಾ ರವರು  ನಗರದ ಮಹ್ಮದಿ ಚೌಕ ಹತ್ತಿರ ದಾಳಿ ಮಾಡಿ, 1) ಪ್ರಕಾಶ ತಂದೆ ಕುಪ್ಪಣ್ಣ ಭೂತಿ,ಸಾ|| ಅಪಜಲಪೂರ, 2) ರವಿಕಾಂತ ತಂದೆ ನಾಗೇಂದ್ರಪ್ಪಾ ಬೈರಾಮಡಗಿ ಸಾ|| ಬೈರಾಮಡಗಿ ತಾ|| ಅಪಜಲಪೂರ, 3) ಸಿದ್ದಾರ್ಥ ತಂದೆ ಅಶೋಕ ಲಾಖೆ ಸಾ|| ಕೋರ್ಟ ರೋಡ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ ಇವರ ವಶದಿಂದ ಒಂದು ನಾಡ್  ರಿವಾಲ್ವಾರ, ಒಂದು ನಾಡ್ ಪಿಸ್ತೂಲ್, ನಾಲ್ಕು ಜೀವಂತ ಮದ್ದು ಗುಂಡುಗಳು,ಹೀಗೆ ಒಟ್ಟು ಅ||ಕಿ|| 80,000/-  ಬೆಲೆ ಬಾಳುವ ಆಯುಧಗಳನ್ನು ಜಪ್ತಿ ಮಾಡಿ ಕ್ರಮ ಜರೂಗಿಸಿರುತ್ತಾರೆ.
ಈ ಎರಡು ವಿಶೇಷ ತಂಡಗಳು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು,  ಶ್ರೀ ಭೂಷಣೆ ಭೋರಸೆ ಎ.ಎಸ.ಪಿ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.
ಈ ಎರಡು ವಿಶೇಷ ತನಿಖಾ ತಂಡಗಳ ಪತ್ತೆ ಕಾರ್ಯವನ್ನು  ಶ್ರೀ ಪ್ರವೀಣ ಮಧುಕರ ಪವಾರ  ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.